ಒಟ್ಟು 15 ಕಡೆಗಳಲ್ಲಿ , 9 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಶ್ರೀಹರಿ ಸ್ತುತಿಗಳು ಆನಂದ ಆನಂದ ಆನಂದ ಪ ಆನಂದ ನಿನ್ನ ನೋಡಿದವರಿಗೆ ಅ.ಪ ಆ ಮುಖ ಆ ಕಂಠವಾನಂದ ಆ ಮಹಾಭುಜಕೀರ್ತಿ ಆನಂದ ಸಾಮಜ ಶಂಖಚಕ್ರಗಳಾನಂದ ಹೊಮ್ಮುವ ಗದೆ ಹಸ್ತ ಜಗದಾನಂದ 1 ಸುರಾಸುರರು ದೇವಾನುದೇವರು ತಂ- ಬುರ ನಾರದ ಮೊದಲಾದವರು ವರುಣಿಸಲಾರರು ನಿನ್ನಳವನ್ನು ಅರಿಯಲು ಪೊಗಳಲು ಆನಂದವನ್ನು 2 ಸಂಖ್ಯೆಗೆ ಎಟುಕದ ಆನಂದವಯ್ಯ ಅಂಕೆಗೆ ನಿಲುಕದ ಆನಂದವಯ್ಯ ಅಂಕುಡೊಂಕಿಲ್ಲದ ಆನಂದವಯ್ಯ ಬಿಂಕವ ಬಿಟ್ಟು ಪಾಡಿರೋ ಅಯ್ಯ 3 ಕಮಲವದನದ ಚೆಲುವಾನಂದ ಕಮಲಲೋಚನದ ಸುಂದರ ಅಂದ ಕಮಲೋದ್ಭವನಿಹ ವಕ್ಷವಾನಂದ ಕಮಲಯುಗಳ ಶ್ರೀಪಾದವಾನಂದ 4 ಎಣೆಯಿಲ್ಲಾನಂದಕೆ ಎಣೆಯಿಲ್ಲವಯ್ಯ ಕಣಕಣವು ನೋಡಲು ತಣಿಯದವಯ್ಯ ಅಣಿಗೊಂಡ ಜಾಜಿಪುರೀಶನವ್ವಯ್ಯ ವರ್ಣಿಸಲಾನು ಪಾಮರನಯ್ಯ 5
--------------
ನಾರಾಯಣಶರ್ಮರು
ಅರ್ಚಿಸೊ - ಮನುಜ - ನೀನರ್ಚಿಸೊ ಪ ನಿಚ್ಚಟ ಮರೆಯದೆ ಅ.ಪ. ವಾರಿಧಿ ಮಧ್ಯದಿ ಅಂದೂ | ಮಹಾಗರಳ ಉದ್ಭವಿಸಿತು ಮುಂದೂ | ನೋಡುಸುರಾಸುರರೆಲ್ಲರು ಬಂದೂ | ಭಾಳಮೊರೆಯ ನಿಟ್ಟರು ಕೇಳೊ ಅಂದೂ | ಆಹಭರದಿಂದ ಬರುತಲೆ | ಗುರು ಪವನನ ಪಾದಸ್ಮರಿಸದೆ ಗರಳವ | ಭುಜಿಸಲು ಬಂದನ 1 ಉದುಭೂತ ವಿಷದ ಪಾತ್ರೆಯನೂ | ಹರಮುದದಿ ಹಸ್ತದಿ ಕೊಂಡು ಅವನು | ನೋಡಿಅದುಭೂತ ವಿಷದ ಜ್ವಾಲೆಯನು | ತಾನುಬೆದರಿ ಯೋಚಿಸಿದನು ಶಿವನು | ಆಹಅದನರಿತು ಶಿರಿಯರಸ ಪದುಮಾಕ್ಷ ಕೃಷ್ಣನುಮುದದಿ ಅಭಯವಿತ್ತು | ಸದಯವ ತೋರಿದ 2 ಸೇವ್ಯ | ಕೇಳೊಮಂತ್ರೋದ್ಧಾರಗೆ ಪೇಳ್ದತ್ವರ್ಯ | ಆಹಮಂತ್ರಿ ಹನೂಮಂತ | ಮರ್ಧಿಸಿ ಇತ್ತಂಥಸ್ವಂತ ವಿಷವನುಂಡು | ಪಂಥವಗೆಲಿದನ 3 ಕಂಟಕ ಕಳೆದನು ಶಿವನು | ವಿಷಕಂಠನೆನೀಸಿದನವನು | ದಶಕಂಠ ಹರನ ನಾಮವನ್ನು | ಅವಕುಂಠಿತನಾಗದೆ ಇನ್ನು | ಆಹಕುಂಟಿಸಿ ಈಂಟಿಸಿ | ಧಿಮಿಧಿಮಿಕೆನ್ನುತಸೊಂಟದಿ ಕೈಯಿಟ್ಟು | ನಾಟ್ಯವನಾಡ್ವನಾ 4 ಪರಿ ಸ್ಮರಿಸೆ5
--------------
ಗುರುಗೋವಿಂದವಿಠಲರು
ಗಣಪತಿ ಸ್ತುತಿ ಭಜಿಸುವೆ ತವ ಚರಣ ಗಜಾನನ ಪ ಸಿಂಧುವ ಮಥಿಸುವಾಗ ಸುರಾಸುರರ್ ಮಂದರ ಗಿರಿಯ ಬಲ್ಪಿಂದ ಮಳ್ಗಿಸುತವ - ರಿಂದ ಮೊದಲ ಪೂಜೆವೊಂದಿದ ವಿಘ್ನೇಶ 1 ಭೂಷಣ ರವಿಶತಭಾಸ ಲಂಬೋದರ 2 ಧರಿಸುತಲನುದಿನ ಮೆರೆವನೆ ಪಾವಂಜಿ ಪುರದಧೀಶನ ದಾಸರ್ಗುರು ಹಿತಗೈವನೆ 3
--------------
ಬೆಳ್ಳೆ ದಾಸಪ್ಪಯ್ಯ
ಶರಣೆಂಭೆ ತನುಮನದಿಂದ ಗಣರಾಯಾ ನರಮೃಗ ಕಾಯಾ ಸುರಾಸುರರ ಕೈಯ್ಯ ಸೇವೆ ಕೊಳುವ ಚರಣವನು ಮೊರೆಯ ಹೊಕ್ಕೆನು ಕೇಳಿ ಕೀರುತಿಯಾ ಕೊಂಡಾಡುವಂತೆ ಪದ ಪದ್ಯದಿ ನಿನ್ನ ಚರಿಯಾ ಶುಭ ಮುಖ ಕೊಡುಮತಿಯನಾ ಎಂದೆಂದು ನೊಡಲು ಅಪರಾಧಿನಾ ಮೊದಲು ಕುಂದನಾರಿ - ಸದೇ ನೋಡೆನ್ನ ಮ್ಯಾಲಿನ್ನಾ ಅಗಜ ನಂದನ ಗುರು ಮಹೀಪತಿ ಸುತ ಸ್ವಾಮಿ ಭಕುತ ರಕ್ಷಕ ಮುನಿಜನ ಪ್ರೇಮೀ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀನಾಥ ಶ್ರೀನಾಥ ಶ್ರೀನಾಥ ಮೋಹಿನೀ ರೂಪ ತಾ ತಾಳಿದಾನೆ ಸುಕಲಾಪ ತಾನೋಡಿಸುವುದು ಹೃತ್ತಾಪ ವನಂಬೆನೆ ಹರಿಯ ಪ್ರತಾಪ ಪ ಬಂಗಾರದ ಲತೆಯಂತೆ ಬಳುಕುವಳು ಬಾಜು ಬಂದಿಗೆ ಗೊಂಡೆಗಳ ಕಟ್ಟಿಹಳು ಮುಂಗಾಲಿಲೆ ನಿರಿಗಿಗಳ ಚಿಮ್ಮುವಳು ಮೋಹನ ಮಾಲೆಗಳ ಕಟ್ಟಿಹಳು ಕುಂಭ ಕುಚದ ಭಾರಕ್ಕೆ ತಡಿಯಳೂ ತುದಿಬೆರಳಲಿ ಗಲ್ಲವನೊತ್ತಿಹಳು ಕೇಸರಿ ಗಂಧ ಹಚ್ಚಿಹಳು ಹೊಂಗ್ಯಾದಿಗೆ ಪೋಲುವ ಮೈಬಣ್ಣ ಹೊಮ್ಮಸದಲಿ ಹೋಲುವ ಈ ಹೆಣ್ಣು ಹಿಂಗಡೆಯಲಿ ವರ ಹೆರಳು ಭಂಗಾರ ಹಿಮ್ಮಡಿ ಬಡಿಯೋದು ಸರ್ಪಾಕಾರ ಭಂಗಿಸುವಳು ಬಹು ದೈತ್ಯರ ಹೃದಯ ಬಹು ವಿಲಾಸದಿ ತೋರ್ಪಳು ಸಖಿಯ ಅಂಗಜದರು ಗಂಧಕೆ ಅಳಿವೃಂದ ಆಡುತಲಿಗೆ ಝೇಂಕಾರಗಳಿಂದಾ ಸಂಗಡನೆರದ ಸುರಾಸುರರಿಂದ ಸತಿ ಚಲುವಿಂದಾ ಮಂಗಳಮುಖಿ ನಮ್ಮಂಗಳ ಮೋಹಿಸಿ ಭಂಗನ ಪಡಿಸುವಳೈ ತ್ರಿಜಗವ ಜಗಂಗಳ ಪಾಲಿಸುವಳು | ಮನ ಸಂಗಡ ಅಪಹರಿಸುವಳು | ಜಡ ಜಂಗಮಲಿಗೆ ಬಹು ಪ್ರೀತ್ಯಾಸ್ಪದಳು ಸಾರಂಗಿ | ಸಾರಂಗಿ | ಸಾರಂಗೀ ಸಾಂಬಮದ ಭಂಗಿ | ಬಹಳ ಸುಖಸಂಗಿ ಸುಂದರಿ ಲಲಿತಾಂಗಿ | ಮೋಹನಾಪಾಂಗೀ ಬಡು ಹೆಂಗಲ್ಲ ಈಕೆ ಬಹುಭಂಗ ಬಡುವಿರಿ ಜ್ವಾಕೆ || ಶ್ರೀನಾಥ || 1 ಕನ್ನಡಿಯಂದದಿ ಪೋಲುವ ಕಪೋಲ ಕರ್ಪೂರ ರಂಜಿತ ವರ ತಾಂಬೂಲ ಕಣ್ಣಿಗ್ಹಚ್ಚಿಹಳು ಕನಕದ ಕೋಲಾ ಕಾಮಿನಿಯಂದಡಿ ತೋರ್ಪಳು ಜಾಲಾ ಬಿನ್ನುಡಿ ಹಾಕಿದ ಚಂದ್ರದ ಕುಪ್ಪುಸ ಚಪಲಾಕ್ಷಿಯ ನೋಟದ ಬಲು ರಭಸಾ ಕರ್ಣಾಯತ ನೇತ್ರಗಳ ವುಲ್ಲಸಾ ವುನ್ನಂಕಾ ನಾಶಿಕದ ಬುಲಾಕು ವಜ್ರಮಯದ ವರಮಖರೆದ ಬೆಳಕು ಕರ್ಣದಿ ರತ್ನಖಚಿತ ತಟಾಂಕಾ ಕುಸುರು ಹಚ್ಚಿದ ಬಾಹುಲಿಗಳ ಬಿಂಕ ಸಣ್ಣ ನಡುವಿನೊಯ್ಯಾರದ ನಲ್ಲೆ ಸರಸಿಜನಾಭನ ಸೃಷ್ಟಿ ಇದಲ್ಲೆ ಬಣ್ಣಿಸಲಳವಲ್ಲವು ಸೌಂದರ್ಯ ಬಿಡಿಸುವುದು ಕೇಳ ಮುನಿಗಳ ಧೈರ್ಯ ಬೆಣ್ಣೆಯಂತೆ ಮೃದುವಾದ ಶರೀರ ಭಾಗ್ಯಹೀನರಿಗೆ ಇದು ಬಲುದೂರಾ ಕನ್ನೆ ಶಿರೋಮಣಿ | ಕಾಮನ ಅರಗಿಣಿ ಕೌಸ್ತುಭಮಣಿಗಳ ಹಾರೇ ಸುವರ್ಣವರ್ಣ ಸುಕುಮಾರೇ ಮೋಹನ್ನರಸನೆ ಗಂಭೀರೇ ಮೋಹನ್ನೆ ಮಧುರ ಮಧುರಾಧರ ಮಂಜುಳ ವಕುಜಲರೆ ಬಹೋಚ್ಚಧರೆ ಛÅಪ್ಪನ್ನ ಛಪ್ಪನ್ನ ದೇಶಗಳು ಚಲುವರಿದ್ದರೂ ಚಪಲಾಕ್ಷಿಗೆ ಸಮರಾರೇ ಗತ ಪುಣ್ಯದಿಂದ ಕೈಸೇರುವಳಲ್ಲದೇ ಕಾಮಾಂಧsÀರಿಗತಿ ದೂರೇ ಈ ಹೆಣ್ಣು | ಈ ಹೆಣ್ಣು | ಈ ಹೆಣ್ಣು ಸುರಾಸುರರನ್ನೆ ಮೋಹಿಸಳು ಚನ್ನ ಮನಕೆ ತರಳಿನ್ನ ಬಿಡು ವಿಷದ್ಹಣ್ಣು ಅಪೇಕ್ಷಿಸೆ ಮಣ್ಣು ಕೂಡಿಸುವಳು ತನ್ನ ಜನರಿಗಮೃತಾನ್ನ ಕೊಡುವಳು ಮಾನ್ಯಳು ಪರಮಸೋನ್ಯಳು | ಸುಗುಣ ಅರಣ್ಯ ವಿನಾಶೇ ಬ್ರಹ್ಮಾಂಡಜಾದ್ಯಂಗೀತೇ || ಶ್ರೀನಾಥ || 2 ಹುಡುಗಿ ನೋಡು ಹೊಸ ಪರಿಯಾಗಿಹಳು ಹದ ಮೀರಿದ ಯವ್ವನದಿ ಮೆರೆವಳು ಅರಳು ತುಂಬಿಹಳು ಮಂದಸ್ಮಿತದಲಿ ಮೋಹಿಸುತಿಹಳು ಬೆಡಗಿನಿಂ ನುಡಿಯ ಸವಿಯ ತೋರುವಳೂ || ಬಹು ವಿಧದಾಭರಣಗಳನ್ನಿಟ್ಟಹಳು ನಡಿಗಿಗಳಿಂದ ನಾಚುತ ಹಂಸ ನವಮಣಿ ಚಂದ್ರರ ಕೆಡಿಸಿತು | ನಂಬೆ ಜಡಿತ ಮುತ್ತಿನ ತಾಯಿತ ಕಠಾಣೀ ಜಗವನು ಮೋಹಿಸುವಳು ಸುಶ್ರೋಣೀ ಬಿಂಕದ ನುಡಿ ಸೊಬಗಿನ ಚಂದಾ ಅಡಗಿದವೆ ಪಿತಭೃಂಗಗಳಿಂದಾ ಹಿಡಗಿ ಮರಗಿ ಮಧ್ಯಶಮನ ಮರಗೀ ಕೇಸರಿ ಬಹು ಸೊರಗೀ ಉಡುಪತಿ ಕೋಟಿ ಪ್ರಭ ಧಿಕ್ಕಾರಾ ಉಲ್ಲಾಸದಿ ಮನ ಮುಖ ಚಂದಿರಾ ನಡಿಗಗಳಿಂದೆನೆ ರಾಜಿಸುತಿ ಹೋದೆ ನವರತ್ನದಯದೆ ಮಯದ ಫಣಿಕಟ್ಟು ಮೇಲ್ಪೊಡವಿವೊಳಗೆ ಪಡಿಗುಣಕ ಕಡಿಯಿಲ್ಲಾ ಸುಳ್ಳುನುಡಿಯಿಲ್ಲಾ ಯೆನ್ನೊಡೆಯಾ ಶ್ರೀ ವಿಜಯ ವಿಠ್ಠಲನಲ್ಲದೆ ಎಲ್ಲಿಂದ ಬಂದಳೋ ಕೆಳದೀ || ಶ್ರೀನಾಥ || 3
--------------
ವಿಜಯದಾಸ
ಹನುಮಂತಾ | ಮದ್ಗುರುವೆ | ಹನುಮಂತ ಪ ಹನುಮಂತ - ಗುಣಗಣ ನಿಲಯ | ಮುನಿಸನಕಾದಿ ಜನ ಮನಾಲಯ | ಆಹಮನ ಆದೀಂದ್ರಿಯ ನಿಯ | ಮನವನೆ ಮಾಡುತ್ತಅನುನಯದಿಂದಲಿ | ಪಾಲಿಪೆ ಸರ್ವರ ಅ.ಪ. ಅಂಜನೆ ಕುವರನೆ ಹನುಮ | ಚಿಣ್ಣಕಂಜ ಸಖಗೆ ಹಾರ್ದನಮ್ಮಾ | ಇಂದ್ರಸಂಜಯನನ ಹೊಡೆದನಮ್ಮಾ | ಶಿಶುಅಂಜಲಿಲ್ಲವು ನೀ ನೋಡಮ್ಮಾ | ಆಹಸಂಜಯಪಿತ ತನ್ನ | ಶ್ವಾಸ ನಿರೋಧಿಸೆಅಂಜಲು ಮೂರ್ಜಗ | ಕಂಜಾಕ್ಷ ಸಲಹೀದ 1 ರಾಮರ ಭಂಟ ಧೀಮಂತಾ | ಬಲಭೀಮ ಭಯಂಕರ ಅಮಿತಾ | ರೂಪನಾಮಗಳ್ ಪೊಂದುವ ಸತತಾ | ನೋಡುಕಾಮನಯ್ಯನ ಕಾಣ್ವ ನಿರತಾ | ಆಹಭೀಮ ಪ್ರಾಣಾನಂದ | ಮುನಿಯೆಂದು ಕರೆಸುತ್ತಬೊಮ್ಮನ ಪದವಿಯ | ಸಮ್ಮುದದಿ ಪಡೆವಂಥ 2 ಹರಿಯೆ ನೀನು ಪ್ರತಿಬಿಂಬಾ | ಪುರಹರಿಗೆ ನೀನು ಗುರು ಬಿಂಬಾ | ಸುರಾಸುರರ ನೀದಂಡಿಪಾ ಡಿಂಬಾ | ನಿನ್ನವರಣ ವರ್ಣಿಸುವುದು ಗುಂಭಾ | ಆಹಹರ ಮುಖಾದ್ಯರು ನಿನ್ನ | ನಿರುತದಿ ಸುತ್ತಿಸುತ್ತಪರಿಪರಿ ಗುಣರೂಪ | ಕ್ರಿಯೆಗಳ ನೋಳ್ಪರು 3 ನಿನಗೆಣೆ ಯಾರೊ ಸಮೀರ | ಮಹವನಧಿಯ ದಾಟಿದ ಧೀರ | ದೈತ್ಯಜನರ ನೀ ಸವರಿದ್ಯೋ ವೀರ | ದಶಾನನನ ನೀ ಸದದೆಯಾ ಶೂರ | ಆಹಜನಕಜ ರಮಣನ | ನೆನೆ ನೆನೆ ನೆನೆಯುತಅನುಗಾಲ ಕಿಂಪುರುಷ | ಖಂಡದಲಿರುವಂಥ 4 ಕುರುಕುಲ ವನಕೆ ಕುಠಾರ | ದುಷ್ಟಜರೆಯ ಸುತನ ಸೀಳ್ದ ಧೀರ | ಸತಿತರಳೆ ದ್ರೌಪದಿ ಕಾಯ್ದ ವೀರ | ದುರುಳದುರ್ಯೋಧನನ ಅಸು ಹರ | ಆಹಕುರುವಂಶಕನಳನೆ | ಧರಣಿ ಭಾರವ ನಿಳುಹನರಮೃಗ ಲೀಲೆಯಂ | ದರಿಗಳ ತರಿದಂಥ 5 ಯತಿಕುಲ ಕುಮುದಕೆ ಸೋಮ | ದಶಮತಿಯೆ ಮಾಯ್ಗಳ ತರಿದ ಭೀಮ | ಅಹಂಮತಿಯ ಕಳೆ ಸಾರ್ವಭೌಮ | ಜಗತ್ಪತಿಗೆ ನೀ ಸುಪವಿತ್ರ ಧಾಮಾ | ಆಹವಿತತ ಶ್ರೀ ಹರಿಯೆ ಸ | ರ್ವೋತ್ತಮನೆಂಬಂಥಸೂತ್ರಾರ್ಥ ರಚಿಸಿ ಸ | ಚ್ಛಾಸ್ತ್ರವನರುಹಿದ 6 ಪವಮಾನ ಪೊಗಳುವೆ ನಿನ್ನ | ಭವಭವಣೆಯ ಪಡಲಾರೆ ಘನ್ನ | ಗುರುಗೋವಿಂದ ವಿಠಲಾನ | ಚರಣ | ತೋರೊತವಕದಿ ನಿನ್ನೊಳು ಪವನ | ಆಹನವ ವಿಧ ಭಕುತಿಗೆ | ನೆಲೆಯು ನೀನಾಗಿಹೆತವಕೀರ್ತಿ ಪೊಗಳಲು | ಶಿವನಿಗು ಅಳವಲ್ಲ 7
--------------
ಗುರುಗೋವಿಂದವಿಠಲರು
ಪ್ರಸನ್ನ ಶ್ರೀಕೂರ್ಮ5ಪ್ರಥಮ ಅಧ್ಯಾಯಶ್ರೀಕೂರ್ಮಪ್ರಾದುರ್ಭಾವಲೀಲಾವತಾರನೇ ಸರ್ವ ಲೋಕಾಧಾರಮಾಲೋಲ ಸುಖಚಿತ್ ತನು ಕೂರ್ಮರೂಪಪಾಲಾಬ್ಧಿಜಾಪತಿಅನಘಅಜಿತ ಧನ್ವಂತರಿಲೀಲಾ ಮೋಹಿನಿಅನಘಶರಣು ಮಾಂಪಾಹಿಪವೇದಾದಿ ಸಚ್ಛಾಶ್ರ(ಪ್ರ)ಮೇಯ ವೇದವತೀಶಪದುಮಜಾಂಡವ ಪಡೆದ ಜಗದೇಕಭರ್ತಾಅದ್ವಿತೀಯನು ಸ್ವಾಮಿ ಸಮರಧಿಕರಿಲ್ಲದವವೇಧಮುಕ್ಕಣ್ಣಾದಿ ಸುರಸೇವ್ಯಪಾಹಿ1ಸತ್ಯ ಜ್ಞÕನಾನಂತ ಭೂಮಾದಿ ಗುಣನಿಧಿಯೇಸತ್ಯಸೃಷ್ಟಿ ಮಾಳ್ಪಿ ಸತ್ಯನಾಮಾಪ್ರತ್ಯಕ್ಷ ಪ್ರಮಾಣ ಸಿದ್ಧವು ಈ ಜಗತ್ತುತತ್ಸøಷ್ಟಿ ಪಾಲನಾದಿಗಳೆಲ್ಲ ಸತ್ಯ 2ಸೃಷ್ಟಿ ಪ್ರವಾಹವು ಅನಾದಿಯೂ ನಿತ್ಯವೂಘಟಾದಿ ಕಾರ್ಯಗಳ ಉಪಾದಾನ ಕಾರಣಮೂಲ ಜಡಪ್ರಕೃತಿಯೂ ಅನಾದಿಯೂ ನಿತ್ಯವೂಸೃಷ್ಟ್ಯಾದಿಕರ್ತಾ ನಿನ್ನಾಧೀನವು ಎಲ್ಲಾ 3ಕಾರ್ಯಕಾರಣಾತ್ಮಕ ಜಗತ್ತು ಸರ್ವಕ್ಕೂತೋಯಜಾಕ್ಷನೇ ನೀನು ನಿಮಿತ್ತ ಕಾರಣನುನಿಯಾಮಕನು ನೀನೇವೇ ಚಿದಚಿತ್ ಅಖಿಳಕ್ಕೂಅನ್ಯರಿಗೆ ಸ್ವಾತಂತ್ರ್ಯ ಸಾಮಥ್ರ್ಯವಿಲ್ಲ 4ವಿಧಿಶಿವಾದಿ ಸರ್ವ ಸುರಾಸುರರುಗಳಿಗೆಸತ್ತಾಪ್ರತೀತಿ ಪ್ರವೃತ್ತಿಪ್ರದ ಹರಿಯೇಭೂತಭವ್ಯ ಭವತ್ಪ್ರಭುವು ವಿಷ್ಣು ನೀನೇವೇಚೇತನಾ ಚೇತನಾಧಾರ ಸರ್ವತ್ರ 5ದೂರ್ವಾಸರ ಶಾಪ ನಿಮಿತ್ತದಿ ಸ್ವರ್ಗದಐಶ್ವರ್ಯವು ಕ್ಷಿಣವು ಆಗಿ ಬಹುವಿಧದಿದೇವಶತೃಗಳ ಬಲ ಉನ್ನಾಹವಾಗಲುದೇವರಾಜನು ಬ್ರಹ್ಮನಲ್ಲಿ ಪೋದ 6ವಾಸವವರುಣಾದಿ ಸುರರ ಮೊರೆಕೇಳಿಬಿಸಜಸಂಭವ ಶಿವ ಶಕ್ರಾದಿಗಳ ಕೂಡಿಶ್ರೀಶನೇ ರಕ್ಷಕನು ಎಂದು ನಿನ್ನಲ್ಲಿ ಬಂದುಸಂಸ್ತುತಿಸಿದನುಪರಮಪೂರುಷ ನಿನ್ನನ್ನ7ಅವ್ಯಯನೇ ಸತ್ಯನೇ ಅನಂತನೇ ಅನಘನೇಶ್ರೀವರನೇ ಪೂರ್ಣೈಶ್ವರ್ಯ ಮಹಾಪುರುಷದೇವವರೇಣ್ಯ ನಿನ್ನಲ್ಲಿ ಸ್ತುತಿ ಬ್ರಹ್ಮಸುವಿನಯದಿ ಮಾಡಿದ ವೇದಾರ್ಥಸಾರ 8ಸಹಸ್ರಾರ್ಕೋದಯ ದ್ಯುತಿ ಸುಂದರರೂಪಮಹಾರ್ಹ ಭಗವಂತಹರಿಈಶ್ವರನೇ ನೀನುಬ್ರಹ್ಮಾದಿಗಳ ಸ್ತುತಿಗೆ ಪ್ರಸನ್ನನು ಆಗಿಮಹಾನುಭಾವ ನೀ ಒಲಿದಿ ಕೃಪೆಯಿಂದ 9ಪದುಮನಾಭನೇನಿರ್ವಾಣಸುಖಾರ್ಣವನೇಪದುಮಭವ ಸನ್ನಮಿಸಿ ಪೇಳಿದ್ದಕೇಳಿಸಿಂಧುವಮಥನಮಾಡಲಿಕೆ ಬೇಕು ಎಂದಿಅದರ ಬಗ್ಗೆ ಉಪಾಯವ ಅರುಹಿದಿ ವಿಭುವೇ 10ಕ್ಷೀರಾಬ್ಧಿಯಲಿ ವೀರು ತೃಣ ಲತೌಷಧಿ ಇಟ್ಟುಗಿರಿಶ್ರೇಷ್ಠ ಮಂದರವ ಕಡೆಗೋಲು ಮಾಡಿವರಸರ್ಪ ವಾಸುಕಿಯ ಹಗ್ಗ ಮಾಡಿ ಮಥಿಸಿಅಮೃತೋತ್ಪಾದನ ಯತ್ನಿಪುದು ಎಂದಿ 11ದೈತ್ಯ ದಾನವರೆಲ್ಲ ಶತೃಗಳು ಆದರೂಸಂಧಿಯ ಅವರೊಡೆ ಮಾಡಿ ಕೂಡಿಮಂದರವ ಸಿಂಧುವಲಿ ತಂದಿಟ್ಟು ಮಥಿಸುವುದುಸುಧೆಯ ಉತ್ಪಾದನಕೆ ಉಪಾಯ ಇದು ಎಂದಿ 12ದೈತ್ಯರ ಸಹಕಾರ ಬಗೆ ಯುಕ್ತಿಗಳ ಪೇಳಿಭೀತಿ ಪಡಬೇಡ ವಿಷ ಉಕ್ಕಿ ಬರುವಾಗಅದಿತಜರಿಗೇವೇ ಫಲ ಲಭಿಸುವುದು ಎಂದುದಿತಿಜರಿಗೆಕ್ಲೇಶಭವಿಸುವುದು ಎಂದಿ13ಪುರುಷೋತ್ತಮ ಜಗತಃಪತಿ ಅಜಿತನಾಮಾಸುರರಿಗೆ ಬೋಧಿಸಿದ ರೀತಿ ಅನುಸರಿಸಿಶಕ್ರಾದಿಗಳು ವೈರೋಚನಾದಿಗಳೊಡೆತ್ವರಿತ ಯತ್ನಿಸಿದರು ಕಡಲ ಮಥನಕ್ಕೆ 14ದೂರದಲ್ಲಿ ಇದ್ದ ಆ ಅತಿಭಾರ ಗಿರಿಯನ್ನಸುರರುದಾನವರೆತ್ತಿ ಸಮುದ್ರ ತಟಕೆತರಲು ಬಹು ಯತ್ನಿಸಿದರು ವ್ಯರ್ಥದಿಗಿರಿಯ ಭೂ ಮೇಲೆತ್ತೆ ಅಸಮರ್ಥರು 15ಮೇರುಗಿರಿ ಬದಿ ಇದ್ದ ಮಂದರಾಚಲವುರುದ್ರ ರುದ್ರವರ ಬಲಯುತವು ಎತ್ತಲು ಅಶಕ್ಯಸುರದಾನವರು ಬೆರಗಾಗೇ ಒಂದೇ ಕರದಿಂಗಿರಿಯ ನೀ ಎತ್ತಿ ಗರುಡನ ಮೇಲೆ ಇಟ್ಟಿ 16ಗರುಡನಿಂದ ತಮ್ಮ ಮೇಲೆ ಇರಿಸೆ ಪರಿಕ್ಷಾರ್ಥಭಾರತಾಳದೇ ಸುರಾಸುರರು ಹತರಾಗೇಕಾರುಣ್ಯ ನೋಟದಿ ಬದುಕಿಸಿದಿ ಮೃತರನ್ನತೀವ್ರ ಗಾಯಗಳನ್ನ ಸೌಖ್ಯ ಮಾಡಿದಿಯೋ 17ಲೀಲೆಯಿಂದಲಿ ಪುನಃ ಒಂದೇ ಹಸ್ತದಿ ಗಿರಿಯಮೇಲೆತ್ತಿ ಗರುಡನ ಹೆಗಲಲಿಟ್ಟು ಕುಳಿತುಪಾಲಸಾಗರದಲ್ಲಿ ಸ್ಥಾಪಿಸಿ ಮಥನಕ್ಕೆವ್ಯಾಳನ ಹಗ್ಗದಂದದಿ ಸುತ್ತಿಸಿದಿಯೋ 18ಪುಚ್ಛಭಾಗವು ಅಮಂಗಳವು ಬೇಡವೆಂದುಅಸುರರ ವಾದಾ ಮುಖಭಾಗ ಹಿಡಿಯೇವಾಸುಕಿಯ ಪುಚ್ಛಾಂಗ ದೇವತೆಗಳು ಹಿಡಿದುಶ್ರೀಶ ನೀ ಸಹಕರಿಸೆ ಮಥನವ ಮಾಡಿದರು 19ಪರಮಯತ್ನದಿ ಅಮೃತಾರ್ಥ ಪಯೋನಿಧಿಯಗಿರಿಯಿಂದ ಮಂಥನ ಸುರಾಸುರರು ಮಾಡೆಪರಮಗುರುತರಅದ್ರಿಆಧಾರವಿಲ್ಲದೆಸರಿದು ಮುಳುಗಿ ಬೇಗ ಕೆಳಗಡೆ ಹೋಯಿತು 20ಶೈಲವು ಮುಳುಗಲು ಸುಧಾಕಾಂಕ್ಷಿಗಳ ಮನವ್ಯಾಕುಲದಿ ಮುಖಕಾಂತಿ ಮ್ಲೌನವು ಆಯಿತುಎಲ್ಲಾ ಶ್ರಮವು ವ್ಯರ್ಥ ಎಂದು ಬೆರಗಾಗಿರೆಬಲು ಕೃಪೆಯಲಿ ನೀನು ಒದಗಿದಿ ಆಗ 21ಅದ್ಭುತ್ ಮಹತ್ ಕಚ್ಛಪ ರೂಪದಲಿ ನೀಅಬ್ಧಿಯಲಿ ಬೇಗನೇ ಬಂದು ಮೇಲೆಎಬ್ಬಿಸಿದಿ ಆ ಮಂದರಾಚಲಗಿರಿಯಸುಬಲ ಪೂರುಷ ನಮೋ ಚಿನ್ಮೋದಗಾತ್ರ 22ಚನ್ಮೋದಮಯ ಮಹಾಕೂರ್ಮರೂಪನೇ ನಿನ್ನಅಮಿತ ಸುಬಲ ಲಕ್ಷ ಯೋಜನ ವಿಸ್ತಾರಸುಮಹಾ ದ್ವೀಪದಂದಿರುವ ಪೃಷ್ಠದ ಮೇಲೆಆ ಮಹಾದ್ರಿಯ ಹೊತ್ತಿ ಪುನರ್ ಮಥಿಸಲೊದಗಿದಿ 23ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧೀಶಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀಪ್ರಸನ್ನ ಶ್ರೀನಿವಾಸಧನ್ವಂತರೀ ಶರಣು ಅಜಿತ ಸ್ತ್ರೀಕೂರ್ಮ24-ಇತಿ ಪ್ರಥಮಾಧ್ಯಾಯ ಸಂಪೂರ್ಣಂ-ದ್ವಿತೀಯ ಅಧ್ಯಾಯನೀಲಕಂಠವೃತ್ತಾಂತಲೀಲಾವತಾರನೇ ಸರ್ವಲೋಕಾಧಾರಮಾಲೋಲ ಸುಖಚಿತ್ ಕೂರ್ಮರೂಪಪಾಲಾಬ್ಧಿಜಾಪತಿ ಅಜಿತ ಧನ್ವಂತರೀಲೀಲಾ ಮೋಹಿನಿಅನಘಶರಣು ಮಾಂಪಾಹಿಪಸಿರಿವರಹರಿಕೂರ್ಮನ ಪೃಷ್ಠೋಪರಿನಿಂತಗಿರಿಯಿಂದ ಅಸುರರುಸುರರುಪುನರ್ಮಥಿಸೆಗಿರ್ಗಿರಿ ಗಿರಿ ಗಿರಿ ಎಂದು ಭ್ರಮಿಸಿತು ಗಿರಿಯುಪರಿಮಳ ಪೂ ಸುರಿಸಿದರು ಬ್ರಹ್ಮಾದಿಗಳು 1ವಾಸುಕಿತಾಳದೇ ಬುಸು ಬುಸು ಎಂದು ಮೇಲ್ಶ್ವಾಸದಿ ವಿಷಜ್ವಾಲೆ ಹೊರಗೆ ಬಿಡಲುಅಸುರಬಲಿಇಲ್ವಾದಿಗಳು ಬಿಸಿ ಸಹಿಸದೇಘಾಸಿಹೊಂದಿದರುದಾವಾಗ್ನಿಪೀಡಿತರ ಪÉೂೀಲ್2ದಿತಿಜರು ಅದಿತಿಜರು ಎಷ್ಟೇ ಯತ್ನಿಸಿದರೂಸುಧಾ ಇನ್ನೂ ಪುಟ್ಟದೇ ಇರುವುದ ಕಂಡುದಂತ ಶೂಕವ ಆಗ ಸ್ವಯಂ ನೀನೇ ಹಿಡಿದುಮಥನಮಾಡಿದಿ ಸ್ವಾಮಿ ಕಾರುಣ್ಯದಿಂದ3ಪೀತಾಂಬರಿ ಸುಖ ಚಿನ್ಮಾತ್ರ ಚಾರ್ವಾಂಗಸದಾ ನಮೋ ಶರಣಾದೆ ಲೋಹಿತಾಕ್ಷದಿತಿಜಾ ಅದಿತಿಜಾರೊಡೆ ನೀನು ಸಹಮಥಿಸಲುಲತಾ ಓಷಧಿ ಕಲುಕಿ ಉಕ್ಕಿತುಸಿಂಧು4ಹಾಹಾ ಭಯಂಕರವು ಇದೇನು ಲೋಕಗಳದಹಿಸುವಂದದಿ ಫೇಣ ಉಕ್ಕಿ ಬರುತಿದೆಯುಮಹಾ ವೀರ್ಯತರ ಹಾಲಾಹಲವೆಂಬ ವಿಷ ಇದುಮಹೀಭರ್ತಾ ಮಹಾದೇವ ಮಹಾದ್ರಿದೃತ್ಪಾಹಿ5ಅಸಮ ಸ್ವಾತಂತ್ರ್ಯ ನಿಜಶಕ್ತಿ ಪರಿಪೂರ್ಣವಿಶ್ವರಕ್ಷಕ ನೀ ವಿಷಭಯ ನಿವಾರಿಸೆಸ್ವಸಮರ್ಥನಾದರೂ ಭೃತ್ಯರ ಕೀರ್ತಿಯಪ್ರಸರಿಸೆ ಒದಗಿದಿ ಮಹಾದೇವ ಶಾಸ್ತ 6ಮಹತ್ ಎಂಬ ಬ್ರಹ್ಮನ ಸ್ವಾಮಿ ಆದುದರಿಂದಮಹಾದೇವ ಎಂಬುವ ನಾಮ ನಿನ್ನದೇವೇಮಹಾದೇವ ಶಿವ ಈಶ ರುದ್ರಾದಿ ಶಬ್ದಗಳುಮಹಾಮುಖ್ಯ ವೃತ್ತಿಯಲಿ ನಿನಗೇವೇ ವಾಚಕವು 7ಭಸ್ಮಧರ ದೇವನಿಗೆ ಮಹಾದೇವ ಎಂಬುವನಾಮ ಔಪಚಾರಿಕದಲ್ಲೇವೇ ರೂಢಬ್ರಹ್ಮನಾಮನು ನೀನೇ ಬ್ರಹ್ಮಾಂತರ್ಯಾಮಿಯುಬ್ರಹ್ಮನೊಳು ಇದ್ದು ನೀ ಭುವನಂಗಳ ಪಡೆವಿ 8ರುದ್ರ ನಾಮನು ನೀನೇ ರುದ್ರಾಂತರ್ಯಾಮಿಯುರುದ್ರನೊಳು ಇದ್ದು ನೀ ಸಂಹಾರವ ಮಾಡುವಿತತ್‍ತತ್ರಸ್ಥಿತೋ ವಿಷ್ಣುಃ ತತ್‍ಚ್ಛಕ್ತಿ ಪ್ರಬೋಧÀಯನ್ರುದ್ರನಿಂ ವಿಷಪಾನ ನಿನ್ನ ನಿಯಮನವೇ 9ಶಕ್ರಾದಿ ಸರ್ವರಿಗೂಗುರುಆಶ್ರಯನು ಶಂಕರನುಶಂಕರನಿಗೆ ಆಶ್ರಯನು ಗುರುಮುಖ್ಯವಾಯುಮುಖ್ಯವಾಯುಗಾಶ್ರಯ ಶ್ರೀಕಾಂತ ನೀನುಶ್ರೀಕಾಂತ ನೀನೇವೇ ಸರ್ವಾಶ್ರಯ ಅನೀಶ 10ಯಾವ ಮಹಾದೇವನೊಲಿಯದೇ ವಾಯು ಒಲಿಯಆ ವಾಯು ಒಲಿಯದೇಹರಿತಾನೂ ಒಲಿಯಆ ವಾಯು ಹರಿಒಲಿಯದಿರೆ ಬೇರೆ ಗತಿಇಲ್ಲಆ ವಾಯು ಹರಿಧಾಮ ಮಹಾದೇವ ಸ್ತುತ್ಯ 11ಸರ್ವಾಂತರ್ಯಾಮಿ ಯಾವನಲಿ ಪ್ರಸನ್ನನು ಆಗಿಯಾವನ ಮೂಲಕ ಶಕ್ರಾದಿಗಳ ಕಷ್ಟತೀವ್ರದಿ ಪೋಗುವುದೋ ಆ ಮಹಾದೇವನ ಸ್ತುತಿಸಿದರುಸುರರುಶಿವಾಂತರ್ಯಾಮಿ ಶ್ರೀಹರಿ ಮಹಿಮೆಗಳ ಕೂಡಿ 12ಕರತಲೀಕೃತ್ಯಹಾಲಾಹಲವಿಷವಶಕ್ರಾದಿ ಜನರಲ್ಲಿ ಕೃಪೆ ಮಾಡಿ ಉಂಡುಕರುಣಾಳು ಮಹಾದೇವ ಭೂತದಯಾಪರನು ಈಹರಿಭಕ್ತಾಗ್ರಣಿ ಶಿವ ಉಮೇಶನಿಗೆ ಶರಣು 13ಹರಿಬ್ರಹ್ಮ ಪಾರ್ವತಿ ಪ್ರಜೇಶ್ವರರುಹರನ ಈ ಮಹತ್ಸೇವೆ ಬಹು ಶ್ಲಾಘಿಸಿದರುಕರದಿಂದ ಕೆಳಗೆ ಪ್ರಸ್ಕನ್ನ ಗರವಾದ್ದುಸರೀಸೃಪ ವೃಶ್ಚಿಕಾದಿಗಳೊಳು ಸೇರಿತು 14ಗರವು ಭೂಷಣವಾಯಿತು ವೈರಾಗ್ಯಾಧಿಪ ಶಿವಗೆಸುಪ್ರಸಿದ್ಧನು ಆದ ನೀಲಕಂಠನೆಂದುಧೀರ ಕರುಣಾಂಬುನಿಧಿ ನಂಜುಂಡೇಶ್ವರನು ಈಗಿರಿಜೇಶನಿಗೆ ನಾ ನಮಿಪೆ ಶರಣೆಂದು 15ಈ ಕೃಪಾಕರ ನೀಲಕಂಠ ಕರತಲೀಕೃತ್ಯಆ ಕಾಲಕೂಟವಿಷ ಉಂಡ ಮಹತ್ಕಾರ್ಯಸಂಕೀರ್ತಿ ಪೇಳಿರುವುದು ಶ್ರೀ ಭಾಗವತದಿಬಾಕಿ ಬಹು ಮಹೋಲ್ಪಣ ವಿಷ ವಿಷಯ ಶೃತಿ ವೇದ್ಯ 16ಉರಗಭೂಷಣ ವಿಪ ಉರಗಪರುಗಳಿಗಿಂತನೂರುಗುಣ ಎಂಬುದಕೆ ಅತ್ಯಧಿಕ ಬಲಿಯುವರಮುಖ್ಯ ಪ್ರಾಣ ಜಗತ್ ಪ್ರಾಣಗೆ ಸಮರಿಲ್ಲನೀರಜಜಾಂಡದಿ ಎಲ್ಲೂ ಶರಣೆಂಬೆ ಇವಗೆ 17ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧಾರಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸಧನ್ವಂತರಿ ಶರಣು ಅಜಿತ ಸ್ತ್ರೀಕೂರ್ಮ18-ಇತಿ ದ್ವಿತೀಯಾಧ್ಯಾಯಂ ಸಂಪೂರ್ಣಂ -ತೃತೀಯ ಅಧ್ಯಾಯಶ್ರೀ ಇಂದಿರಾ ಆವಿರ್ಭಾವಸಾರಲೀಲಾವತಾರನೇ ಸರ್ವ ಲೋಕಾಧಾರಮಾಲೋಲ ಸುಖಚಿತ್ ಕೂರ್ಮರೂಪಪಾಲಾಬ್ಧಿಜಾಪತಿ ಅಜಿತ ಧನ್ವಂತರೀಲೀಲಾ ಮೋಹಿನಿಅನಘಶರಣು ಮಾಂಪಾಹಿಪಗರಪಾನವ ವೃಷಾಂಕನು ಮಾಡೆ ಇಂದ್ರಾದಿಸುರರುದಾನವರು ಪುನರ್‍ಮಥನವ ಚರಿಸೆಕ್ಷೀರಸಾಗರದಿಂದ ಉತ್ಪನ್ನವಾದವುಪರಿಪರಿ ವಸ್ತುಗಳ್ ಒಂದರ ಮೇಲೊಂದು 1ಯಜÉೂÕೀಪಯೋಗಿಗಳಪ್ರದ ಕಾಮಧೇನುಉಚ್ಛೈಶ್ರವನಾಮ ಸುಲಕ್ಷಣ ಅಶ್ವಸಚ್ಛಕ್ತಿ ಶ್ರೇಷ್ಠತರ ಐರಾವತನಾಮಗಜೇಂದ್ರ ನಾಲ್ಕು ಚಂದದಂತ ಭೂಷಿತವು 2ಸರಸಿಜೋದ್ಭವಸೇವ್ಯಶ್ರೀಶವರಾಹಹರಿನಿನ್ನ ವಕ್ಷ ಸಂಬಂಧದಿ ಹೊಳೆವಸುಶ್ರೇಷ್ಠ ಕೌಸ್ತುಭರತ್ನ ಎಂಬುವಂತಹಸುಭ್ರಾಜಮಣಿ ಬಂತು ಆ ಸಿಂಧುವಿನಿಂದ 3ಸುರಲೋಕ ವಿಭೂಷಣವು ಸರ್ವವಾಂಛಿತ ಪ್ರದವುಪಾರಿಜಾತವು ಉದ್ಭವವಾಯಿತು ತರುವಾಯಸ್ಫುರದ್ರೂಪ ರಮಣೀಯ ಸುಂದರಾಂಗಿಗಳುಹಾರವಸನಭೂಷಿತ ಅಪ್ಸರಸರು 4ಸೌದಾಮಿನಿಗಮಿತ ವಿದ್ಯುತ್ ಕಾಂತಿಯಿಂದದಿಕ್‍ವಿದಿಕ್ಕುಗಳ ರಂಜಿಸುವರೂಪ -ದಿಂದ ಆವಿರ್ಭವಿಸಿದಳು ಸಾಕ್ಷಾತ್ ಶ್ರೀಇಂದಿರೆಅಲೌಕಿಕ ಸೌಂದರ್ಯಪೂರ್ಣೆ5ಸರ್ವದಾ ಸರ್ವವಿಧದಿ ನಿನ್ನ ಸೇವಿಸಿ ನುತಿಪಸರ್ವಜಗಜ್ಜನನಿಯೇಸಿಂಧುಕನ್ಯಾದೇವ ದೇವೋತ್ತಮ ರಾಜರಾಜೇಶ್ವರ ನಿನಗೆದೇವ ಶ್ರೀ ರಾಜರಾಜೇಶ್ವರಿನಿತ್ಯನಿಜಸತಿಯು6ಇಂದ್ರಾದಿ ದೇವತೆಗಳು ಮುನಿಜನರುಇಂದಿರೆಯನ್ನು ವಿಧಿಯುಕ್ತ ಪೂಜಿಸಿದರುಸಿಂಧುರಾಜನು ವರುಣ ಏನು ಧನ್ಯನೋ ಜಗನ್ -ಮಾತೆ ನಿರ್ದೋಷೆ ರಮಾ ಮಗಳಾಗಿ ತೋರಿಹಳು 7ಅಲೌಕಿಕ ಮುತ್ತು ನವರತ್ನದ ಮುಕುಟಒಳ್ಳೇ ಪರಿಮಳ ಹೂವು ಮುಡಿದ ತುರುಬುಪಾಲದಲಿ ಶ್ರೇಷ್ಠತಮ ಕಸ್ತೂರಿತಿಲಕವುಪೊಳೆವ ಪೂರ್ಣೇಂದು ನಿಭ ಮೂಗುಬಟ್ಟು 8ಅಂಬುಜಾಕ್ಷಗಳು ದಿವ್ಯ ಮುತ್ತಿನ ತೋಡುಗಳುಗಂಭೀರ ಸೌಭಾಗ್ಯಪ್ರದ ಕೃಪಾನೋಟಕಂಬುಕಂಠದಿ ಮಂಗಳಸೂತ್ರ ಕರಯುಗದಿಅಂಬುಜಾವರಕೊಡುವ ಅಭಯಹಸ್ತಗಳು9ಕಂದರದಿ ಎಂದೂ ಬಾಡದಕಮಲಮಾಲಾಪೀತಾಂಬರ ದಿವ್ಯ ಕುಪ್ಪಸ ಮೇಲ್ಪಟ್ಟಿವಸ್ತ್ರ ರಾಜಿಸುವಂತಹ ಸ್ವರ್ಣಹಾರಗಳುಕಾಂತಿಯುಕ್ ಭಂಗಾರ ಸರ್ವಾಭರಣಗಳು 10ಆನಂದಮಯಅಜಿತನಾಮಾ ನಿನ್ನನು ಮನ-ಮಂದಿರದಿ ಪೂಜಿಸುತ ಇಂದಿರಾದೇವಿಬಂದು ಸಭೆಯಲಿ ಸಾಲು ಸಾಲಾಗಿ ಕುಳಿತಿದ್ದವೃಂದಾರಕರನ್ನ ಮಂದಹಾಸದಿ ನೋಡಿದಳು 11ಒಬ್ಬೊಬ್ಬ ದೇವತೆಯಲೂ ಗುಣವಿದ್ದರೂಅಬ್ಬಬ್ಬ ಏನೆಂಬೆ ದೋಷಗಳೂ ಉಂಟುಅದ್ಭುತ ಗುಣನಿಧಿನಿರ್ದೋಷಸರ್ವೇಶ-ಅಂಬುಜನಾಭ ನೀನೇವೇ ಎಂದು ನಮಿಸಿದಳು 12ಕ್ಷರರಿಗೂ ಅಕ್ಷರರಿಗೂ ಎಂದೆಂದೂ ಆಶ್ರಯನುಪುರುಷೋತ್ತಮಹರಿವಿಷ್ಣು ಸ್ವತಂತ್ರಸರಿ ಅಧಿಕರು ಇಲ್ಲದ ಅನಘನು ಸರ್ವಗುಣಪರಿಪೂರ್ಣನಿಗೇವೇ ಅರ್ಪಿಸಿದಳು ಮಾಲೆ 13ಉತ್ತಮ ಸುತೀರ್ಥಗಳಿಂದ ಅಘ್ರ್ಯ ಚಮನಪಾದ್ಯಾದಿ ಅರ್ಚನೆ ವಿಧಿಯುಕ್ತವಾಗಿಸುತಪೂನಿಧಿ ವಸಿಷ್ಠಾದೀಯರು ವೇದೋಕ್ತಮಂತ್ರ ಪಠಿಸೆ ವರುಣ ಹರಿಯ ಪೂಜಿಸಿದ 14ಆನಂದಪೂರ್ಣಅಜನಿತ್ಯಮುಕ್ತೆ ಮಗಳುಇಂದಿರೆಯಆನಂದಮಯಹರಿನಿನಗೆಸಿಂಧುಧಾರೆ ಎರೆದು ಮದುವೆ ಮಾಡಿಕೊಟ್ಟಆನಂದ ನಿತ್ಯದಂಪತಿ ರಮಾ ಮಾಧವರು 15ಪೀತಾಂಬರ ದಿವ್ಯ ಆಭರಣ ಪೊಳೆಯುತ್ತಮೋದಮಯ ನೀ ಸಿಂಧುಜಾ ಸಹ ದಿವ್ಯರತ್ನ ಖಚಿತ ಮಂಟಪದಲಿ ಕುಳಿತರೆಮುದದಿ ವರ್ಷಿಸಿದರು ಪೂಮಳೆಸುರರು16ಸಂಭ್ರಮದಿ ಮಂಗಳವಾದ್ಯ ಸುಧ್ವನಿಗಳುತುಂಬಿತುಅಂಬರಅಂಬುಧಿಎಲ್ಲೂಗಂಭೀರ ಸುಸ್ವರ ವೇದಘೋಷಗಳುತುಂಬರ ನಾರದಾದಿಗಳ ಗಾಯನವು 17ದೇವಗಾಯಕರುಗಳ ದಿವ್ಯ ಕೀರ್ತನೆಗಳುದೇವನರ್ತಕ ನರ್ತಕಿಯರ ನರ್ತನವುದೇವತೆಗಳ ಆಭರಣಾದಿ ಕಾಣಿಕೆಗಳದೇವಿ ರಮೆಗೂ ನಿನಗೂ ಅರ್ಪಿಸಿದರು ಮುದದಿಂ 18ವನಜಭವ ರುದ್ರಾದಿಗಳು ಮುನಿವೃಂದವುಸನ್ನುತಿಸುತ ಸರ್ವ ಕೀರ್ತನವನ್ನುಆನಂದ ಭಕ್ತಿಯಂ ಶ್ರೀ ಲಕ್ಷ್ಮೀಯನ್ನು ನೋಡಿಧನ್ಯರಾದರು ನಮೋ ವಿಷ್ಣುಗೆ ಶ್ರೀರಮೆಗೆ 19ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧಾರಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸಧನ್ವಂತರಿ ಶರಣು ಅಜಿತ ಸ್ತ್ರೀಕೂರ್ಮ20- ಇತಿ ತೃತೀಯ ಅಧ್ಯಾಯ ಪೂರ್ಣಂ -ಚತುರ್ಥ ಅಧ್ಯಾಯಶ್ರೀ ಧನ್ವಂತರಿ ಹಾಗೂ ಮೋಹಿನಿವೃತ್ತಾಂತಸಾರಲೀಲಾವತಾರನೇ ಸರ್ವಲೋಕಾಧಾರಮಾಲೋಲ ಸುಖಚಿತ್ ಕೂರ್ಮರೂಪಪಾಲಾಬ್ಧಿಜಾಪತಿ ಅಜಿತ ಧನ್ವಂತರೀಲೀಲಾ ಮೋಹಿನಿಅನಘಶರಣು ಮಾಂಪಾಹಿಪವಿಸ್ತಾರವಾಗಿ ಫೇಣವು ವ್ಯಾಪಿಸಿರುವಆ ಸಮುದ್ರದಿಂದ ವಾರುಣಿಯು ಬರಲಾಗಅಸುರರನು ತಮಗೇವೆ ಬೇಕೆಂದು ಕೊಂಡರುಈಶ ನೀ ಅವರಿಗೆ ಅನುಮತಿ ಕೊಡಲು 1ಸುಧೆಗಾಗಿ ಸಿಂಧುವ ಮತ್ತೂ ಮಥನಮಾಡೆಉದಿಸಿದನುಪರಮಅದ್ಭುತ ಪುರುಷನುಸುಂದರ ವಿಗ್ರಹ ಕಂಬುಗ್ರೀವ ಅರುಣೇಕ್ಷಣಅಂದ ಸುದೀರ್ಘ ಪೀವರದೋರ್ದಂಡ 2ಸಗ್ನಧರ ಶ್ಯಾಮಲಸ್ತರುಣ ಸರ್ವಾಭರಣ -ದಿಂದ ಒಪ್ಪುವ ರತ್ನಖಚಿತ ಕುಂಡಲವುಪೀತವಾಸ ಮಹಾಸ್ಕಂಧ ಸುಶುಭಾಂಗನುಸ್ನಿಗ್ದ ಕುಂಚಿತ ಕೇಶ ಸಿಂಹ ವಿಕ್ರಮನು 3ಅನುಪಮಾದ್ಭುತ ಈ ಮಹಾಪುರುಷ ಸಾಕ್ಷಾತ್ವಿಷ್ಣು ನೀನೇವೆ ಮತ್ತೊಂದವತಾರಆನಂದ ಚಿನ್ಮಾತ್ರ ಹಸ್ತದಲಿ ಹಿಡಿದಿರುವಿಪೂರ್ಣವಾಗಿ ಅಮೃತ ತುಂಬಿರುವ ಕಳಸ 4ಆಯುರ್ವೇದ ಮಹಾಭಿಷಕ್ ಶ್ರೀ ಧನ್ವಂತರಿ ನೀನುಕೈಯಲ್ಲಿ ಪಿಡಿದ ಪಿಯೂಷ ಕುಂಭವನುದೈತ್ಯರು ನೋಡಿ ಬಹು ಇಚ್ಛೈಸಿ ಅಪಹರಿಸೆಶ್ರೀಯಃಪತಿಯೇಸುರರುನಿನ್ನಲ್ಲಿ ಮೊರೆಇಟ್ಟರು5ದೇವತಾವೃಂದವಿಷ್ಣಮನಸ್ಸಿಂದಲಿದೇವವರೇಣ್ಯಹರಿನಿನ್ನ ಶರಣು ಹೋಗಲುಯಾವ ಮನಖೇದವೂ ಬೇಡ ಅನುಕೂಲವನೇಮಾಡುವಿ ಎಂದು ನೀ ಅಭಯವನ್ನಿತ್ತಿ 6ಅಮೃತಕಲಶವು ಎಂದು ನೆನೆದು ಆ ಅಸುರರುನಾಮುಂಚಿ(ಚೆ) ನಾಮುಂಚಿ (ಚೆ) ನೀ ಮುಂಚಿ (ಚೆ) ಅಲಲ್ತಮ್ಮೊಳಗೆ ಈ ರೀತಿ ಪರಸ್ಪರ ಕಾದಾಡೇನೀ ಮೋಹಿನಿ ರೂಪದಲಿ ತೋರಿ ನಿಂತಿ 7ಪರಮಅದ್ಭುತ ಅನಿರ್ದೇಶ್ಯ ಸ್ತ್ರೀರೂಪವಧರಿಸಿ ನಿಂತಿಯೋ ಆ ಅಸುರರ ಮುಂದೆಅರಳಿದಮಲ್ಲಿಗೆ ಮುಡಿದ ಕುಂತಳವುವರಾನನ ಕರ್ಣಕುಂಡಲಕಪೋಲ8ಸುಗ್ರೀವ ಕಂಠಾಭರಣ ಸುಭುಜಾಂಗದಸ್ಫುರತ್ ನವ ಯೌವನಗಾತ್ರ ಸೌಂದರ್ಯಉರದಿ ಪೊಳೆಯುವ ನವರತ್ನಪದಕಗಳುಭಾರಿ ಪೀತಾಂಬರವುದಿವ್ಯಒಡ್ಯಾಣ9ಸರ್ವಅವಯವಗಳು ಅನುಪಮ ಸುಂದರವುಸರ್ವಾಭರಣ ವಿಭೂಷಿತ ಸೊಬಗುಸರ್ವಾಕರ್ಷಕ ಮಂದಗತಿ ನೋಟವುಸರ್ವ ಆ ದೈತ್ಯರೊಳು ಕಾಮ ಪುಟ್ಟಿಸಿತು 10ಅಮರರೊಳು ದೈತ್ಯರೊಳು ಗಂಧರ್ವ ನರರೊಳುಈ ಮಹಾ ಸೌಂದರ್ಯರೂಪ ಕಂಡಿಲ್ಲಸುಮೋಹಿತ ದೈತ್ಯರು ಸುಧಾ ವಿಷಯದಲಿತಮಗೂ ಸುರರಿಗೂ ನ್ಯಾಯಮಾಡೆ ಕೋರಿದರು 11ಮಾಯಾಯೋಷಿದ್ವಪುಷಅಮೃತ ವಿನಿಯೋಗನ್ಯಾಯವೋ ಸರಿಯೋ ಸರಿಯಲ್ಲವೋನೀ ಹ್ಯಾಗಾದರೂ ಮಾಡಲಿಕೆ ಒಪ್ಪಿದರುಮಾಯಾಮೋಹವೃತ ಆ ದೈತ್ಯಜನರು12ಉಪವಾಸ ಸ್ನಾನ ಹೋಮಾದಿಗಳು ಆಗಿದೀಪಾವಳಿಗಳ ಹಚ್ಚಿಟ್ಟು ಮುದದಿತಪ್ಪದೇಮುಕ್ತಆಚರಣೆ ತರುವಾಯಸುಪವಿತ್ರ ಸುಧೆಗೆ ಕಾದರು ಸುರಾಸುರರು 13ಸುಧೆಗೆ ಕಾದಿರುವ ಸುರಾಸುರರ ನೋಡಿಸುಧಾ ಕಲಶ ನಿಜವಾದ್ದನ್ನ ಹಿಡಿದಿಮಂದಗಜ ಗತಿಯಲ್ಲಿ ಶೃಂಗಾರ ಸುರಿಸುತ್ತಬಂದಳು ಮೋಹಿನಿ ಚಂದ ನವಯುವತಿ 14ಅಸುರರು ಅರಿಯರು ಯೋಷಿದ್ ವಪುಹರಿಯೇವೇಆ ಸ್ಫುರದ್ರೂಪಿಣಿ ಮೋಹಿನಿ ಎಂತಅಸುರರು ಲೋಲುಪಮರು ಸುಧಾ ಅನರ್ಹರು ಎಂದುಶ್ರೀಶ ನೀ ನಿಶ್ಚಯಿಸಿದಿ ದೇವ ದೇವ 15ದೇವತೆಗಳ ಪಂಕ್ತಿ ಒಂದು ಸಾಲು ಮತ್ತುದೇವಶತೃಗಳ ಪಂಕ್ತಿ ಮತ್ತೊಂದು ಸಾಲುದೇವತೆಗಳಿಗೇವೇ ನೀ ಸುಧ ಉಣಿಸಿದಿದೇವಶತೃಗಳಿಗೆ ಸುಧಾ ಉಣಿಸಲಿಲ್ಲ 16ಕೂರ್ಮರೂಪದಲಿ ನೀ ಮಂದರಾಗಿರಿ ಪೊತ್ತುಅಮರರ ಸಹಿತಸಿಂಧುಮಥಿಸಿದಿ ಅಜಿತಅಮೃತ ಕಲಶವ ತಂದಿ ಶ್ರೀಶ ಧನ್ವಂತರಿಸುಮನಸಸುಧಾಪ್ರದ ಮೋಹಿನಿರೂಪ17ಹರಿಪಾದಾಶ್ರಿತರಾಗಿರುವ ಸುರರಿಗೆ ಅಮೃತಹರಿಪರಾನ್ಮುಖ ದ್ವೇಷಿ ದೈತ್ಯರಿಗೆ ಇಲ್ಲಸುರಾಸುರಗಣಕೆ ಸಮ ಕರ್ಮೋಪಕರಣಗಳುಆದರೂ ಯೋಗ್ಯತೆಯಿಂದ ಫಲ ಬೇರೆ ಬೇರೆ 18ಜ್ಞಾನಸುಖಪೂರ್ಣ ಸ್ವತಂತ್ರ ಸರ್ವಾಧಾರಪೂರ್ಣ ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸಧನ್ವಂತರಿ ಶರಣು ಅಜಿತ ಸ್ತ್ರೀಕೂರ್ಮ19- ಇತಿ ಚತುರ್ಥ ಅಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಮಾಯೆಯ ಮಹಾ ಸರೋವರದೊಳಗೆ ಕಡೆಹಾಯ್ವರೊಬ್ಬರನು ಕಾಣೆಪಹರಿತಾ ಮುಳುಗಿದ ಹರ ತಾ ಮುಳುಗಿದಹಂಸವಾಹನನು ಮುಳುಗಿದನುಸುರಪತಿಮುಳುಗಿದಶಿಖಿತಾ ಮುಳುಗಿದಸುರಾಸುರರು ತಾ ಮುಳುಗಿದರು1ಸೂರ್ಯನು ಸುಧಾಂಶುಮುಳುಗಿದ ನವಗ್ರಹರೆಲ್ಲ ಮುಳುಗಿದರುಶೂರನು ಮುಳುಗಿದ ಶುಂಠನು ಮುಳುಗಿದ ಸ-ಚರಾಚರರೆಲ್ಲ ಮುಳುಗಿದರು2ಭಾಗ್ಯನು ಮುಳುಗಿದ ಬಡವನು ಮುಳುಗಿದಬಹುದರಿದ್ರನೂ ಮುಳುಗಿದನುಯೋಗ್ಯರು ಚಿದಾನಂದ ಭಕ್ತರುತಾವು ಕಂಡು ಮಾತ್ರ ಮುಳಗಲಿಲ್ಲ3
--------------
ಚಿದಾನಂದ ಅವಧೂತರು
ಶ್ರೀ ಮದಾನಂದ ತೀರ್ಥ ಹನುಮ | ಭೀಮನಿನ್ನ ಸಮಾನ ಪುರುಷರುಈ ಮೂಜಗದೊಳಿಲ್ಲವೆಂದು ಶ್ರೀ ರಾಮಸಹಭೋಜನವನೀಯನೆ? ಪಹರಿವಿರಿಂಚಿ ಸಹಾಯದಿಂದ | ಹರನುತ್ರಿಪುರವನಳಿಯಲಾಗ |ಬರಿದೆ ಕೊಂಡಾಡಿದರು ಸರ್ವರು |ಅರಿಯದೆಯೆ ನಿನ್ನ ಸಾಹಸ ||ಶರಧಿಲಂಘಿಸಿ ದಾನವರನು ತರೆದುಸೀತೆಗೆ ಉಂಗುರವಿತ್ತು |ಪುರವನುರುಹಿ ಹರಿಯಡಿಗೆ ಆಕುರುಹತಂದು ಮುಟ್ಟಿಸಿದೆಯೊ 1ಸಾಸಿರದ ತನ್ನ ಪೆಡೆಯ ನಡುವೆ | ಈಸುಸಚರಾಚರವನೆಲ್ಲ |ಸಾಸಿವೆಯಂದದಲಿ ಇಟ್ಟಾ | ಶೇಷನ-ಮೂಲರೂಪದ ||ಆ ಶಕುತಿಯನು ತೋರಿಸಲುದಶಾಸ್ಯನೆಳೆಯುವ ಸೌಮಿತ್ರಿಯನುದಾಶರಥಿಯ ಬಳಿಗೆ ತಂದು | ನೀ ಸಲಹಿದೆ ಜಗವರಿಯಲು 2ತನ್ನ ಜನನಿಯೊಬ್ಬಳಿಗೆಸುಪರ್ಣಬಳಲಿ ಸುಧೆಯ ತರಲುಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ ||ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ 3ಸಕಲ ಪ್ಲವಗನಿಕರ ರಾಮನ | ತ್ರಿಕರಣಸೇವೆಯನು ಮಾಡಿ |ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದುಕೇಳಲು ನೀನು ನಾ ||ಲುಕು ಪುರುಷಾರ್ಥಗಳಜರಿದು| ಭಕುತಿಯಕೊಡು ಎನಲು ನವಕನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನುನಿನ್ನ ಪೊಗಳಿದ 4ಶರಧಿಯ ಮಥನದೊಳುದಿಸಿದ |ಗರಳಜಗತ್ತನು ಅಂಜಿಸೆಸಿರಿಯರಸನ ಪೆರ್ಮೆಯಿಂದ | ಸುರಿದುಅದನು ಜೀರ್ಣಿಸಿಕೊಂಡ ||ಮಾರುತನವತಾರ ವೃಕೋ | ದರನೆ ನೀನು ಎಂದರಿಯದೆಮರುಳ ಕೌರವರಿಕ್ಕಿದ ವಿಷವ | ಭರದಿಉಂಡು ತೇಗಿದುದರಿದೆ ? 5ಅವನಿಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನುಬವರಮುಖದಿ ನಗುತ ಗೆಲಿದು |ಹವಿಯ ಕೃಷ್ಣಾನಿಗರುಪಿಸಿದಿವಿಜರೆದುರುಗೊಳಲುಅವರ|ನವರತಾರತಮ್ಯದಿ ಮನ್ನಿಸಿ |ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ 6ಸುರಾಸುರರ ಸಂಗ್ರಾಮದಲಿ |ಅರಿವಿಪ್ರಚಿತ್ತಿಯ ನೀನು ಕೊಲ್ಲಲು |ವಿರಿಂಚಿ-ಹರರ ವರದಿಂದವನೆ |ಜರಾಸಂಧನಾಗಿ ಇಳೆಯೊಳು |ಅರಸುಗಳನು ಕಾಡಲವನ ಸರನೆ ಸೀಳಿ ಪಶುವಿನಂತೆಹರಿಗೆ ಅರ್ಪಿಸಲವನು ಸಕಲಾ | ಧ್ವರಕ್ಕಿಂತಲು ತೃಪ್ತನಾದ 7ನಡುಮನೆಯೆಂಬ ಸಾಧುದ್ವಿಜನ | ಮಡದಿಯಬಸಿರಿನಲಿ ಉದಿಸಿಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ||ತಡೆದು ಆನಂದ ಶುಭಗುಣಗಳ | ಕಡಲುಹರಿಸರ್ವೋತ್ತಮನೆಂದುಒಡಂಬಡಿಸಿ ಸ್ವಮತವನ್ನು | ಪೊಡವಿಯೊಳಗೆಸ್ಥಾಪಿಸಿದೆಯೊ ನೀ 8ಮರುತ ನಿನ್ನವತಾರ ತ್ರಯವ | ನರಿತುಭಜಿಪಗೆ ಶ್ವೇತದ್ವೀಪ |ದರುಶನವನೆ ಮಾಡಿಸಿ ಶ್ರೀ |ಪುರಂದರವಿಠಲೇಶನ |ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |ಪರಮಾನಂದವ ಪಡೆಸಿ ಹೊರೆವೆ |ಪರಿಪರಿಯ ಭೋಗಗಳನಿತ್ತು 9
--------------
ಪುರಂದರದಾಸರು
ಹ್ಯಾಗಾಹದು ಭವರೋಗಿಗಾರೋಗ್ಯಮ್ಯಾಗೆ ಮ್ಯಾಗಪಥÀ್ಯವಾಗುತಿದೆ ಕೃಷ್ಣ ಪ.ಗುಜ್ಜುಗಿರಿವ ಆಶಾಲಕ್ಷಣ ಚಳಿಲಜ್ಜೆಗೆಡಿಸುತಿವೆ ಗದಗದಿಸಿವಜ್ಜರಹೊದಪಿಲಿ ನಿಲವು ಕುಶಾಸ್ತ್ತ್ರದಗಜ್ಜರಿಕಾಯಿ ದಣಿಯೆ ಮೆಲುವವಗೆ 1ಮೊರಮೊರಸು ಮೂರ್ಪರಿ ಜ್ವರ ದಾಹದಿನಿರಸನ ರಸನಾಯಿತಿದರೊಳಗೆಅರಿಕಿಲ್ಲದಹ ಗಾರಿಗೆ ಕಾಮನಹರಿಬದನೆಕಾಯುಂಬುವಗೆ 2ಕಾಮಿನಿನೋಟದ ಕಾಮಾಲೆಯಾಯಿತುನೇಮದಿ ಸೊಬ್ಬೇರಿತು ಮೈಯಪ್ರೇಮದ ಚಕ್ಷುದೋಷ್ಯಾತರಲೈದದುಕಾಮತಪ್ತ ವರೇಣ್ಯವಗೆ 3ನಮ್ಮದು ನಮ್ಮದು ಕೋ ಕೋ ಎನ್ನುತಕೆಮ್ಮಿಗೆ ಖುಳಖುಳಸಿತುಕಾಯಹಮ್ಮುಗಳಕ್ಕರೆಯ ಖಣಿಯಾದ ಉಳ್ಳಿಯಹೆಮ್ಮೂಲಂಗಿಯ ತಿನುವವಗೆ 4ಜಗಸಟೆಯೆಂಬಗೆ ಸಂಗ್ರಹಣಿಯು ಅವನಿಗೆ ಪಾಂಡಿತ್ಯ ಪಾಂಡುರೋಗವಿಗಡಕುತರ್ಕ ಚಿಕಿತ್ಸದಿ ನೂಕುನುಗ್ಗೆ ತೊಂಡೆಕಾಯಿ ಸವಿವವಗೆ 5ಅಂಜದೆ ಸಲ್ಲದ ನಿಷಿಧಗÀಳುಂಡರೆನಂಜೇರದೆ ಬಿಡುವುದೆ ಬಳಿಕಾಕಂಜಾಕ್ಷನ ಬಿಟ್ಟಿತರ ಸುರಾಸುರರೆಂಜಲು ಮೈಲಿಗೆ ಬಿಡದವಗೆ 6ಹೃದ್ರೋಗವು ಹೋಗುವುದೆ ನಿಂಬ ಹರಿದ್ರದ ಹುಡಿ ತಲೆಗೊತ್ತಿದರೆನಿದ್ರಿಲ್ಲದೆಕರಪಂಜಲಿ ಕುಣಿದರೆರುದ್ರದುರಿತಹೊಡೆಯದೆ ಬಿಡುವುದೆ7ಇಂತೆ ದಿನಾಂತರ ಕ್ಷಯ ಮೇಲಿಕ್ಕಿತ್ತುಅಂತ್ಯೌಪದ ಯಮಪುರದೊಳಗೆಎಂತಾದರೆ ಮಾಡಿಸಿ ಕೊಂಡಳುತಿಹಭ್ರಾಂತ ಕಳಿಂಗದ ಪ್ರಿಯದವಗೆ 8ಮನ್ವಂತರ ಕಲ್ಪಾಂತರ ಈ ಕ್ಲೇಶಾನ್ವಯವೆಗ್ಗಳಭೋಗಿಸುತ ಪ್ರಸನ್ವೆಂಕಟಪತಿಗುರುಮಧ್ವೇಶಧನ್ವಂತ್ರಿಯ ಪದ ವಿಮುಖನಿಗೆ 9
--------------
ಪ್ರಸನ್ನವೆಂಕಟದಾಸರು