ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಸರಸ್ವತಿ) ಸುಂದರೆ ಸುಗುಣಮಂದಿರೆ ನಿನ್ನ ಚರಣ ಚಂದಿರೆ ನಂಬಿದ ಶರಣಗಮನ ಸಿಂಧುರೆ ಅರವಿಂದನಯನ ಗಂಭೀರೆಅದ್ಭುತ ಮಹಿಮ ಶಂಕರೆ ಸುರಸೋಮ ಸಂತವಹರೆ ಪಂಕಜಪಾಣಿಧಾರೆ ಜಪಮಣಿ ಪುಸ್ತಕವಿರೆ ವೀಣಾಯುತ ಸಾರೆ ಸಾರುತ ವದನದಿ ಬಾರೆ ಬಂದು ಕರುಣಾವ ಬೀರೆ ಬೀರುತ ಮೊಗ ತೋರೆತೋರುತ ತಂದೆವರದಗೋಪಾಲವಿಠಲನಯನಿಸೆರೆಂತರೆ 1 ಸದನ ಸರಳೆ ನಿನ್ನ ಕಾಣುವ ಶರಣಳೆ ಯಂದ್ಯನಿಸು ಮನಬಾಗಿ ಬೇಡುವೆ ಸಾಧನವಾಗುವಂತೆ ವೈರಿಗಳುಪಟಳವ ಬಿಡಿಸೆ ತಾಯಿ ನಿನ್ನ ಪಾವನ ಪದುಮ ಪಾದನುಗ್ರಹದಿಂದಜಲಧಿಯೊಳಗಿಪ್ಪ ಜೀವಿಗಳಂತೆ ತಂಪಿನೊಳಿಪ್ಪೆ ಮಂತ್ರವಾಹನನ ರಾಣಿರಂಗಾ ತಂದೆವರದಗೋಪಾಲವಿಠಲನ ಮಂತ್ರವ ಬೋಧಿಸೆ 2 ಸಾರಥಿ ಸತಿ ಶಚಿ ಶಾಮಲ ಮಿಕ್ಕಿದವರ ಪೊರೆದಂತೆ ಪೊರೆಯಬೇಕು ಪರಶುಧಾರಿ ತಂದೆವರದಗೋಪಾಲವಿಠಲನ ತೋರೇ 3 ನಖ ಶಿಖ ಪರ್ಯಂತಾನಿಲವೋ ಹೃತ್ಸರಸಿಜದೊಳಗೆ ಪೊಳದು ನರಹರಿ ರೂಪಧಾರಿ ತಂದೆವರದಗೋಪಾಲವಿಠಲನ ಪ್ರೀಯೆ 4 ಮಂಗಳಾಂಗಿ ಮಹಾ ತುಂಗ ಮಹಿಮ ತುರಂಗ ವದನ ಚತುರಂಗ ಧರನ ಸರ್ವಂತರಂಗದೊಳು ತಂತುಬಿಡದೆ ಮಹಂತನೊಡಗೂಡಿ ಶಿರಿಕಂಠನುತ ತಂದೆವರದಗೋಪಾಲವಿಠಲನ ಪಠಿಸುವಳೆ 5 ಪಾದ ಕಂಡಮ್ಯಾಲೆ ಪಾತಕವೆಲ್ಲಿಹದೆ ತಂದೆವರದಗೋಪಾಲವಿಠಲನ ದಯದಿಂದ 6
--------------
ತಂದೆವರದಗೋಪಾಲವಿಠಲರು
ದಾಸವೃಂದ ಪೋಷಿಸೆನ್ನ ಜೀಯ ಶ್ರೀ ಪ್ರಾಣೇಶದಾಸರಾಯ ಪ ಭೂಸುರ ಸೇವಿತ | ಭಾಸುರ ಮಹಿಮ ಉ ದಾಶೀನ ಮಾಡದೆ | ದೋಷಗಳೆಣಿಸದೆ ಅ.ಪ ಪದುಮಸಂಭವ ಕುಲದಿ ಜನಿಸುತ ವಿದುರಾಗ್ರಜ ಜಗದಿ | ಯದುಪತಿ ಸುಕಥೆಯ ವಿಧ ವಿಧದಿ ಬೋಧಿಸಿ ಮದಡರುದ್ಧರಿಸಿದ | ಸದಮಲ ಹೃದಯ 1 ನತಜನ ಸುರತರುವೆನಿನ್ನನು ತುತಿಸಿಲೆನಗೊಶವೆ | ಸತತದಿ ಸೇವಿಸಿ | ಯತಿ ವರದೇಂದ್ರರ ಹಿತದಲಿ ಪಡೆದ ಪ್ರತಿ ಪ್ರಭಾಕರ 2 ತರತಮ ಭೇದವನು | ಶ್ರೀವರ ಹರಿದಿನ ಮಹಿಮೆಯನು ಸರಳಕನ್ನಡದಿ ವಿರಚಿಸಿ ಕವನವ ನೊರೆದು ಸಜ್ಜನರ ಪೊರೆವ ಮಹಾತ್ಮಾ 3 ವಾತಜಾತ ಸುಮತ ಸಾಗರ ಪೋತನೊಳೀತರ | ಯಾತಕೆ ನಿರ್ದಯ ನೀತವಕದಿ ಸಂಪ್ರೀತಿಯಿಂದೊಲಿದು 4 ಧಾಮರ ಸುವಿಧೇನು ಶಾಮಸುಂದರೆನ | ನಾಮನೆನೆವ ಸುಖ ಯಾಮ ಯಾಮಕೀಪಾಮರಗೀಯುತ 5
--------------
ಶಾಮಸುಂದರ ವಿಠಲ
ರಂಗನ ಮೇಲೆ ಚಲುವೆಯರು ಬುಕ್ಕಿಟ್ಟು ಪ. ಸುಂದರೆಯರು ಇಂದಿರೇಶಗೆ ಎರಗಿ ಬಂದು ಪ್ರಾರ್ಥನೆಮಾಡಿ ಆನಂದವ ಸೂಸುತ 1 ಒಪ್ಪ ಹೇಳಿ ಪ್ರಾರ್ಥನೆಮಾಡಿ ಬಹಳ ಉತ್ಸುಕದಿಂದ 2 ಹಸ್ತಗಳ ಮುಗಿದು ಮಾತುಗಳನ್ನಾಡಿದರು3 ಹರದಿ ರುಕ್ಮಿಣಿ ಭಾವೆಗೆ ಎರಗಿ ದ್ರೌಪತಿ ಭದ್ರಾ ಆದರದಿ ಮಾಡಿದರು ಪ್ರಾರ್ಥನೆ ಕರಗಳ ಮುಗಿದು 4 ಚಲುವ ರಾಮೇಶನ ವಲ್ಲಭೆಯರಿಗೆ ಭದ್ರಾಅಲ್ಲೆ ಪ್ರಾರ್ಥನೆ ಮಾಡಿ ಎಲ್ಲರ ಕರೆಯಲು 5
--------------
ಗಲಗಲಿಅವ್ವನವರು
ರಂಗಯ್ಯ ರಂಗ ಬಾರೋ ಬರುತೀಯ ನಮ್ಮನಿಗೆ ಬಾರೋ ಪ ಬಂದರೆ ಬುಗುರೀ ಚಂಡುಗಳನೆ ಕೊಟ್ಟು ಬಗೆ ಬಗೆ ಆಟವÀ ಕಲಿಸಿ ವಲಿಸುವೇ1 ಬಂದರೆ ರಸಾ ರಸಾಯನಗಳನುಣಿಸೀ ಮುಸುಕಿನೊಳಗೆ ಬಚ್ಚಿಟ್ಟುಕೊಂಬೆನು ಬಾರೊ 2 ಬಂದರೆ ಶ್ರೀದವಿಠ್ಠಲ ನಿನಗೇ ಸುಂದರೆ ಸವಿಮಾತಾ ಹೇಳುªರೊಂದು 3
--------------
ಶ್ರೀದವಿಠಲರು
ಶರೀರ ಜರಿಯಬೇಡಾ | ಬೆರಿಯಬೇಡಾ | ಸ್ಥಿರವಿದ್ದ ಕೈಯಲಿ ಗುರು ಶರಣವ ಹೊಕ್ಕು | ತಾರಿಸೋ ಭವದಿಂದ ನೀ ಮರಳು ಜೀವವೇ ಪ ಲೋಕದೊಳು ವಾರಿಜೋದ್ಭವ ನಿನ್ನ ಜನ್ಮ ಕೊಟ್ಟು | ನೂಕಲಾಗ ತಾಯಿ ಗರ್ಭದೊಳಾವರಿಸಿ ತಾನು ಧರಿಸಿ | ರೇಖೆ ರೂಪ ಲಾವಣ್ಯ ಅವಯವಂಗಳಿಂದ | ಸಾಕಾರವಾಗಿ ಸುಂದರೆನಿಸಿ ವರನೆನಿಸಿ | ಬೇಕಾದ ವಿದ್ಯವನು ಸರ್ವ ಸಂಪಾದಿಸಲು | ತಾ ಕಾರ್ಯವಾಗಿ ಅಭ್ಯಾಸದಿಂದಾ ಧ್ಯಾಸದಿಂದಾ | ವಾಕ್ಪಟುದಲಿ ಸಮರ್ಥನೆಂಬನಾಮ ಪಡೆದು | ಪ್ರಖ್ಯಾತವಾದೆ ಈ ಕಾಯದಿಂದ 1 ಸ್ನಾನವನು ಮಾಡಿ ತ್ರಿಕಾಲ ಸಂಧ್ಯಾನ ವಿಧಿಯನು | ಮೌನ ಜಪಗಳವನು ತಪಗಳನು | ಸ್ವಾನುಭಾವ ಸೂರ್ಯಾಡಲಾಗಿ ನೇಮವನುಷ್ಠಾನ ಮೊದಲಾದ | ಧ್ಯಾನ ಧಾರಣವನು ಕಾರವನು | ಜ್ಞಾನ ಭಕ್ತಿ ವೈರಾಗ್ಯ ಶಮದಮ ಕರುಣನು ದಿನಮಾಳ್ಪಾ | ಕರ್ಮ ನೈಮಿತ್ಯವಾದಾ ನಿತ್ಯವಾದಾ | ತಾನು ತನ್ನ ಉದ್ಧರಿಸಿಕೊಳಲಿಕ್ಕೆ ಭಾವದಿಂದಾ | ಮಾನುಭಾವg ದಯ ಪಡೆವುದರಿಂದಾ 2 ತಾನು ಕುಣಿಯಲಾರದೆ ಅಂಕಣವು ಡೊಂಕು ಎಂದು | ಹೀನೋಯಿಸಿ ನುಡಿವ ನಟ ವೇಷಿಯಂತೆ | ನೀನು ನೀಟ ನಡಿಯದ್ಹೋಗಿ ದೇಹ ಕಶ್ಮಲವೆಂದು | ಜ್ಞಾನ ರಹಿತನಾಗಿ ಹಳಿವುದು ಉಚಿತ ಇದು ಪ್ರಾಚೀತ | ಈ ನಾಲ್ಕೆರಡು ವೈರಿಗಳ ದಂಡಿಸದೇ ಬರಿದೇ | ಹೀನ ವೈರಾಗ್ಯವಾ ಶಣಸಬೇಡಾ ದಣಿಸಬೇಡಾ | ಕಾನನದ ಹುತ್ತಮ್ಯಾಲ ಬಡಿದರೇನು ವರಗಿರುವಾ | ಆ ನಾಗದರ್ಪಗುಂದದು ಕಂಡಾ 3 ಪರಿಪರಿ ಮುಮ್ಮುಳಿ ವಳಗಾಗಿ ಜೀವಿಸುವ | ತೆರನಂತೋಯಂದು ಚಿಂತಿಸಬಹುದು ಸುರಿಸಬಹುದು | ನೂರು ಭಂಡಿಗಳ ತÀುಂಬಿ ಬಂದರೇನು ತಾ | ಧರೆಯೊಳು ಸೂಲ ತಾ ಹಾವುದೊಂದೇ ನೋವುದೊಂದೇ | ಬರೆದ ಬರಹವೇ ಪಣಿಯಾಲಿದ್ದಪರಿ ತಪ್ಪದೈ | ವರ ಕೂಡಿ ಕೊಟ್ಟಡವಿ ಮಾಡುವದೇನು ನೋಡುದೇನು | ಪರಿ | ಪಡಿ ನೀನು 4 ಸಾಕ್ಷರಾವೆಂಬ ಮೂರಕ್ಷರವ ಬರೆದು ತಾ | ರಾಕ್ಷಸಾವೆಂಬುದೇ ಅರ್ಥವಹುದು ಅನರ್ಥ ವಹುದು | ಪರಿ ವಳಿತು ಹೊಲ್ಲೆ | ಪಕ್ಷದ್ವಯಕ ಬಾಹುದು ಮಾಡಿದಾಂಗ ಕೂಡಿದಾಂಗ | ರಕ್ಷಿಸೆಂದು ಮಹಿಪತಿಸುತ ಜೀವನಾದಿ ವಿಶ್ವಾ | ಭವ ಹಿಂಗು ಬ್ಯಾಗ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಕೃಷ್ಣವೇಣಿ ಕಲ್ಯಾಣೀ ಪಂಕಜಾಸನ ಸ್ವೀಕೃತ ಬುಧ ಶ್ರೇಣೀ ನೀ ಕೃಪೆÉಯಿಂದ ಮಹಾಕೃತು ಹರಿಯ ನಿ ಜಾಕೃತಿ ತೋರ್ದೂರಿಕೃತ ದುರಿತೇ ಪ ಸುಜನ ಮಾತೆ ಶಮಲ ಸಂಕೂಲ ನರ್ಧೂತೆ ಸುಮನಸ ಜನ ಸನ್ನುತೆ ಸನ್ಮೋದ ದಾತೆ ವಿಮಲ ಸದ್ಗುಣ ಸಂಭೃತೆ ನಮಿಸುವೆ ತ್ವತ್ಪದÀ ಕಮಲಯುಗಳಿಗನು ಪಮ ಸುಂದರೆ ಭ್ರಮೆಗೊಳಿಸುವ ದುರ್ಮಮ ಕಳೆದು |ಸೋ ತ್ತಮರ ಪದಾಬ್ಜಕೆ ಭ್ರಮರನೆನಿಸಿ ಮಾರಮಣನ ದುಹಿತ್ರೆ 1 ಮದಗಜಯಾನೆ ಪಿಕಗಾನೆ ಉಭಯಾನೆ ಮಾನಿನಿ ಮದನಾರಿ ಜಟಜಸೊನೆ ಪಾಪೌಘದಹನೆ ಮುದವ ಕೊಡು ಎಮಗೆ ನಿ ೀನೆ ಮದಡನರನು ಒಂದು ದಿನ ಮಜ್ಜನವ ವಿಧಿಸೆ ಶರೀರದಿ ಹುದುಗಿದ ಪಾಪಗಳುದುರಿಸಿ ಕಾಲನ ಸದನವ ಹೋಗಗೊಡದುದಧಿ ಮಥನ ಪದ ಪದುಮವ ತೋರ್ಪೆ 2 ನೀಲ ಪುನತ ಹೃತ್ಕುಮುದಾ ಭೇಶೇ ಅನುದಿನ ಪೂರೈಸೇ ಜನನಿಯೆನ್ನ ದುರ್ಗುಣವೆಣಿಸದೆ | ಮಾ ತನು ಲಾಲಿಸು ಸುಹೃದ್ವನರುಹದಲಿ ಶ್ರೀ ವನತೆಯರಸ ಜಗನ್ನಾಥ ವಿಠಲನ ಅನವರತ ನಿಲಿಸು ಘನ ಮಾಂಗಲ್ಯೇ 3
--------------
ಜಗನ್ನಾಥದಾಸರು
ಶ್ರೀ ವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ ಕಾವದು ಯೆನ್ನ ನೀ ವದಿಗಿ ಮುನ್ನೆ ಈವದು ವರ ಆವದುವಲ್ಲೆ ರಾಜೀವ ಚರಣದ ಸೇವೆಯ ಪಾಲಿಸು ಕೋವಿದರೊಡನೆ ಪ ಸಮಸ್ತಲೋಕ ವಂದಿತೆ ಸಂತತ ಮತ್ತೆ ತಾಮಸ ಜ್ಞಾನ ಹರತೆ ಸಾಮಗಾಯನ ಪ್ರೀತೆ ಸಕಲವಿದ್ಯಾತೀತೆ ರೋಮ ರೋಮ ಗುಣ ಭರಿತೆ ರಾಮನ್ನ ಪದ ನಾಮವನ್ನು ನಾ ಮರೆಯದಂತೆ ನೀ ಮನಸು ಕೊಡು ಹೇಮಾಂಬರೆ ಕಾಂಚಿದಾಮೆ ಅಮಮ ನಿ- ವನಧಿ ಸೋಮೆ ಕಾಮ ಜನನಿ ತ್ರಿಧಾಮೆ ಪುಣ್ಯನಾಮೆ ಕೋಮಲಾಂಗಿ ಸತ್ಯಭಾಮೆ ರಮೆ ಪೂರ್ಣ ಕಾಮೆ ಸುರಸಾರ್ವಭೌಮೆ 1 ಚಂದನ ಗಂಧಲೇಪಿನೀ ಚತುರವಾಣೀ ಮಂದಹಾಸಗಮನೀ ಗಂಧಕಸ್ತೂರಿ ಜಾಣಿ ಗಂಭೀರ ಗುಣಶ್ರೇಣಿ ಸಿಂಧುತನಯೇ ಕಲ್ಯಾಣಿ ಇಂದಿರೆ ಪದ್ಮಮಂದಿರೆ ಕಂಬು ಕಂಧರೆ ಸರ್ವಸುಂದರೆ ಮಾಯೆ ಬಂದೆನು ಕರುಣದಲಿಂದ ನೋಡು ಶತ - ಕಂಧರÀರಿಪು ಸುಖಸಾಂದ್ರ ನಿರಾಮಯೆ ಹಿಂದಣ ಕಲ್ಮಷ ವೃಂದಗಳೋಡಿಸಿ ನಿಂದೆ ನಮೋನಮೋ ಯೆಂದೆ 2 ನಿತ್ಯ ಸಲ್ಲಾಪೆ ಅನ್ನಂತಾನಂತ ರೂಪೆ ಕನ್ಯಾಮಣಿಯೆನಿಪೆ ನಿನ್ನ ಕಡೆಗಣ್ಣಿನ ನೋಟ- ವನ್ನು ಹರಹಿ ಹಿರಣ್ಯಗರ್ಭಾದಿ- ಅನುದಿನ ಧನ್ಯನ ಮಾಳ್ಪಳೆ ಅನ್ಯರಿಗೆ ಕಾರ್ಪಣ್ಯ ಬಡದಂತೆ ಚನ್ನ ವಿಜಯವಿಠ್ಠಲನ್ನ ಪೂಜಿಪ ಗುರು ರನ್ನೆ ಪುರಂದರರನ್ನ ಪೊಂದಿಸು ಸಂ-ಪನ್ನೆ ಯೆನ್ನ ಪ್ರಾಸನ್ನೆ 3
--------------
ವಿಜಯದಾಸ
ಎಂದಿಗೆಂದಿಗೆ ತೀರದು ನಮ್ಮಪ್ಪನ ಮಹಿಮಿನ್ನೆಂದಿಗೆಂದಿಗೂ ತೀರದು ಪ.ಎಂದೆಂದಂದದಿ ಸಂಧಿಸಿ ಪೊಂದಿದಾಇಂದಿರೆಸುಂದರೆ ಬಂದಾನೆಂದೆಂತೆಂದಳುವೃಂದಾರಕಾರವಿಂದಜಾಹೀಂದ್ರರು ನಿಂದರೂತಂದೆ ಮುಕುಂದ ಆನಂದನಂದನ ಮಹಿಮೆ 1ನಿಗಮಗಳು ಗುರುತ ಪೊಗಳಲು ಮಿಗೆ ತಪಸಿಗಳೆಣಿಕೆಗೆ ಮೈಯಗೊಡದೆ ನಗುವನಖಗಧ್ವಜ ಮೃಗಮುಖ ತ್ರಿಗೇಹ್ಯ ಪನ್ನಗಶಾಯಿಅಘದೂರ ಸುಗುಣಗಣನ ಮಹಿಮೆ 2ಉನ್ನತಕುನ್ನತ ಇನ್ನಣುಗಿನ್ನಣುಘನ್ನಕೆ ಘನ್ನ ಜಗನ್ನುತ ಸನ್ನಿದತನ್ನವನೆನ್ನಲು ಮನ್ನಿಪ ಚಿನ್ಮಯಚೆನ್ನ ಪ್ರಸನ್ವೆಂಕಟನಾಥನ ಮಹಿಮೆ 3
--------------
ಪ್ರಸನ್ನವೆಂಕಟದಾಸರು