ವಿಜಯ ಭೈರವಿ ತಾಯೆ ವಿಶ್ವೇಶಿ ಮಹಾಮಾಯೆ
ಸ್ವಜನನೆಂದೆನ್ನ ಕಾಯೆ
ಕುಜನ ಕೃತ್ಯಗಳನ್ನು ಕಾಲಿಂದಲೊರಸು ಕಂ-
ಬುಜನೇತ್ರೆ ಕರುಣಾಸುಧೆಯ ನೀಡು ದಯಮಾಡು ಪ.
ಪರಿ ಪರಿಯಲಿ ದೇಹ ಕರಗಿಸುತಿಹ ನಾನಾ
ದುರಿತ ಕಾರಣವೇನೆಂದರಿಯದಲೇ
ಮರುಗುತಲಿರೆಯಿಂದಿನಿರುಳ ಸ್ವಪ್ನದಿ ಬಂದು
ಹರಿಯ ಚಿತ್ತದ ರೀತಿಯರುಪಿ ತ್ವರಿತದಿ 1
ಶರಣು ಜನ ಮಂಥಾರ ಶಾಶ್ವತ
ತರಣಿ ಕೋಟಿ ಸಮಾನ ಭಾಸುರ
ಚರಣ ಕಮಲಗಳನ್ನು ಶಿರದಲಿ
ನಿರಪದಿಯೊಳಿಟ್ಟಿರವ ತೋರಿಸು 2
ಪಂಚ ವಿಂಶತಿ ತತ್ವ ಪರಿಭಾಸೆ ಪುರುಶಕ್ತಿ
ಪಾಂಚ ಭೌತಿಕ ದೇಹ ಗತ ಬಾಧೆಯ
ಕೊಂಚವಲ್ಲದೆ ಹರವಂಚವಾಗಿರುವೆ ವಿ-
ರಿಂಚಿಯ ಜನನಿ ನಿಷ್ಕಿಂಚನ ಜನವಂದ್ಯೆ 3
ಪಾಂಚಜನ್ಯೋದಕವ ಸೇಚಿಸಿ
ಪಂಚಕರಣಕೆ ಮಾರ್ಗ ಸೂಚಿಸಿ
ಪಂಚವರ್ನದ ಶು ....... * 4