ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿರೀಶಮಾಮವ ಕರುಣ ಸುಧಾಬ್ಧೆಹರಶಂಕರ ಪಾವನ ವೇಷ ರಜತಾದ್ರಿವರವರ ತುಹಿನಾಂಶು ಶೇ-ಖರವಿಭೋ ಮಹೇಶ್ವರ ಪ ಸನ್ನುತ ಘನರೂಪಸ್ಫುರದುರಗಾಧಿಪ ಸುಕಲಾಪಸಮುದಂಚಿತ ಮಂಗಲತರರೂಪ1 ಘನತರ ತ್ರಿಪುರ ದಹನ ಶೂರವೃಷವಾಹನ ದುರ್ಗಾರ್ಧಶರೀರಮದನಾಂತಕವಾರಿಧಿಗಂಭೀರ 2 ಪ್ರವಿಮಲ ಮೃಗಧರ ಸರ್ವೇಶಶಮಿತಾಂಧಕ ಸಾಧಿತ ಬಹುದೋಷಾಶಶಿಕಂಧರ ಬಂಧುರ ಶುಭಕೋಶಸಾಕ್ಷಾತ್ಕೆಳದೀಶ್ವರ ರಾಮೇಶ 3
--------------
ಕೆಳದಿ ವೆಂಕಣ್ಣ ಕವಿ
ಪಾಹಿ ಪದ್ಮದಳಾಯತಾಂಬಕ ಪಾಹಿ ಪದ್ಮಾರಮಣ ಪರಾತ್ಪರ ಪಾಹಿ ಪದ್ಮಾಸನ ಜನಕ ಮಾಂ ಪಾಹಿ ಪ್ರಪನ್ನ ಪಾಲಕ ಪ ವಾಸುದೇವ ಕೃತೀಶ ಶಾಂತಿಪ ಕೇಶವಾಚ್ಯುತ ವಾಮನ ಹೃಷೀಕೇಶ ಪ್ರಶ್ನಿಗರ್ಭ ಋಷಭ ನೃಕೇಸರಿ ಹಯಗ್ರೀವ ವೇದ ವ್ಯಾಸ ದತ್ತಾತ್ರಯ ಉರುಕ್ರಮಾ ವಾಸವಾನುಜ ಕಪಿಲ ಯಜ್ಞ ಮ ಹೇಶ ಧನ್ವಂತ್ರಿ ಹಂಸ ಮಹಿ ದಾಸ ನಾರಾಯಣ ಕೃಷ್ಣಹರೆ 1 ಮಾಧವ ಪ್ರದ್ಯುಮ್ನ ಶ್ರೀ ದಾಮೋದ ರಾಧೋಕ್ಷಜ ಜನಾರ್ದನ ಶ್ರೀಧರ ಶ್ರೀ ಪದ್ಮನಾಭ ವೃಕೋದರ ಪ್ರಿಯತಮ ತ್ರಿವಿಕ್ರ ವಿರಿಂಚಿ ವಿನುತ ಗದಾಧರ ಗಯಾಸುರ ವಿಮರ್ದನ ಸಾಧಿತ ಜಗತ್ರಯ ಪುರಾತನ ಪಾದ ಪರಮ ಕೃಪಾಂಬುಧೇ ಮಾಂ 2 ನಂದಗೋಪನ ಕುಮಾರ ಗೋಪಿ ವೃಂದ ಪೋಷಿತನಮಿತ ಸಂಕ್ರಂಡನ ಕೃಪಾ ಸಾಂದ್ರ ವರ ಕಾಳಿಂದಿ ತಟನಿ ವಿಹಾರ ಪಾಂಡವ ಬಂಧು ದ್ರೌಪದಿವರದ ನೃಪ ಮುಚು ಕುಂದಸ್ತುತಿ ಸಂಪ್ರೀತ ಲಕ್ಷ್ಮೀ ನಂದಮಯ ನಿಜ ಭಕ್ತವತ್ಸಲ 3 ಮೀನಕೂರ್ಮವರಾಹ ಪಂ ದಿತಿಸುತ ವಾಮನ ಕ್ಷೋಣಿಪಾರ್ವನ ಬ್ರಾಹ್ಮಣ ಪ್ರಿಯ ವನೌಕಸನಾಥ ಮುಖ್ಯ ಪ್ರಾಣಸಖ ವಸುದೇವ ದೇವಕಿ ಸೂನು ಸುಂದರಕಾಯ ಪುರಹರ ಬುದ್ಧ ಕಲ್ಕಿ ಪ್ರ ಧಾನ ಪುರುಷೇಶ್ವರ ದಯಾಕರ 4 ನಿಂತ ನಿಜಬಲ ಮಾತುಳಾಂತಕ ಶ್ವೇತವಾಹನ ಸೂತ ತ್ರಿಗುಣಾ ತೀತ ಭವನಿಧಿ ಪೋತ ಮೋಕ್ಷನಿ ಕೇತನಪ್ರದ ಭೂತಭಾವ ಧೌತ ಪಾಪ ವ್ರಾತ ತ್ರಿಜಗತಾತ ನಿರ್ಗತ ಭೀತ ಶ್ರುತಿ ವಿಖ್ಯಾತ ಭಕ್ತಿಸುವೇತನ ಪ್ರಿಯ ಭೂತಿದ ಜಗನ್ನಾಥ ವಿಠ್ಠಲ 5
--------------
ಜಗನ್ನಾಥದಾಸರು
ಮಂಗಳಂ ಕಲ್ಯಾಣ ಸಾಂದ್ರಗೆ ಪ ವಾದೀಂದ್ರ ಗುರುವರ ಕುವರಗೆ ಮಂಗಳ ಮೇದಿನಿ ಸುವಿನುತಗೆ ಮಂಗಳ ಸಾಧಿತ ಸಕಲ ಸುತತ್ವ್ವಗೆ ಮಂಗಳ ವಾದಿ ವಾರಿದ ಚಂಡ ಪವಮಾನಗೆ 1 ವರಹತನಯ ತೀರ ಧರಣಿ ಧರಾಹ್ವಯ ಪುರದಿ ವಿರಾಜಿಸುವಗೆ ಮಂಗಳ ವರದೇಂದ್ರ ಯತಿವರರ ಕಮಲಾರ್ಚಿತ ಚರಣ ಪಂಕೇಜ ಯುಗ್ಮಗೆ ಮಂಗಳ 2 ಸೂರಿಕುಲೋತ್ತಮ ಶ್ರೀ ರಾಘವೇಂದ್ರ ಗುರು ಸದ್ವಂಶ ಜಾತಗೆ ಮಂಗಳ ನಾರದನುತ ಜಗನ್ನಾಥವಿಠಲನ ಕರುಣ ಪಾತ್ರ ಸಂಯಮಿವರಗೆ ಮಂಗಳ 3
--------------
ಜಗನ್ನಾಥದಾಸರು
ರಾಮಭಜೇ ತೇ ಪದಯುಗಳಂ ಸೀತಾ ಪ ರಾಮಭಜೇ ತೇ ಪದಯುಗಳಂ ರಾಮ ಸುಂದರ ಘನಶ್ಯಾಮ ರಘೂದ್ವಹ ಅ.ಪ ದಶರಥ ಹೃದಯಾನಂದಕರಂ ತ್ರಿ ದಶಗಣ ಚಿತ್ತಾಮೋದಕರಂ 1 ಪೂರಿತ ಕೌಶಿಕಜನಂ ಸಂ ತಾರಿತ ಗೌತಮ ಲಲನಾಂ 2 ಖಂಡಿತ ಶಂಕರಚಾಪಂ ಪರಿ- ದಂಡಿತ ಭಾರ್ಗವ ಕೋಪಂ 3 ಸ್ವೀಕೃತ ಜಾನಕೀಹೃದಯಂ ದೂ ರೀಕೃತ ಪಾತಕನಿಚಯಂ 4 ಪಾಲಿತ ಮಾತಾಪಿತೃ ವಚನಂ ಸಂ ಲಾಲಿತ ಮುನಿಜನ ಸ್ತುತಿರಚನಂ 5 ಭರತ ಸಮರ್ಪಿತ ನಿಜರಾಜ್ಯಂ ಮುನಿ ವರಭಾರದ್ವಾಜಾರ್ಪಿತ ಭೋಜ್ಯಂ 6 ದಂಡಕಾರಣ್ಯಂ ಪಾವನಚರಣಂ ಉ- ದ್ದಂಡ ವಿರಾಧಾ ಪಾತಕಹರಣಂ 7 ಕುಂಭಜಾರ್ಪಿತ ಶರಕೋದಂಡ ಸಂ ರಂಭ ನಿರ್ಜಿತ ರಾಕ್ಷಸದಂಡಂ 8 ಪಂಚವಟೀತಟ ಕೃತವಾಸಂ ದೃ ಗಂಚಲ ಧೃತಗಜದುಲ್ಲಾಸಂ 9 ಶೂರ್ಪನಖೀ ವಚನಾಲೋಲಂ ಸಹ ಜಾರ್ಪಿತ ವಿವಿಧಾಯುಧ ಜಾಲಂ 10 ರೂಪನಿರ್ಜಿತ ಸುಮಬಾಣಾಂಗಂ ವಿ ರೂಪಿತ ದುಷ್ಟ ಶೂರ್ಪನಖಾಂಗಂ 11 ಖರತರ ಖರದೂಷಣಕಾಲಂ ಸುರ ನರವರ ಮುನಿಗಣ ಪರಿಪಾಲಂ 12 ಮಾಯಾಮೃಗಾರ್ಪಿತ ಬಾಣವರಂ ಜ- ಟಾಯು ಸಂಪಾದಿತ ಲೋಕವರಂ13 ರಾವಣಹೃತ ನಿಜಪತ್ನೀಕಂ ಲೋ- ಕಾವನಗತ ಕೋಪೋದ್ರೇಕಂ14 ಸಾಧಿತ ಶಬರೀ ಮೋಕ್ಷಕರಂ ಕ- ಬಂಧ ಬಂಧನ ಮೋಚನ ಚತುರಂ 15 ವಾತ ತನೂಭವ ಕೃತಸ್ತೋತ್ರಂ ಪಂ ಪಾತಟ ನಿರ್ಮಿತ ಸುಕ್ಷೇತ್ರಂ 16 ಶಿಕ್ಷಿತ ಸಂಕ್ರಂದನ ತನುಜಂ ಸಂ- ರಕ್ಷಿತ ಚಂಡಕಿರಣ ತನುಜಂ 17 ಸೀತಾಲೋಕನ ಕೃತಕಾಮಂ ನಿಜ ದೂತಾಮೋದನ ಸುಪ್ರೇಮಂ 18 ನಿಜಕರ ಭೂಷಣ ದಾತಾರಂ ಧುರ ವಿಜಯ ವನಾಲಯ ಪರಿವಾರಂ 19 ಧೂತಾಹೃತ ಶುಭದೃಷ್ಟಾಂತಂ ವಿ- ಜ್ಞಾತ ನಿಜಸ್ತ್ರೀ ವೃತ್ತಾಂತಂ 20 ಭೀಷಣ ಜಲನಿಧಿ ಬಂಧಕರಂ ವಿ ಭೀಷಣ ಸಂರಕ್ಷಣ ಚತುರಂ21 ಶೋಷಿತ ರಾವಣ ಜಲಧಿಂ ಸಂ- ತೋಷಿತ ದೈವತಪರಿಧಿಂ 22 ಸೀತಾ ಸಮಾಶ್ರಿತ ವಾಮಾಂಕಂ ಪರಿ- ಪಾತಕ ನಿಜನಾಮಾಂಕಂ 23 ಸ್ವೀಕೃತ ಸಾಕೇತಾವಾಸಂ ಅಂ- ಗೀಕೃತ ಮಾನುಷವಿಲಾಸಂ 24 ವರವ್ಯಾಘ್ರ ಪ್ರಭೂಧರ ಕಲ್ಪತರುಂ ಶ್ರೀ ವರದವಿಠಲಮತಿಶಯ ರುಚಿರಂ 25
--------------
ವೆಂಕಟವರದಾರ್ಯರು
ವಿಷ್ಣು ತೀರ್ಥರಪಾದ | ನಿಷ್ಠೆಯಿಂದಲಿ ಭಜಿಸೆಇಷ್ಟಾರ್ಥ ಸಲಿಸೂವರ್ | ಕೃಷ್ಣಪೂಜಕರೂ ಪ ಜಿಷ್ಣುಸಖ ಶ್ರೀ | ಕೃಷ್ಣ ಭಕುತರುಶ್ರೇಷ್ಠ ದಂಪತಿ | ಗರ್ಭಜಾತರುಸುಷ್ಠಜಯಮುನಿ | ಸೇವೆಯಿಂದಲಿಇಷ್ಟವರದಿಂ | ದುದಯರಾದರು 1 ಬಾಲ್ಯದಲ್ಲು ಪನೀತ | ಆರ್ಯರಿಂದು ಪದಿಷ್ಟಆರ್ಯ ಐಜೀವರ್ಯ | ಗುರುಕುಲವಸಿತ |ಕ್ರೌರ್ಯ ಹರಿಜಪ | ದೈರ್ಯದಿಂದಲಿವೀರ್ಯವತ್ತರ | ಜಪಿಸಿ ಗುರುಸುತವರ್ಯನಪಮೃತಿ | ಕಳೆದು ಗುರುವಿಂಮಾನ್ಯವಂತನು | ಎನಿಸಿ ಮೆರೆದ 2 ಮಲದ ಅಪಹಾರಿಯ | ಜಲಪ್ರವಾಹದಿ ನಿಂದುಘಳಿಗೆ ಇರಲು ಉದಯ | ವಲಿಸಿ ಮಧ್ವವಿಜಯಒಲಿಮೆಯಿಂದಲಿ | ಸೂರ್ಯನಘ್ರ್ಯವಕಾಲಮೀರದೆ | ತಾನು ಕೊಡುತಲಿಮೂಲಗ್ರಂಥವ | ತಿಳಿಯ ಬೋಧವಇಳೆಯ ಸುರರಿಗೆ | ಪೇಳ್ದ ಮಹಿಮಾ 3 ಅವಧೂತ ಚರ್ಯದಿ | ಅವನಿಯೊಳ್ಚರಿಸುತ್ತಭುವನ ಪಾವನ ಸುಧೆ | ದಿವಿಜರಿ ಗುಣಿಸೀ |ಶ್ರವಣ ಗೈಸುತ | ಸುಧೆಯ ಗ್ರಂಥವಅವನಿಯೊಳು | ತತ್ವಾರ್ಥಬೋಧಿಸಿಪ್ರವರ ಭೂಸುರ | ಮುಕ್ತಿಮಾರ್ಗದಹವಣೆ ಗೈದಿಹ | ಭುವಿಯದಿವಿಜ 4 ವನವನಚರಿಸುತ್ತ | ಮುನಿವಳ್ಳಿಯಲಿಮುನಿಯೋಗ್ಯವೆನಿಸುವ | ವಾನಪ್ರಸ್ಥಾಶ್ರಮದಿ |ಘನಸುವ್ರತವನೆ | ಅಸಿಯಪತ್ರದಿಮನವನಿರಿಸುತ | ಗಣ್ಯನಾದೆಯೊಅನಘ ಹರಿಕಾ | ರುಣ್ಯ ನಿನ್ನಲಿಗಣನೆಗೈಯ್ಯಲು | ಮನುಜಗಸದಳ 5 ಯತಿ ಸತ್ಯವರರಿಂದ | ಯತಿ ಆಶ್ರಮವ ಪೊಂದಿಕ್ಷಿತಿಯ ಸಂಚರಿಸುತ್ತ | ಅನ್ನಾಳಿಗಾಗಮೀಸೀ |ಹಿತನು ದೇಶಾದಿ | ಪತಿಯ ರೋಗವಹತಗೈದು ಅನ್ನವ | ಜೊತೆಲುಂಬುವಯತನ ಸಾಧಿತ | ಪ್ರಾಪ್ತಕ್ಷಾಮವಹತವ ಗೈಸಿದೆ | ರಮೆಯನೊಲಿಸೀ 6 ಬೋಧ | ಗ್ರಂಥಗಳ್ರಚಿಸೀ |ಮೋದದಿಂ ವೃಂದಾವನಸ್ಥರುಸಾದು ಸೇವೆಗೆ ಅಭಯನೀಡುತನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತರಾಗಿಹ7
--------------
ಗುರುಗೋವಿಂದವಿಠಲರು
ಶ್ರೀ ವೆಂಕಟ ಶೈಲಾಧಿಪ ನಮೋ ರಾ ಜೀವಭವ ಭವಾರಾಧ್ಯ ನಮೋ ಪ ಭೂವರಾಹಾದ್ಯವತಾರ ನಮೋ ಕೇವಲ ನಿರ್ಗುಣ ಬೋಧಾನಂದ ಮಾ ಯಾವತಾರತೇ ನಮೋ ನಮೋ ಗೋವಿಂದ ಜಗಜ್ಜೀವನ ಜಿತ - ಮದ ದೇವಕಿನಂದನ ದೇವ ನಮೋ 1 ಸ್ವಾಂತ ಧ್ವಾಂತ ನಿಕೃಂತನ ಕಮಲಾ ಕಾಂತ ಶ್ರೀಮದನಂತ ನಮೋ ಚಿಂತಿತ ಫಲದ ಮದಂತರ್ಯಾಮಿ ದು ರಂತ ಶಕ್ತಿ ಜಯವಂತ ನಮೋ ಸಂತತಾದಿಮಧ್ಯಾಂತ ವಿವರ್ಜಿತ ನಂತಾಸನ ಕೃತಾಂತ ನಮೋ 2 ಕುಸ್ಥ ನಮೋ ಆಪಸ್ಥ ನಮೋ ತೇ ಜಸ್ಥ ನಮೋ ವಾಯಸ್ಥ ನಮೋ ಖಸ್ಥ ನಮೋ ಆಶಸ್ಥ ನಮೋ ಮ ಧ್ಯಸ್ಥ ನಮೋ ನಮೋ ಸ್ವಸ್ಥ ನಮೋ ಗೋಸ್ಥ ನಮೋ ಕಾಲಸ್ಥ ನಮೋ ದೇ ವಸ್ಥ ನಮೋ ಸರ್ವಸ್ಥ ನಮೋ 3 ಶ್ರೀಶ ನಮೋ ಬ್ರಹ್ಮೇಶ ನಮೋ ಪ್ರಾ ಣೇಶ ನಮೋ ವಾಣೀಶ ನಮೋ ವೀಶ ನಮೋ ಫಣಿಪೇಶ ನಮೋ ರು ದ್ರೇಶ ನಮೋ ಉಮೇಶÀ ನಮೋ ವಾಸವ ಮುಖ ದೇವೇಶ ನಮೋ ದು ವಾಸವ ನಮೋ ಭೇಶ ಬಿಂದು ಕ್ಷಿತಿಪೇಶ ನಮೋ ಹರಿ ವ್ಯಾಸ ಖಷಭ ಮಹಿದಾಸ ನಮೋ 4 ಲೊಕಾಂತರ್ಗತ ಲೋಕ ನಿಯಾಮಕ ಲೋಕಾಲೋಕ ವಿಲೋಕನ ವಿಷಯ ತ್ರಿ ಲೋಕಾಧಾರಕ ಪಾಲಯ ಮಾಂ ಲೊಕಮಹಿತ ಪರಲೋಕಪ್ರದ ವರ ಲೋಕೈಕೇಶ್ವರ ಪಾಲಯ ಮಾಂ ಲೋಕ ಜನಕ ತೈ ಲೋಕ್ಯ ಬಂಧು ಕರು ಣಾಕರ ವೇಂಕಟ ಪಾಲಯಮಾಂ 5 ಮುಕ್ತಾಮುಕ್ತ ನಿಷೇಧಿತಾವಯವಾ ಸಕ್ತ ಜನಪ್ರಿಯ ಪಾಲಯ ಮಾಂ ರಕ್ತ ಪೀತನಿಭ ಪಾಲಯ ಮಾಂ ನಿಗಮ ತತಿಸೂಕ್ತ ಸಿತಾಸಿತ ಸ್ವಾಂತ ಮಹಿಮ ಸಂ ಯುಕ್ತ ಸದಾ ಹೇ ಪಾಲಯ ಮಾಂ ನಿಗಮ ತತಿನಿಭ ಪಾಲಯ ಮಾಂ ಯುಕ್ತಾಯುಕ್ತಾ ನಜಾನೆ ರಮಾಪತೆ ಭಕ್ತೋಹಂ ತವ ಪಾಲಯ ಮಾಂ 6 ಕಮಠ ಧ ರಾಧರ ನರಹರೇ ಪಾಲಯ ಮಾಂ ಸಾಧಿತ ಲೋಕತ್ರಯ ಬಲಿಮದಹ ಹಯ ಮೇಧ ವಿಭಂಜನ ಪಾಲಯ ಮಾಂ ಭೂಧರ ಭುವನ ವಿರೋಧಿ ಯಮಕುಲ ಮ ಹೋದಧಿ ಚಂದ್ರಮ ಪಾಲಯ ಮಾಂ ಬುದ್ಧ ತನು ಶ್ರೀ ದಕಲ್ಕಿ ಕಪಿ ಲಾದಿರೂಪ ಹೇ ಪಾಲಯ ಮಾಂ 7 ಶರಣಾಗತ ರಕ್ಷಾಮಣಿ ಶಾಙ್ರ್ಗ ಅರಿದರಧರ ತವ ದಾಸೋಹಂ ಪರ ಪುರಷೋತ್ತಮ ವಾಙ್ಮನೋಮಯ ಭಾ ಸ್ಕರ ಸನ್ನಿಭ ತವ ದಾಸೋಹಂ ಗರುಡಸ್ಕಂಧ ಕರಾರೋಪಿತ ಪದ ಸರಸಿಜಯುಗ ತವ ದಾಸೋಹಂ ಉರಗಾಧಿಪ ಪರಿಯಂಕಶಯನ ಮಂ ದರ ಗಿರಿಧರ ತವ ದಾಸೋಹಂ 8 ಸೃಷ್ಟಿ ಸ್ಥಿತಿಲಯಕಾರರೂಪ ಪ್ರ ಹೃಷ್ಟ ತುಷ್ಟತವ ದಾಸೋಹಂ ಪರಮೇಷ್ಟಿ ಜನಕ ಶಿಷ್ಟೇ ಷ್ಟದಿಷ್ಟ ತವ ದಾಸೋಹಂ ಜೇಷ್ಠ ಶ್ರೇಷ್ಠ ತ್ರಿವಿಷ್ಠ ದಾರ್ಚಿತ ವೃಷ್ಣಿವರ್ಯ ತವ ದಾಸೋಹಂ ಅಷ್ಟ ಫಲಪ್ರದ ಪಕ್ಷಿಧ್ವಜ ಜಗನ್ನಾಥ ವಿಠ್ಠಲ ತವ ದಾಸೋಹಂ 9
--------------
ಜಗನ್ನಾಥದಾಸರು
ಸಾರ ಪ ಪ್ರಶ್ನೆ:ಯಾತರಿಂದಲಿ ಕೇಳೆನ್ನಯಮನ ಬಹು ಪೂತವಾಗುವದು ಗುರುವರೇಣ್ಯ ಭೂತಳದಲಿ ಪರಮ ಪಾವನ ತೀರ್ಥ ಅನುದಿನ 1 ಉತ್ತರ:ಶ್ರಧ್ದ ಪೂರ್ವಕ ಶ್ರವಣಸಾಧನ ಮನ ಶುದ್ಧಿಗೆ ಇದೆ ಮುಖ್ಯ ಕಾರಣ ಉದ್ಭವಿಸುವದು ಭಕ್ತಿ ಜ್ಞಾನ ಅನಿ ಪ್ರಶ್ನೆ:ವಶವಲ್ಲಭವದಿ ಬಂದೊದಗುವ ನಾನಾ ವ್ಯಸನಗಳನು ಪರಿಹರಿಸುವ ಬೆಸಸುವದೆನ ಗೀ ಉಪಾಯವ ಚರಿಸಲೇನು ಗಿರಿಗುಹದಲಿ ತ¥ವÀ| ಉ.ವಸುದೇವಸುತನ ಸಂಕೀರ್ತನ ನಾನಾ ವ್ಯಸನ ಪರಿಹಾರಕ್ಕೆ ಕಾರಣ ಮುಸುಕಿರ್ದ ಮೇಘಕ್ಕೆ ಪವಮಾನ ಭವ ವ್ಯಸನಾಂಧಕಾರಕ್ಕೆ ರವಿಕಿರಣ 2 ಪ್ರ:ಏನು ಮಾಡಲಿ ಸದುಪಾಸನ ದೈವಾ ಧೀನದಿ ಬರುವ ವಿಘ್ನಗಳನ್ನು ಕಾಣೆನು ಪರಿಹಾರ ಕೃತಿಯನ್ನು ಇದ ಉ:ಬಿಡದಿರೊ ಕೃಷ್ಣನ್ನ ಸ್ಮರಣವ ಬರುವ ಯಡರುಗಳನು ಪರಿಹರಿಸುವ ದೃಢಮನದಲಿ ತಿಳಿವದು ಜವ ಪೋಪ ದ್ಯಡರು ಪ್ರಾಪಕವಾದ ಪಾತಕವ 3 ಪ್ರ:ಮೋಕ್ಷಫಲದ ಕಮಲಾಕ್ಷಣ ಅಪ- ರೋಕ್ಷ ವಾಗುವದಕ್ಕೆ ಸಾಧನ ಶಿಕ್ಷಿಸುವದು ಸದುಪಾಸನ ಆ ಉ:ಆದರದಿ ನೈರಂತರ್ಯದಿ ಯುಕ್ತ ಮಾಧವನಂಘ್ರಿಯ ಸ್ಮರಣದಿ ಸಾಧಿತ ಬಿಂಬಾಪರೋಕ್ಷದಿಸ ನ್ಮೊದ ಭರಿತನಾಗಿರು ಜಗದಿ 4 ಪ್ರ:ಏನು ಮಾಡಲು ಮುಕ್ತಿಸಾಧನವಾದ ಜ್ಞಾನ ವಿಜ್ಞಾನ ಸಂಪದವನ್ನ ಕಾಣುವದೆಂದಿಗೆ ತಿಳಿಸೆನ್ನ ಮುಂದೆ ಸಾನುರಾಗದಲಿ ಬೇಡುವೆ ನಿನ್ನ ಉ:ಭಕ್ತಿ ವೈರಾಗ್ಯದಿ ಕೂಡಿದ ಪುರು ಷೋತ್ತಮನಂಘ್ರಿ ಸಂಸ್ಮøತಿಯಿಂದ ಚಿತ್ತದಿ ಜ್ಞಾನ ವಿಜ್ಞಾನದ ಉತ್ಪ- ಮೋದ 5 ಪ್ರ:ಜಲಜನಾಭನ ಪದಯುಗದಲ್ಲಿ ನಿ- ಶ್ಚಲ ಭಕ್ತಿಯೆನಗೆ ಪುಟ್ಟುವದೆಲ್ಲಿ ಬಲುವಿಧ ಭಕುತಿಯ ಬಗೆ ಉ:ಜ್ಞಾನ ವೈರಾಗ್ಯದಿ ಕೂಡಿದ ನಂದ ಸೂನು ಪಾದಾಂಬುಜ ಸ್ಮøತಿಯಿಂದ ಪ್ರಾ- ಣೇಂದ್ರಿಯಾತ್ಮಾದಿಗಳಿಂದ ಅಧಿಕ ಕಾಣಿಸುವದು ಭಕ್ತಿ ಜವದಿಂದ 6 ಪ್ರ:ದೃಢತರವಾದ ವೈರಾಗ್ಯವ ಪೊಂದಿ ಪಡಿವೆನೆಂದಿಗೆ ಮಾಧವನ ದಯವಾ ಗಡನೆ ಪೇಳಿದಕೇನು ಪಾಯವ ನಿ- ಉ:ಜ್ಞಾನ ಭಕ್ತಿಗಳಿಂದ ಕೂಡಿದ ಶಿರಿ ವೇಣು ಗೋಪಾಲನ ಸ್ಮøತಿಯಿಂದ ಕಾಣುವಿ ಸಧೃಡ ವೈರಾಗ್ಯದ ಭಾಗ್ಯ ಶ್ರೀನಿಧಿ ಚರಣಾನು ಗ್ರಹದಿಂದ7 ಪ್ರಃಘನಲೌಕಿಕದಿ ಕೇಳೆನ್ನಯ ಮನ ನಿ- ಪುಣತರವೆನಿಸುವ ದನುದಿನ ಎನಗೆಂದಾಧ್ಯಾತ್ಮ ತತ್ವದಿ ಮನವೆರಗ ಲೆನಿಸುವದದೆ ಮುಕ್ತಿಸಾಧನ ಉ:ಅನುದಿನ ಶ್ರವಣಾದಿ ಸಾಧನ ದಿಂದ ಜನಿತ ಸದ್ಭಕುತಿಯೆ ಕಾರಣ ಮನದೊಳಾಧ್ಯಾತ್ಮ ತತ್ವಗಳನ್ನ ನೋಡಂ ಜನಯುಕ್ತ ನಯನ ದಂದದಿ ಮುನ್ನ 8 ಪ್ರಃಏನಿರುವುದು ಬಿಂಬಲಕ್ಷಣ ಮತ್ತೇ ನೇನು ಮಾಳ್ಪ ಕರ್ಮಗಳನ್ನು ಸಾನುರಾಗದಿ ಪೇಳುವದುಮುನ್ನ ಮನದಿ ಧ್ಯಾನವ ಮಾಡುವೆ ಪ್ರತಿದಿನ ಉ.ಇಂತಿರುವದು ಬಿಂಬ ಲಕ್ಷಣ ಬಹಿ ರಂತರದಲಿ ತಿಳಿವದು ಮುನ್ನ ಸಂತತ ಸೃಷ್ಟ್ಯಾದಿಗಳನ್ನ ದೇ ಹಾಂತಃ ಸ್ವಪ್ನದಿ ಸಂದರುಶನ 9 ಪ್ರ.ಎಲ್ಲಿರುವನು ಬಿಂಬ ದೇಹದಿ ಸಿರಿ ನಲ್ಲನು ವ್ಯಾಪ್ತವೆಂಬರು ಜಗದಿ ಎಲ್ಲದೇಶ ಗುಣಕಾಲದಿಯನ್ನ ಉ:ನಿಂತಿರುವನು ಸರ್ವಜೀವರ ಹೃದ ಯಾಂತರದಲಿ ವ್ಯಾಪ್ತನು ಪೂರಾ ಸಂತತ ಜೀವನ ವ್ಯಾಪಾರ ತಾನೆ ನಿಂತು ಮಾಡಿಸುವನು ನಿರ್ಧಾರ 10 ಪ್ರ:ಎಂತು ಮಾಡಲಿ ಬಿಂಬೋಪಾಸನ ಮುಕ್ತಿ ಪಂಥಕ್ಕೆ ಮುಟ್ಟಲು ಸೋಪಾನ ಅ- ನಂತ ಗುಣಾತ್ಮಕ ಬಿಂಬನ ಗುಣ ಚಿಂತಿಪರಿಗೆ ಬಂಧ ಮೋಚನ ಉ:ಇದೆ ತಿಳಿಬಿಂಬೋಪಾಸನÀ ಚತು ರ್ವಿಧ ದಿಂದಲಾತ್ಮ ಸಮರ್ಪಣ ಮೊದಲು ಆತ್ಮಾನಮೇವಾರ್ಪಣ ದ್ರವ್ಯ ಸದ್ಗುಣ ಕರ್ಮಸಮರ್ಪಣ 11 ಮಾಡಲಾವ ಧರ್ಮಗಳ ಮಾಡಲಿ ಮುನ್ನ ಜೀವರ ಬಂಧ ವಿಮೋಚನ ಮಾಳ್ಪ ಭಾಗವತ ಧರ್ಮಗಳನ್ನು ತಿಳಿದು ಶ್ರದ್ಧೆಯಿಂದಲ್ಲಿ ಮಾಡೋ ಮುನ್ನ ಹೃದ್ಗತ ಬಿಂಬೋಪಾಸಾನ ಮಾಡಿ ಸಿದ್ಧನಾಗಿ ಬಾಳೆಲೋ ಮುನ್ನಾ 12 ಪ್ರ:ಎಂತಿರುವದು ಗುರುಲಕ್ಷಣ ಮುಕ್ತಿ ಪಂಥವ ತೋರಿಸುವವರನ್ನ ಚಿಂತಿಸುವೆನು ಮನದೊಳುಮುನ್ನ ಭಗ ವಂತನ ಮಹಿಮೆ ಪೇಳುವರನ್ನ ಉ:ಜಲಜನಾಭನÀ ಪದಯುಗಲವ ಬಿಟ್ಟು ಚಲಿಸದಿರು ಲವ ನಿಮಿಷಾರ್ಧವ ಇಳಿಯೊಳಗಿಂಥಾ ಸದ್ವೈಷ್ಣವರನ್ನು ತಿಳಿದು ಸೇವಿಸುತಿರು ಮಾನವಾ 13 ಪ್ರ:ಏನು ಕೊಡಲಿ ಗುರುದಕ್ಷಿಣ ಈ ಕ್ಷೋಣಿಯಿತ್ತರು ಸರಿಗಾಣೆ ನಾ ಧ್ಯಾನವ ಮಾಡುವೆ ಪ್ರತಿದಿನಾ ಬಿಂಬ ಜ್ಞಾನವ ಕೊಟ್ಟು ರಕ್ಷಿಪರನ್ನ ಉ:ಆತ್ಮಾರ್ಪಣ ಮೇವದಕ್ಷಿಣ ಸಿರಿ ನಾಥ ನಿಂದನ್ಯ ವಸ್ತುಗಳನ್ನು ಪ್ರೀತಿಸರೆಂದಿಗೂ ಧನವನ್ನು ಈ ಮ- ಹಾತ್ಮರ ಸ್ಮರಿಸುತಲಿರು ಮುನ್ನ 14 ಕ್ಷೇತ್ರ ಕಾರ್ಪರದೊಳಗಿರುವಂಥ ಲಕ್ಷ್ಮಿ ಯುಕ್ತ ನರಸಿಂಹನೊಲಿಸುವಂಥ ಸ್ತೋತ್ರ ಮಾಲಿಕೆಯನ್ನು ಪಠಿಸುತ್ತ
--------------
ಕಾರ್ಪರ ನರಹರಿದಾಸರು
ಮಾಮವ ಯತಿಕುಲೋತ್ತುಂಗ ಪಶ್ರೀಮನೋಹರ ರಘು - ರಾಮ ಪದದ್ವಯತಾಮರಸ- ಯುಗ-ಭೃಂಗಅ.ಪಭರ್ಜಿತ ದೋಷತರಂಗ1ಸಾಧಿತ ಹರಿಮತ - ಭೇದಿತಪÀರಮತಛೇದಿತ - ಮಾಯಿ - ಪತಂಗ 2ತೋಷಿತಯದುವರ - ಪೋಷಿತದ್ವಿಜಕುಲದೂೀಷಿತ - ದುರ್ಜನ - ಸಂಘ 3ಮೋದಿತಸುಜನಾ - ರಾಧಿತ ಸುರಗಣಾ -ಸಾದಿತ ಶ್ರೀಹರಿಯಂಗ 4ದಾತಗುರುಜಗ- ನ್ನಾಥವಿಠಲಪದಪಾಥೋದ್ಭವ ಯುಗ ಸಂಗಾ 5
--------------
ಗುರುಜಗನ್ನಾಥದಾಸರು