ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿ ಬೆಳಗುವೆ ವಾರಿಧಿಶಯನಗೆ ಮಾರನಪಿತನಿಗೆ ನಾರದಸುತಗೆ ಪ ಸಾರಸನಾಭಗೆ ನೀರಜಗಾತ್ರಗೆ ಶ್ರೀರಮೆಯರಸಗೆ ನಾರಿಯರೊಡನೆ ಅ.ಪ ಮುರಳಿಯನೂದುವ ತರಳ ಶ್ರೀಕೃಷ್ಣಗೆ ಶರಣರ ದುರಿತವ ಪರಹರಿಸುವಗೆ ಕರುಣಜಲಧಿ ಮಾಂಗಿರಿರಂಗಯ್ಯಗೆ ಸರಸತಿ ಪಾರ್ವತಿ ತರುಣಿಯರೊಡನೆ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಮುರವೈರಿಣಿ ಮಂಗಲಂ ಜಯ ಮಂಗಲಂ ಪ ವೇದ ವ್ಯಾಪಕನಿಗೆ | ಸಾಧುಗಳೊಡೆಯಗೆ | ರಾಧೆಯೊಲ್ಲಭ ಜಗದಾದಿ ನಾಯಕನಿಗೆ 1 ಸಾರಸನಾಭಗೆ ನಾರದ ವಿನುತಗೆ ಮಾರಕಜನಕನಿಗೆ ಶ್ರೀರಾಮಚಂದ್ರಗೆ 2 ಧಾಮ ಮುಕುಂದಗೆ 3 ಭಾವಿಕೋದ್ಧಾರಗೆ ದೇವಕೀತನಯಗೆ ಶ್ರೀವಾಸುದೇವ ದಾಮೋದರ ಶೌರಿಗೆ 4
--------------
ಅನ್ಯದಾಸರು