ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೋ ಕೃಷ್ಣ ಕರುಣಿಸೊ | ಕರುಣಿಸಿದರೆ ನಾ ನಿನ್ನನೆಂದಿಗು ಮರೆಯ ಪ ಭೂತಳದೊಳು ನಾನು ಈ ತನುವುತೆತ್ತು | ಪಾತಕದಲಿ ಯಮಯಾತನೆ ಪಟ್ಟೆ 1 ಇಂದೆನ್ನ ಹೃದಯವೆಂಬೊ ಮಂದಿರದೊಳು | ಇಂದಿರೆ ರಮಣ 2 ಹಿಂದಿನ ಅವಗುಣ ಒಂದೂ ಎಣಿಸದೆ | ಮುಂದೆ ದೋಷಕ್ಕೆ ಮನವೆರಗಿಸದೆ 3 ಪಾಪ ಪುರುಷನೆಂಬೊ ಪಾಪಿಯ ಕೈಗೆ | ಪೋಪಗೊಡದೆ ಎನ್ನ ಕಾಪಾಡೊ ರನ್ನ 4 ಅಂತ್ಯಕಾಲದಲಿ ಅಂತಕರು ಬಂದು | ನಿಂತಾಗಲಿ ನಿನ್ನ ಚಿಂತೆ ಒದಗಲಿ 5 ಕನಸಿನೊಳಗೆ ನಿನ್ನ ನೆನಸಿಕೊಂಬಂತೆ | ಮನಸು ಸುಸ್ಥಿರವಾಗಲಿ ಅನುಗಾಲವಿರಲಿ 6 ಇದ್ದಾಗ ದಾಸರದಾಸನೆನಿಸೊ ಬೇಗ | ಸಿರಿ ವಿಜಯವಿಠ್ಠಲ ಕರುಣಿಸೊ 7
--------------
ವಿಜಯದಾಸ
ಶ್ರೀಪತಿಯು ನಮಗೆ ಸಂಪದವೀಯಲಿ - ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ ಪ.ಸುರರ ಗಣವನು ಪೊರೆಯೆ ವಿಷವ ಕಂಠದಲಿಟ್ಟಹರನಿತ್ಯ ನಮಗೆ ಸಹಾಯಕನಾಗಲಿಸರರೊಳುನ್ನತವಾದನಿತ್ಯ ಭೋಗಂಗಳನುಪುರುಹೂತಪೂರ್ಣ ಮಾಡಿಸಲಿ ನಮಗೆ1ವಿನುತ ಸಿದ್ಧಿಪ್ರದನು ವಿಘ್ನೇಶ ದಯದಿಂದನೆನೆದ ಕಾರ್ಯಗಳೆಲ್ಲ ನೆರವೇರಿಸಲಿದಿನದಿನದಿ ಅಶ್ವಿನಿಗಳಾ¥ತ್ತುಗಳ ಕಳೆದುಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ 2ನಿರುತ ಸುಜ್ಞಾನವನುಈವ ಮಧ್ವರಾಯ |ಗುರುಗಳಾಶೀರ್ವಾದ ನಮಗಾಗಲಿಪುರಂದರವಿಠಲನ ಕರುಣದಿಂದಲಿ ಸಕಲಸುರರೊಲುಮೆ ನಮಗೆ ಸುಸ್ಥಿರವಾಗಲಿ 3
--------------
ಪುರಂದರದಾಸರು
ಶ್ರೀಪತಿಯು ನಮಗೆ ಸಂಪದವೀಯಲಿ ವಾ-ಣೇಪತಿಯು ನಮಗೆ ದೀರ್ಘಾಯು ಕೊಡಲಿ ಪಸುರರ ಗಣವನು ಪೊರೆಯ ವಿಷವ ಕಂಠದಲಿಟ್ಟಹರನಿತ್ಯನಮಗೆ ಸಹಾಯಕನಾಗಲಿ ||ನರರೊಳುನ್ನತವಾದ ನಿತ್ಯಾಭೋಗಂಗಳನುಪರಹೂತ ಪೂರ್ಣ ಮಾಡಸಲಿ ನಮಗೆ 1ವಿನೂತಸಿದ್ದಿಪ್ರದನು ವಿಘ್ನೇಶ ದಯದಿಂದನೆನದ ಕಾರ್ಯಗಳೆಲ್ಲ ನೆರವೇರಿಸಲಿ ||ದಿನ ದಿನದಿ ಅಶ್ವಿನಿಗಳಾಪತ್ತುಗಳ ಕಳೆದುಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ 2ನಿರುತ ಸುಜಾÕನವನುಈವಮಧ್ವರಾಯಗುರುಗಳಾಶೀರ್ವಾದ ನಮಗಾಗಲಿ ||ಪುರಂಪರ ವಿಠಲನ ಕರುಣದಿಂದಲಿ ಸಕಲಸುರರೊಲುಮೆ ನಮಗೆ ಸುಸ್ಥಿರವಾಗಲಿ 3
--------------
ಪುರಂದರದಾಸರು