ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಯ್ಯಾ ಹರಿಯೆ ಪ ಪಂಡರಪುರ ನಿಲಯನೆ ಕುಂಡಲಿಶಯನನೆ ಅ.ಪ. ಪುಂಡರೀಕಗೊಲಿದವನೆ | ಅಂದು ಶುಂಡಾಲವ ಪೊರೆದವನೆ ಅಂಡಜ ವರ ವಾಹನನೆ | ಎನ್ನ ಮಂಡೆಯ ಮೇಲ್ಕರವಿಡುತಲಿ 1 ವಿಜಯಗೆ ಸಾರಥಿಯಾದಿ | ಅವನ ಭುಜಗ ಶರದಿಂದ ಪೊರೆದಿ ನಿಜ ಭಕುತಗೆ ನೀ ಒಲಿದ | ದೇವ ಕುಜನಮರ್ದನ ಹರಿ ಮುದದಿ 2 ಪಟುತರ ದೇಹ ಪ್ರಕಾಶ | ದಿಂದ ವಟುವಂತೆ ಮೆರೆವ ಶ್ರೀಶ ಕುಟಿಲ ರಹಿತ ರಂಗೇಶ | ವಿಠಲ ಹಟಮಾಡದೆ ಕಣ್ತೆರದು 3
--------------
ರಂಗೇಶವಿಠಲದಾಸರು
ಮಂಡೆ ಬೋಳಾದರೇನು ಮನಶುದ್ಧಿಯಿಲ್ಲವು ಪ. ಕಂಡು ಹಯವದನನ್ನ ಒಲಿಸಿಕೊಂಡವ ಧನ್ಯ ಅ.ಪ. ನಾರದÀರವತಾರವೆಂದು ಜಗಕೆ ತೋರಿ ಸಿರಿಪುರಂದರದಾಸರ ಮನೆಯಲ್ಲಿಪರಿಪರಿ ಲೀಲೆಯ ಮಾಡಿ ಬಿಡದೆ ನಿತ್ಯಅರಿತು ಅವರ ಸಾಧನಕೆ ಸಾರಥಿಯಾದಿ 1 ಗುರುವ್ಯಾಸಮುನಿ ನಿಮ್ಮ ನೋಡುವೆನೆಂತೆಂದೊಡೆಮರೆಮಾಡಿ ಮೂರುರೂಪ ಜನುಮವೆಂದಿಹರÀÀುಷದಿ ಕನಸಿನೊಳಗೆ ಬಂದುಭಯರಿಗೆಅರುಪಿಸಿ ಸ್ವರೂಪ ಅರಿಯದಂತಿದ್ಯೊ ದೇವ 2 ಅವರ ಮೇಲಿದ್ದ ದಯ ಎನ್ನ ಮೇಲೆಂದಿಗೋ ದೇವಯಾವುದು ಭರವಸೆದೋರದಯ್ಯಕವಿದೆಮ್ಮಭಿಮಾನ ಬಿಟ್ಟರೆ ಬಿಡದಯ್ಯಆವಕಾಲಕ್ಕೆ ನಿನ್ನ ದಾಸನೆಂಬಂತೆ ಮಾಡೊ 3 ನಮ್ಮ ಗುರುಗಳ ಸಮ್ಮತದಿಂದುಡುಪಿಯಲಿಗಮ್ಮನೆ ಪೇಳಿದೆನು ಸಟೆಯಲ್ಲವುಸುಮ್ಮನೆ ತಿಳಿಯದೆ ಅಲ್ಲವೆಂದವÀರ್ಗಿನ್ನುಗಮ್ಮನೆ ತಮಸಿನೊಳಿಹುದು ಸತ್ಯವು 4 ಓದಿದಾಕ್ಷಣದಿಂದ ಧನ್ಯನೆಂದೆನು ನಾನುಸಾಧಿಸಲಾಪೆನೆ ನಿನ್ನ ಸೇವೆಯನುಆದಿಮೂರುತಿ ಸಿರಿಹಯವದನರೇಯಮೋದದಿಂದ ನಿನ್ನ ದಾಸರ ಸಂಗದಲ್ಲಿಡು ಕಂಡ್ಯ 5
--------------
ವಾದಿರಾಜ
ಸೃಷ್ಟಿಗೀಶ ನಿನಗಿಷ್ಟು ದಯಬಾರದ್ಯಕೊ ಎಷ್ಟು ಬೇಡಲು ಎನ್ನ ಮೊರೆ ಕೇಳದಿರುವಿ ಪ ಕರಿರಾಜನ ಪೊರೆದೆಲೋ ನರಗೆ ಸಾರಥಿಯಾದಿ ತರುಣಿಯನುದ್ಧರಿಸಿ ಪರಿಶುದ್ಧಗೈದಿ ಪರಮಕುರುಣಿಯು ನೀನು ದುರಿತಕಾರ್ಯದಿಂ ನಾನು ನರಕಿಯಾಗ್ವುದನರಿತು ಅರಿಯದಂತಿರುವಿ 1 ಖುಲ್ಲದಾನವರೊದೆದು ಎಲ್ಲ ದೇವತೇರಿಗೆ ನೀ ನುಲ್ಲಾಸವನು ಕೊಟ್ಟು ಪುಲ್ಲನಾಭ ಹರಿಯೆ ಕ್ಷುಲ್ಲಕರ ಸಂಗದಿಂ ನಾ ಸಲ್ಲದಂತಾಗುವೆ ಕ ಣ್ಣಲ್ಲಿ ಕಂಡು ನೀ ಕಂಡಿಲ್ಲದಂತಿರುವಿ 2 ಮುನಿಶಾಪದಿಂ ನೃಪನ ಕನಿಕರದಿ ಕಾಯ್ದಿ ನಿಂ ತನುದಿನದಿ ಬಾಗಿಲವ ಘನವಾಗಿ ಕಾಯ್ದಿ ಶುನಕನಂದದಿ ನಾನು ದಿನದಿನಕೆ ಮತ್ತಿಷ್ಟು ಘನಪಾಪಿಯಾಗ್ವುದನು ಮನಕೆ ತರದಿರುವಿ 3 ವನವಾಸಗೈದಯ್ಯಾ ವಾನರನ ಸಲಹಿದಿ ದನುಜನನು ಸಂಹರಿಸಿ ದನುಜನನುಜಂಗೆ ಮಾಣದ ಪಟ್ಟವನು ಮೆಚ್ಚಿ ನೀ ಕೊಟ್ಟೆಯ್ಯಾ ಎನಗ್ಯಾಕೀದುರ್ಬವಣೆ ದೂರಮಾಡದಿರುವಿ 4 ಇನಿತೆಲ್ಲ ಯೋಚಿಸಲು ಘನ ಕುರಣಾನಿಧಿ ನೀನು ನಿನಗವರೆ ದಾಸರೆ ನಾನಲ್ಲವೇನು ಮನಸಿಜಪಿತ ನಿನ್ನ ವನರುಹಂಘ್ರಿಯ ನಂಬಿ ಮಣಿದು ಬೇಡುವೆ ಕಾಯೊ ತಂದೆ ಶ್ರೀರಾಮ 5
--------------
ರಾಮದಾಸರು