ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಜನೇ ಎನ್ನ ಪರಿಪಾಲಿಪುದ ಬಿಟ್ಟು ವರ ಮಂತ್ರಾಲಯದೊಳಿರುವುದುಚಿತವೇನೋ ಪ ಬಡ ಭಕ್ತನನು ಕಷ್ಟ ಕಡಲೊಳಿರಿಸಿ ತುಂಗಾ ದಡದಿನಿಂತೆನ್ನ ಕೈ ಬಿಡುವುದುಚಿತವೇನೋ 1 ಅಡಿ ಸೇವಕನೊಳಿಂಥಾ ಕಡು ಕೋಪವ್ಯಾತಕೋ ನುಡಿ ನುಡಿಗೆನ್ನ ತಪ್ಪು ಹಿಡಿದು ಪೋಗುವರೇನೊ 2 ಒಡೆಯ ಶ್ರೀ ಹನುಮೇಶವಿಠಲನ ದಾಸನೇ ಬಡವನಿರುವೆನೆಂದು ನೋಡದಿರುವರೇನೊ 3
--------------
ಹನುಮೇಶವಿಠಲ
ಪರದೇಶಿ ನೀನು ಸ್ವದೇಶಿ ನಾನು ಪ ಪರಮ ಭಾಗವತರ ಬಾ ಹೋಗಿ ಕೇಳೋಣಅ ಎನಗೆ ಜನಕನು ನೀನು ನಿನಗಾವ ಜನಕನೊ ಜನನಿ ಇಂದಿರೆದೇವಿ ನಿನಗಾವಳೊ ವನಜಪೀಠನು ಭ್ರಾತ ನಿನಗಾವ ಭ್ರಾತನೊ ಇನ ಸೋಮ ಮಾತುಳರು ನಿನಗಾವ ಮಾತುಳನೊ 1 ಸುರನದೀ ಅಗ್ರಜಳು ನಿನಗೆ ಅಗ್ರಜಳಾರು ಶರನಿಧಿ ಭಾವ ನಿನಗಾರು ಭಾವ ಸ್ಮರನು ಕಿರಿ ಸಹಭವನು ನಿನಗೆ ಸಹಭವನಾರೊ ಸುರರು ಬಂಧುಗಳೆನಗೆ ನಿನಗಾರು ಬಾಂಧವರೊ 2 ವರ ಇಳಾ ಸಾಮಾತೆ ನಿನಗೆ ಸಾಮಾತೆ ಯಾರೊ ಮರುತ ದೇವರು ಗುರು ನಿನಗಾರು ಗುರುವೊ ಸಿರಿಯರಸ ವಿಜಯವಿಠ್ಠಲರೇಯನೆ ನಿನ್ನ ಚರಣ ಸೇವಕ ನಾನು ನೀನಾರ ಸೇವಕನೊ 3
--------------
ವಿಜಯದಾಸ
ಯತಿಗಳು ಶ್ರೀಜಯತೀರ್ಥರು ಕರುಣಿಸೊ ಜಯರಾಯಾ ಗುರುವರ್ಯ ಚರಣವೆ ಗತಿಯಯ್ಯ ಹೇ ಜಿಯಾ ಪ ರಘುನಾಥನ ಪುತ್ರ ಪವಿತ್ರ ರಾಘವನ ಪ್ರೀತಪ್ರಾತ್ರ ಚರಿತ್ರ ಮಘವನಾ ನೀ ನಘದೂರ ಶ್ರೀ ರಘುರಾಮನ ಕಿಂಕರನ ಅಮೋಘ ಸೇವಕನೊ 1 ಕುಕರ್ವಿಣಿಯ ತೀರಾ ಘೋರಕುವಾದಿಗಳ ಕು ಲಕುಠಾರ ಗಂಭೀರ ಸಕಲಶಾಸ್ತ್ರಸತ್ಸಾರ ಟೀಕಕರ ಕುಕವಿಶೃಗಾಲಕುಲಕಾಲಭಯಂಕರ 2 ಎರಗೋಳಾದ್ರಿಯೊಳು ಗುಹೆಯೊಳು ನಿರುತ ಪ್ರವಚನಗಳು ನಿತ್ಯದೊಳು ಮರುತಮತಾಂಬುಧಿಚಂದಿರ ಸುಂದರ ವರಸುಜ್ಞಾನಮಣಿಕಿರಣವ ತೋರಿದೆ 3 ಗುರು ಮಧ್ವಮುನಿ ತತ್ತ್ವಗ್ರಂಥದ ಕ್ಷೀರಶರಧಿಗೆ ಮಂಥಾ ವುನ್ನಂಥಾ ಮರುತನನುಗ್ರಹ ಪ್ರಗ್ರಹದಿಂದಲಿ ವರಮಥನದಿ ಇತ್ತೆ ಅಮೋಘವಸ್ತುಗಳೆಲ್ಲಾ4 ಉತ್ತಮ ಗ್ರಂಥವನಧೀ ಮಥನದಿ ಉತ್ತಮ ವಸ್ತುಗಳನಿತ್ತೆಯೊ ತತ್ತ್ವಪ್ರಕಾಶಿಕಾ ಮಹಾಲಕುಮಿಯು ಚಂದಿರನೇ ಪ್ರಮೇಯದೀಪಿಕಾ ಸುಧೆಯೇ ನ್ಯಾಯಸುಧಾಗ್ರಂಥ ಶ್ರೀ ಕೌಸ್ತುಭದಂತಿಹ ನ್ಯಾಯದೀಪಿಕಾ 5 ದುರುಳ ಮಾಯಾಖಂಡ ನಾಯುಧವೂ ಸರ್ವಜೀಯನೆ ಐರಾವತದಂತೆ ಋ ಗ್ಭಾಷ್ಯಟೀಕಾ ನ್ಯಾಯವಿವರಣವು ಉಚ್ಛೈಶ್ರವಸ್ಸು 6 ಕರ್ಮನಿರ್ಣಯ ಟೀಕಾ ವಜ್ರಾಯುಧ ಆ ಮಹಾಪಾರಿಜಾತ ವಿಖ್ಯಾತಾ ಶ್ರೀಮದ್ವಿಷ್ಣು ತತ್ತ್ವ ನಿರ್ಣಯ ಟೀಕೆಯು ಕಲ್ಪವು ಉಪನಿಷತ್ ಭಾಷ್ಯ ಟೀಕೆಯು 7 ಈಶಾವಾಸ್ಯ ಭಾಷ್ಯ ಟೀಕಾ ಸಂತಾನವೆಂಬೋ ಮಹಾವೃಕ್ಷಾ ಪ್ರ ಬಿಸಜ ಮಂದಾರ ಪ್ರಮಾಣ ಪದ್ಧÀ್ದತಿ ಹರಿಚಂದನಕೆ ಸಮನಾದ ವಾದಾವಳಿ 8 ಪಾಕಶಾಸನಾಂಶಾ ಕರುಣಿಸು ಶ್ರೀಕರಪದಪಾಂಸ ಯತೀಶಾ ನಾರ ಪತಿಯೆ ಶ್ರೀಕಾಗಿನೀ ತೀರದಿ ಏಕಾಂತದಿ ನಿಂದೆ ಲೋಕ ವಂದಿತ ದೇವಾ 9 ಮಂದಭಾಗ್ಯಜನರಾ ಪರಮಾ ನಂದದಿಂದಲಿ ನೋಡಿ ದಯಮಾಡಿ ತಂದೆಯಂದದಿ ಕಾಯ್ದಾನಂದವೀವೆ ನಿತ್ಯಾ10 ಪರಮಪಾತಕಿ ನಾನು ಗುರುವೆ ತವ ಪಾ ದ ರಕ್ಷಕವಚವ ತೊಡಿಸೊ ಉಳಿಸೋ ನಿರುತ ಶರಣರ ಕಾಯ್ವ ಶ್ರೀ ವೆಂಕಟೇಶನ ಪ್ರೀಯಾಉರಗಾದ್ರಿವಾಸವಿಠಲನ ದಾಸಾ 11
--------------
ಉರಗಾದ್ರಿವಾಸವಿಠಲದಾಸರು
ಯಾಕೆ ಬರವಲ್ಲಿ ಭಕುತನವಸರಕೆ ಪ ಬೇಕಿಲ್ಲೆ ಭಕ್ತವತ್ಸಲನೆಂಬ ಬಿರುದೀಗ ಅ.ಪ ಸುರಮುನಿ ನುಡಿಕೇಳಿ ನಾರಿ ಸತ್ಯಭಾಮೆ ಹರಿ ನಿನ್ನ ದಾನಮಾಡೆ ವರ ವೀಣ ಪುಸ್ತಕ ಹೊರಿಸಿ ಕರೆದೊಯ್ದನೇನೊ 1 ಮಾತೆಯ ಹಂಗಣೆಯ ಮಾತಿಗೆ ಖತಿಗೊಂಡು ಪೋತ ಧ್ರುವ ಅರಣ್ಯ ಪೋಗೆ ಕಾಯ ಪೋದ್ಯಾ 2 ಕುರುಪ ಧರ್ಮಾದ್ಯರ ಕರೆಸಿ ಪಗಡೆಯಾಡೆ ಸರಸಿಜಾಕ್ಷಿಯ ಸೀರೆಯ ಕಾಯ ಪೋದ್ಯಾ 3 ಹಿರಣ್ಯಾಕ್ಷನನುಜ ತರಳನ ಬಾಧಿಸೆ ಥೋರ ಕಂಬದಿ ಒಡೆದು ನರಮೃಗ ರೂಪನಾಗಿ ಪೋದ್ಯಾ 4 ನೀರಡಿಸಿ ಗಜರಾಜ ಸರೋವರಕೆ ಬರಲು ನಕ್ರ ಪಿಡಿದೆಳೆಯೆ ಕಾಯ ಪೋದ್ಯಾ 5 ವರವೇದ ಶಾಸ್ತ್ರ ತೊರದು ಪರಮ ನೀಚಳ ಕೂಡಿ ಮರಣ ಕಾಲದಲ್ಲಜಮಿಳ ನಾರಗನೆಂದು ಕರೆಯೆ ಪೋದ್ಯಾ 6 ಕರುಣಿ ವಿಜಯ ರಾಮಚಂದ್ರವಿಠಲ ಅವರ ಸರಿ ನಾನಲ್ಲವೊ ತವ ಚರಣ ಸೇವಕರ ಸೇವಕನೊ 7
--------------
ವಿಜಯ ರಾಮಚಂದ್ರವಿಠಲ
ಶ್ರೀ ರಾಘವೇಂದ್ರರು ಗುರುರಾಜರೆ ಎನ್ನ ಪರಿಪಾಲಿಸುವುದು ಬಿಟ್ಟುವರ ಮಂತ್ರಾಲಯದೊಳು ಇರುವುದುಚಿತವೇನೊ ಪ ಬಡವ ಭಕ್ತ ಕಷ್ಟಕಲೊಳಿರಿಸಿ ತುಂಗಾದಡದಿ ನಿಂತೆನ್ನ ಕೈಪಿಡಿಯದೆ ಪೋಗುವರೇನೊ 1 ಕಡು ಸೇವಕನೊಳಿಂಥ ಕಡುಕೋಪವ್ಯಾತಕೆನಡೆ ನುಡಿ ಎನ್ನ ತಪ್ಪು ಪಿಡಿದು ಪೋಗುವರೇನೊ 2 ಎಂದಿಗಾದರು ನಿನ್ನ ಪೊಂದಿದವನಲ್ಲೋಮುಂದೇನುಗತಿ ಪೇಳೊ ಇಂದಿರೇಶನ ಪ್ರಿಯ 3
--------------
ಇಂದಿರೇಶರು