ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪ್ರಾಕೃತ ಕಾಯಾ ಪ ಶ್ರೀಕರಾರ್ಚಿತಪಾದ ಲೋಕೇಶ ವಂದಿತ ಅ- ವ್ಯಾಕೃತಾಕಾಶದೊಡೆಯನೆ ವಾಸುಕೀಶಯನ ಸರ್ವೇಶ ನೀನೆ ಪ್ರಾಕೃತ ಸಜ್ಜಮಜ್ಜನ ಕಾರ್ಯಕೆ ಕಾರಣನಯ್ಯ ಏಕೋ ನಾರಾಯಣ ಅ.ಪ ಪ್ರಳಯಕಾಲದಿ ಜೀವರ ನಿಲಯಾ ಕಲ್ಪಿಸಿ ತತ್ತ ನಾಲ್ಕುವಿಧಗಳ ರೂಪಗಳನು ಧರಿಸಿ ಪ್ರಳಯದೊಳಿಂಬಿಟ್ಟು ಎಳೆಸಿದ ಕಟಾಕ್ಷವೀಕ್ಷಣದಿಂದಲಿ 1 ಅಳವು ಇಲ್ಲದ ಸೃಷ್ಟಿಯನೆಸಗಿದೇ ಸಾಧುಜೀವರು ತಮ್ಮ ಸಾಧನ ಪೊರೈಸಿ ಸ್ವದೇಹದೊಳು ಬಂದ ಮೋದದಿಂದಲಿ ನೋಡಿ ಬಾಧಿಪ ಲಿಂಗಭಂಗವೈದಿಹ ಪ್ರಾರಬ್ಧನಾಶನವಿಹ ವಿ- ವಿಧ ಸುಜೀವರ ಮೋದಪಡಿಸಿ ನಿ- ಉದರದೊಳಿಟ್ಟ್ಯಯ್ಯ ಸದಮಲಮೂರುತಿ ಅದುಭುತಮಹಿಮ ಶ್ರೀ ವಾಸುದೇವನೆ2 ಸಂಚಿತ ನೀಗಿ ಪ್ರಾರಬ್ಧ ಶೇಷ ಭೋಗ ಉಳ್ಳವರೆಲ್ಲ ಆಗದೆ ಪೂರ್ಣ ಸಾಧನೆ ನೀಗದೆ ಲಿಂಗಭಂಗ ಆಗ ಬಿಂಬನ್ನ ನೋಳ್ಪರ ನಾಗಶಯನ ನಿನ್ನಂಗದೊಳಿಂಬಿಟ್ಟೆ ಜಾಗುಮಾಡದೆ ನೀನಾಗಲೆ ಜೀವರ ಭೋಗವ ತರಲು ಭಾಗವಗೈಸಿ ಭೂಭಾಗದ ಸಾಧನ ಮಾಳ್ಪ ಜೀವಗಣ ಭಾಗವ ಕಾಯ್ದೆ ಸಂಕರುಷಣ ಮೂರುತೆ 3 ನಿತ್ಯಸಂಸಾರಿಗಳಿಗೆ ಇತ್ತೆ ನಿನ್ನುದರದೊಳು ಮುಕ್ತರೊಡೆಯ ದೇವ ಶಕ್ತನಹುದೋ ನೀ ಮೊತ್ತ ಮೊದಲು ನೀನಿತ್ತು ಪೊರೆದೆ ಬರಲಿತ್ತ ಕಾರಣ ಪ್ರ- ಸುತ್ತಿ ಸುತ್ತಿರುವೆ ಬಿತ್ತರಿಸಲೇನನಿರುದ್ಧಮೂರುತೇ 4 ಅಣುವಿಗೆ ಅಣುವಾಗಿ ಘನತೆ ಘನತಮನಾಗಿ ತೃಣಜೀವರಾದಿ ಬ್ರಹ್ಮಗಣರೆಲ್ಲರೊಳು ಗಣನೆ ಇಲ್ಲದ ಕಾರ್ಯ ಕ್ಷಣಬಿಡದಲೆ ನಡೆಸಿ ಎಣೆಯಿಲ್ಲದಿಹ ಸುಗುಣ ಸಾಂದ್ರನೆ ಪ್ರಣವದೊಳು ಪ್ರತಿಪಾದ್ಯನಾಗಿಹೆ ತ್ರಿಗುಣರಹಿತ ಮುಖ್ಯ ಪ್ರಾಣಾಂತರ್ಗತ ಪ್ರಣತಕಾಮದ ಪೂರ್ಣ ಸಂಪೂರ್ಣ5 ಮುಕ್ತಾಮುಕ್ರಾಶ್ರಯ ಭಕ್ತಪರಾಧೀನ ಶಕ್ತಾನೆ ಸರ್ವವೇದೋಕ್ತ ಮಹಿಮಾತೀತ ಉಕ್ತನಾಗಿಹೆ ಪುರುಷಸೂಕ್ತಾದೊಳಪ್ರಮೇಯ ಶಕ್ತಿಯನರಿಯರು ಅಜಭವಾದ್ಯರು ಶಕ್ತನೆ ಜೀವನ್ಮುಕ್ತರೌಘ ಸಕ್ತರಾಗಿ ನಿನ್ನ ಸ್ತೋತ್ರವ ಮಾಳ್ಪರು 6 ಶ್ರೀಶಾ ಸರ್ವೋತ್ತಮ ವಾಸ ವೈಕುಂಠಾಧೀಶ ವಾಸವಾದಿ ವಂದಿತ ಭಾಸುರಾಂಗನೆ ವಿಶ್ವಾಸ ನಿನ್ನೊಳಿಟ್ಟ ದಾಸ ಜನರ ಕಾಯ್ವ ಈಶಾವ್ಯಾಸಮಿದಂಸರ್ವಂ ಎಂದೆಂದು ಎಂದು ಉಸುರುವ ವೇದಗಳ್ ಏಸುಕಾಲಕು ಸಾಕಲ್ಯದಿ ವರ್ಣಿಸ ಲೀಶ ಕೋಟಿ ಪ್ರವಿಷ್ಟೆಗೆ ಅಸದಳ 7 ಅಂಗಜಪಿತ ರಂಗ ಮಂಗಳಾಂಗನೆ ಮಾ- ತಂಗವರದ ದೇವ ಗಂಗಾಜನಕ ಕಾಳಿಂಗನಾ ಮದ ಮೆಟ್ಟಿ ಭಂಗಾಗೈಸಿದ ಭುಜಂಗಶಯನ ಎನ್ನಂತಾ- ರಂಗದಿ ನಿಲ್ಲೋ ಇಂಗಿತ ಬಲ್ಲೆ ಶ್ರೀರಂಗಶಾಯಿ ಸಾ- ರಂಗಪಾಣಿ ಕೃಪಾಂಗ ಎನ್ನಯ ಭವಭಂಗಗೈಸಿ ಸ- ತ್ಸಂಗವೀಯೋ ಯದುಪುಂಗವ ಮಂಗಳಮೂರುತಿ ಶೌರೇ8 ಕಾಲ ಜಾಲವ ತಂದೆ ಪಾಲಿಪ ಸಲಹಿಪ ಕರ್ತ ನೀನಲ್ಲದಿ- ನ್ನಿಲ್ಲವಯ್ಯ ಶ್ರೀ ವೇಂಕಟೇಶ ಪ್ರಭೋ 9
--------------
ಉರಗಾದ್ರಿವಾಸವಿಠಲದಾಸರು
ಏನೆಲೆ ಸಖಿ ವಾನರ ಮುಖಿ ನೀನು ಒಳ ಒಳಗೆ ಮಾಡಿದ ಯೋಚನೆ ಪ ಹಳೆಯ ಜೌಳಿಗಳು ಘಳಿಲನೆ ತಂದಿಟ್ಟು ಘನವ ಪೇಳಿಕೊಂಬೆ 1 ಭಕ್ಷ್ಯ ಭೋಜ್ಯ ನಿನ್ನ ಕುಕ್ಷಿ ತುಂಬಿದಾರು ಲಕ್ಷ್ಯವಿಲ್ಲದೆ ನಮ್ಮಾ- ನಾಕ್ಷೇಪಿಸುತ್ತಿರುವೆ 2 ಹಪ್ಪಳಾವು ಹತ್ತು ಹೋಳಿಗೆ ಇಪ್ಪತ್ತು ತಪ್ಲೇಲಿ ತಿಳಿ ತುಪ್ಪ ತಪ್ಪದೆ ಮಾಯವಾಯ್ತು 3 ಬಡವರಮ್ಮ ನಾವು ಬಡಿವಾರವೆಮಗಿಲ್ಲ ನಡುಬೀದಿಗೆ ಕಾಲ- ಚಾಚದಿರತ್ತಿಗೆ 4 ಜಲಜಾಕ್ಷ ಗುರುರಾಮ | ವಿ- ಠಲನಾ ಸ್ಮರಿಸುತ್ತಾ ಕಲಹಕಾರಿ ನೀನು ಎಲೆಯ ನೋಡಿವುಣ್ಣೆ 5
--------------
ಗುರುರಾಮವಿಠಲ
ನದೀದೇವತೆಗಳು ಕಂಗಳಿಂದಲಿ ನಿನ್ನ ಕಂಡೆ ನಾನೀಗ ಹಿಂಗಿತೇ ಎನ್ನ ಅಘದ್ಹಿಂಡು ಕಾವೇರಿ ಪ. ಮಂಗಳಾಂಗಿಯೆ ಶ್ರೀ ರಂಗನಾಥನ ಪದ ಭೃಂಗಳೆನಿಸಿ ಜನರ ಪಾವನಗೈವೆ ತುಂಗವಿಕ್ರಮ ಹರಿಗೆ ಮೂಲರೂಪಳಾಗಿ ಅಂಗ ಶುದ್ಧಿಯಗೈವೆ ಪಾಪಿಗಳ ಸತತ 1 ಎಲ್ಲೆಲ್ಲಿ ನೋಡೆ ಶ್ರೀರಂಗನ್ನ ಸೇವಿಸುವೆ ಪುಲ್ಲಲೋಚನೆ ನಿನ್ನ ಬಗೆಯರಿವೆನೆ ಬಲ್ಲ ಭಕ್ತರು ಬಂದು ನಿನ್ನಲ್ಲಿ ಸ್ನಾನವಗೈದು ಉಲ್ಲಾಸದಿಂದ ಆನಂದಪಡುತಿಹರೆ 2 ನೊರೆಸುಳಿಗಳಿಂದ ಭೋರ್ಗರೆಯುತ್ತ ಹರಿ ಇರುವ ಅರಮನೆಯೆ ವೈಕುಂಠವೆಂದು ಸೂಚಿಸುತ ಹರಿಸದನ ಸುತ್ತಿರುವೆ ವಿರಜೆ ನಾನೆಂದೆನುತ ಅರುಹುವಾ ತೆರದಿ ಬಹು ರಭಸದಿಂ ಪರಿವೆ 3 ನಿನ್ನ ಧ್ವನಿ ಇಂಪೆಂದು ಆನಂದದಿಂದಾಲಿಸುತ ಚನ್ನ ಶ್ರೀರಂಗ ತಾ ಪವಡಿಸಿಹನೆ ಘನ್ನ ಮಹಿಮಳೆ ಸಕಲ ಜೀವರಾಶಿಯ ಪೊರೆವೆ ಎನ್ನ ಮನ ಹರಿಪದದಿ ನಲಿವಂತೆ ಮಾಡೆ 4 ನಿನ್ನನೇ ವಿರಜೆ ಎಂತೆಂದು ಭಾವಿಸಿ ಈಗ ಎನ್ನ ಗುರುಗಳ ದಯದಿ ಸ್ನಾನಗೈದೆ ಇನ್ನು ಶ್ರೀ ವೈಕುಂಠದೊಡೆಯನಾ ತೋರಮ್ಮ ಘನ್ನ ಶ್ರೀ ಗೋಪಾಲವಿಠ್ಠಲನ 5
--------------
ಅಂಬಾಬಾಯಿ
ಯಾಕೆ ಮನದಲಿ ಶೋಕಿಸುತ್ತಿರುವೆ ಜಗ ದೇಕನಾಥನು ಸಾಕುತಿರುವನು ನೀ ತಿಳಿಯದಿರುವೆ ಪ ಲೋಕನಾಥನ ವಿವೇಕದಿ ಸ್ತುತಿಸದೆ ವ್ಯಾಕುಲದಿಂ ಮನ ಕಳವಳಗೊಳುತಲಿ ಅ.ಪ ಸೃಷ್ಟಿಕರ್ತನು ರಕ್ಷಿಸುತ್ತಿರುವ ದುರಿತಂಗಳ ರಾಸಿಯ ಬೆಟ್ಟಗಳ ತರಿದೊಟ್ಟು ತಿರುವ ಅದು ತಿಳಿಯದು ನೀ ಬಲು ಕಷ್ಟಗಳ ಪಡುತಿರ್ಪ ವಿಷಯಗಳ ನೋಡುತ ನಗುತಿರುವ ಇಷ್ಟು ಈತನ ಪ್ರಭಾವವು ತಿಳಿಯದೆ ಲಕ್ಷ್ಮಿರಮಣ ರಕ್ಷಿಸೆನ್ನುತ ಸ್ಮರಿಸದೆ 1 ನಾನು ನನ್ನದು ಎಂಬ ಅಭಿಮಾನ ಅದು ಪೋಗುವ ತನಕ ಜ್ಞಾನ ಮಾರ್ಗಕೆ ಇಲ್ಲ ಸಾಧನ- ವೆಂದರಿಯುತ ಮನದಲಿ ಧ್ಯಾನಿಸುತ್ತಿರು ಶ್ರೀನಿಧಿ ಗುಣಗಳನು ಹೀಗಿರುವುದೆ ಪ್ರಧಾನ ಧ್ಯಾನ ಗಾನ ಮೌನಾದಿ ವ್ರತಗಳನು ಶ್ರೀನಿಧಿಗರ್ಪಿಸಿ ಮನ ಹರುಷಿಸದಲೆ2 ತಂದೆ ಶ್ರೀ ವೆಂಕಟೇಶ ವಿಠ್ಠಲನು ಹರಿಭಕುತರ ಮೊರೆಯನು ಛಂದದಿಂದಲಿ ಕೇಳಿ ಪೋಷಿಪನು ಮುಕುಂದನಲಿ ಭಕುತಿ ಎಂದೆಂದಿಗೂ ತಪ್ಪದೆ ಉದ್ಧರಿಸುವನು ನಿಜವೆಂದರಿ ಇದನು ಮುಂದೆ ಕಮಲನಾಭ ವಿಠ್ಠಲ ಭಕುತರ ಸಂದಣಿ ಪೊರೆದು ಸಂತೈಸುತಲಿರೆ ವೃಥ 3
--------------
ನಿಡಗುರುಕಿ ಜೀವೂಬಾಯಿ
ಯಾತಕವನಿಯೊಳ್ ಜನಿಸಿದೆ ನಾನು ಸಾರ್ಥಕೇನು ನಾನು ಕೋತಿ ಸಾರ್ಥಕೇನು ಪ ಶರಧಿ ಹಾರಿ ಉರಿವಿಲಂಕೆಯನರಿವೆನೇನೊ ವಾರ್ತೆ ತಿರುಗಿ ಮಾರ್ಗವ ಮಾಡಿ ಮಾತೆಯ ತರುವೆನೇನೊ 1 ಕಿತ್ತು ಸಂಜೀವನವ ಬೆಟ್ಟಲ್ಲಿರಿಸುವೆನೇನೊ ರಾಮ- ರ್ಹತ್ತಿಸ್ವಾಹನನಾಗಿ ಖ್ಯಾತಿಪಡೆವೆನೇನೊ 2 ಇಂದಿರೇಶ ಕೊಡಲು ಪದವಿ ಒಲ್ಲೆಂಬೆನೇನೊ ರಾಮ- ರೆಂಜಲೆಲೆಗ್ಹಾರೈಸಿ ಕದ್ದೊಯ್ದುಂಬೆನೇನೊ 3 ಮುನ್ನ ಹರಿಯ ಸೇವೆಗೆಂದು ಜನಿಸಿದೆನೇನೊ ಧರೆಯೊಳ್ ಧರ್ಮ ಮೀರದೆ ನಡೆದು ಖ್ಯಾತಿ ಪಡೆವೆನೇನೊ 4 ರಾಜಸೂಯಯಾಗಾಶ್ವಮೇಧ ಸಾಧಿಸುವೆನೇನೊ ರಾಜ್ಯ ಭೇದಿಸಿ ಶತ್ರುಗಳಿಗೆ ಭಯವ ತೋರುವೆನೇನೊ 5 ಕ್ಲೇಶಮನಕಿಲ್ಲದೆ ವನವಾಸ ಸಹಿಸುವೆನೇನೊ ಅಜ್ಞಾತ- ವಾಸೊಂದುಕ್ಷಣ ಪರಿಯಂತರ ಚರಿಸುವೆನೇನೊ 6 ಭಿಕ್ಷೆತನಕೊಂಬೊ ಸಜ್ಜನರಿಗೆ ನಮಿಸುವೆನೇನೊ ಬೋರೆ- ವೃಕ್ಷಮೂಲದಲ್ಲಿ ಆವಾಸ ಬಯಸುವೆನೇನೊ7 ಪಾದಕ್ಕೆರಗುವೆ ಪ್ರಾಣೇಶ ನೀ ಪಾಲಿಸುವ್ಯೇನೊ ಜ್ಞಾನ ಆದಿಮೂರುತಿ ವೇದವ್ಯಾಸನ ಒಲಿಸುವೆನೇನೊ 8 ಬಿಟ್ಟು ಚಲಿಸದೆ ನಿನ್ನಲ್ಲೆ ಮನಸಿಟ್ಟೇನೇನೊ ವಾ- ಸಿಷ್ಠ ಭೀಮೇಶಕೃಷ್ಣನ ಭಜಿಸುತ್ತಿರುವೆನೇನೊ 9
--------------
ಹರಪನಹಳ್ಳಿಭೀಮವ್ವ
ವಿಷ್ಣುಶತಕ ಶಿರಿದೇವಿ ಹೃತ್ಕುಮುದ ಚಂದ್ರಮನೆ ಕರುಣಾರ್ಣವಾಗಣಿತ ಸದ್ಗುಣನೇ ಭಂಜನ ಮುರಾಂತಕನೇ ಪರಮಾತ್ಮ ಪಾಲಿಸು ಪರಾತ್ಪರನೇ 1 ಕಮಲಾಸನಾದ್ರಿಜೆ ಮನೋಹರ ಮು ಖ್ಯಮರಾಳಿಯಂ ಭಕುತಿಯಿಂ ಬಲಗೊಂಡು ಮ- ಹಾತ್ಮರಾದ ಗುರುಪಾದಕೆ ನಾಂ ನಮಿಸೀ ಪ್ರಬಂಧವನು ಹೇಳುತಿಹೇಂ2 ನೂರಾದ ಪದ್ಯಗಳೊಳಾಂ ಸಕಲಂ ಧಾರಾಳವಾಗಿ ತವ ಸನ್ನಿದಿಯೋಳ್ ಸಾರಂಗಳಂ ಗ್ರಹಿಸಿ ಬಿನ್ನಯಿಪೇಂ ಶ್ರಿರಾಮನೀಂ ದಯದಿ ಲಾಲಿಸಿ ಕೇಳ್ 3 ಕವಿತಾ ಧುರೀಣತೆಯು ಬಂದುದು ನಿ_ ನವ ಯುಕ್ತಿ ಚತುರತೆಗಳೊಂದರಿಯೇಂ 4 ಜೀವಕ್ಕೆ ನೀನು ಮಿಗೆ ಚಿತ್ತದಿ ಶ್ರೀ ದೇವೀ ಮನೀಷದೊಳು ಬ್ರಹ್ಮನಿಹಂ ಯಾ ವಿಶ್ವನಾಥ ಸಹ ರುದ್ರ ಮನೋ ಭಾವಂಗಳಿಂಗೊಡೆಯನಾಗಿರುವಂ 5 ಸಲೆ ಹಮ್ಮಿಗಾ ತ್ರಿಪುರ ಸಂಹರನೇ ಉಳಿದಿಂದ್ರಿಯಗಳಿಗೆ ಜಿಷ್ಣುಮುಖರ್ ಒಳಗಿದ್ದು ಒಳ್ಳಿದನು ಕೆಟ್ಟುದನೂ ಬಲವಿತ್ತು ಮಾಡಿಸುವರೈ ಹರಿಯೆ 6 ಜಲಜಾತ್ಮಜಾಭಿಮತ ಬಂಧು ಪಥಂ ಗಳು ಮೂರು ಬಗೆಯು ನೋಡಿದರೆ 7 ಮಿಗೆ ಕರ್ಮಕರ್ಮವು ವಿಕರ್ಮಗಳೂ ಜಗದಲ್ಲಿ ಎಲ್ಲರಿಗು ಮೂಲವಿದೂ ತ್ರಿಗುಣ ಪ್ರಬದ್ಧರಹ ಜೀವಗಣಾ ಖಗರಾಜ ವಾಹನನೆ ಸಾಕ್ಷಿಯು ನೀಂ 8 ಸದಸದ್ವಿವೇಕಾವನು ಕಾಣದೆ ಸ ಚಿದಚಿದ್ವಿಲಕ್ಷಣನು ನೀನೆನದೇ ಮದಗರ್ವದಿಂದ ಮೆರೆದಾಂ ಕೆಡುವೇಂ 9 ಕುಹುಕಾತ್ಮರಾದವರ ಸಂಗದಿ ಬಂ- ದಿಹ ನೋವು ನಾನಕಟ ಬಣ್ಣಿಸೇಂ10 ಅಂತವರ್ಗವಾರ್ವರು ಶರೀರದೊಳಿ ದುರ್‍ವೃತ್ತಿ ಪುಟ್ಟಿಸುತ ಕೊಲ್ಲುತಿಹರ್ ಪರಮಾತ್ಮ ನಿನ್ನವರ ಸೇರಿರುವೇಂ 11 ಮಲಮೂತ್ರ ಕೂಪವಹ ದೇಹವಿದು ಜಲಗುಳ್ಳೆ ಎಂದರಿತಡಂ ಬರಿದೇ ಕಲುಷಾತ್ಮನಾದೆ ಕರಿರಾಜವರದಾ 12 ಹಸನಾಗಿ ತೋರುತಿಹ ದುರ್ವಿಷಯಂ ಬಿಸಿನೀರು ತುಂಬಿರುವ ಬಾವಿಯಿದುಂ ಕುಸುಮಾಸ್ತ್ರನೆಂಬ ಕಡುಗಳ್ಳನು ತಾ ನೆಸಗೀ ಪ್ರವಾಹದಲಿ ನೂಕುತಿಹಂ13 ಪಾದ ಪದ್ಮಂಗಳ ನಂಬಿದೆ ವೆಂ- ಮ್ಮವಮಾನ ಮಾನಗಳು ನಿನ್ನದುದೆಂ- ದ್ವ್ಯವಸಾಯವಂತರೆ ಮಹಾತ್ಮಕರೂ 14 ಜನುಮಗಳನೆತ್ತುತಲಿ ಜೀವರು ನಿಂ ನನು ಕಾಂಬ ಯೋಚನೆ ತಿರಸ್ಕರಿಸೀ ಘನ ಕಾಮಭೋಗಗಳಪೇಕ್ಷಿಸಿತಾಂ ಧನಕಾಗಿ ದುರ್ಜನರ ಸೇವಿಸುವರು 15 ಹಿತದಿಂದ ಎಲ್ಲರಿಗೆ ನೀನೆ ಇದಂ ಮತಿಹೀನರಾದವರು ಬಾಹ್ಯರ ನಂ- ಬುತ ದುಃಖದಿಂದಲವಿವೇಕರಹರ್ 16 ಗುಣಶೂನ್ಯ ನೀನೆನುತ ಕೊಂಚ ಜನಂ ಗಣಿಸಲ್ಕಸಾಧ್ಯವಹ ವಾದಗಳಿಂ ಘನ ತರ್ಕದಿಂದ ಅನುವಾದಿಸಿ ದುರ್ ಜನ ಮುಖ್ಯರೆನಿಸುತಿಹರ್ ಭುವಿಯೊಳ್ 17 ಅನುಮಾನವೇ ತಮಗೆ ಮುಖ್ಯವೆನು- ತನುಸಾರಿ ರಾಜಸದಿ ತಾಂ ಮುಳುಗೀ ವನಜಾಕ್ಷ ಕೋರಿಕೆಗಳಿಂ ಭಜಿಪರ್ 18 ಉದರ ಪ್ರಯುಕ್ತ ಪರರಾಶ್ರಯಿಸಿ ಪದ್ಯ ಪದ್ಯ ಪೇಳಿ ಬಹುನೀಚನು ನಾ- ನುದಯಾಸಮುದ್ರರೆಲೆ ನೀವೆನುತೇ ಸುದುರಾತ್ಮರಂ ಪೊಗಳಿ ಕೆಟ್ಟೆನು 19 ಹಿತತತ್ವ ಭಾವದಲಿ ದುರ್ಜನರು ಮತಿವಂತರಂತೆ ಬಹಿಯೋಳ್ ನಟಿಸಿ ಸತಿ ಪುತ್ರ ವಿತ್ತಗಳ ಮೋಹದಲೀ ವ್ಯಥೆಪಟ್ಟು ಬಾಯ್ಬಿಡುತ ನೋಯುತಿಹರ್20 ಮೊದಲಾಗಿ ಎಲ್ಲರನು ಮಾಯದಿ ನಿ- ನ್ನುದ ರಾಖ್ಯ ವಾರಿನಿಧಿಯಿಂದಲಿ ತಾವ್ ಉದಿಸಿರ್ಪರೆಂದುಸುರುಗುಂ ಶ್ರುತಿಗಳ್ 21 ಅನುಮಾನವುಳ್ಳ ಜನಕೆಂದಿಗು ಪಾ- ಮೂರ್ತಿ ನಿನ್ನ ಘನ ಜ್ಞಾನ ಸುಖಂ ತೃಣ ಮಾತ್ರವೂ ಬರದು ಸ್ವಪ್ನದೊಳು ಜನದಲ್ಲಿ ಕೀರ್ತಿ ಬಹಿಯೊಳ್ ಬರಿದೆ 22 ಗುರುಸೇವೆಯಿಂದ ತನುದಂಡಿಸಿ ತಾ ನಿರುತಂ ಸುಶಾಸ್ತ್ರಗಳ ನೋಡುತಲಿ ಸ್ಥಿರ ಚಿತ್ತನಾಗಿ ಶ್ರವಣಾದಿಗಳಿಂ ಹರಿಭಕ್ತರಿಂದ ಕಡೆಸೇರುತಿಹಂ 23 ಕವಿಯಾದವರ್ ನಿರುತವುಂ ಮಿಗೆ ಭಾ- ಗವತಾದಿ ಗ್ರಂಥಗಳ ಸಜ್ಜನರಿಂ ಕಿವಿಯಿಂದ ಕೇಳುವುದಕಂ ಬಹು ಜ- ನ್ಮವು ಪಕ್ವವಾಗಿ ಸಲೆ ಪ್ರಾಪ್ತಿಸುಗುಂ 24 ಹರಿಕೃಷ್ಣ ಕೇಶವ ಮುಕುಂದ ನೃಕೇ- ಸರಿ ವಿಷ್ಣುವಾಮನ ತ್ರಿವಿಕ್ರಮ ಶ್ರೀ ಪದ್ಮನಾಭ ಮಧುಸೂದನ ಹೇ ಪುರಷೋತ್ತಮೌಚ್ಯುತ ಜನಾರ್ದನನೇ 25 ವಸುದೇವ ನಂದನ ಮುರಾಂತಕನೇ ಹೃಷಿಕೇಶ ನಾರೇಯಣ ಮಾಧವನೇ ಪರಿ ಪಾ- ಲಿಸುಪೇಂದ್ರ ಭಕ್ತರ ಅಧೋಕ್ಷಜನೇ 26 ಪರಮಾತ್ಮ ನೀನೆಮಗೆ ಎನ್ನುತನಂ- ಬರು ನಿನ್ನ ತಾಮಸರು ಸತ್ಯವಿದು ನೆರೆ ನೋವಿನಿಂಬಳಲಿ ತಾವ್ ಮಿಗೆ ಸಂ- ಸರಣ ಪ್ರವಾಹದೊಳು ಬೀಳುತಿಹರ್ 27 ದ್ಗುಣದಲ್ಲಿ ದುರ್ಗುಣಗಳೇ ಗಣಿಸಿ ಘನ ಮೋಹ ದುಃಖದೊಳು ಸತತ ನಿ- ನ್ನನು ಕಾಂಬ ಯೋಚನೆಯ ಬಿಟ್ಟಿರುವರ್ 28 ನ್ನನು ನಂಬಿ ನಂಬಿದಲೆ ತಾವ್ ನಿರತಂ- ಘನ ಕಾಮ ಕ್ರೋಧ ಮದ ಮತ್ಸರದಿಂ ಜನದಿಂದ ಯತ್ನವನು ಮಾಡುತಿಹರ್ 29 ದೇವಾದಿದೇವ ದಿವಿ ಭೂಮಿಗಳೋಳ್ ಭಾವ ಪ್ರಭೇದದಲಿ ಧ್ಯಾನಿಪರಿಂ- ಗೀ ವೇಷ್ಟಸಿದ್ಧಿಗಳ ನೀನೆ ಸದಾ 30 ಯೋಗಿ ಜನವಂದಿತ ಸ- ಜ್ಜನಕಲ್ಪವೃಕ್ಷ ಜಗದೇಕ ವಿಭೋ ವನಜಾಕ್ಷ ಇಂದಿರೆಯ ವಲ್ಲಭ ಬ್ರಾ- ಹ್ಮಣ ಪ್ರೀಯ ಭಕ್ತಸುಖದಾಯಕನೇ 31 ರವಿಕೋಟಿತೇಜ ರಮಣೀಯ ಕಥಾ- ತವನಾಮ ಕೀರ್ತನೆಯ ಮಾಳ್ಪರ ಪಾ- ಪವ ನೀನೆ ಓಡಿಸುವುದೇನರಿದೈ 32 ವರಾಹ ನೃಕೇ- ಸರಿ ವಾಮನಾವನಿ ಸುರೋತ್ತಮ ಭಾ- ಸ್ಕರ ವಂಶ ಚಂದ್ರವಸುದೇವಜ ಭಾ ಬುದ್ಧ ಕಲ್ಕ ವಪುಷೇ ನಮಃ 33 ಮುನಿಕರ್ದಮಂಗುದಿಸಿ ತಾಯಿಗೆ ಪಾ ವನ ರಾಜಯೋಗವನು ಬೋಧಿಸಿದೈ ಘನಯೋಗಿವರ್ಯ ಕಪಿಲಾಖ್ಯನೆನಿ- ನ್ನನು ನಂಬಿ ಪ್ರಾರ್ಥಿಸುವೆನಾನನಿಶಂ 34 ರ್ಜುನ ಕಾರ್ತವೀರ್ಯಗುಪದೇಶಿಸಿದೇ ಘನಯೋಗ ಬೋಧೆಯನು ಹೈಹಯರ್ ತಾ ವನುವಾದ ಶಿಷ್ಯರೆಲೆದತ್ತವಿಭೋ 35 ಋಷಭಾಖ್ಯನಾಗಿ ಸುತರಿಂಗೆ ಮಹಾ ಋಷಿಚರ್ಯ ಬೋಧಿಸಲವರ್ ತಿಳಿದು ದಶಯೋಗಿವಂದಧಿಕ ಎಂಬತ್ತು ಭೂ- ಮಿಸುರಕ್ರಿವೃತ್ತಿಯಲಿ ಶೋಭಿಸಿದರ್ 36 ಜಂಭ್ವಾಖ್ಯ ದ್ವೀಪದೊಳು ಖಂಡಗಳಿಂ ಅಂಭೋಜನಾಭ ತವನೇಮದಲೀ 37 ಹರಿ ನೀನೆ ಪುಟ್ಟಿಯದು ಸ್ಥಾಪಿಸಿ ದು ರ್ನರರನ್ನು ಕೊಂದು ಶರಣಾಗತರಂ ಪರಿಪಾಲಿಸುತ್ತಿರುವೆ ಸಂತತವುಂ 38 ಕಲಿಕಾಲವೀಗ ಖಳರೆಲ್ಲರು ಸ- ತ್ಕುಲದಲೆ ಪುಟ್ಟಿ ನೆರೆ ಸಾಧುಗಳಂ ಬಲುಬಾಧಿಸುತ್ತ ದುರಿತಂ ಘಳಿಸೇ ನರಕಂಗಳಲ್ಲಿ ನೆರೆಯಾಗುತಿಹರ್ 39 ಪರಮಾತ್ಮ ತತ್ವದಲಿಯೇ ಮರವು ದುರ್ವಿದ್ಯವಭ್ಯಸಿಪುದಕೆ ಮನವು 40 ಪರರನ್ನು ನೋಡಿಯವರಂತೆ ತಾ ವಿರಬೇಕೆನ್ನುತ್ತಲನಿಶಂ ಬಳಲೀ ಗುರುಯತ್ನಮಾಡಿ ವಿಫಲಾಗಲು ಶ್ರೀ ಹರಿ ನಿನ್ನದೂರುತಿರುವರ್ ದುರುಳರ್41 ಕರ್ಣ ಮುಖರಿಂದಲಿ ಸಂ ಗರದಲ್ಲಿ ಕಾದಿ ಮಡಿದಂ ಬರಿದೇ42 ಜಮದಗ್ನಿ ಪುತ್ರನಿಗೆ ಶಿಷ್ಯನು ಭೀ ಷ್ಮಮಹಾ ಪರಾಕ್ರಮಿಯು ದ್ರೋಣನುತಾಂ ಕಮಲಾಪ್ತಪುತ್ರ ಕಲಿ ಶಲ್ಯ ಮುಖ್ಯರ್ ಭ್ರಮೆಯಿಂದಲನ್ನಕಸುಗಳ್ ತೊರೆದರ್ 43 ಯಮಜಂ ವೃಕೋದರನು ಫಲ್ಗುಣನೂ ಯಮಳರ್ ತವಾಂಫ್ರಿಸ್ಮøತಿಯೇ ಬಲವಾ- ಗಿ ಮಹಾಪದಂಗಳನು ದಾಂಟಿದರೈ ಸುಮಬಾಣನಯ್ಯನೆ ಮಹಾತ್ಮರವರ್ 44 ಹರಿ ನಿನ್ನ ಡಿಂಗರಿಗರಿಗಾಶ್ರಯವೇ ವರಭಾಗ್ಯ ನಿತ್ಯಸುಖವೆನ್ನುತಲೀ ಅರಿದುತ್ತಮರ್ ಬಯಸರೆಂದಿಗು ಪಾ- ಮರರಂತೆ ತುಚ್ಛಗಳ ಸ್ವಪ್ನದೊಳು 45 ಸಲೆ ಚಿನ್ನ ಬೆಳ್ಳಿ ಬೆಲೆ ಹೆಚ್ಚು ಪಟ ಗಳ ಗೃಹಕ್ಷೇತ್ರ ಸುತದಾರ ಧನ- ಗಳ ನಿತ್ಯವೆಂದರಿದು ಲೆಕ್ಕಿಸದೇ ಜಲಜಾಕ್ಷ ನಿನ್ನ ಭಜಿಪರ್ ಸುಜನರ್ 46 ಸುಜನಾಬ್ಧಿ ಚಂದ್ರ ಸುಗುಣಾರ್ಣವ ನೀ ನಿತ್ಯ ನಿರವದ್ಯ ಸ್ವಭಾ ವಜ ಕರ್ಮದಿಂ ಸಕಲ ಪ್ರಾಣಿಗಳೂ ನಿಜಯೋಗ್ಯತೆಯಂತೆ ವರ್ತಿಪುದು 47 ಕರುಣಾನಿಧೇ ಕಮಲಲೋಚನನೆ ಸು- ರರಾಜ ಸೋದರನೆ ಭಾವಜನೈ ಯರಮಾಧಿನಾಥ ಯದುವಂಶ ಭೂ ರಥಾಂಗ ಪಾಣಿಯೆ ಜನಾರ್ದನನೇ 48 ರಘುವಂಶಕೇತು ರವಿಮಂಡಲದೋಳ್ ಭಗವನ್ನಿರಂತರದಿ ನೀನಿರುತೆ ಜಗಕೆಲ್ಲ ಕಾಲದನುಸಾರದಿ ನೀ ನಘನಾಳಿಯಿಂದ ಮಳೆಯಂ ಕೊಡುವೇ 49 ವಿಭುದಾಗ್ರಗಣ್ಯರಹ ಜ್ಞಾನಿಗಳೂ ಶುಭವನ್ನು ಲೋಕಕೆ ಸದಾಚರಿಸಿ ನಭ ಭೂಮಿ ಮಧ್ಯದಲಿ ಕೀರ್ತಿ ಸೌ- ರಭವಾಗಿ ಸ್ಥಾಪಿಸಿ ವಿಮುಕ್ತರಹರ್ 50 ಯೋಗ ಪ್ರವರ್ತನೆಯಲೇ ಸುಖಿಸಿ ರೋಗಾದ್ಯುಪದ್ರಗಳು ಇಲ್ಲದಲೇ ರಾಗಾದಿ ದೋಷಗಳ ಸುಟ್ಟಿರುವರ್ 51 ಮನವಾಕ್ಕು ಕಾಯಗಳೊಳೊಂದೆ ವಿಧಂ ಋಣಮುಖ್ಯ ಸೂತಕಗಳಿಲ್ಲದೆಲೇ ಗುಣವಂತರೆನ್ನಿಸಿಯೇ ಶೋಭಿಸುತಾ ಜನದಲ್ಲಿ ಮೌನದಲಿ ವರ್ತಿಸುವರ್ 52 ನರರೊಳ್ ದಿವೌಕಸರು ಪುಟ್ಟುತಲೀ ಹರಿಭಕ್ತಿಯುಕ್ತರೆನಿಸುತ್ತಲಿಸ- ತ್ವರದಿಂದ ಸಾಧನವ ಮಾಡುತಲೀ<
--------------
ಗುರುರಾಮವಿಠಲ
ಸೋಜೀಗ ರೊಳಗತಿ ಸೋಜೀಗ ರಾಘವೇಂದ್ರಾ ಗುರು ಪ ಸೋಜೀಗ ವಲ್ಲವೆ ರಾಜಾ ಗುರುವು ನೀನು ನೈಜ ರೂಪದಿ ಬಂದು ಮಾಜಾದೆ ಪೊರೆವುದು ಅ.ಪ ಬೆಂಬಲ ನಿನಗೆಂದು ಸ್ತಂಭದಿ ಹರಿ ಬಂದ ಇಂಬು ಪಾಲಿಸು ಗುರುವೇ ನಂಬೀದ ಜನಗಣ ಡಿಂಭದಿ ನೀ ಮೂಡಿ ಅಂಬಕ ದೊಳು ಕಂಡೇ 1 ಇಲ್ಲ ಹರಿಯು ಎಂಬ ಕ್ಷುಲ್ಲ ಸಂಶಯ ವೆಂಬ ಹಲ್ಲು ಮುರಿದು ಭಕ್ತರಲ್ಲಿ ತುಂಬುವೆ ಭಕ್ತಿ ಇಲ್ಲದಿರಲು ನೀನು ಕಳ್ಳ ಕಲಿಯು ಜಗ ವೆಲ್ಲ ತುಂಬುತ ಶೃತಿ ಸುಳ್ಳು ಎನಿಸುತಿದ್ದಾ 2 ನಿರುತ ನೀಡುತ ಹರಿಕೆ ಕರೆದು ಪೊರೆವೆ ಜನರ ಸರಿಯು ಕಾಣೆನು ನಿನಗೆ ಹರಿಯ ಕಿಂಕರ ಶರಣು ಮರುತ ದೇವನ ಮತ ಮೆರೆಸಿ ಕುಣಿಸುತ್ತಿರುವೆ ಶರಣ ಜನರ ಪೊರೆವ ಪರಮಾಪ್ತ ಸಿದ್ಧವೋ 3 ಹುಣ್ಣು ಅಳಿಸಿ ಭಕ್ತಿ ಹಣ್ಣು ತಿನ್ನಿಸಿ ಜ್ಞಾನ ಕಣ್ಣು ಪಾಲಿಪ ಗುರು ಮಣ್ಣು ಗೂಡಿಸೊ ಭವವ ಸಣ್ಣವರೆಮ್ಮ ಶಂಕು ಕರ್ಣನೆ ಸಲಹೈಯ್ಯ ಗಣ್ಯರೊಳಗೆ ಗಣ್ಯ ಪೂರ್ಣ ಪ್ರಜ್ಞರ ಪ್ರೀಯಾ 4 ಹಿಂದೆ ಹೋಯಿತು ಹೊತ್ತು ಮುಂದೆ ಕಾದಿದೆ ಮೃತ್ಯು ಇಂದು ಭಾರವ ಪೊತ್ತು ಕಂದರೆಮ್ಮನು ಕಾಯೋ ಇಂದ್ರ ತಾತನ ಹೃದಯ ಮಂದೀರದಲಿ ನಲಿವ ಇಂದಿರೇಶ ಕೃಷ್ಣವಿಠಲ ರಾಯನ ತೋರು 5
--------------
ಕೃಷ್ಣವಿಠಲದಾಸರು
ಹಲವೂ ಜನ್ಮ ತಳೆದೂ ಬಂದೇ ಹಲವೂ ದುಃಖವ ಸಹಿಸೀ ಬಂದೇ ಪ ಫಲಗಳ ತಿಂದೂ ಸೋತೂ ಬಂದೇ ಸಲಹÉೂೀ ರಂಗನೇ ದೂರ್ವಾಪುರಿಯೇ ಅ.ಪ. ಘೋರ ಕಷ್ಟವು ಮಾಯಾಭವವು ಸಾರವಿಲ್ಲವು ಸಂಸಾರದಲೀ ಧಾರುಣಿಯಲಿ ಬಾಳಲಾರೆ ನೀರಜಾಕ್ಷನೇ ದೂರ್ವಾಪುರಿಯೇ 1 ಖೂಳ ಪಾಪಿಯಹುದು ನಾನು ಬಾಲನಂತೆನ್ನ ಅಪರಾಧ ಕ್ಷಮಿಸೋ ಜಾಲದಿಂದ ಮೊದಲು ಬಿಡಿಸೋ ಬಾಲಮೂರ್ತಿಯೇ ದೂರ್ವಾಪುರಿಯೇ2 ನಿನ್ನ ಭಜನೆಯ ಮಾಡುತ್ತಿರುವೆನು ನಿನ್ನ ದಾಸನಾಗುವೆ ನಾನು ನಿನ್ನ ನಾಮ ಸ್ಮರಿಸುತ್ತಿರುವೆನು ಚನ್ನ ಕೇಶವ ದೂರ್ವಾಪುರಿಯೇ 3
--------------
ಕರ್ಕಿ ಕೇಶವದಾಸ