ಒಟ್ಟು 135 ಕಡೆಗಳಲ್ಲಿ , 31 ದಾಸರು , 128 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(2) ಉಡುಪಿ ಕೃಷ್ಣ ಕಂಡೇ ಕಡೆಗೋಲ ಪಿಡಿದನ ಉಡುರಾಜ ವದನನ ಮಂಡೆಯೊಳ್ ಮಯೂರ ಪಿಂಛವನಿಟ್ಟನ ಪ ಪಡುಗಡಲೆಡೆ ಉಡುಪಿಯೊಳಗಿಹ ಕಡಲಣುಗಿಯ ಒಡೆಯಕೃಷ್ಣನ ಕಂಡೇ ಅ.ಪ ಶ್ರಾವಣ ಕೃಷ್ಣ ಪ್ರಪಂಚಗುರುವ ಸುಮಶರಪಿತ ಸುಮನೋಹರ ಶ್ಯಾಮಸುಂದರನ ಸ್ವಪ್ನದಿ 1 ಸತ್ಯವಂತರ್ಗಾಂ ಸತ್ಯಂ ಮುಕ್ತಿನಾಥಂ ಉತ್ತಮತರಚಿತ್ತರಾದ ಭಕ್ತರ ಕಾಯವೆನೆಂದನ 2 ಸುಳ್ಳು ಸುಳ್ಳೆಂದು ಪೇಳುವ ಪೊಳ್ಳನ ಪಾಪಿಯ ತಳ್ಳುವೆ ಸುಖವಿಲ್ಲದಿರುವ ಖುಲ್ಲರ ಜತೆಯೊಳಗೆಂದನ3 ಹರಿಶ್ಚಂದ್ರ ನಳರೊಲು ಕೀರ್ತಿಯನು ಪರ್ಬಿಸಿ ಶರಣರ ಸುಖಸರಣಿಯಲ್ಲಿ ಕರುಣದಿಂದ ಕಾವೆನೆಂದನಾ4 ಕನಸುಮನಸಿನಲ್ಲಿಯೂ ಅನವರತ ತನ್ನಯ ಘನಪದಯುಗವನಜ ತೋರಿ ಅನುವನೀವ ಜಾಜೀಶನ 5
--------------
ಶಾಮಶರ್ಮರು
(ಅ) ಜಯಜಯತು ಶ್ರೀರಾಮ ಜಯಜಯತು ಘನಶ್ಯಾಮ ಜಯಜಯತು ಮುನಿಪ್ರೇಮ - ರಿಪು ಭೀಮ ಜಯಜಯತು ಸುರಸ್ತೋಮ - ವಿನಮಿತ ಮಂಗಳ ನಾಮ ಜಯತು ಸದ್ಗುಣಧಾಮ - ರಘುರಾಮ 1 ಆನಂದ ಜ್ಞಾನದನೆ - ಆನಂದ ಮಾಸದನೆ ಆನಂದ ಸಿದ್ಧಿದನೆ - ಅನಘನೇ ಆನಂದ ಮಂದಿರನೆ - ಆನಂದ ಚಂದಿರನೆ ಆನಂದ ಸುಂದರನೆ - ಅಘಹಾನೇ 2 ಸುರಾರಿದರ್ಪಹರ - ಪುರಾರಿ ಮಿತ್ರವರ ದರಾರಿ ಅಭಯಕರ-ಸುಕುಮಾರ ಕಾರುಣ್ಯಪಾಂಗವರ-ಲಾವಣ್ಯರೂಪಧರ ವರೇಣ್ಯನಿಕರ - ಸಿರಿಕಾಂತ 3
--------------
ಲಕ್ಷ್ಮೀನಾರಯಣರಾಯರು
ಅ ಕೇಳ್ ಕೇಳೆಲೊ ತತ್ವಜ್ಞಾನ ನಿನಗೆ ಬೋಧಿಸುವೆ ನಾ ಪ ವಾಹನ ನಾಟಕ ದರುಶನ ಹೋಟಲೊಳಗೆ ಸುಭೋಜನ ಇದೇ ಪೀಯೂಷಪಾನ 1 ವೇಶ್ಯಾಲಯ ಪ್ರವೇಶಿಸುವದೆ ಘುನ ಭಂಜನ 2 ಹರಿದಿನ ಮರುದಿನ ಇರುಳು ಹಗಲು ಉಂಬನ ನರನ ಜನ್ಮವೆ ಬಲು ಪಾವನ ಮಹಾಪಾಪನಾಶನ 3 ಸೋಪುಲೇಪನ ಕ್ರಾಫು ಬಿಡೋಣ ನಾಪಿತ ಕಾರ್ಯ ಕೈಗೊಳ್ಳೋಣ | ಇದೆ ವೇದಾಧ್ಯಯನ 4 ಸೋಡಾ ಪಾನ ಬೀಡಿ ಸೇದೋಣ ಭಂಜನ 5 ಕುಲದಭಿಮಾನ ಕಳೆದನುದಿನ ನಳದೊಳಗಿನ ಜಲಸ್ನಾನ ಮಹಕಲುಷ ನಾಶನ 6 ಈ ಕಲಿ ಬೋಧೆ ನಿರಾಕರಿಸುವವರಿಗೆ ಶ್ರೀಕರಶ್ಯಾಮಸುಂದರನ ದಿವ್ಯಾನಂದ ಭವನ 7
--------------
ಶಾಮಸುಂದರ ವಿಠಲ
ಅ ಸಾಗಿ ಬಾರೋ ಗುರುರಾಘವೇಂದ್ರರಾಯ | ವರ ಸತ್ಕಲುಗೇಯ ಪ ಕೂಗುತ ಕರೆಯುವ ಭಾಗವತರ ಮೊರೆಯ ಲಾಲಿಸೋ ಮುನಿವರ್ಯ ಅ.ಪ ಪಾವನಘನ ವೃಂದಾವನ ಮಂದಿರನೆ ಸದ್ಗುಣ ಬಂಧುರನೇ ಪಾವಮಾನಿಮತಶರಧಿ ಚಂದಿರನೇ ಧರಸಮ ಕಂದರನೇ ಛಾವಣಿಪುರ ಸುಜನಾವಳಿ ಕೋರಿಕೆಯ ಗರೆಯಲು ಶುಭಕಾಯ 1 ಶರಣಜನರು ಮೈಮರೆದು ಕರೆಯಲಾಗಿ ನಿಲ್ಲದೆ ವರಯೋಗಿ | ಭರದಿ ಬಂದು ಕರಪಿಡಿಯುವ ಧೊರೆ ನೀನು ಎಂದರೀತೆವು ಸುರಧೇನು ಗತಿದಾಯಕ ನೀನೆಂದು ಭಜಿಪೆವು ದಯಾಸಿಂಧು 2 ಶಾಮಸುಂದರನ ಪ್ರೇಮವ ಪಡೆದಾತ ಜಗದೊಳು ಪ್ರಖ್ಯಾತ ನೇಮದಿ ಭಜಿಪರ ಕಾಮಿತ ಕೊಡುವಾತ ದೈಶಿಕ ಕುಲನಾಥ ಹೇಮಶಯ್ಯ ಸುಕುಮಾರ ಮಮತೆಯಿಂದ ಮಂತ್ರಾಲಯದಿಂದ 3
--------------
ಶಾಮಸುಂದರ ವಿಠಲ
ಶ್ರೀಲಕ್ಷ್ಮೀದೇವಿ ಶರಧಿ ಸಂಭೂತೆ ಕಾಯೆ | ಶಿರಬಾಗಿ ಬೇಡುವೆ ತಾಯೆ | ಸುರಮುನಿಜನ ಸೇವಿತೆ | ಕರಪಿಡಿ ಸುಖದಾತೆ ಪ ಸೀತೆ ಜಾನಕಿಯೆ | ಶೀತಾಂಶು ಬಿಂಬಾನಯೆ | ಮಾತೆ ನೀ ಬಂದು ಪಾಲಿಸೆ | ಎನ್ನವಗುಣ ಬಿಡಿಸೆ 1 ಮಂದಜಾಸನ ಜನನಿ | ಕುಂದಕುಮ್ಮಲರ ದನಿ ವಂದಿಪೆ ವÀಜಮಂದಿರೆ | ಗೋವಿಂದನ ತೋರೆ2 ಶಾಮಸುಂದರನ ರಾಣಿ | ಭೂಮಿನಭ ಸಂಚರಿಸಿ | ಭಾಮೆ ನಂಬಿದೆ ಅಂಭ್ರಣಿ | ಘನ ಮಂಜಳವಾಣಿ 3
--------------
ಶಾಮಸುಂದರ ವಿಠಲ
(1) ಸತಿ-ಪತಿ ಭಾವದ ಸ್ತುತಿಗಳು (ಜಾವಡಿಗಳು) ಎಂದಿಗೆ ತೀರಿದೆ ಸುಂದರನಾಯಕಿ ಅಂಗಜ ಬಾಣದ ಅತುರವನ್ನೂ ಪ ಚಂದ್ರಮುಖಿಯೇ ನೀ ನಾದಿನ ಹೇಳಲ್ ಬಂದೆನುನಾನಹುದೇ ಭಾವಕರನ್ನೇ ಕುಂದುಗಳನೀಪರಿ ಉಸುರುವೆ ಉಚಿತವೆ ಸಂದಣಿಯಾಗೆನ್ನೊಳಿಂದಿನ ಕಾಲಯೆಂದಿಗೆ 1 ಬಲ್ಲೆನು ನಿನ್ನಂ ಭಾವದ ಸೊಲ್ಲಂ ಬೆಲ್ಲದ ಮಾತನಾಡಿ ಕಳುಹಿಪೆನೇಂ ಬೊಲ್ಲಿದಿಗೆ ಸಾಕುಬಿಡು ಇಂಪಿನ ಕವಚತೊಡು ಸಲ್ಲಿದೆ ಸುಂಕವ ಸಮ್ಮತಿಯಿಂದಾ 2 ಮಾರನು ಬಂದೂ ಮನದೊಳು ನಿಂದೂ ದಾರಿಯನು ತಪ್ಪಿಸಿ ಧಣಿಸುವ ಕಾಣೆ ಓರದೆ ಕೋರಿದ ಕಾರ್ಯವ ತೀರಿಸೆ ಕಾಂಕಳು ನೀನಾಗಿ ಕಾಮಶಾಸ್ತ್ರವಂ 3 ಈ ಸುಖಸಂಪದ ಈಶ್ವರ ಬಲ್ಲಂ ಆಸೆಯ ತೋರಿ ನೀ ಮೋಸವಗೆಯ್ವೆ ದಾಸನು ವಂದಿಪ ಸುಖತೋರಿದೆ ದೇಶಿಕನಲೆ ತುಲಸಿರಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
(ಅಃ) ಕಾಮದೇವ ಕರುಣದಿಂದಲಿ ಒಲಿದು ಕಂಡನಾತುರದಲಿ ಪ ಇಂದ್ರಸಮಾನ ದೇವತೆಯೆ ರತಿಪತಿಯೇ | ಮಾರ || ಬಂದು ಕಲ್ಪದಲಿ ಸುಂದರನೆನಿಸಿಕೊಂಡಿರ್ದ | ಬಂಧುವೇ ಅಹಂಕಾರ ಪ್ರಾಣನಿಂದಧಿಕನೆ 1 ವನಜ ಸಂಭವನು ಸೃಷ್ಟಿ ಸೃಜಿಪಗೋಸುಗ | ಮನದಲ್ಲಿ ಪುಟ್ಟಿಸೆ ಚತುರ ಜನರ || ಮುನಿಗಳೊಳಗೆ ನೀ ಸನತ್ಕುಮಾರನಾಗಿ ಜನಿಸಿ | ಯೋಗ ಮಾರ್ಗದಲ್ಲಿ ಚಲಿಸಿದ ಕಾಮಾ 2 ತಾರಕಾಸುರನೆಂಬ ಬಹು ದುರುಳತನದಲ್ಲಿ | ಗಾರುಮಾಡುತಲಿರಲು ಸುರಗಣವನು || ಗೌರಿಮಹೇಶ್ವರರಿಗೆ ಪುತ್ರನಾಗಿ ಪುಟ್ಟಿ | ಧಾರುಣಿಯೊಳಗೆ ಸ್ಕಂದನೆನಿಸಿದೆ 3 ಮತ್ಸ್ಯ ಉದರದಲಿ | ಪೊಕ್ಕು ಶಿಶುವಾಗಿ ಸತಿಯಿಂದ ಬೆಳೆದು || ರಕ್ಕಸ ಶಂಬರನೊಡನೆ ಕಾದಿ ಗೆದ್ದು ಮರಳಿ | ಚಕ್ಕನೆ ಸಾಂಬನೆನಿಸಿದೆ ಜಾಂಬವತಿಯಲ್ಲ 4 ಜನಪ ದಶರಥನಲ್ಲಿ ಭರತನಾಗಿ ಪುಟ್ಟಿದೆ | ಮನೋ ವೈರಾಗ್ಯ ಚಕ್ರಾಭಿಮಾನಿ || ಎನಗೊಲಿದ ವಿಜಯವಿಠ್ಠಲರೇಯನಂಘ್ರಿ | ಅರ್ಚನೆ ಮಾಡುವ ಸುಬ್ರಮಣ್ಯ ಬಲು ಧನ್ಯ 5
--------------
ವಿಜಯದಾಸ
(ಅಕ್ರೂರನ ಒಸಗೆ) ರಥವೋಗದಾ ಮುನ್ನ ಗೋಕುಲಕೆ ಮನ್ಮನೋ- ರಥ ಹೋಗಿರುವುದೇನೆಂಬೇ ಪ ಅತಿ ಕೌತುಕವದಾಯ್ತು ಖಳರಾಯನೊಲಿದು ಯದು- ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ ಅ.ಪ. ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ- ಪತಿ ಸೇವೆ ತಾನಾಗಿ ದೊರೆತೂ ಶತಸಹಸ್ರಾನಂತ ಜನುಮಗಳ ಸು- ಕೃತಕೆ ಫಲವಾಯಿತೆಂದರಿತೂ ಗತ ಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿ ಪಥದೊಳಗೆ ತಾವೆ ಮುಂದುವರಿದೂ ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆ ಪ್ರತಿ ಇಲ್ಲವೀ ಶುಭೋದಯಕೆ ಸೂರ್ಯೋದಯಕೆ 1 ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು- ನಾಪುಳಿನದಲಿ ಮೆರೆವ ಚರಣಾ ಗೋಪೀಯರ ಪೀನ ಕುಚಕುಂಕುಮಾಂಕಿತ ಚರಣಾ ತಾಪತ್ರಯಾವಳಿವ ಚರಣಾ ಗೋಪುರದ ಶಿಲತೃಣಾಂಕುರುಹ ತೋರುವ ಚರಣಾ ಆಪದ್ಬಾಂಧವನ ಚರಣಾ ಣಾ ಪೂರ್ಣಾ ಎನಗಭಯಕೊಡುವಾ ಪಿಡಿಲಾ 2 ನೋಡುವೆನು ನೀರದಶ್ಯಾಮಸುಂದರನ ಕೊಂ- ಡಾಡುವೆನು ಕವಿಗೇಯನೆಂದೂ ಮಾಡುವೆನು ಸಾಷ್ಟಾಂಗದಂಡ ಪ್ರಣಾಮ ಕೊಂ- ಡಾಡುವೆನು ಕೈ ಮುಗಿದು ನಿಂದೂ ಬೇಡುವೆನು ಭುವನೈಕದಾತನೆಂದಲ್ಲಿ ಕೊಂ ಡಾಡುವೆನು ದಾಸ್ಯ ಬೇಕೆಂದೂ ಈಡಿಲ್ಲದಿಂದಿನಾ ಮನಕೆನ್ನ ಬಯಕೆ ಕೈ- ಗೂಡುವುದು ನಿಸ್ಸಂದೇಹ ದೈವ ಸಹಾಯ 3 ಇರುವನೋ ಏಕಾಂತದೊಳಗಿರುವ ಕೇಳದಿರು ಬರುವನೋ ಬಂದವನ ಕಂಡೂ ಕರೆವನೋ ಕಿರಿಯಯ್ಯ ಬಾರೆಂದು ಬಿಗಿದಪ್ಪಿ ಬೆರೆವನೋ ಬೆರಸಿಯದನುಂಡೂ ಒರೆವನೋ ಒಡಲ ಧರ್ಮವನೆಲ್ಲ ವರಗಿನೇ ಜರಿಯನೋ ಜಗದೀಶ ಹಗೆಯವನೆನುತ ಬಗೆಯ 4 ಗೋಧೂಳಿಲಗ್ನಕೆ ಗೋಕುಲಕೆ ಬಂದು ಬೆರ- ಗಾಗಿ ಹೆಜ್ಜೆಗಳ ನೋಡಿ ಭೂದೇವಿಗಾಭರಣವೆನುತ ತೇರಿಳಿದು ಶ್ರೀ ಪಾದರಜದೊಳಗೆ ಪೊರಳಾಡೀ ಗೋದೋಹನದೊಳಿದ್ದ ರಾಮಕೃಷ್ಣರ ಕಂಡು ನಾ ಧನ್ಯ ಧನ್ಯನೆಂದಾಡೀ ಶ್ರೀದವಿಠಲ ಎರಗುವನಿತರೊಳು ಬಿಗಿದಪ್ಪಿ ಸಾದರಿಸಿದನು ಇದೆ ಸದನದಲಿ ಸ್ವಪ್ನದಲಿ 5
--------------
ಶ್ರೀದವಿಠಲರು
(ಊ) ಲೋಕನೀತಿ ತತ್ವ ಕೃತಿಗಳು ಅನುಭವವಿಲ್ಲದೇ ಅರಸಿದಡಾಹುದೇ ಆ ಹರಿದರುಶನವೂ ಪ ಮನುಮುನಿಯಾಗಲೀ ಮಾನ್ನವರಾಗಲೀ ಸನಮುಖರಾಗಲೀ ಸಾಧುಗಳಾಗಲೀ 1 ಅರಸು ತಾನಾಗಲೀ ಆಣಯತನಾಗಲಿ ಸುರಮಣಿ ಸೋಲಿಪ ಸುಂದರನಾಗಲಿ 2 ಪಂಡಿತನಾಗಲೀ ಪಾಮರನಾಗಲೀ ಅಂಡಜಗಮನನಾಗಲೀ ಶ್ರೀಗುರುವೆ ತುಲಶೀರಾಮಾ 3
--------------
ಚನ್ನಪಟ್ಟಣದ ಅಹೋಬಲದಾಸರು
ಅಕ್ಕ ಕೊಳಲನೂದುವ ಸುಂದರನ್ಯಾರೇ ಅಕ್ಕ ಪ ಸುಂದರನ್ಯಾರೇ ನೋಡೋಣ ಬಾರೆ ಅ.ಪ. ಅಮ್ಮಮ್ಮಾ ಮಾರನಸ್ತ್ರವ ತಾಳಲಾರೆವೆ ಅಕ್ಕಬೊಮ್ಮನ ಪಿತನಂತಃಕರಣಿರಲೇ ಅಕ್ಕ 1 ಪತಿಯು ನಮ್ಮನು ಬಿಟ್ಟರೆ ಬಿಡಲೇ ಅಕ್ಕರತಿಪತಿ ಪಿತನ ದಯವು ಇರಲೇ ಅಕ್ಕ 2 ಮನೆ ಧನವೆತ್ತ ಪೋದರೆ ಪೋಗಲೇ ಅಕ್ಕಮನಸಿಜ ಪಿತನ ದಯವು ಇರಲೇ ಅಕ್ಕ 3 ಕಂದರ ಎತ್ತಲಾರೆವು ನಾವು ಕೇಳೇ ಅಕ್ಕಕಂದರ್ಪ ಸುತನ ಕರೆದು ತಾರೇ ಅಕ್ಕ 4 ನೀರೆ ಪೋಗೋಣು ನಡಿ ಆ ವನಕೆ ಅಕ್ಕಮಾರಸುಂದರನ ನೋಡುವುದಕ್ಕೆಇಂದಿರೇಶನ್ನ ಕರೆತರುವುದಕ್ಕೆ 5
--------------
ಇಂದಿರೇಶರು
ಅಸದೃಶಮಹಿಮೆಯನು ಪ ಬಿಸಜಸಖ ಕಿರಣ ತರಂಗ ವಸುಧೀತಳದೊಳು ಇವರ ಸುಶಿತ ಸತ್ಕೀರ್ತಿಯ ಪಸರಿಸಿರುವುದು ಘನ್ನ ಅ.ಪ ಭಕುತಿಪೂರ್ವಕವಾಗಿ ಸತಲಕ್ಷೇತ್ರವ ಸಂಚರಿಸಿ | ನಿಖಿಲ ಭೂದೇವಗಣಕೆ | ವಿಖಿನಾರ್ಚಿನ ಮೂಲ ಲಕುಮೀಶ ದರುಶನದಿ | ಸುಖವಿತ್ತು ಪಾಲಿಸಿದ ಅಕಳಂಕಮಹಿಮ 1 ಭಯ ಭಕುತಿಯಲಿವರ ಸೇವಿಸುವ ನರರಿಗೆ ಆವಾವ ಭಯವಿಲ್ಲವೋ | ಗೋವತ್ಸನ್ಯಾಯದಲಿ ತಾವು ಬೆಂಬಲರಾಗಿ | ಭೂವರಜನದಿ ವಾಸರಿವರಿಗೆ ಜಯವ 2 ಈ ಯತಿಯೊಲುಮೆಯೇ ರಾಯರೋಲಿಮೆಯೋ ಕೇಳೋ ರಾಯರೊಲಿಯಲು ಗುರುವಾಯು ವಲಿವಾ | ವಾಯು ವಲಿದಾ ಮಾತ್ರದಿ | ಕಾಯಜ ಜನಕ ಯಮರಾಯನಂಬಿಸಿ ಬಿಡಿಸಿ ಕಾಯುವನು 3 ಸು ವಿನಲು ಸುಜ್ಞಾನ | ಶೀ ಎನಲು ಶೀಲತ್ವ | ಕಾಯ ಶುದ್ಧಿಯಲಿ ಇಂದ್ರಾ ಎಂದುಚ್ಚರಿಸಲಾ ಇಂದ್ರಲೋಕ ಸುಖವೊ ನಿಜವೋ 4 ವೃಂದಾರ ಕಾಂಶಜರು | ಸಂದೇಹ ವಿಲ್ಲಿವರ ವೃಂದಾ ಮಂದಾಕಿನಿಯೊಳಗೆ ಮಿಂದ ಫಲಸಂಪ್ರಾಪ್ತಿ ಇಂದಿರಾಪತಿ ಶಾಮಸುಂದರನ ಕರಪಿಡಿವ 5
--------------
ಶಾಮಸುಂದರ ವಿಠಲ
ಆನಂದ ಆನಂದ ಪ್ರದವೋದಾಶರಧಿ ಧ್ಯಾನಾ ಪ ಭಕ್ತಿಯುಕ್ತನಾಗಿ ಮನದಿ ನಿತ್ಯಪಾಡೋ ರಾಮಚರಣ ಅ.ಪ ಕಾಲನಪುರ ಭಯವಿಲ್ಲವೋ | ವಾಲ್ಮೀಕಿಯು ಸಾಕ್ಷಿ ಇದಕೆ ಮೇಲುನಭದಿ ಮೆರೆವಾ ನೋಡೋ 1 ಶ್ರೀರಾಮನಾಮದಿಂದ ಮಾರುತಿಯು ಬ್ರಹ್ಮನೆ ನಿಪ ಮಾರಹರನು ತನ್ನ ಸತಿಯಾ ಸೇರಿ ಸತತ ಭಜಿಪ ಕೇಳೋ 2 ಹಿಂದೆ ಮಾಡಿದ ನಿನ್ನ ದುರಿತವೃಂದವೆಲ್ಲ | ಛೇದಿಸುವದು ಒಂದೆ ಭಾವದಿಂದ ಶಾಮಸುಂದರನ ನಾಮ ಪಾಡೋ 3
--------------
ಶಾಮಸುಂದರ ವಿಠಲ
ಆನಂದವಾಯಿತು ಬ್ರಹ್ಮ ಆನಂದವಾಯಿತುಆನಂದದೊಳು ಆನಂದವೇ ಆಗಿಸ್ವಾನಂದ ಸುಖ ಶರೀರ ವ್ಯಾಪಿಸೆ ಪ ಬಂಧತ್ರಯಾಭ್ಯಾಸದ ಬಂಧವ ಪಿಡಿಯುತನಿಂದು ನಾಸಿಕಗೊನೆ ನಿಟಿಲವ ನೋಡುತಛಂದ ಛಂದದ ಪುಷ್ಟ ಚದುರಲಿ ಕಾಣುತಸುಂದರನಾದ ಕೇಳಿ ಸುಖಿಸುವರ ಕಂಡು 1 ಎಡಬಲ ಹಾದಿಯ ಎಡಬಲಕಿಕ್ಕುತನಡುವಿನ ಮಾರ್ಗವ ನೇರದಿ ಪೊಕ್ಕುನಡೆದು ಸುಷುಮ್ನದ ನಾಳನೆಲೆಯ ನೋಡಿಕುಡಿದಮೃತವ ಸೊಕ್ಕಿ ಕುಳಿತಿಹರ ಕಂಡು 2 ಕುಂಡಲಿ ನಿದ್ರೆಯ ತಿಳಿಪುತಮುದ್ರಿಸಿ ನವಬಾಗಿಲನೆಲ್ಲವ ಮುಚ್ಚುತಭದ್ರ ಮಂಟಪದೊಳು ಭಾಸದಿ ಬೆಳಗಿ ಸ-ಮುದ್ರ ಗುರು ಚಿದಾನಂದ ಬೆರೆದವರ ಕಂಡು3
--------------
ಚಿದಾನಂದ ಅವಧೂತರು
ಆರುತಿ ಬೆಳಗುವೆವು ಕೃಷ್ಣಗೆ ರಾಧಾಕೃಷ್ಣಗೆ ಬೆಳಗುವೆವು ಪ ಗೋಕುದಲಿ ಹುಟ್ಟಿ | ಗೋವುಗಳನು | ಕಾಯ್ದವಗೆ ಗೋಪಾಲಕೃಷ್ಣಗೆ ಬೆಳಗುವೆವು 1 ನಂದಕುಮಾರನಿಗೆ ಇಂದೀವರಾಕ್ಷ ಬಾಲನಿಗೆ | ರಾಧಾಕೃಷ್ಣಗೆ ಬೆಳಗುವೆವು 2 ಶಾಮಸುಂದರನಿಗೆ ಕಾಮಿತಶೀಲ ಕೃಷ್ಣನಿಗೆ ರಾಧಾಕೃಷ್ಣಗೆ 3
--------------
ಶಾಮಸುಂದರ ವಿಠಲ
ಇಂದಿರೇಶ ಭಾಗವತ ಎಂದು ಬರುವನು ಇಲ್ಲೆ ಮಂದಸೂನನುನಮಗೆ ಮುಂದೆ ಗತಿಯೇನುದ್ಧವಾಒಂದು ಕಾರ್ಯವು ಬಾರದಂದಿನಾದಿಈಶ ಸುರಸುಂದರನು ಪೋದನಲ್ಲೋ ಉದ್ಧವಾ ಪ ಪತಿ ಸುತರ ಪರಿಚರಿಸುತಿಹ ನಮ್ಮಮರುಳು ಮಾಡಿದನುದ್ಧವಾ 1 ತೊರೆದು ಮನೆ ಧನಗಳನೆ ಬರಲು ಬಳಿಯಲಿ ಭಾಳತರಲಿ ಮಾಡಿದನುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 2 ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆತುರುಬಿನೊಳಗಿಟ್ಟುದ್ಧವಾಸರಸ ಸೌಂದರ್ಯಕ್ಕೆ ಮರುಳಾದನಿವನೆಂದುಗರುವ ಮಾಡಿದೆವುದ್ಧವಾಅಂತು ನಮ್ಮನು ಬಿಟ್ಟು ಮರೆಯಾಗಿ ರೋಧಿಸಲುಭರದಿ ಬಂದನುದ್ಧವಾ 3 ಕೋಲು ಕುದುರೆಯನೇರಿ ಬಾಲಕರಕೂಡಿ ತಾ ಕೇಳಿ ಮಾಡಿದನುದ್ಧವಾಲೀಲೆ ಚತುರರ ಸದೃಶ ಬಾಲೆಯರಕೂಡಿ ತಾ ಕೋಲನಾಡಿದನುದ್ಧವಾ4 ದಧಿ ಬೆಣ್ಣೆ ನಮ್ಮಾಲಯದೊಳುತಿಂದು ಭಾಳ ಮೋಹಿಸಿದನುದ್ಧವಾ 5 ಗರಳ ಹರಿಸಿನುದ್ಧವಾಉರಿಯ ನುಂಗುತ ಮುಖದಿ ಬೆರಳೊಂದುಹತ್ತೊಂದು ವರುಷ ಇಲ್ಲಿದ್ದುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 6 ಒಂದಿನಾದರೂ ಒಮ್ಮೆ ಮನದಿ ಗೋಕುಲದವರಇಂದು ಸ್ಮರಿಪನೆ ಉದ್ಧವಾಚಂದ್ರ ವದನೇರ ಸ್ನೇಹ ಕೂಡಿ ಪುರದೊಳು ನಮ್ಮನಿಂದು ಮರೆತನೆ ಉದ್ಧವಾ 7 ಬಂದು ಬಳಗವ ಬಿಟ್ಟು ಮಧುರೆಗೆಲ್ಲರುನಿನ್ನ ಹಿಂದೆ ಬರುವೆವೊ ಉದ್ಧವಾಕಂದರ್ಪ ಪಿತನಿವನ ಸ್ಮರಿಸುತಲೆ ದೇಹದಿಪ್ರಾಣವೊಂದೇ ಉಳಿದಿಹುದುದ್ಧವಾ8 ಪರಮ ವೈಕುಂಠನು ಸರತಿಯಲೆ ತೋರಿಸುತಮರುಳು ಮಾಡಿದನುದ್ಧವಾಗಿರಿಗಿರಿ ಝರಿಯೊಳಗೆ ಚರಿಸಿ ಚಿನ್ನದ ಚರಯಗುರುತು ಮಾಡಿದನುದ್ಧವಾಅರಿಯಲಿಲ್ಲವೋ ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 9
--------------
ಇಂದಿರೇಶರು