ಮರೆಯದಿರು ಭವಶರಧಿ ಕೊನೆದೋರದು
ಹರಿಯ ಮರೆತರೆ ಮನವೆ ಗತಿಯೇನು ಇಹುದು ಪ
ಪಿಂತೆ ಧೃತರಾಷ್ಟ್ರ ನಿಶ್ಚಿಂತೆಯಲಿ ಸುತರಿಂದ
ಎಂಥ ಸಿರಿವಂತನೆಂದೆನಿಸಿ ಮೆರೆದಾ
ಕಂತುಪಿತನನು ಸುತರು ಪಂಥದಲಿ ನೆನೆಯದಿರೆ
ಎಂಥವನ ಪಾಡಾದುದರಿಯೆ ನೀ ಮರುಳೇ 1
ತಾನೆ ಪರಬ್ರಹ್ಮನೆಂದರಿದಾ ಹಿರಣ್ಯಕಶು-
ಪಾನೆಯೆಂದರಿದು ಮೆರೆಯೆ ಹರಿವೈರದಿ
ಸೂನು ಪ್ರಲ್ಹಾದನಾನತನಾಗಿ ಮೊರೆವೋಗಲು
ಹೀನ ರಕ್ಕಸನ ಪರಿಸರಿ ಏನಾಯಿತು 2
ಸತಿಸುತರ ಮುದದಿಂದ ಹಿತವಂತ ಬಳಿಗದಿಂ-
ದತಿ ತೃಪ್ತವಾಗಿ ನಾನಿರುತಿರಲು ನಿನ್ನ
ಧೃತಿಗುಂದಿ ಪವಡಿಸಿರೆ ಗೆಜ್ಜೆಪಾದವ ಕಂಡು
ನುತಿಸುವೆನನವರತ ನರಸಿಂಹವಿಠಲರಾಯಾ 3