ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯಯ್ಯ ರಘುನಾಥ ಧೀನಜನೋದ್ದಾರಿ ಪ ಕೇವಲ ಪತಿತ ಪಾಮರ ನಾನು ಕೇವಲ ಪಾವನ ಮೂರುತಿ ನೀನು ಕೇವಲ ಘನ ಅಪರಾಧಿಯು ನಾನು ದೇವನೀ ಕರುಣಾ ಸಾಗರ 1 ಭಾವ ಭಕ್ತಿಯ ಕೀಲವ ನರಿಯೇ ವಿವೇಕ ಮತಿ ನೀ ನೀಡುವ ಧೊರೆಯೇ ಆವಾಗ ವಿಷಯಾ ಸಕ್ತನು ಹರಿಯೇ ಕಾದ ದೈವನು ನೀನೈ 2 ನತ ನಾದೇ ತರಳನ ಕುಂದಾಲಿಸದಿರು ತಂದೇ ಗುರು ಮಹಿಪತಿ ಪ್ರಭು ನಮೋಯಂದೇ ಶರಣಾಗತ ಸಹಕಾರೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶರಣು ಹರ ಸುಂದರ ಶಂಕರ | ಹೊರೆಯೋ ನಾ ನಿಮ್ಮ ಬಾಲನು ಪ ಪತಿ - ಧರ | ಸರ್ವ ಜನರ ಸಹಕಾರೀ || ಅಘ ಕುಲಿಶ ನೆ | ಪರ್ವತ ಸುತೆ ಮನೋಹಾರಿ 1 ಭವ ಭ್ರಮ | ಪಂಚಾಕ್ಷರ ಸುಖದಾತಾ || ವಂಚನಿಲ್ಲವದರ ವಾಂಛಿತ ಪೂರಿತ | ಅಂಚೆ ಗಮನೆ ಸನ್ಮತಾ 2 ಮಹಿತಳ ವ್ಯಾಪಕ ಮಹಿಮನು - ಪಮ್ಯನೆ | ಮಹಿಪತಿ ನಂದನ ಪ್ರಭೋ | ಅಹಿಯಾ ಭರಣನೆ ಅಹವರಾನಳವಿದು | ವಿಹಿತಾಂಬಕ ತೃಯ ಶಂಭೋ || 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಗಿರೀಶಾ ನಮೋ ಮಹಾದೇವಾ ನಾಗ ಚರ್ಮಾಂಬರ ಸದಾಶಿವ ನಾಗ ಭೂಷಣ ದೇವನೆ ಪ ನೀಲ ಲೋಹಿತ ನಿರುಪಮಚರಿತಾ | ಬಾಲಚಂದ್ರನ ವೆತಾಳಿಲಿಟ್ಟಿ ಹಿಮಾಲಯತ್ಮಜಾ ಲಾಲನಾ ಭಾಲಲೋಚನ ಭಕ್ತರ ಪ್ರೀಯಾ | ನೀಲ ಗ್ರೀವಕ | ಪಾಲಿಮೂಲೋಕ ಪಾಲನಾ 1 ಗಮನ | ಭಂಗ ಮಾಡಿದಾ | ತುಂಗಮುನಿ ಮನೋ ಸಂಗನೇ | ಮಂಗಳಾತ್ಮಕ ಮಹಿಮ ಅಪಾರಾ | ಹಿಂಗ ದಂತರಂಗಲ್ಯಾಡುತಾ ಸಂಗರಹಿತ ಸಿತಾಂಗನೇ 2 ಕರುಣಾಸಿಂಧು ಕೈಲಾಸ ವಾಸೀ | ಧರಣೀಯೊಳಗ ಬೀರುವೇ || ಗುರು ಮಹಿಪತಿ - ಸುತ ಸಹಕಾರೀ | ಹರಹರಾಯನೇ ಹಾರಿಸಿ ಕಲುಷವ| ಪರಗತಿಯನೀ ತೋರುವೇ || 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು