ಒಟ್ಟು 25 ಕಡೆಗಳಲ್ಲಿ , 15 ದಾಸರು , 25 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಳಗೆ ಹೊರಗೆ ಓಡಾಡುವ ಉತ್ತಮಳಾರು ಹೇಳೆಬಳಿಕ ಹೇಳುವೆ ಬಹಳ ಭಾಗ್ಯ ಬಗಳಾಂಬ ಕೇಳೇ ಪ ಸರಿ ವಾಲೆ ಕಪ್ಪನ್ನಿಟ್ಟು ವಜ್ರಗಳ ಸರವನೆ ಹಾಕಿಪರಮಾನಂದಪಡಿಸುತಿಹ ಪಂಡಿತಳಾರು ಹೇಳೆದುರುಳ ಮಹಿಷಾಸುರನ ಕೊಂದು ಮರಳಿ ಚಿದಾನಂದನಲ್ಲಿಸ್ಥಿರವ ಮಾಡಿಯಿಹಳು ಬಹಳ ಶಿಷ್ಟಳು ಕೇಳೇ 1 ಪಿಲ್ಲಿ ಮಂಟಿಕೆ ಗೆಜ್ಜೆಯನಿಟ್ಟುಘುಲ್ಲು ಘುಲ್ಲು ಹೆಜ್ಜೆಯನಿಕ್ಕುತಪಲ್ಯ ಕಾಯ ವಾಸವ ಮಾಡಿಹ ಬಗಳ ಮಹಿಮಳು ಕೇಳೇ 2 ದುಂಡು ಮುತ್ತ ಕಟ್ಟಿ ಹೇಮಗುಂಡು ಸರವೊಲೆವುತಮಂಡಿಗೆಯ ಹಿಡಿದು ಬಡಿಸುತಿಹ ಉದ್ದಂಡಳಾರು ಹೇಳೆಚಂಡ ಮುಂಡರ ಶಿರವ ಖಂಡಿಸಿ ಚಿದಾನಂದನಲಿ ಅ-ಖಂಡ ವಾಗಿಹಳು ಬಗಳ ಪುಂಡಳು ಕೇಳೇ3 ಹೊನ್ನ ಕಡಗ ಸೀರೆಯುಟ್ಟು ಚೆನ್ನ ರತ್ನದ ಕುಪ್ಪಸ ತೊಟ್ಟುಅನ್ನವ ಹಿಡಿದು ಬಡಿಸುತಿಹ ಮಾನ್ಯಳು ಯಾರು ಹೇಳೇಕುನ್ನಿ ದುರ್ಜನರ ಛೇದಿಸಿ ಚಿದಾನಂದ ಗುರುವಬೆನ್ನು ಕಾದು ಬಿಡದೆ ಇಹಳು ಬಗಳಾಂಬ ಕೇಳೇ 4 ನಿತ್ಯಾತ್ಮ ಚಿದಾನಂದನಲ್ಲಿ ನಿಲುಗಡೆಯಿಲ್ಲದೆ ಓಡಾಡುತಸುತ್ತಮುತ್ತ ಸುಳಿದಾಡುವ ಸೂಕ್ಷ್ಮಳಾರು ಹೇಳೇಕರ್ತೃವಾಗಿ ತತ್ವವ ಕೇಳುತ ಚಿದಾನಂದನಲಿ ವಾಸವಮಾಡುವ ಮಹಾಮಾಯಿ ಬಗಳೆ ಪಾರುಪತ್ಯಳು ಕೇಳೇ5
--------------
ಚಿದಾನಂದ ಅವಧೂತರು
ಆಧ್ಯಾತ್ಮ ಹೆಚ್ಚೇನು ಅವಿದ್ಯೆ ಕಡಿಮೆಯೇನುಆಧ್ಯಾತ್ಮ ವಿದ್ಯೆಯದು ಅನುಭವಿಸಲರಿಯದವಗೆ ಪ ಪುಸ್ತಕಂಗಳ ಪಿಡಿದು ಪುಸ್ತಕದೊಳಿದ್ದುದನುವಿಸ್ತಿರಿಸಿ ಎಲ್ಲರಿಗೆ ಹೇಳುತಿಹನುಪುಸ್ತಕದ ಅರ್ಥವನು ಮನಕೆ ತಾರದಲೆಪುಸ್ತಕದ ಅಕ್ಷರವ ಪೇಳುವವಗೆ1 ಜ್ಞಾನವನು ಹೇಳುತಿಹ ಜ್ಞಾನವನು ತಾನರಿಯಜ್ಞಾನಿಗಳ ನಡೆಯನು ಮೊದಲೆ ತಿಳಿಯಜ್ಞಾನಿಗಳನೇ ಕಂಡು ಜ್ಞಾನವಿಲ್ಲೆಂದೆಂಬಜ್ಞಾನಿ ತಾನೆಂತೆಂದು ಬರಿ ಬಣ್ಣಿಸುವಗೆ 2 ಸುಳಿ ಸುಳಿದಾಡುತಸಾಧಿಸದೆ ಪುಣ್ಯ ಪುರುಷರ ನೆಲೆಯ ತಿಳಿಯದಲೆದೇವ ತಾನೆಂದು ಬರಿ ಬೋಧಿಸುವವಗೆ 3 ಯೋಗೀಶ್ವರರ ಕಂಡು ಯೋಗದಿಂದೇನೆಂಬಯೋಗವಳವಟ್ಟ ತೆರನಂತೆ ನುಡಿದಯೋಗಾಮೃತದ ಪೂರ್ಣರಸವ ಸವಿದುಣ್ಣದೆಲೆಯೋಗಿ ತಾನೆಂದು ಬರಿ ತೋರುತಿರುವವಗೆ 4 ಮಾಡಿದಡೆ ಬಹದಲ್ಲ ಕೇಳಿದಡೆ ಬಹದಲ್ಲಆದರಿಸಿ ಒಬ್ಬರಿಗೆ ಹೇಳಿದಡೆ ತಾ ಬರದುಸಾಧಿಸಿಯೆ ಮನನದಭ್ಯಾಸದಿಂ ದೃಢವಾಗಿವಾದಹರ ಚಿದಾನಂದ ತಾನಾದರಲ್ಲದೆ5
--------------
ಚಿದಾನಂದ ಅವಧೂತರು
ಆವಾವ ಬಗೆಯಿಂದ ಹರಿಗರ್ಪಿಸೊ ಭಾವ ಶುದ್ಧನಾಗಿ ಮುಖ್ಯತ್ವ ವಹಿಸದೆ ಪ ನೋಡುವ ನೋಟಗಳು ಹರಿಯೆ ನೋಡಿದನೆನ್ನಿ ಆಡುವ ಮಾತುಗಳು ಹರಿಯೆ ಆಡಿದನೆನ್ನಿ 1 ನಡಿವ ನಡಿಗೆ ಎಲ್ಲ ಹರಿಯೆ ನಡೆದನೆನ್ನಿ ಕೊಡುವ ದಾನಗಳು ಹರಿಯೆ ಕೊಟ್ಟನೆನ್ನಿ ಒಡನಾಡುವ ಲೀಲೆ ಹರಿಯೆ ಆಡಿದನೆನ್ನಿ ಪಿಡಿವ ಚೇಷ್ಟೆಗಳೆಲ್ಲ ಹರಿಯೆ ಪಿಡಿದನೆನ್ನಿ 2 ಕೇಳುವ ಶಬ್ದಗಳು ಹರಿಯೆ ಕೇಳಿದನೆನ್ನಿ ಹೇಳುವ ವಿಧವನಿತು ಹರಿಯೆ ಎನ್ನಿ ಮಾಲೆ ಧರಿಸುವುದು ಹರಿಯೆ ಧರಿಸಿದನೆನ್ನಿ ಮೇಲು ಸುಖ ಬಡುವುದು ಹರಿಯೆ ಎನ್ನಿ3 ಕೊಂಡ ಎನ್ನಿ ಭೂಷಣವಿಡುವುದು ಹರಿಯೆ ಎನ್ನಿ ಲೇಸು ಬಯಸುವುದು ಹರಿಯೆ ಬಯಿಪನೆನ್ನಿ ಗ್ರಾಸ ಮೆಲುವದೆಲ್ಲ ಹರಿಯೆ ಎನ್ನಿ 4 ಸತಿಯ ಕೂಡುವದೆಲ್ಲ ಹರಿಯೆ ಕೂಡಿದನೆನ್ನಿ ಹಿತವಾಗಿಪ್ಪದು ಹರಿಯೆ ಎನ್ನಿ ಸುತರ ಪಡೆದಾದಲ್ಲಿ ಹರಿಯೆ ಪಡೆದನೆನ್ನಿ ಪ್ರತಿಕೂಲವಾಗುವುದೆ ಹರಿಯೆ ಎನ್ನಿ 5 ಬಳಗ ಸಾಕುವುದೆಲ್ಲ ಹರಿಯೆ ಸಾಕಿದನೆನ್ನಿ ಸುಲಭನಾದರೆ ಹರಿಯಾದನೆನ್ನಿ ಗಲಭೆ ಮಾಡುವುದೆಲ್ಲ ಹರಿಯೆ ಮಾಡಿದನೆನ್ನಿ ಸುಳಿದಾಡುವುದೆಲ್ಲ ಹರಿಯೆ ಎನ್ನಿ 6 ಏನೆಂಬೆ ಹರಿ ಲೀಲೆ ನಿರ್ದೋಷ ನಿಸ್ಸಂಗ ಅನಂತಕಾಲಕ್ಕೂ ಎಲ್ಲಿದ್ದರು ಕಾಯ ವಿಜಯವಿಠ್ಠಲರೇಯ ನಾನಾ ವ್ಯಾಪಾರಗಳ ಮಾಳ್ಪನೆನ್ನಿ 7
--------------
ವಿಜಯದಾಸ
ಕಂಡೆವಯ್ಯ ನಿಮ್ಮ ಗುರುಪುಣ್ಯ ಚರಣಮಹಿಮೆ ಮಂಡಲದೊಳು ಗುರುಕೃಪೆಯಿಂದ ದ್ರುವ ಕಣ್ಣಮುಚ್ಚಿದರೆ ತಾ ಕಣ್ಣನೊಳಗದೆ ಕಣ್ದೆರದರೆ ಕಾಣಿಸುತದೆ ಸಣ್ಣ ದೊಡ್ಡದರೊಳು ತುಂಬಿತುಳುಕುತದೆ ಬಣ್ಣ ಬಣ್ಣದಲೆ ಭಾಸುತಲ್ಯದೆ 1 ಆಲಿಸಿಕೇಳಲು ಹೇಳಗುಡುತಲ್ಯದೆ ತಾಳಮೃದಂಗ ಭೇರಿ ಭೋರಿಡುತ ಒಳಹೊರಗೆ ಧಿಮಿಧಿಮಿಗೊಡುತಲ್ಯದೆ ಹೇಳಲಿನ್ನೇನು ಕೌತುಕವ 2 ಸುಳಿ ಸುಳಿದಾಡುತಹೊಳೆಯುತ ಎನ್ನೊಳಗೆ ಥಳಥಳಿಸುವ ತೇಜ:ಪುಂಜವಿದು ಪರಿ ಕಳೆದೋರುತಲ್ಯದೆ ಝಳಝಳಿಸುತ ಎನ್ನ ಮನದೊಳಗೆ 3 ತುತ್ತಾಯಿತಾ ಮಾಡಿನಿತ್ಯ ಸಲುಹುತದೆ ಎತ್ತಹೋದರೆ ತನ್ನಹತ್ತಿಲ್ಯದೆ ದತ್ತವುಳ್ಳವಗೆ ತಾ ಪ್ರತ್ಯಕ್ಷವಾಗ್ಯದೆ ಮೊತ್ತವಾಗ್ಯದೆ ತನ್ನ ನೆತ್ತಿಯೊಳಗೆ 4 ಧನ್ಯಗೈಸಿತು ಎನ್ನ ಪ್ರಾಣ ಜೀವನವಿದು ಚೆನ್ನಾಗಿ ಪೂರ್ಣ ಗುರುಕೃಪೆಯಿಂದ ಕಣ್ಣಾರೆ ಕಂಡೆ ಭಾನು ಕೋಟಿಪ್ರಕಾಶ ನಿಮ್ಮ ಧನ್ಯಧನ್ಯವಾದ ಮಹಿಪತಿಯು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸಿ ಪಿಡಿಯಾ ಕೈಯ್ಯಾ | ಗುರುರಂಗವೊಲಿದರಾಯ ಪ ನಂಬಿದೆ ನಿನ್ನ ಚರಣ | ಬೆಂಬಿಡದೆ ಕಾಯೋ ಸತತ ಸ್ತಂಭದಲಿ ನೆಲಸಿದಂಥ | ಕುಂಭಿಣಿಪ | ದಾಸವರ್ಯ 1 ದೀನರ್ಗೆ ದಿವಿಜಧೇನು | ನೀನೆಂದು ಕ್ಷೋಣಿ ತಳದಿ ಜ್ಞಾನಿಗಳು ಪೇಳಿದಂಥ ವಾಣಿಯನು ಸತ್ಯಮಾಡೊ 2 ನಿನ್ನ ಸ್ಥಳವು ಪುಣ್ಯಕ್ಷೇತ್ರ | ನಿನ್ನಲ್ಲಿ ಸಕಲ ತೀರ್ಥ ನಿನ್ನ ಕವನ ಮಧ್ವಶಾಸ್ತ್ರ | ನಿನ್ನವನು ನಿಜಕೃತಾರ್ಥ3 ಹರಿದಾಡುವಂಥ ಮನಸು | ಹರಿಯಲ್ಲಿ ಸ್ಥಿರವಗೊಳಿಸೊ ಹರಿನಾಮ ಸುಧೆಯ ಕುಡಿಸೊ | ಹರಿವರನ ಮತವ ಪಿಡಿಸೊ 4 ಮತಿಭ್ರಷ್ಟನಾಗಿ ನಿನ್ನ ಕೃತಿಗಳನು ಪಾಡದ್ಹೋಗಿ ಕ್ಷಿತಿ ಭಾರನಾದೆ ಮುಂದೆ ಗತಿ ತೋರಿ ಸಲಹೊ ತಂದೆ 5 ಹೆತ್ತವರು ಸುತನ ದೋಷ | ಕೃತ್ಯಗಳ ಕ್ಷಮಿಸದಿಹರೆ ಚಿತ್ತೈಸು ಎನ್ನ ಮಾತ | ಉತ್ತಮರ ಸಂಗವಿತ್ತು 6 ತಳೆದೇಳು ಜನುಮಗಳಲಿ | ಇಳೆಯೊಳಗೆ ಚರಿಪ ಸಮಯ ಸುಳಿದಾಡು ಮತ್ತೊಮ್ಮೆ ಘೋರ ಕಲಿಬಾಧೆ ತಪ್ಪಿಸಯ್ಯ 7 ಮಾನವಿಯ ಸ್ಥಾನದಲ್ಲಿ | ನೀನಿರಲು ನಿನ್ನ ಮರೆದು ಮೋದ 8 ಕಂದರ್ಪಜನಕ ಶಾಮಸುಂದರ ಮೂರ್ತಿಹೃದಯ ಮಂದಿರದಿ ತೋರೋದಾತ ವಂದಿಸುಎ ನಿನ್ನ ಪದಕೆ 9
--------------
ಶಾಮಸುಂದರ ವಿಠಲ
ನಮ್ಮ ಕುಲದೈವೀತ ಬೊಮ್ಮನ ಪಡೆದಾತ ಸಾಮಗಾಯನ ಪ್ರೀತ ಸ್ವಾಮಿನೀತ ಧ್ರುವ ವೇದ ಉದ್ಧರನೀತ ಮೇದಿನಿಯ ಪೊತ್ತಾತ ಸಾಧುಜನ ವಂದಿತ ಸದ್ವಸ್ತುನೀತ 1 ಧಾರುಣಿಯ ಗೆದ್ದಾತ ತರಳಗೊಲಿದಹನೀತ ದಾತ ಕರುಣಿ ಈತ 2 ಮೂರು ಪಾದಳಿದಾತ ಪರಶುಧರನಹುದೀತ ಸುರಜನರ ಪೂಜಿತ ಸರ್ವೋತ್ಮನೀತ 3 ಪವನಸುತಗೊಲಿದಾತ ಮಾವನ ಮಡುಹಿದಾತ ಭುವನತ್ರಯಲೀತ ದೇವನೀತ 4 ಬೆತ್ತಲೆಯು ಸುಳಿದಾತ ಉತ್ತಮ ಹಯವನೇರಿದಾತ ಭಕ್ತರಿಗೆ ಹೊರೆವಾತ ಶಕ್ತನೀತ 5 ಅಣುರೇಣುದೊಳೀತ ಅನುಕೂಲವಾದಾತ ಆನಂದೋ ಬ್ರಹ್ಮ ಅನಂತನೀತ 6 ಮಹಾಮಹಿಮನಹುದೀತ ಬಾಹ್ಯಾಂತ್ರಪೂರಿತ ಮಹಿಪತಿಯ ಸಾಕ್ಷಾತ ವಸ್ತುನೀತ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿತ್ಯ ನಿರುಪಮ ಚಿದಾನಂದ ಕರುಣಾಬ್ಧಿ ನೀನೆ ದೊರಕೆ ನಿಲುಕೆ ಅಪಮಂಗಳನೆ ಮಂಗಳವನಿತ್ತೆ ಮನಸಿಗೆ ನೀನು ಅಂಗ ಮಂಗಳವಾುತುಹಿಂಗಿದವು ದುರಿತಗಳು ಸಂಗವಿದ್ದರು ಜಡದ ತೊಂಗವವ ಮನ ಮೀರಿತುನುಂಗುತಿದೆ ದೋಷಗಳ ಬಂದಡೊಡಬನ ತೆರದಿ ಭಂಗವೆಂಬುದು ಹೋುತುಅಂಗ ಲಿಂಗದ ಕಾಂತಿ ಹೊಂಗಿ ಹೊರಹೊಮ್ಮುತಿದೆ ರಂಗ ನಿನ್ನೊಲವಾುತು ುನಿತು 1ಹೊನ್ನಿನೊಳಗಿದ್ದ ಮಲಿನವನಗ್ನಿ ಕಳಚಿದರೆ ಮುನ್ನಿನಂದದಿ ಮಲಿನವೆಹೊನ್ನಾದ ಕಬ್ಬಿನವು ಕಬ್ಬಿನದ ಸಂಗದಲಿುನ್ನು ಕಬ್ಬಿನ ಭಾವವೆಬೆಣ್ಣೆ ಕ್ಷೀರದಿ ಬಂದು ಘೃತವಾದ ಬಳಿಕ ತಾ ಬೆಣ್ಣೆಯಲ್ಲದೆ ಕ್ಷೀರವೆನಿನ್ನ ಕೃಪೆುಂದ ಮಂಗಳನಾಮವನು ಸ್ಮರಿಸೆ ನಿನ್ನವಗೆ ದೋಷ ಬಹವೆ ಇಹವೆ 2ಬಾಳೆಯನು ಬಿತ್ತಿ ಪ್ರತಿ ದಿವಸ ನೋಡಿದಡಲ್ಲಿ ನೀಳವಾಗಿಹುದು ಸುಳಿಯುಕಾಲ ಬಂದರೆ ಗೊನೆಯು ಹಾಯ್ದು ಫಲವಾಗಿರಲು ಮೇಲೊಮ್ಮೆಯುಂಟೆ ಯೆಲೆಯುಕಾಲ ಕರ್ಮಾಧೀನವಾಗಿರುವ ಸಂಸಾರ ಲೋಲ ಮನಸಿನ ವೃತ್ತಿಯುಜಾಲದಿಂದಿರಲಲ್ಲಿ ನಿನ್ನಂಘ್ರಿ ಸ್ಮರಣೆುಂಮೇಲುಂಟೆ ಕರ್ಮಗತಿಯು ಸ್ಥಿತಿಯು 3ವೃತ್ತಿ ಮಾಯಾಕಾರ್ಯ ಮಾಯೆ ನಿನ್ನಾಧೀನ ವೃತ್ತಿ ಮಾಯೆಯು ಕಲ್ಪಿತಸುತ್ತಿ ಸುಳಿಸುಳಿದಾಡಿ ಸತ್ಯದಂದದಿ ತೋರಿ ಮತ್ತೆ ನಿನ್ನೊಳಗರ್ಪಿತಚಿತ್ತು ತಾನೆ ನಾಮರೂಪಾದ ಬಗೆುಂದ ಚಿತ್ತು ಚಿತ್ತಾಹುದುಚಿತಸತ್ಯಸಂಧನು ನೀನು ಚಿತ್ತವನು ಬಿತ್ತರಿಸಿ ವೃತ್ತಿಯಾುತು ಬೆಳೆಯುತಾ ಇರುತಾ 4ಮನದ ಸಂಶಯ ಬಿಡದು ಶ್ರವಣಮನನಾದಿಗಳನನುದಿನವು ಮಾಡುತಿರಲುಮನಕೆ ಸಾಕ್ಷಿಕನಾದ ನೀನು ಘನಮಾಯೆಯನು ಮನಕೆ ಮರೆಮಾಡುತಿರಲುಚಿನುಮಯನೆ ಮಾಯೆಯನು ಕಡೆಗೆ ತೆಗೆಯಲು ಜ್ಞಾನ ಜನಿಸುವುದು ನೀನು ಕೊಡಲುಇನಕೋಟಿಸಂಕಾಶ ಇಭರಾಜದುರಿತಹರ ಎನಲು ನಿಜವಾಗುತಿರಲು ನಿಲಲು 5ತರಣಿಕಿರಣಗಳಿಂದ ಜನಿಸಿದಾ ಮೇಘಗಳು ತರಣಿಯನು ಮುಚ್ಚಲಳವೆತರಣಿ ತಾನೆನದಿವನು ಹರಹಿ ಹಿಂದಕೆ ತೆಗೆಯೆ ನೆರೆ ಹಿಂಗಿ ಹೋಗದಿಹವೆಪರಮಪುರುಷನು ನೀನು ಸ್ಮರಿಸಿ ಮಾಯೆಯ ಬೀಸಿ ತಿರುಗಿಸಲು ಮಾಯೆಗಿರವೆದುರಿತವಾಗಿರೆ ಜನಕೆ ನೆರೆ ಭಕ್ತಿಯನು ನೀನು ಕರುಣಿಸಲು ಮತ್ತೆ ಭವವೆ ಧ್ರುವವೆ 6ಅರಣಿುಂದುದುಭವಿಸಿದನಲ ಮುನ್ನಿನ ತೆರದ ಅರಣಿಯಾಗಿಯೆ ತೋರ್ಪನೆಅರೆದು ತಿಲವನು ತೆಗೆಯೆ ತೈಲವನು ತಿಲ ಬಳಿಕ ಇರುವದೆ ತೈಲದೊಡನೆಬೆರೆದು ಕರ್ಪುರವಗ್ನಿಯೊಡನಾಡಿ ಬೇರ್ಪಟ್ಟು ಮೆರೆವುದೆಂತಗ್ನಿಯೊಡನೆತಿರುಪತಿಯ ವೆಂಕಟನೆ ನಿನ್ನ ಚರಣದೊಳಿಟ್ಟ ಶರಣ ಮುನ್ನಿನ ಮನುಜನೆಯಹನೆ 7ಓಂ ಪುಣ್ಯ ಶ್ಲೋಕಾಯ ನಮಃ
--------------
ತಿಮ್ಮಪ್ಪದಾಸರು
ನೆನೆದು ನಿಷ್ಕಳಂಕರಾಗಿರೋ ಪಂಕಜಾಕ್ಷನ ಕೂಡ ದ್ವೇಷ ಬಳಿಸುವ ಮಾಯಿ ಪ ಮಲವಿಸರ್ಜನೆಯಾಗುವಾಗ ಮೂತ್ರವನು ಬಿಡುವಾಗ ಹೊಲಗೇರಿಯೊಳಗೆ ಸುಳಿದಾಡುವಾಗ ಹೊಲಿಯಾದವನು ತನ್ನ ಎದುರಿಗೆ ಬರುವಾಗ ಕಲಿಶಿಷ್ಯನಾದ ಮಣಿವಂತನ ನೆನೆಸಿರೊ1 ಶ್ರದ್ಧವನು ಬಿಡುವಾಗ ಸ್ವಪ್ನದೊಳಗೆ ಇಂದ್ರಿಯ ಬಿದ್ದು ಹೋಗುವಾಗ ಉಗುಳುವಾಗ ಗುಹ್ಯ ತೊಳೆಯುವಾಗ ಅಪ್ರ ಬದ್ಧನಾದ ಏಕಲವ್ಯನ ನೆನೆಯಿರೋ 2 ಶುದ್ಧ ಅಶುದ್ಧವನು ತುಳಿದು ನೆಲಕ್ಕೆ ವರಸುವಾಗ ವಮನವಾಗುವಾಗ ಮರಿಯದಲೆ ಅಮಲ ಸುಖ ಮುನಿ ಗುರು ವಿಜಯವಿಠ್ಠಲ ವೈದು ತಮಕೆ ಹಾಕುವ ಶುದ್ಧ ಕುಮತಿಯನು ನೆನೆಯಿರೋ 3
--------------
ವಿಜಯದಾಸ
ಬಿಡಬೇಡೋ ರಂಗಾ ಬಿಡಬೇಡೋಕಡುಮೋಹಕದ ಕೊಳಲನೂದುವದನು ಪ ಬಿಡುವೆಯಾದರೆ ಮನಕಡು ತವಕದೊಳುತಡವರಿಸುವುದೊಲೆಡೆಯನು ನೋಡೋ ಅ.ಪ. ಕಿವಿಯೊಳು ನಾದವು ಅಮೃತವ ಸುರಿಯೆಸವಿಯುಣ್ಣುತಲೀ ಮನ ಮೈಮುರಿಯೆತಳಮಳಿಸುವದು ನಡುವೆ ನಿನಗಿದು ಸರಿಯೆಹೊರಗಿನ ಭಾವದ ಪವಣವನರಿಯೆ 1 ಕೊಳಲನೂದುತಿರಲಾನಂದೊಳುಮುಳುಗಿರಲಾಗ ಕಣ್ಣಮುಂದಸುಳಿದಾಡುವ ನಿನ್ನ ಮೂರುತಿ ಚಂದತೊಲಗಿ ಪೋಗುವದೊ ಗೋಪಿಯ ಕಂದ 2 ಮಧುರವೋ ನಿನ್ನ ಕೊಳಲು ಗಾಯನಇದರೊಳಿಲ್ಲವೊ ಲವ ಅನುಮಾನಮೊದಲು ಮುರಳಿಯ ಹಿಡಿಹಿಡಿ ಜಾಣಗದುಗಿನ ವೀರನಾರಾಯಣ 3
--------------
ವೀರನಾರಾಯಣ
ಭವ ಭಂಗ ಪ. ಥಳ ಥಳಿಸುತ ಗೆಳತಿಯರು ಸಹಿತಾಗಿಚಳತೆಂಬೊ ದಿವ್ಯ ಆಭರಣಚಳತೆಂಬೊ ದಿವ್ಯಾಭರಣ ಭೂಷಿತರಾಗಿಕುಳಿತ ನಾರಿಯರು ಕಡೆಯಿಲ್ಲ1 ಕುಂತಲ ಕದುಪಿನ ಕಾಂತೆಯರು ಹರುಷದಿಕಂತುನಯ್ಯನ ಮುಖನೋಡಿಕಂತುನಯ್ಯನ ಮುಖನೋಡಿಮೈಮರೆದು ನಿಂತ ನಾರಿಯರು ಕಡೆಯಿಲ್ಲ 2 ಅಂದುಗಿ ಅರಳೆಲೆ ಬಿಂದಲಿ ಭಾಪುರಿಅಂದವಾಗಿದ್ದ ಅಸಲಿಅಂದವಾಗಿದ್ದ ಅಸಲಿ ಕಟ್ಟಿದಕಂದರಿನ್ನೆಷ್ಟು ಕಡೆಯಿಲ್ಲ3 ಕಾಲಲಂದುಗೆ ಗೆಜ್ಜೆ ತೋಳಲಿ ತಾಯತಲಾವಳಿಗೆ ಮುತ್ತು ಅಲುಗುತಲಾವಳಿಗೆ ಮುತ್ತು ಅಲುಗುತಸುಳಿದಾಡೊ ಬಾಲರಿನ್ನೆಷ್ಟು ಕಡೆಯಿಲ್ಲ 4 ಹಸಿರು ಪಚ್ಚದ ಕಂಭ ಕುಸುರಾದ ಗಿಳಿಬೋದುಗೆಎಸಕೊ ಮಾಣಿಕದ ಜಗುಲಿಯ ಎಸಕೊ ಮಾಣಿಕದ ಜಗುಲಿ ಸಿಂಹಾಸನದಿ ವಸುದೇವ ತನಯ ಕುಳಿತಾನೆ 5 ಬಿಸÀಜನೇತ್ರಿಯರ ಮುಂದೆ ಕುಶಲದ ಮಾತ್ಹೇಳುತವಸುದೇವ ತಾನು ಕುಳಿತಾನವಸುದೇವ ತಾನು ಕುಳಿತಾನ ದೇವಕಿಯಸೊಸೆಯರ ಕಂಡು ಹರುಷಾಗಿ 6 ಚಲುವ ರಾಮೇಶನ ಬಲದ ಭಾಗದಿಬಂದು ಹಲವು ಮಾತುಗಳು ಕಿವಿಯೊಳುಹಲವು ಮಾತುಗಳು ಕಿವಿಯೊಳುಹೇಳುತ ಬಲರಾಮ ತಾನೆ ಕುಳಿತಾನೆ7
--------------
ಗಲಗಲಿಅವ್ವನವರು
ಮನವೆ ನೀ ಸ್ಥಿರವಾಗಿ ಹರಿಯ ಪಾದಾಂಬುಜ_ವನು ಸೇರಿ ಅಲ್ಲಿಯೆ ನಿಲ್ಲಯ್ಯ ಬಿಡದೆ ಪ ಅನುದಿನ ಸೇವಿಸಲನುವಾಗುದಯ್ಯಾಘನ ಚಂಚಲ ನೀನು ಎಚ್ಚರ ಎಚ್ಚರ ಅ.ಪ. ಅಲ್ಲಲ್ಲಿ ಇಲ್ಲೆಂದು ಎಲ್ಲೂ ಹುಡುಕಲು ಬೇಡಎಲ್ಲೆಲ್ಲ್ಯೂ ಇರುವ ಶ್ರೀವಲ್ಲಭನುಬಲ್ಲವರಾಡುವ ಸೊಲ್ಲನು ಲಾಲಿಸುಖುಲ್ಲನೆಂಬುವ ನಿಂದೆಗೀಡಾಗಬೇಡಾ 1 ನಿತ್ಯ 2 ಧ್ಯಾನದ ದಾರದಿಂ ಜಪವೆಂಬ ಗಂಟಿರಲಿಶ್ರೀನಿವಾಸನ ಪಾದವೆಂಬ ಗೂಟಕೆ ಕಟ್ಟಿಮೌನದಿಂ ಕಟ್ಟಿಸಿಕೊಂಡಲ್ಲೇ ಸುಳಿದಾಡುಸ್ಥಾನವ ಬಿಟ್ಟನ್ಯನಿಟ್ಟಿಗೆ ಪೋಗದೆ 3 ಸಕಲರ ಪಾಪವ ತೊಳೆದು ಪಾವನಗೈದುಮುಕುತಿಯ ದಾರಿಯ ತೋರುವ ನದಿಗಂಗೆಪ್ರಕಟವಾಗಿರುವಂತೆ ಚರಣದೊಳುರುಳಾಡುಭಕುತಿಯ ಬೇಡು ನೀ ಪ್ರತಿದಿನ ನೋಡು 4 ಗದುಗಿನ ವೀರನಾರಾಯಣಗೂ ನಿನಗೂ ಹೃದಯವೆ ಮಂದಿರವಲ್ಲವೆ ದೀಪದಕದಿರಂತ ಚಾಚುತ ಪೋಗಿಬರುವದೇತಕೆಸದನವ ಬಿಡದಲ್ಲೇ ಹರಿಯನು ಸೇವಿಸು 5
--------------
ವೀರನಾರಾಯಣ
ಯಾಕೆ ಮೂಕನಾದ್ಯೋ ಗುರುವೆ ನೀ ನ್ಯಾಕ ಮೂಕನಾದ್ಯೋ ಪ ಲೋಕ ಪಾಲಕ ಎನ್ನ ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ಅ.ಪ ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದೆ ಮಂದಿಯೊಳಗೆನ್ನ ಮಂದನ್ನ ಮಾಡಿದ್ಯೊ 1 ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ ಕಾಕುಜನರೊಳೆನ್ನ ನೂಕಿ ಬಿಟ್ಟು ನೀನು 2 ಹೀಂಗೆ ಪಾಲಿಸಿದರೆ ಯೋಗಿಕುಲವರ್ಯ ರಾಘ ಭವ ಸಾಗುವದ್ಹ್ಯಾಂಗಯ್ಯ 3 ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ ಘನ್ನ ಮಹಿಮ ನೀ ಎನ್ನನು ಬಿಟ್ಟೀಗ 4 ಜನನಿಯು ನೀ ಎನ್ನ ಜನಕನಯ್ಯ ಮನ್ನಿಸೋ ನೀ ನಿತ್ಯಾನನ್ಯ ಶರಣನೆ 5 ಎಂದಿಗಗಾದರು ನಿನ್ನ ಪೊಂದಿಕೊಂಡವನೆಲೊ ಇಂದು ಕೈ ಬಿಟ್ಟರೆನ್ನ ಮುಂದೆ ಕಾಯುವರ್ಯಾರೊ 6 ನಾಥನು ನೀ ಅನಾಥನು ನಾನಯ್ಯ ಪಾತಕದ ಜಗನ್ನಾಥ ವಿಠಲ ದೂತ 7
--------------
ಜಗನ್ನಾಥದಾಸರು
ಯಾಕೆಮ್ಮನಗಲಿ ಪರಲೋಕ ಸೇರಿದೆ ಗುರು ಐಕೂರು ನರಸಿಂಹಾರ್ಯ ಪ ಲೌಕಿಕವ ಬಿಟ್ಟು ಸುವಿವೇಕ ನಡೆವ ವಾಕು ಪೇಳ್ವರ ಕಾಣೆ ಲೋಕದೊಳು ನಿನ್ಹೊರತು ಅ.ಪ ಅತಿಮಂದರಾದೆಮಗೆ | ಶ್ರುತಿ ಶಾಸ್ತ್ರ ಪುರಾಣ ಕಥೆ ದಾಸ ಕವಿತೆ ಸತತ ಪೇಳಿ ಮತಿವಂತರೆನಿಸಿ ಸ್ಪÀತ್ವಥ ಪಡಿಸಿ ಮುಂದೆ ಸ ದ್ಗತಿ ಕಾಣಿಸದೆ ಜಗದಿ ಹತಭಾಗ್ಯರನು ಮಾಡಿ 1 ಸಾಧುವರ್ಯನೆ ನಿಮ್ಮ ಪಾದವೇ ಗತಿ ಎಂದು ಸಾದರದಿ ನಿರುತ ನೆರೆನಂಬಿದಂಥ ಸೋದರಿಯರು ಪಂಚ ಭೇದ | ತರತಮಜ್ಞಾನ ಬೋಧಿಸುವರಿಲ್ಲೆಂದು ಖೇದದಿಂದಿರುತಿಹರು 2 ಸೂರಿವರ ನಿನ್ನಗಲಿದಾರಭ್ಯ ಧರೆಯೊಳಗೆ ನೀರಿಂದ ದೂರಾದ ಮೀನಿನಂತೆ ಘೋರ ದುಃಖದಿ ಮುಳುಗಿ ಪಾರುಗಾಣದೆ ದಿಕ್ಕು ತೋರದಾಗಿಹುದೀಗ ಬಾರೋ ಮನಮಂದಿರದಿ 3 ತನುವು ತ್ಯಜಿಸಿದರೇನು | ಅನಿಮಿಷಾಂಶನೆ ನಮ್ಮ ಕನಸು ಮನನಿನೊಳಗೆ ಸುಳಿದಾಡುತ ಕೊನೆಯಲ್ಲಿ ಹರಿನಾಮ | ಅನುಗ್ರಹಿಸುವೆವು ಎಂಬ ಘನ ಅಭಯ ನೀಡೆಂದು ಮಣಿದು ಪ್ರಾರ್ಥಿಪೆನಯ್ಯ 4 ಪುಣ್ಯಪುರುಷನೆ ನಮಗೆ ಇನ್ನಾವ ಬಯಕಿಲ್ಲ ಜನ್ಮ ಜನ್ಮಕೆ ನಿನ್ನ ಚರಣಾಬ್ಜವ ಚನ್ನಾಗಿ ಸೇವಿಸುವ ಘನ್ನ ಸುಖಗರಿಯೆಂದು ನಿತ್ಯ 5 ನಿನ್ನಿಂದ ಸತ್‍ಶ್ರವಣ | ನಿನ್ನಿಂದ ಅಘಹರಣ ನಿನ್ನಿಂದ ಶ್ರೀವಾಯು ಹರಿಯಕರುಣ ನಿನ್ನಿಂದ ಉಪದೇಶ \ ನಿನ್ನಿಂದ ಭವನಾಶ ನಿನ್ನಿಂದ ಬಿಂಬ ದರ್ಶನವು ನಮಗಿನ್ನು 6 ಪಾಮರರ ಅಪರಾಧ ನೀ ಮನಕೆ ತಾರದಲೆ ಹೇಮ ಕಾಮಿನಿ ಭೂಮಿ ಈಮೂರರ ವ್ಯಾಮೋಹವನೆ ಬಿಡಿಸಿ | ಶಾಮಸುಂದರ ಭಕ್ತ ಸ್ತೋಮ ಸಂಗದೊಳಿಟ್ಟು ಪ್ರೇಮದಲಿ ಪಿಡಿಕೈಯ್ಯ 7
--------------
ಶಾಮಸುಂದರ ವಿಠಲ
ವಾಣಿ ಪರಮಕಲ್ಯಾಣಿ ನಮೋ ನಮೋ ಅಜನರಾಣಿ ಪಂಕಜಪಾಣಿ ಪ. ಭಳಿರೆ ಭಳಿರೆ ಅಂಬೆ ಭಕ್ತಜನಸುಖದಂಬೆಸುಳಿದಾಡು ಶುಭನಿತಂಬೆ ಅಮ್ಮ ನಿಮ್ಮಹೊಳೆ ಹೊಳೆವ ಮುಖ ಮುಕುರ ಬಿಂಬೆಇಳೆಯೊಳಗೆ ಸರಿಗಾಣೆ ಶಾರದಾಂಬೆ ಪುತ್ಥಳಿಬೊಂಬೆ 1 ವಾಗ್ದೇವಿ 2 ಜಯಜಯತು ಜಗನ್ಮಾತೆ ಜಗದೊಳಗೆ ಪ್ರಖ್ಯಾತೆದಯಮಾಡು ಧವಳಗೀತೆ ಸತತ ಶ್ರೀಹಯವದನ ಪದಕೆ ಪ್ರೀತೆ ಇಳೆಯೊಳಗೆನಯದಿ ಗೆಲಿಸೆನ್ನ ಮಾತೆ ವಿಧಿಕಾಂತೆ 3
--------------
ವಾದಿರಾಜ
ಶೃಂಗಾರವ ನೋಡಿದ್ಯಾ ಎಂಥ ಶೃಂಗಾರವ ನೋಡಿದ್ಯಾ ಪ. ಶಂಖ ಚಕ್ರಾಂಕಿತ ಬಿಂಕುಳ್ಳ ಶ್ರೀವತ್ಸಕುಂಕುಮಾಂಕಿತÀನ ಅರಮನೆ ಶೃಂಗಾರವನೋಡಿದ್ಯಾಅ.ಪ. ರಂಗು ಮಾಣಿಕ ಬಿಗಿದ ಅಂಗಳದೊಳಗಿನ್ನು ಬಂಗಾರದ ಬೆತ್ತಹಿಡಕೊಂಡುಬಂಗಾರದ ಬೆತ್ತಹಿಡಕೊಂಡು ನಿಂತಾರೆ ಮಂಗಳಾಂಗನ ಮನೆ ಮುಂದೆ1 ವ್ಯಾಲಶಯನನ ಮನೆಯೊಳು ಅಂತಸ್ತಿಗೆಜಾಳಿಗೆ ಮುತ್ತು ಜಡದಾವೆಜಾಳಿಗೆ ಮುತ್ತು ಜಡದಾವೆ ಅರಮನೆಸೊಬಗ ಹೇಳಲೊಶÀವಲ್ಲಜನರಿಗೆ2 ಕನಿಯಾದ ಕದಗಳು ಚಿನ್ನದ ಚೌಕಟ್ಟುಸನ್ನಹದಿ ಅರಮನೆಸನ್ನಹದಿ ಅರಮನೆ ಯೊಳಗಿನ್ನುಕನಿಯಾದ ಕದಗಳು ತಿಳಿಯವು3 ಹಲವು ಚಿನ್ನದ ನೆರಳುನೆಲದೊಳು ಬಿದ್ದಿರೆಕೆಲ ಸರೋವರ ಕಮಲವುಕೆಲ ಸರೋವರ ಕಮಲವು ಆದರಿಂದ ಜಲವು ನೆಲವೆಂದು ತಿಳಿಯದು 4 ಅಂತರಂತರದಲ್ಲೆ ಮಂತ್ರಿಗಳು ಕುಳಿತಾರೆ ಕಂತುನಯ್ಯನ ಅರಮನೆಕಂತುನಯ್ಯನ ಅರಮನೆಯೊಳಗೆಅನಂತಪ್ರಜೆ ಬರಲಿ ಬಯಲುಂಟು5 ಮಿಂಚಿನಂತೆ ಹೊಳೆಯೊ ಕೆಂಚೆÉಯರು ಮೈಬಣ್ಣಗೊಂಚಲ ಮುತ್ತು ಅಲುಗೂತಗೊಂಚಲ ಮುತ್ತು ಅಲುಗೂತಸುಳಿದಾಡೊಚಂಚಲಾಕ್ಷಿಯರು ಕಡೆಯಿಲ್ಲ6 ವಜ್ರಮಾಣಿಕ್ಯ ಬಿಗಿದು ಸಜ್ಜಾದ ಆಭರಣವು ಗೆಜ್ಜೆ ಸರಪಳಿಯು ಗಿಲುಕೆಂದು ಗೆಜ್ಜೆ ಸರಪಳಿಯು ಗಿಲುಕೆಂದುರಾಮೇಶನ ಗುಜ್ಜೆಯರು ಹೆಜ್ಜೆ ಇಡುವೋರು7
--------------
ಗಲಗಲಿಅವ್ವನವರು