ಒಟ್ಟು 12 ಕಡೆಗಳಲ್ಲಿ , 11 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಮಧ್ವನಾಮ ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣಅಖಿಳ ಗುಣ ಸದ್ಧಾಮ ಮಧ್ವನಾಮ ಪ ಆವ ಕಚ್ಚಪ ರೂಪದಿಂದ ಲಂಡೋದಕವಓವಿ ಧರಿಸಿದ ಶೇಷಮೂರುತಿಯನುಆವವನ ಬಳಿವಿಡಿದು ಹರಿಯ ಸುರರೆಯ್ದುವರುಆ ವಾಯು ನಮ್ಮ ಕುಲಗುರುರಾಯನು 1 ಆವವನು ದೇಹದೊಳಗಿರಲು ಹರಿ ನೆಲಸಿಹನುಆವವನು ತೊಲಗೆ ಹರಿ ತಾ ತೊಲಗುವಆವವನು ದೇಹದ ಒಳ ಹೊರಗೆ ನಿಯಾಮಕನುಆ ವಾಯು ನಮ್ಮ ಕುಲಗುರುರಾಯನು 2 ಸುರರು ಮುಖ್ಯಪ್ರಾಣ ತೊಲಗಲಾ ದೇಹವನುಅರಿತು ಪೆಣವೆಂದು ಪೇಳುವರು ಬುಧಜನ 3 ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆಪರತರನೆನಿಸಿ ನಿಯಾಮಿಸಿ ನೆಲಸಿಹಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳುಗುರು ಕುಲತಿಲಕ ಮುಖ್ಯ ಪವಮಾನನು 4 ತರಣಿ ಬಿಂಬಕ್ಕೆ ಲಂಘಿಸಿದಈತಗೆಣೆಯಾರು ಮೂರ್ಲೋಕದೊಳಗೆ 5 ತರಣಿಗಭಿಮುಖನಾಗಿ ಶಬ್ದ ಶಾಸ್ತ್ರವ ರಚಿಸಿಉರವಣಿಸಿ ಹಿಂದು ಮುಂದಾಗಿ ನಡೆದಪರಮ ಪವಮಾನಸುತ ಉದಯಾಸ್ತ ಶೈಲಗಳಭರದಿಯೈದಿದಗೀತಗುಪಮೆ ಉಂಟೇ 6 ಅಖಿಳ ವೇದಗಳ ಸಾರಪಠಿಸಿದನು ಮುನ್ನಲ್ಲಿನಿಖಿಳ ವ್ಯಾಕರಣಗಳ ಇವ ಪಠಿಸಿದಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದುಮುಖ್ಯಪ್ರಾಣನನು ರಾಮನನುಕರಿಸಿದ 7 ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿಧರಣಿಸುತೆಯಳ ಕಂಡು ದನುಜರೊಡನೆಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳಉರುಹಿ ಲಂಕೆಯ ಬಂದ ಹನುಮಂತನು 8 ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿಶರಧಿಯನು ಕಟ್ಟಿ ಬಲು ರಕ್ಕಸರನುಒರಸಿ ರಣದಲಿ ದಶಶಿರನ ಹುಡಿಗುಟ್ಟಿದಮೆರೆದ ಹನುಮಂತ ಬಲವಂತ ಧೀರ 9 ಉರಗ ಬಂಧಕೆ ಸಿಲುಕಿ ಕಪಿವರರು ಮೈಮರೆಯೆತರಣಿ ಕುಲತಿಲಕನಾಜ್ಞೆಯ ತಾಳಿದಗಿರಿಸಹಿತ ಸಂಜೀವನವ ಕಿತ್ತು ತಂದಿತ್ತಹರಿವರಗೆ ಸರಿಯುಂಟೆ ಹನುಮಂತಗೆ 10 ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆಭಜಿಸಿ ಮೌಕ್ತಿಕದ ಹಾರವನು ಪಡೆದಅಜಪದವಿಯನು ರಾಮ ಕೊಡುವೆನೆನೆ ಹನುಮಂತನಿಜಭಕುತಿಯನೆ ಬೇಡಿ ವರವ ಪಡೆದ 11 ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ ಸೋಮಕುಲದಲಿ ಜನಿಸಿ ಪಾರ್ಥನೊಡನೆ ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದಆ ಮಹಿಮನಮ್ಮ ಕುಲಗುರು ರಾಯನು 12 ಕರದಿಂದಶಿಶುಭಾವನಾದ ಭೀಮನ ಬಿಡಲುಗಿರಿವಡೆದುಶತಶೃಂಗವೆಂದೆನಿಸಿತುಹರಿಗಳ ಹರಿಗಳಿಂ ಕರಿಗಳ ಕರಿಗಳಿಂಅರೆವ ವೀರನಿಗೆ ಸುರ ನರರು ಸರಿಯೇ 13 ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿಹಸಿದುರಗಗಳ ಮ್ಯಾಲೆ ಬಿಡಲದನೊರಸಿದಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರಧರಿಸಿ ಜಾಹ್ನವಿಗೊಯ್ದ ತನ್ನನುಜರ14 ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರನಿಲ್ಲದೊರಸಿದ ಲೋಕಕಂಟಕರನುಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದುಎಲ್ಲ ಸುಜನರಿಗೆ ಹರುಷವ ತೋರಿದ 15 ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿರಾಜಸೂಯ ಯಾಗವನು ಮಾಡಿಸಿದನುಆಜಿಯೊಳು ಕೌರವರ ಬಲವ ಸವರುವೆನೆಂದುಮೂಜಗವರಿಯೆ ಕಂಕಣ ಕಟ್ಟಿದ 16 ಮಾನನಿಧಿ ದ್ರೌಪದಿಯ ಮನದಿಂಗಿತವನರಿತುದಾನವರ ಸವರಬೇಕೆಂದು ಬ್ಯಾಗಕಾನನವ ಪೊಕ್ಕು ಕಿಮ್ಮೀರಾದಿಗಳ ತರಿದುಮಾನಿನಿಗೆ ಸೌಗಂಧಿಕವನೆ ತಂದ 17 ದುರುಳ ಕೀಚಕನು ತಾಂ ದ್ರೌಪದಿಯ ಚಲುವಿಕೆಗೆಮರುಳಾಗಿ ಕರೆÀಕರೆಯ ಮಾಡಲವನಾಗರಡಿ ಮನೆಯಲ್ಲಿ ವರೆಸಿ ಅವನನ್ವಯದಕುರುಪನಟ್ಟಿದ ಮಲ್ಲಕುಲವ ಸದೆದ 18 ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿಓರಂತೆ ಕೌರವನ ಮುರಿದು ಮೆರೆದವೈರಿ ದುಶ್ಯಾಸನ್ನ ರಣದಲ್ಲಿ ಎಡೆಗೆಡಹಿವೀರ ನರಹರಿಯ ಲೀಲೆಯ ತೋರಿದ 19 ಗುರುಸುತನು ಸಂಗರದಿ ನಾರಾಯಣಾಸ್ತ್ರವನುಉರವಣಿಸಿ ಬಿಡಲು ಶಸ್ತ್ರವ ಬಿಸುಟರುಹರಿಕೃಪೆಯ ಪಡೆದಿರ್ದ ಭೀಮ ಹುಂಕಾರದಲಿಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ 20 ಚಂಡ ವಿಕ್ರಮನು ಗದೆಗೊಂಡು ರಣದಿ ಭೂಮಂಡಲದೊಳಿದಿರಾಂತ ಖಳರನೆಲ್ಲಾಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನುಕಂಡುನಿಲ್ಲುವರಾರು ತ್ರಿಭುವನದೊಳು21 ದಾನವರು ಕಲಿಯುಗದೊಳವತರಿಸಿ ವಿಬುಧರೊಳುವೇನನ ಮತವನರುಹಲದನರಿತುಜ್ಞಾನಿ ತಾ ಪವÀಮಾನ ಭೂತಳದೊಳವತರಿಸಿಮಾನನಿಧಿ ಮಧ್ವಾಖ್ಯನೆಂದೆನಿಸಿದ 22 ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದಉರ್ವಿಯೊಳು ಮಾಯೆ ಬೀರಲು ತತ್ವಮಾರ್ಗವನುಓರ್ವ ಮಧ್ವಮುನಿ ತೋರ್ದ ಸುಜನರ್ಗೆ23 ವಿಶ್ವ ವಿಶ್ವ ಗೀರ್ವಾಣ ಸಂತತಿಯಲಿ 24 ಅಖಿಳ ವೇದಾರ್ಥಗಳನುಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವಯ್ಯೆದಿದ ಮಧ್ವಮುನಿರಾಯಗಭಿವಂದಿಪೆ 25 ಜಯಜಯತು ದುರ್ವಾದಿಮತತಿಮಿರ ಮಾರ್ತಾಂಡಜಯಜಯತು ವಾದಿಗಜ ಪಂಚಾನನಜಯಜಯತು ಚಾರ್ವಾಕಗರ್ವಪರ್ವತ ಕುಲಿಶಜಯ ಜಯ ಜಗನ್ನಾಥ ಮಧ್ವನಾಥ26 ತುಂಗಕುಲ ಗುರುವರನ ಹೃತ್ಕಮಲದಲಿ ನಿಲಿಸಿಭಂಗವಿಲ್ಲದೆ ಸುಖದ ಸುಜನಕೆಲ್ಲಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕರಂಗವಿಠಲನೆಂದು ನೆರೆ ಸಾರಿರೈ 27 “ಮಧ್ವನಾಮ” ಕೃತಿಗೆ ಶ್ರೀ ಜಗನ್ನಾಥದಾಸರ ಫಲಶ್ರುತಿ ಸೋಮ ಸೂರ್ಯೋಪರಾಗದಿ ಗೋಸಹಸ್ರಗಳಭೂಮಿದೇವರಿಗೆ ಸುರನದಿಯ ತೀರದಿಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲಮಕ್ಕುಈ ಮಧ್ವನಾಮ ಬರೆದೋದಿದರ್ಗೆ 1 ಪುತ್ರರಿಲ್ಲದವರು ಸತ್ಪುತ್ರರೈದುವರುಸರ್ವತ್ರದಲಿ ದಿಗ್ವಿಜಯವಹುದು ಸಕಲಶತ್ರುಗಳು ಕೆಡುವರಪಮೃತ್ಯು ಬರಲಂಜವುದುಸೂತ್ರನಾಮಕನ ಸಂಸ್ತುತಿ ಮಾತ್ರದಿ 2 ಶ್ರೀಪಾದರಾಯ ಪೇಳಿದ ಮಧ್ವನಾಮ ಸಂತಾಪಕಳೆದಖಿಳ ಸೌಖ್ಯವನೀವುದುಶ್ರೀಪತಿ ಜಗನ್ನಾಥವಿಠಲನ ತೋರಿ ಭವಕೂಪಾರದಿಂದ ಕಡೆ ಹಾಯಿಸುವುದು 3
--------------
ಶ್ರೀಪಾದರಾಜರು
ಏನು ಕರುಣವೊ ಕೃಷ್ಣ ಎಮ್ಮ ಮೇಲೆ ಪ ನಾನಾಪತ್ತುಗಳ ಕಳೆದು ಸಲಹಿದೆಯೊ ಅಕಳಂಕ ಅ.ಪ. ಕೌರವ ಕೊಟ್ಟ ಪರಿಪರಿಯ ಕಷ್ಟಗಳ ಪರಿಹರಿಸಿ ನೀ ಕಾಯ್ದೆ ಪರಮ ಕರುಣಿ ಅರಗಿನ ಮನೆಯಲಿ ಉರಿದುಪೋಗದ ತೆರದಿ ಭರದಿಂದ ರಕ್ಷಿಸದೆ ಭೀಮನೊಳು ನೀನಿದ್ದು 1 ಕಾನನದಿ ನಾವ್ ನಿದ್ರೆಗೈಯುತಿರೆ ಕಡುಘೋರ ದಾನವ ಹಿಡಿಂಬಕನು ಕೊಲ್ಲ ಬರಲು ಪ್ರಾಣಸುತ ನಮ್ಮ ಈ ಭೀಮನಿಗೆ ಬಲಕೊಟ್ಟು ಹೀನಖಳನನು ಸೋಲಿಸಿ ಕಾಯ್ದೆ ಸ್ವಾಮಿ 2 ಲೋಕಕಂಟಕನಾದ ಭೀಕರ ಬಕಾಸುರನ ನೀ ಕೊಂದು ಈ ವೃಕೋದರನಲಿ ನಿಂದು ಏಕಚಕ್ರಪುರದ ಲೋಕವನು ನೀ ಕಳೆದೆ ಏಕಮೇವಾದ್ವಿತೀಯ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು
ಜಯ ಜಯ ಭೀಮಸೇನ ಪ. ಜಯ ಭೀಮಸೇನ ದುರ್ಜಯ ಪರಾಕ್ರಮ ಧೀರಾದಯಾಪಯೋನಿಧಿಯೆ ನಿರ್ಭಯ ವೈಷ್ಣವಾಗ್ರಣಿಅ.ಪ. ಅಂಬ ಪಾವಕ ದೀನೋದ್ಧಾರಿ1 ವೃಕೋದರ ವಿಷ್ಣುಸೇವಕ ವಿಜ್ಞಾನಾಂಬುಧಿಬಕಮದಧ್ವಂಸಿ ಜಟಾಸುರಾಂತಕ ಹಿಡಿಂ-ಬಕಾಸುರಗರ್ವಪರ್ವತ ಪವಿಧರ ಹಿಡಿಂಬಕಿ ಚಿತ್ತಕುಮುದಕೋರಕ ಪೂರ್ಣೋಡುಪರಾಜಅಕಳಂಕ ಧನುರಾಗಮಾಚಾರ್ಯ ನಿಪುಣ ಕೀ-ಚಕ ಬಲ ನಿರ್ಮೂಲನ ದ್ರೋಣಾದಿ ಸೈ-ನ್ಯ ಕುಮನ ಅಸುಹರಣ ಧಾರ್ತರಾಷ್ಟ್ರನಿಕರವಾರಣ ವಿದಾರಣ ಪಂಚವದನಾ 2 ಮಣಿಮಯರಥವೇರಿ ಫಣಿಕೇತನನನುಜನುನೆಣನು ದುರ್ಗುಣನು ಮಾರ್ಗಣಗಣದಿಂದಲಿರಣಾಂಗಣದಿ ನಿನ್ನ ಸೆಣಸಲಾಕ್ಷಣ ನೋಡಿತೃಣಮಾಡಿ ಗದೆಯಿಂದ ಹಣಿದು ಹಣೆಯ ಮೆಟ್ಟಿಪಣದಿ ನುಡಿದವರ ರಣವ ತಿದ್ದಿ ಅತ್ಯು-ಲ್ಬಣದಿಂದವಗೆ ಲಂಘಿಸಿ ವಕ್ಷದಿ ರಕ್ತಕೊಣನ ಶಸ್ತ್ರದಿ ನಿರ್ಮಿಸಿ ಕದಡಿಗೂಡಿರಣದೊಳೊಪ್ಪಿದ್ಯೊ ನಿನಗೆಣೆಯಿಲ್ಲವೆನಿಸಿ 3 ಮದ್ದಾನೆ ರೂಪ ಧರಿಸಿ ಮಾಯದಲಿ ಬಂದಾರುದ್ರಾನ ಯುದ್ಧದಿ ಗೆದ್ದುವೋಡಿಸಲಾಗಕೃದ್ಧನಾಗಿ ವ್ಯಾಘ್ರಸಿಂಹರೂಪದಿ ಬರೆಗುದ್ದಿ ಕೆಡಹಿ ವೇಗಕೆ ದಾರಿ ಕಟ್ಟಿದೆಯಿದ್ಧರೆಯೊಳು ನಿಮಗೆಣೆಯಾರು ಮಹಾಬಲಿಮದ್ರಾಧಿಪತಿಯ ಅಂಬರಕಟ್ಟಿ ರಾಜಸೂ-ಯಾಧ್ವರದಲಿ ಮಾಗಧನ ಸಂಹರಿಸಿದತಿಶುದ್ಧ ಸ್ವಭಾವ ಶೂರ ಸತತ ಸಾಧ್ಯಸಿದ್ಧೇಶನಿಲ ಕುಮಾರ ನಮಿಪೆಯೆನ್ನಉದ್ಧರಿಸುವುದಯ್ಯ ಶುದ್ಧ ಮನೋಹರ 4 ಸೂತ್ರ ಅಮಿತ ರೂಪ ಸದ್ಗುಣಗಣಧಾಮ ವೀರಪ್ರತಾಪ ಭಕುತಿ ಜ್ಞಾನಕಾಮಿತಾರ್ಥಗಳಿತ್ತು ಪೊರೆಯಯ್ಯ ಅಸುವ 5
--------------
ಗೋಪಾಲದಾಸರು
ಜಯ ವಾಯು ಹನುಮಂತ ಜಯ ಭೀಮ ಬಲವಂತ ಪ ಜಯಪೂರ್ಣ ಮತಿವಂತ ಜಯ ಸಲಹೊ ಸಂತ ಅ.ಪ. ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆನಂದದಿಂದಲಿ ಮಾಡಿ ಕಪಿ ಬಲವ ಕೂಡಿಸಿಂದು ಲಂಘಿಸಿ ಖಳರ ವನ ಭಂಗಿಸಿ ಸೀತೆ-ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ 1 ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿಶರಧಿಯನು ಕಟ್ಟಿ ಅರಿಬಲವ ಕುಟ್ಟಿಉರಗ ಬಂಧನದಿಂದ ಕಪಿವರರು ಮೈಮರೆಯೆಗಿರಿಯ ಸಂಜೀವನವ ತಂದು ಬದುಕಿಸಿದೆ 2 ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿಶ್ರೀ ಪಾರ್ಥಸಾರಥಿಯ ಭಜಕ ನೀನಾದೆಪಾಪಿ ಮಾಗಧ ಬಕ ಕೀಚಕ ಹಿಡಿಂಬಕರಕೋಪದಿಂದಲಿ ತರಿದೆ ಮೂಜ್ಜಗದಿ ಮೆರೆದೆ 3 ಧsÀುರದಲಿ ದುರ್ಯೋಧನನ ಬಲವನು ತರಿದೆಅರಿತು ದುಶ್ಶಾಸನನ ಒಡಲನ್ನು ಬಗೆದೆಉರವ ತಪ್ಪಿಸಿ ಕೌರವನ್ನ ತೊಡೆಗಳ ಮುರಿದೆಹರಿಯ ಕಿಂಕರ ಧುರಂಧರಗಾರು ಸರಿಯೆ ಕಲಿಯುಗದಲಿ ಕಳ್ಳರುದಿಸಿ ದುರ್ಮತಗಳನುಬಲಿಸಿ ಶ್ರೀಹರಿಯ ಗುಣಗಳನು ಮರೆಸಿಕಲಿಯನನುಸರಿಸಲು ಗುರುವಾಗಿ ಅವತರಿಸಿಖಳರ ದುರ್ಮತ ಮುರಿದೆ ಶ್ರೀಕೃಷ್ಣಪರನೆಂದೆ
--------------
ವ್ಯಾಸರಾಯರು
ನಿತ್ಯ ಶುಭಮಂಗಳಂ ಪ ಚಾರು ಮರಕಟರೂಪ ತಾಳಿದಾ ಮೂರ್ತಿಗೆ ಚೋರ ದಶಕಂಠನನು ದಣಿಸಿದವಗೆ ನೀರಜಾಮುಖಿಗೆ ಮುದ್ರೆಯಿತ್ತ ಕಪಿವರಗೆ ಶ್ರೀರಾಮ ಧ್ಯಾನದೊಳು ತತ್ಪರಾದವಗೆ 1 ನೀಚ ಠಕ್ಕನ ಹಿಡಿಂಬಕನೊರಸಿದಾ ಬಲಗೆ ಕೀಚಕರ ಕಿರ್ಮೀರ ಬಕಕಾಲಗೆ ನಾಚಿ ನೀರೊಳು ಪೊಕ್ಕು ಕುರುಪತೀಯಂತಕಗೆ ಆ ಚಕ್ರ ಸೇವೆಯಲಿ ನಿರತನಾದವಗೆ 2 ಜಗವನುದ್ಧರಿಪ ಬುದ್ಧಿಯ ತಾಳ್ದಯತಿವರಗೆ ಮಗುವಾಗಿ ಮಧ್ಯಗೇಹದಿ ಜಾತಗೆ ನಿಗಮ ಗೋಚರ ಶ್ರೀ ನರಸಿಂಹವಿಠಲನ ಭಕುತಿಯನು ಬೇಡಿ ಅಜಪದ ಪಿಡಿದ ಹರಿಗೇ 3
--------------
ನರಸಿಂಹವಿಠಲರು
ಪ್ರಾಣದೇವ ನೀ ಕಾಯೊ ಕರುಣಿ ಸತತ ಪಾಲಿಸು ಸುಖದಾತ ಪ. ಪ್ರಣಾಪಾನವ್ಯಾನೊದಾನತೋಷ ಭಾರತೀಶ ಅ.ಪ. ತ್ರಿವಿಧ ಜೀವರ ಶ್ವಾಸ ನಿಯಾಮಕನೆ ಶ್ರೀ ಹರಿ ಸೇವಕ ನೀನೆ ಭವ ಇಂದ್ರಾದಿಗಳಿಂದಲಿ ವಂದಿತನೆ ಭಾರತಿಗತಿ ಪ್ರಿಯನೆ ತ್ರಿವಿಧ ಶ್ವಾಸ ಜಪ ನಿರ್ಲಿಪ್ತದಿ ಜಪಿಸಿ ಜೀವರ ಗತಿಗೈಸಿ ನವವಿಧ ಭಕ್ತಿಯ ಹರಿಚರಣದಿ ನಿರುತ ಚರಿಸುವ ಮತಿದಾತ 1 ತತ್ವಾಧೀಶರ ಪ್ರೇರಕ ಮಹಪ್ರಾಣ ಜೀವರ ಸುತ್ರಾಣ ವ್ಯಾಪ್ತಜಗದಿ ಶ್ರೀ ಹರಿ ಲಕುಮಿಯ ಸಹಿತ ಬಳಿತ್ಥಾ ಸೂಕ್ತ ಸ್ತುತ ಸತ್ವ ಗುಣದ ಜೀವರ ಸದ್ಗತಿದಾತ ಸುಜ್ಞಾನ ಪ್ರದಾತ 2 ತ್ರೇತೆಯಲ್ಲಿ ಶ್ರೀ ರಾಮದಾಸ್ಯ ಚರಿಸಿ ದಶಶಿರನನು ಮುರಿಸಿ ಮಾತೆ ಕೊಟ್ಟ ಭಿಕ್ಷಾನ್ನ ಉಂಡು ಸುಖಿಸಿ ಬಕ ಹಿಡಿಂಬಕರೊರಸಿ ಪಾತಕಿ ಮಾಯವಾದಿ ಜೈಸಿ ಸದ್ಗ್ರಂಥವ ರಚಿಸಿ ಖ್ಯಾತ ಗೋಪಾಲಕೃಷ್ಣವಿಠ್ಠಲ ಪ್ರಿಯ ನಮೋ ಚಳ್ಳಕೆರೆನಿಲಯ 3
--------------
ಅಂಬಾಬಾಯಿ
ಭೀಮ ಭುಜಬಲೋದ್ದಾಮ ಸವರಿದಿ ಕುರುಪನ ಕುಲವ ನಿಸ್ಸೀಮ ಪ ವಿಷದಿ ಕಜ್ಜಾಯ ತಿನಿಸಿ ಮುಸುಕಿನಿಂ ಬಂಧಿಸಿ ಎಸೆಯಲು ನದಿಯೊಳು ಕುಶಲದಿಂ ಬಂದೆಯೊ 1 ಜನನಿ ಗೌರಿಯ ವ್ರತವನು ಮಾಳ್ಪೆನೆಂದೆನಲು ಅಣ್ಣ ನನುಮತಿಯಂತೆ ಘನ ಸುರಲೋಕ ಕೈದ್ಯೊ 2 ನಿರುತದಿಂ ಸುರಧೇನು ವರ ಪರುಷಮೃಗವನ್ನು ಕರೆತಂದು ಗಜಗೌರಿ ವ್ರತವ ಪೂರೈಸಿದಿಯೊ 3 ಬಕನ ಮರ್ದಿಸಿ ಹಿಡಿಂಬಕನ ತರಿದು ಹಿಡಿಂ ಬಿಕಿಯಳ ಕರಗ್ರಹಣ ಕೈಕೊಂಡ್ಯೊ ರಣಶೂರ 4 ಬಲ್ಲಿದತನದಿ ಆ ಖುಲ್ಲಕೀಚಕನೊದೆದು ಪುಲ್ಲನಯನೆಯ ಕಾಯ್ದೊ ಬಲ್ಲಿದ ಶ್ರೀರಾಮನ ದೂತ 5
--------------
ರಾಮದಾಸರು
ಭೀಮರಾಯನ ನಂಬಿ ಭೀಮಸೇನನಭೀಮಭವವಾರಿಧಿಯ ಬೇಗದಾಟುವರೆ ನಮ್ಮ ಪ. ಬಕ ಮೊದಲಾದ ಹಿಡಿಂಬಕ ದುರ್ಜನರ ಕೊಂದುಸುಖಪಡಿಸಿದನಂದು ದ್ವಿಜಕುಲಜರಾಗ ಕೂಡ 1 ಜರಾಸಂಧನ ಕೂಡೆ ವರ ಯುದ್ಧವನ್ನೆ ಮಾಡಿಸರಕು ಮಾಡದೆ ಕೊಂದ ಧಾರುಣಿಯೊಳಗೆ ನಿಂದ 2 ಸತಿ ಕೃಷ್ಣೆಯಬಾಧಿಸೆ ಘಾಸಿಮಾಡಲು ವಂದ್ಯರ ಹೇಸದೆ ಮೋಸದಿ ಕೊಂದ3 ಕಡುತೃಷೆಗೆ ದುಶ್ಶಾಸನನೊಡಲ ಬಗಿದು ರಕ್ತಕುಡಿದಂತೆ ತೋರ್ದ ನಮ್ಮೊಡೆಯ ದ್ರೌಪದಿಪ್ರಿಯ 4 ಭೀಮ ತನ್ನ ಮರೆಹೊಕ್ಕ ಸುಜನರ ಕಾವಸ್ವಾಮಿ ಶ್ರೀಹಯವದನ ರಾಮನಾಣೆ ಸತ್ಯವಿದು 5
--------------
ವಾದಿರಾಜ
ಮರೆಯದೆ ಸಲಹೆನ್ನನು ಯಾದವಗಿರಿ- ದೊರೆ ಮಂಗರಾಯ ನೀನು ಸರ್ವಜೀವೋತ್ತಮನೆ ನಿನ್ನನು ಮರೆಯಹೊಕ್ಕೆನು ಮಾರುತಾತ್ಮಜ ಕರೆದು ಭಕÀುತರಿಗ್ವರವ ನೀಡುವೊ ಭಾರತೀಶ ಪ ಸೀತಾವಲ್ಲಭ ರಾಮರ ಪಾದಾಂಬುಜ ದೂತನೆಂದೆನಿಸಿದೆಯೊ ಮಾತೆಗಿಟ್ಟ ಮುದ್ರಿಕೆಯನು ಘಾತಕ ರಾವಣನ ಪುರಕೆ ಕಾರ್ತೀಕದುತ್ಸವ ಮಾಡಿ ಮಂಗ- ಳಾರ್ತಿ ಬೆಳಗಿದೆ ಬಾಲದಿಂದ 1 ಬಕ ಹಿಡಿಂಬಕ ಕೀಚಕ ಕಿಮ್ಮೀರ ಮಾಗಧ ಮುಖ್ಯ ಪ್ರಮುಖರನು ಸಕಲ ಅನುಜರ ಸಹಿತ ದುರ್ಯೋಧನನ ಪ್ರಾಣವ ಸೆಳೆದÀು ಬ್ಯಾಗನೆ ನಕುಲ ಧರ್ಮಜನಾ ಸಾದೇವ ದ್ರೌಪದಿಗೆ ಸುಖ ಸಂತೋಷ ನೀಡಿದೆ 2 ಮಧ್ಯಗೇಹರಲ್ಲಿ ಜನಿಸಿ ಸುಜನರಿಗೆ ಶುದ್ಧಶಾಸ್ತ್ರವ ಬೋಧಿಸಿ ಗೆದÀ್ದು ಮಾಯಾವಾದಿಗಳ ವಾದಪ್ರ- ಸಿದ್ಧನೆನಿಸಿದೆ ಮಧ್ವಮುನಿ ಮುದ್ದು ಭೀಮೇಶಕೃಷ್ಣನ ಪ್ರ- ಸಿದ್ಧಿ ಮಾಡಿದೆ ಪರಮ ಗುರುವೆ 3
--------------
ಹರಪನಹಳ್ಳಿಭೀಮವ್ವ
ಮೆರೆದೆ ಮಹಿಮೆ ಉದಾರ ನಮ್ಮಗುರು ಭೀಮಸೇನ ಸುಧೀರ ಪ. ಮಂಗಳ ಮಹಿಮ ವಿಹಾರ ಮಾಯವಾದಿಗಳಿಗತಿ ಕ್ರೂರ ಅ.ಪ. ಹರಿಯ[ನಿರೂಪ] ವ ಧರಿಸಿ ಮರುತ ಕುಂತಿಯೊಳವತರಿಸಿಹರನೊಳು ವಾದಿಸಿ ಜೈಸಿ ಹರಿಸರ್ವೋತ್ತಮನೆಂದೆನಿಸಿ 1 ಬಕ ಹಿಡಿಂಬಕ ಕೀಚಕ ಜರಾಸುತರ ಮಣಿಮಂತ ಕೀಚಕ ದುರ್ಜನರಸಕಲ ಕೌರವ ಅತಿರಥರ ಕೊಂದು ಸುಖಪಡಿಸಿದೆ ಸಹೋದರರ 2 ಜ್ಞಾನಭಕುತಿಸಂಪನ್ನ ಅಜ್ಞಾನಾರಣ್ಯಛೇದನ ಮುದ್ದುಜ್ಞಾನೇಂದ್ರ ಹಯವದನನ್ನ ಧ್ಯಾನದೊಳಿರಿಸು ಪ್ರಸನ್ನ 3
--------------
ವಾದಿರಾಜ
ಅಂಬುಜಾಕ್ಷನಬಂಟನೆನೆವರಿಗೆ ನಂಟನಿಂಬರಿಗೆ ನೆಲೆವಂತ ವರದ ಹನುಮಂತ ಪ.ಜಲಧಿಯನು ದಾಂಟಿ ಜಾನಕಿಗೆ ತಲೆವಾಗಿ ನೀನಲಿದಕ್ಷಯ ನಿಶಾಟಾದ್ಯರರಿದೆಸತಿರಘುಕುಲೇಂದ್ರನಂಘ್ರಿಯ ಕಂಡು ಅಸಹಾಯದಿಹÀಲವು ಸಾಹಸ ಮಾಡಿದಖಿಳ ಕಪಿನಾಥ 1ಕಿರ್ಮೀರ ಬಕ ಹಿಡಿಂಬಕ ಕೀಚಕಾದಿಖಳದುರ್ಮತಿ ಕದಳಿವನಕೆಮತ್ತಕರಿಯೆನಿರ್ಮಳಾನನೆ ದ್ರೌಪದಿಯ ಭಂಗಪಡಿಸಿದ ಕುಕರ್ಮಿ ಕೌರವರಿಗಶನಿಯೆ 2ಶ್ರೀ ಬಾದರಾಯಣಾಜÕದಿ ತತ್ವಸಾರಾರ್ಥನೀ ಬೋಧಿಸಿದೆ ನಿಜ ವೈಷ್ಣವ ಜನಕೆಈ ಭುವಿಗೆ ಕಶ್ಮಲ ಕುವಾದಿಗಳ ಗೆದ್ದಬ್ಜನಾಭಿ ಪ್ರಸನ್ನವೆಂಕಟೇಶಗರ್ಪಿಸಿದೆ 3
--------------
ಪ್ರಸನ್ನವೆಂಕಟದಾಸರು
ಗುರುರಾಯರ ನಂಬಿರೋ-ಮಾರುತಿಯೆಂಬ ಪಗುರುರಾಯರ ನಂಬಿ ಬಿಡದೆ ಯಾವಾಗಲು |ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ ಅ.ಪವನಧಿಯ ಮನೋವೇಗದಿಂದ ಲಂಘಿಸಿ ಮಹಿ-ತನುಜೆಯ ಶೋಕತಾಪವ ಕಳೆದು ||ವನವ ಬೇರೊಡನೆ ಕಿತ್ತೀಡಾಡಿ ಎದುರಾದದನುಜರ ಸದೆದು ಲಂಕೆಯ ತನ್ನ ಸಖಗಿತ್ತ 1ಕೌರವ ಬಕ ಹಿಡಿಂಬಕ ಕೀಚಕರೆಂಬ |ಕ್ರೊರಸಂತತಿಯೆಲ್ಲ ನುಗ್ಗಲೊತ್ತಿ ||ಘೋರಪಾತಕಿದುಶ್ಯಾಸನ ರಕುತವಹೀರಿ ಮುದದಿ ಮುರವೈರಿಯ ಭಜಿಸಿದ 2ಜೀವೇಶರೊಂದೆಂಬ ದುರ್ವಾದಿಗಳ ಕು-ಭಾವಶಾಸ್ರ್ತಗಳೆಲ್ಲ ತರಿದೋಡಿಸಿ ||ಕೋವಿದರಿಗೆ ಸದ್ಛಾಷ್ಯ ಸುಧೆಯನಿತ್ತುದೇವ ಪುರಂದರವಿಠಲ ಸೇವಕನಾದ 3
--------------
ಪುರಂದರದಾಸರು