ಒಟ್ಟು 13 ಕಡೆಗಳಲ್ಲಿ , 8 ದಾಸರು , 13 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಪ್ರಿಯನಾ ನೀ ತಂದು ತೋರೇ ಸುಜ್ಞಾನೇ ಪ ಕನಸಿನೊಳಗ ಕಂಡ ಪರಿಯಾರೂಪದ ದೋರಿ ದಾವ ತೇಜಮುಸುಕಿತು ಧರಿಯೇ | ತ್ರೈ ಭುವನವ ರಕ್ಷಿಸ ಬಂದಾ ಹರಿಯೇ | ಮುಜ್ಜೆಮರಿಯೇ 3 ಮುಟ್ಟಿಲೀ ತಗಧನುಏಳಲಿ ಝಮ್ಮೆನೇ ನಾವು ನೆಟ್ಟನೆಪೂಜಿಪೆವು ಗೌರಮ್ಮನೇ ಎಂದು ಬಿಟ್ಟ ಮಗಳು ಬೇಡಿಕೊಂಡರು ಸುಮ್ಮನೇ ಅಡಿಯಿಟ್ಟುನಲಿದು ಬರುವ ರಾಮೋ ಘಮ್ಮನೇ ಪರಬೊಮ್ಮನೆ4 ಬಂದು ನೋಡಿಬಿಲ್ಲನೆತ್ತಿದ್ದಾಚಕ್ಕನೇ ಅರುವಿಂದ ಲೋಚನೆ ಮಾಲಿ ಹಾಕಲು ಘಕ್ಕನೇ ವೃಂದ ಕಾಣುತ ಹೆದರಿತುಧಕ್ಕನೇ ನಮ್ಮ ತಂದೆ ಮಹಿಪತಿ ನಂದನ ಪ್ರಭು ಠಕ್ಕನೇ ಪಾಲಕ್ಕುನೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏತಕೆ ಮರುಳಾದೆಯೋ ಆ ಹೆಣ್ಣಿನಿ-ನ್ನೇತಕೆ ಭ್ರಮಿಸಿದೆಯೋಜಾತಿನಾಯಕಿಯರೊಳ್ಕತೆಯೆನುತಲಿ ಬಿ-ಟ್ಟ ತರುಣೀ ಸುಮ್ಮನೇತಕೆ ಮನಸೋತಿನ್ ಏತಕೆ ಪ ರೂಪಿನೊಳಗೆ ಚಂದವೆ ಕಾಮಶಾಸ್ತ್ರ ಕ-ಲಾಪ ಬಲ್ಲವಳೇತಾ ಪತಿವ್ರತೆ ಪರರೆಲ್ಲಾ ಜಾರೆಯರೆನು-ತೀಪತಿ ಬೊಗಳುವ ಪಾಪಿ ಕುರೂಪನೀಂ 1 ಬಣಗು ಭಿಕಾರಿ ನೀಂ 2 ಬರಲಿದಿರೇಳುವಳೆ ಪದವ ತೊಳೆದುಸೆರಗಿನಿಂದೊರಸುವಳೇತರುಣಿಯರುಗಳ ಮನಸ ಕಂಡವರುಂಟೆದುರುಳೆಯೆಂಬುದನೆಲ್ಲಾ ರಾಮೇಶ ಒಲ್ಲ 3
--------------
ಕೆಳದಿ ವೆಂಕಣ್ಣ ಕವಿ
ಏನು ಬರೆದೆಯೊ ಬ್ರಹ್ಮನೆ ನನ್ನಣೆಯಲರಿಯದು ಸುಮ್ಮನೇ ಪ ನೋನವನು ಹೋಗಾಡಿ ಜನರೊಳು ಹೀನವಾಗುವ ಹಾಂಗೆ ಹಣೆಯೊಳು ಅ.ಪ ಹಿಂದೆ ಮಾಡಿದ ಕರ್ಮವು ಯಿದ ಕ್ಕೊಂದು ಪಾಯದ ಮರ್ಮವೂ ತಂದೆ ನೀನೆನಗಿಂದು ತೋರಲು ನಿಂದು ಭಜಿಸುವೆ ಮಂದರೋದ್ಧರ 1 ಪಾಪಗಳ ಹರನ್ಯಾರೆಲೊ ಭೂಪದಶ ಅವತರಾನೇ ಕೋಪಮಾಡದೆ ದಾಸಮಾಡಿದ | ಪಾಪಗಳ ಪರಹರಿಸೊ ಬೇಗದಿ 2 ಲೋಕನಾಯಕ ಭವಹಾರೀ ಕಾಕು ಬುದ್ಧಿಗಳನ್ನು ಬಿಡಿಸಲು ಏಕ ಮನದೊಳು ನೆನೆವೆ ನಿಮ್ಮನೂ 3 ಗುರುವು ತುಲಸೀರಾಮನೇ ಪರನು ಗುರುವೆ ತ್ರಾಹಿತ ಪ್ರೇಮನೆ ಧರೆಯೊಳಧಿಕ ಚೆನ್ನಪುರಿಯಾ ದೊರೆಯ ಲಕ್ಷ್ಮೀನಾರಾಯಣಾ 4
--------------
ಚನ್ನಪಟ್ಟಣದ ಅಹೋಬಲದಾಸರು
ಕಂಡಿರೇನೇ ರಂಗನಾ ನಿಮ್ಮ ಮನೆಗಳಲ್ಲಿ ಕಂಡರೆ ಹೇಳಿರಮ್ಮಾ ಒಂದು ಮಾತಿನಲಿ ಬೆಂಡಾದೆನೇ ಅರಸುತ ನಾನಾದಾರಿಗಳಲ್ಲಿ ಪುಂಡರೀಕಾಕ್ಷನು ದೋರನು ಎಲ್ಲಿ ಮಣಿ ಕುಂಡಲ ಮಂಡಿತ ಗಂಡ ಕಪೊಲ ಪ್ರಚಂಡನ ಲೀಲೆ 1 ಒಮ್ಮೆ ಭಾವಿಕ ಗೋವಳರಾ ಆಟ ಪಾಟದಲಿರುವಾ ಒಮ್ಮೇ ಕಾಮುಖ ಗೊಲ್ಲತೇರಾ ಚಿತ್ತಕಾನಂದ ನೀವಾ ಒಮ್ಮೆ ಯಜ್ಞ ಪತ್ನಿಯರಾ ಸವಿಯಾಟ ಕವಲಿವಾ ಅಮ್ಮ ಒಂದೇ ಠಾರ್ವೆನೇ ಹೇಳುವಾ ಅವ ನಿಮ್ಮವನೇ ತಮ್ಮನೇ ಸುಮ್ಮನೇ ತಿರುಗುತ ಘಮ್ಮನೇ ಝುಮ್ಮನೇ ಹೊಳೆವಾ 2 ಪುಲ್ಲ ನಾಭನ ಕಾಣದಿರೇ ಕಣ್ಣು ಕುರುಡವು ನಮ್ಮ ಸೊಲ್ಲ ವಾಲಿಸದಿಹ ಹರಿಯಾ ಕಿವಿಬಧಿರವು ನಮ್ಮ ಅಲ್ಲಿ ಮನುಜ ಮಹಿಪತಿಸುತ ಪ್ರಭು ಪರಬೊಮ್ಮ ನಿಲದಪ್ಪಿ ಕೊಳಲು ಸಂಭ್ರಮಾ ಅವನೆಲ್ಲೆಲ್ಲ ನೋಡಲು ಅಲ್ಲಲ್ಲಿ ನಿಂದಿಹ ಇಲ್ಲದ ಸ್ಥಳವಿಲ್ಲವಮ್ಮಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿದೆನು ಭದ್ರಾಚಲವಾಸನ | ನೋಡಿದೆನು ಜಗದೀಶನಾ ನೋಡಿದೆನು ಶ್ರೀ ಸೀತಾರಮಣನ | ನೋಡಿದೆನು ಸರ್ವೇಶನಾ ಪ ಅಂಗನೇಯರ ಕೂಡಿ ನಾನು ಮಂಗಳಗಿರಿನೋಡಿದೆ ಮಂಗಳಾಂಗಾ ನಾರಸಿಂಹಗೆ ತಂದು ಪಾನಕ ನೀಡಿದೆ 1 ಸಜ್ಜನರಿಂದ ಕೂಡಿ ನಾನು ಬೆಜ್ಜವಾಡವ ನೋಡಿದೆ ಮೂರ್ಜಗ ಪಾವನಿಯ ಕೃಷ್ಣೆಯ ಮಜ್ಜನವು ನಾ ಮಾಡಿದೆ 2 ಮಾಧವನ ದಯದಿಂದ ನಾನು ಗೋದಸ್ನಾನವು ಮಾಡಿದೆ ಮೋದದಿಂದಲಿ ಬಂದು ವಿಮಾನರಾಮನ ನೋಡಿದೆ 3 ನೇಮದಿಂದಲಿ ಬಂದು ನಾನಾ ರಾಮದಾಸನ ನೋಡಿದೆ ವಾಮಭಾಗದಿ ಕುಳಿತ ಲಕ್ಷ್ಮಣ ಸ್ವಾಮಿ ದರುನ ಮಾಡಿದೆ 4 ಸಪ್ತಋಷಿಗಳು ದಶರಥಾದಿ ಉತ್ತಮರ ನಾ ನೋಡಿದೆ ಸುತ್ತು ಮುತ್ತು ದೇವತೆಗಳನಾ ಮತ್ತೆ ಮತ್ತೆನಾ ನೋಡಿದೆ 5 ದೋಷದೂರ ಭದ್ರಾಚಲದಿವಾಸ ರಾಮಚಂದ್ರನ ಸೋಸಿನಿಂದಲಿ ಬಂದು ನಾ ವಿಶೇಷ ದರುಶನ ಮಾಡಿದೆ 6 ಕಡುಹರುಷದಿಂದಲಿ ರಾಮನ ತೊಡೆಯಮ್ಯಾಲೆ ಒಪ್ಪಿದ ಮಡದಿ ಸೀತಾದೇವಿಯನ್ನು ಸಡಗರದಿ ನಾ ನೋಡಿದೆ 7 ಇಷ್ಟದಿಂದಲಿ ಭಜನೆಗೊಳ್ಳುವ ಶ್ರೇಷ್ಠ ರಾಮನ ನೋಡಿದೆ ಉಷ್ಣಕುಂಡದ ಸ್ನಾನವನ್ನು ಥಟ್ಟನೇ ನಾ ಮಾಡಿದೆ8 ಉನ್ನತವಾಗಿರುವ ಸುವರ್ಣಗೋಪುರ ನೋಡಿದೆ ಮುನ್ನ ಮಗ್ನವಾಗಿರುವ ಅನ್ನ ಛತ್ರದ ನೋಡಿದೆ 9 ಪರ್ಣಶಾಲೆಯನ್ನು ನೋಡಿ ಪರಮ ಹರುಷವ ತಾಳಿದೆ ನಿರ್ಮಲ ಚರಿತ್ರ ರಾಮನ ವರ್ಣಿಸಲಳವಲ್ಲವೆ 10 ಲಕ್ಷ್ಮೀವಲ್ಲಭ ರಾಮನ ಪ್ರತ್ಯಕ್ಷಮದಿವೆಯ ನೋಡಿದೆ ನಾ ನೋಡಿದೆ 11 ಚಂದ ಚಂದಾ ಜನರು ಎಲ್ಲಾ ಆನಂದದಿಂದಲಿ ತಂದು ತಂದು ಹಾಕುವಂತಹ ಚಂದವನು ನೋಡಿದೆ 12 ಇಂತಹ ರಾಮನವಮಿ ಉತ್ಸವ ಲೋಕದಲಿ ನಡೆವುದು ಹತ್ತುವದನ ಶೇಷನಿಗೂ ಸಹಾ ತಪ್ಪದೇ ಎಣಿಸಲಾಗದು 13 ನಮ್ಮವಾಯು ಸುತನ ಪಾದಕೆ ಸುಮ್ಮನೇನಾನೆರಗಿದೆ ಘನ್ನ ಮಹಿಮನ ಪ್ರಸನ್ನ ಸೀತಾರಾಮನನು ನಾ ನೋಡಿದೆ 14 ತೇರನೇರಿ ಬರುವ ರಾಮನ ವೈಯಾರವನು ನಾ ನೋಡಿದೆ ಮೇರು ನಂದನ ಭದ್ರಾಚಲದಿ ವಿಚಾರ ಮಾಳ್ಪುದ ನೋಡಿದೆ 15 ಪ್ರಹ್ಲಾದವರದ ನಾರಸಿಂಹ ವಿಠಲನ ಎಲ್ಲ ಉತ್ಸವ ನೋಡಿ ಮನಕೆ ಆಹ್ಲಾದವನೆ ನಾ ಪಾಡಿದೆ 16
--------------
ಓರಬಾಯಿ ಲಕ್ಷ್ಮೀದೇವಮ್ಮ
ನೋಡಿರೇ ನೋಡಿರಮ್ಮಾ ಚೆಲುವನಾ ನೋಡಿರೇ || ಇವ|| ರೂಢಿಗೆ ಆವನಿಜೆಯಾ ತಕ್ಕುವರನೇ ಮುದ್ದುಸ್ಮರನೇ ಪ ಪಾದ ಜಂಘಯಿಂದ ಜಾನೂರುಮಾರಾ ತ್ರಿವಳವೇ| ಹಾರ ದಿಯ ಕರ ಸರಳವೇ 1 ಮಂಡಿತದ ಕುಂಡಲವಾ| ಮೃಗಮದ ಕಿರೀಟ 2 ಆವರಾಯನಮಗನೋತಾನರಿಯೇ|ಭೂಸು| ರಾವಳಿಯೊಳಿಂದ್ಧಾರೇನು |ಅಂಗ| ದಾವ ತೇಜಮುಸುಕಿತು ಧರಿಯೇ|ತ್ರ್ಯೆಭುವನವರಕ್ಷಿಸ ಬಂದಾಹರಿಯೇ | ಮುಜ್ಜಿಮರಿಯೇ 3 ಮುಟ್ಟಿಲೀ ತಗಧನುಏಳಲಿ ಝಮ್ಮೆನೇ ನಾವು ನೆಟ್ಟನೆಪೂಜಿಪೆವು ಗೌರಮ್ಮನೇ ಎಂದು ಬಿಟ್ಟ ಮಗಳು ಬೇಡಿಕೊಂಡರು ಸುಮ್ಮನೇ ಆಡಿಯಿಟ್ಟುನಲಿದು ಬರುವ ರಾಮೊ ಘಮ್ಮನೇ ಪರಬೊಮ್ಮನೆ 4 ಬಂದು ನೋಡಿಬಿಲ್ಲನೆತ್ತಿದ್ದಾಚಕ್ಕನೇ ಅರುವಿಂದ ಲೋಚನೆ ಮಾಲಿ ಹಾಕಲು ಘಕ್ಕನೇ ವೃಂದ ಕಾಣುತ ಹೆದರಿತುಧಕ್ಕನೇ ನಮ್ಮ ತಂದೆ ಮಹಿಪತಿ ನಂದನ ಪ್ರಭು ಠಕ್ಕನೇ ಪಾಲಕ್ಕುನೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡುವರೇ ಅಂತವಾ|ನೋಡುವರೇ| ಮೂಢ ಪಾಮರನೆಂದುದ್ದರಿಸದೇ ಸುಮ್ಮನೇ ತಾಕೂಡುವುದೇ ಪ ಜ್ಞಾನ ಧ್ಯಾನ ಮೌನವರಿಯೆ|ಪೂಜೆಯ ನಾ ಮಾಡುವರೇ| ಗಾನ ಮಾನ ಏನೂ ಅರಿಯೆ|ಸ್ತುತಿ ಸ್ತವನ ಪಾಡುವರೇ?1 ಚತುರ ಉತ್ತರ ಮಾತುಗಳರಿಯೆ|ಸತ್ಸಂಗದಿ ಕೂಡುವರೇ| ಇತರ ಯಾತರ ಆತುರನರಿಯೆ|ವರಗಳನಾ ಬೇಡುವರೇ 2 ಹಾವ ಭಾವ ಭಕ್ತಿಗಳರಿಯೇ|ಛಲ ಬಿಂಕವ ಹಿಡಿವರೇ| ದೇವಕಾವುದು ಮಹಿಪತಿ ಸುತ ಪ್ರಭುತವ ದಾಸನ ಮಾಡುವರೇ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಕ ವದಗಲೊಲ್ಲೆಯನ್ನಯ ಬಿನ್ನಹಕ ಲೋಕ ರಕ್ಷಕ ಬಂದು ಯನ್ನ ನುದ್ದರಿಸಯ್ಯಾ ಪ ಅರಿಯದ ಶಿಶು ಮಹಾನದಿ ಜಲದೊಳು ಪೋಕ್ಕು ತರಿಸಲರಿಯದಸು ದೊರೆಯುತಿದೆ ಇರಲು ತಾರಕದಡಿಯಲಿ ಸುಮ್ಮನೇದಯಾ ಜರಿದು ನೆಲಿಯಾ ನೋಡುತಹುದೇನಯ್ಯಾ 1 ಅರಿಗಳು ಪಟಳದಿಂದೋರ್ವ ಮನುಜಾ ಅರತು ನೃಪರಬೆನ್ನಬೀಳಲು ಭರದಿಂದಾ ಪಡಿತಂದವರಾಕೈಯ್ಯಲಿಕುಡೆ ಧರೆಯೊಳುಸಕಲ ಜನರು ಏನೆಂಬು ವರೈಯ್ಯಾ 2 ಪತಿತರ ಪಾವನ ಮಾಡುವಾಧೊರಿಯೆಂದು ಶೃತಿ ನಾಲ್ಕರಲಿ ಕೊಂಡಾಡುತಿರೆ ಮತಿಹೀನ ನೆಂದು ಕೈಯ್ಯಾ ಬಿಡದಿರೋ ಮಹೀ | ಮತಿ ಸುತಪ್ರಭು ಪರಿಚರೆನಿಸುವ ಬಳಿಕಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಂಗನಟ್ಟುಳಿ ಕೇಳಿ ಗೋಪೆಮ್ಮಾ ರಸಗನಾಹಲ ವಂಗದಿಂದ ಕಾಡುವನಮ್ಮಾ ಬಾಲನೇ ಗೊಪಾಲನೇ ಪ ಹಾಲು ಮೊಸರು ಬೆಣ್ಣೆ ಮಾರಲು ಬಂದರಾ ಚಿಕ್ಕ ಬಾಲೆರ ನೋಡುತ ಮೊಗಚಂದಿರಾ ಅವರಾ ಶಾಲೆಯ ಸೆಳೆದು ಸುಮ್ಮನೇ ನಿಂದಿರಾ ಬಟ್ಟ ಮೊಲೆಯನು ಚಂಡು ಕುಡೆಂಬಾ ಮಂದರಾಧರ ಸುಂದರಾ 1 ನಾರೇರಾ ಸೀರೆಯಾ ಕದ್ದಾ ಪುಂಡನೇ ಮರ ನೇಚಾಳಿಸಿ ನುಡಿದ ಪ್ರಚಂಡನೇ ಕೈಯ್ಯ ದೋರಿಯರಡು ಎಂದು ಲಜ್ಜೆಯ ಕೊಂಡನೇ ಬಲು ಭಂಡನೇ 2 ಕಂಸನರಮನೆ ಬಲಗುಂದಿತೇ ನಂದ ನಂಶಕ ವಡೆತನ ಬಂದಿತೇ ಮುರ ದುರುಳ ತನವು ಸಂದಿತೇ ಇನ್ನು ಸಂಶಯಾತಕ ಮಹಿಪತಿ ಸುತ ವಂದಿತೇ ಮನಕ ಬಂದಿತೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಮ್ಮನೇಕೆ ಪರದಾಡುವೆಯೊ ಪರ ಬೊಮ್ಮನ ಚರಣಕೆ ಶರಣು ಹೊಡಿ ನಮ್ಮನು ಸೃಜಿಸುವ ಪೊರೆಯುವ ಕೊನೆಯಲಿ ನಮ್ಮನೇ ನುಂಗುವ ಗುಮ್ಮನಿವ ನಮ್ಮ ಶರೀರದೊಳಿರುವ ಯಂತ್ರಗಳು ನಮ್ಮಧೀನವೆ ಯೋಚಿಸೆಲೊ ವಾತ ನಮ್ಮಾಕಾಂಕ್ಷೆಯೆ ಯೋಚಿಸೆಲೊ 1 ಮೂರಂತಸ್ಥಿನ ನೂರು ಸದನಗಳು ನೂರು ರೂಪಗಳು ನಿನಗಳವೆ ಚಾರು ಮನೋಹರ ಸತಿಯಳಿರಲು ಮನ ಕೋರಿಕೆಯವಳಲಿ ಶಾಶ್ವತವೆ ನೂರು ಎಕರೆ ಹೊಲ ಗದ್ದೆ ತೋಟಗಳು ಮೂರು ಲಕ್ಷಗಳು ಬೆಲೆಯಿರಲು ಮೂರು ಚಟಾಕಿನ ಅನ್ನ ಹೊರತು ಅದ ಮೀರಿ ನುಂಗುವುದು ನಿನಗಳವೇ 2 ಶೂರನು ನಾ ಬಲುಧೀರನು ನಾ ಅಧಿ ಕಾರಿಯು ನಾ ಈ ಜಗದೊಳಗೆ ಕೋರಿದ ಜನರನು ಸದೆಬಡಿಯುವೆ ಎನ ಗಾರು ಸಮರು ಈ ಧರೆಯೊಳಗೆ ಕೋರುವ ಸುಖಗಳನನುಭವಿಸುವ ಮಮ ಕಾರದ ಗತಿಯನು ಯೋಚಿಸೆಲೊ ಹೇರಳ ಗಜತುರಗಾದಿ ವಾಹನಗ ಳೇರಿದ ನೀ ಹೆಗಲೇರಿ ಹೋಗುವಿಯೊ 3 ಸಾಸಿರ ಸಾಸಿರ ಬಡ್ಡಿ ಬಾಚಿಗಳ ಬೇಸರವಿಲ್ಲದೆ ಗಳಿಸಿದೆಯೊ ಕಾಸಿನ ಲೋಭಕೆ ಮೂಸಲು ಬಾರದ ಕಾಸಕ್ಕಿ ಅನ್ನವ ನುಂಗಿದೆಯೊ ಲೇಶವು ಗಮನಕೆ ತರಲಿಲ್ಲ ಈ ಸವಿನುಡಿ ಬಲು ಹಳೆಯದೆಂದು ಆಕ್ರೋಶವ ಮಾಡದೆ ಯೋಚಿಸೆಲೊ 4 ಮಾಯವು ತಾ ಈ ಜಗತ್ತಿನ ಜೀವನ ರುಚಿ ತೋರುವುದು ಕಾಯವು ಶಾಶ್ವತವೆಂಬ ಭ್ರಾಂತಿಯಲಿ ಹೇಯ ವಿಷಯಗಳನುಣಿಸುವುದು ಪ್ರಾಯಶರೆಲ್ಲರು ಬಲ್ಲರಿದನು ಬರಿ ಬಾಯಲಿ ನುಡಿಯುವರೊ ಸತತ ಕಾಯವಚನಮನದಿಂದ ಪ್ರಸನ್ನನ ಮಾಯವನರಿತಾಚರಿಪರು ವಿರಳ 5
--------------
ವಿದ್ಯಾಪ್ರಸನ್ನತೀರ್ಥರು
ಆರೇನ ಮಾಡುವರು ಆರಿಂದಲೇನಹುದುಪೂರ್ವಜನ್ಮದ ಕರ್ಮವಿಧಿ ಬೆನ್ನಬಿಡದು ಪಐದು ವರುಷದತರಳ ತಾನೆತ್ತ ತಪವೆತ್ತ |ಬೈದು ಮಲತಾಯಿ ಅಡವಿಗೆ ನೂಕಲು ||ಸುಯ್ದು ಕೋಪಾಗ್ನಿಯಲಿ ಪೊರಮಟ್ಟು ಪೋಪಾಗ |ಐದೆ ಬಂಧುಗಳಿದ್ದು ಏನ ಮಾಡಿದರು1ನೃಪರೊಳಗೆಅತಿ ಶ್ರೇಷ್ಠ ಬಲವಂತ ರಘುರಾಮ |ಅಪರಿಮಿತ ಶೂರ ಲಕ್ಷ್ಮಣದೇವರು |ಚಪಲಾಕ್ಷಿ ಸೀತೆಯನು ಖಳನು ಕದ್ದೊಯ್ವಾಗ |ವಿಪರೀತ ವೀರರಿದ್ದೇನ ಮಾಡಿದರು ? 2ಪಾಪಿ ದುಶ್ಯಾಸ ದ್ರೌಪದಿಯ ಸೀರೆಯ ಸೆಳೆದು |ಕೋಪದಿಂ ಮಾನಭಂಗವ ಮಾಡಲು ||ಆಪತ್ತು ಬೆನ್ನಟ್ಟಿ ಹಾ ಕೃಷ್ಣ | - ಎನುವಾಗ |ಭೂಪತಿಗಳೈವರಿದ್ದೇನ ಮಾಡಿದರು ? 3ರಣದೊಳಗೆ ಅಭಿಮನ್ಯು ಚಕ್ರವ್ಯೂಹವ ಪೊಕ್ಕು |ಸೆಣಸಿ ಷಡುರಥದೊಡನೆ ಹೊಯ್ದಾಡಲು ||ಅಣಕವಿಲ್ಲದೆ ಕಾದಿ ಅಸುವಳಿದು ಪೋಪಾಗ |ತ್ರಿಣಯಸಖಿ ಪಾರ್ಥರಿದ್ದೇನ ಮಾಡಿದರು 4ಬ್ರಹ್ಮಶಿರ ಕರಕಟ್ಟಿ ಶಿವನ ಪೀಡಿಸುತಿರಲು |ಸುಮ್ಮನೇ ಜಗವನೆಲ್ಲವ ತಿರುಗಿದ ||ಬೊಮ್ಮಮೂರುತಿಯಾದ ಪುರಂದರವಿಠಲನೇನಮ್ಮಅಳವಲ್ಲ ವಿಧಿಮೀರಿ ಬಾಳುವರೆ5
--------------
ಪುರಂದರದಾಸರು
ದೇವರ ಗಿರಿಯ ಅಪ್ಪಯ್ಯನವರುದೇವದುರ್ಗಸ್ಥಳದಲ್ಲಿಹರುಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ತಿಮ್ಮಯ್ಯನ .................................................................................................................................................ಸುಮ್ಮನೇ ನರವಪು ಧರಿಸಿಹರು1ಶೇಷಶಯನ ಕೃಪೆ ಪಡೆದಿಹರು |ದಾಸ ಮುಕುಟಮಣಿಎನಿಸಿಹರು |ಕ್ಲೇಶಪಂಚಕಗಳನಳಿದಿಹರು |ತೋಷಿಸಿ ಭಕ್ತರ ಸಲಹುವರು2ವೆಂಕಟ ರಮಣಗೆ ಹೋಗುವರು |ಸಂಕಟ ಜನ ಪರಿಹರಿಸುವರು ||ಸಂಖ್ಯೆಯಿಲ್ಲದ ಅಪೂಪ ನೀಡುವರು |ಶಂಕರ ಸಖಗೆ ಬೇಕಾಗಿಹರು3
--------------
ಜಕ್ಕಪ್ಪಯ್ಯನವರು
ಪ್ರಸನ್ನ ಶ್ರೀ ರಾಜರಾಜೇಶ್ವರ ಸ್ತೋತ್ರ ಹಾಗೂ ಶ್ರೀ ಕಪಿಲ43ರಾಜರಾಜೇಶ್ವರನೇ ರಾಜೀವವದನ ಶ್ರೀರಾಜರಾಜೇಶ್ವರಿ ಪತೇ ಶರಣು ಮಾಂಪಾಹಿರಾಜೀವಪಿತ ನೀನು ಕನ್ಯೆಯರಿಗೆವರಪ್ರಜಾಸಂಪತ್ ಉದ್ಯೋಗ ಈವಿ ಭಜಕರಿಗೆ ಪವೇಧಕಾಯಜಸ್ವಾಯಂಭುವ ಮನು ಶತರೂಪಾಈ ದಂಪತಿಗೆರಡು ಗಂಡುಗಳು ಪ್ರಿಯವ್ರತಉತ್ಥಾನಪಾದ ಮೂರು ಹೆಣ್ಣು ಮಕ್ಕಳುಅಕೂತಿ ದೇವಹೂತಿ ಪ್ರಸೂತಿ ಎಂಬುವರು 1ಶ್ರೀಪತಿಯೇ ನಿನ್ನ ಕಾರುಣ್ಯ ಬಲದಿಂದಸುಪುಣ್ಯ ಶ್ಲೋಕ ಆದಿಮನು ತನ್ನರೂಪಗುಣಶ್ರೇಷ್ಠ ಕನ್ಯೆಯರಿಗೆ ತಕ್ಕಾನು-ರೂಪವರರುಗಳಿಗೆ ಮದುವೆ ಮಾಡಿಸಿದನು2ಪುತ್ರಿಕಾ ನಿಯಮದಿ ಆಕೂತಿ ದೇವಿಯನುಸುತಪೋಧನ ಪ್ರಜೇಶ್ವರ ರುಚಿಗೆ ಕೊಟ್ಟನಿರ್ದೋಷ ಕಲ್ಯಾಣ ಗುಣಗಣಾರ್ಣವ ನೀನುಪ್ರಾದುರ್ಭವಿಸಿದಿ ಯಜÕಶ್ರೀಯು ದಕ್ಷಿಣಾದೇವಿಯು 3ಕರ್ದಮ ಪ್ರಜೇಶ್ವರರ ಭಕ್ತಿ ತಪಸ್ ಏನೆಂಬೆಶ್ರೀದ ನಿನ್ನಯ ಭಕ್ತ ವಾತ್ಸಲ್ಯಕ್ಕೆಣೆಯುಂಟೆಪದ್ಮಜನು ಕರ್ದಮಗೆ ಪ್ರಜಾಃಸ್ರುಜ ಎನ್ನಲುಭಕ್ತಿಯಿಂ ತಪಗೈಯೇ ಪ್ರತ್ಯಕ್ಷನಾದಿ 4ಸುಪುಷ್ಕರಾಕ್ಷ ನೀಸೂರ್ಯತೇಜಃಪುಂಜಪ್ರಪನ್ನರ್ಗೆ ಬೀರುವ ಕಾರುಣ್ಯನೋಟವಿಪುಲಾಬ್ಜವದನಸುಂದರಸುಳಿಗೊರಳುಸುಭ್ರಾಜಕುಂಡಲಕಿರೀಟದಹೊಳಪು5ಉರುಕಾಂತಿಯಿಂ ಜ್ವಲಿಪಅರಿಶಂಖ ಗದೆಯಶುಭ್ರೋತ್ಪಲ ಪುಷ್ಪ ಕರಗಳ ಹಿಡಿದಿಹಿವಿರಾಜಿಸುವ ಕೌಸ್ತುಭಶಿತ ಪದ್ಮೋತ್ಪಲಸ್ರಜಶ್ರೀರಮಣ ನಿನ್ನ ಶ್ರೀವತ್ಸ ಸೌಂದರ್ಯ ಏನೆಂಬೆ 6ದ್ವಿಷÉೂೀಡಶ ಶುಭಲಕ್ಷಣ ಸುಲಕ್ಷಿತಪುಷ್ಪಭವ ವರವಾಯು ಸಂಸೇವ್ಯ ಶ್ರೀಶಶೇಷಾಹಿ ಭೂಷಣಾದ್ಯಮರಸನ್ನುತನೀನುಪಕ್ಷಿಸೋಪರಿ ಅಂಬರದಿ ನಿಂತಿ 7ಉತ್ತಮಶ್ಲೋಕ ನಿನ್ನ ಕರ್ದಮ ಹರುಷದಿನೋಡಿಕ್ಷಿತಿಯಲ್ಲಿ ಬಿದ್ದು ಸನ್ನಮಿಸಿ ಸ್ತುತಿಸೇಮಾಧವನೇ ನೀನು ಹೇಳಿದಿ ಸ್ವಾಯಂಭುವನುಶತರೂಪಾ ದೇವಹೂತಿ ಸಹ ಬರುವನೆಂದು 8ಆ ಮನು ದಂಪತಿಯು ಮತ್ತು ದೇವಹೂತಿಯುಧರ್ಮನಿಷ್ಠರೂ ಸದ್ಗುಣಾದಿ ಶ್ರೇಷ್ಠರೆಂದಿರಮಣೀಯ ಆಕೆಯ ಕರ್ದಮರು ಪರಸ್ಪರ ಅರ್ಹರೆಂದಿಹೆಣ್ಣುಮಕ್ಕಳೊಂಬತ್ತು ಸ್ವಯಂ ನೀ ಅವತರಿಪಿ ಎಂದಿ 9ಸತಿಸುತಾ ಸಹ ಸ್ವಾಯಂಭುವ ಬರಲು ಮುನಿಯುಆದರದಿ ಸ್ವಾಗತ ನೀಡಿ ರಾಜನಲಿ ಯುಕ್ತಸದ್ಭೋಧ ರೂಪದಲಿ ಮಾತನಾಡೆ ಮನವುಬಂದ ಕಾರ್ಯ ಹೇಳಿದನು ವಿನಯ ಗಾಂಭೀರ್ಯದಿ 10ದುಹಿತ್ರು ಸ್ನೇಹ ಪರಿಕ್ಲಿಷ್ಟ ಮನದಿಂದ ದೀನನಾ ಹೇಳುವುದು ಕೃಪೆಯಿಂದ ಕೇಳಿರಿ ತಮ್ಮಬಹುಶೀಲಗುಣವಯಸ್ ರೂಪಾದಿಗಳಮಹರ್ಷಿ ನಾರದರು ಹೇಳಿ ಕೇಳಿಹಳು ದೇವಹೂತಿ 11ಸರ್ವಾತ್ಮನಾ ತಮಗೆಅನುರೂಪಗೃಹಿಣಿ ಅಗುವಳುಅವಳನ್ನ ದಯದಿಂದ ವಧುವಾಗಿ ಸ್ವೀಕರಿಸಿವಿವಾಹ ವಿಧಿಪೂರ್ವಕ ಮಾಡಿಕೊಳ್ಳಿರಿ ಎಂದುಈ ವಿಧದಿ ರಾಜ ಕೋರಲು ಮುನಿಯು ಒಪ್ಪಿದನು 12ಸಾಧು ಮಾತುಗಳಾಡಿ ಹಸನ್ಮುಖವ ತೋರಿಸಿಕರ್ದಮರು ಅರವಿಂದನಾಭನ್ನ ಸ್ಮರಿಸುತ್ತಶಾಂತವಾಗಿ ಸುಮ್ಮನೇ ಕುಳಿತರು ಆಗ ಮನುವಿಧಿಪೂರ್ವಬ್ರಾಹ್ಮಿವಿವಾಹಕ್ಕೆ ಏರ್ಪಾಡು ಮಾಡಿದನು 13ಶ್ರೀವರನೇ ನಿನ್ನಾನುಗ್ರಹ ಬಲದಿಂದಲೇದಿವ್ಯಾಭರಣ ಉಡುಗೊರೆ ವೈಭವದಿಂದದೇವಹೂತಿ ಕರ್ದಮರ ವಿವಾಹ ಮಾಡಿ ಕೃತಕೃತ್ಯಸ್ವಾಯಂಭುವ ಬರ್ಹಿಷ್ಮತಿ ಸೇರಿದನು 14ಕರ್ದಮರು ದೇವಹೂತಿಯು ಗೃಹಸ್ಥತನ ಚರಿಸಿದನುಪತಿಇಂಗಿತವರಿತು ಪಾರ್ವತಿ ಶಿವನಿಗೆಎಂತಹ ಸೇವೆ ಮಾಳ್ಪಳೋ ಅದರಂತೆ ಪ್ರೀತಿಯಿಂದಪತಿಸೇವೆ ಮಾಡುತ್ತಿಹಳು ದೇವಹೂತಿ ಸಾಧ್ವಿ 15ಯೋಗಾತಿಶಯ ಸಾಮಥ್ರ್ಯದಿ ಕರ್ದಮರುಕಾಮಗ ವಿಮಾನ ನಿರ್ಮಿಸಿ ದಾಂಪತ್ಯಸುಖ ವಿಹಾರವ ಮಾಡಿ ಹೇ ಸ್ವಾಮಿ ನಿನ್ನ ಕೃಪದಿಮಕ್ಕಳು ಸ್ತ್ರೀ ಪ್ರಜಾ ಒಂಭತ್ತು ಹುಟ್ಟಿದವು 16ಶ್ರೀಕರ ನಾರಾಯಣ ನೀ ಕಪಿಲಾವತಾರಆ ಕರ್ದಮರು ದೇವಹೂತಿ ಮಗನೆನಿಸಿಉತ್ಕøಷ್ಟ ಸಾಧು ಸಾಂಖ್ಯ ತತ್ವೋಪದೇಶವಅ ಕುಟಿಲ ಮಾತೆಗೆ ಬೋಧಿಸಿದ್ದು ಪ್ರಸಿದ್ಧ 17ಕರ್ದಮರ ಒಂಭತ್ತು ಕನ್ಯೆಯರು ಕಲಾ, ಅನಸೂಯ,ಶ್ರಧ್ಧಾ, ಹರ್ವಿಭೂ, ಗತಿ, ಕ್ರಿಯಾ, ಊರ್ಜಾ,ಶಾಂತಿಖ್ಯಾತಿಸಾಧ್ವಿಗಳಿವರು ಮರೀಚತ್ರಿ, ಅಂಗೀರ, ಪುಲಸ್ತ್ಯ ಪುಲಹಕ್ರತುವಶಿಷ್ಟಾ ಭೃಗುಗಳಿಗೆ ಮದುವೆ- ಆದರೀ ಕ್ರಮದಿ18ಐಶ್ವರ್ಯವಂತ ಸ್ವಾಯಂಭುವ ಮನು ತನ್ನ ಮಗಳುಪ್ರಸೂತಿಯನು ಬ್ರಹ್ಮಪತ್ರ ದಕ್ಷನಿಗೆ ಕೊಟ್ಟು ಆಕೆಪ್ರಸವಿಸಿದಳು ಷೋಡಶಾಮಲಲೋಚನೆ ಪುತ್ರಿಯರಸುಶೀಲ ಸಾಧ್ವಿಯರು ಮದುವೆ ಅದರು ಸುಲಭದಿ 19ಶ್ರಧ್ಧಾ, ಮೈತ್ರಿ, ದಯಾ, ಶಾಂತಿ, ತುಷ್ಟಿ, ಪುಷ್ಟಿ, ಕ್ರಿಯಾಉನ್ನತಿ, ಬುದ್ಧಿ, ಮೇಧಾ, ತಿತಿಕ್ಷಾ, ಹ್ರೀಮೂರ್ತಿಹದಿಮೂರು ಈ ಕನ್ಯೆಯರು ಮದುವೆ ಆದರು ಧರ್ಮಗೆಸಾಧ್ವಿ ಸ್ವಾಹಾಪತಿ ಅಗ್ನಿಪಿತೃಗಳ ಪತ್ನಿ ಅದಳು ಸ್ವಧಾ 20ಶ್ರೀ ರಮಾಪತಿ ನಿನ್ನ ಕಾರುಣ್ಯ ಏನೆಂಬೆಪಿತೃದೇವರೊಳ್ ಅಂತರ್ಗತನಾಗಿ ನೀನೇಪಿತೃದೇವರ್ಗಳನ್ನ ಪುತ್ರ ಸಂತಾನ ಬೇಕೆಂದುನರರು ಬೇಡಿಕೊಂಡರೆ ಭಕ್ತಿ ಮೆಚ್ಚಿ ಫಲವೀವಿ 21ಸತಿದೇವಿ ಭವನ ಪತ್ನಿಯಾದಳು ವಿಹಿತದಿಪತಿಭಕ್ತಿ ಪತಿಸೇವಾ ಸದಾರತಳು ಭವಾನಿಹದಿನಾರು ಕನ್ಯೇಯರ ದಕ್ಷನುಹರಿನಿನ್ನದಯದಿಮದುವೆ ಮಾಡಿ ಕೊಟ್ಟನು ಹಾಗೂ ಪುನರವತಾರದಲ್ಲೂ 22ಧನಹೀನರಿಗೂ ನೀನು ಉದಾರ ಕಾರುಣ್ಯದಿಧನಒದಗಿಸಿ ಮದುವೆ ಮಾಡಿಸುವಿಯೋಮುನಿವರ್ಯ ರುಚಿಕರಿಗೆ ವರುಣನ ದ್ವಾರ ನೀಕನ್ಯಾಶುಲ್ಕ ಒದಗಿಸಿ ವಿವಾಹ ಮಾಡಿಸಿದಿ 23ಪಶುಪತ್ನಿ ಸಂತಾನ ಯಜÕ, ಧನ ವಿವಾಹೋತ್ಸವಯಶಸ್ ತೇಜೋಬಲ ವೀರ್ಯ ಪ್ರಜಾಸೃಷ್ಟಿ ಅಧಿಕಾರಐಶ್ವರ್ಯ ಇಂತಹುದು ದಕ್ಷಗೆ ಬಹು ಕೊಟ್ಟು --ಅವನೋಳ್ ಇದ್ದುಯಶ ಎಂದು ಕರೆಸಿಕೊಂಬ ಶ್ರೀರಮಣ ಶ್ರೀಕರ --ನಮೋ ನಮೋ ನಿನಗೆ 24ನಂದಿನೀಧರ ಶಿವನೊಳ್ ಅಂತರ್ಯಾಮಿಯಾಗಿರುತಪುಂಸ್ತ್ರೀ ಪ್ರಜಾಸೃಷ್ಟಿ ಮುಂಜಿ ಮದುವೆ ಮಕ್ಕಳು ಮೊಮ್ಮಕ್ಕಳುಇಂಥಾ ಸಂತಾನ ಮತ್ತು ಆಯುಷ್ಯ ಸುಖವೀವಿ ಪ್ರಜಾತಿಹಿಅಮೃತಂ ಆನಂದ ಎಂದು ಕರೆಸಿಕÉೂಂಬ ನಿನಗೆ ಶರಣು 25ಮನು ಸ್ವಾಯಂಭುವ ದಕ್ಷ ಮರುತ ದೇವತೆಗಳೊಳ್ಶ್ರೀನಿಧಿಯೇ ನೀನಿದ್ದು ಪ್ರಜೋತ್ಪತ್ಯಾದಿಗಳನ್ನು ಈವಿಈ ನುಡಿಗಳ ಪಠಣ ಫಲ ಮೋಕ್ಷಹೇತು- ಸಜ್ಞಾನ ಲಾಭವುಇನ್ನೂ ಅವಾಂತರ ಫಲ ವಿವಾಹ ಸಂತಾನಆಯುರಾರೋಗ್ಯ ಉದ್ಯೋಗಪ್ರಾಪ್ತಿ26ಮಂದಜಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸಒಂದು ಪುತ್ರ ಬೇಕೆನ್ನೆ ಮೂವರನ್ನು ನೀ ಕೊಟ್ಟೆಅಂದು ನೀನೇ ತೋರ್ದಿ ಮಗನಾಗಿ ಮನುವಿಗೆಒಂದೇಮನದಿ ಇದು ಪಠಿಸೆ ನೀ ಒಲಿವೆ 27-ಇತಿ ಶ್ರೀ ರಾಜೇಶ್ವರ ಸ್ತೋತ್ರ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು