ಒಟ್ಟು 67 ಕಡೆಗಳಲ್ಲಿ , 32 ದಾಸರು , 67 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಲಕ್ಷ್ಮೀ ಸ್ತುತಿಗಳು ಅಮ್ಮಾ ನೀನೆಮ್ಮ ಮನೆಯಲಿಹುದಮ್ಮಾ ನಿತ್ಯ ಪ ನಮ್ಮಯ್ಯನೊಡನೆ ಸುಭಾಷಿಸುತಲಿ ಸಮ್ಮಾನದಿ ಮುಖದಿಂ ನಲಿದಾಡುತಾ ಅ.ಪ ಮಕ್ಕಳೆಂದೆಮ್ಮ ನಲಿಸುತ ಒಲಿಸುತ ಸಕ್ಕರೆ ಸಮಿಗುಂಮಿಗಲಹ ಮಾತುಗ ಳಕ್ಕರದಾಡುತ ಶುಭಸಂಪದಗಳ ನಕ್ರೂರಾರ್ಚಿತೆ ಕೊಡುತ ಮೋದದಿಂ 1 ನೀನಿರುವ ಮನೆಯು ಶೋಭಿಸುತಿಹುದು ತಾನೇತಾ ಮಂಗಳ ನೆಲೆಸಿಹುದು ಸಾನುರಾಗದಿಂ ಸರ್ವರ ಜನನಿಯೆ ನಾನಿನ್ನಾದರದ ಪ್ರೇಮಸುಪುತ್ರನು 2 ನಿತ್ಯಾರಾಧನೆಗನುಕೂಲಗಳಂ ಸತ್ಯಧರ್ಮಗಳ ಬಿಡದಾಚರಿಪುದ ಸ್ತುತ್ಪತದಿ ಸಮಾರಾಧನ ವೆಸಗುನವ ಅತ್ಯಾನಂದದ ಸೌಭಾಗ್ಯವಿತ್ತು 3 ಸವಿ ಸವಿಭಕ್ಷ್ಯಗಳನುಗೊಳಿಸುತ್ತ ಸುವಿಮಲ ಮಂಗಲ ದ್ರವ್ಯಸುಪುಷ್ಪವ ಸುವಾಸಿನಿಯರಿಗೂ ಸದಭಕ್ತರಿಗುಂ ಸುವರ್ಣಭಾಜನದೀಯುವುದಿತ್ತು 4 ಹಾಲು ಹಣ್ಣು ಮಧು ಮಧುರದ ಮನೆಯಂ ಶ್ರೀಯೋಗಗಾನ ಧ್ಯಾನದ ನೆಲೆಯ ಬಾಲರ ಲೀಲೆಯ ಲಾಲನ ಪಾಲನ ಕಾಲವೆಲ್ಲ ಸೊಗನಗೆ ಮೊಗನೆರೆಯಲಿ 5 ಭೃಗುಸುತೆ ಕ್ಷೀರಸಾಗರಜಾತೆ ಭಗವತಿ ಭಾಗ್ಯದಾತೆ ಅಮೃತ ಮಂಗಳಸುಂದರಿ ಚಂದ್ರಸಹೋದರಿ ಅಗಲದೆ ಹರಿವಕ್ಷಸ್ಥಲಸ್ಥಿತೇ 6 ಸುವರ್ಣವರ್ಣಿ ಕಮಲಸುಚರಣೆ ಭುವಿಸುರ ಪೂಜಿತೆ ಕಲ್ಪಲತೆ ಭವ ಭವಹಾರಿಣೆ ಭಕ್ತೊದ್ಧಾರಿಣೆ ದಿವಿರಾಜವರದೆ 7 ಶ್ರೀಕರ ಸಾತ್ವಿಕ ಸುಲಲಿತರಿಂದ ನಾಕಿಗರೆಂಬೊ ಬಂಧುಗಳೊಡನೆ ಜೋಕೆಯ ಮಕ್ಕಳ ವಿವಾಹಗೈದು ಸಾಕಾರ ಸಂಸಾರ ಸುಖನಿಧಿ ಎನಿಸು 8 ಚಪ್ಪರ ತೋರಣ ಮೇಲ್ಕಟ್ಟುಗಳಿಂ ದೊಪ್ಪುವ ಬಗೆಬಗೆ ರಂಗವಲಿಗಳಿಂ ದಿಪ್ಪಾಸಾಗರ ಮಂಗಳ ವಾದ್ಯಂಗ ಳಪ್ಪ ಸದೃಹವ ಮಾಡುತ ಮಮತೆಯಿಂ9 ಅಪ್ರತಿಮ ರತ್ನಪೀಠವನಿಟ್ಟು ತುಪ್ಪದ ನಂದಾದೀವಿಗೆ ಹಚ್ಚಿ ಅಪ್ರಮೇಯನೋಡನಿಪ್ಪ ನಿನ್ನ ಸುಪ್ರೀತಿಯೊಳಾಂ ಪೂಜಿಪುದೀಯತ 10 ಪರಿಮಳ ತೈಲದಭ್ಯಂಜನದಿಂ ಸುರಭೀತೊಯ ಸ್ನಾವನಗೈದು ಹರಿದ್ರಾಕುಂಕುಮ ರತ್ನ ಕಿರೀಟವು ಸರಪೀತಾಂಬರ ಕಮಲವ ಧರಿಸಿ 11 ನರುಗುಂಪಿನ ಶ್ರೀಗಂಧದ ಲೇಪ ಪರಿಪರಿ ಘಮ ಘಮ ಸುಗಂಧ ಧೂಪ ಪರಮ ಪ್ರಕಾಶದ ಮಂಗಳ ದೀಪ ಸಿರಿಹರಿ ನಿಮ್ಮಯ ದಿವ್ಯ ಸ್ವರೂಪ 12 ಬಗೆ ಬಗೆ ಭಕ್ಷ್ಯವು ಕ್ಷೀರಾಜ್ಯಗಳಂ ಹಗಲಿರುಳುಂ ಫಲತಾಂಬೂಲಗಳಂ ನಿಗಮ ಸ್ತುತಿಕೈಗೊಳ್ಳುತ ಪಿಯೆ ನೀ ನಗಲದೆ ಸವಿಯುತ ಸಂತೋಷದಿಂದ 13 ಜಯ ಜಯ ಕರ್ಪೂರಾರತಿಮಾತೆ ನಯದಿಂ ಕುಸುಮಾಂಜಲಿಯಖ್ಯಾತೆ ದಯೆಯಿಂ ಭಾವಭಯ ಹರಿಸಾಪೂತೆ ಜಯ ಜಯ ಶ್ರೀಕೇಶವ ಸಂಪ್ರೀತೆ 14 ವಿಧಿರಮಾತೇ ಶ್ರೋಣಿತ ಚರಿತೆ ಬುಧಜನಪಾಲೆ ಕೃಪಾಲಪಾಲೆ ಮುದದಿಂ ಪಾಲಿಸು ಬಾಳಿನಲಿಡುತೆ ಹೃದಯನ್ನುತೆ ಜಾಜೀಶ ಸಹಿತೆ 15 ಅಗಣಿತ ಸುಗುಣೆ ಕರುಣಾಭರಣೆ ಜಗದೋದ್ಧಾರೆ ಜಯಜಯತಾರೆ ಯುಗಪದಕೀಗಲೆ ಮುಡಿಯಿಟ್ಟಿರುವೆ ಮಗುವಾದೆನ್ನಂ ಮಡಿಲೊಳಗಿಡು ನೀಂ 16
--------------
ಶಾಮಶರ್ಮರು
2. ಶನೀಶ್ವರ ದಂಡಕ ಮಾಸ ಮಾನಿನಿ ಒಡಲು ಹಿಂಡು ನೆಟ್ಟನೆ ಹಗೇವದಲ್ಲಿದ್ದ ನಿಜಧಾನ್ಯ ಪಟ್ಟೆಂದು ಚಲಿಪುದು ಪರಿಪರಿಯ ವಸನಗಳು ಇಟ್ಟಲ್ಲಿ ನೆಲೆಸಿಹವಾಗಿಕಾಣಿಸದು ಅಟ್ಟೀವಹುಲಿಕರಡಿಉರಿಬಿಸಿಲು ಘನವಾಗಿ ಮಟ್ಟ ಮಧ್ಯಾಹ್ನದಲಿ ನೀರಡಿಸಿ ಕುಳಿತಿರಲು ಆರಿ[ಹ] ರೈ[ಕಾ]ವರಿಲ್ಲೆಂದು ಸಾರಸಂ [ಬಡುತ] ಕಾಡಿ [ಮೊರೆ]ಯಿಡೆ ನಿನ್ನ ಮೋಡಿ [ಮೆರೆವುದು] ಜರ್ಝರಿ ಭೂತ[ಂಗಳೆಲ್ಲಂ] ಬಿಟ್ಟು ಈ ದಂಡಕಂ ಹನ್ನೊಂದು ಬಾರಿ ಶನಿವಾರವೈದರಲಿ ಪಠಿಪರ್ಗೆ ಹನ್ನೊಂದನೆ ರಾಶಿಯೊಳಿರ್ದ ಫಲವನಿತ್ತು ಚೆಲುವ ವೇಲಾಪುರದ ವೈಕುಂಠ ವಿಠಲನ ಭಕ್ತನೆಂದೆನಿಸಿ ನಿನ್ನ ಪೆತ್ತ ಮಾತೆಯ ಪೆಸರನೆನಿತ ಧನ್ಯರಂ ಮಾಡಿಸದೆ ಅನ್ಯಾಯ[ಹಂ] ಕಾರಗಳಿಗಂಜಿ ನೀ ಬಿಡದೆ ನಿನ್ನ ಮನಬಂದ ರೀತಿಯಲಿ ಬಾಧಿಸದೈಯಾ ಸನ್ಮುನಿವಂದ್ಯ ಸರ್ವೇಶ್ವರಾನಂದ ಸಂಚಾರಿರವಿಸೂನು ಯಮ ಸಹೋದರ ವೀರಧರ್ಮ ಪರಿಪಾಲನೆ ಶನೈಶ್ವರ ಮಹಾರಾಯನೆ ತ್ರಾಹಿ ತ್ರಾಹಿ ನಮಸ್ತೆ ನಮಸ್ತೆ ನಮಃ ಶ್ರೀ ಕೃಷ್ಣಾರ್ಪಣಮಸ್ತುಃ
--------------
ಬೇಲೂರು ವೈಕುಂಠದಾಸರು
ಅಂಬಾ ಮಹೇಶ್ವರ ಮನಮೋಹಿನಿ ಪ ರಮಾವಿನುತ ಹರಿಸಹೋದರೀ ನಮಾಮಿ ಶಂಕರೀ ಲೋಕೇಶ್ವರೀ 1 ಮಾರವೈರಿರಾಣಿ ನೀರಜಾತಪಾಣಿ ಶಾರದೇ ಶರ್ವಾಣಿ ಗೌರಿ ಕಲ್ಯಾಣಿ ಸಾರ ಮಧುರವಾಣಿ ನಾರಿ ಭುಜಗವೇಣಿ ಘೋರದೈತ್ಯ ಸಂಹಾರಿಣಿ ದೇವಿ ರುದ್ರಾಣಿ 2 ಈಶ ಮನೋಹರೆ ಪಾಶಾಂಕುಶಧರೇ ಶ್ರೀಶಿತಿಕಂಠ ವಿಲಾಸ ವಿಹಾರೆ ಕ್ಲೇಶನಾಶಕರೇ ಭಾಸುರ ಮುಕುರೇ ಶ್ರೀಶ ಮಾಂಗಿರಿವಾಸ ತೋಷಣಚತುರೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇಂದಿರೆ ವಿಜಯೆ ಜಯಮಂಗಳಂ ಪ ಸಾರಸದಳಹಿತೆ ಸಾರಸಮಹಿತೆ ಮಂಗಳಂ1 ಇಂದು ಸುಮಾಕರೆ ಸಹೋದರಿ ಸುಂದರ ಕಬರಿ ಮಂಗಳಂ 2 ರಾಜರಾಜಾರ್ಚಿತೆ ರಾಜಮುಖಾಂಚಿತೆ ರಾಜಗೃಹಾರ್ಚಿತೆ ರಾಜಿತ ವನಿತೆ ಮಂಗಳಂ 3 ಮಾನವ ವಂದಿತೆ ಧೇನುನಗರ ಹರಿಮಾನಿನಿ ಜನನಿ ಮಂಗಳಂ 4
--------------
ಬೇಟೆರಾಯ ದೀಕ್ಷಿತರು
ಎನಗೊಬ್ಬರು ಇಲ್ಲಾ ನೋಡಿ ಸಿರಿನಲ್ಲ ಪ ಮನದಿ ಯೋಚಿಸಲು ತಂದೆ ತಾಯಿಸತಿ ತನಯ ಸಹೋದರ ಮಿತ್ರರೆಂಬುವರು ಅ.ಪ ಒಬ್ಬರಾದರೂ ಇವರಲಿ ಇದ್ದರೆ ಹಬ್ಬವಾಗಿ ಸಂತೋಷ ಪುಟ್ಟುವುದು ತಬ್ಬಲಿಯಾದೆನು ಸಂಸ್ಮರಣವೆಂಬ ಹೆಬ್ಬುಲಿಯಕೈಗೆ ಸಿಕ್ಕಿರುವೆನು ನಾಂ1 ಯಾರಿಗೆ ಮೊರೆಯಿಡಲೀ ಕಷ್ಟ ಕಿವಿ- ಯಾರ ಕೇಳಿ ಪರಿಹರಿಸುವರಾರು 2 ರಾಯ ತಂದೆ ಧರ್ಮವೆ ಸೋದರರು ಸತಿ ನೋಯಿಸದಿರುವುದು ಮಿತ್ರನು ಇವರೊಳು 3 ಈ ಬಂಧುಗಳುಳ್ಳವಗೆ ನಿರುತವು ಮ- ಹಾಭಾಗ್ಯವುಯಿಹಪರ ಸೌಖ್ಯವು ನಾ ಭ್ರಾಂತಿಯೊಳೆಲ್ಲೆಲ್ಲಿ ತಿರುಗಿದರು ವೋ ಭಗವಂತ ಮಹಂತಾನಂತನೆ 4 ಹೊರಗಿನವರ ಬಾಲ್ಯದಿ ಕಾಣದೆ ಕರೆ ಗುರುರಾಮವಿಠಲ ಹೊರವೊಳಗೂನೀ ನಿರುವೆ ಕರುಣಿಸೈ ಸರ್ವವು ನೀನೆ 5
--------------
ಗುರುರಾಮವಿಠಲ
ಏನಿದು ಬಯಲ ಪಾಶ ನೋಡಿದರಿಲ್ಲಿ ಏನು ಹುರುಡುಗಾಣೆನೊ ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನ ಧ್ಯಾನವ ಕೊಡೊ ಅಭಿಮಾನದೊಡೆಯ ರಂಗ ಪ. ನೀರಬೊಬ್ಬುಳಿಯಂದದ ದೇಹವ ನೆಚ್ಚಿ ದೂರ ಹೊತ್ತೆನು ಹರಿಯೆ ಯಾರು ಎನಗೆ ಸರಿಯಿಲ್ಲೆಂಬಹಂ- ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೊ ಸದ್ಗತಿ ತೋರೊ 1 ಬಡವರಾಧಾರಿ ಕೇಳೊ ಸಂಸಾರದ ಮಡುವಿನೊಳಗೆ ಧುಮುಕಿ ಕಡೆಹಾಯಿಸೊ ಕೈಪಿಡಿದು ಕೃಪೆಯೊಳೆನ್ನ ದಡವ ಸೆÉೀರಿಸೊ ಜಗದೊಡೆಯ ಶ್ರಿರಂಗಯ್ಯ 2 ಸುತ್ತೆಲ್ಲ ಬಂಧು ಬಳಗ ನವಮಾಸದಿ ಹೊತ್ತು ಪಡೆದ ಜನನಿ ಪುತ್ರ ಸಹೋದರರ ಘಳಿಗ್ಯಗಲಲಾರದೆ ಮತ್ತೆ ಯಮನವರೊಯ್ವಾಗ ಯಾರು ಸಂಗಡ ಇಲ್ಲ 3 ಆಸೆಯೆಂಬುದು ಬಿಡದು ಈ ಭುವನದೊಳ್ ಲೇಸುಗಾಣೆನು ಹರಿಯೆ ಭಾಷೆಯ ಕೊಡು ಮುಂದೆ ಜನುಮಬಾರದ ಹಾಗೆ ಈಶಸನ್ನುತ ಹೆಳವನಕಟ್ಟೆರಂಗಯ್ಯ 4
--------------
ಹೆಳವನಕಟ್ಟೆ ಗಿರಿಯಮ್ಮ
ಕರುಣಿಸಮ್ಮಾ ತಾಯೆ ಕರುಣಿಸಮ್ಮಾ ಪ. ಕರುಣಿಸಮ್ಮಾ ಭರದಿ ವರಪ್ರಸಾದವ ತ್ವರದಿ ವರ ಶಂಕರನ ಜಾಯೆ ತ್ವರಿತದಿ ಕಾಯೆ ಅ.ಪ. ಇಷ್ಟ ಮೂರುತಿ ಶಿವನ ದಿಟ್ಟ ತೊಡೆಯಲಿ ಮೆರೆವ ದಿಟ್ಟ ರೂಪವ ತೋರೆ ದಿಟ್ಟ ಸುಂದರಿಯೆ ಪಾದ ಎನ್ನ ದಿಟ್ಟತನದಲಿ ಭಜಿಪ ಇಷ್ಟಕೊಡು ಮಾತೆ 1 ಭಜಿಪರ ಮನದಾತೆ ಸುಜನರಾಪ್ತೆಯೆ ನಿನ್ನ ಭಜಿಪ ಮನವನು ಇತ್ತು ಕಾಪಾಡು ತಾಯೆ ನಿನ್ನ ಸುಜನ ಸಂಗವನಿತ್ತು ದುರ್ಜನ ಸಂಗವ ಬಿಡಿಸಿ ಪಾದ ಭಜಿಪ ಭಾಗ್ಯವ ನೀಡೆ 2 ಭಾಗ್ಯದೇವತೆ ನೀನು ಸೌಭಾಗ್ಯ ಮಾಂಗಲ್ಯದಾ ಭಾಗ್ಯವನು ಕೊಟ್ಟು ಕಾಪಾಡು ತಾಯೆ ಕಾಯೆ ಯೋಗ ಮೂರುತಿ ಶ್ರೀ ಶ್ರೀನಿವಾಸ ಸಹೋದರಿಯೆ ಅನುರಾಗದಿಂ ಹರಿಪದವ ಭಜಿಪ ಭಾಗ್ಯವನಿತ್ತು 3
--------------
ಸರಸ್ವತಿ ಬಾಯಿ
ಕುಂದಣದ ಹಸೆಗೆ ಛಂದದಿಂದ ಬಾರೆ | ಸಿಂಧು ಕುಮಾರೆ | ಶೃಂಗಾರಮಯವಾದ ಕಂಗೊಳಿಸುವ ಬಹು ಸಹೋದರಿ 1 ಸಿಂಧುರಮಂದಗಮನೆ ಕುಂದಕುಟ್ಮಲರದನೆ ಇಂದು ಧರೆಯಲಿ ಸುರವೃಂದವಂದಿತ ಜನನಿ 2 ಕಾಮನ ಜನನಿ ಕಾಮಿತದಾಯಿನಿ ಗೋಮಿನಿರುಕ್ಮಿಣಿ ಶಾಮಸುಂದರನ ರಾಣಿ 3
--------------
ಶಾಮಸುಂದರ ವಿಠಲ
ಕೃತ್ತಿವಾಸನ ಪ್ರಿಯ ಪುತ್ರನೆ ಗುಹ ಸ- ರ್ವೋತ್ತಮ ಚಿದ್ರೂಪ ಪ ಚಿತ್ತಜ ಪ್ರತಿರೂಪಾ ಪ್ರತಾಪಾಅ.ಪ ದೀನತನದಿ ಕಡುಬೇನೆಯ ಪಡುತಲಿಹೀನಮನುಜನೆನ್ನಾ | ದಾನಿಯಾಗಿಹ ಕರುಣಾನಿಧಿ ಕೈಪಿಡಿ ಧ್ಯಾನಿಪೆ ನಾ ನಿನ್ನ ಪ್ರಸನ್ನ 1 ಸುತ್ತಮುತ್ತಿರುವ ವಿಪತ್ತುಗಳಾ ಭಯ ಮೆತ್ತಿಕೊಂಡಿದೆ ತಾನೇ ಸತ್ವಶಾಲಿಯೇ ನೀ ಕಿತ್ತೊಗೆಯದಿರೆ ಅ- ನ್ಯತ್ರ ಗತಿಯ ಕಾಣೆ ನಿನ್ನಾಣೆ 2 ಪಾಶ ಅಂಕುಶಧರ | ನಾ ಸಹೋದರ ಪಾವಂ- ಜೇಶ ಮಹಾನುಭಾವ | ದಾಸರಿಗೊದಗುವ ತ್ರಾಸವ ಕಳೆ ಸ- ರ್ವೇಶನೆ ಮಹದೇವಾ | ದೇವರ ದೇವಾ 3
--------------
ಬೆಳ್ಳೆ ದಾಸಪ್ಪಯ್ಯ
ಕೋಮಲೆ ರಮಾದೇವಿಯನ್ನ ನೋಡಬನ್ನಿರೆಕಮಲಾರಿ ಸಹೋದರಿಯನೀಗ ಬೇಡಬನ್ನಿರೆ ಪ. ಇಂದುನಿಭದ ಸುಂದರಿಯರು ಬಂದು ನೋಡಿರೆ ಈಕುಂದರದನೆ ಮಂದರೋದ್ಧರನರ್ಧಾಂಗಿಯೆ1 ಭಕ್ತಿಯಿಂದ ಭಜಿಪರಿಗೆ ಮುಕ್ತಿಕೊಡುವಳೆಶಕ್ತಿಯುಕ್ತಿಗಳನೆ ಕೊಟ್ಟು ಅರ್ತಿಮಾಳ್ಪಳೆ 2 ದಾಸಿಯಾದರೆ ಶ್ರೀಶನರಾಣಿ ಪೋಷಿಸುವಳೆಗೋಪಾಲವಿಠಲ ಘಾಸಿಮಾಡದೆ ಪೋಷಿಸೆನುವಳೆ 3
--------------
ಗೋಪಾಲದಾಸರು
ಛಲ ಮಾಡುವ ಲೀಲೆಗಳರಿನ್ನಾರನು ಕಾಣಿನೊ | ತ್ಸಲನೆಂಬೊ ನಾಮವನು ಧ್ವಜವೆತ್ತಿ ಮೆರವುವದೊ ಪ ಅತಿಶ್ರೇಷ್ಠನಾಗಿ ಕೀರ್ತಿ ಪಡೆÀದು ಪಸರಿಸಿ | ಪ್ರತಿಯಿಲ್ಲ ಎನಿಸಿಕೊಂಬೆ ನಾ | ಸತತವನು ಪರರಾಶೆ ಮಾಡದಲೆ | ಚತುರತನ ಚತುರೋಪಾಯದಿ ಬಾಳುವೆ | ಕ್ಷಿತಿಯೊಳಗೆ ಅಭಿಮಾನ ಕ್ಷಿತಿಯಾಗದಂತೆ ಸು | ಮತಿಗಳಿಂದಲಿ ಬದುಕುವೆ | ಸುತ ಸಹೋದರ ನಡುವೆ | ಅತುಳ ಬಲವಂತನೆನೆಸುವೆನೆಂದು ಇದ್ದೆನಲ್ಲನೆ 1 ಜಡದೇಹವನು ಮೆಚ್ಚಿ ಮುಪ್ಪು ದೂರೆಂತೆಂದು | ಕಡು ಸಾಹಸವ ತಾಳಿದೇ ಒಡಿಯರಾರೆನಗಿಲ್ಲ ಒಬ್ಬರಿಗೆ | ಒಡಿಯನೆಂದು ಎಡೆಎಡೆಗೆ ಪೇಳಿಕೊಂಬೆ | ಮಡಗಿ ಧನವನು ಧರ್ಮ ಕೊಡದತೀ ಕೃಪಣನಾಗಿ | ಪಡವೆ ಸಂಸಾರವೆಂಬೊ ಅಹಂಕಾರವನು ತಾಳಿ | ಎಡಹಿ ಮುಂಗಾಣದ ಅಧಮನಂತೆ ಇದ್ದೆನಲ್ಲದೆ 2 ಪುರುಷ ಪಟಾಂತ್ರದವನಾಗಿ ಎಲ್ಲ | ಧಿಕ್ಕರಿಸಿ ನಿರಾಕರಿಸುವೆ | ಜರೆದು ನಿಷ್ಕರುಣದಲಿ | ವರ ಅಭ್ಯಾಗತಿಗಳನು | ಹುರುಳಗೆಡಿಸಿ ನೋಡುವೆ | ಗುರು ಹಿರಿಯರನು ಮರುಗುವಂತೆ ಕೇಡು ನುಡಿದು ಉ | ತ್ತರ ಅನುತ್ತರನಾಡುವೆ | ಪರಿಪರಿಯ ಮಾಯದ ಶರಧಿಯೊಳು ಬಿದ್ದು ಲಜ್ಜಿ ಉರಿಯೊಳಗೆ ಪೊಕ್ಕಂತೆ ಮರುಗುತ್ತಿದ್ದನಲ್ಲವೆ 3 ಅಪರಾಧವೇನಯ್ಯಾ ವಿಪರೀತ ತೋರದೆ | ಅ | ಪರಿಮಿತ ಪರಮಹಿಮನೆ | ಉಪಕಾರಕ್ಕಪಕಾರವೊ | ನಿಪುಣತನವಿರಲಿಲ್ಲವೊ | ಸಪುತೆರಡು ಲೋಕದೊಳಗಾನೆಂದು ಇದ್ದೆನಿಲ್ಲವೊ | ವಿಪುಳ ವೈಕುಂಠ ತೊಲಗಿಸದೆ ಸುಮ್ಮನಿರಬಲ್ಲನೆ4 ಪರದೈವ ನಾನೆಂದು ಪೇಳುವರ ಗಂಡನೆ | ಸರಿಗಾಣೆ ಈ ಮಹಿಯೊಳು | ಪತಿ | ಕರಿಸಿ ನಿಜಕರವ ಪಿಡಿಯಾಡದೆ | ಪರಮೇಷ್ಠಿ ಹರಿದು ತಲ್ಲಣಿಸಿ ನೆರದು ಭೀಕರಗೊಂಬರು | ಪರಮಾಣು ರೂಪ ಭಕ್ತರ ಪರುಶ | ಸಿರಿ ವಿಜಯವಿಠ್ಠಲ ವರ ವೆಂಕಟನೆ | ಶರಣಜನ ಪರಿವಾರ5
--------------
ವಿಜಯದಾಸ
ಜನನಿ ಪಾಲಿಸೆ ಶುಭಾಂಗಿ ಸಲೆ ದಯದಿ ವಲಿಸುತಲಿ ಪಾಲಾಬ್ಧಿ ಬಾಲೆ ಶೀಲೆ ಪ ವಾರಿಜಾರೊ ಸಹೋದರಿಯೆ | ಮೂರು ಭುವನೋದ್ಧಾರಿ ಚಾರುಗಾತ್ರಿ ಶ್ರೀರಮಣಿ | ದೂರ ನೋಡದಿ ಬಾರೆ ಮನೆಗೆ 1 ದಾತೆ ಖ್ಯಾತೆ ಮಾತೆ | ಸುಜನೋಪಕಾರಿ ಪಾವನಿ ಪ್ರೀತೆ ಸದಯೆ 2 ಸ್ತೋಮವಂದಿತೆ ತ್ರಿಗುಣಮಾನಿ ಭಾಮೆ ಭಾಗ್ಯದಾಯಕಿಯೆ ಪ್ರೇಮವಾರಧಿ ಬೀರು ದಯವ 3
--------------
ಶಾಮಸುಂದರ ವಿಠಲ
ಜಯಜಯ ಜಲದುರ್ಗೆ ತ್ರಿಜಗನ್ಮಯೆ ಸದ್ಗುಣವರ್ಗೆ ಪ. ದಯಾಸಾಗರೆ ದಾರಿದ್ರ್ಯದುಃಖ ಭವ- ಭಯನಾಶಿನಿ ಮಣಿಮಯಕೃತಭೂಷಿಣಿಅ.ಪ. ಗಜವದನನ ಮಾತೆ ಸುಜನ- ವ್ರಜಸತ್ಫಲದಾತೆ ಕುಜನಭಂಜನಿ ನಿರಂಜನಿ ಶೈಲಾ- ತ್ಮಜೆ ಮಹೋಜೆ ನೀರಜದಳಲೋಚನಿ1 ಇಂದ್ರಾದ್ಯಮರನುತೆ ಪೂರ್ಣಾ ನಂದೆ ನಂದಜಾತೆ ಚಂದ್ರಾಸ್ಯೇ ಯೋಗಿವೃಂದವಂದಿತೆ ಮೃ- ಗೇಂದ್ರವಾಹಿನಿ ಮದಾಂಧರಿಪು ಮಥನಿ2 ಅಂಗಜಶತರೂಪೆ ಸದಯಾ- ಪಾಂಗೆ ಸುಪ್ರತಾಪೆ ಗಂಗಾಧರವಾಮಾಂಗಶೋಭೆ ಸಾ- ರಂಗನೇತ್ರೆ ಶ್ರೀರಂಗಸಹೋದರಿ3 ದಾಸಜನರ ಪೋಷೆ ರವಿಸಂ- ವಾಸುದೇವನ ಸ್ಮರಣಾಸಕ್ತಿಯ ಕೊಡು ಭಾಸುರಜ್ಞಾನಪ್ರಕಾಶವಿಲಾಸಿನಿ4 ಸೌಖ್ಯವು ಭಕ್ತರ್ಗೆ ಸಲಿಸಲು ಸೌಖ್ಯವು ನೀ ಭರ್ಗೆ ಲಕ್ಕುಮಿನಾರಾಯಣನ ಭಗಿನಿ ನಿ- ರ್ದುಃಖಪ್ರದಕಟಿಲಾಖ್ಯಪುರೇಶ್ವರಿ5
--------------
ತುಪಾಕಿ ವೆಂಕಟರಮಣಾಚಾರ್ಯ
ತೊರವಿ ನರಹರಿ ಸ್ತೋತ್ರ ಹರಿಯು ನಿಂದಿಹ ನೋಡೀ | ಭೂತಳದಿ ತೊರವಿಲಿಹರಿಯು ಇಂದಿರೆಗೂಡಿ | ಒಡವೆರೆಸಿ ಸರ್ವದಶರಣ ಜನರೊಡನಾಡೀ | ಸುಖವೀವ ನೋಡೀ ಪ ಹರಿಯೆ ಪರನೆಂಧ್ಹೇಳ್ಪ ಬಾಲಕೆದುರುಳ ಕಾಶ್ಯಪು ಪರಿಪರೀಯಲಿಕರ ಕೆರೆಯ ಗೊಡಲಾಗ ನರಹರಿತರುಳನುದ್ಧರ ಗೈದ ಶ್ರೀಹರಿ ಅ.ಪ. ಉದರ ಪೋಷಕ ಬೋಧಾ ಗುರುಶಂಡಮರ್ಕರು ಮುದದಿ ತಿಳುಹಲ ಗಾಧ | ಸರಿಸುತ್ತ ದೂರದಿಹದನ ಪೇಳಿದ ವೇದ | ಪ್ರತಿಪಾದ್ಯ ಶ್ರೀಹರಿವಿಧ ವಿಧವು ಕಾರ್ಯಗಾಧ | ಸೃಷ್ಠಿ ಲಯ ಮೊದಲಾದಅದುಭೂತವು ಎನೆ ಕಾರ್ಯ ಬಹಳವಗೈದು ಲೀಲೆಯ ತೋರಿ ಜಗದೊಳುಮುದವ ಬೀರುತ ಸಾಧು ಸಜ್ಜನಮೋದ ಬಡಿಸುವೆ ನೆಂದು ಪೇಳಿದ 1 ಕರಿಯಪದತಳ ತುಳಸೀ | ಪ್ರಹ್ಲಾದ ಬಾಲನಹಿರಿದು ಶರಧಿಯೊಳಿರಿಸೀ | ಮತ್ತವನು ಉಳಿದಿರೆಧರೆಯ ಗುಹೆಯೊಳಗಿರಿಸೀ | ಮೇಲ್ಕಿಲೆಯ ಮುಚ್ಚಲುಮರಳಿ ಬಂದನು ಜೀವಿಸೀ | ಹರಿಯ ವಿಶ್ವಾಸೀ ತರಳನಿಗೆ ಅಹಿಯಿಂದ ಕಚ್ಚಿಸಿಕರುಣಿ ಮಾತೆಯು ವಿಷವನೂಡಿಸೆಗರಸಹೋದರಿ ಪೊರೆಯಲವನನುತರಳನಿಂಧ್ಹರಿವರನುಯೆಂದ 2 ಬಂದ ಚಿಮ್ಮಲಿಗಿಂದ | ಭಕುತಂಗೆ ಪೇಳುತನಂದ ಹುಲ್ಲೆಸೆಯಂದ | ಅದು ಹತ್ತಿ ಉಳಿಯಲುನಿಂದಿಹೆ ತಾ ನಲ್ಲೆಂದ | ಅದರಂತೆ ಗೈಯಲುನಿಂದ ತೋರವಿಲಿ ಛಂದ | ಹರಿಯು ಬಹು ಆನಂದನಂದ ನಂದನನಾದ ಗುರು ಗೋ-ವಿಂದ ವಿಠಲನ್ನಕೇಸರಿಯುಚಂದದಿಂ ದೂವ್ರ್ಯಾಸ ಪೂಜಿತನಂದ ಕಂದ ಮುಕುಂದ ಶ್ರೀಹರಿ 3
--------------
ಗುರುಗೋವಿಂದವಿಠಲರು
ದಶವಿಧ ಬ್ರಹ್ಮರ ಮನೆಯಲಿ ಭಿಕ್ಷವ ಕೊಳುತಿಹ ಅವಧೂತದಶವಿಧ ಬ್ರಹ್ಮರ ವಿವರವನೀಗಲೆ ಪೇಳುವೆ ಪ್ರಖ್ಯಾತ ಪ ಸತ್ಯವು ಶೌಚವು ಸಮಸ್ತ ಬ್ರಹ್ಮವು ಸರ್ವದಿ ದಯವಿಟ್ಟಿಹನುನಿತ್ಯವು ತತ್ವವು ಈತನು ಬ್ರಾಹ್ಮಣರೊಳಗೆ ಬ್ರಾಹ್ಮಣನು 1 ಮಾಯೆಯು ಇಲ್ಲವು ಸ್ನಾನಕರ್ಮದಲಿ ದೇವಗೋವು ಪ್ರಿಯನುಆಯುಧದಿಂ ರಣ ಜಯಿಸುವನೀತನು ಬ್ರಾಹ್ಮಣ ಕ್ಷತ್ರಿಯನು2 ಸಿದ್ಧವು ಕರ್ಮದಿ ದೇವಗೋವುಗಳ ಪೂಜಿಸುತಿಹನೀತಉದ್ದಿಮೆ ಮಾಡುವ ನಾನಾ ಬ್ರಹ್ಮರೊಳು ವೈಶ್ಯನೆ ಇವನೀತ 3 ಚಲ್ಲಣ ಹಾಕಿಯೆ ಮಿಣಿನೊಗ ಹೊತ್ತಿಹನೀತಎಲ್ಲ ಕೃಷಿಯ ವ್ಯವಹಾರವನು ಮಾಡುವ ಬ್ರಾಹ್ಮಣರೊಳು ಇವ ಶೂದ್ರ 4 ಹಲಬರು ಇಹೆವೆಂದು ಸ್ವಯಂಪಾಕಕೆತ್ತುವ ಮಾಡುತ ಬಹುಜಾಲಆಚಾರದ ಸೋಗಿನಲಿ ಹೊರಗುಂಬುವರು ಬ್ರಾಹ್ಮಣಮಾರ್ಜಾಲ 5 ಎಡಗೈ ಅರಿಯನು ಬಲಗೈ ಅರಿಯನು ನುಡಿವನು ಬಿರುಮಾತಉಡುವನು ಹಬ್ಬಕೆ ಧೋತ್ರವ ಬ್ರಾಹ್ಮಣರೊಳಿವನೀಗ ಕುರುಬ 6 ಚೋರರ ಕೂಡಿಯೆ ಪಾಲನೆಕೊಂಬನು ಮಾಡುತ ಬಲು ಘಾತಆರಾದರನು ಅರಿಯನು ಬ್ರಾಹ್ಮಣರೊಳವ ಕಿರಾತ 7 ಕಾಣನು ಭೇದವ ತಂದೆ-ತಾಯಿಯಲಿ ಜೀವರುಗಳ ನೋಡಪ್ರಾಣವ ಕೊಂಬನು ಬ್ರಹ್ಮೆಂತೆನ್ನದೆ ಬ್ರಾಹ್ಮಣರೊಳಿವ ಕಟುಕಾ 8 ಬಗೆ ಬಗೆ ನಾಮವು ನಿರಿವುಡಿಧೋತ್ರವು ಸಂಧ್ಯಾಧಿಗಳವ ದೃಶ್ಯಸೊಗಸನೆ ಮಾಡಿಯೆ ಕಣ್ಣನೆ ಹಾರಿಪ ಬ್ರಾಹ್ಮಣರೊಳಿವ ವೇಶ್ಯಾ9 ಸಹೋದರಿ ರಜಕೀಪರಿಭಾಳಾಮಾಯಾದಿ ಸ್ವಪಚಳ ಹೋಗುವ ಬ್ರಾಹ್ಮಣರೊಳಿವ ಚಂಡಾಲ10 ಪರಿ ದಶವಿಧ ಬ್ರಹ್ಮರುಗಳಲಿ ಭಿಕ್ಷೆಯ ಬೇಡುತಭೂಪ ಚಿದಾನಂದ ಅವಧೂತ ಸದ್ಗುರು ಮನವೊಪ್ಪಿಯೆ ಉಂಬ 11
--------------
ಚಿದಾನಂದ ಅವಧೂತರು