ಒಟ್ಟು 45 ಕಡೆಗಳಲ್ಲಿ , 18 ದಾಸರು , 45 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಬಪ್ಪನಾಡಿನ ದೇವಿಯನ್ನು ಕುರಿತು) ದಯಮಾಡೆ ಬಾಗೆ ಶ್ರೀಪಂಚದುರ್ಗೆ ದಯಮಾಡೆ ಬಾಗೆಪ. ದಯಮಾಡೆ ಕೇವಲ ಭಯವಿಹ್ವಲನಲ್ಲಿ ದಯಸಾಗರೆ ಸೌಭಾಗ್ಯಸಂಪದವನ್ನುಅ.ಪ. ವೇದಾಂತವೇದ್ಯೆ ನಿಖಿಳಜಗದಾದಿವಿನೋದೆ ಮಧುರಬಿಂಬಾಧರೆ ನಿನ್ನಯ ಪರಿಹರಿಸಿ ಸರ್ವಾಪ- ರಾಧಗಳ ಕ್ಷಮಿಸಮ್ಮ ಕೈಟಭಸೂದನನ ಸೋದರಿ ಮಹೇಶ್ವರಿ 1 ಅಂಬುಜಚರಣೆ ಮಾಧುರ್ಯೋರುರಂಭಾಸಮಾನೆ ಲಂಬೋದರಪರಿರಂಭಕರಾಂಬುಜೆ ಮುಖೇಂದುಪದ್ಮ ದ- ರೋಲಂಬಕುಂತಳೆ ಶುಂಭ ಮರ್ದಿನಿ 2 ಸಿಂಧೂರನಯನೆ ನಿಖಿಲಾಮರವಂದಿತಚರಣೆ ನಿತ್ಯಾನಂದಪ್ರಕಾಶಿನಿ ಅಂಧಕಾಸುರವೈರಿಹೃದಯಾನಂದ ಪಾರಾವಾರ ಪೂರ್ಣಮಿ- ಸುರಥನರೇಂದ್ರವರದೆ ಮೃಗೇಂದ್ರವಾಹಿನಿ3 ರಜತಾದ್ರಿವಾಸೆ ಚಂಪಕನಾಸೆ ಸುಜದನೌಘಪೋಷೆ ಮಹಾಗಜಗೌರಿ ಶಂಕರಿ ತ್ರಿಜಗಜ್ಜನನಿ ಭಾವನಿ ಪಾರ್ವತಿ ಭುಜಗಭೂಷಣರಾಣಿ ಕಲುಷ- ದಿವಾಕರೆ ಮಾನಿತೋದ್ಧರೆ4 ತಪ್ಪು ಸಹಸ್ರವಿದ್ದರು ಮನದೊಳಿಪ್ಪುದಜಸ್ರ ಜಗದಾದಿಮಾಯೆ ಕಪ್ಪುಕಂಠನ ರಾಣಿ ವರಕಂದರ್ಪಧಿಕತರೂಪೆ ಸಾಧು ಪ- ದ ಪ್ರಸಾದವ ಪಾಲಿಸೆನ್ನಲಿ ಬಪ್ಪನಾಡಿನ ಭದ್ರದಾಯಕಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಅನುದಿನ ಚರಣಕಮಲವ ತೋರಮ್ಮ ನಮ್ಮಮ್ಮಾ ಪ. ಮನೋಭಿಮಾನಿಯೇ ಎನ್ನವಗುಣಗಳೆಣಿಸದೆ ತ್ವರಿತದಿ ಬಂದು ಮುತ್ತಿನ ಗದ್ದಿಗೆಯನೇರಮ್ಮ ನಮ್ಮಮ್ಮಾ ಅ.ಪ. ದಕ್ಷಕುವರಿ ದಾಕ್ಷಾಯಿಣಿ ಗೌರಿ ಪಕ್ಷಿವಾಹನನ ಸೋದರಿ ಈಕ್ಷಿಸುತಿರುವೆನು ಉಪೇಕ್ಷಿಸದೆ ಎನ್ನ ರಕ್ಷಿಸಿ ಕಾಯೆ ಪಾರ್ವತಿ ತಾಯೆ 1 ಶಂಭುದೇವನ ರಾಣಿ ಹೃದಯಾಂಬರದೊಳು ನಿಂದು ಅಂಬರ ಪೂಜಿತೆ ನಂಬಿದ ಭಕ್ತರ ಪೊರೆವ ಸದ್ಗುಣ ಚರಿತೆ 2 ಗೆಜ್ಜೆ ಪಾದಗಳಿಂದ ಘಲ್ ಘಲ್ ಎನುತ ಬಾರಮ್ಮ ಹೆಜ್ಜೆಯನಿಡುತ ಮುಗುಳ್ನಗೆ ನಗುತ ಬಾರಮ್ಮ ಸುಜ್ಞಾನ ಮತಿಯಿತ್ತು ಕಾಯುವ ತಾಯಿ ಬಾರಮ್ಮ 3 ಕಂಚುಕ ಪಟ್ಟೆಯ ಪದಕ ಕಟ್ಟಿದ ಕಠಾಣೆ ಮುತ್ತಿನಮೂಗುತಿ ಪಚ್ಚೆಯ ಓಲೆ ಇಟ್ಟ ಕಸ್ತೂರಿತಿಲಕ ಕೆತ್ತಿದ ಕಿರೀಟ ಹೊಳೆಯುತ 4 ಬೇಡಿಕೊಂಬೆವೆ ತಾಯೆ ನೀ ಎನ್ನ ಆಪತ್ತು ಪರಿಹರಿಸಿ ಪಾಡಿ ಪೊಗಳಿ ಕೊಂಡಾಡುವೆ ಕಾಯೆ ತಾಯೆ ಬೇಡಿದ ವರಗಳ ರುಕ್ಮಿಣೀಶವಿಠಲನ ಕರುಣದೆ ನೀಡೆ ತಾಯೆ 5
--------------
ಗುಂಡಮ್ಮ
ಈ ಸೊಬಗನಿನ್ನ್ಯಾವ ದೇವರೊಳು ಕಾಣೆ ಈಶ ಪರಮೇಶ ಜಗದೀಶ ಶ್ರೀ ಶಿವನ ಪ ಸುಂದರತ್ವದಿ ನೋಡೆ ತ್ರಿಪುರಸುಂದರಿಯರಸ ಬಂಧುತ್ವದಲಿ ವಿಷ್ಣು ಸೋದರಿಯ ರಮಣ ಅಂದ ಚಂದದಿ ನೋಡೆ ಸುಂದರೇಶ್ವರನಿವನು ಚಂದ್ರ ನಾಗಾಭರಣ ಲೋಕ ಶಂಕರನು 1 ಭೋಗದಲಿ ನೋಡೆ ತಾಂ ಮೋಹಿನಿಯನಾಳ್ದವನು ಯೋಗದಲಿ ಯೋಗೇಶ ಯೋಗ ಭಾವಿತನು ತ್ಯಾಗದಲಿ ನೋಡೆ ತಾಂ ಸರ್ವಸಂಗ ತ್ಯಾಗಿ ನಿಗಮ ಗೋಚರನು 2 ವೀರತನದೊಳಗಿವನು ತ್ರಿಪುರ ಸಂಹಾರಕನು ಧೀರತನದೊಳಗಿವನು ಮದನವಿಧ್ವಂಸಿ ಸಾರತನದೊಳಗಿವನು ಶ್ರೀ ಮಹಾದೇವನು ಕಾರಣಕೆ ಕಾರಣನು ಜಗದಾದಿ ಗುರುವು 3 ಹುಟ್ಟು ಸಾವುಗಳೆಲ್ಲ ಎಷ್ಟಾರ್ಥದಾಯಕನು ಪಟ್ಟಣವು ರತ್ನ ರಜತಾದ್ರಿಯಾಗಿಹುದು ಪುಟ್ಟ ಬಾಲನಿಗೊಲಿದು ಕಟ್ಟು ಮಾಡಿದ ಯಮನ ಅಷ್ಟ ಮೂರ್ತಿಯು ಲೋಕ ಸೃಷ್ಟಿ ಕಾರಣನು 4 ಎಲ್ಲಿ ನೋಡಿದರಲ್ಲಿ ವಿಶ್ವರೂಪದೊಳಿಹನು ಎಲ್ಲಿ ನೋಡಿದರಲ್ಲಿ ಸೂಕ್ಷ್ಮದಿಂದಿಹನು ಎಲ್ಲಿ ನೋಡಿದರಲ್ಲಿ ಸರ್ವಾತ್ಮನಾಗಿಹನು ಎಲ್ಲಿ ನೋಡಲು ಧೇನುಪುರನಾಥ ಶಿವನು 5
--------------
ಬೇಟೆರಾಯ ದೀಕ್ಷಿತರು
ಏಳುಪೀಠಕೆ ನಳಿನಸಂಭವೆ ಜಗನ್ನುತೆ ಪ ಬಾಲೇಂದು ನಿಭಫಾಲೆ ಶ್ರೀತಪರಿಪಾಲೆ ಕೋಮಲೆ ಅ.ಪ. ಸಿಂಧುನಂದನೆ ಇಂದುಸೋದರಿ ಕುಂದರದನೆ ಮಂದಗಾಮಿನಿ ವಂದಿತಾಖಿಲವೃಂದಾರಕ ವೃಂದಾನಂದಪ್ರದೆ 1 ತೋರಮುತ್ತಿನ ಚಾರುಪೀಠಕೆ ಸಾರುಬೇಗನೆ ಸಾರಸಾನನೆ ನಾರೀರನ್ನೆಯರು ಸಾರಿಕರೆವರು ಮೀರದಾನಂದದಿಂ 2 ಶೇಷಶೈಲನಿವಾಸಿನೀ ನತಪೋಷದಾಯಿನಿ ಶ್ರೀರಮಾಮಣಿ ಯಾಸಾಸಾರಸನೇತ್ರೆ ಕಮಲಾವಾಸೇ ದಯೆತೋರಿಸೆ 3
--------------
ನಂಜನಗೂಡು ತಿರುಮಲಾಂಬಾ
ಒಡಲೆರಡಂತೆ ಅಸುವೊಂದಂತೆ ನುಡಿಯಿದು ನಿಜವೇ ಪೇಳೇ ಗೋಪಮ್ಮ ಪ ನಡೆ ನುಡಿ ಭಾವಗಳೊಂದೇಯಂತೆ ಹುಡುಗನೇನೇ ಕೃಷ್ಣ ಪೇಳೇ ಗೋಪಮ್ಮ ಅ.ಪ ಸೋದರಿಯರು ಇದ ಹೇಳುವರಮ್ಮ ನಾದ ನರ್ತನ ದೇಹಕಾಂತಿಗಳಲ್ಲಿ ಭೇದವಿಲ್ಲೆಂಬರು ನಿಜವೇನಮ್ಮಾ 1 ಬಾಲೆಯು ತಾನೆ ಗೋಪಾಲನೆನುವಳಂತೆ ಬಾಲಕೃಷ್ಣನು ರಾಧೆ ತಾನೆಂಬನಂತೆ ಬಾಲನಾರಿದರಲ್ಲಿ ಬಾಲೆಯಾರಿವರಲ್ಲಿ ಮೂಲತತ್ವವ ನೀನೆ ಹೇಳೇ ಗೋಪಮ್ಮ 2 ಯುಗ ಯುಗದಲ್ಲಿ ತಾನವತರಿಸುವ ಕೃಷ್ಣ ಜಗದೀಶ್ವರನೆ ತಾದಿಟವಮ್ಮ [ಮಿಗೆ] ಭಾಗ್ಯವೆ ನಿನ್ನದಾಗಿಹುದಮ್ಮ 3 ನಿರುಪಮ ಭಕ್ತಿಯಮೂರ್ತಿಯು ರಾಧೆ ಮುರಳೀಧರನಲಿ ಒಂದಾಗಿಹಳು ಅರಿತುದ ಪೇಳ್ವೆನು ಮಾಂಗಿರಿರಂಗನ ಶರಣರಿಗೀತತ್ವ ಕರಗತವಮ್ಮಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರುಣಿಸಮ್ಮಾ ಶಂಕರಿ ಮಾತೆ ಕರುಣಾವಾರಿಧೆ ಶಂಕರನರಸಿ ಪ. ಫಾಲನೇತ್ರನ ತೊಡೆಯನೇರಿ ಲೀಲೆಯಿಂದ ಮೆರೆವೊ ದೇವಿ ಪಾಲಿಸಮ್ಮ ನಿಮ್ಮ ಮುಡಿಯ ಪಾರಿಜಾತವನ್ನು ಅಂಬಾ 1 ಜರಿಯ ಪೀತಾಂಬರವ ಧರಿಸಿ ಕಂಚುಕ ತೊಟ್ಟು ಸರಿಗೆ ಸರ ನಾಗಮುರಿಗೆನಿಟ್ಟು ಕರದಿ ಕಂಕಣ ಧರಿಸಿ ಅಂಬಾ 2 ಮರುಗ ಮಲ್ಲಿಗೆ ಸುರಗಿ ಸಂಪಿಗೆ ವರ ಪಾದರಿ ಪಾಟಲಿ ಪುನ್ನಾಗೆ ವರದ ಶ್ರೀ ಶ್ರೀನಿವಾಸ ಸೋದರಿ ಹರುಷ ಬೆರೆಸಿ ವರವ ಅಂಬಾ 3
--------------
ಸರಸ್ವತಿ ಬಾಯಿ
ಕಾಮಾನ ಜನನಿಯೆ ಸೋಮಾನ ಸೋದರಿ ಸಾಮಾಜ ವರದನ ಪ್ರೇಮವ ಕೊಡಿಸಮ್ಮ ಪ ನೇಮಾದಿಂದಲಿ ಹರಿ ನಾಮಾವ ನುಡಿಸುತ ತಾಮಾಸ ಓಡುವಂತೆ ನೀಮಾಡಬೇಕಮ್ಮ ಅ.ಪ ನಿತ್ಯ ತೃಪ್ತಳೆನಿನ್ನ ನಿತ್ಯದಿ ಬೇಡಿಕೊಂಬೆ ಭೃತ್ಯರೊಳಗೆ ಎನ್ನ ಎತ್ತಿ ಸೇರಿಸೆ ತಾಯೆ || ಮತ್ತನಾಗದೆ ಭವದಿ ಉತ್ತುಮನೆನಿಸುತ ಆತ್ಮದಿ ಹರಿ ತೋರಿ ಕೃತಕೃತ್ಯನೆನಿಸಮ್ಮ 1 ದೇಶಕಾಲದಿನೀನು ಶ್ರೀಶಗೆ ಸಮಳಮ್ಮ ನಾಶಮಾಡುತ ದೋಷ ದಾಸಾನು ಎನಿಸಮ್ಮ || ಶ್ವಾಸಾಶೇಷರನೆಲ್ಲ ಲೇಸಾಗಿ ಆಳುವಳೆ ವಾಸುದೇವನಲ್ಲಿ ಆಸೇಯ ನೀಡಮ್ಮ 2 ಶೃತಿಯಲ್ಲಿ ನೀನಿದ್ದು ಸ್ತುತಿಸೀ ಶ್ರೀಹರಿಯನ್ನ ಮತ್ತೆಸೃಜಿಸುವಂತೆ ಎತ್ತಿಗಾನವ ಮಾಳ್ವೆ || ಎತ್ತ ನೋಡಲು ಬಲು ಕತ್ತಲೆಕಣಿ ತಾಯೆ ಸತ್ಯವ ಬಿಡದಂತೆ ಹತ್ತೀಸೆ ಹರಿದಾರಿ3 ಹರಿಯಂತೆ ಅವತಾರ ನಿರುತನೀ ಮಾಡುತ ಪರಿ ರೂಪದಿಂದ ಪರಿಚರಿಯ ನೀಮಾಳ್ವೆ || ಸರ್ವೇಶ ಹರಿಯಿಂದ ಸರ್ವಕಾಲದಿ ಕೂಡಿ ಸರ್ವಕಾರ್ಯವ ಮಾಳ್ವೆ ಸರಿಯಾರೆ ನಿನಗಮ್ಮಾ 4 ಅಕ್ಷರ ರೂಪಳೆ ಈಕ್ಷಿಸುಕರುಣದಿಂದ ತ್ರ್ಯಕ್ಷೇಶ ವಿಧಿಮಾತೆ ಅಕ್ಷರನರ್ಧಾಂಗಿ || ಕುಕ್ಷೀಲಿ ಬ್ರಹ್ಮಾಂಡ ಲಕ್ಷ್ಯವಿಲ್ಲದೆ ಪಡೆದಿ ಅಕ್ಷಯ ಮಾಡಿ ಜ್ಞಾನ ಮೋಕ್ಷಾವ ಕೊಡಿಸಮ್ಮಾ5 ವಿಕಾರ ಶೂನ್ಯಳೆ ಪ್ರಕೃತಿಗೆ ಮಾನಿಯೆ ನೀಕಾರ್ಯ ಕಾರಣಕ್ಕೆ ಮುಖ್ಯ ಹೇತುವೆ ತಾಯೆ || ಪ್ರಕೃತಿ ಬಂಧವ ಬಿಡಿಸಿ ಸಾಕಾರ ಮೂರುತಿ ಲೋಕನಾಯಕ ಹರಿಯ ಏಕಾಂತದಲಿ ತೋರೆ6 ತ್ರಿಗುಣ ಕಾರ್ಯಗಳೆಲ್ಲ ಸುಗುಣಿ ನೀ ಮಾಡುತ ನಿತ್ಯ ಪೊಗಳಿ ಹಿಗ್ಗುವೆ ಮಾತೆ || ಜಗವೆಲ್ಲ ಕುಣಿಸುತ ನಗುತಲೀಲೆಯಿಂದ ನಿಗಮಾದಿಗಳ ಮೀರಿ ಬಗೆ ಬಗೆ ಲೀಲೆ ಕಾಂಬೆ 7 ನಿತ್ಯಾ ಮುಕ್ತಳು ನೀನು ಪ್ರೀತಿಲಿ ನಮಿಪೆನೆ ಮಾತುಲಾಲಿಸಿ ಎನ್ನ ನಿತ್ಯದಿ ಸಲಹೆಮ್ಮ || ಹೆತ್ತ ತಾಯಿಯು ನೀನು ಎತ್ತಿ ಪೊರೆಯದಿರೆ ಎತ್ತ ಪೋಗಲಿ ನಾನು ಉತ್ತುಮರಮೆ ಹೇಳೆ 8 ಸಾಗರನ ಮಗಳೆ ಆಗಮರೂಪಳೆ ಹೋಗೀಸುಲಿಂಗವ ಸಾಗಿಸಿಗುಣಕಾರ್ಯ || ಭಾಗ್ಯ ಸ್ವರೂಪಳೆ ಬಾಗಿ ನಮಿಸುವೆ ಆಗು ಮಾಡಿಸು ಹರಿ ಗೀತೆಗಳೆನ್ನಿಂದ 9 ಮರುತ ದೇವನ ಪಿತನ ಉರದಲಿ ವಾಸಿಪಳೆ ಹರಿಗುರು ಚರಣದಿ ನಿರುತ ಭಕ್ತಿಯ ಕೊಟ್ಟು || ವಾರಿಜನಾಭನಲ್ಲಿ ಧಾರೆ ಧಾರೆಯ ಭಕ್ತಿ ಸಾರಸ ದಳನಯನೇ 10 ಮಾತು ಮಾತಿಗೆ ನಮ್ಮ ಖ್ಯಾತಾಜಯತೀರ್ಥ ನವನೀತ ಧರಿಸೀಹ || ಶ್ರೀ ತಾಂಡವ ಕೃಷ್ಣ ವಿಠಲರಾಯನ ಸ್ಮರಣೆ ಆತ್ಮಾದೊಳಗೆ ನಿಂತು ಖ್ಯಾತೀಲಿನಡಿಸಮ್ಮಾ 11
--------------
ಕೃಷ್ಣವಿಠಲದಾಸರು
ಕ್ಷೀರವಾರಿಧಿಜಾತೆ ಚಾರುಸುಂದರಗಾತ್ರೆ ಪ ವೋರು ವರಮಣಿ ಪೀಠಕೆ ಬಾರೆಯ ಹಸೆಗೇ ಕರೆ 1 ಇಂದಿರಾದೇವಿ ಬಾ ಇಂದುಸೋದರಿ ಬಾ ಕುಂದಣದ ಹಸೆಗೇ ಮಂದಹಾಸವ ತೋರಿ ಬಂದೆಮ್ಮ ಮನೆಯೊಳು ಎಂದೆಂದಗು ಬಿಡದಾನಂದವತೋರೆಂದು 2 ರೂಢಿಗೊಡೆಯ ಗರುಢಾರೂಢನೆಂದೆಸಿದ ಪೊಡಮಟ್ಟು ಬೇಡುವ ದೃಢ ಭಕ್ತರ ಕೈ ಬಿಡದಾದರಿಸುತ್ತ ಬಾರೆಂದು ಹಸೆಗೆ 3 ಸುರವರಪೂಜಿತ ಚರಣಸರೋಜವ ನಿರುತ ಸೇವಿಪ ವರವ ಕರುಣೆಸೆಂದೆನುತಾನು ಕರಮುಗಿದೆರೆವೆನು ವರಶೇಷಗಿರಿವಾಸನರಸಿನೀಂ ನಲವಿಂದ ಬಾರೆಂದು4
--------------
ನಂಜನಗೂಡು ತಿರುಮಲಾಂಬಾ
ಗಿರಿರಾಜಕುಮಾರಿ ದೇವಿಪರಮ ಮಂಗಳಗೌರಿಪರಮ ಪಾವನೆ ಶ್ರೀಹರಿ ಸೋದರಿಸುರರಿಪು ಮಧುಕೈಟಭ ಸಂಹಾರಿಶ್ರೀಕರಿ ಗೌರಿ ಹಸೆಗೇಳು ಹಸೆಗೇಳು 1 ಕುಂಭಸಂಭವವಿನುತೆ ದೇವೀಶಾಂಭವಿ ಶುಭಚರಿತೆಜಂಭಭೇದಿ ಮುಖ ಸುರವರಪೂಜಿತೆಕಂಬುಕಂಠಿ ಶುಭಗುಣಗಣ ಶೋಭಿತೆಲೋಕೈಕಮಾತೆಹಸೆ2 ಸರಸಿಜದಳನಯನೆ ದೇವಿಸರಸಕುಂದರದನೆಸರ್ವಮಂಗಳೆ ಸರ್ವಾಭರಣೆಸುರಮುನಿ ಪರಿಭಾವಿತೆ ಶುಭಚರಣೆಕರಿರಾಜಗಮನೆ ಹಸೆ 3 ನಿರ್ಜರ ಪರಿವಾರೆಮಣಿಮಯಹಾರೆ ಹಸೆ4 ಪನ್ನಗನಾಭವೇಣಿ ದೇವಿಸುನ್ನತೆ ರುದ್ರಾಣಿ ಕನ್ನಡಿಗದಪಿನ ಶಿವೆ ಶರ್ವಾಣಿಲೋಕೈಕ ಜನನಿ ಹಸೆ 5 ಶುಭ ಲೀಲೆಮೃಗಮದ ತಿಲಕ ವಿರಾಜಿತೆ ಪಾಲೆಕುಂಕುಮನಿಟಿಲೆ ಹಸೆ 6 ಪಂಕಜ ಸಮಪಾಣಿ ಶ್ರೀ ಹರಿ-ಣಾಂಕವದನೆ ವಾಣಿಅಂಕಿತಮಣಿಗಣ ಭೂಷಣ ಭೂಷಣಿಶಂಕರೀ ಕೆಳದಿಪುರವಾಸಿನಿಪಾರ್ವತಿ ಕಲ್ಯಾಣಿ ಹಸೆ 7
--------------
ಕೆಳದಿ ವೆಂಕಣ್ಣ ಕವಿ
ಚಾಮುಂಡೇಶ್ವರಿ ಚಾಮೇಂದ್ರನೃಪನನ್ನು ಪ್ರೇಮದಿಂ ರಕ್ಷಿಸಮ್ಮ ಪ ಜೀಮೂತಶ್ಯಾಮಳೆ ಕೋಮಲಶುಭಗಾತ್ರೆ ಕಾಮಿತ ಫಲದಾಯಕಿ ಕಲ್ಯಾಣಿ ಅ.ಪ. ನಿನ್ನ ಸನ್ನಿಧಿಗೆ ನಾ ಬಂದು ಪ್ರಾರ್ಥಿಸೆ ಪ್ರ ಸನ್ನಳಾಗಿ ನೃಪನ ರನ್ನದ ಸಿಂಹಾಸನವೇರಿಸಿ ಎನ ಗುನ್ನತೋನ್ನತವಾದಾನಂದವನಿತ್ತೆ 1 ಆಯುರಾರೋಗ್ಯ ರಾಜೈಶ್ವರ್ಯ ಪುತ್ರರಿಂ ದಾನಂದವನೈದಿ ನಾಯಕಮಣಿಯಂದದಿಂ ನರನಾಥರ್ಗೆ ನಾಥನಾಗಿ ನಲಿಯುತ್ತಲಿರಲಿ ಸದಾ2 ಗಿರಿಯೊಳುತ್ತಮ ಮಹಾಬಲಗಿರಿಯೊಳು ನಿಂದು ಕರುಣಾರಸವೆರಸಿ ಪೊರೆವೆ ನಾರಾಯಣದಾಸನ ಬಿನ್ನಪವ ತಿರುಪತೀಶನ ಸೋದರಿ ಶುಭವರ್ಧಿನಿ 3
--------------
ನಾರಾಯಣದಾಸರು
ಚಾಮುಂಡೇಶ್ವರಿ ಚಾಮೇಂದ್ರನೃಪನನ್ನುಪ್ರೇಮದಿಂ ರಕ್ಷಿಸಮ್ಮ ಪಜೀಮೂತಶ್ಯಾಮಳೆ ಕೋಮಲಶುಭಗಾತ್ರೆಕಾ'ುತ ಫಲದಾಯಕಿ ಕಲ್ಯಾಣಿ ಅ.ಪ.ನಿನ್ನ ಸನ್ನಿಧಿಗೆ ನಾ ಬಂದು ಪ್ರಾರ್ಥಿಸೆ ಪ್ರಸನ್ನಳಾಗಿ ನೃಪನರನ್ನದ ಸಿಂಹಾಸನವೇರಿಸಿ ಎನಗುನ್ನತೋನ್ನತವಾದಾನಂದವನಿತ್ತೆ 1ಆಯುರಾರೋಗ್ಯ ರಾಜೈಶ್ವರ್ಯ ಪುತ್ರರಿಂದಾನಂದವನೈದಿನಾಯಕಮಣಿಯಂದದಿಂ ನರನಾಥರ್ಗೆನಾಥನಾಗಿ ನಲಿಯುತ್ತಲಿರಲಿ ಸದಾ 2ಗಿರಿಯೊಳುತ್ತಮ ಮಹಾಬಲಗಿರಿಯೊಳು ನಿಂದುಕರುಣಾರಸವೆರಸಿಪೊರೆವೆ ನಾರಾಯಣದಾಸನ ಬಿನ್ನಪವತಿರುಪತೀಶನ ಸೋದರಿ ಶುಭವರ್ಧಿನಿ 3
--------------
ನಾರಾಯಣದಾಸರು
ಚಾಮುಂಡೇಶ್ವರಿ ಪಾಲಿಸು ಬೇಗದಿಂಚಾಮರಾಜೇಂದ್ರ ನೃಪನ ಪಪ್ರೇಮದಿಂ ರಾಜ್ಯಾಭಿಷೇಕವ ಮಾಡಿಸಿಈ ಮ'ಯನ್ನೀತನಿಂದಾಳಿಸು ತಾಯೆ ಅ.ಪನವರಾತ್ರಿಯು ಬಂತೆನ್ನುತ ಜನಗಳುತವಕಿಸುತಿಹರಮ್ಮಅವನೀಶಾಧಿಪನ ಸಿಂಹಾಸನವೇರಿಸಿನವರಾತ್ರಿಯುತ್ಸವವಂ ಮಾಡಿಸು ತಾಯೆ 1ಈ ಪಟ್ಟಣಕಭಿಮಾನಿ ನೀನಿರೆ ಜನತಾಪ ಪಡುವುದುಂಟೆಪಾಪ ಕೃತ್ಯಂಗಳ ಮಾಳ್ಪರ ಪರಿದು ನೀತಾಪವಳಿದು ತಂಪಿಸಿ ಜನವನು ಪೊರೆಯೆ 2ಧರೆಯೊಳುತ್ತಮ ಮಹಾಬಲಗಿರಿವಾಸಿನಿಗುರು ವಾಸುದೇವ ರೂಪಿಣಿಕರುಣದಿಂ ನಾರಾಯಣದಾಸನ ಮನಕೆಹರುಷವ ಕೊಡು ವೆಂಕಟಪತಿ ಸೋದರಿ3
--------------
ನಾರಾಯಣದಾಸರು
ಚಾಮುಂಡೇಶ್ವರಿ ಪಾಲಿಸೆ ನಮ್ಮಚಾಮರಾಜೇಂದ್ರ ನೃಪಾಲನ ನಿರುತವು ಪಇಂದ್ರಾದಿ ದೇವರ್ಕಳೆಲ್ಲ ನಿನ್ನಂಘ್ರಿಯಕುಂದ ಮಂದರಾದಿ ಕುಸುಮರತ್ನಗಳನ್ನುತಂದು ಪೂಜಿಸಲಾಗ ಪರಿತುಷ್ಟಳಾಗಿ ನೀನಂದು ಕುಂದದ ವರಗಳನಿತ್ತು ಸಲ'ದೆ 1ಇಳೆಯೊಳು ಕೃಷ್ಣೇಂದ್ರ ನಿನ್ನ ಪೂಜೆಯ ಭಕ್ತಿಯಲಿ ಗೈದು ವರಪುತ್ರನನ್ನಾತ ಪಡೆದನುಒಲಿದು ನೀನಿತ್ತ ಪುತ್ರನು ಸುಖದಿಂದೀ ಭೂವಲಯವನಾಳಿಕೊಂಡಿರುವಂತೆ ವರ'ತ್ತು 2ಶರಣಾಗತಜನ ರಕ್ಷಣೆಗೈಯುತವರ ಮಹಾಬಲಗಿರಿಯೋಳು ನಿಂದು ಮೆರೆಯುವೆತರಳ ನಾರಾಯಣದಾಸನ ಬಿನ್ನಪವಕರುಣದಿಂ ಸಲಹು ವೆಂಕಟರಮಣ ಸೋದರಿ 3
--------------
ನಾರಾಯಣದಾಸರು
ಜಗದಂಬಿಕೆ ಪೊರೆ | ಭವಾನಿ | ಅಘಸಂಹರೆ | ಲೋಕೈಕ ಮಾತೆ ಪ. ಪರಮ ಪಾವನೆ | ಗೌರಿ ಮನೋಹರೆ || ಪರಮೇಶ್ವರಿ | ಕರುಣಾಕರೆ ಶ್ರೀಅ.ಪ. ಸುಂದರಾಂಗಿಯೆ || ಚಂದದೀ ಪೊರೆ | ಚಂದ್ರಚೂಡಪ್ರಿಯೆ1 ಆದಿಶಕ್ತಿ ದೇವಿ ಆದಿನಾರಾಯಣಿ | ಮೋದದೀ ಪೊರೆ | ಮೋದದಾಯಕಿಯೆ2 ಶಂಖಚಕ್ರಧರೆ | ಕಿಂಕರಪ್ರಿಯಕರೆ || ವೆಂಕಟೇಶನಾ | ಸೋದರಿ ಶಂಕರಿ3
--------------
ವೆಂಕಟ್‍ರಾವ್
ದೇವಿ ಪಾಲಿಸು| ಅಂಬ| ದೇವಿ ಪಾಲಿಸು ಪ ದೇವಿ ಪರಮಪಾವನೆ ಶಂಕರಿ ಅ.ಪ ಸುರರ ಮೊರೆಯನಾಲಿಸುತಲಿ| ದುರುಳನಾದ ಅರುಣಾಸುರನ ಹರಣ ಹೀರಿ ಮೆರೆವನುಪಮ| ಚರಿತೆ ಎನ್ನಿಷ್ಟಾರ್ಥವೀಯುತ 1 ನಂದಿನಿನದಿಯ ಮಧ್ಯದಿ ನೆಲೆಸಿ | ಬಂಧುಭಾವದಿಂದ ಶರಣ|| ವೃಂದವನ್ನಾನಂದದಿಂದ | ಕಂದರಂತೆ ಸಲಹುತಿರುವೆ 2 ವಿಮಲಚರಿತೆ ಸುಗುಣಭರಿತೆ| ಅಮರವಿನುತೆ ಲೋಕಮಾತೆ|| ಕ್ಷಮಿಸುತೆನ್ನಪರಾಧಗಳನು| ಕಮಲನೇತ್ರೆ ಪರಮಮಂಗಳೆ3 ನಿನ್ನ ಹೊರತು ಪೊರೆವರಿಲ್ಲ| ನಿನ್ನ ಭಜಿಸುತಿರುವೆನಲ್ಲ|| ಎನ್ನನು ಪೊರೆವ ಭಾರವೆಲ್ಲ| ನಿನ್ನ ಪದಕೊಪ್ಪಿಸಿದೆನಲ್ಲ 4 ಪಂಕಜಾಕ್ಷಿ ಪಾಪರಹಿತೆ| ಕಿಂಕರಜನನಿ ಶಂಕರಪ್ರಿಯೆ|| ಶಂಖಚಕ್ರಧಾರಿಣಿ ದೇವಿ| ವೆಂಕಟರಮಣನ ಸೋದರಿ ಶಂಕರಿ5
--------------
ವೆಂಕಟ್‍ರಾವ್