ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಲ್ಲದೆ ವೈರಿಗಳುನಿನ್ನ ಮ್ಯಾಲೆ ಬಂದರೆ ಬಿಲ್ಲುಕೆಳಗಿಟ್ಟು ಬೇಡಿಕೊಂಡೆಲೊ ಪಾರ್ಥಸಾಕೊ ಸಾಕೊ ನಿನ್ನ ಹೋಕೆ ಬಡಿವಾರವುಸಾಕು ಜನರು ನಗರೆ ಪ. ನಿನ್ನ ಪುಣ್ಯವ ಪಾರ್ಥ ಬಣ್ಣಿಸಲೊಶವಲ್ಲಇನ್ನು ಸುಭದ್ರಾ ಒಲಿಯಲು ಇನ್ನು ಸುಭದ್ರಾ ಒಲಿಯಲು ಸುಖದಿಂದ ಮಾನ್ಯವಾಗಿದ್ಯೊ ಜನರೊಳು 1 ಕನ್ಯೆ ಸುಭದ್ರೆ ನಿನ್ನ ಮದುವ್ಯಾಗಿಅನ್ನ ವಸ್ತ್ರದ ನೆಲಿಗಂಡ್ಯೊಅನ್ನ ವಸ್ತ್ರದ ನೆಲಿಗಂಡ್ಯೊ ಎಲೊ ಪಾರ್ಥನಿನ್ನ ಭಾಗ್ಯವನ್ನೆ ಅರಿಯಲೊ ಪುರುಷ 2 ಗಿಳಿ ಮಾತಿನ ಜಾಣ ಹೊಳೆವು ಎಷ್ಟೆ ್ಹೀಳಲ್ಯೊಬಳೆಯನಿಟ್ಟದ್ದು ಮರೆತೇನೊಬಳೆಯನಿಟ್ಟದ್ದು ಮರೆತೇನೊ ಸುಭದ್ರಾತಿಳಿಯದೆ ನಿನ್ನ ಬೆರೆದಳೊ ಎಲೊ ಪಾರ್ಥ 3 ಹೆರಳು ಹಾಕಿಸಿ ಕೊಂಡು ತಿಳಿಯಲಿಲ್ಲವೊ ಬುದ್ದಿಇಳೆಯೊಳು ಇದು ಅಪವಾದ ಇಳೆಯೊಳಗಿದು ಅಪವಾದ ಬಲರಾಮ ಹಳಿಯದೆ ನಿನ್ನ ಬಿಡವೋನೆ ಎಲೊ ಪಾರ್ಥ4 ದನಗಾಹಿ ನೀನೆತ್ತ ವನಜಕುಸುಮಳೆತ್ತಕನಕ ಕಬ್ಬಿಣಕೆ ಸರಿಯೇನೊಕನಕ ಕಬ್ಬಿಣಕೆ ಸರಿಯೇನೊ ಸುಭದ್ರೆಗೆಅಣಕವಾಡಿದನೆ ರಮಿಯರಸು5
--------------
ಗಲಗಲಿಅವ್ವನವರು
ಯಾಕೊ ಪಾರ್ಥನ ಹೆಸರು ಹೋಕೆ ಮಾತಿನ ಕೃಷ್ಣ ಸಾಕು ನೀ ನಮ್ಮ ಸರಿಯೇನೊ ಕೋಲಸಾಕು ನೀನಮ್ಮ ಸರಿಯೇನೊ ಬಲಿಯ ಮನೆಯ ಬಾಗಿಲ ಕಾಯ್ದು ಬದುಕಿದಿ ಕೋಲ ಪ. ಚಿಕ್ಕಂದಿನಾರಭ್ಯ ವತ್ಸಗಳನೆ ಕಾಯ್ದು ತುಚ್ಛನಾಗಿದ್ಯೊ ಜನರೊಳು ತುಚ್ಛನಾಗಿದ್ಯೊ ಜನರೊಳು ರುಕ್ಮಿಣಿಯಕೂಡಿ ಹೆಚ್ಚಿನವನೆಂದು ಹೆಸರಾದ್ಯೊ ಕೋಲ1 ಜನಿಸಿದಾಕ್ಷಣದಲ್ಲಿ ಜನನಿ ಜನಕರನಗಲಿದಿದನಗಳ ಕಾಯ್ದ್ಯೊ ವನವನ ದನಗಳ ಕಾಯ್ದ್ಯೊ ವನವನ ತಿರುಗಿದ್ದುಮನಕೆ ತಾರಯ್ಯ ಮರೆಯದೆ ಕೋಲ 2 ಬಡಿವಾರ ಬಂದ ಬಗಿ ಹೇಳೊ ಕೋಲ3 ಸತ್ಯಭಾಮೆ ನಿನ್ನ ಹೊಸ್ತಿಲ ಹೊಗಲಿಕ್ಕೆಅತ್ಯಂತ ಪದವಿ ಒದಗಿತುಅತ್ಯಂತ ಪದವಿ ಒದಗಿತು ಕೃಷ್ಣ ನಿನ್ನ ಹೆತ್ತವರ ಭಾಗ್ಯ ಅರಿವೆಯೆ ಕೋಲ4 ಹೆಂಡಿರ ಪುಣ್ಯದಿಂದ ಕಂಡೆಯಾ ಈ ಭಾಗ್ಯವ ಪಾಂಡಿತ್ಯವೆಲ್ಲೊ ಬಲವೆಲ್ಲೊಪಾಂಡಿತ್ಯವೆಲ್ಲೊ ಬಲವೆಲ್ಲೊ ಕೃಷ್ಣ ನಿನ್ನ ಪಂಡಿತರು ಕೇಳೋ ಹುಸಿಯಲ್ಲ ಕೋಲ5 ನಾರಿಯರ ಪುಣ್ಯದಿ ಏರಿದ್ಯೋ ರಥವಾಜಿ ಧೀರತನದಿಂದ ಗಳಿಸಿದ್ಯೊಧೀರತನದಿಂದ ಗಳಿಸಿದ ಗಳಿಕೆಯ ತೋರೊ ರಾಮೇಶ ನಮಗಿನ್ನು ಕೋಲ 6
--------------
ಗಲಗಲಿಅವ್ವನವರು
ಸಾಕು ಬಿಡು ಭಾವೆ ಸಾಕು ಬಿಡು ನಿನ್ನ ಹೋಕೆ ಮಾತುಗಳೆಷ್ಟುಸಾಕು ಬಿಡು ಪ ಮದಗಜಗಮನೆ ನೀ ಒದೆವೋದ್ಯಾತಕೆ ಕಲಿತೆಬದಿಯಲಿದ್ದವರು ಇದಕೆ ನಗರೇನೆ ಸಖಿಯೆ ಬದಿಯಲಿದ್ದವರು ನಗರೇನೆ ನಿನ್ನ ಬುದ್ದಿಅದ್ಬುತವಾಗಿ ಈಗ ಬೆಳೆದಿದೆ ಸಖಿಯೆ1 ಸುದತಿ ಸುಭದ್ರಾಗೆ ಕದನ ಕಠೋರಿ ಸರಿಯೇನ ಸಖಿಯೆ2 ಎತ್ತಿ ಒಯ್ದವ ನಿನ್ನ ಅತ್ಯಂತ ಸುಖಿಸಿದ ಲತ್ತಿತಿಂದೊಬ್ಬ ಬಳಲುವಲತ್ತಿತಿಂದೊಬ್ಬ ಬಳಲುವ ನಿನ್ನ ನಡತೆವಿಸ್ತಾರವಾಗಿ ಈಗ ತಿಳಿಸಿದೆ ಸಖಿಯೆ3 ತಾಯಿ ಮಕ್ಕಳೊಳು ನ್ಯಾಯವನಿಕ್ಕುವಿಮಾಯಗಾರುತಿಯೆ ಬಲು ಮೂದೇವಿಮಾಯಗಾರುತಿಯೆ ಬಲು ಮೂದೇವಿ ನಿನಕಂಡುಬಾಯಿ ಬಿಡುತಾರೆ ಜನರೆಲ್ಲ ಸಖಿಯೆ4 ಖ್ಯಾತ ರಾಮೇಶ ಈಗ ಈ ಮಾತೆಲ್ಲಿ ಕಲಿತೆಂದ ಚಾತುರ್ಯದಲ್ಲಿ ಚಪಲನೆಚಾತುರ್ಯದಲ್ಲಿ ಚಪಲ ಚನ್ನಿಗನೆಂಬೊಪಾರ್ಥನು ನಿನಗೆ ಗುರುವೇನ ಸಖಿಯೆ 5
--------------
ಗಲಗಲಿಅವ್ವನವರು
ಮುಕ್ತನಾದೆನೋ ನಿನ್ನ ಮರೆತು ನೆನೆಯಲಿ ಮುನ್ನಮುಕ್ತನಾಗುವುದೇನು ಗುರುನೀ ಮುಟ್ಟಿಲಿಕೆಂದುಪಪಾಶವೆಂಟು ಹರಿದು ಪರಿದು ತ್ರಿಗುಣಂಗಳಕ್ಲೇಶಪಂಚಕವು ಕೆಡೆದುಪೋದುವುಆಸೆ ಮೂರೆಂಬುವು ಆಕ್ಷಣ ಉರಿದವುಘಾಸಿಯಾದವು ಸಪ್ತವ್ಯಸನ ಗಳಿಗೆಯೊಳು1ನಾಲ್ಕು ಕರಣಂಗಳು ನಾಸ್ತಿಕವಾದುವುಬೇಕೆಂಬ ತ್ರಯತಾಪ ಬೆಳೆನಿಂತವುಪೋಕರಾದವು ಷಡುವರ್ಗ ಷಡಪುಗೆಟ್ಟುಹೋಕೆಮರೆತವುದುರ್ಭಾವಹೊಲಬುದಪ್ಪಿ2ಕನಕಪರುಷ ಮುಟ್ಟೆಕನಕಪರುಷವಾಗದುಘನಗುರುವಿನ ಮುಟ್ಟೆ ಗುರುವಹನುಚಿನುಮಯ ಚಿದಾನಂದ ಚಿದ್ರೂಪನಾದವರಿಗೆಜನನ ಮರಣಗಳೆಂಬ ಜನಿತವೆಲ್ಲಿಹುದಯ್ಯ3
--------------
ಚಿದಾನಂದ ಅವಧೂತರು