ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ | ಅಂತರಾತ್ಮಕ ಪೇಳು ಎನಗೊಂದು ಹದನಾ ಪ ವೇದಶಾಸ್ತ್ರವನು ಅರಿಯೆ | ಪುರಾಣ ಪುಣ್ಯಕಥೆ | ಓದಲಿನ್ನರಿಯೆನೊ ಎಂದೆಂದಿಗೂ | ಭೇದ ಭೇದವನರಿಯೆ | ಬಾಗಿ ನಮಿಸುವದನರಿಯೇ | ಆದರಣಿ ಅರಿಯೆ ಆರಾಧಿನಿಯನರಿಯೆ1 ಜ್ಞಾನ ಭಕುತಿಯನರಿಯೆ | ಗಮನ ತೀರ್ಥವನರಿಯೆ | ಧ್ಯಾನವನು ಅರಿಯೆ ದಾಕ್ಷಿಣ್ಯವನು ಅರಿಯೆ | ಮೌನವನು ಅರಿಯೆ ಮಹತಪಸ್ಸು ಮೊದಲೆ ಅರಿಯೆ | ಗಾನವನು ಅರಿಯೆ ಗತಿಮತಿಗಳನು ನಾನರಿಯೆ 2 ಬುದ್ಧಿ ಪೂರ್ವಕವರಿಯೆ | ಯಾತರ ಸೇವಿ ಅರಿಯೆ ಏನು ಅರಿಯೆ | ದಾತಾರ ಜಗದೇಕ | ನಿನ್ನ ನಾಮವನುಣಿಸಿಕಾಯೊ 3
--------------
ವಿಜಯದಾಸ
ಮೃಡ ನೀನಾದೆನಡುವೆ ಜಡನಾದೆನ್ನ ಮೃಡನ ಮಾಡಯ್ಯ 1ತನುವೆರಡರೊಳಗಿರುವ ತತ್ವ ಗಣವೆನಿಸುವದುತನುಗಣಕೆ ನೀ ಸ್ವಾ'ುಯಾಗಿರಲು ಬಳಿಕಜನರೆಲ್ಲ ನಿನ್ನಡಿಯ ತನು'ನಲಿ 'ಘ್ನಗಳಕೊನೆಗಂಡು ಮನದಭೀಷ್ಟವ ಪಡೆಯುತಿಹರು 2'ಘ್ನೇಶನೆಂಬೊಂದು ಪದಕೆ ವರ್ಣತ್ರಯವು'ಘ್ನವೆಂಬೆರಡು ವರ್ಣದಿ ಜ್ಞಾನವೊಂದು'ಘ್ನಹತಿಯದಕೀಶ 'ಘ್ನೇಶ ನೀನೆ ನಿರ್'ಘ್ನದಿಂ ಜ್ಞಾನವನು ಕೊನೆಗಾಣಿಸಯ್ಯ 3ಮೊದಲ ವರ್ಣವೆ ಸಾಕ್ಷಿಯದರ ಕಡೆಯದು ಮಾಯೆುದಕೊಡೆಯನೆನುತಿಹುದು ಮೂರನೆಯ ವರ್ಣಅದರಿಂದ ಕರಣಪ್ರೇರಕನೆಂಬ ಹದನಾಗಿವೊದಗಿದುದು 'ಘ್ನೇಶನೆಂಬ ನಿನ್ನ ನಾಮ 4ಪರಮಾತ್ಮ ನೀನೆಂದು ನೆರೆ ತಿಳಿದು ನಿನ್ನಡಿಗೆಎರಗಿದೆನು ವ್ಯವಹಾರ ದೆಸೆುಂದಲೀಗತಿರುಪತಿಯ ವೆಂಕಟನೆ ವರದ ಗಣಪತಿಯೆಂದುಮೆರೆಯುತಿಹೆ ರಾಮೇಶನಾಲಯಾವಾಸ 5
--------------
ತಿಮ್ಮಪ್ಪದಾಸರು
ಸಿತಗಿರೀಶ ಶ್ರೀಪತಿಯೆ ಕಾಯೋ ಯನ್ನಾ | ಕರುಣಾರಸ ಪೂರ್ಣ ಪ ಭವ ಭಂಗಾ ಅ.ಪ. ವರುಷಾ | ಕಾಣಲಿಲ್ಲ ಹರುಷಾ ||ಇಂದಿರೇಶ ತವ ಚರಣ ಸನ್ನಿಕರ್ಷಾ | ಎಂದಾಗುದೊ ಶ್ರೀಶಾ ||ವಂದಿಸೂವೆನೊ ನಾನು ನಿನ್ನ ಅನಿಶಾ | ಶ್ವೇತಾದ್ರಿ ವಾಸಾ 1 ಕಮಲ ಕಾಂಬುವಂಥ ಹದನಾ | ತೋರಿಸೊ ಜಿತ ಮದನಾ 2 ಸುರುಚಿರಾಂಗ ಶ್ರೀ ಬಿಳಿಗಿರಿಯ ರಂಗಾ | ಎನ್ನಂತರಂಗಾ ||ಮುರ ವಿರೋಧಿ ಸುರ ಸಾರ್ವಭೌಮ ಹರಿಯೇ | ಕರಿರಾಜನು ಕರಿಯೇ ||ತ್ವರದೊಳುದಿಸ್ಯವನ ಕಾಯ್ದ ದೊರೆಯೇ | ಹೀಗೆನ್ನ ಪೊರೆಯೆ ||ಗುರು ಗೋವಿಂದ ವಿಠಲ ಶ್ರೀಹರಿಯೇ | ನಿನ್ನುಪಕೃತಿ ತಾ ಮರೆಯೆ 3
--------------
ಗುರುಗೋವಿಂದವಿಠಲರು
ಹರಲಿ ಮಾಡಿದರಲ್ಲೊ ನಿನ್ನಮುರಲಿಧರ ಚೆನ್ನ ಕೃಷ್ಣ ಸಂಪನ್ನ ಪ ತುಂಟ ಕಾಮನು ಕೇವಲೆಂಟು ವರ್ಷದ ಬಾಲಗಂಟಿದ್ದು ಹ್ಯಾಗೆಯದ ಗಂಟೊಡೆಯದ ಮುನ್ನ 1 ಜಾರನೆಂದು ಕಡು ಶಿಶುಪಾಲನುದೂರಲಿಲ್ಲೆಂಬುದನಾಹದನಾ ಯಾರು ಅರಿಯದೆ ಘನಾ 2 ಪಾವನ ಪರಮಾತ್ಮಾ ಜೀವರೇಕಾಗುವ ಭಾವದ ಮರ್ಮವನಾತಾವರಿಯದಾ ಠೀವಿಯಲಿ ಕುಜನಾ 3 ಅತಿಶಯೋಕ್ತಿಯು ಮತ್ತು ಉತುಪ್ರೇಕ್ಷಾಲಂಕಾರಮತಿ ಕೊಟ್ಟ ಕಾವ್ಯವನಾ ಅರ್ಥವನಾ ಮಥಿಸದೆ ಚೆನ್ನಾ4 ಸದ್ಧರ್ಮವನು ಬೀರಿ ಉದ್ಧರಿಸಲು ಬಂದಸಿದ್ಧ ಗದುಗಿನ ವೀರನಾರಾಯಣ ಪದ್ದುಮನಯನೇ 5
--------------
ವೀರನಾರಾಯಣ
ಮುಪ್ಪಿನ ಗಂಡನ ಒಲ್ಲೆನೆ |ತಪ್ಪದೆ ಪಡಿಪಾಟ ಪಡಲಾರೆನವ್ವ............ ಪ.ಉದಯದಲೇಳಬೇಕುಉದಕ ಕಾಸಲು ಬೇಕು |ಹದನಾಗಿ ಬಜೆಯನು ಅರೆದಿಡಬೇಕು ||ಬದಿಯಲಿ ಎಲೆ ಅಡಿಕೆ ಕುಟ್ಟಿಡಬೇಕು |ಬಿದಿರಕೋಲು ತಂದು ಮುಂದಿಡಬೇಕು 1ಪಿತ್ತವೋಕರಿಕೆ ಮುದುಕರಿಗೆ ವಿಶೇಷವು |ಹೊತ್ತುಹೊತ್ತಿಗೆ ಜೊಲ್ಲ ಚೆಲ್ಲಬೇಕು ||ಮೆತ್ತನವೆರಡು ಮುದ್ದಿಯ ಮಾಡಲುಬೇಕು |ಒತ್ತೊತ್ತಿ ಕೂಗಿ ಕರೆಯಲುಬೇಕು ....... 2ಜಾಡಿ ಹಾಸಬೇಕು ನೋಡಿ ಬಾಡಬೇಕು |ಅಡಗಡಿಗೆ ಕಣ್ಣೀರ ಸುರಿಸಬೇಕು ||ಒಡೆಯ ಶ್ರೀ ಪುರಂದರವಿಠಲನ ನೆನೆಯುತ |ಮಿಡಿಗೊಂಡು ಮೂಲೆಗೆ ಒರಗಬೇಕು 3
--------------
ಪುರಂದರದಾಸರು