ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾರಣಾಸಿ ಕಾಶೀಪುರಾಧೀಶ್ವರಾ ಶಶಿಧರ ವಾ ಣೀಶ ಪರೇಶ ಸುರೇಶನುತ ಹರ ಪ ಶ್ರೀಶೈಲಜಾಪ್ರಿಯ ಪಾಶಾಂಕುಶಧರ ಶೇಷಾಭರಣ ಪರಮೇಶಾ ಪರಾತ್ಪರ ಅ.ಪ ಇಂದೀವರಾಕ್ಷ ಗೋವಿಂದಾದಿ ಪರಿವೃತ ನಂದೀಶನುತ ಸುರಬೃಂದಾಳಿ ವಿನುತ ಮಂದಾಕಿನೀಧರ ಮಂದಾರ ಸುಮಯುತ ಬಿಂದುಮಾಧವ ಮಾಂಗಿರೀಶರಂಜಿತ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಗಣಾಧಿನಾಥಾಶ್ರಿತ ಸೌಖ್ಯಧಾತ ಪ ನಾಗಭೂಷಣಸುತ ನಾರದಾದಿವಂದಿತ ಅ.ಪ ಗಜವದನ ಗಣೇಶ ಲಂಬೋದರ ಗಿ- ರಿಜಾಮಲ ಸಮುದ್ಭವ ಭೂತೇಶ ಭೂರಿ ಭಜಿಸುವೆ ನಾನಿನ್ನ ಸುಜನರ ಕಾರ್ಯಕೆ ಬರುತಿಹ ವಿಘ್ನ ರಜಗಳಿಗೆ ನಮೊ ನಮೋ ಎಂಬುವೆನಾಂ 1 ಇಂದುಧರನ ತನಯಾ ರವಿ ಶಶಿ ಸಂ- ಕ್ರಂದನ ಮುಖ ಸುರಬೃಂದ ಸೇವ್ಯಮೃದು ಮಂದಹಾಸ ಪೂರ್ಣೇಂದುವದನ ಸ್ಫುರಿ- ತೇಂದೀವರನಯನಾ ಇಂದಿನದಿನ ಸಕಲ ದೇಶದವರು ಮುದ- ದಿಂದ ನಾಟಿ ಭೈರವಿ ಶ್ರೀರಾಗಗ- ದ್ವಂದ್ವಗಳನು ಕೊಂಡಾಡುತಲಿಹರೊ 2 ಪಾಶಾಂಕುಶಗಳ ಕರದಿ ಹಿಡಿದು ನಿಜ- ದೋಷದೂರ ಗುರುರಾಮವಿಠಲನ ದಾಸರದಾಸ್ಯವನಿತ್ತು ಸದಾಸಂ- ತೋಷದಿಂದ ಪಾಲಿಸು ಎನ್ನನು ಸ- ರ್ವೇಶ ಮೋದಕ ಪ್ರಿಯ ವಿಘ್ನೇಶಾ 3
--------------
ಗುರುರಾಮವಿಠಲ