ದಯಮಾಡೆನಗೇ ಕೃಷ್ಣದಯ ತೋರನಗೇ ರಂಗ
ದಯ ಮಾಡೆನಗೆ ಶ್ರೀ ಚನ್ನಕೇಶವನೇ ಪ
ಧರಣಿ ಪಾಲಕನಂತೆ ಮೃತವ ನಾನರಿಯೆನು
ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ
ಕರಿರಾಜನಂತೆ ನಾ ಮರೆಹೊಕ್ಕಲರಿಯೆನು
ತರಳ ಧೃವನಂತೆ ತಪ ಮಾಡಲರಿಯೇ 1
ಪರೀಕ್ಷಿತನಂತೆ ಶ್ರವಣವ ಮಾಡಲರಿಯೆನು
ವರಶುಕರಂತೆ ಕೀರ್ತನೆ ಮಾಡಲರಿಯೇ
ತರಳ ಪ್ರಲ್ಹಾದನಂದದಿ ಸ್ಮರಿಸಲರಿಯೆನು
ಚರಣವ ರಮೆಯಂತೆ ನಾ ಭಜಿಸಲರಿಯೇ 2
ಹರಿಯನ ಕ್ರೂರನಂತೇ ನಮಿಸಲರಿಯೆನು
ಹರಿಯ ಪೃಥುವಿನಂತೆ ಪೂಜಿಸಲರಿಯೇ
ಮರುತಜನಂತೆ ನಾ ದಾಸ್ಯತ್ವವರಿಯನು
ನರನಂತೆ ಮಿತ್ರತ್ವ ಪಡೆಯಲಿಕ್ಕರಿಯೇ 3
ಆತ್ಮವ ಬಲಿಯಂತೆ ಅರ್ಪಿಸಲರಿಯೆನು
ನಿತ್ಯವು ನರಕದಿ ಮುಳುಗಿ ನಾನಿರುವೇ
ಮತ್ಸ್ಯಾದಿ ದಶರೂಪವೆತ್ತಿದ ರಂಗನೆ
ಬೃತ್ಯರ ಸಲಹಯ್ಯ ಸ್ವಾಮಿ ದೂರ್ವೇಶಾ 4