ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡುವೆ ತಾಂಬೂಲವ ಪಿಡಿಯೊ ಪಿಡಿಯೊ ದೇವಾ ಅಡಿಗಳಿಗೆರಗುವೆನಾ ಪ ವಿಪ್ರ ಮಡದಿಯರನ್ನವ ಕೊಡಲು ಭುಂಜಿಸಿದ ಪಾಲ್ಗಡÀಲ ಶಯನ ಕೃಷ್ಣ ಅ.ಪ ಮಡದಿಯ ನುಡಿಕೇಳಿ ಕಡುಭಕುತಿಯಲವ ಪಿಡಿಯವಲಕ್ಕಿಯನು ಕೊಡಲು ಭುಂಜಿಸಿಮಿತ್ರ ಬಡವ ಸುದಾಮನಿಗೆ ಕೆಡದ ಸಂಪದವನ್ನು ಗಡನೆ ನೀಡಿದ ದೇವಾ1 ಕುಬ್ಜೆಗಂಧಕೆ ಒಲಿದು ಕಬರಿಯ ಪಿಡಿದೆತ್ತಿ ಸುಭಗರೂಪಳ ಮಾಡಿದ ಅಬ್ಜನಾಭನೆ ತ್ವತ್ಪಾ- ದಬ್ಜಕರ್ಪಿಸಿದಂಥ ಶಬರಿಯ ಫಲಮೆದ್ದ ಪ್ರಭು ಶ್ರೀರಾಮನೆ ನಿನಗೆ 2 ಲಲನೆ ದ್ರೌಪದಾದೇವಿ ಗೊಲಿದಕ್ಷಯಾಂಬರ- ಗಳನೆ ಪಾಲಿಸಿಪೊರೆದ ಬಲುವಿಧ ಭಕುತರ ಬಳಗವ ಸಲಹಲು ಇಳೆಯೊಳು ಕಾರ್ಪರ ನಿಲಯ ಶ್ರೀ ನರಹರಿಯೇ3
--------------
ಕಾರ್ಪರ ನರಹರಿದಾಸರು
ತೋರಮ್ಮಯ್ಯ ಯತಿಕುಲ ಸರ್ವಭೌಮನ್ನ ಪಮೂರವತಾರದ ಪುಣ್ಯರಾಶಿಯನು ತೂರಿಸುಜನರ ಪೊರೆವ ಉದಾರನ ಅ.ಪಅಸುರ ಬಾಲನಂತೆ ಹರಿಯಲಿ ಅಸಮ ಭಕ್ತಿಯಂತೆಅಸುರಾರಿಯ ನರಸಿಂಹರೂಪವನು ಅಸುರತಾತನಿಗೆ ತೋರ್ದನಂತೆ 1ಪರಮಹಂಸನಂತೆ ಪುರಂದರದಾಸರ ಗುರು ಅಂತೆಅರಸನ ರಕ್ಷಿಸಿ ಅರಸನಾಗಿ ಕ್ಷಣ ಉದ್ಗ್ರಂಥಗಳನು ರಚಿಸಿದನಂತೆ 2ಕಡುಬಡತನವಂತೆ ಸುದಾಮನ ಮರಸಿ ಬಿಟ್ಟಿತಂತೆಸಡಗರದಿಂದ ಸನ್ಯಾಸಿಯಾಗಿ ದರ್ಮಸಾಮ್ರಾಜ್ಯವನಾಳಿದನಂತೆ3ಕಾಮಧೇನುವಂತೆ ಕಲಿಯುಗ ಕಲ್ಪವೃಕ್ಷವಂತೆನೇಮದಿಂದ ಸೇವೆಯನು ಮಾಡಿದರೆ ಕಾ'ುತಾರ್ಥಗಳನೀಯ್ವನಂತೆ 4ಸಾಲವಪುರದಂತೆ ಭಕ್ತರಿಗೊಲಿದು ಬಂದನಂತೆಮೂಲಸ್ಥಾನ ಮಂತ್ರಾಲಯವಂತೆ ಭೂಪತಿ'ಠಲನ ತೋರುವನಂತೆ 5
--------------
ಭೂಪತಿ ವಿಠಲರು
ನಂಬು ಹರಿಯ ಎನ್ನ ಮನವೇ ಪ ಸುರಪತಿ ಮುಳಿಯಲು ಸಕಲ ಗೋವಳರನು| ಹೊರೆದನು ಕರದೆತ್ತಿ ಗಿರಿಯಾ 1 ಭಕುತಿಲಿ ಶರಣು ಬರಲು ಸುದಾಮನು| ಸಕಲ ಸುಖವನಿತ್ತಾ ದೊರೆಯಾ2 ಗುರುಮಹಿಪತಿ ದೀನೋದ್ಧಾರನು| ಮುರ ಅರಿಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೊ ಸುದಾಮ ಬಾರೆನ್ನ ಮಿತ್ರ ದಾರಿ ನಮ್ಮಲ್ಲಿಗೆ ತೋರಲಿಲ್ಲೇನೊ ಪ ನಿನ್ನಯ ಪತ್ತೆಯು ಸಿಕ್ಕಲಿಲ್ಲೆನಗೆ ಎನ್ನಯ ಪತ್ತೆಯು ನಿನಗತಿ ಸುಲಭ ಎನ್ನತ್ತಿಗೆ ಕ್ಷೇಮದಿಂದಿರುವಳೆ ಪೇಳೊ ನಿನ್ನತ್ತಿಗೆ ಕ್ಷೇಮದಿರುವಳು ಕೇಳು 1 ಸತಿಸುತರನು ಕಾಣದುಂಟೇನೊ ಚಿಂತೆ ಸತಿಸುತರನ್ನಿಲ್ಲಿ ಕರೆಸುವೆ ಕಾಣೊ ನೀ ತಂದ ಒಡವೆಗಳೇನೇನು ತೋರೊ ಪೃಥುಕದ ಗಂಟನೆ ಬಿಚ್ಚೊ ನೀ ಬೇಗ 2 ಪೃಥುಕೈಕÀ ಮುಷ್ಟಿಯ ತಿಂದಾಗುತಿರಲು ಕ್ಷಿತಿಪತಿ ಕರವನೆ ಪಿಡಿದಳು ಭೈಷ್ಮೀ ಪೃಥುಕದ ಮುಷ್ಟಿಗೆ ಮೋಕ್ಷವ ಕೊಡುವಿ ಮತ್ತಿನ್ನು ತಂದರೆ ಕೊಡುವುದೇನರಸ 3 ತಟ್ಟಿ ಮುದ್ದಾಡಿ ಸುದಾಮನ ಬಿಡನು ಪುಟ್ಟಾದ ಮಕ್ಕಳ ಬಿಟ್ಟು ಬಂದಿರುವಿ ಕಷ್ಟವು ನಿನಗೇನೊ ಮಿತ್ರ ನಾನಿರಲು 4 ರಾಜೇಶ ಹಯಮುಖ ಚರಣಾಬ್ಜಗಳನು ಭಜಿಸುತ್ತ ನೀ ಪೋಗು ಮರೆಯದೆ ಮಿತ್ರನ ಮೂಜಗದೊಳಗಿಂಥ ಮಿತ್ರನೆಲ್ಲಿಹನು 5
--------------
ವಿಶ್ವೇಂದ್ರತೀರ್ಥ
ವ್ಯಗ್ರಬುದ್ಧಿಯು ನಿನಗೆ ಶ್ರೀಹರಿಯೆ ಸುಗ್ರಾಸನವು ನನಗೆ ಅಗ್ರದೈವರು ನೀನೇ ಗತಿಯೊ ಉಗ್ರತಪದಲಿ ಭಜಿಸುವಾತ್ಮಗೆ ಉಗ್ರರೂಪವ ತೋರಿ ವಿಧವಿಧಾ- ನುಗ್ರಹಿಪೆ ಅಮೃತಾನ್ನ ಭೋಜನ ಪ ಜನಿಸಲಮೃತ WಟÀವು ಸಿಂಧುವಿನೊಳು ವನಜನಾಭನೆ ವಂಚಿಸಿ ದನುಜ ಕಣಕದು ಇಲ್ಲದಾಗಿ ಅನುಮಿಷರಿಗತ್ಯಂತಮಿಕ್ಕೆ ಘನಹರುಷ ತೋರಿದೆಯು ಸುರರಿಗೆ ನಿನಗೆ ಮೆಲ್ಲಲು ಇರಿಸಲಿಲ್ಲಾ 1 ಧೀರ ದೂರ್ವಾಸ ಮುನಿ ಶಿಷ್ಯರ್ವೆರಸಿ ಹೋರಿದಾಹಾರಕ್ಕಾಗಿ ನೀರಜಾಕ್ಷಿಯು ಘೋರ ಬಂತೆಂದಾ ರಾತ್ರಿಯಲಿ ನೆನೆಯೆ ನಿನ್ನನು ಆ ರಭಸದೊಳು ಬಹುನಿಮಿಷÀದಿ ಸೂರಿ ಮಾಡ್ದೆಯೋ ಇಷ್ಟು ಭೋಜನಾ 2 ಸಖ ಸುದಾಮನು ಕಾಣಲು ಶ್ರೀಹರಿಯೆ ಭಕುತಿ ನೋಡಿ ಮೆಚ್ಚಿದಿ ಮುಕುತಿದಾಯಕ ಪರಮ ಪುರುಷನೆ ಭಕುತಿ ಭೋಜನವಿತ್ತೆನಗೆ ಸದಾ ಪ್ರಕಟ ನರಸಿಂಹವಿಠಲನೆ ಬಲು ನಿಕಟಮನ ಕೊಡು ನಿನ್ನ ಭಜಿಸುವಾ 3
--------------
ನರಸಿಂಹವಿಠಲರು
ಸರ್ಪಭೂಷಣನ ಸುತನ ಭಕ್ತಿಯಿಂದ ಬಲಗೊಂಡು ಮತ್ತೆ ಅಜನಸತಿಯ ಪಾದಕ್ಕೆ ಎರಗುವೆ 1 ಎಲ್ಲ ದೇವತೆಗಳಿಗೆ ಎರಗಿ ಭಕ್ತಿಯಿಂದ ಲಕ್ಷ್ಮೀ- ವಲ್ಲಭನ ಕತೆಗಳ ವರ್ಣಿಸುವೆನು 2 ಸ್ವಾಮಿ ಶ್ರೀಕೃಷ್ಣನ ಪ್ರೇಮವನ್ನು ಪಡೆದ ಸು- ದಾಮನೆಂಬೊ ಭಕ್ತ ಬಡವ ಬ್ರಾಹ್ಮಣಿದ್ದನು 3 ಸ್ನಾನ ಹೋಮ ಜಪವಮಾಡಿ ನೇಮ ನಿಷ್ಠೆಲಿಂದ ಉಪ್ಪು ಕಾಲ ಕಳೆಯುತಿದ್ದನು 4 ಅಶನವಿಲ್ಲ ವಸನವಿಲ್ಲ ಹಸಿದ ಮಕ್ಕಳನ್ನು ನೋಡಿ ವ್ಯಸನದಿಂದ ಪತಿಯ ಪಾದಕ್ಕೆರಗಿ ನಿಂತಳು 5 ತಂದೆ ತಾಯಿಗಳ ಕಡೆಯ ಬಂಧು ಬಳಗ ಯಾರು ಹತ್ತಿ ದ್ಹೊಂದಿದವರುಯಿಲ್ಲೆ ನಿಮಗೆ ಎಂದು ನುಡಿದಳು 6 ಪತ್ನಿ ಮಾತು ಕೇಳಿ ಪರಮ ಭಕ್ತಿಯಿಂದ ನುಡಿದ ಧ- ರ್ಮಾರ್ಥ ಕಾಮ್ಯಗಳನೆ ಕೊಡುವೋ ಮೋಕ್ಷದಾಯಕ 7 ಆದಿಮೂರುತಿ ಕೃಷ್ಣ ಓದಿಕೊಂಡ ಗೆಳೆಯನೊಬ್ಬ ಮಾಧವನ ಬಿಟ್ಟು ಮತ್ತೊಬ್ಬರಿಲ್ಲವು8 ಆತನ ಕಂಡು ಬಂದರ್ಯಾತರ ದಾರಿದ್ರ್ಯ ನಮಗೆ ಪ್ರೀತಿಯಿಂದ ಹೋಗಿಬನ್ನಿರೆಂದು ನುಡಿದಳು 9 ವರಮಾಲಕ್ಷ್ಮಿ ಅರಸು ಕೃಷ್ಣನರಮನೆಗೆ ಪೋಗಲಿಕ್ಕೆ ನ- ದರ ಏನುವೊಯ್ಲೆ ನರಹರಿಗೆ ಎಂದನು 10 ಲಕ್ಕುಮೀಶನ್ನ ದರ್ಶನಕ್ಕೆ ಒಯ್ಯಲಿಕ್ಕೆ ಮೂರು ಮುಕ್ಕು ಅವಲಕ್ಕಿ ತಿರಿದು ತಂದುಕೊಟ್ಟಳು 11 ಅದನು ಗಂಟು ಕಟ್ಟಿ ತನ್ನ ಹೆಗಲಮ್ಯಾಲೆ ಇಟ್ಟುಕೊಂಡು ನ- ಗಧರನ್ನ ನಗರಕ್ಕಾಗ ಬರುತಲಿದ್ದನು 12 ಲಕ್ಷಣಾದ ಶಕುನವ ಆ ಕ್ಷಣದಿ ಕಂಡು ವಿಪ್ರ ಲಕ್ಷ್ಮೀಪತಿಯ ದಯವು ನಮಗೆ ಆಗೋದೆಂದನು 13 ಹಾದಿಲ್ಹರಿವೊ ಜಲವ ಕಂಡು ಸ್ನಾನವನ್ನು ಮಾಡಿಕೊಂಡು ವೇದ ಪುಸ್ತಕವ ಹಿಡಿದು ಓದಿಕೊಳುತಲಿ 14 ಮಲ್ಲೆ ಮಲ್ಲಿಗೆ ದವನ ಅಲ್ಲೆಯಿದ್ದ ಫಲಗಳು ಲಕ್ಷ್ಮೀ- ವಲ್ಲಭಗೆ ಅರ್ಪಿತವೆಂದು ನಡೆದನು 15 ಗೋಪುರವ ಕಂಡು ದ್ವಾರಕಾಪುರಕ್ಕೆ ಕೈಯಮುಗಿದು ಶ್ರೀಪತಿಯ ಬಾಗಿಲಲಿ ಬಂದು ನಿಂತನು 16 ದ್ವಾರದಲ್ಲಿ ನಿಂತವರು ದಾರುಯೆಂದ್ವಿಚಾರಿಸಲು ನಾರಾಯಣನ ಸಖನು ನಾನೆಂದ್ಹೇಳುತಿದ್ದನು 17 ನುಡಿದ ನುಡಿಯ ಕೇಳುತ ನಡೆದು ಬಂದು ಚಾರಕರು ಒಡೆಯ ನಿಮ್ಮ ಗೆಳೆಯನಂತೆ ಬಡವ ಬ್ರಾಹ್ಮಣ 18 ಹುಟ್ಟ ಮೊದಲೆ ಅನ್ನ ತನ್ನ ಹೊಟ್ಟೆಗುಂಡ ಮನುಜನಲ್ಲ ಗಟ್ಟಿಗಾಳಿ ಬರಲೀಗ್ಹಾರುವಂತೆ ತೋರುವ 19 ಅಸ್ಥಿ ಚರ್ಮ ಆತನಂಗಕ್ಹತ್ತಿಕೊಂಡ ಹೊಟ್ಟೆಬೆನ್ನು ಮತ್ತೆ ನಡೆಯಲಾರ ಮಾತನಾಡಲಾರನು 20 ಒಡೆದ ಗುಂಡುತಂಬಿಗೆ ಬಡಿದನದರ ಸುತ್ತ ಮ್ಯಾಣ ಹಿಡಿದ ಗಂಟ ಬಿಡದಲ್ಹೊತ್ತು ನಡೆದು ಬಂದನು 21 ಮರದ ಗುಂಡು ಸರದಗುದ್ದಿ ಕೊರಳೊಳಗೆ ಹಾಕಿಕೊಂಡು ಎರಳೆ ಚರ್ಮ ಸುತ್ತಿ ಎಡದ ಬಗಲಲ್ಲಿಟ್ಟನು22 ದೊಡ್ಡನಾಮ ಹಚ್ಚಿಕೊಂಡು ಮುದ್ರೆಮಯ್ಯಲೊತ್ತಿಕೊಂಡು ಶುದ್ಧ ಚಂದ್ರಮನ ಕಾಂತಿ ತೋರುತಿದ್ದನು 23 ಛಿದ್ರವಾದ ಬಟ್ಟೆನುಟ್ಟು ಚಿಗುರು ತುಳಸಿ ಕಿವಿಯಲ್ಲಿಟ್ಟು ಪದ್ಮನಾಭ ಪಾಲಿಸೆನುತ ಕೂಗುತಿದ್ದನು24 ನಾಮಾಂಕಿತÀವ ಕೇಳಲು ಸುದಾಮನೆಂದು ಹೇಳುವ ನಾನಾ ಪರಿಯಲ್ನಿಮ್ಮ ಸ್ತುತಿಯ ಮಾಡುತಿದ್ದನು 25 ಅಪ್ಪುಣಾದರಾತನ ಇತ್ತ ಕರೆದು ತಾವೆನೆನಲು ಭಕ್ತರೊಡೆಯ ಭಾಳ ಸಂಭ್ರಮದಿ ಎದ್ದನು 26 ಕರವ ಪಿಡಿದು ಕುಳ್ಳಿರಿಸಿ ದಿವ್ಯಾಸನದ ಮ್ಯಾಲೆ ತರಿಸಿ ಚಾಮರದ ಗಾಳಿ ಹಾಕುತಿದ್ದನು 27 ಪನ್ನೀರು ತಂದು ಪಾದತೊಳೆದು ದ್ರಾಕ್ಷಿ ಕಿತ್ತಳೆ- ಹಣ್ಣು ಎಳನೀರು ತಂದು ಮೆಲಲು ಕೊಟ್ಟನು 28 ಮದುವೆ ಆಯಿತೇನೊ ಸಖನೆ ಎಂದು ಕೇಳಿದ 29 ಸೋಳಸಾವಿರ ಸತಿಯರಾಳುವೊ ಶ್ರೀರಮಣ ಕೇಳೊ ರಾಣಿವೊಬ್ಬಳಿರುವೊಳಯ್ಯ ನಮಗೆಯೆಂದನು 30 ಇಷ್ಟುದಿವಸ ಇಲ್ಲಿಗೆ ಬಾರದಿದ್ದ ಕಾರಣೇನು ಚಿಕ್ಕಂದಿನ ಸ್ನೇಹವೆಲ್ಲ ಮರೆತ್ಯ ಎಂದನು 31 ಬರದಲಿದ್ದೆ ನಾನು ಪಾಮರನೂ ಆದಕಾರಣ ಕಳುಹಿಕೊಟ್ಟಳೆನ್ನ ಭಾರ್ಯಳೀಗ ಎಂದನು 32 ಅಣ್ಣ ನಮ್ಮತ್ತಿಗೆ ನಮಗೇನು ಕಳಿಸಿದಳು ನಿನ್ನ ಹೆಗಲ ಗಂಟು ಬಿಚ್ಚಿ ತೋರಿಸೆಂದನು 33 ವಿಪ್ರ ನಾಚಿ ನೆಲನ ನೋಡುತಿರಲು ಕೃಷ್ಣ ಸಲಿಗೆಲಿಂದ ಗಂಟನೆಳೆದು ಬಿಚ್ಚಿಸಿದನು 34 ಸುಜನ ಜನರು ಮಾಡುವಂಥ ಭಜನೆಯೊಂದೆ ಸಾಕುಯೆನೆಗೆ ಹೇಮ ರತ್ನಾಭರಣವ್ಯಾತಕೆಂದನು 35 ಕುಂದಣದ ಪಾತ್ರೆಯೊಳಗೆ ತಂದು ಸುರುವೆ ಪ್ರತಕವನ್ನು ಮಂದರೋದ್ಧರನು ಮುಷ್ಟಿ ತೆಗೆದುಕೊಂಡನು36 ಮುಷ್ಟ್ಟಿಗೊಂದು ಬಾರಿ ಶ್ರೀಕೃಷ್ಣ ತೆಗೆದು ಮೆಲ್ಲುತಿರಲು ಕಷ್ಟ ದಾರಿದ್ರ್ಯವೆಲ್ಲ ಹರಿದು ಹೋಯಿತು 37 ಎರಡನೇ ಮುಷ್ಟಿ ಪಾಲ್ಗಡಲಶಯನ ಮುಕ್ಕುತಿರಲು ಸಡ- ಸಡಗರ ವೈಕುಂಠಪದವಿ ಮುಕ್ತಿ ಆಯಿತು 38 ಮೂರನೇ ಮುಷ್ಟಿಗೆ ನಾರಿ ರುಕ್ಮಿಣಿ ಬಂದು ಕೃಷ್ಣಯೇನು ಕೊಡುವಿ ಕರವ ಪಿಡಿದಳು 39 ಭಾವನವರು ತಂದುಕೊಟ್ಟ ದೂರದ ಪದಾರ್ಥವನ್ನು ನೀವೆ ಸವಿಯ ನೋಡುವೋದು ದಾವ ನೀತಿಯು40 ಅಕ್ಕ ಕಳಿಸಿದ್ದು ಅವಲಕ್ಕಿ ನಮಗಿಲ್ಲದ್ಹಾಗೆ ಮುಕ್ಕಿ ಬಿಡುವರೇನೊ ಎಂದು ನÀಕ್ಕಳಾಗಲೆ41 ಇಷ್ಟು ಮಂದಿಯೊಳಗೆ ಎನ್ನ ಮುಷ್ಟಿ ಹಿಡಿದು ನಿಲ್ಲುವಂಥ ದಿಟ್ಟತನಗಳೆಲ್ಲ್ಲಿ ಕಲಿತೆ ಹೇಳೆಯೆಂದನು 42 ಚಿಕ್ಕ ಸತ್ಯಭಾಮೆ ನೋಡಿ ನಕ್ಕಾಳೆಂಬೊ ನಾಚಿಕಿಲ್ಲ ಮುಕ್ಕು ಅವಲಕ್ಕಿಗೆನ್ನ ಕÀರವ ಪಿಡಿವೋರೆ 43 ಸರ್ವರೊಳಗೆ ಅಧಿಕಳೆಂಬೊ ಗರುವಿನ ರುಕ್ಮಿಣಿಗೆ ಬುದ್ಧಿ ಕರೆದು ಹೇಳಬಾರೆ ಸತ್ಯಭಾಮೆಯೆಂದನು 44 ಎನ್ನ ಭಕ್ತರಲ್ಲಿ ಪ್ರೇಮ ನಿನಗೆ ಉಂಟಾದರೆ ಇನ್ನೂ ಒಂದು ಮುಕ್ಕು ನಿನಗೆ ಕೊಡುವೆನೆಂದನು45 ಅಕ್ಕಗಾಡೋ ಮಾತಕೇಳಿ ಚಿಕ್ಕ ಸತ್ಯಭಾಮೆ ತಾನು ಅಕ್ಕರದಿ ಬಂದು ಕೃಷ್ಣನೆದುರು ನಿಂತಳು 46 ರಂಗ ನಿನ್ನ ಪಟ್ಟದರ್ಧಾಂಗಿಯಾದ ರುಕ್ಮಿಣಿಗೆ ಮುಂಗೈ ಹಿಡಿವೋದಕ್ಕೆ ದಾರಭಯವೇನೆಂದಳು47 <ಈಔಓಖಿ ಜಿಚಿಛಿe='ಓuಜ
--------------
ಹರಪನಹಳ್ಳಿಭೀಮವ್ವ
ಬಿಡಲಾರೆ ಬಿಡಲಾರೆ ನಿನ್ನಡಿದಾವರೆಯ ನೀಕೊಡು ಕಂಡ್ಯ ಅಭಯವಿಡಿದೆಮ್ಮ್ಮಯ ತಂದೆ ಪ.ಕೂಗುವೆ ಕೂಗುವೆ ಕೃಪಾಸಾಗರನೆಂದ್ಹೇಳಿ ತಾಕೂಗಿದರೊದಗಿ ಕಾಯಿದೆ ನಾಗನ್ನಕೇಳಿತಂದೆ1ಬಡವ ನಾ ಬಡವನು ಕಾಣೊ ಬಾಡದೊನಮಾಲಿ ಕಡುಬಡವ ಸುದಾಮನ ಕೈಯವಿಡಿದ್ಯೆಂದುಕೇಳಿತಂದೆ2ಡೊಂಕುನಡೆದೆಡೊಂಕುನುಡಿದೆ ಶಂಕಿಲ್ಲದಲೆ ಮೂಡೊಂಕಿಯ ತಿದ್ದಿದ ಬಿರುದಾಂಕನಕೇಳಿತಂದೆ3ಬಲ್ಲೆನೊ ಬಲ್ಲೆನೊ ನೀನಿದ್ದಲ್ಲಿ ವ್ರಜದಲ್ಲಿ ಗೋಗೊಲ್ಲರು ಪುಲ್ಗಲ್ಲಿಗೆ ಕೈವಲ್ಯವುಕೇಳಿತಂದೆ4ಅವರೇವೆ ನಿನ್ನವರು ನಾನೇನವರ ಶಿಶುವಲ್ಲೆ ತನ್ನವರಹೊರೆವಪ್ರಸನ್ವೆÉಂಕಟ ತವರೂರಕೇಳಿತಂದೆ5
--------------
ಪ್ರಸನ್ನವೆಂಕಟದಾಸರು