ಒಟ್ಟು 54 ಕಡೆಗಳಲ್ಲಿ , 29 ದಾಸರು , 52 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾತರಂಚಿಕೆ ಜಗದೊಳಗೆ ಜಗ ನ್ನಾಥ ದಾಸರ ದಯಪಡೆದ ಸುಜನರಿಗೆ ಪ ವಿಧಿ ಮದನಾರಿ ವಂದಿತ ಒ ಪತಿ ಮಧುರಿಫು ಹರಿಕೃತಾ ಪದ ಸರಸಿಜ ಪೊಂದಿದಸುಗುಣರಿಗೆ 1 ನಳಿನ ಜನಕನ ವÀಲಿಸಿ ಹರುಷದಿಂದಲಿ ಥಳ ಥಳ ಪೊಲೆಯುವ ಸ್ತಂಭದಲಿ ಕುಳಿತು ಸೇವಿಸುವರ ಸಲಹುವ ಶ್ರೀ ರಂಗ ವಲಿದ ದಾಸಾರ್ಯರ ಒಲಿಮೆ ಉಳ್ಳವರಿಗೆ 2 ಸಿರಿವರ ಶಾಮಸುಂದರ ಸರ್ವೋತ್ತುಮ ಮರುತಾತ್ಮಜ ಗುರುವರ್ಯಕಿಂದು ಧರಿಯೊಳು ಸಾರಿದ ಸಲ್ಹಾದ ದಾಸರ ಚರಣ ಸರೋರುಹ ನೆರೆನಂಬಿದವರಿಗೆ 3
--------------
ಶಾಮಸುಂದರ ವಿಠಲ
ಫಣಿರಾಜಶಯನ ರುಕ್ಮಿಣೀ ದೇವಿಯೊಡಗೂಡಿ ಕುಳಿತಿರ್ದು ಸತಿಯೊಡನೆ ಅಣಕವಾಡಿದನು ಇನಿತೆಂದು 1 243 ಹೇ ರಾಜಕನ್ನಿಕೆ ಭೂರಮಣ ನಾನಲ್ಲ ನಾರದನ ನುಡಿಗೆ ನಳಿನಾಕ್ಷಿ 2 244 ಶಿಶುಪಾಲ ಮೊದಲಾದ ವಸುಧೆಪಾಲರ ಬಿಟ್ಟು ಸುಕುಮಾರಿ ಎನಲು ಪರ ವಶಳಾದಳಾಗ ಮಹಲಕ್ಷ್ಮಿ 3 245 ಈ ಮಾತ ಕೇಳಿ ಕೈ ಚಾಮರವನೀಡಾಡಿ ಭುಗಿಲೆಂದು ಮಲಗಿದಾ ಕಾಮಿನಿಯ ಕಂಡ ಕಮಲಾಕ್ಷ 4 246 ಕಂಗೆಟ್ಟಳೆಂದು ತನ್ನ ಅಂಗನೆಯ ಬಿಗಿದಪ್ಪಿ ಮುಂಗುರುಳ ತಿದ್ದಿ ಮುದ್ದಿಸಿ | ಮುದ್ದಿಸಿ ಮಾತಾಡ್ಡ ಕಂಗಳಶ್ರುಗಳ ಒರೆಸುತ್ತ5 247 ಸಲಿಗೆ ಮಾತಿನ ಬಗೆಯ ತಿಳಿಯದಲೆ ಹೀಗೆ ಚಂ ಚಲವನೈದುವರೆ ಚಪಲಾಕ್ಷಿ | ಚಪಲಾಕ್ಷಿ ಏಳೆಂದು ತÀಲೆಯ ಮೇಲಿಟ್ಟ ಕರಪದ್ಮ 6 248 ಶ್ರೀ ದೇವಿ ನಿನ್ನೊಳು ವಿನೋದ ಮಾಡಲಿಷ್ಟು ವಿ ಅನುದಿನ | ಅನುದಿನದಿ ಸ್ಮರಿಸುವರ ಕಾದುಕೊಂಡಿಹೆನು ಬಳಿಯಲ್ಲಿ 7 249 ಹಿಗ್ಗಿದಳು ಮನದಿ ಸೌಭಾಗ್ಯ ಭೂಮಿನಿಯು ಅಪ ವರ್ಗದನ ನುಡಿಗೆ ಹರುಷಾದಿ | ಹರುಷದಿಂದಲಿ ಪಾದ ಯುಗ್ಮಕೆರಗಿದಳು ಇನಿತೆಂದು 8 250 ಜಗದೇಕ ಮಾತೆ ಕೈ ಮುಗಿದು ಲಜ್ಜೆಯಲಾಗ ಮಾತಾಡಿದಳು ಪತಿಯ ಮೊಗವ ನೋಡುತಲಿ ನಳಿನಾಕ್ಷಿ 9 251 ಪರಿಪೂರ್ಣಕಾಮ ನಿನ್ನರಸಿ ನಾನಹುದು ಸ್ವೀ ಕರಿಸಿದೆಯೊ ಎನ್ನ ಸತಿಯೆಂದು | ಸತಿಯೆಂದ ಕಾರಣಾ ಕ್ಷರಳೆನಿಸಿಕೊಂಡೆ ಶ್ರುತಿಯಿಂದ10 252 ಭುವನಾಧಿಪತಿ ನೀನು ಅವಿಯೋಗಿ ನಿನಗಾನು ನೃಪರ ಪತಿಯೆಂದು | ಪತಿಯೆಂದು ಬಗೆವೆನೇ ಸವಿ ಮಾತಿದಲ್ಲ ಸರ್ವಜ್ಞ 11 253 ಭಗವಂತ ನೀನು ದುರ್ಭಗ ದೇಹಗತರವರು ತ್ರಿಗುಣವರ್ಜಿತವು ತವರೂಪ | ತವರೂಪ ಗುಣಗಳನು ಪೊಗಳಲೆನ್ನಳವೆ ಪರಮಾತ್ಮ12 254 ಭಾನು ತನ್ನಯ ಕಿರಣ ಪಾಣಿಗಳ ದೆಸೆಯಿಂದ ಪಾನೀಯಜಗಳನರಳಿಸಿ | ಆರಳಿಸಿ ಗಂಧ ಆ ಘ್ರಾಣಿಸಿದಂತೆ ಗ್ರಹಿಸೀದಿ13 255 ಬೈದವನ ಕುತ್ತಿಗೆಯ ಕೊಯ್ದು ಅಂಧಂತಮಸ್ಸಿ ಪರಿಪಂಥಿ ನೃಪರನ್ನು ಐದುವೆನೆ ನಿನ್ನ ಹೊರತಾಗಿ 14 256 ನಿಮ್ಮನುಗ್ರಹದಿಂದ ಬ್ರಹ್ಮರುದ್ರಾದಿಗಳ ನಿರ್ಮಿಸಿ ಸಲಹಿ ಸಂಹಾರ | ಸಂಹಾರ ಮಾಡುವೆನು ದುರ್ಮದಾಂಧರನಾ ಬಗೆವೇನೆ 15 257 ಮಂಜುಳೋಕ್ತಿಯ ಕೇಳಿ ಅಂಜಲ್ಯಾತಕೆಂದು ನವ ಕಂಜಲೋಚನೆಯ ಬಿಗಿದಪ್ಪಿ | ಬಿಗಿದಪ್ಪಿ ಮುದ್ದಿಸಿದ ಧ ನಂಜಯ ಪ್ರಿಯನು ಸಥೆಯಿಂದ16 258 ನಿನಗೆ ಎನ್ನಲಿ ಭಕುತಿ ಎನಿತಿಹುದೊ ಕಂಡೆ ಎಂದೆಂದು ಇಹುದು ಇದ ಕನುಮಾನವಿಲ್ಲ ವನಜಾಕ್ಷಿ 17 259 ದೋಷವರ್ಜಿತ ರುಕ್ಮಿಣೀಶನ ವಿಲಾಸ ತೋಷದಲಿ ಕೇಳಿ ಪಠಿಸಿದ | ಪಠಿಸಿದಂಥವರ ಅಭಿ ಲಾಷೆ ಪೊರೈಸಿ ಸಲಹೂವ 18 260 ನೀತಜನಕ ಶ್ರೀ ಜಗನ್ನಾಥ ವಿಠ್ಠಲ ಜಗ ನ್ಮಾತೆಯೆನಿಸುವಳು ಮಹಲಕ್ಷ್ಮಿ | ಮಹಲಕ್ಷ್ಮಿ ಸುತ ಬ್ರಹ್ಮ ಪಾತ್ರನೆನಿಸುವ ಗುರು ರುದ್ರ 19
--------------
ಜಗನ್ನಾಥದಾಸರು
ಅಧ್ಯಾಯ ಎರಡು ಪದ ಪದುಮ ನಾಭನ ಸ್ಮರಿಸಿ ಮುದದಿ ಹಿಮಗಿರೀಂದ್ರನು ಮದುವೆಯಕಾರ್ಯಕೆ ತೊಡಗಿದ ಮಗಳ ಹುಡುಕಿದ 1 ಅಲ್ಲೆ ಮನೆಯೊಳಗಿಲ್ಲ ಎಲ್ಲಿ ಹುಡುಕಿದರಿಲ್ಲ ಅಲ್ಲೆ ಇಲ್ಲೆಂದು ಇಲ್ಲ ಎಲ್ಲೆಲ್ಲಿ ಇಲ್ಲಾ 2 ಘನಹಿಮ ಗಿರೀಂದ್ರ ದಮ್ಮನೆ ದಣಿದು ಮಾತಾಡಿದನು ಮನೆಮನೆಯಲ್ಲಿ ಹುಡುಕಿ ಮನದೊಳು ಮಿಡುಕಿ3 ಮಾನವಂತಿ ಮಗಳೆಲ್ಲೆ ತಾನು ಹೋದಳು ನಾನಿ ನ್ನೇನು ಪಾಯವ ಮಾಡಲಿ ಎಲ್ಲೆ ನೋಡಲಿ 4 ಅಚ್ಯುತಾನಂತಾದ್ರೀಶ ನಿಚ್ಛೆ ತಿಳಯದು ಎಂದು ಎಚ್ಚರಿಲ್ಲದೆ ಬಿದ್ದನು ಮೂರ್ಛಿತನಾದನು 5 ಪದ ಏಳೆಏಳೆಂದು ಆಕಾಲದಲಿ ಆಜನರು ಹೇಳಿ ಎಬ್ಬಿಸಲಾಗ ಏಳಲೊಲ್ಲವನು ಆ ಮೇಲೆ ಹಾ ಇದು ಎಂಥ ವೇಳೆ ಬಂದಿತು ಎಂದು ಬಹಳ ಗಾಬರಿಯಿಂದ ಗಾಳಿ ಹಾಕಿದರು ಶ್ರೀಶೈಲೇಂದ್ರ ತಾನು ಆಮೇಲೆ ಏಳುತ ಮೈಮೇಲೆ ಎಚ್ಚರ ಹುಟ್ಟು ಆಲಯದೊಳಗಿರುವ ಶೇಲಾದ ಮಗಳನ್ನು ಕಾಣದಲೆ ಕಣ್ಣು ಕ ಗ್ಗಾಳಿಗೈಯುತ ಶೋಕ ಬಹಳ ಮಾಡಿದನು 1 ಪದ ಎಲ್ಲಿ ಪೋದಳೆಲ್ಲಿ ಹುಡುಕಲಿ ಮಗಳಿಲ್ಲ ಮನೆಯೊಳೆಲ್ಲಿ ಇರುವಳಲ್ಲಿ ಪೋಗಲಿ ಎಲ್ಲಿ ಪೋದಳೆಲ್ಲಿ ಹುಡುಕಲೆಲ್ಲಿ ಮಗಳು ಇಲ್ಲ ಪ್ರಾಣ ನಿಲ್ಲ ಲೊಲ್ಲದಿಲ್ಲೆ ಮನಸು ಕಲ್ಲುಮಾಡಿಯೆಲ್ಲಾ ಬಿಟ್ಟು ಪ ಚಾರು ಮುಖಿಯ ಯಾರು ಒಯ್ದರೋ ವಿಚಾರ ಮಾಳ್ಪರಾರ ಇಲ್ಲ ಚೋರರೊಯಿದರೋ ಕ್ರೂರದೈತ್ಯ ವರ್ಯರೋ ಉದಾರಗಂಧರ್ವರೋ ಪೂರ್ವವಯದ ಪಾರ್ವತಿಯ ಯಾರು ವೈದಿದಾರು ಮತ್ತೆ1 ಇಂದ್ರತಾನು ಬಂದು ಒಯ್ದನೋ ಆ ಚಂದ್ರ ಮುಖಿಯ ಚಂದ್ರ ಬೇಕೆಂದು ಒಯ್ದನೋ ಮುಂದೆ ಯಾರು ಬಂದು ಒಯ್ದರೆಂದು ತಿಳಿಯದಿಂದು ಎನಗೆ ಬಂದ ತಾಪದಿಂದ ಬಹಳ ಬೆಂದೆನಾರ ಮುಂದೆ ಹೇಳಲಿ 2 ಎಂತು ನಾನು ಚಿಂತೆ ಮಾಡಲಿ ಧೀಮಂತ ಮುನಿಗೆ ನಿಂತು ಏನಂತ ಹೇಳಲಿ ಎಂಥ ಕಷ್ಟ ಬಂತÀು ಈ ಚಿಂತೆಗಿನ್ನು ಪ್ರಾಂತಗಾಣೆ ಪ್ರಾಂತಕಾನಂತ ಗಿರಿಯ ಕಾಂತಗೇನಂತ ಹೇಳಲಿ 3 ಪದ್ಯ ಮುನ್ನಯೀಪರಿ ಶೋಕವನ್ನು ಮಾಡುತಲೆದ್ದು ಘನ್ನ ಆ ಗಿರಿರಾಜ ನಿನ್ನೇನು ಗತಿಯೆಂದು ಕಣ್ಣೀರು ಸುರಿಸುತಲೆ ಹೆಣ್ಣು ಮಗಳನು ನೆನಸಿ ಉಣ್ಣದಲೆ ತಾನು ಅರಣ್ಯದಲಿ ನಡೆದ ಕಣ್ಣಿಟ್ಟು ನಾಕುಕಡೆ ಚನ್ನಾಗಿ ನೋಡಿದನು ಮುನ್ನಲ್ಲೆ ಕುಳಿತಿರುವ ತನ್ನ ಮಗಳನು ಕಂಡು ಕನ್ನಡಿಯ ಪರಿಹೊಳೆವ ಮುನ್ನವಳಗಲ್ಲವನು ಚೆನ್ನಾಗಿ ಪಿಡಿದು ಬಹು ಬಣ್ಣಿಸುತ ನುಡಿದ ಪದ ಪ್ರೀತಿ ಮಗಳೆ ನೀನು ಈ ವನದಲ್ಲಿ ಕೂತ ಕಾರಣವೇನು ಅಮ್ಮಯ್ಯಾ ಪ್ರೀತಿಯ ಮಗಳೆ ಇಲ್ಲೇತಕೆ ಬಂದೆ ನೀ ಪ್ರೀತನಾದ ಶ್ರೀನಾಥ ಮನೆಗೆ ನಡಿ ಪ ಮದುವಿ ನಿಶ್ಚಯವಿಂದು ಮಧುಸೂದನನಿಗೆ ನಾ ಮುದದಿ ನಿನ್ನನ್ನು ಕೊಟ್ಟು ಮದುವೆ ಮಾಡುವೆನು ಮುದದಿ ಮನೆಗೆ ನಡಿ 1 ಮನಸಿನೊಳಗೆ ಮಿಡುಕೀ ಮನೆಯ ಬಿಟ್ಟು ವನವನವÀ ಚರಿಸುವರೇ 2 ಮನೆಗೆ ನಡಿಯೆ ನಿನ್ನ ಮನಸಿನಂತಾಯಿತು ಏಸು ಜನ್ಮಕೆ ಬಂದು ಮಾಡಿದ ಪುಣ್ಯರಾಶಿ ಫಲಿಸಿತಿಂದು ವಾಸುದೇವ ಸರ್ವೇಶ ಅನಂತಾದ್ರೀಶ ನೀನ್ನ ಕೈವಶವಾದನಡಿ 3 ಪದ ಪಡೆದ ತಂದೆಯ ಮಾತು ದೃಢವಾಗಿ ಕೇಳುತಲೆ ಬಿಡದೆ ಆ ನಾರದನ ನುಡಿ ಸ್ಮರಿಸಿ ಪಾರ್ವತಿಯು ಎಡವಿದಾ ಬಟ್ಟುಮ ತ್ತೆಡವಿದಂತೆ ದು:ಖ ಬಡುವುತಲೆ ಮನದಲ್ಲೆ ಮಿಡುಕಿದಳು ತಾನು ಅಡವಿಯಲಿ ನಾ ಬಂದು ಅಡಗಿದರು ಇದು ಎನ್ನ ಬಿಡಲಿಲ್ಲ ಮತ್ತಿನ್ನ ತುಡುಗುತನವು ಯಾಕೆ ನುಡಿಬೇಕೆಂದು ತನ್ನ ಒಡಲೊಳಗಯಿದ್ದದ್ದು ಒಡೆದು ಆಡಿದಳಾಗ ಭಿಡೆಯಬಿಟ್ಟು ಪದ ಅಪ್ಪಯ್ಯ ಒಲ್ಲೆ ನಾ ವಿಷ್ಣುವ ಒಲ್ಲೆನಾ ವಿಷ್ಣುವ ಎಲ್ಲಿ ಹುಡುಕಿ ತಂದಿ ಬಲ್ಲಿದ ಶಿವಯೆನ್ನ ವಲ್ಲಭನಯ್ಯಾ ಪ ಧೀರ ಕೇಳವನ ವಿಚಾರಯೆನ್ಹೇಳಲಿ ನೀರು ಮನೆಯಮಾಡಿ ಭಾರವಗೆಲುವ ಮಣ್ಣು ಮೆಲುವಾ ಬಿಟ್ಟು ಅವದಾವ ಚೆಲುವಾ 1 ನಿತ್ಯ ಕ್ರೂರನಾಗಿ ಮತ್ತೆ ಬಲಿಯ ತಳಕೊತ್ತಿ ತುಳಿದನವ ಕುಹಕ ಕುತ್ತಿಗೆ ಕೊಯಿಕಾ ಅವಗೆಲ್ಲಿ ವಿವೇಕಾ 2 ಶುದ್ಧ ಕೋತಿಯ ಕೂಡಿ ಕದ್ದು ಬೆಣ್ಣೆಯ ಬತ್ತ ಲಿದ್ದು ತೇಜಿಯ ಬಿಟ್ಟು ಅನಂತಾದ್ರಿಯಲ್ಲಿಹನು 3 ಪದ ವನದಲ್ಲೆ ಇರುವ ಆ ವನಜ ಮುಖಿ ಪಾರ್ವತಿಯು ವಿನಯದಿಂದೀಶ್ವರನ ಮನದಲ್ಲೆ ಸ್ಮರಿಸುತ್ತಲೆ ಮನಸಿನ ಭಾವವನ್ನು ಅನುಮಾನ ಬಿಟ್ಟು ತನಗನುಕೂಲವಾಗಿ ಘನ ಹಿಮಾಚಲ ಜನಾರ್ದನಗೆ ಕೊಡಬೇಕೆಂದು ಮನದಲ್ಲೆ ಆತನ ನೆನವುತಲೆ ಭಕ್ತಿಯಲಿ ಮುನಿದಿರುವ ಪಾರ್ವತಿಯ ಮನಸಿನ ಭಾವವನು ಮನಸಿಗೆ ತಾರದಲೆ ಮನೆಗೆ ನಡೆಯೆಂದ 1 ಪದ ಮನೆಗೆ ನಡೆಯೆ ಪಾರ್ವತಿ ನೀನು ಎನ್ನ ಮನಸಿನಂತಾದರೆ ಬರುವೆನು 1 ನಿನ್ನ ಮನೋರಥ ವದುಯೇನು ಬಹು ಮನ್ನಿಸಿ ಶಿವಗೆನ್ನ ಕೊಡು ನೀನು 2 ಹರಿಗೆ ನಿಶ್ಚಯ ಮಾಡಿದೆ ನಾನು ಬಿಡು ಹರಗೆ ನಿಶ್ಚಯ ಮಾಡೆಲೋ ನೀನು 3 ಬಾಲೆ ಕೊಟ್ಟ್ಹಣ್ಣು ತಿರುಗೂದಿಲ್ಲೆ ಶಿಶುಪಾಲನ ರುಕ್ಮಿಣಿ ಬಿಡಲಿಲ್ಲೆ 4 ಗೆದ್ದೊಯ್ದ ಆಕೆಯ ಹರಿ ತಾನು ನಾನು ಗೆದ್ದವರಿಗೆ ಮಾಲೆ ಹಾಕುವೆನು 5 ಯಾವ ಪುರುಷ ನಿನ್ನ ಗೆದ್ದವನು ಮಹದೇವನೆ ನಿಶ್ಚಯ ತಿಳಿ ನೀನು 6 ಗೆದ್ದಿಹ ನಿನ್ನಾನಂತಾದ್ರೀಶಾ ನಿನಗದರ ಚಿಂತೆಯಾಕೋ ಶೈಲೇಶಾ7 ಪದ ಅವನು ಹಿಮವಂತನೆಂಬುವನು ತನ್ನ ಮಗಳು ಆದವಳಿಗೀಪರಿ ನುಡಿದಾ ಶಿವನನಾಮದುವೆ ಆಗುವೆನು ಎಂಬುವೆ ನೀನು ಶಿವನುಯೆಂದೆನಿಸಿಕೊಂಬುವನು ಅವ ಮತ ಎಂಥವನು ಪೇಳೆ ಅವನ ಮಾತನು ಕೇಳಿ ಯುವತಿಮಣಿ ಪಾರ್ವತಿಯು ಶಿವನ ಸ್ಮರಿಸುತ ಮತ್ತೆ ಶಿವನ ಸರಿಯಿಲ್ಲ ಈ ಭುವನದೊಳು ಎಂತೆಂದು ಅವನ ಕೊಂಡಾಡುತಲೆ ಸ್ತವನ ಮಾಡುತ ನುಡಿದಳವನ ಪತಿಯೆಂದು 1 ಪದ ಅವನೆ ಪತಿಯು ಶಿವನು ಎನಿಸುವಾ ಅಪ್ಪಯ್ಯ ಕೇಳೋ ಅವನೆ ಪತಿಯು ಶಿವನು ಎನಿಸುವವನು ಸರ್ವÀಭುವನದೊಡೆಯ ಅವನೆ ಯನಗೊಪ್ಪುವನು ಸತ್ಯ ಅವನೀಶನೆ ಯೆನ್ನವಗರ್ಪಿಸು ಪ ಭಕ್ತಪ್ರಿಯ ತ್ರೀನೇತ್ರನಾಥನು ತಾ ನಿತ್ಯ ನದಿಯ ನೆತ್ತಿಯಲಿ ಪೊತ್ತಿಹಾತನು ಪ್ರಖ್ಯಾತನು ಸತ್ಯಶೀಲಕೃತ್ತಿವಾಸಕ್ಲøಪ್ತ ಅವನೆ ಚಿತ್ತದೊಡೆಯ ಅವಗಗತ್ಯ ಕೊಡುನೀ 1 ಬಂದದುರಿತ ಹಿಂದೆ ಮಾಡುವ ಭಕ್ತಿಂದ ನಡದು ನಡದು ಬಂದವರಿಗಾನಂದ ಮಾಡುವ ದಯಮಾಡುವ ತಂದು ಕೊಡುವ ತಂದೆ ಕೇಳಾನಂದಮೂರುತಿ ನಂದಿವಾಹನ ಚಂದ್ರಶೇಖರ ಅಂಥ ಇಂಥ ಕಾಂತನಲ್ಲವೋ ಭೂಪ್ರಾಂತದೊಳವನಂಥ ದಯಾವಂತರಿಲ್ಲವೋಸುಳ್ಳಲ್ಲವೋ ಕಂತುಪಿತ ಅನಂತಾದ್ರೀಶನಂಥ ಕಪಟವಂತರಿಲ್ಲ ಅಂತರಂಗದ ಕಾಂತ ಶಿವನೇ ಚಿಂತೆಯಾಕ್ಹಿಮವಂತ ಇನ್ನು ಪದ ಇಂಥ ಮಾತನು ಕೇಳಿ ಸಂತೋಷದಲಿ ಹಿಮವಂತ ರಾಜೇಂದ್ರ ತಾನು ಮಾತಾಡಿದನು 1 ಮನೆಗೆ ಬಂದನು ಉದ್ರೇಕದಲ್ಲಿ ಸ್ನೇಹಬದ್ಧಾಗಿ ಸ್ವಯಂವರ ದುದ್ಯೋಗ ಮಾಡಿದನು 2 ಲೇಸಾಗಿ ತಾ ಸರ್ವದೇಶಕ್ಕೆ ದುಂದುಭಿ ಘೋಷವ ಮಾಡಿಸಿದಾ ತೋಷದಿ ಸರ್ವಲೋಕೇಶರನೆಲ್ಲಾ ಕರೆ ಕಳುಹಿದಾ 3 ಇಂದ್ರ ತಾ ಬಂದ ಅಲ್ಲಿಂದ ಅಗ್ನಿಯು ಬಂದಾ ಮುಂದೆ ಆ ಯಮನು ಬಂದಾ ಬಂದಾ ನಿರುತಿಮತ್ತೆ ಬಂದ ವರುಣ ವಾಯು ಬಂದ ಕುಬೇರ ತಾನು 4 ನಿಲ್ಲದೆ ಸ್ವಯಂವರಕೆ ಬಲ್ಲಿದನಂತಾದ್ರಿ ವಲ್ಲಭ ತಾ ಬಂದ ಎಲ್ಲರು ಬಂದರಾಗ 5 ಪದ ಗಿರಿರಾಜ ಮುಂದೆ ಆ ಸುರರಲ್ಲಿ ಬಹುಸ್ನೇಹ ಸುರಿಸುತಲೆ ಆಸನವ ತರಿಸಿ ಎಲ್ಲರನು ಕುಳ್ಳಿರಿಸಿ ಕರಗಳ ಮುಗಿದು ಹರಿ ಮೊದಲು ಮಾಡಿಕೊಂ- ಡ್ಹರುಷದಿಂದಲಿ ಸರ್ವ ಸುರರಿಗರ್ಚಿಸಿದ ಸುರಸಾದ ಈ ಕಥೆಯ ಸರಸಾಗಿ ಕೇಳಿದರೆ ಸುರರು ವೊಲಿವುವರೆಲ್ಲ ಸರಸಿಜಾಕ್ಷಿಯ ಸ್ವಯಂವರಕೆ ಬಂದಿಹ ಸರ್ವ ಸುರರನುಗ್ರಹದಿಂದ ಸರಸರನೆ ಮುಗಿದಿತಿಲ್ಲಿಗೆರಡು ಅಧ್ಯಾಯ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಮೂರು ಜನ್ಮನಾಕಾಶನಂದಾ ವಸುಧಾನಾಗ್ರಜಾ ನಿಜಾನ್ ಪದ್ಮಾವತೀ ಪದ್ಮಭವಾ ವನಕ್ರೀಡಾರತ್ಯಾವತಾತ್ ವಚನ ಸಂದರ್ಶನಾದದ್ದು ತಂದೆಯ ಕಥೆಸ್ಮøತಿಗೆ ತಂದು ಅದು ವಿಸ್ತಾರದಿಂದ ಪೇಳುವೆನು ಸುಧರ್ಮನೆಂದು ಇರವನು ಅವಗೆ ಮುಂದೆ ಇಬ್ಬರು ಸುತರು ಚಂದದಲಿ ಆಕಾಶನೆಂದು ತೊಂಡಮಾನಸೆನಿಸುವನು 1 ವ್ಯಾಕುಲದಿ ಹೀಗೆ ಇಲ್ಲೆಂದು ಶೋಕದಲಿ ಕಣ್ಣೀರು ಹಾಕಿ ಸ್ಮರಿಸಿದ ದೇವಲೋಕ ಗುರುವ ಯಾಕೆ ಸ್ಮರಿಸಿದೆ ಎನ್ನನೀಕಾಲದಲಿ ಏನುಬೇಕು ಬೇಡಲೋನೀನು ನಾ ಶೋಕವನು ನುಡಿದಾ2 ಪಾಪಿಷ್ಠ ಏನು ಇದ್ದೇನು ನಾನು ಮಾಡಿದ ಪೇಳೋ ಹೀನಬುದ್ಧಿ ಕೊಲಿಸಿದೆನೇನು ಏನು ಕಾರಣ ಸಂತಾನ ಕಣ್ಣಿಲಿ ಕಾಣೆ ನಾನು ಅಯ್ಯಯ್ಯೊ 3 ಮಕ್ಕಳಾಡಿದರೆ ಬಹಳಕ್ಕರತೆ ಜೀವಕ್ಕೆ ಮಕ್ಕಳಿಲ್ಲದೆ ಮತ್ತೆ ಮಿಕ್ಕರಸ ಮಕ್ಕಳಿÀಂದಲೆ ಹಬ್ಬ ಹುಣ್ಣಿಮೆಯು ಉಲ್ಲಾಸ ಮಕ್ಕಳಿಂದಲೆ ಮುಂಜಿ ಮದುವೆಯ ಧರೆಯೊಳಗಿಲ್ಲ ಮಕ್ಕಳಿಂದಲೆ ಇಹವು ಮಕ್ಕಳಿಂದಲೆ ಪರವು ಮಕ್ಕಳಿಲ್ಲೆನ್ನ ಭಾಗ್ಯಕ್ಕೆ ಅಯ್ಯಯ್ಯ 4 ನೋಡಿಲ್ಲ ಮಕ್ಕಳಾಡಿದ ಮಾತು ನಕ್ಕು ಕೇಳಿಲ್ಲ ನಾ ಮಕ್ಕಳಿಂದಲೆ ಕೂಡಿ ಅಕ್ಕರದಿ ಉಣಲಿಲ್ಲ ಮಕ್ಕಳನು ಎತ್ತಿ ಮುದ್ದಿಕ್ಕಿದವನಲ್ಲ ಮಕ್ಕಳಿಲ್ಲದ ಮನುಜ ಲೆಕ್ಕದಾವದರೊಳಗೆ ಬೆಕ್ಕು ಮೊದಲಾದಂಥ ಮಿಕ್ಕ ಪ್ರಾಣಿಗಳೆಲ್ಲ ಮಕ್ಕಳಾಡಿದ ಬಹಳ ಚಕ್ಕಂದವನು ನೋಡಿ ಸೌಖ್ಯ ಪಡುತಿಹದಯ್ಯ ಧಿಕ್ಕರಿಸು ಎನ ಜನ್ಮ ಅದಕ್ಕಿಂತ ವ್ಯರ್ಥ 5 ಮುನ್ನ ನಮ್ಮೊಳಗಾರು ಉಣ್ಣದಲೆ ಈ ಬದುಕು ಮಣ್ಣು ಪಾಲಾಗುವದು ಘನ್ನ ಈ ಚಿಂತಿಯಲಿ ಬಣ್ಣಗೆಟ್ಟೆನು ಕುದ್ದು ಸುಣ್ಣಾದೆನಯ್ಯ ಉಭಯಕುಲ ತಾರಿಸುವಂಥ ನಾನು ಅಣ್ಣತಮ್ಮರ ಒಳಗೆ ಪುಣ್ಯ ಇಲ್ಲೊಬ್ಬನಲಿ ಪುಣ್ಯಗುರುವೆ 6 ರಾಗ:ಶಂಕರಾಭರಣ ಆದಿತಾಳ ಇಂಥ ಮಾತಿಗೆ ಜೀಯ ಹೀಗಂತ ನುಡಿದನು ಚಿಂತೆ ಮಾಡಬೇಡ ಭೂಕಾಂತ ಎಂದನು 1 ಪುತ್ರ ಕಾಮೇಷ್ಟಿಮಾಡು ಭಕ್ತಿಯಿಂದಲಿ ಪುತ್ರನಾಗುವನು ನಿಮಗೆ ಸತ್ಯ ನೀ ತಿಳಿ 2 ಗುರುವಿನ ಮಾತುಕೇಳಿ ಪರಮ ಹರುಷದಿಂದಲಿ ಅರಸ ಬ್ರಾಹ್ಮಣರನೆಲ್ಲ ಕರೆಸಿದಾಗಲೇ 3 ಮುಂದೆ ಯಜ್ಞ ಮಾಡಬೇಕು ಎಂದÀು ತ್ವರದಲಿ ಒಂದು ಭೂಮಿ ಶೋಧಿಸಿದನು ಚಂದದಲಿ 4 ಚಲುವ ನೇಗಿಲ ಜಗ್ಗಿ ಎಳೆವ ಕಾಲಕೆ ಹೊಳೆವ ಪದ್ಮ ಬಂತು ಅಲ್ಲಿ ಸುಳಿದು ಮೇಲಕೆ 5 ಇರುವಳೊಬ್ಬಳಲ್ಲಿ ಮತ್ತೆ ಪರಮಸುಂದರಿ ಅರಸನೋಡಿ ಬೆರಗಿನಿಂತ ಸ್ಮರಿಸಿ ಪರಿಪರಿ 6 ಕಾಣಿಸಿದಲೆ ಗಗನದಲಿ ವಾಣಿಯಾಯಿತು ಕಾಣದಿದ್ದರೂ ಈಗ ಸಕಲಪ್ರಾಣಿ ಕೇಳಿತೊ 7 ಇನ್ನು ಚಿಂತೆ ಮಾಡಬೇಡ ಧನ್ಯ ಅರಸ ನೀ ನಿನ್ನ ಮಗಳು ಎಂದು ಚೆನ್ನಾಗಿ ತಿಳಿಯೋ ನೀ8 ಕ್ಲೇಶ ಹಿಂದೆ ಬಿಡುವಿಯೊ ಮುಂದೆ ಮುಂದಕಿನ್ನು ಆನಂದ ಬಡವಿಯೊ9 ಗಗನ ವಾಣಿಯನ್ನು ಕೇಳಿ ಅರಸ ಬಗೆಯಲಿ ಮಗಳ ನೆತ್ತಿಕೊಂಡನಾಗ ಮುಗಳು ನಗೆಯಲಿ 10 ತಂದೆ ಮಗಳ ಜನ್ಮ ಪದ್ಮದಿಂದ ತಿಳಿದನು ಮುಂದೆ ಪದ್ಮಾವತಿಯೆಂದು ಕರೆದನು11 ಮಗಳಕಾಲಗುಣದಿ ಮುಂದೆ ಮಗನು ಆದನು ಅವನ ಕರೆದ ವಸುಧಾನನೆಂದು ಗಗನರಾಜನು 12 ತಕ್ಕವಾಗಿ ಅರಸಗ್ಹೀಗೆ ಮಕ್ಕಳಾದರು ಸೌಖ್ಯದಿಂದ ಮುಂದೆ ದಿನದಿನಕ್ಕೆ ಬೆಳೆದರು13 ಬಂತು ಯೌವನವು ಭೂಕಾಂತ ಪುತ್ರಿಗೆ ಬಂತು ಆಗ ಮತ್ತೆ ಬಹಳ ಚಿಂತೆ ಅರಸಗೆ 14 ಇಂಥ ಮಗಳಿಗಿನ್ನು ತಕ್ಕಂಥ ಪುರುಷನು ಪ್ರಾಂತದೊಳಗೆ ಇಲ್ಲದಿವ್ಯ ಕಾಂತಿ ಮಂತನು 15 ಎಂತು ನೋಡಲಿನ್ನು ಹುಡುಕಿ ಶ್ರಾಂತನಾದೆನು ಚಿಂತೆಯೊಳಗೆ ಬಿದ್ದು ಮುಂದೆ ಪ್ರಾಂತಗಾಣೇನು 16 ಅಂತರಂಗದೊಳಗೆ ಹೀಗಂತ ಅನುದಿನ ಚಿಂತಿಸಿದನು ಮರೆತು ಅನಂತಾದ್ರೀಶನ17 ವಚನ ಚಂದಾದ ಕುಸುಮಗಳ ಕೂಡಿ ಮುಂದೆ ಇಂದು ಮುಖಿಯು ನೋಡುತಲೆ ಮುಂದೆ ತೆಗೆದು ತ್ವರದಿಂದ ಆಭರಣಗಳ ಮುಂದೆ ತರಿಸಿದಳು1 ಕೆತ್ತಿಸಿದ ರಾಗುಟಿಯ ಒತ್ತಿ ಮೊದಲ್ಹಾಕಿ ಹತ್ತೊತ್ತಿದಳು ಸಾಲ್ಹಿಡಿದು ಇತ್ತಿತ್ತು ಮತ್ತೆ ತುದಿಗೆ ಅತ್ತಿತ್ತ ಮತ್ತ ಮೇಲರಿಸಿನವ ಚಿತ್ತಗೊಟ್ಟಚ್ಚಿದಳು ಚಿತ್ತಾರ ಬರೆದಂತೆ ಮತ್ತ ಗಜಗಮನೆ 2 ಥಳಥಳನೆ ಜಾತಿಯಿಂದ್ಹೊಳೆವ ಮುತ್ತಿನ ಭವ್ಯ ಎಳೆಯ ಇಮ್ಮಡಿ ಮಾಡಿ ನಳಿನಾಕ್ಷಿ ಬೈತಲಗೆ ಅಳತೆಯಿಂದ್ಹಾಕಿದಳು ತಳಪಿನಲಿ ಎಡಬಲಕೆ ಎಳೆದು ಕಟ್ಟಿದಳ್ಹಿಂದೆ ಹೆರಳಿಗ್ಹಾಕಿ ತೊಳೆದ ಮುತ್ತಿನ ಬುಗಡಿ ಪೊಳೆವ ಮೀನ್ಬಾವಲಿಯು ಝಳಿ ಝಳಿತವಾಗಿರುವ ಗಿಳಿಗಂಟಿ ಚಳತುಂಬುಗಳ ನಿಟ್ಟು ಕರ್ಣದಲಿ ಉಳಿದ ದ್ರಾಕ್ಷಾಲತೆಯ ಎಳೆದು ಬಿಗಿದಳು ಮೇಲೆ ಸುಳಿಗುರಳಿನಲ್ಲಿ 3 ಇದ್ದ ಮುತ್ತುಗಳ್ಹಚ್ಚಿ ತಿದ್ದಿ ಮಾಡಿದ ನತ್ತು ಉದ್ರೇಕದಿಂದಿಡಲು ಮುದ್ದು ಸುರಿವುತ ಮುಂಚೆ ಇದ್ದ ಮುಖ ಮತ್ತೆ ಎದ್ದು ಕಾಣಿಸಿತು ಪ್ರದ್ಯುಮ್ನ ಚಾಪದಂತೆರಡÀು ಹುಬ್ಬುಗಳ ಮಧ್ಯೆ ನೊಸಲಿನ ಮೇಲೆ ಶುದ್ಧ ಕಸ್ತೂರಿಯನ್ನು ತಿದ್ದಿ ತಿಲಕವನಿಟ್ಟು ತಿದ್ದಿದಳು ಕಾಡಿಗೆಯ ಪದ್ಮಲೋಚನಗಳಿಗೆ ಪದ್ಮಜಾತೆ 4 ಚಂದ್ರಗಾವಿಯನ್ನುಟ್ಟು ಚಂದಾದ ಕುಪ್ಪಸವ ಮುಂದೆ ಬಿಗಿ ಬಿಗಿತೊಟ್ಟು ಮುಂದಲೆಗೆ ಶೋಭಿಸುವ ಚಂದ್ರಸೂರ್ಯರನಿಟ್ಟು ಚೆಂದಾಗಿ ಬೈತಲೆಗೆ ಚಂದಿರವ ಸುರಿದಳು ಚಂದ್ರಮುಖಿಯು ಪರಿ ಗೀರು ಗಂಧವನು ಕೈಗ್ಹಚ್ಚಿ ಮುಂದೆ ಕೊರಳಿಗೆ ಒರಿಸಿ ಚಂದ್ರಸರ ಮುಂದೆ ಹಾಕಿದಳು 5 ಮೇಲಿಟ್ಟು ಚಿಂತಾಕವನು ಕಟ್ಟಿ ತಾಯತ ಬಟ್ಟಕುಚಗಳ ಏಕಾವಳಿಯ ಇಟ್ಟು ಪುತ್ಥಳಿ ಸರವು ಅಷ್ಟು ಸರಗಳನೆಲ್ಲ ಮೆಟ್ಟಿ ಮೇಲ್ಮೆರೆವಂಥ ಶ್ರೇಷ್ಠ ಸರಿಗಿಯತರಿಸಿ ಇಟ್ಟಳಾಕೆ6 ಟೊಂಕದಲಿ ಒಡ್ಯಾಣ ಮುಂದಲಂಕರಿಸಿದಳು ಪೊಂಕದಿಂದಿಟ್ಟು ಅಕಳಂಕ ಕೊಂಕವನು ಮಾಡುತಲೆÉ ಕಿಂಕಿಣಿಪೈಜಣ ಇಟ್ಟಳಾಕೆ7 ಪಿಲ್ಲೆ ಮೇಲಾದ ಮುಸುಕಿಕ್ಕಿ ಬಹು ಬಾಲೆಯರು ಕೊಟ್ಟ ಕೂಡಿ ಭಾಳ ಹರುಷದಿ ಹೊರಟಳಾಕಾಲದಲ್ಲಿ. 8 ವಚನ ಪರಿ ಗಜಗಮನದಿಂದಾ ವನ ಮದನ ಸತಿಯಂತಿಪ್ಪ ತರುಣಿರೂಪವ ತಾಳಿ ವನಮಧ್ಯದಲ್ಲಿ ತಾಂ ಬೆಸಗೊಂಡಳು ಯಾರಲೆ ಬಾಲೆ ನೀ ಬಾಲಚಂದ್ರ ಲಲಾಟೆ ಕಾಳಾಹಿ ವೇಣೀ ನೀ ಜಾತೆಯರ ಕೂಡಿ ಬಳಗವು ಕಾಂತನ್ಯಾರು ಪೇಳೆಂದು 1 ಧ್ವನಿ ಕೇಳೆ ಕುಸುಮಕ್ಕೆ ನಾ ಬಂದೆ ತಿಳಿಯೆ ಮಾತಿನರಗಿಳಿಯೆ 1 ಅಸಮ ತೋಂಡಮಾನನೆಂಬುವನು ನಮ್ಮ ಕಕ್ಕನು 2 ನಾ ಖೂನವನು ಪೇಳಿದೆ ಸಾರಿ ಪೇಳಿದೆ &ಟಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಮೂರು ವಚನ ಪ್ರಹ್ಲಾದ ಹೀಗೆ ಬಾಲಕರಿಗ್ಹೇ ಳುವಾಗ ಕೇಳುತಲದನು ಬೇಗಶಂಡಾಮರ್ಕ- ರ್ಹೋಳಗಿ ಹೇಳಿದರು ಚಂದಾಗಿ ದೈತ್ಯನಾಗಲಾಕ್ಷಣದಲ್ಲಿ ಬೇ ಆಗ ಪ್ರಹ್ಲಾದನಾ ಬೇಗ ಕರೆ ಕಳಿಸುತಲೆ ಹೀಗೆಂದ ಕ್ರೋಧ ಭರಿತನಾಗಿ ತಾನು 1 ರಾಗ ಆವಾತ ಬಲನಿನಗೆ ಪ ನಾನೊಬ್ಬನೆ ಬಲ ಅ.ಪ ಕುಲಭೇದ ಮಾಡುವಿಯೋ ಹುಟ್ಟಿ ನೀಕುಲಕಂಟನಾದ್ಯೋ1 ಕೆಟ್ಟರಲ್ಲಾ ಕಡುದೈತ್ಯ ಜಾಲಿಗಿಡನಾಗಿ ಹುಟ್ಟಿದ್ಯೋ 2 ಇದ್ದರೇನು ಬಿಡದೆ ಆ ಕೊಡಲಿಗೆ ಕಾವಾದ್ಯೋ 3 ವಚನ ನಾ ಮಾತುಗಳು ವಿರಸಾದ ಸರಿಸಿ ಅವನಲಿ ಸ್ನೇಹ ಸ್ಮರಿಸಿ ಅವನಲಿ ಭಕ್ತಿಸುರ ಹರುಷದಿಂದಲಿ ನುಡಿದ ಹರಿ ಹಿರಣ್ಯ ಕಶಿಪುವಿಗೆ ರಾಗ ಅವನೆ ಎನಗೆ ಬಲವು ಪ ಶ್ರೀ ವೈಕುಂಠ ಭುವನಕ್ಕೆ ಒಡೆಯಾ ಅ.ಪ ಕುಲಗಳಿಗೊಡೆಯ 1 ಅವನೆ ಪಾಲಿಸಿ ನಾಶವನು ಅವನೆ ಸರ್ವೋತ್ತಮನವನೆ ಎನ್ನೊಡೆಯಾ 2 ಸರ್ವರಲ್ಲಿ ಇಡು ಸ್ನೇಹವ ಪಾದ ಅನಂತಾದ್ರಿಗೊಡೆಯ ನಾಗಿರುವಾ 3 ರಾಗ ಮಗನಮೇಲೆ ಖಡ್ಗ ಹಿಡಿದನು 1 ಮಾತಾಡಿದ್ಹೇಳೆಲೊ ನೀನು 2 ಹರಿಯನ್ನೇ ಕೊಂಡಾಡುವೆಯಲ್ಲಾ ಆಹರಿಯ ಹೊರತು ಗತಿಯೆನಗಿಲ್ಲಾ 3 ಕಡಿದು ಬಿಡುವೆ ನಿನ್ನನ್ನು ನಾನು ಹಿಂದೆ ಕಡಿದೇನು ಮಾಡಿದಿ ಎಲೋ ನೀನು 4 ಕಂಡಂಜುವನಲ್ಲವೆಲೊ ನಾನು 5 ಸ್ಥಿರವೆಂಬುದನರಿಯೆಯೋ 6 ಶ್ರೀಹರಿವಶವಾಗಿಹುದು 7 ಅವನಿದಿರುವಾ ಸ್ಥಳವಾವುದು 8 ಕೊಡುವ ನೆನಗವತಾನು 9 ಮೂರ್ಖ ತಿಳಿ ನೀನು 10 ಪ್ರಕಟನಾಗುವ ಅನಂತಾದ್ರೀಶಾ 11 ವಚನ ದೃಢವಾದ ಕಂಬವನು ದೃಢಮುಷ್ಠಿ ಕಡುಶಬ್ಧ ತಡವಿಲ್ಲ ಹೋಯಿತು ಒಳಗೆಹಿಡಿ ಬ್ರಹ್ಮಾದಿಗಳು ಪೊಡ ನಡುವೆ ಬಂದಿತು ಎಂದು ಸಿಕ್ಕಲ್ಲೇ ಅಡಗಿದರು ಆಗ ಪಟುತರ ಶ್ರೀಹರಿಯುಕುಟಿ ಮಹಾಕಠಿನ ನರಮೃಗನಾಗಿ ಭಟರು ಇರುವಲ್ಲೆ ಆರ್ಭ ಸಂಹನನ ನರನುನರ ಸಿಂಹ ಜಿಹ್ವೆನಲಿದಾಡುವದು ದೈತ್ಯಸಿಂಹ ನಡುಗಿದನು ರಾಗ ಶೌರ್ಯದಿಂದ ಯುದ್ಧವೆಂಬೋ ಕಾರ್ಯ ಮಾಡಿದಾ 1 ಗದೆಯ ಸಹಿತ ಕೈಯ ಹರಿಯು ವದಗಿ ಹಿಡಿದನು 2 ಖಡಗಚರ್ಮ ಹಿಡಿದು ಬಂದ ನಡೆದು ಮುಂದಕ್ಕೆ 3 ತಕ್ಕವಾಗಿರುವ ಹೊಸ್ತಿಲಕ್ಕೆ ನಡೆದನು 4 ಹೃದಯದಲ್ಲಿ ಸೀಳಿದಾ 5 ಕೊಂದು ಎಲ್ಲ ಸರಳ ಮಾಡಿದಾ 6 ಸ್ತುತಿಸಿ ಪುಷ್ಟವೃಷ್ಟಿಕರೆದುರು7 ಭಯನಿವಾರಣನ ದಯದಿ ಭಯವ ಕಳೆದರು 8 ನುಡಿದವಾಗ ತೀವ್ರದಿಂದಲಿ 9 ಗಾಯನವ ಮಾಳ್ಪರು 10 ಸಾಹಿತ್ಯದಿಂದಲಿ11 ಮೂರ್ತಿ ಕಂಡು ದೂರ ನಿಂತರು 12 ಸಂತತಾನಂತದ್ರೀಶನಂತ ತಿಳಿಯರು 13 ವಚನ ಸಂಪೂರ್ಣ ಕೇಳ್ವರೂ ಅವರು ದುರಿತ ತೋರುವನು ಪ್ರತ್ಯಕ್ಷ ಚಾರ್ವನಂತಾದ್ರೀಶ ನಾರಸಿಂಹನು ಮಾಡಿರುವಲ್ಲಿ ಪೂರ್ಣವಾಯಿ ದಯದಿಂದ ಮೂರು ಅಧ್ಯಾಯ 1
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಹತ್ತು ತಾಕ್ರ್ಷಸ್ಕಂಧ ಸಮಾರೂಢಃ ಶ್ರೀ ಬ್ರಹ್ಮಾದಿಭಿರಾವ್ನತಃ | ಧ್ವನಿ ಪರಿ ಪರಿ ಪ ಗರುಡನೇರಿದ ಶ್ರೀನಿವಾಸನು ರಾಜ ವರ ಹಂಸವನೇರಿದ ಬ್ರಹ್ಮನು ತ್ವರ ನಂದಿಯೇರಿದ ರುದ್ರನು ಅ ವರ ನಡುಮಧ್ಯೆ ನಡೆದ ಶ್ರೀಹರಿ ತಾನು 1 ದೇವಿಯೇರಿದಳಾಗ ರಥದಲಿ ಬಕುಲಾ ದೇವಿ ಯೇರಿದಳೊಂದು ರಥದಲಿ ಕೇವಲ ತಮ್ಮ ತಮ್ಮ ರಥದಲಿ ಉಳಿದ ದೇವಿಯರೇರಿ ಕೊಂಡರು ಅಲ್ಲಿ 2 ಉತ್ತಮ ಮಂಗಳವಾದ್ಯವು ನË ಬತ್ತು ನಗಾರಿಗಳಾದವು ಮತ್ತೆ ಉಳಿದ ಎಲ್ಲ ವಾದ್ಯಗಳು ಬಹು ವತ್ತಿ ಶಬ್ದಮಾಡಿ ನುಡಿದವು 3 ನಡೆದರು ಋಷಿಗಂಧರ್ವರು ಬಹು ಸಡಗರದಿಂದಲ್ಲೆ ಅಪ್ಸರರು ಬಡವ ಬಗ್ಗರು ಉಳಿದ ಮನುಜರು ಬಹು ಗಡಿಬಿಡಿಯಿಂದಲ್ಲೆ ನಡೆದರು 4 ಕುಂಟರು ಕುರುಡರು ಕಲ್ಲು ಕಂಟಕ ಕಾಲಿಲೆ ತುಳಿವವರೂ ಗಂಟು ತಲಿಯಲಿಟ್ಟುನಡಿಯುವರು ತಪ್ಪ ಗಂಟಾಗಿ ಒದರುತಲಿಹರು 5 ಕೆಲವರು ಗಂಡನ ಒದರುವರು ಮತ್ತ ಕೆಲವರು ಮಕ್ಕಳನೊದರುವರು ಕೆಲವರು ಎಡವುತಲಿರುವರು ಮತ್ತು ಕೆಲವರು ಭರದಿಂದ ಬೀಳುವರು 6 ಕೆಲವರೆಳೆದು ಎಬ್ಬಿಸುವರು ಮತ್ತು ಕೆಲವರು ನೋಡುತ ನಗುವವರು ಬಾಲರಳುವ ಧ್ವನಿ ಆಯಿತು ಜಗತ್ ಪಾಲನಸೈನ್ಯ ನಡೆಯಿತು ಮೇಲಾದನಂ ತಾಂದ್ರೀ ಇಳಿಯಿತು ಭೂಪಾಲಪುರದ್ಹಾದಿ ಹಿಡಿಯಿತು7 ವಚನ ಶೈಲವನು ಹಿಡಿದು ಭೂಪಾಲನಪುರತನಕ ಸಾಲ್ಹಿಡಿದು ನಡೆವಂಥ ಕಾಲದಲಿ ಮತ್ತಲ್ಲಿಡುವದಕ್ಕೆ ಎಳ್ಳು ಕಾಳಷ್ಟು ಸ್ಥಳವಿಲ್ಲ ಶ್ರೀಲಲಾಮನು ಮಧ್ಯಸಾಲಿನ ಮಧ್ಯಾಹ್ನ ಕಾಲ ದಲಿ ಶುಕಮುನಿಯ ಆಲಯಕೆ ಬಂದು ಕಾಲಿಗೆರಗಿದನು ಆಕಾಲಕೆ ಮುನಿ ಬಂದು ಹೇಳಿಕೊಂಡೀ ಪರಿಯು ಶೈಲ ಭೋಜನವು ಎನ್ನ ಮೇಲೆ ಕರುಣಿಯಿಂದಾ 1 ಹೀಗೆಂದು ನುಡಿದ ಶುಕಯೋಗಿಯ ವಚನವ ಕೇಳಿ ಬಾಗಿ ತಾ ನಮಿಸುತಲೆ ಆಗ ಶ್ರೀಹರಿ ನುಡಿದ ಯೋಗಿಗಳು ನಾ ಸಂಸಾರಿ ಆಗಿ ಇರವೆ ಇಲ್ಲೆ ಉಂಡರೆ ಮಿತಿಯ ಇಲ್ಲದಲೆ ಪುರದಲ್ಲೆ ಪೋಗುವುದು 2 ಮುನಿ ಮಂಡಲೇಶನು ಕೇಳಿಕೊಂಡು ಹೀಗೆಂದು ಬ್ರಹ್ಮಾಂಡ ಪತಿಯೆ ಒಬ್ಬ ಉಂಡರೆ ಜಗವೆಲ್ಲ ಉಂಡಂತೆ ಆಗುವುದು ಪುಂಡರೀಕಾಕ್ಷಾ ಭಾಳ ಕೇಳುತಲೆ ಮುಂದೆ ಬಾಲಕನ ಮುಖನೊಡಿ ಬಾಲೆ ನುಡಿದಳು ಬಕುಲ ಮಾಲಿಕೆಯು ತಾನು3 ಧ್ವನಿ:ವಸಂತಭೈರವಿ ಆದಿತಾಳ ತರವೆ ಹರಿಯೆ ಈ ಪರಿಯ ಮಾಡುವದುಪ ಸುಖಕರವಾಗಿಹ ಶುಕಮುನಿ ವಚನವು || ಲಕ್ಷಿಸದೆ ಶುಭಕಾರ್ಯಕೆ ಪೋಗುವದೂ 1 ಬಲ್ಲಿದ ಶಕುನವು ಇಲ್ಲೆನಿನಗೆ ತಿಳಿ| ಊಟಕೆ ಒಲ್ಲೆನೆಂಬುವದೂ 2 ಶ್ರೀಶ ಅನಂತಾದ್ರೀಶ ಮಹಾತ್ಮರ|| ಭಾಷೆಯ ಕೇವಲುದಾಸೀನ ಮಾಳ್ಪುದು 3 ವಚನ ಹೆತ್ತಾಯಿ ಪರಿಯಾಗಿ ಹೊತ್ತು ಹೊತ್ತಿಗೆ ತನಗೆ ಅತ್ಯಂತ ಹಿತ ಮಾಡುತಿರ್ದ ಬಕುಲಾವತಿ ಸತ್ಯವಚನ ಹರಿಯು ಮತ್ತು ಶುಕಮುನಿಗೆ ಉತ್ತರವ ಕೇಳಿ ಮುನಿ ಉತ್ತರಣೆಯು ಬೀಜ ಒತ್ತಿಕೈಯಲಿ ಮಾಡಿ ವೃತ್ತಾದ ಗುಳ್ಳ ಫಲದುತ್ತಮೋತ್ತಮಶಾಕ ತಿಂತ್ರಿಣಿಯ ರಸಸಹಿತ ಪಾತ್ರದಲಿ ಬಡಿಸಿ ಸತ್ಪಾತ್ರನಾಗಿರುವ ಸರ್ವೋತ್ತಮಗೆ ಅರ್ಪಿಸಿದ ಭಕ್ತಿಯಿಂದ 1 ತೃಪ್ತನಾದನು ನಿತ್ಯತೃಪ್ತ ಹರಿ ತಾ ಉಂಡು ಮತ್ತೆ ಮುನಿಗಳು ಎದ್ದರತ್ಯಂತ ಕೋಪದಲಿ ಚಿತ್ತಜನ ಪಿತ ಅವರ ಚಿತ್ತವೃತ್ತಿ ಸತ್ಯದಲಿ ಎಲ್ಲರಿಗೂ ತೃಪ್ತಿಯಾಗಲಿ ಎಂದು ತಿಳಿದು ಪೂತ್ಕಾರ ಮಾಡಿದನು ತತ್ಕಾಲದಲ್ಲಿ ಉತ್ತಮಳು ಶ್ರೀರಮಾ ಮತ್ತೆ ಬ್ರಹ್ಮಾದಿಗಳು ಸುತ್ತಸನ ಶುಕ ಸತ್ವ ಶೀಲರು ಉಳಿದ ಸುತ್ತೆಲ್ಲ ಜನರು ಸಂತೃಪ್ತರಾದರು ಹರಿಯ ಫೂತ್ಕಾರದಿಂದ 2 ನಿದ್ರೆಯನು ಮಾಡಿ ಅಲ್ಲಿದ್ದು ಆ ರಾತ್ರಿಯಲಿ ಎದ್ದು ಮರು ಕೂಡಿ ವಾದ್ಯ ವೈಭವ ದಿಂದ, ಸಿದ್ಧಾಗಿ ಬಂದರು ವಿಯದ್ರಾಜನ ಪುರಕೆ ಶುದ್ಧ ಸಂಜೆಯಲಿ ಮುದ್ದು ವೇಂಕಟ ಬಂದ ಸುದ್ದಿಯನು ಕೇಳುತ ವಿಯದ್ರಾಜ ತಾ ಬಹಳ ಉದ್ರೇಕದಿಂದಲೆ ಇದ್ದ ಜನರನು ವೈಭವದಿಂದ ಸಿದ್ಧನಾಗಿ3 ಧ್ವನಿ:ಕಾಂಬೋಧಿ ಆದಿತಾಳ ಆಕಾಲದಲಿ ಕಂಡನು ಹರಿಯಮುಖ ಆಕಾಲದಲಿ ಕಂಡನು ಎಲ್ಲರ ಕೂಡ ಆಕಾಶ ರಾಜನು ತಾನು1 ಹರುಷದಿಂದಲಿ ಉಬ್ಬಿದ ಹರಿಯ ಕಂಡು ಹರುಷದಿಂದಲಿ ಎದರುಗೊಂಡು ವರಪೂಜೆಯನು ಮಾಡಿದ 2 ಅಳಿಯಗಾಭರಣವನು ವಸ್ತ್ರವ ಕೊಟ್ಟು ಅಳಿಯಗಾಭರಣವನು ಉತ್ಸವದಿಂದೆ ಕಳಿಸಿ ಮನೆಗೆ ಪೋದನು3 ಶ್ರೀನಾಥದೇವ ತಾನು ಆ ಕಾಲಕ್ಕೆ ಶ್ರೀನಾಥದೇವ ತಾನು ಕರೆದುತೊಂಡ ಮಾನರಾಜಗೆ ನುಡಿದನು 4 ಹಸಿದು ಬಂದೆವು ನಾವೆಲ್ಲ ಉಣ್ಣದೆ ಬಹಳ ಹಸಿದು ಬಂದೆವು ನಾವೆಲ್ಲ ಬೇಗನೆ ಪಾಕ ಹಸನಾಗಿ ಮಾಡಿಸೆಲ್ಲ5 ಅಕ್ಕರದಲಿ ರಾಜನು ಆನುಡಿ ಕೇಳಿ ಅಕ್ಕರದಲಿ ಮಾಡಿಸಿದನು ರುಕ್ಕೋತದಡಿಗೆಯನು 6 ಮಂಡಿಗೆ ಗುಳ್ಳೋರಿಗೆ ಶಾವಿಗೆ ಮೊದಲು ತೊಂಡಮಾನÀನು ಚಂದಾಗಿ 7 ಹರಿಗೆ ಅರ್ಪಣೆ ಮಾಡಿದ ಎಲ್ಲರ ಕೂಡಿ ಹರಿಯು ಭೋಜನ ಮಾಡಿದ 8 ಆನಂದದಿಂದಿದ್ದನು ಆ ರಾತ್ರಿಯೊಳ್ ಆನಂದದಿಂದಿದ್ದನು ಮಾಡಿದ ನಿದ್ರೆ `ಅನಂತಾದ್ರೀಶ' ತಾನು 9 ವಚನ ಶ್ರೀನಿವಾಸ ಎದ್ದು ತಾನು ಮರುದಿನದಲಿ ಮಾನಿತ ವಶಿಷ್ಠ ಲಕ್ಷ್ಮೀಸಹಿತ ನೀನು ಬ್ರಹ್ಮನು ಮತ್ತೆ ಮಾನಿತಳು ಎನ್ನತಾಯಿ ತಾನು ಐವರು ಅನ್ನಹೀನರಗಿರುವುದು ಖೂನದಲಿ ಕನ್ನಿಕೆಯ ದಾನ ಪರ್ಯಂತ ಮಾನಿತನು ಆರಾಜಮಾನಿನಿಯು ಮತ್ತೆ ವಸು ದಾನರಾಜನು ಅನ್ನರಹಿತರೈವರು ಅವರು ಖೂನದಲಿ ಕನ್ನಿಕೆಯ ದಾನಪರ್ಯಂತ 1 ಪೇಳು ಅರಸನಿಗೆಂದು ಹರಿಯು ಹೇಳಿದಂತಾ ಭೂಮಿಪಾಲ ಮಾಡಿದನು ಮುನಿಹೇಳಿದಂತೆ ಮೇಲೆ ಮುನ್ನ ಸಾಯಾಹ್ನಕಾಲದಲಿ ಚತುರಂಗ ಸಾಲ ಸೈನ್ಯವು ನಡೆಸಿ ಕಾಳಿ, ಕರ್ಣಿಯ ತೂರ್ಯ, ತಾಳಮದ್ದಲೆ ಮೊದಲು ಭಾಳವಾದ್ಯ ಗಳಿಂದ ಮೇಲಾದ ಗುರುಮುಂದೆ ಮೇಲೆ ತನ್ನವರಿಂದ ಕಾಲನಡುತಿಯಲೆ ಹರಿಯ ಆಲಯಕೆ ಬಂದ 2 ಈ ವ್ಯಾಳ್ಯದಲಿ ಧರಣಿದೇವಿ ತಾ ಲಜ್ಜೆಯಲಿ ದೇವ ಗುರು ಬ್ರಹಸ್ಪತಿಯ ಕೇವಲಾಜ್ಞದಿ ದೇವದೇವ ಎನಿಸುವ ಅಳಿಯ ಶಾವಿಗೆಯ ಪರಮಾನ್ನ ವಿಯದ್ರಾಜ ಮುಂದಾ ವೇಳೆಯಲಿ ಐರಾವತದ ಮೇಲೆ ದೇವನ ಕುಳ್ಳಿರಿಸಿ ಬಂದನು ಮನೆಗೆ ತೀವ್ರದಿಂದ 3 ಆಕಾಲದಲಿ ತೋಂಡ ಸತಿ ನಿವಾಳಿಸುವತ ಚಲ್ಲಿದಳು ಶೈಲದೊಡೆಯನು ಗಜದ ಮೇಲಿಂದ ಇಳಿದು ಆಮೇಲೆ ತಾ ಬಂದಾ ಸುವಿಶಾಲ ಮಂಟಪಕೆ ಮೇಲಾದ ಗದ್ದಿಗೆಯ ಮೇಲೆ ವೇಂಕಟರಮಣನು ಕಾಲಿಟ್ಟು ಕುಳಿತನಾಮೇಲೆ ಬ್ರಹ್ಮಾದಿ ಗಳು ಗಾಲವ, ವಶಿಷ್ಠಮುನಿ ವಾಲ್ಮೀಕಿ ಭೃಗು ಜಟಾಜಾಲ ಸಂಪನ್ನ, ಶುಕ, ದಾಲ್ಭ್ಯ ಮೊದಲಾದವರು ಸಾಲ್ಹಿಡಿದು ಕುಳಿತರಾ ಕಾಲಕ್ಕೆ ಎಲ್ಲಾ ಒದಗಿ ಬೇಗನೆ ವಿಷ್ಣು ಪದರಾಜ4 ತೊಳೆದು ಆ ಉದಿಕ ಮಧುಸೂದನನ ಪೂಜೆ ಮಧುಪರ್ಕದಿಂದ ಬುಧಜನರು ಪೇಳಿದಾಜ್ಞೆಯಲಿ ಗೃಹ ದೇವತಾಸನದಲಿ ಹರಿಯ ಧ್ಯಾನದಲಿ ಇರುತಿರುವ ಮದನ ಮೋಹನ ಸನ್ನಿಧಿಗೆ ಸಮ್ಮುಖವಾಗಿ ಮುದದಿ ಇರಿಸಿದನಾಗ ಬದಿಲಿದ್ದ ಬೃಹಸ್ಪತಿಯ ಒದಗಿ ವಧು ವರಗಳಿಗೆ ವಿಹಿತದ ಅಂತಃಪÀಟವ ಮುದದಿ ಮಧ್ಯದಲ್ಲಿ ಪಿಡಿದು ಒದರಿದನು ಈ ಪರಿಯು ಮದವೆಯ ಕಾಲಕ್ಕೆ ಮಧುರÉೂೀಕ್ತಿಯಿಂದ5 ಧ್ವನಿ:ಸೌರಾಷ್ಟ್ರ ಅಟತಾಳ ಸಾವಧಾನ ಧೇ ವಾಧೀಶನ ಲಗ್ನ ದಿವ್ಯ ವೇಳೆಯಲ್ಲಿ ಸಾವಧಾನ ಪ ಪದ್ಮನಾಭನೆ ನೀನು ಸಿದ್ಧಾಗಿ ಇರು ಕಂಡ್ಯ ಸಾವಧಾನ ಪದ್ಮಾವತಿಯೆ ನೀನು ಪದ್ಮನಾಭನ ಸ್ಮರಿಸು ಸಾವಧಾನ 1 ಫಲಕಾಲದಲಿ ಚಂಚಲರಾಗದಲೆ ನೀವು ಸಾವಧಾನ ಕುಲದೇವಿ ಸ್ಮರಣಿ ನಿರ್ಮಲವಾಗಿ ಮಾಡಿರಿ ಸಾವಧಾನ 2 ಶ್ರೇಷ್ಠಾದ ಅತಿ ವಶಿಷ್ಠ ಮುನಿಗಳೆಲ್ಲ ಸಾವಧಾನ ಸ್ಪಷ್ಟಾಗಿ ಶ್ರೀ ಮಂಗಳಾಷ್ಟಕ ಪಠಿಸಿರಿ ಸಾವಧಾನ 3 ಮಂಗಳ ಮೂರುತಿ ಮನದಿಂ ಸ್ಮರಿಸಿರಿ ಸಾವಧಾನ
--------------
ಅನಂತಾದ್ರೀಶ - ಕಥನಕಾವ್ಯಗಳು
ಆದಿವರಾಹನ ಚೆಲುವಪಾದವ ಕಾಣದೆ ಕಣ್ಣುವೇದನೆಯು ಆಗಿ ಬಲು ಬಾಧಿಸುತ್ತಲಿದೆಯೆನ್ನಈ ಧರೆಯೊಳಗೆ ಶುಕ್ಲನದಿಗೆ ದಕ್ಷಿಣದಲ್ಲಿದ್ದ ಮೇ-ಣ್ ದಾಡೆ ಅತ್ತಿತ್ತಂದ ಪ. ಅಷ್ಟಾ ಸ್ವಯಂ ವ್ಯಕ್ತ ಶ್ರೀಮುಷ್ಣಅಷ್ಟಾಕ್ಷರ ಮಂತ್ರವನ್ನು ಇಷ್ಟುಮಾತ್ರ ತಿಳಿದವರೆಷ್ಟು ಪುಣ್ಯ ಮಾಡಿದಾರೊಸೃಷ್ಟಿಯೊಳಗೆ ಇವರು ಶ್ರೇಷ್ಠರೆಂದು ಅರಿತರೆಕಷ್ಟವು ಬಾರದು ಎಂದೆಂದುಅಷ್ಟದಾರಿದ್ರ್ಯ ಹೋಹುದು ಅಷ್ಟೈಶ್ವರ್ಯವು ಬಾಹುದುಇಷ್ಟು ಮಾತ್ರವಲ್ಲ ಕೇಳೊ ಅಷ್ಟಪುತ್ರರು ಆಹೊರು ದೃಷ್ಟಿಬಾರದಂತೆ ಮನದಿಷ್ಟ್ಟಾರ್ಥವ ಕೊಟ್ಟು ಕಾವಅಷ್ಟದಿಕ್ಕಿನೊಡೆಯನೊಬ್ಬ 1 ವರಾಹ ಅಂಬುಜವಲ್ಲಿ ಚೆಲ್ಲಿತ್ತಾವನದಲ್ಲಿ ಇದ್ದ್ದಾದಿವರಾಹ 3 ಮಂಡೆ ಪೂ ಬಾಡದಿಂದೆನ್ನುಪುಂಡರೀಕಾಕ್ಷ ತಾ ಸವಿದುಂಡು ಮಿಕ್ಕಪ್ರಸಾದವನಾ ಪ್ರ-ಚಂಡ ಹನುಮಂತಗೆ ಕೊಟ್ಟ 4 ಭಾರವ ಮುಗಿಪೋವ್ಯಾಳೆ ಗರುಡನ ಕಂಡು ಈಗಗುರುಮಂತ್ರ ಉಪದೇಶ ಶ್ರೀ-ಹರಿಸ್ಮರಣೆಗಳಿಂದ ನರಕಬಾಧೆÉಗಳ ಇಲ್ಲದಂತೆ ಮಾಡಿ-ದರು ಶ್ರೀಹರಿಯ ವಾಲಗದಿಂದಲಿತಿರುಪತಿ ಸುತ್ತ ಶೇಷಗಿರಿಯ ವಾಸದಲ್ಲಿಪ್ಪವರಾಹ ವೆಂಕಟೇಶನಚರಣಕಮಲವನ್ನು ಹರುಷದಿಂದಲಿ ಕಂಡುಪರಮಸುಖವನಿತ್ತ ಹಯವದನನ ನಂಬಿರೊ 5
--------------
ವಾದಿರಾಜ
ಇಂದಿರೆ ನಿನ್ನ ಪೂಜೆ ಛೆಂದಾಗಿ ಮಾಡುವೆ ನಾನು ಪ ಮಂದಹಾಸದಿ ಮೋದದಿಂದಲೇ ನೋಡು ದಯದಿ ಅ.ಪ. ಜರದ ಪೀತಾಂಬರ ಕರದೊಳು ಧರಿಸಿರುವೆನೆಎರಕೋ ಹರಿಯ ಕೂಡ ಸರಸಿಜದಳ ನೇತ್ರಿಯೇ 1 ಮಂದಾರ ಮಲ್ಲಿಗೆ ಕುಂದದ ಚಂಪಕ ಜಾಜಿತಂದು ನಿಂತಿಹೆ ಹರಿಸುಂದರಿ ಸರಸದಿ ಮುಡಿಯೇ 2 ಭುಂಜಿಸು ಬೇಗ 3 ಹರಡಿ ಕಂಕಣ ದುಂಡು ಹೆರಳು ಭಂಗಾರಗಳನುಹರುಷದಿಂದಲಿ ಕೃಷ್ಣನರಸಿ ತಂದಿಹೆ ನಿನಗೆ4 ಚಂದ್ರಶೇಖರ ಸುರವೃಂದಾದಿ ವಂದಿತ ಚರಣೆಇಂದಿರೇಶನ ಸಹ ಬಂದಿಲ್ಲಿ ತೋರಿಸು ಮುಖವಾ 5
--------------
ಇಂದಿರೇಶರು
ಈ ಭಾಗ್ಯವೆ ನಿನ್ನದೊ ವರ ಭೋಗಿಶಯನಾ ಪ ಸೌಭಾಗ್ಯವೇ ನಿನ್ನ ಮಹಿಮೆ ತಿಳಿಯುವ ಯೋಗಅ.ಪ ನೀನಿಲ್ಲದಾಸ್ಥಾನ ಈ ನಳಿನಜಾಂಡದೊಳಿಲ್ಲ ನೀನೆಲ್ಲವನು ಬಲ್ಲೆ ನಿನ್ನತಿಳಿಯಗೊಡದೆ ಹೀನಮಾನವ ನಾನು ನಿನ್ನನವರತ ಮರೆತರು ನೀ ಎನ್ನ ಮರೆಯದಲೆ ಎನ್ನೊಳಗೆ ಇಹೆ ಎಂಬ 1 ನಿಲ್ಲಿಸಲು ನಿಲ್ಲುವೆನು ಮಲಗಿಸಲು ಮಲಗುವೆನು ತಿಳಿಸಿದರೆ ನಾ ತಿಳಿವೆ ತಿಳುವಳಿಕೆ ನೀನೆ ತಿಳಿಯಗೊಡಿಸೋಎನ್ನಕ್ರಿಯೆಗಳನು ದೇಹದ ನೆಳಲಂತೆ ನಿನಗೆ ನಾನಿಹೆನಯ್ಯ ದೇವಾ 2 ಈ ಜಗತ್ತಿನೊಳಗೆಲ್ಲ ಪೂಜ್ಯಪೂಜಕ ಪೂಜ್ಯ ಪೂಜೋಪಕರಣದೊಳು ನೀನೆ ನಿಂತು ಮೂರ್ಜಗತ್ಪತಿಯೆ ನಿನ್ನನರ್ಚಿಸುವ ಭಜಕರಿಗೆ ನೈಜಸುಖ ವ್ಯಕ್ತಿಯನು ಮಾಡುತಲಿ ಪೊರೆವೇ 3 ನೀರು ತೃಣವನು ಕೊಡಲು ಹರುಷದಿಂದಲಿ ಗೋವು ಕ್ಷೀರವನು ಕರೆದು ಜನರ ಪೊರೆವಂತೆ ಸೂರಿಗಳು ಮಾಳ್ವ ಅಪರಾಧಗಳೆಣಿಸದಲೆ ಕರುಣದಿಂದಲಿ ಅವರ ಪೊರೆವ ಶ್ರೀಹರಿಯೆ4 ಪನ್ನಗಾಚಲನಿಲಯ ನೀನೆ ಎನ್ನೊಳಗಿರಲು ಬನ್ನಪಡಲ್ಯಾತಕೆ ಚಿನ್ಮಯರೂಪ ಎನ್ನಂಥಜೀವರಿನ್ನೆಷ್ಟೋ ಬ್ರಹ್ಮಾಂಡದೊಳು ಘನ್ನಭಕುತಿಯನೀಡೋ ಶ್ರೀಉರಗಾದ್ರಿವಾಸವಿಠಲ 5
--------------
ಉರಗಾದ್ರಿವಾಸವಿಠಲದಾಸರು
ಕದವ ತೆಗೆಯೆ ಸುಂದರಿವಯ್ಯಾರಿ ಮುತ್ತಿನ ಪ ಕಡಲ ಶಯನನೆ ಮಡದಿ ಹರುಷದಿ ಸಡಗರದಿ ಮುಂದಡಿ ಇಡುತ ನಿನ್ನ ಒಡೆಯ ಬಂದಿಹನೆಂದು ಹರುಷದಿ ಬೆಡಗು ಮಾಡದೆ ಬಿಡಿಯ ಮುತ್ತಿನ 1 ಯಾರು ನಿನ್ನಯ ಪೆಸರ ಏನೆಂದು ತಿಳಿಯದೆ ಹೇಗೆ ತೆಗೆಯಲಿ ಕದವಾ ಘೋರ ರಾತ್ರಿಯ ವೇಳೆಯಲಿ ಬಂ- ದೀಗ ಬಾಗಿಲ ಬಡಿಯ ನಿಂದಿರೆ ನಾರಿಯರು ಏನೆಂದು ಕೇಳ್ಪರು ದ್ವಾರ ಬಿಡುಬಿಡುತಲಿ ಸಾಗು ಮುಂದಕೆ2 ತೆಗೆಯಲೊಲ್ಲೆನು ಕದವ ಸಮರಾತ್ರಿ ವೇಳದಿ ರುಕ್ಮನ ಅನುಜೆ ಕೇಳೆ ಪೃಥ್ವಿಯೊಳು ಎನ್ನನು ಚಕ್ರಿ ಎನ್ನುತ ಪೇಳ್ವರೆ ಅರ್ಥಿವಚನಗಳನ್ನು ಕೇಳುತ ಸತ್ವರದಿ ನೀ ಬಂದು ಮುಂದಕೆ ಮುತ್ತಿನ ಕದತೆಗೆದು ಬೇಗನೆ ರತ್ನ ಪೀಠದಿ ಕುಳ್ಳಿರಿಸೆ ಹೊಸ ಮುತ್ತಿನರಗಿಣಿ ಸತ್ಯವಾಣಿಯೆ3 ಕೇಳಿ ಹರ್ಷಿತನಾದೆನು ನಿನ್ನಯ ಮಾತ ಕೇಳಿ ನಗುವರು ಜನರು ಹೇಳಿ ಕೇಳುವರಿಲ್ಲ ನಿನ್ನ ಮನಸಾರ ಮಾತುಗಳಾಡಲೇತಕೆ ಕು- ಲಾಲ ಭವನವಿದಲ್ಲ ಸುಮ್ಮನೆ ಹೇಳ ಕೇಳದೆ ಹೊರಡು ಮುಂದಕೆ 4 ಹೀಗೆ ನುಡಿಯುವದೇತಕೆ ಈಗೆನ್ನ ಮಾತಿಗೆ ಬೇಗದಿ ತೆಗೆ ಕದವ ನಾಗವೇಣಿಯೆ ನಗುತ ಪೇಳುವೆ ಬೇಗದಲಿ ಇನ್ನೊಂದು ನಾಮವ ಈಗ ಧರಣಿಧರನು ಬಂದಿಹೆ ಸಾಗರನ ಸುತೆ ಸರ್ಪವೇಣಿಯೆ 5 ಧರಣೀಧರ ನೀನಾದರೆ ಈ ಧರೆಯನೆಲ್ಲವ ಸಿರದ ಮೇಲಿರಿಸುವೆಯ ಸರ್ವ ಜನರಿಗೆ ಭಯವ ಪಡಿಸುವ ಉರಗರಾಜ ನೀನೆಂದು ತಿಳಿದೆನು ಇರುತ ಸರ್ಪಗಳೊಳಗೆ ನೀ ಬಲು ಹರುಷದಿಂದಲಿ ಸಾಗುಮುಂದಕೆ6 ಹರಿಣಾಕ್ಷಿ ಕೇಳೆ ನೀನು ಎನ್ನನು ಜನರು ಹರಿಯೆಂದು ಕರಿಯುವರು ಕರೆ ಕರೆಯ ಮಾಡದಲೆ ಬೇಗನೆ ವರ ಕನಕ ಕದ ತೆಗೆದು ಸುಮ್ಮನೆ ಇರಿಸು ಸುಖ ಸಾಮ್ರಾಜ್ಯ ಪೀಠವ ಹರುಷದಿಂ ಕುಳಿತೆಲ್ಲ ಪೇಳುವೆ 7 ಕೋತಿ ನೀನಹುದಾದರೆ ಮಾತುಗಳ್ಯಾಕೆ ಜಾತಿ ಕಪಿಗಳ ಕೂಡುತ ಪ್ರೀತಿಯಿಂದಲಿ ಮನಕೆ ಬಂದೆಡೆ ನೀತೆರಳುತಲಿ ಪೋಗು ಮುಂದಕೆ ಕೋತಿಗಳ ಗುಂಪಿದಲ್ಲ ತಿಳಿಮಹ- ರೂಪವತಿಯರಿರುವ ಸ್ಥಳವಿದು 8 ಪ್ರೀತಿಸತಿಯೆ ನೀ ಕೇಳೆ ನಿನ್ನೊಳು ಬಹು ಪ್ರೀತಿಯಿಂದಲಿ ಬಂದೆನು ಶ್ರೀಶನ ನುಡಿಕೇಳಿ ರುಕ್ಮಿಣಿ ಆತುರದಿ ಬಾಗಿಲನೆ ತೆಗೆಯುತ ನಾಥ ಕಮಲನಾಭ ವಿಠ್ಠಲನಿಗೆ ತಾನಮಿಸಿ ವಂದಿಸುತ ಭಕುತಿಯಲಿ ಬಾಗಿಲು ತೆಗೆದಳಾಗ ಭಕುತಿಯಲಿ ಶ್ರೀಶಗೆ ಬಾಗಿಲು ತೆಗೆದಳಾಗ9
--------------
ನಿಡಗುರುಕಿ ಜೀವೂಬಾಯಿ
ಕರುಣಾ ತೋರದದೇನೊ ನರಹರಿಯೆ ನಿನ್ನ ಕರುಣೆ ತೋರದೆ ಇರುವ ಪರಿಯೆನ್ಹರಿಯೇ ನಿನ್ನಯ ಕಮಲ ಸ್ಮರಣೆಯ ಇಹಪರಕೆ ಗತಿಯಂ ದಿರುವ ಮನಜರಿಗ್ಹರುಷದಿಂದಲಿ ಪ ಸುಸಾಮಗಾನಪ್ರಿಯ ನರಸಿಂಗ ದೈತ್ಯಾರಿ ಭಕ್ತಾಧೀನ ಗರುಡತುಂಗ ಕರುಣಾಂತರಂಗ ಶೌರಿ ಪುರಾಣಪುರುಷ ದಾನವಾಂತಕ ಶ್ರೀನಿವಾಸನೆ ಶರಪಾಣೆ ವಿಷ್ಟಕ್ಸೇನವರ ಗೀರ್ವಾಣವಂದಿತ ಜಾನಕೀಧರ ನೀನೇ ಸಲಹೆನೇ 1 ಸಂಯಮಿ ವೃಂದನುತ ಮುಚ- ಪಾಲನ ಕೃಪಾಸಿಂಧು ಶ್ರೀ ಗೋವಿಂದ ಇಂದಿರಾನಂದ ನಂದ ಗೋಪಿಯಾನಂದ ನಾಚ್ಯುತ ಮಂದರಧರ ಮಾಪತೆ ಕಂಬುಕಂಧರ ಇಂದು ಮುಖ ಶ್ರೀ ಸುಂದರಾಂಗನೆ ರೂಪದಿ ಬಂದು ಸ್ತಂಭದಿ ರಕ್ಷಿಸೆಂದೆನಲು ಹರಿ 2 ತ್ರಿಜಗದ್ಭರಿತ ಕೌಸ್ತುಭಹಾರ ನರಮೃಗಾಕಾರ ಮಂಗಳಕರ ಮಹಿಮಾ ಶರಣು ಭಾಸುರ ಕಿರೀಟನೆ ನಿರತದಲಿ `ಹೆನ್ನೆಪುರ ನಿಲಯ' ಸಿರಿಯರಸ ನಿನ್ನಯ ಮೊರೆಯ ಹೊಕ್ಕರೆ ತ್ವರದಲಿ ನೀ 3
--------------
ಹೆನ್ನೆರಂಗದಾಸರು
ಕುಲಾಂಬುಧಿ ಚಂದ್ರ ಶ್ರೀ ರಾಮಚಂದ್ರ ಪ ಒಂದೇ ಭಾಷಣ ನಿನಗೊಂದೇ ಮಾರ್ಗ ಸಾಕು ಒಂದೇ ಸ್ಥಾನದೊಳಾಶ್ರಿತರನೇ ನಿಲ್ಲಿಸುವಿ ಒಂದೇ ಬಾರಿಯೆ ಕೊಟ್ಟುದ್ಧರಿಸುವೆÉ ಭೃತ್ಯರ ಒಂದೇ ಪತ್ನಿಯು ನಿನಗೆಂಬುದು ಬಿರುದು 1 ನಿನ್ನ ತಮ್ಮನು ನಿನ್ನ ರಾಣಿಯ ಭೃತ್ಯನು ನಿನ್ನಂಥ ಭಾಗ್ಯ ಮತ್ತೆಲ್ಲಿ ತೋರುವುದು ಘನ್ನ ಮಹಿಮ ನೀನು ಮಲತಾಯಿ ನುಡಿಯಲು ತನ್ನ ರಾಜ್ಯಗಳನ್ನು ತಮ್ಮನಿಗೊಪ್ಪಿಸಿದೆ 2 ಭರತನು ನಿನ್ನಡಿಗಾಗಿ ಬೇಡಿದರೂ ನೀ ಹರುಷದಿಂದಲಿ ಕಾಲಾಂತರವ ಪೇಳಿರುವಿ ಮರಳಿ ರಾಜ್ಯದಿ ಬಂದು ರಾಜೇಶ ಹಯಮುಖ ಕರುಣಿಸಿ ಪಟ್ಟಾಭಿಷಿಕ್ತನಾಗಿರುವಿ 3
--------------
ವಿಶ್ವೇಂದ್ರತೀರ್ಥ
ಗಜೇಂದ್ರ ಮೋಕ್ಷ ವರಶಂಖಗದೆ ಪದ್ಮಕರದಿ ಚಕ್ರವ ಪಿಡಿದ ಗರುಡಗಮನ ನಮ್ಮ ಕರಿವರದಹರಿಯನ್ನ ನಿರುತ ನೆನೆನೆನೆದು ಬದಿಕಿರಯ್ಯಾ ಪ ಹರಿಧ್ಯಾನ ಹರಿಸೇವೆ ಹರಿಭಕ್ತಿ ಹರಿಚರಿತೆ ದುರಿತದುರ್ಗಕೆಕುಲಿಶ ವರಮುಕ್ತಿಸೋಪಾನ ಕಾಣಿರಯ್ಯಾ ಅ.ಪ. ಕ್ಷೀರಸಾಗರ ಮಧ್ಯೆ ಗಿರಿತ್ರಿಕೂಟ ದೊಳಗೆ ಇರುವುದೂ ಋತುಮಂತ ವರುಣನ ವರವನವು ಅಲ್ಲಿ ಪರಿಪರಿಯ ಲತೆಬಳ್ಳಿ ಸರಸಸ್ಥಾನಗಳಲ್ಲಿ ಮೆರೆವೋರು ಸುರಸಂಘ ನಾರಿಯರ ಸಹಿತಾ 1 ಪದ್ಮಗಾಶ್ರಯವಾದ ಪದ್ಮಕೊಳಾದೊಳಗೆ ಮದಿಸಿದಾ ಗಜವೊಂದು ಐದಿತು ಪರಿವಾರ ಸಹಿತ ವಿಧಿಯ ಬಲ್ಲವರಾರು ಮುದದಿರ್ದ ಆ ಗಜಕೆ ವಿಧಿ ವಕ್ರಗತಿಯಿಂದ ಪಾದವನೆ ಪಿಡಿಯಿತು ನಕ್ರವೊಂದು 2 ಒಂದು ಸಾವಿರ ವರುಷ ಕುಂದದೆಲೆ ಕರಿಮಕರಿ ನಿಂದು ಹೊರಾಡೆ ಸುರವೃಂದ ಬೆರಗಾಯಿತು ಬಂಧು ಬಳಗವು ಮತ್ತೆ ಅಂದ ಹೆಂಡಿರು ಎಲ್ಲ ಕುಂದು ಅಳಿಸದೆ ಇರಲು ಛಂದದಲಿ ಯೋಚಿಸಿತು ಗಜವೂ 3 ಏನಿದ್ದರೇನಯ್ಯ ಶ್ರೀನಿವಾಸನಕೃಪೆಯು ಇನ್ನಿಲದಾಮೇಲೆ ಕುನ್ನಿಗೆ ಸರಿಎಂದು ಹೀನ ಎನ್ನಯ ಜನ್ಮ ದೀನ ಭಾವದಿ ಹರಿಯ ಮಾನವನು ಬದಿಗಿಟ್ಟು ಧ್ಯಾನಿಸಿ ಸ್ತುತಿಸಿದಾ 4 ಸತ್ಯಶಾಶ್ವತಭೋಕ್ತ ಸೃಷ್ಟ್ಯಾದಿಕರ್ಮವಿಗೆ ನಿತ್ಯ ತೃಪ್ತನು ಆದ ಶಾಡ್ಗುಣ್ಯಪರಿಪೂರ್ಣನೆ ವಂದಿಸುವೆನೋ ಓತಪ್ರೋತದಿ ಜಗದಿ ವ್ಯಾಪ್ತ ಆಪ್ತನು ಆದ ಆರ್ತದಲಿ ಕರೆವೆನೋ 5 ಎಲ್ಲಕಡೆಯಲಿ ಇರ್ಪ ಎಲ್ಲರೂಪವ ತಾಳ್ವ ಎಲ್ಲ ಪ್ರೇರಣೆಮಾಳ್ವ ಎಲ್ಲರಿಂ ಭಿನ್ನನಿಗೆ ವಂದಿಸುವೆನೋ ಎಲ್ಲರಿಂ ಉತ್ತಮಗೆ ಎಲ್ಲರಾ ಬಿಂಬನಿಗೆ ಎಲ್ಲರ ವಾಚ್ಯನಿಗೆ ನಲ್ಲನೆಂತೆಂದು ನಾಕರೆವೆನೋ 6 ಎಲ್ಲರನು ಗೆದ್ದವಗೆ ಎಲ್ಲರಾನಲ್ಲನಿಗೆ ಎಲ್ಲ ದೋಷವಿಹೀನ ಒಳ್ಳೆ ಗುಣ ಪೂರ್ಣನ ಕರೆವೆನೋ 7 ನಿನ್ನ ತಿಳಿದವರಿಲ್ಲ ನಿನ್ನ ಮೀರಿದುದಿಲ್ಲ ಜನನ ಮರಣಗಳಿಲ್ಲ ನಿನಗಿಲ್ಲ ಸಮ ಅಧಿಕ ವಂದಿಸುವೆನೋ ನಿನ್ನನಾಮಕೆ ಗುಣಕೆ ನಿನ್ನ ಅವಯವಕೆ ನಿನ್ನ ಕ್ರಿಯ ರೂಪಗಳಿಗೆ ಇನ್ನಿಲ್ಲವೊ ಭೇದಸಾರಿ ನಾಕರೆವೆನೋ 8 ವೇದಗಮ್ಯನುನೀನೆ ವೇದದಾಯಕ ನೀನೆ ವೇದಾತೀತನು ನೀನೆ ಸಾಧು ಪ್ರಾಪ್ಯನುನೀನೆ ವಂದಿಸುವೆನೋ ಖೇದವರ್ಜಿತನೀನೆ ಅಂದ ಸಾರವು ನೀನೆ ಬಂಧನೀಡುವ ನೀನೆ ಅದ್ಭುತ ಅಚಿಂತ್ಯಶಕ್ತಿವಂತನ ಕರೆವೆನೋ 9 ಜ್ಞಾನಿಗೋಚರನೀನೆ ಗುಣಾತೀತನು ನೀನೆ ಗುಣಪ್ರವರ್ತಕನೀನೆ ಅನಾಥ ಸರ್ವಸಮ ವಂದಿಸುವೆನೋ ಜ್ಞಾನದಾಯಕನೀನೆ ಆನಂದಮಯನೀನೆ ನೀನೇ ಸರ್ವಾಧಾರ ನೀನೆ ಏಕನು ಎಂದು ಕೂಗಿ ನಾಕರೆವೆನೋ 10 ಸಾಕಾರ ನಿರಾಕಾರ ಆಕಾರ ಅಹೇಯ ಓಂಕಾರ ವಾಚ್ಯನೆ ಸಾಕಲ್ಯಸಿಗದವನೆ ಸ್ವೀಕಾರ ಮಾಡೋ ವಿಕಾರ ವರ್ಜಿತನೆ ಲೋಕೈಕವೀರಾನೆ ನೀ ಕೆವಲನು ಮುಕ್ತೇಶ ಸಲಹೋ 11 ಏನು ಕೊಡಲೊ ದೇವ ದೀನನು ನಾನಯ್ಯ ನಿನ್ನದೇ ಈ ಭಾಗ್ಯ ಮನ್ನಿಸುತ ದಯಮಾಡಿ ಸಲಹೋ ಘನ್ನಕರುಣಾಳುವೆ ಅನ್ಯರನು ನಾ ನೊಲ್ಲೆ ನಿನ್ನವನು ನಿನ್ನವನೋ ನಿನ್ನ ಚರಣಕೆ ಶರಣು ಶರಣೂ 12 ಕರಿ ತಾನು ಮೊರೆಯಿಡುತ ಕೂಗಲು ಸುರವೃಂದ ಯೋಚಿಸುತ ಹರಿಯಲ್ಲದನ್ಯತ್ರ ಅರಿಯೆವೀಗುಣವೆಂದು ಅರಿತು ಸುಮ್ಮನಿರಲೂ ಹರುಷದಿಂದಲಿ ಹರಿಯು ಗುರುಡನೇರುತ ಬರಲು ತರಿದು ನಕ್ರನ ಭರದಿ ಕರಿಯಪೊರೆಯೆ ಆದ 13 ಏನೆಂದು ವರ್ಣಿಸಲಿ ಶ್ರೀನಿವಾಸನ ಕರುಣ ದೀನ ಭಕ್ತರ ಮೇಲೆ ಸಾನುರಾಗದಿ ಕರಿಯ ಹಿಡಿದೆತ್ತಿದಾ ಇನ್ಯಾಕೆ ಭಯವಯ್ಯ ಘನ್ನ ಇಂದ್ರದ್ಯುಮ್ನನೆ ಏಳು ಮುನ್ನಿನಾ ದೋಷವಿದು ಇನ್ನು ನೀ ಧನ್ಯನಹುದೋ 14 ದೇವಲನ ಶಾಪದಲಿ ಆ ವರ ನಕ್ರನಾಗಿದ್ದ ಶ್ರೀವರನ ಭಕ್ತ ಹೂಹೂ ಗಂಧರ್ವನೆರಗಿ ಬಿದ್ದನು ಹರಿಗೇ ದೇವೇಶ ಹುಸಿನಗುತ ಈವೆ ವರವನು ಕೇಳಿ ಯಾವಾತ ಈ ಕಥೆಯ ಭಾವಶುದ್ಧದಿ ಭಜಿಸೆ ಉದಯದಲಿ ನಾ ಒಲಿವೆ ತವಕದಲಿ ಎಂದನೂ 15 ಹರಿಗೆ ಸಮರಾರಿಲ್ಲ ಹರಿಭಕ್ತ ಗೆಣೆಯಿಲ್ಲ ಸುರರು ಮೊರೆಯಿಟ್ಟರಾಗ ಹರಿವಾಯುಗುರುಗಳು ಕರುಣದಿಂದಲಿ ಇದನು ಮನ್ನಿಪುದು ಬುಧರೂ 16 ಮುದ್ದುಜಯತೀರ್ಥರ ಹೃದಯದಲಿನಲಿಯುವ ಮಧ್ವಾಂತಃಕರಣದಿ ಮುದ್ದಾಗಿ ಕುಣಿಯುವಂಥ ಮಾಧವ ಶ್ರೀಕೃಷ್ಣವಿಠಲರಾಯನು ಬೇಗ ಮೋದ ಸುರಿಸುವ ಈ ಪದವ ಪಠಿಸಲೂ 17
--------------
ಕೃಷ್ಣವಿಠಲದಾಸರು
ಜೋಜೋ ಜೋಜೋ ಲಾಲಿ ಗೋವಿಂದ ಜೋಜೋ ಜೋಜೋ ಲಾಲಿ ಮುಕುಂದ ಜೋಜೋ ಜೋಜೋ ಲಾಲಿ ಆನಂದ ಜೋಜೋ ಜೋಜೋ ಲಾಲಿ ಗೋಪಿಯ ಕಂದ ಪ ಚಿನ್ನದ ತೊಟ್ಳಿಗೆ ರನ್ನದ ಮಲುಕು ಕನ್ನಡಿ ಹೊಳೆವೊ ಮೇಲ್ಕಟ್ಟಿನ ಬೆಳಕು ಸ್ವರ್ಣ ಮಂಟಪದಿ ರಾಜಿಪದಿವ್ಯ ಹೊಳಪು ಕರ್ನೇರಲಂಕರಿಸಿ ನಲಿಯುವ ಕುಲುಕು ಜೋ ಜೋ1 ಅರಿಶಿನ ಕುಂಕುಮ ಗಂಧ ಪುಷ್ಪಗಳು ಸರಸೀಜಾಕ್ಷಗೆ ಮುತ್ತಿನ್ಹಾರ ಪದಕಗಳು ಸುರರೊಡೆಯಗೆ ಪಟ್ಟೆ ಪೀತಾಂಬರಗಳು ಹರುಷದಿಂದಿರಿಸಿ ನಲಿವ ಸ್ತ್ರೀಯರುಗಳು ಜೋ ಜೋ2 ಮುತ್ತೈದೆಯರೆಲ್ಲ ಬಂದು ನೆರೆದರು ಉತ್ತಮ ಸ್ವರ್ಗ ಕಲಶವ ಪೂಜಿಸುವರು ಚಿತ್ತಜನಯ್ಯನ ಎತ್ತಿಕೊಂಡಿಹರು ಜೋ ಜೋ3 ಕೇಶವನನ್ನು ತನ್ನಿ ನಾರಾಯಣನ್ನ ಮಾಧವ ಗೋವಿಂದನನ್ನ ಸಾಸಿರ ನಾಮದ ವಿಷ್ಣು ಮಧುಸೂದನನ್ನ ಸೋಸಿಲಿ ತ್ರಿವಿಕ್ರಮ ವಾಮನನ್ನ ಜೋ ಜೋ 4 ಶ್ರದ್ಧೆಯಲಿ ಶ್ರೀಧರ ಹೃಷಿಕೇಶನನ್ನ ಪದ್ಮನಾಭನ ಕೊಳ್ಳಿ ದಾಮೋದರನ್ನ ಶುದ್ಧ ಮನದಿ ಸಂಕರ್ಷಣ ವಾಸುದೇವನನ್ನ ಪ್ರದ್ಯುಮ್ನನನು ತನ್ನಿ ಅನಿರುದ್ಧನನ್ನ ಜೋ ಜೋ5 ಪುರುಷೋತ್ತಮನ ಕೊಳ್ಳಿ ಅದೋಕ್ಷಜನನ್ನ ನಾರಸಿಂಹನ ತನ್ನಿ ಅಚ್ಚುತನನ್ನ ಸರಸದಿ ಜನಾರ್ದನ ಉಪೇಂದ್ರನನ್ನ ಹರುಷದಿಂದಲಿ ಕೊಳ್ಳಿ ಹರಿ ಶ್ರೀಕೃಷ್ಣನನ್ನ ಜೋ ಜೋ 6 ಹೀಗೆಂದು ತೂಗುತ ಜೋಗುಳ ಹಾಡಿ ನಾಗವೇಣಿಯರು ಸಂಭ್ರಮದಿಂದ ಕೂಡಿ ಆಗ ಕಮಲನಾಭ ವಿಠ್ಠಲನ್ನ ನೋಡೀ ಬೇಗ ರಕ್ಷೆಗಳನಿತ್ತರು ತ್ವರೆ ಮಾಡಿ ಜೋ ಜೋ 7
--------------
ನಿಡಗುರುಕಿ ಜೀವೂಬಾಯಿ
ತನ್ನ ತಾ ತಿಳಿದು | ಧನ್ಯನಾಗೊ ಬಗೆ ಇದು | ಖಿನ್ನವಳಿದು ಪೂರ್ಣ ಬ್ರಹ್ಮವನ್ನು ಕಾಂಬುದು ಪ ತತ್ತ್ವ ಶಾಸ್ತ್ರವನ್ನು ಓದಿ | ಭಕ್ತಿಯಿಂದ ಮನನ ಮಾಡಿ | ಯುಕ್ತಿ ಭಾವವೆಲ್ಲ ಕಳೆದು ಮುಕ್ತನಾಗುತಾ || ನಿತ್ಯವಾದ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು | ಸತ್ಯ ಶರಣರಡಿಯ ಪಿಡಿದು ಚಿತ್ತದಲ್ಲಿ ನಲಿವುದು 1 ಆಶೆ ಮೂರರಲ್ಲಿ ಇನ್ನು | ಬೇಸರಾಗಿ ವಿಷಯದ | ವಾಸನೆಗಳ ಜರಿದು ಪಾಶ ಕ್ಲೇಶವಳಿಯುತ || ನಾಸಿಕಾಗ್ರದಲ್ಲಿ ಮನವ | ಸೂಸದಂತೆ ನಿಲಿಸಿ ಜಗ- | ದೀಶನಾಟವನ್ನು ನೋಡಿ ನಾದ ಘೋಷ ಕೇಳ್ವುದು 2 ಹಿಂದೆ ಒಂದು ನೆನೆಸದಿನ್ನು | ಮುಂದೆ ಉಳಿದ ಕರ್ಮವನ್ನು | ಬಂದುದೆಲ್ಲ ಉಂಡು ಗೆದ್ದು ಹರುಷದಿಂದಲಿ || ತಂದೆ ಭವತಾರಕನ | ಹೊಂದಿ ಸದಾನಂದದಿಂದ | ಮುಂದೆ ಭವಕೆ ಬೀಳದಂತೆ ಛಂದದಿಂದ ನಲಿವುದು 3
--------------
ಭಾವತರಕರು