ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಘುಕುಲ ತಿಲಕ ವಿಠಲ ಇವಳ ಘಾವಳಿಗಳನುಬಗೆಹರಿಸಿ ಕಾಪಾಡ ಬೇಕೋ ಹರಿಯೇ ಪ ಭೃಗುವರದ ನಿನ್ನಂಘ್ರಿ ಸೇವೆಯಲಿ ಮಹಭಕ್ತಿಮಿಗೆ ಜ್ಞಾನ ಕೊಟ್ಟಿವಳ ಕಾಪಾಡ ಬೇಕೋ ಅ.ಪ. ಶಬರಿ ಎಂಜಲನುಂಡ | ಕಾರುಣ್ಯ ಮೂರುತಿಯೆಅಭಯದನು ನೀನಾಗಿ ವಂಶ ಉದ್ಧರಿಸೋ |ಕುಭವ ಪರಿಹರಕಾಗಿ ಸಾಧನವು ಎಂದೆನಿಪಶುಭ ಸದಾಗತಿ ಮತದಿ ದೀಕ್ಷೆಯನೆ ಈಯೋ 1 ಪಾದ ಸೇವಕಳೀಗೆಭೇದ ಪಂಚಕ ತಿಳಿಸಿ ಸಾಧನವಗೈಸೋ 2 ಸರ್ವಜ್ಞ ಸರ್ವೇಶ ಹಯಮೊಗಾತ್ಮಕನಾದಸರ್ವ ಸುಂದರ ಗುರುಗೋವಿಂದ ವಿಠಲ |ಸರ್ವದಾ ಸರ್ವತ್ರ ನಿನ್ನ ಸ್ಮøತಿಯನೆ ಕೊಟ್ಟುದರ್ವಿಜೀವಿಯ ಸಲಹೆ ಬಿನ್ನವಿಪೆ ನಿನಗೇ 3
--------------
ಗುರುಗೋವಿಂದವಿಠಲರು
ವೃಥಾ ಭವದಿ ಮೆರೆದೆರಥಚರಣಧರನ ಸ್ಮøತಿಯನೆ ಮರೆದೆ ಪ.ಸತಿಸುತರೆನ್ನವರತಿಶಯ ಗೃಹಧನಪತಿಯು ನಾನೆಂಬೊ ಮಮತೆವಿಡಿದುರತಿಪತಿಪಿತನಂಘ್ರಿರತಿ ಲೇಶವಿಲ್ಲದೆಸತತ ಯಮಪುರದ ಪಥವನೆ ಪಿಡಿದು 1ಅತಿಥಿಗಳೊಲ್ಲದೆ ಯತಿಪೂಜೆಯಿಲ್ಲದೆಪೂತಿ ಮಲಭಾಂಡ ಭರಿತನಾಗಿಚತುರ್ಮುಖನಯ್ಯನ ವ್ರತವ ಬಿಸುಟು ಅನ್ಯಪತಿತ ಮಾರ್ಗವ ಪೊಂದಿ ಹತಭಾಗ್ಯನಾಗಿ 2ಮಿತಮನರಹಿತ ದುರ್ಮತಪಂಡಿತನಾಗಿಪ್ರತಿಬೊಮ್ಮರಕ್ಕಸೋನ್ನತನೆನಿಸಿಅತಿಪ್ರಾಜÕಶಾಸ್ತ್ರದೇವತೆ ಪ್ರಸನ್ವೆಂಕಟಪತಿಯನೆ ಬಿಟ್ಟಿನ್ನಿತರವ ಭಜಿಸಿ 3
--------------
ಪ್ರಸನ್ನವೆಂಕಟದಾಸರು