ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳಯ್ಯ ಏಳಯ್ಯ ಬೆಳಗಾಯಿತೂ ಪ ಸುಳಿ | ನಾಭಿ ಸಂಭವ ಸುತನೆ ಅ.ಪ. ಸಾಮಜ ವರದ ಶ್ರೀರಾಮ ಬಂದಿಹನಯ್ಯ | ಭೂಮಿಜೆಯ ಪುಡುಕಲ್ಕೆ |ನೇಮದಿಂದಲಿ ನೀನು | ಶ್ಯಾಮಲಾಂಗನ ಕಂಡುಭೂಮ ಗುಣನಿಧಿ ಸು | ಪ್ರೇಮ ಪಡೆ ಹೊತ್ತಾಯಿತು 1 ತಾಲಸಪ್ತವ ಹಣಿಸು | ವಾಲಿ ಮಥನ ಗೈಸುನೀಲ ಜಾಂಬವ ಸುಷೇ | ಣಾದಿಗಳ ಕರೆ ಕಳಿಸು |ಶ್ರೀಲೋಲನಾಜ್ಞೆಯಲಿ | ಕಾಲಮೀರುವ ಮುನ್ನಲೋಲ ಲೋಚನೆ ವಾರ್ತೆ | ತಿಳುಹ ಬೇಕಯ್ಯಾ 2 ಬಿಂಕ ಮುರಿಯಲಿ ಬೇಕು |ಲಂಕಾಪುರದೊಳು ಮಾತೆ | ಗಂಕವೀಯಲಿ ಬೇಕುಅಂಕಕಾರನು ರಾಮ | ನಂಕೆ ಸಲಿಸಲಿ ಬೇಕು 3 ಶರಧಿ ಬಂಧಿಸಬೇಕು | ಧುರವ ಜೈಸಲು ಬೇಕುವರ ಭೂಮಿ ಜಾಕೃತಿಯ | ತ್ವರ ತರಲಿ ಬೇಕುವರ ವಿಭೀಷಣನಿಗೆ | ಅರಸುತನ ಕೊಡಬೇಕುಮರಳಿ ಅಯೋಧ್ಯಗೆ | ತೆರಳ ಬೇಕಯ್ಯಾ 4 ಉರ ರಕ್ತ ಕುಡಿಬೇಕುಧರಣಿ ಭಾರವ ನಿಳುಹಿ | ತರುಣಿ ಶಿಖೆ ಬಿಗಿಬೇಕು 5 ಅದ್ವೈತ ಗೆಲಬೇಕುಬುದ್ಧಿಪೂರ್ವಕವಾಗಿ | ಸಿದ್ದ ಮುನಿ ಜನರಿಂದಮುದ್ದುಕೃಷ್ಣನ ಪೂಜೆ | ವಿಧಿಸಲೀ ಬೇಕೂ 6 ಸಾರ ಗ್ರಂಥವ ರಚಿಸಿಮೂರ್ಮೂರು ಭಕುತಿಲಿ | ಹರಿಯ ಪೂಜಿಸಬೇಕು |ಮೂರ್ಲೋಕ ದೊರೆ ಗುರು | ಗೋವಿಂದ ವಿಠಲನಸಾರ್ವಕಧಿಪತಿಯೆಂದು | ಸಾರಲೀ ಬೇಕೂ 7
--------------
ಗುರುಗೋವಿಂದವಿಠಲರು
ಕಥಾಶ್ರವಣ ಮಾಡದೆ ನರದೇಹವ ವೃಥಾ ಕಳೆವದೆಂದಿಗು ಸಲ್ಲ ಪೃಥಾಸುತನ ಮಹರಥಾವನು ಸರ್ವಥಾ ಪೊರೆವ ಸಂಶಯವಿಲ್ಲ ಪ. ವಿಕಲಿ ಪ್ರವರ್ತನ ಲೋಲಿಕಾಗಮ ಕಲಾನುಕೃತ ದುಷ್ಕಾಲದಲಿ ಒಲಿವನು ನಿರ್ಮಲಗೊಳಿಸುತಲಿ ಸಲೀಲವೆ ಲಘುಕರ್ಮದಲಿ ಸುನೀಲವಕ್ಷ ಸ್ಥಳಾಂತರ ಶ್ರೀಲಲಾಮನನು ಕೊಂಡಾಡುತಲಿ 1 ಅಲ್ಪ ಸುಖವ ಸಂಕಲ್ಪಿಸುವರಿಗಹಿತಲ್ಪನೊಲಿಯ ತಾನೆಂದೆಂದು ನಾಲ್ವರಿ ಫಲಗಳನಿಪ್ಪನೆ ಸಂಸ್ಕøತಿಯಿಪ್ಪಂದದಿ ದಯದೋರೆಂದು ಒಪ್ಪಿಸಿ ಮತ್ತವನಿಪ್ಪುದನುಂಡು ನೀರಪ್ಪಣೆಯಲಿ ಸನ್ಮತಗೊಂಡು ಹಿಂಡು 2 ಸ್ಮರಣೆ ಮಾತ್ರದಿಂದಲವನು ಪಾಪವ ಕರಣವ ಶುದ್ಧೀಕರಿಸುತಲಿ ಸನ್ಮತಿ ಇರಿಸುವನು ಪುರು ಪುರುಷಾರ್ಥಕರ ಪದಪದ್ಮವನಿರಿಸಿ ಶಿರದಿ ಸತ್ಕರಿಸುವನು ಮನದಲ್ಲಿರಿಸಿದವರನನುಸರಿಸುವನು 3
--------------
ತುಪಾಕಿ ವೆಂಕಟರಮಣಾಚಾರ್ಯ
ದಯಾ ಸಾಗರ ದಾನವಾರಿ ಸರೋಜ ನಯನ ಸೂತ್ರಧಾರಿ ಪ ಶ್ರೀಯಾಭರಣ ಭೂಷಣ ಶ್ರೀಹರಿ ನಯ ನೀತಿ ಕಾರಣ ನೃಕೇಸರಿ ಅ.ಪ ಸನಕಾರ್ಜಿತ ಸುರಪೂಜನ ಸುನೀಲ ಮಾಂಗಿರಿನಿಕೇತನ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಾಣೀ ನೀ ತೋರೆ ವಾರಿಜನಾಭನ, ಮಹಾಲಾಭನ್ನ ನಿತ್ಯ ಸುಲಭನ ಭಾನು ಸನ್ನಿಭನ ಪ ಕ್ಷೋಣೀಯೊಳಗಣ ಪ್ರಾಣಶ್ರೇಷ್ಠ - ಜಗ ತ್ರಾಣನ ತೋರಿಸೆ ಭಾನು ಸನ್ನಿಭಳೆ ಅ. ಪ. ಚೈತನ್ಯರಾಣಿ ಪುಸ್ತಕಪಾಣಿ-ಸುನೀಲವೇಣಿ ಅತ್ಯಂತ ಮಹಿಮೆ ಗುಣಗುಣಶ್ರೇಣಿ ತ್ರಿಲೋಕ ಜನನಿ ಸತ್ಯವ ತೋರುತ ನಿತ್ಯೋಪಾದಿಲಿ ಸತ್ಯ ಸಂಕಲ್ಪಳೆ ನಿತ್ಯದಿ ಪೂಜಿಪೆ ತ್ವತ್ಪಾದಾಂಬುಜವಿತ್ತು ನೀ ಸಲಹೆ1 ನಾಲಿಗೆಯಲ್ಲಿ ಬಂದು ನಿಂದು ದಯದಿಂದ ಇಂದು ಶ್ರೀಲೋಲ ಹರಿಯೆ ದೈವವೆಂದು ಕೊಂಡಾಡೆ ಮುಂದು ಕಾಲ ಹಿಂಗಿಸಿ ವಿ- ಶಾಲ ಮತಿಯ ಕೊಟ್ಟು ಆಳುಗಳೊಡನೆ ಸು- ಶೀಲ ಜ್ಞಾನವಿತ್ತು ಆಲಸ್ಯಮಾಡದೆ ಶೀಲ ಮುಕ್ತಿಗನುಕೂಲವಾಗುವುದಕ್ಕೆ2 ಜನ್ಮ ಬಂದಿದೆ ಕಡೆಗೆ ಮಾಡು ದಯದಿಂದ ನೋಡು ಘನ ಕೀರ್ತಿವಂತೆ ಅಭಯವ ನೀಡು, ನಿನಗಲ್ಲ ಈಡು ಕನಸಿಲಿ ಮನಸಿಲಿ ಮನಸಿಜನೈಯನ ನೆನೆಸುವ ಸೌಭಾಗ್ಯವನುದಿನ ಕೊಟ್ಟು ಘನಪ್ರೇರಣೆಯಿಂದ ವಿಜಯವಿಠ್ಠಲನಂಘ್ರಿ ವನಜವ ತೋರಿ ಸನ್ಮೋದವನೀಯೆ3
--------------
ವಿಜಯದಾಸ
ಪಾಲಿಸೊಲಿದು ಲಕ್ಷ್ಮೀಲೋಲ ವೆಂಕಟಪತಿಪಾಲಾಬ್ಧಿಶಯನ ಕೃಪಾಳು ಪರೇಶ ಪ.ಆಲಸ್ಯವಜ್ಞಾನಜಾಲ ಪರಿಹರಿಸುನೀಲನೀರದನಿಭ ಕಾಲನಿಯಾಮಕ ಅ.ಪ.ಪ್ರೇರಕ ಪ್ರೇರ್ಯನು ಮೂರು ವಿಧ ಜೀವರಾ-ಧಾರಾಧೇಯಾಪಾರ ಮಹಿಮನೆಸಾರಭೋಕ್ತ್ರವೆಯೆನ್ನಘೋರದುರಿತಭಯದೂರಮಾಡುತ ಭಕ್ತಿ ಸಾರವನೀಯುತ 1ಪಾಪಾತ್ಮಕರೊಳು ಭೂಪಾಲಕನು ನಾಕಾಪಾಡೆನ್ನನು ಗೋಪಾಲ ವಿಠಲಶ್ರೀಪದದಾಸ್ಯವ ನೀಪಾಲಿಸುಭವತಾಪಪ್ರಭಂಜನ ಹೇ ಪರಮಾತ್ಮನೆ 2ಶ್ರೇಷ್ಠರ ಸಂಗವ ಕೊಟ್ಟೆನ್ನ ರಕ್ಷಿಸುಕಷ್ಟಪಟ್ಟೆನು ಬಹಳ ಸೃಷ್ಟಿಗೊಡೆಯನೆಮುಷ್ಟಿಕಾರಿಯೆ ಎನ್ನಿಷ್ಟ ಬಾಂಧವ ನೀನೆಕೃಷ್ಣಗೋವಿಂದನೆ ಬೆಟ್ಟದೊಡೆಯಹರಿ3ಆಶೆಗೆ ಸಿಕ್ಕಿ ಹರಿದಾಸನೆಂದೆನಿಸಿದೆದೋಷಸಮುದ್ರದೊಳೀಜಾಡುವೆನುಕೇಶವ ತವಪದ ದಾಸಜನರ ಸಹವಾಸವಕೊಡು ಮಹಾಶೇಷಪರಿಯಂಕನೆ4ಛತ್ರಪುರೈಕಛತ್ರಾಧಿಪ ನಿನ್ನಪ್ರಾರ್ಥಿಸುವೆನು ಪರಮಾರ್ಥಹೃದಯದಿಕರ್ತಲಕ್ಷ್ಮೀನಾರಾಯಣ ಗುಣನಿಧಿ ಶ್ರೀವತ್ಸವಕ್ಷಸ್ಥಲ ಕೌಸ್ತುಭಾಭರಣನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ