ಒಟ್ಟು 14 ಕಡೆಗಳಲ್ಲಿ , 10 ದಾಸರು , 14 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವತಾರತ್ರಯ (1) ಕರುಣದೆನ್ನನು ಕಾಯಬೇಕಯ್ಯಾ ಕದರೂರ ರಾಯಕರುಣದೆನ್ನನು ಕಾಯಬೇಕ್ಕೆಹರಸುರಾದಿಗಳಿಂದ ವಂದ್ಯನೇದುರಿಥ ಪರಿಹರಿಸಿಹ ಪರಕೆ ನೀ-ನ್ಹರುಷದಲಿ ಸಾಧನ ಮಾಡಿ ಪ ಅಂಜನಿಯ ಗರ್ಭದಲ್ಲಿ ಜನಿಸಿದೆಯೊ ಶ್ರೀರಾಮನಂಘ್ರಿಕಂಜದಲ್ಲಿಹ ಭ್ರಮರನೆನಿಸಿಯಾಅಂಜದಂಬುಧಿಯ ದಾಟಿ ಸೀತೆಯ -ನಂಜಿಸುವ ರಾವಣನ ಬಲಗಳಭಂಜಿಸಿದಿ ಧರೆಯೊಳಗೆ ತೇಜಃಪುಂಜನಾಗಿಹ ಪ್ರಭುವೆ ಎನ್ನನು 1 ಅಖಿಳ ಕುರುಬಲಅಂತಕನಿಗೊಪ್ಪಿಸಿದಿ ಜಗದಾ -ದ್ಯಂತ ಸುಜನರಿಗಿತ್ತಿ ಸಂತಸಸಂತತೆನ್ನನು ಬಿಡದೆ ಪವನನೆ 2 ಮಧ್ಯಗೇಹನಲ್ಲಿ ಪುಟ್ಟಿದೆಯೊ ಸಚ್ಛಾಸ್ತ್ರ ಪಠಿಸಿ ಆ -ಪದ್ಧ ಮತದವರನ್ನು ಕುಟ್ಟಿದಿಯೊಉಧ್ವನುತ ರಮಾಪತಿ ವಿಠ್ಠಲನಸದ್ಯ ಮನದಲಿ ತೋರಿ ಕೊಟ್ಟೆ -ನ್ನುದ್ಧರಿಸಿ ಭವಕಡಲ ದಾಟಿಸೊಮಧ್ವಮುನಿ ಸಜ್ಜನತ್ಪ್ರಸಿದ್ಧನೆ 3
--------------
ರಮಾಪತಿವಿಠಲರು
ಕರುಣವ ತೋರೋ ಕರುಣಗುಣಾಂಬುಧಿ ಕರುಣವ ತೋರೋ ರಂಗಯ್ಯ ಪ ಕರುಣದಿ ಬಾರೋ ಬಾರೋ ಕರುಣ ತೋರಿ ಎನ್ನ ಕರುಣದಪ್ಪಿ ಪೊರಿ ಕರುಣವ ತೋರೋ ಅ.ಪ ಪರತರಮಹಿಮ ಹರಸುರಬ್ರಹ್ಮರ ಮೊರೆಯ ಕೇಳಿದ ಕರುಣವ ತೋರೋ ರಂಗಯ್ಯ ಧರೆಗೆ ಇಳಿದು ಶೇಷಗಿರಿಯಲಿ ನಿಂತು ನರಸುರರಿಗೆ ವರವಿತ್ತ ಕರುಣವ ತೋರೋ ರಂಗಯ್ಯ ಪುರದಿ ಬಂದು ನಿಂತ ಕರುಣವ ತೋರೋ ರಂಗಯ್ಯ ಕರುಣದಿ ಬಾರೋ ಬಾರೋ ಚರಣವಿಟ್ಟು ನಾರಿಕುಲವನು ದ್ಧರಿಸಿದಿ ಕರುಣವ ತೋರೋ 1 ಅಂಬುಜನಯನ ಕಂಬದಿ ಬಂದು ಭಕ್ತ ಗಿಂಬುಕೊಟ್ಟು ಕಾಯ್ದ ಕರುಣವ ತೋರೋ ರಂಗಯ್ಯ ನಂಬಿಕೊಟ್ಟ ಕಮಲಾಂಬಕಿಯೆಂಜಲ ಸಂಭ್ರಮದಿಂ ಮೆದ್ದ ಕರುಣವ ತೋರೋ ರಂಗಯ್ಯ ನಂಬಿದ ಅಸುರಗೆ ಬೆಂಬಲಗೊಟ್ಟು ಸ್ಥಿರ ಕುಂಭಿನಿಪಟ್ಟವಿತ್ತ ಕರುಣವ ತೋರೋ ರಂಗಯ್ಯ ಕರುಣದಿ ಬಾರೋ ಬಾರೋ ಅಂಬರೀಷನ ಮೊರೆ ಕೇಳಿ ಶೀಘ್ರದಿಂದ ಕರುಣವ ತೋರೋ 2 ನಿರುತ ನಂಬಿ ನಿನ್ನ ಮರೆಹೊಕ್ಕ ಬಾಲಗೆ ಸ್ಥಿರಪದವಿಯನಿತ್ತ ಕರುಣವ ತೋರೋ ರಂಗಯ್ಯ ಗರುಡನೇರಿ ಬಂದು ಕರಿಯ ವಿಪತ್ತನು ಪರಿಹರಿಸಿದ ಮಹಕರುಣವ ತೋರೋ ರಂಗಯ್ಯ ಹರಿಹರಿ ಎಂದೊದರಿದ ತರಣಿಭಕ್ತಿಗೆ ಮೆಚ್ಚಿ ನಿರುತ ಮೈಗಾವಲಾದ ಕರುಣವ ತೋರೋ ರಂಗಯ್ಯ ಕರುಣದಿ ಬಾರೋ ಬಾರೋ ಪರಮ ನಿರ್ಜರರಿಗೆ ಅಮೃತವುಣಿಸಿದ ಕರುಣವ ತೋರೋ3 ದುರುಳಕೋಟಿಯಾಚರಿಸಿದ ದುರುಳಗೆ ಪರಮ ಕೈವಲ್ಯವಿತ್ತ ಕರುಣವ ತೋರೋ ರಂಗಯ್ಯ ಕಿರಿಕುಲದವನ ಕರದಿಂ ಪರಮಾ ದರದಿ ಉಂಡ ಮಹಕರುಣವ ತೋರೋ ರಂಗಯ್ಯ ನೀರು ಕೊಟ್ಟ ನಿಜಕರುಣವ ತೋರೋ ರಂಗಯ್ಯ ಕರುಣದಿ ಬಾರೋ ಬಾರೋ ಚರಣದಾಸ ವರ ಕನಕನಿಗೊಲಿದ ಕರುಣವ ತೋರೋ 4 ಹಿಡಿ ಅವಲಕ್ಕಿಯ ಕೊಡಲು ಒಪ್ಪಿ ನೀ ಕಡು ಸಂಪದವಿತ್ತ ಕರುಣವ ತೋರೋ ರಂಗಯ್ಯ ಮಡಿದ ಬಾಲಕನಂ ಕಡುದಯದೆಬ್ಬಿಸಿ ಪಿಡಿದು ಕಾಪಾಡಿದ ಕರುಣವ ತೋರೋ ರಂಗಯ್ಯ ದೃಢಕರ ಬೆಂಬಲ ಬಿಡದೆಯಿರುವ ನಿನ್ನ ಕಡುದಿವ್ಯ ಮೂರ್ತಿಯ ಕರುಣವ ತೋರೋ ರಂಗಯ್ಯ ಕರುಣದಿ ಬಾರೋ ರಂಗ ಒಡೆಯ ಶ್ರೀರಾಮ ಎ ನ್ನೊಡಲಗಲದೆ ನಿಂತು ಕರುಣವ ತೋರೋ 5
--------------
ರಾಮದಾಸರು
ಕರುಣಿಸುವುದು ಎನ್ನಾ ಕರಿವರದ ಕೇಶವ ಕರಪಿಡಿದು ಸುಖಪೂರ್ಣಾ ನಿನ್ನಡಿಗಳಂಬುಜ ಸ್ಮರಿಪರಲ್ಲಿಡ ಮುನ್ನಾ ಪರಿಹರಿಸು ಬನ್ನಾ ಪ ಸರಸಿಜಾಪತಿ ಸರಸಿಜೋದ್ಭವ ಹರಸುರಾಧಿಪ ವಂದ್ಯ ನಿನ್ನಯ ಎರವು ಮಾಡದೆ ತ್ವರ್ಯ ಸೌಖ್ಯವುಗರದು ಕರುಣದಿ ಅ.ಪ. ಜನನಿ ಜಠರದಿಂದ ನಿನ್ನಾಜ್ಞದಲಿ ನಾ ಜನಸಿದೆನೊ ಗೋವಿಂದಾ ಬಾಲತ್ವ ಕೆಲದಿನ ಕಳೆದೆನೊ ಮುಕುಂದಾ ಯೌವ್ವನವು ಬರುತಲೆ ವನಿತೆ ಮುಖ ಅರವಿಂದಾ ನೋಡುತಲೆ ಬಲು ಛಂದಾ ಮನವು ನಿಲ್ಲದು ಮಮತೆ ವಿಷಯದಿ ಮುನಿದು ಸಜ್ಜನರ ಸೇವಿಸಿ ಕೊನೆಯಗಾಣದೆ ಮಣಿವೆ ಅಂಘ್ರಿಗೆ ವನದಿಗಳ ವಮ್ಮನೆ (?) ನಡಿಸು ವೆಂಕಟಾ ಘನತೆ ನಿನಗಿದು ತಿಳಿದು ವೇಗದಿ ಅನುದಿನದಲಿ ಸಲಹುತಿಪ್ಪನೆ ಅನಿಮಿಷರ ಆಧಾರ ಮೂರುತಿ 1 ಮೊರೆಯ ಲಾಲಿಸು ಜೀಯಾ ಅರೆ- ಮೊರೆಯ ಮಾಡಲು ಪೊರೆವರ್ಯಾರೆಲೊ ಕಾಯಾ ಅ- ನ್ಯರನು ಕಾಣದೆಯರಗಿದೆನು ಸುರ ಸಹಾಯ ಸುರಧೇನು ಮನೆಯೊಳಗಿರಲು ವಿಠ್ಠಲರೇಯಾ ಮಾಯಾ ಬಲ ತಡದು ನಿಕ್ರವ ತರಲು ಜನರೊಳು (?) ಯರಗಿರಲು ನಿನಗೆಂದಿಗಾದರು ಅರಿದು ಅಗ್ಗಕೆ ಪೊರೆದು ಮಾನವ ಕರಿಯು ಕರೆಯಲು ಬರುವುದುಂಟೇ ಕರುಣಾಸಾಗರನೆಂಬೊ ನಿನ್ನಯ ಬಿರುದು ಉಳ್ಳದಕೊಂಡು ಸಾಧನೆ ಧರೆಯ ದುಷ್ಟರ ಬಾಧೆ ತಪ್ಪಿಸಿ ಹರುಷವನು ಅತಿಗರೆದು ನಿರುತದಿ 2 ಬಿಡೆನೊ ಕಡಲೊಡಗಾಡಿ ಬಿಂಕದಲಿ ಅದ್ರಿಯ ನಿಡಲಿ ಬೆನ್ನಲಿ ನÉೂೀಡಿ ಪಾದಗಳ ಎಳೆಯುತ ನಡೆದು ಕೋಪವ ಮಾಡಿಬಿಡು ದೈನ್ಯದಲಿ ಪೊಡವಿ ದಾನವ ಬೇಡಿ ಬಿಡೆ ನೋಡಡವಿಯೊಳ್ ಕಾಡಿನ ಮಡುವಿನೊಳು ಗಿಡವೇರಿ ಧುಮುಕಲು ಅಂಬರ ಬಿಟ್ಟು ಖಡ್ಗವ ಪಿಡಿದು ವಾಜಿಯನೇರಿದನು ಜರ ಕಡಿಯಪೋಗಲು ಕಂಡು ನಿನ್ನನು ಬಿಡೆನೊ ನಿನಗೆಂದಿಗಾದರು ಪೊಡವಿಪತಿ ಶ್ರೀದವಿಠ್ಠಲ ವಡಿಯ ನೀನೆಂತೆಂದು ನಂಬಿದೆ 3 (ಈ ನುಡಿಯ ಅರ್ಥ ಸ್ಪಷ್ಟವಾಗುತ್ತಿಲ್ಲ-ಅಶುದ್ಧ ಪ್ರತಿಯ ಕಾರಣದಿಂದ.)
--------------
ಶ್ರೀದವಿಠಲರು
ಜೈ ಜೈ ವೆಂಕಟರಾಯ ಸಲಹು ಗಡ ಪ ಶುಭ ಕಾಯ ಐಹಿಕ ಮಹಮಾಯವ ಬಿಡಿಸಯ್ಯಅ.ಪ ಪಂಕಜಾಕ್ಷ ಹರಿ ಸಂಕರುಷಣ ಭವ ಸಂಕಟ ಪರಿಹಾರ ಶುಭಕರ ಶಂಖಶಕ್ರಧರ ಮಂಕುದನುಜಹರ ಕಿಂಕರಘದೂರ ಶಂಖಸುರನ ಬಲು ಬಿಂಕಮುರಿದ ಬಲದಂಕ ಅದಟವೀರ ಶೂರ ಅಂಕುರಿಸೆನ್ನೊಳಾತಂಕತಾರದೆ ಪೊರೆ ಲಂಕಾ ವಿಜಯಕಾರ 1 ದಾತ ಮೂರುಜಗನಾಥ ಪರಮ ಅ ದ್ಭೂತ ಮಹಿಮೆಗಾರ ಚದುರ ಪ್ರೀತ ಭಕುತ ಭವಭೀತರಹಿತ ಮಾಯಾ ಪೂತನಿ ಸಂಹಾರ ನೀತಿಕೋವಿದ ವಿಧಿತಾತ ಅಸಮ ವಿ ಖ್ಯಾತ ಕರುಣನಿಕರ ಸುಂದರ ಘಾತಿಸಿ ಕಂಸನ ಮಾತಪಿತರ ಕಾಯ್ದ ಪಾತಕ ನಿವಾರ 2 ಬಾಲನಂತರಿಯದೆ ಆಲಯಗಳ ಪೊಕ್ಕು ಪಾಲು ಮೊಸರು ಕದಿದ ಸವಿದ ಬಾಲೆರುಡುವ ದುಕೂಲ ಕದಿದು ತಾ ಮೇಲು ಮರವನೇರ್ದ ಕಾಲಿಂದಿ ಧುಮಕಿದ ಕಾಳಿಯಮೆಟ್ಟಿದ ಕಾಳರಕ್ಕಸರೊದೆದ ಸದೆದ ಲೀಲಾ ಜಾಲ ನಂದ ಬಾಲನಾಗಿ ಬಲು ಬಾಲಲೀಲೆಗೈದ 3 ಪರಮ ಪರಾತ್ಪರ ಪರಮಪುರುಷ ಸಿರಿ ಪರಮ ಪಂಚಪ್ರಾಣ ದುರಿತ ಹರಣಜನನಮರಣ್ಹರಸುರವಿನಮಿತ ಧರಣಿಗಧಿಕ ತ್ರಾಣ ಕರಿಧ್ರುವರಿರ್ವರನು ಭರದಿ ನೀಡಿ ನಿಂತು ಪೊರೆದ ಪಾಂಚಾಲೀಮಾನ ಜಾಣ ಶರಣಜನರ ಮೈನೆರಳು ನಿಗಮಾತೀತ ನಿರಂಜನ 4 ಸೋಮವದನ ಸತ್ಯಭಾಮಾರಮಣ ಸುಖ ಧಾಮ ಸುಜನಹೃದಯನಿಲಯ ಕಾಮಜನಕ ಪುಣ್ಯನಾಮ ರಕ್ಕಸಕುಲ ಭೀಮ ಪಾಲಿಸಭಯ ಶಾಮವರ್ಣ ಮಮಸ್ವಾಮಿ ಭಜಿಪೆ ಶ್ರೀ ರಾಮಪಿಡಿಯೋಕಯ್ಯ ಸದಯ ಕಾಮಿತ ವರ ಸುಪ್ರೇಮದಿ ಇತ್ತೆನ್ನ ಪ್ರೇಮದುದ್ಧರಿಸಯ್ಯ 5
--------------
ರಾಮದಾಸರು
ಭಜಿಸಿರೋ ಮನದಣಿಯ ಸುಜನಾಬ್ಜ ದಿನಮಣಿಯ ಭುಜಗಾರಿಗಮನ ತಿಂಥಿಣಿಯ ಸತ್ಕಣಿಯ ಪ ರಜನೀಕರ ಗುಣಶ್ರೇಣಿ ಅಜಭವ ಸುರಾಗ್ರಣಿಯ ತ್ರಿಜಗಮೋಹನ ಮಣಿಯ ಸೊಬಗಿನ ಕಣಿಯ ಅ.ಪ ಪೊಳೆವ ಮಕುಟದ ಫಣಿಯ ತಿಲಕದಲಿ ರಂಜಿಸುವ ಪ್ರಣವ ಗೋಚರ ಸುಧಾಮಯದ ಕದಪಿನಲಿ ತೊಳಪ ಕುಂಡಲದ ನಾಸಿಕದ ಮೂಗುತಿಯೆಸೆಯೆ ಸುಲಿಪಲ್ಲ ನಗೆಮೊಗದ ಸುಲಭಸೌಂದರÀನ 1 ಪದಕ ಮಣಿಮಯ ಮೌಕ್ತಿಕದ ಹಾರ ತ್ರಿಸರ ಕಂ ಧರ ವೈಜಯಂತಿಯೊಲವಿನ ಬಾವುಲಿ ಮುದದ ಕಂಕಣ ಕರದ ಮುದ್ರೆಯೆಸೆವಾ ಬೆರಳ ಕಂಬು ಮದನಶರಧನು 2 ತರಣಿ ಶತಕೋಟಿ ಕಿರಣತತಿ ಕುಮುದ ವರ್ಣದ ತನುರುಚಿಯಾ ಹರಸುರೇಶ್ವರ ವಿರಿಂಚ್ಯಾದಿ ವಂದಿತಚರಣ ಸರಸಿರುಹ ವರದೇವಪುರದ ಸಿರಿವರನ 3
--------------
ಕವಿ ಲಕ್ಷ್ಮೀಶ
ಮಧುಹರನಿಗರ್ಪಿತವು ಸರ್ವಕರ್ಮ ಪ ಕರ್ಮ ಅನುಭವವು ಅ.ಪ ಸ್ಮøತಿ ವಿಸ್ಮøತಿಯಲ್ಲಿ ಕೃತ ಉತ್ತಮಾಧಮ ಕರ್ಮ ಮತ್ತೆ ಅನುಭವಿಸಿದ ಸುಖ ದುಃಖಗಳಿಗೆ ಚಿತ್ತ ನಿನ್ನದು ಮೂಲ ಸರ್ವ ಸ್ಥಿತಿಗತಿ ಧರ್ಮ ವೃತ್ತಿಗಳಿಗನವರತ ಸತ್ಯ ಸಂಕಲ್ಪನೆ 1 ನೀನಮ್ಮನಿಟ್ಟಪರಿ ನಿನ್ನಿಷ್ಟವಾಗಿರಲು ಎನ್ನಿಷ್ಟವೆನಲ್ಯಾಕೊ ಪ್ರೇಷ್ಠತಮನೆ ವಾಣೀಶ ಹರಸುರರು ನಿನ್ನ ಪ್ರೀತಿಗಾಗಿ ಏನು ಕೊಟ್ಟರು ಮುದದಿ ಉಂಡು ನಿನಗರ್ಪಿಪರೊ 2 ಅಧಿಕಾರಿ ನಾನಲ್ಲದದರಿಂದ ಬೆದರುವೆನು ಮದನನಯ್ಯನೆ ದಯದಿ ಮನ್ನಿಸೆನ್ನ ಉದಯಾಸ್ತ ಕೃತಕರ್ಮ ಜಯೇಶವಿಠಲ ಮುದಖೇದಗಳು ನಿನ್ನ ಪ್ರೀತಿಗೊದಗಲೋ ದೇವ 3
--------------
ಜಯೇಶವಿಠಲ
ಶರಣಜನರ ಪಾಲ ಹರಿ ದಯಾಸಿಂಧುವೆ ವೆಂಕಟೇಶ ಮರೆಯದೆ ಸಲಹೆನ್ನ ದೀನಜನಾಪ್ತನ ವೆಂಕಟೇಶ ಪ ಕರಿ ಧ್ರುವ ಪ್ರಹ್ಲಾದ ಪಾಂಚಾಲಿ ಪಾಲನೆ ವೆಂಕಟೇಶ ದುರುಳರಕ್ಕಸಹರ ಹರಸುರನಮಿತನೆ ವೆಂಕಟೇಶ ಪರಮಪಾವನ ಸಿರಿಯರ ಸಖಜೀವನೆ ವೆಂಕಟೇಶ ದುರುಳಮಾತ ನೀನಳಿದು ಗೋವಳರ್ಪೊರೆದನೆ ವೆಂಕಟೇಶ 1 ವಸುದೇವ ದೇವಕಿ ಬಸಿರೊಳು ಬಂದನೆ ವೆಂಕಟೇಶ ಕುಶಲದಿ ವಸುಧೆಲಮಮಹಿಮೆ ತೋರ್ದನೆ ವೆಂಕಟೇಶ ಅಸುರ ಕಂಸನ ಕುಟ್ಟಿ ಗೋಕುಲರಿದನೆ ವೆಂಕಟೇಶ ಶಶಿಮುಖಿ ಗೋಪಿಯರಾನಂದಲೀಲನೆ ವೆಂಕಟೇಶ 2 ಮಂದರಧರ ಗೋವಿಂದ ಮುಕುಂದನೆ ವೆಂಕಟೇಶ ಸಿಂಧುಶಯನ ಆನಂದನ ಕಂದನೆ ವೆಂಕಟೇಶ ಇಂದಿರೆಯರ ಬಿಟ್ಟು ಭೂಲೋಕಕ್ಕಿಳಿದನೆ ವೆಂಕಟೇಶ ಸುಂದರಗಿರಿಯ ಭೂವೈಕುಂಠವೆನಿಸಿದನೆ ವೆಂಕಟೇಶ 3 ಬಣಗರಸೊಕ್ಕನು ಕ್ಷಣಕ್ಷಣಕೆ ಮುರಿದನೆ ವೆಂಕಟೇಶ ಮನಮುಟ್ಟಿ ಬೇಡ್ವರ ಮನದಿಷ್ಟವಿತ್ತನೆ ವೆಂಕಟೇಶ ಎಣಿಕೆಗೆ ಮೀರಿದ ದ್ರವ್ಯ ಕೂಡಿಟ್ಟನೆ ವೆಂಕಟೇಶ ಘನಘನಮಹಿಮೆಯ ಭುವನದಿ ತೋರ್ದನೆ ವೆಂಕಟೇಶ 4 ನಂಬಿದೆ ನಿನ್ನ ಪಾದಾಂಬುಜಗಳನ್ನು ವೆಂಕಟೇಶ ಬೆಂಬಲವಿರ್ದು ನೀ ಸಂಭ್ರಮದಿ ಸಲಹೆನ್ನ ವೆಂಕಟೇಶ ನಂಬಿದ ದಾಸರ ಭವಾಂಬುಧಿ ಗೆಲಿಪನೆ ವೆಂಕಟೇಶ ಅಂಬುಜಮುಖಿ ಸೀತಾಪತಿ ಶ್ರೀರಾಮನೆ ವೆಂಕಟೇಶ 5
--------------
ರಾಮದಾಸರು
ಶ್ರೀ ಮಧ್ವಾಚಾರ್ಯರ ಸ್ತೋತ್ರ ಪದ ನಮೋ ನಮೋ ಹರಿಪ್ರೀಯ ನಮೋ ನಮೋ ಸುರಗೇಯನಮೋ ನಮೋ ಗುರುರಾಯ ಮಧ್ವ ಮುನಿ ಜೀಯಾ ಪ ಧರೆಗೆ ಭಾರವಾಗಿ ಚರಿಸುತಿರೆ ಮಾಯಿಗಳುಧರಿಸಲಾರದೆ ಧರಣಿ ಸರಸಿಜೋದ್ಭವಗೆಮೊರೆಯಿಡಲು ಅಜನಾಗ ಹರಸುರರ ಸಹವಾಗಿಹರಿಯ ಸದನವ ಸಾರಿ ಅರುಹಿದನು ಇದನೆಲ್ಲ 1 ಕಾವನಯ್ಯನು ವಸುಧೆ ಭಾವವನು ತಿಳಿದನಿಲದೇವನೇ ನಿನಗೆ ಆಜ್ಞೆಯನೀಯಲುದೇವ ನೀ ನವತರಿಸಿ ಪಾವನವ ಮಾಡಿ ಸ-ಜ್ಜೀವಿಗಳ ಪೊರೆದರ ದುರ್ಜೀವಿಗಳ ನೀ ಮುರಿದೆ 2 ಕಾಮವನು ಕಡಿದು ಸನ್ನೇಮವನೆ ಹಿಡಿದು ಬಹುಸೀಮೆಯೊಳು ವಾದಿಗಳ ಸ್ತೋಮ ತರಿದುಹೇಮಕಚ್ಚುಲ ವೇಣುಗೋಪಾಲ ವಿಠಲನನಾಮಸುಧೆ ಸುಜನರಿಗೆ ಪ್ರೇಮದಲಿ ಸಮಿಯಿತ್ತೆ 3
--------------
ವೇಣುಗೋಪಾಲದಾಸರು
ಸೋದಾಪುರದಲ್ಲಿ ವಾಸಿಪ ಯತಿವರನ್ಯಾರೇ ಪೇಳಮ್ಮಯ್ಯಾ ಪ ಹರಸುರಪತಿ ಸ್ಮರವರನುತ ನಮ ಸಮೀರ ಸದ್ವಾದಿರಾಜಕಾಣಮಾ ಅ.ಪ. ವಿನುತ ಬೋಧ ಮುನೀಶ್ವರ ಮತಾಂಭೋನಿಧಿಚಂದ್ರ ಕಾಣಮ್ಮ 1 ಸತ್ವಾದಿತ್ರಯ ಗುಣಜ ಕರ್ಮರಹಿತರಾರೆ ಪೇಳಮ್ಮಯ್ಯಾ ಶುದ್ಧ ಸತಿಸ್ವರೂಪದಿಂದ್ರಮಿಸುವರಾರೆ ಪೇಳಮ್ಮಯ್ಯಸಾರ ಶಾಸ್ತ್ರ ಶೃತಿಸಾರವಿನುತ ಖಳಾರಿಯೆಂದೆನಿಸುವರಾರೆ ಪೇಳಮ್ಮಯ್ಯಾರಾಶಿ ಪೂರ್ಣ ಸಪ್ತನಾಮಹರ ನೇತ್ರ ದ್ವಯಾಂಶ ಸಹಿತರೇ ಪೇಳಮ್ಮಯ್ಯಾ 2 ಪಂಚಭೇದ ಶೂನ್ಯ ಪರ ವಂಚಕರಿಗೆಯಂದೆನಿಸುವರಾರೇ ಪೇಳಮ್ಮಯ್ಯ ಪಂಚ ಪಂಚ ತತ್ವ ಪಂಚರೂಪ ತಂದೆವರದಗೋಪಾಲವಿಠಲನಪೂಜಿಪರೇ 3
--------------
ತಂದೆವರದಗೋಪಾಲವಿಠಲರು
ಜಯ ಜಯ ಜಯ ಜಯ ದಯಾನಿಧೆಭಯನಿವಾರಕ ಭಕ್ತನಿಚಯ ನಿತ್ಯಸೇವ್ಯನೆ ಪ.ದ್ರುಹಿಣಸಮೀರಗರುಡಹಿನಾಥ ಮೃಡೇಂದ್ರಸಹನುತ ಪದಸರೋರುಹನಿತ್ಯಜಯ1ಮದನಜನಕ ಸಿಂಧುಸದನ ದಾನವಜಿತಕದನಮಾನವಮೃಗವದನ ಹರೆ ಜಯ2ದಶಾನನ ಹರಸುರ ಘೋಷಣನೀಲಸತತಪ್ರಸನ್ವೆಂಕಟಗಿರಿವಾಸ ನಮೋ ತೇ ಜಯ 3
--------------
ಪ್ರಸನ್ನವೆಂಕಟದಾಸರು
ವೆಂಕಟಪತಿ ಶರಣು ಹಾಹಾ ವೆಂಕಟಪತಿ ಶರಣು ಪ.ಕಮಲಸಂಭವನುತಚರಣಶುಭಕಮಲಾರಿಕುಲಭರಣಕಮಲಸಖಸಂತಾರುಣ ಕಿರಣ ಕರುಣಾಸಂಪೂರ್ಣ1ಸಿರಿಭೂದೇವಿಯರ ರಮಣ ದಿವ್ಯಸರಸಾಕ್ಷ ಖಗವರಗಮನಸುರರಿಪುಗಣಾಸುರದಮನಭವಹರಸುರವರಸಮ ನಾಮ ನಮೊ2ಶೇಷಗಿರಿಯತಟನಿಲಯ ಫಣಶೇಷಭೂಷಣಮಣಿನಿಲಯಪ್ರಸನ್ವೆಂಕಟ ತಿರುಮಲೆಯೊಳಿಹ ಚೆಲುವ ಸ್ವಸುಖ
--------------
ಪ್ರಸನ್ನವೆಂಕಟದಾಸರು
ಸೂದನ ಗುಣಗಳ ಶೋಧನ ಮಾಡೋದೇ ಪಹರಿಸರ್ವೋತ್ತಮಗುರುಜೀವೋತ್ತಮಪುರಹರಸುರವರ ಪರಿವಾರಾವರಿತು ವಿಧಿಯ ನೀ ಪರಿಪರಿ ಭಜಿಪೋದೆ 1ಸೀಲಜೀವರ ಪ್ರೇಮ ಮೆಲ್ಲುವನೆಂಬುದೆ 2ಮತ್ಸರಿಸದೆ ಪರಮೋತ್ಸನಾಗೋದೆ 3ಮಾತಾಪಿತರುಸತಿಪೋತರು ಸಿರಿಸತಿನಾಥನ ಪದಯುಗದೂತರು ಎಂಬುದೆ 4ವನಜಾಕ್ಷನಗುಣಮನದಲಿ ಎಣಿಸಿದೆದಣಿದರೆ ಮುಕುತಿಯು ತನಗಿಲ್ಲೆಂಬುದೆ 5ದಾಸನಾಗಿ ಭವದಾಸೆಯ ನೀಗೋದೆ 6ನಂದದಿ ಪರರನು ನಿಂದಿಸದಿಪ್ಪೋದೆ 7ಪಾಸನ ಮಾಡುತ ಸೋಸಿಲಿ ಇರುವೋದೆ 8ಮಾಧವದೊರೆಯನು ಖೇದವು ಬರುವುದುಮೋದಕೊಡುವವೋ ಹಾದ್ಯೆಲ್ಲೆಂಬೋದೆ9ಸದಮಲಮೂರುತಿ ಹೃದಯದಿ ಕಾಂಬೋದೆ 10ಅಂಬುಜಭವನಾಂಡದಿ ಶಿರಿಬಿಂಬನೆ ಈಪರಿತುಂಬಿಹನೊಬೊಂಬೆಯ ತೆರ ಕುಣಿಸುವನೆಂಬೋದೆ 11ಶ್ರೀವರ ತಾ ನಮ್ಮ ಕಾವನುಎನುತಭಾವಿಸಿ ಈಪರಿಸೇವೆಯ ಮಾಡೋದೆ12ವಹಿಸಿದ ದಾಸ್ಯದ ವಿಹಿತನು ಎನಿಸೋದೆ 13ನಾಥನೆಂದು ಈ ರೀತಿಲಿ ಇಪ್ಪೋದೆ 14
--------------
ಗುರುಜಗನ್ನಾಥದಾಸರು
ಸ್ಥಾಣುಮಹೇಶ್ವರ ತ್ರಿನಯನ ||ಶಂಕರ||ಮಾಣದೆಸಲಹೋ ರುದ್ರಾಣಿ ಮನೋಹರ ಪಪೂರ್ಣ ಕೃಪೆಯೊಳ್ ನಿನ್ನ | ಶರಣನೆಂದೆನಿಸೆನ್ನ ಅಬಾಣನಿಗೊಲಿದಾತಣ್ಗದಿರನಿಶೇಖರ |ಭೂತನಾಥನೆಭವ| ಭೀತಿವಿನಾಶನೆ |ಪಾತಕಹರಸುರ | ವ್ರಾತಾನಮಿತನೆ ಚಭೂತಳದೊಳಗೆ ಸರ್ವಾರ್ಥರಕ್ಷಕನೆಂದು |ಖ್ಯಾತಿಯ ತಳೆದ ಕಾತ್ಯಾಯನಿ ರಮಣಾ 1ರುದ್ರಚಮಕಗಳಿಂದ | ಲಭಿಷೇಕವಗೈದು |ಶ್ರದ್ಧೆಯೊಳರ್ಚಿಸಲಾರೇ | ಪತ್ರೆಯ ಕೊಯ್ದು |ರುದ್ರಾಕ್ಷಿಯು ಭಸ್ಮಲೇಪನ ಧರಿಸುತ |ಪ್ರದೋಷದ ವ್ರತವರಿಯೆನ್ನುದ್ಧರಿಸೊ 2ಸುಗುಣಶರಧಿಲಿಂಗ | ಪೂಜೆ ವಿನೋದಿತ |ಮೃಗದ ನೆವದಿ ಪಾರ್ಥಗೊಲಿದಕೈರಾತ|ಜಗದೀಶ್ವರನೆ ಗೋವಿಂದನಸಖನಿನ್ನ |ಮೊಗವ ತೋರಿಸುದಾಸಗೊಲಿದು ನೀ ದಯದಿ 3
--------------
ಗೋವಿಂದದಾಸ
ಹರಹರಪುರಹರಗಿರಿಜಾಮನೋಹರಸುರವರ ಕರುಣಾಕರನೆ ನಮೋ ನಮೋಶರಣರಸುರತರುವರಪಂಪಾಪತಿವಿರೂಪಾಂಬಕ ಹೊರೆ ಶುಭದಿ ಪ.ಮದನಮಥನಪಂಚವದನಕೈಲಾಸದಸದನಸದಾಶಿವ ನಮೋ ನಮೋಹದಿನಾಲ್ಕು ಭುವನದಹದನಬಲ್ಲರಿಜಿತಕದನಕಲುಷಹರ ನಮೋ ನಮೋ1ತಾರಕಪತಿಧರ ಭೂರಿಕೃಪಾಂಬುಧಿತಾರಕಹರಪಿತ ಜಯ ಜಯತಾರಕಉಪದೇಶಕಾರಕ ಘನಭವತಾರಕಮೃತ್ಯುಂಜಯಜಯ2ಶೇಷಾಭರಣವಿಭೂಷಾಭವ ವಿಶೇಷಭಕುತಪ್ರಿಯ ವಿಭೋ ವಿಭೋಶೇಷಭೂಭೃತ್ ಪೋಷ ಪ್ರಸನ್ವೆಂಕಟೇಶ ಭಜನಶೀಲ ವಿಭೋ ವಿಭೋ 3
--------------
ಪ್ರಸನ್ನವೆಂಕಟದಾಸರು