ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭ ಪಾದ ಪಾದ ತೀರ್ಥಕ್ಕೆ || ಜಯ || 1 ಭವ ಹರಿಸುವ ತೀರ್ಥಕ್ಕೆ | ಇಪ್ಪತ್ತೈದು ತತ್ತ್ವ ಪಾವನಗೈದ ತೀರ್ಥಕ್ಕೆ |ಕೃಪನಿಧಿ ತಾರಿಸಿದ ಗುರುಪಾದ ತೀರ್ಥಕ್ಕೆ || ಜಯ || 2 ತಾಪ ನಾಶವಗೈವ ಗುರುಪಾದ ತೀರ್ಥಕ್ಕೆ || ಜಯ || 3 ಜಗದೊಳಗಿನ ತೀರ್ಥ ಸಾಗರದೊಳಿರುತಿಹವು | ಸಾಗರಾಂತ ಸಹ ಪರಿವಾರದಿ | ಅಘವ ಹರಿಸುವದೆಂದು ಜಗದೊಡೆಯನ ಪಾದದಿ |ಬೇಗನೆ ಬಂದು ಮಡಿಯಾಗುವ ತೀರ್ಥಕ್ಕೆ || ಜಯ || 4 ಕಮಲನಯನ ಕಮಲೋದ್ಭವರೆಲ್ಲರು | ವಿಮಲಮಹ ಪದಗಳನು ಹೃದಯದಲಿ ಧರಿಸಿ | ಬ್ರಹ್ಮಾಂಡಕೋಟಿಗಳನು ಉದ್ಧರಿಸುವ ತೀರ್ಥಕ್ಕೆ |ಭೀಮಾಶಂಕರನು ಸೇವಿಸಿದ ಗುರುಪಾದ ತೀರ್ಥಕ್ಕೆ || ಜಯ5
--------------
ಭೀಮಾಶಂಕರ
ಮಾಧವ ನಮ್ಮ ಹೆ ಜ್ಜಾಜಿಯ ಚೆನ್ನಕೇಶವಾ ಪ ಸಾಜದಿ ಶರಣರಿಗೊಲಿವಾ ಸುರ ಭೂಜನು ಪರವಾಸುದೇವಾ ಅ.ಪ ಮರೆತವರಿಗೆ ಮತ್ತೂ ದೂರನು ಇವ ಮರೆಹೊಕ್ಕವರ ಮುಂದಿರುವನು ದುರಿತಗಳಡಗಿಸಿ ದಾಸರ ಪೊರೆವಾ ಪರಮದಯಾಳುವು ಪ್ರಭು ಶ್ರೀನಿಭವ 1 ನಿರ್ಜರ ಮುನಿಗಣ ಲೋಲಾ ಶೀಲಾ ಸಾರಥಿ ಲೀಲಾ ಪರ್ಜನ್ಯ ಪ್ರಭುಪರಿಪಾಲ ನೀಲಾ ದುರ್ಜನ ವಂಶಕ್ಕೆ ಕಾಲಾ 2 ನಿತ್ಯತಂದೆಯು ತಾಯಿಯು ಶ್ರೀರಂಗಾ ಸತ್ಯಸಹೋದರನು ವೆಂಕಟರಂಗಾ ಸ್ತುತ್ಯ ಬಂಧುವು ತಾನೆ ನರಸಿಂಗಾ ಇವ ಪ್ರತ್ಯಕ್ಷನೊ ಅಂತರಂಗ 3 ವೆಂಕಟವರದನೆ ಸದಯಾ ಗುರು ಸಂಕಟಹರ ಬಹುವಿನಯಾ ರಂಗ ಪಂಕಜಸಂಭವ ತನಯಾ 4 ಯಾದವ ಯದುಶೈಲಶೃಂಗಾ ಸಾಂಗ ಮಣಿ ಉತ್ತಮಾಂಗ [ವೇದ] ವೇದ್ಯನೆ ಗರುಡತುರಂಗಾ ಗಂಗಾ ಬಾದರಾಯಣ ಗೀತೋತ್ತುಂಗ 5 ಸಂಪಿಗೆ ಕಂಪಿನ ಸುಂದರ ಸಂಪೂರ್ಣ ಸಂಪತ್ಕುಮಾರ ಶ್ರೀ ಭೂನೀಳ ರಮಣ ತಂಪಿನ ಹೃದಯದ ಪ್ರಾಣಸೂತ್ರಾದಿ ಪೆಂಪಿನಗುರು ಶ್ರೀನಿವಾಸ ಕಲ್ಯಾಣ6 ರಾಘವಜಯ ಸೀತಾರಾಮಾ ಸ್ವಾಮಿ ರವಿಕುಲ ಸುಂದರಸೋಮ ಯೋಗಿ ಜನಾನಂದ ಧಾಮಾ ಪ್ರೇಮಪ್ರಿಯ ಶ್ರೀಶ್ಯಾಮ ಭಾಗವತಾನಂದಪ್ರಿಯ ಪುಣ್ಯನಾಮಾ ಚತು ಸಾಗರಾಂತ ಸಾರ್ವಭೌಮ 7 ಭಕ್ತಮಂಡಲಿ ಕಾಮಧೇನು ಜೇನು ವಿ ರಕ್ತ ಜನರ ಹೃದಯಭಾನು ಮುಕ್ತಿ ಬಯಸಿ ಬಂದೆ ನಾನು ಪ್ರೇಮಾ ಸಕ್ತಿ ಸಿದ್ದಿಯ ನೀಡು ನೀನು 8 ಸಕಲದೇವರೊಳೆಲ್ಲ ನೀನೇ ಹೆಚ್ಚು ಅಕಳಂಕ ಸಾಧುಗಳ ಸವಿಬೆಲ್ಲದಚ್ಚು ನಿಖಿಳಜೀವರೊಳೆಲ್ಲ ಪರಮಾತ್ಮನಚ್ಚು ಸುಕರದಿ ನೆನೆಯುವ ನನಗೆ ನಿನ್ನಯ ಹುಚ್ಚು 9 ಪರಿಪರಿ ಭವಸಂಸಾರಾ ಸಾರಾ ಹೊರಲಾಲೆ ದೂಡುವೆ ದೂರಾ ಪರಮಾತ್ಮಾ ಪದಗಳ ಸೇರಾ ಸಾರಿ ಕರೆಯಲು ಕರಗಳ ತೋರಾ 10 ರಾಜ ಜನಾರ್ಧನ ದಿವ್ಯಂ ದಿವ್ಯಂ ಜಾಜಿ ತುಲಸೀ ಮಾಲ ಭವ್ಯಂ ಯಾಜಿ ಕಮಂಡಲ ದ್ರವ್ಯಂ ಸ್ತವ್ಯಂ ಜನಗಾನ ಶ್ರೋತವ್ಯಂ 11 ಸರ್ವಲೋಕ ಶರಣ್ಯ ಗಣ್ಯ ಉರ್ವಿ ದೇವ ವರೇಣ್ಯ ಹಿರಣ್ಯ ಸ್ವರ್ಣ ವಿರ್ವತ ದರಶ್ಯಾಮ ಪುಣ್ಯ 12
--------------
ಶಾಮಶರ್ಮರು