ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿರುತದಿ ನೆನೆ ನರಹರಿಯ ನರಹರಿಯ ಶಿರಿಧೊರೇಯ ಪ ಪೋತ ಧ್ರುವನು ತಾ ತಾತನ ತೊಡಿಯಲಿ ಪ್ರೀತಿಲಿ ಕುಳಿತಿರೆ ಮಾತೆ ದೂಡಲತಿ ಸೋತು ಮನದಿ ಹರಿ ಸ್ತೋತ್ರವ ಗೈಯ್ಯಲಾತಗೆ ಪದ ನೀಡಿದಾ 1 ಕಡಿಗ್ಯಾದ ದ್ರೌಪದಿ ಮುಡಿಯ ಪಿಡಿದು ಖಳ ಬಿಡÉಳೆದೊಯ್ಯೊ ಕಡುದುರುಳ ಸಭೆಗೆ ಸಿಡಿದೆಳೆಯೆ ಶೀರೆಯನು ಒಡನೆ ಹರಿಯೆನಲುಡುವಾಸವಕ್ಷೈಸಿತು 2 ದುರುಳ ಹಿರಣ್ಯಕಶು- ಪಿರದೆ ಪೀಡಿಸಲು ಪರಿಪರಿಯಿಂದಲಿ ಹರಿಗೆ ಮೊರೆಯಿಡಲು ಕರುಳು ಬಗೆದ ನರಸಿಂಹವಿಠಲನು 3
--------------
ನರಸಿಂಹವಿಠಲರು
ಮರೆಯದಿರು ಭವಶರಧಿ ಕೊನೆದೋರದು ಹರಿಯ ಮರೆತರೆ ಮನವೆ ಗತಿಯೇನು ಇಹುದು ಪ ಪಿಂತೆ ಧೃತರಾಷ್ಟ್ರ ನಿಶ್ಚಿಂತೆಯಲಿ ಸುತರಿಂದ ಎಂಥ ಸಿರಿವಂತನೆಂದೆನಿಸಿ ಮೆರೆದಾ ಕಂತುಪಿತನನು ಸುತರು ಪಂಥದಲಿ ನೆನೆಯದಿರೆ ಎಂಥವನ ಪಾಡಾದುದರಿಯೆ ನೀ ಮರುಳೇ 1 ತಾನೆ ಪರಬ್ರಹ್ಮನೆಂದರಿದಾ ಹಿರಣ್ಯಕಶು- ಪಾನೆಯೆಂದರಿದು ಮೆರೆಯೆ ಹರಿವೈರದಿ ಸೂನು ಪ್ರಲ್ಹಾದನಾನತನಾಗಿ ಮೊರೆವೋಗಲು ಹೀನ ರಕ್ಕಸನ ಪರಿಸರಿ ಏನಾಯಿತು 2 ಸತಿಸುತರ ಮುದದಿಂದ ಹಿತವಂತ ಬಳಿಗದಿಂ- ದತಿ ತೃಪ್ತವಾಗಿ ನಾನಿರುತಿರಲು ನಿನ್ನ ಧೃತಿಗುಂದಿ ಪವಡಿಸಿರೆ ಗೆಜ್ಜೆಪಾದವ ಕಂಡು ನುತಿಸುವೆನನವರತ ನರಸಿಂಹವಿಠಲರಾಯಾ 3
--------------
ನರಸಿಂಹವಿಠಲರು