ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವ ಜನಕ ನೀನಿರುತಿರಲೆನಗಿ ನ್ನಾವ ಬಂಧುವು ಬೇಕೊ ಮಾಂಗಿರಿಯ ರಂಗ ಪ ದೇವ ನೀನಲ್ಲದೆ ಲಕ್ಷಜೀವಿಗಳಿದ್ದು ಈವ ಸೌಖ್ಯವು ಬೇಡ ಮಾಂಗಿರಿಯ ರಂಗ ಅ.ಪ ನಾರಿಯ ಮಾನಾಪಹಾರವ ಗೈದಾಗ ವೀರರೈವರು ತಮ್ಮ ಮೋರೆಯ ತೋರ್ದರೆ ನೂರುಮಂದಿ ವೇದಪಾರಂಗತರಿದ್ದು ಕ್ರೂರ ಕಾರ್ಯಂಗಳ ನಿಲಿಸಿದರೆ ರಂಗ 1 ಮೂವತ್ತುಮೂರುಕೋಟಿ ನಿರ್ಜರರಿದ್ದು ರಾವಣನೊಬ್ಬನ ಜೈಸಿದರೆ ಪಾವಕ ಹಸ್ತವನಿತ್ತ ಗಿರೀಶನ ದೇವಗಣೇಶ್ವರರುಳಿಸಿದರೇ 2 ಅರಕ್ಷಿತವಾದುದ ಸುರಕ್ಷಿತ ಗೈವೆ ಸುರಕ್ಷಿತವಾದುದಕ್ಷಯ ಗೈವೆ ನಿರಕ್ಷರಕುಕ್ಷಿಗೆ ಮೋಕ್ಷವ ನೀನೀವೆ ದುರಿತಕ್ಷಯ ಗೈದು ಪಾಲಿಸುವೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವರದೇಂದ್ರ ವರದೇಂದ್ರ ವರದಾಯಕ ಗುರು | ವರಗುಣಸಾಂದ್ರ ಪ ಪಾವನ ಚರಿತ ವೃಂದಾವನ ಮಂದಿರ ಕೋವಿದ ಜನ ಸುಸೇವಿತ ಸದಯ1 ಕಾಲಾಷಾಯಾಂಬರ | ಭೂಷಿತ ಎನ್ನಯ ದೋಷಗಳೆಣಿಸದೆ ಪೋಷಿಸು ಸತತ 2 ಕಠಿಣ ಭವಾಂಬುಧಿ ಘಟಜ ಕುಟಿಲಮತ ವಿಟಿಪಿ ಕುಠಾರಿ ಉತ್ಕಟ ಸನ್ಮಹಿಮ 3 ನತ ಸುರಕ್ಷಿತಿರುಹ | ಜಿತ ರತಿಪತಿ ಶರ ಮತಿವರ ದಶಮತಿ ದುರಿತವಾರಿಧಿ ವಿಭು 4 ಹೇಮೋದರ ವಿತ ಶಾಮಸುಂದರನ ಪ್ರೇಮಪಾತ್ರ ಪುಣ್ಯಧಾಮ ಮಹಾತ್ಮ 5
--------------
ಶಾಮಸುಂದರ ವಿಠಲ