ಒಟ್ಟು 61 ಕಡೆಗಳಲ್ಲಿ , 29 ದಾಸರು , 55 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೆಲಿಯಬಲ್ಲವರಾರು ಮೂಜಗದಿ ಪಣೆಯ ಬರಹ ಗೆಲಿಯಬಲ್ಲವರಾರು ಮೂಜಗದಿ ಪ ಗೆಲಿಯಬಲ್ಲವರಾರು ಮೂಜಗದೊಳಗೆ ಬಲ್ಲಿದರೆಂಬರೆಲ್ಲರು ಜಲಜಪೀಠನ ಲಿಪಿಗೆ ಸಿಲ್ಕಿ ತೊಳಲಿ ಬಲಳಿದರ್ಹಲವು ಪರಿಯಲಿ ಅ.ಪ ಒಂದೇ ಧರ್ಮದಿಗೂಡಿ ತಾ ನಡೆದ ವಿಕ್ರಮನೆಂಬುವ ಒಂದೆ ಕೊಡೆಲಿಡೀಭುವನವಾಳಿದ ಸದ್ಧರ್ಮ ತನದಿಂ ದೊಂದೆ ಆ ಸುಮರೂಪ ಪ್ರಜರ ಪಾಲಿಸಿದ ಉದ್ದಂಡನೆನಿಸಿದ ಒಂದು ಪಾಪಾಚರಣೆಗೈಯದೆ ಒಂದು ಬಿಡಿದಖಿಲ್ವಿದ್ಯವರಿದ ಒಂದು ಅರಿಯದೆ ತನ್ನ ಕೈಕಾಲು ಒಂದೇ ಮಾತಿಗೆ ಕಳೆದುಕೊಂಡ 1 ಎರಡುಹೊತ್ತು ಸತ್ಯಮಂ ಬಿಡದ ಸುಚಿಂತದಿರುವ ಎರಡನೇ ಗುಣ ಸ್ವಪ್ನದರಿಯದ ನಳಚಕ್ರವರ್ತಿ ಎರಡು ತಿಳಿಯದೆ ಜೂಜನಾಡಿದ ಮಹವಿಪಿನಕೈದಿದ ಎರಡು ಮಕ್ಕಳ ವನದಿ ಅಗಲಿದ ಎರಡನರಿಯದೆ ಮಲಗಿದರಸಿಯ ಎರಡನೆಬಗೆದಡವಿಯಲಿ ಬಿಟ್ಟು ಎರಡನೇರಾಯನಶ್ವ ತಿರುವಿದ 2 ಮೂರು ಜಗ ಅರೆಲವದಿ ತಿರುಗುವ ದಿನದಿನವುಬಿಡದೆ ಮೂರುಮೂರ್ತಿದರ್ಶನವ ಪಡೆಯುವ ಆ ಪರಮಪಾವನ ಮೂರು ಕಾಲದ ಜ್ಞಾನ ಬಲ್ಲವ ನಾರದನೆಂಬುವ ಮೂರುಮಂದಿ ಶಕ್ತಿಯರಿಗೆ ಮೂರು ಬಟ್ಟೆಯ ಸುದ್ದಿ ಪೇಳಿ ಮೂರು ಮೂರ್ತಿಗಳುಪಾಯನರಿಯದೆ ಮೂರಿಪ್ಪತ್ತು ಮಕ್ಕಳ್ಹಡದ 3 ನಾಲ್ಕುಯುಗ ಪ್ರಮಾಣಗಳ ತಿಳಿದ ಬ್ರಹ್ಮನುಬಿಡದೆ ನಾಲ್ಕುವೇದಗಳ್ಹಸ್ತದೋಳ್ಪಿಡಿದು ವಿಧವಿಧದಿ ಎಂಭತ್ತು ನಾಲ್ಕುಲಕ್ಷಜೀವರಾಶಿಗಳ ಬರಿದೆ ಉತ್ಪತ್ತಿಗೈದು ನಾಲ್ಕುಭುಜನ ಸುರನೆಂದೆನಿಸಿ ನಾಲ್ಕು ವಿಧ ಮತಿವಂತನಾದವ ನಾಲ್ಕು ಒಂದು ಮುಖ ಮೊದಲಿಗಿರ್ದನು ನಾಲ್ಕೆ ಮುಖದವನೆನಿಸಿಕೊಂಡು 4 ಐದುಬಾಣನಪಿತನಸಖನಾದ ಉರಿನೇತ್ರ ಬಿಟ್ಟು ಐದುಬಾಣನ ಭಸ್ಮ ಮಾಡಿದ ಅಪಾರ ಶಂಭೋ ಐದು ಒಂದು ಮುಖದವನ ತಾ ಪಡೆದ ಹರಿಕರುಣದಿಂದ ಐದು ಒಂದು ಮುಖದವನಿಂ ತಾರಕ ನೈದುವಂದುದಲ್ಲೆ ಸೀಳಿಸಿ ದೈದುತತ್ವಕಾಲಯೆನಿಸಿದ ಐದುಮುಖಸ್ಮಶಾನ ಸೇರಿದ 5 ಆರು ಎರಡೈಶ್ವರ್ಯಗಳಲೊಳ ವೈಕುಂಠನಾಯಕ ಆರು ಎಂಟುಲೋಕಗಳ ಪರಿಪಾಲ ಬಿಡದೇಳು ಇಪ್ಪತ್ತು ಆರುಕೋಟಿ ಅಮರಾದಿಗಳ ಮೂಲ ಮಹಮಂತ್ರ ಜಾಲ ಆರುನಾಲ್ಕು ಭುಜನ ಮೊರೆ ಕೇ ಳಾರುನಾಲ್ಕು ಶಿರನ ವಧಿಸಿದ ಆರುನಾಲ್ಕರಗಧಿಕನೆನಿಸಿ ಆರುನಾಲ್ಕವತಾರ ತಾಳಿದ 6 ಆರಿಗಾದರು ಬಿಡದೀ ಬರವಣಿಗೆ ಬಿದ್ದಂತೆ ಫಲಿಸಿತು ತೀರಲಿಲ್ಲದಂತಂಥ ಹಿರಿಯರಿಗೆ ಸಾಧ್ಯದಪ್ಪಿ ಮಹ ಘೋರ ಬಡಿಸಿತು ಸರ್ವ ಶಕ್ತರಿಗೆ ಬ್ರಹ್ಮನಸುಡಗಿ ವಾರಿಜನು ಬರೆದ ಬರೆಹ ಮೀರಿ ನಡೆದೇನೆಂದರಿನ್ನು ಸಾರಮೋಕ್ಷಕ್ಕಧಿಪ ನಮ್ಮ ಧೀರಪ್ರಭು ಶ್ರೀರಾಮ ಬಲ್ಲ 7
--------------
ರಾಮದಾಸರು
ಆತ್ಮನಿವೇದನೆ ಮನವೇ ನಿನ್ನಯ ನಿಜಮೂಲ ನೀನೋಡು ಸಮರಸವನೆಗೂಡು || ಚಾಲ || ವಿಷಯವಾಸನೆಗಳ ನಿಶಿದು ಹೋಗಲಿ ಕುಳ ಅಸಮ ಸಾಹಸಿಯಾಗಿ ನಿಜಸುಖದೊಳಗೆ ಪ ಹಿಂದೆ ಬಹು ಜನ್ಮದೊಳು ನೀ ತೊಳಲಿ ವಾಸನೆಯೊಳು ಬಳಲಿ ಇಂದೆ ನೀ ಬಂದೆ ನರಜನ್ಮದಲಿ ಎಚ್ಚರು ನಿನಗಿರಲಿ ಮುಂದೆ ಸಿಕ್ಕುವ ನಿಜವಿಲ್ಲದರಲ್ಲಿ ಆ ನಿಮಿತ್ಯದಲೀ ನಿಜದೊಳತಿ ಛಂದದಿ ನಿಲ್ಲೈ 1 ಗುರುಪಾದ ಕಮಲದ ಸೇವೆಯ ಮಾಡಿ ಇಷ್ಟಾರ್ಥವ ಬೇಡಿ ದೃಢದೀ ಅದರಲ್ಲಿ ನಲಿನಲಿಹಾಡಿ ಸತ್ ಶಬ್ದವ ಗೂಡಿ ಮೂಧ್ರ್ನಿಯಲಿ ಲೋಲ್ಯಾಡಿ ದೃಢತರವದಗಿ ನಿರಂತರ 2 ಭಕ್ತಿಭಾವವನೆ ದೃಢಮಾಡು ಸದ್ಧರ್ಮವಗೂಡು ಯುಕ್ತಿಯಿಂದಲೀ ಸಾಧನೆಮಾಡು ಗುರುಪದದೊಳಗಾಡು ವಿ ರಕ್ತಿ ನಿಜವಾಗಿ ಹುರಿಯನೆ ಮಾಡು ಸತ್ಸಂಗದೊಳಾಡು ಅನುರಕ್ತನಾಗಿ ನಿಜ 3 ಕಾಷ್ಠದೊಳಗಿಂದಾ ಅಗ್ನಿಯ ಪುಟ್ಟು ಕಾಷ್ಠವನೆ ಸುಟ್ಟು ಉತ್ಕøಷ್ಟ ಚಿತ್ತವನೆ ಪುಟವಿಟ್ಟು ಜಡಭಾವನೆ ಬಿಟ್ಟು ಥಟ್ಟನೇ ಜ್ಞಾನಾಗ್ನಿ ಪುಟವಿಟ್ಟು ಕ್ಷಡ್ರಿಪುಗಳ ಸುಟ್ಟು ಸದ್ಗುರುವಿನೊಳ್ ಇಟ್ಟ ಶಾಂತಿ ನಿಜ 4
--------------
ಶಾಂತಿಬಾಯಿ
ಉದ್ಧಾರ ಮಾಡೆಯ್ಯಾ ಸಿದ್ಧೇಶ್ವರ | ಸದ್ಧರ್ಮದಲಿ ಸತತ ನೀಲ ಲೋಹಿತ ವಿಗತ ಚೈಲ ಭೂಷಿತ ಭನಿಸಿತ ಕಾಲಾರಿ ಶಿವ ದ್ರೌಣಿಂ ಶೂಲಪಾಣಿ ಹಾಲವಿಪುರವಾಸ | ಹಾಲಾ ಹಲವ ಮೆದ್ದು ತಾಳಲಾರದೆ ಕೊಂಡ ಮೇತೌಷಧವನಿತ್ತು 1 ವ್ಯಾಧ ರೂಪದಿ ರಣದಿ ಕಾದು ಪಾರ್ಥನೆ ಸೋತು ನೀ ದಯದಿ ದಿವ್ಯಾಸ್ತ್ರ ಪಾಲಿಸಿದೆಯೋ | ಸಾದರದಿ ನಾ ನಿನ್ನ ಪಾದಕೆರಗುವೆ | ಎನಗೆ ಮೋದದಿಂದಲಿ ಪಂಚಭೇದ ಜ್ಞಾನವನರುಹಿ 2 ಕಾಮಾರಿ ಸುಪವಿತ್ರ ಸೋಮಾರ್ಕ ಶಿಬಿನೇತ್ರ ಶಾಮಸುಂದರ ವಿಠಲಸ್ವಾಮಿ ಮಿತ್ರ | ಪ್ರೇಮಾಬ್ಧಿ ಕಳತ್ರ | ತಾಮರಸ ಭವಪುತ್ರ ಧವಳಗಾತ್ರ 3
--------------
ಶಾಮಸುಂದರ ವಿಠಲ
ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ ಬಿಟ್ಟರೆ ಸೃಷ್ಟಿಯೊಳು ಪಾರುಗಾಣುವುದೆಂತೂ ಪ ಇಷ್ಟದಿಂದಲೋ ಅನಿಷ್ಟದಿಂದಲೋ ನಾನೇ ಹುಟ್ಟಿಬಂದೆನೆ ದೇವ-ನಿನ್ನಿಷ್ಟದಿಂದಲ್ಲವೇ ಅ.ಪ ಬಿಂಬನೆನಿಸಿದೆ ಎನಗೆ ಪ್ರತಿಬಿಂಬ ನಾ ನಿನಗೆ ಬಿಂಬ ಪ್ರತಿಬಿಂಬಕೆ ಉಪಾಧಿಯು ನಿತ್ಯ- ವೆಂಬನ್ವಯಕೆ ಗುಣತ್ರಯಬದ್ಧವೇ ಕಾರಣ- ವೆಂಬ ಗುಣಜೀವಸ್ವರೂಪೋಪಾಧಿಯು ಬೆಂಬಲನೀನಿದ್ದೂ ಗುಣಕಾರ್ಯಕನುವಾಗಿ ಇಂಬುಕೊಡುವೆ ಫಲಭೋಗಿಸಲೀವೇ ಎಂಬನುಡಿ ಶ್ರುತಿಶಾಸ್ತ್ರಸಿದ್ಧವು ನಂಬಿಹುದು ಜಗವೆಲ್ಲ ಸತ್ಯವು ಶಂಬರಾಂತಕ ಪಿತನೆ ಎನ್ನ ಹೃದ- ಯಾಂಬರದಿ ನಿನ್ನ ಬಿಂಬ ತೋರೈ 1 ಕಾಲಕರ್ಮಾದ್ಯಷ್ಟಗುಣಗಳೆಲ್ಲವು ನಿಜ- ವೆಲ್ಲಜಡಗಳು ಮತ್ತು ಅಚೇತನಂಗಳೈ ಶೀಲ ಮೂರುತಿ ನೀ ಪರಮ ಚೇತನನಾಗಿ ಎಲ್ಲ ಕಾಲದಿ ನಿನ್ನ ನಿಯಮನಂಗಳೈ ಕಾಲಕರ್ಮಗುಣಂಗಳೇನಿಹುದೆಲ್ಲ ಫಲಪ್ರದಾನವ ಮಾಡೆ ಶಕ್ತಿ ಜಡಕೆಂತಿಹುದಯ್ಯ ಕಾಲನಾಮಕ ನೀನೆ ಸರ್ವ ಕಾಲದಲಿ ಸ್ವಾತಂತ್ರ್ಯ ನಿನ್ನದೋ ಇಲ್ಲ ಘನ ಸಮರಿಲ್ಲ ಸರ್ವಕರ್ಮ ಫಲವೆಲ್ಲ ನೀನೆ ದಾತೃವೋ 2 ಮರ್ಮವರಿಯೆನೊ ದೇವ ಧರ್ಮಭ್ರಷ್ಟನಾದೆ ಕರ್ಮಫಲಾನುಭವಮಾಡಿ ಬೆಂಡಾದೆನು ಕರ್ಮ ತಾ ಶಿಕ್ಷಿಸಲರಿಯದು ನ್ಯಾಯ ಧರ್ಮಾಧಿಪತಿ ಭೀಕರ ಫಲಕೊಟ್ಟು ಶಿಕ್ಷಿಪಂತೆ ಧರ್ಮಮೂರುತಿ ಶುದ್ಧನಿಷಿದ್ಧಕರ್ಮಂಗಳಿಗೆ ಪೂರ್ಣಫಲವಿತ್ತು ಸಮನೆಂದೆನಿಸಿರುವೆ ಕರ್ಮಮೋಚಕ ನೀನೆ ಸಕಲ ಕರ್ಮಪ್ರದನೆಂದೆನಿಸಿ ಪೂರ್ವ- ಕರ್ಮಫಲ ಭೋಗಿಸಲು ಜನ್ಮವನಿತ್ತು ಕರ್ಮಪ್ರವಹದೊಳಿಡುವೇ 3 ವಿಮುಖನಾಗಿಹೆ ಶ್ರುತಿಸ್ಮøತಿಶಾಸ್ತ್ರಧರ್ಮಕೆ ಪ್ರಮುಖನಾಗಿಹೆ ದುಷ್ಕರ್ಮ ಮಾರ್ಗದಲ್ಲಿ ಕರ್ಮಕಲಾಪದ ಧರ್ಮ ಮರ್ಮವನರಿಯೆ ಹೆಮ್ಮೆಯಿಂದಲಿ ನಾನಾ ಕರ್ಮಕೂಪದಲಿರುವೆ ಪೆರ್ಮೆಗೋಸುಗ ಅಧರ್ಮವೆಷ್ಟೋ ಮಾಡ್ದೆ ಒಮ್ಮೆಗಾದರು ಸದ್ಧರ್ಮಾಚರಿಸಲಿಲ್ಲ ಕರ್ಮ ಅಕರ್ಮ ವಿಕರ್ಮ ಪರಿಚಯವಿಲ್ಲ ಜನ್ಮಕೆ ಧರ್ಮಪುತ್ರನೆ ದ್ವಂದ್ವಕರ್ಮಸಮರ್ಪಿಸಲು ಸನ್ಮತಿಯ ಕೊಟ್ಟಿನ್ನು 4 ಬೆಟ್ಟದೊಡೆಯನೆ ಶ್ರೀ ವೇಂಕಟೇಶ ನೀ ತುಷ್ಟಿಯಾದರೆ ನಿನ್ನಿಷ್ಟದಂತೆ ಫಲವು ಸೃಷ್ಟಿಯೊಳು ಪುಟ್ಟಿಸಿ ದುಷ್ಟಕರ್ಮದ ಪಾಶ ಕಟ್ಟಿನೊಳಿಟ್ಟೆನ್ನ ಕಷ್ಟಪಡಿಸುವರೇ ಸೃಷ್ಟೀಶ ಉರಗಾದ್ರಿವಾಸ ವಿಠಲ ಎನ್ನ ನೀನಿಟ್ಟಿರುವಷ್ಟುಕಾಲ ಧಿಟ್ಟಭಕುತಿಯ ಕೊಟ್ಟು ದಿಟ್ಟ ರಕ್ಷಿಸು ಇಷ್ಟಮೂರುತಿಯೆ ಇಷ್ಟದಾಯಕನೆಂದು ನಾನಿಷ್ಟು ನುಡಿದೆನೋ ನಿನ್ನ ಎನ್ನ ಮನೋಭೀಷ್ಟೆ ಸಲಿಸೆ ನಿನ್ನಿಷ್ಟವಯ್ಯ5
--------------
ಉರಗಾದ್ರಿವಾಸವಿಠಲದಾಸರು
ಕಾಯೊನೀನೆ ಕರುಣದಿ ಪ ರಾಮರಾಮಯೆಂದು ಪೊಗಳುವನು ಮಹಾರಾಜ ಸಾರ್ವಭೌಮ ಪೂರ್ಣ ಕಾಮನೆ ದಶರಥಾವನೀಶ ಕುಮಾರ 1 ದೇವದೇವನೆ ಕೃಪಾವಲೋಕನದಿ ದೀನಜನರ ನೋಡೊ ನೀದಯಮಾಡೊ ನೀಡೋಯನ್ನದುರಿ- ಜಯಜಯ ಪ್ರಭೋ ಭಂಜನ ಜಗ ಜ್ಜೀವನ ನತಜನ ಸಂಜೀವನಸು- ಶುಭ ಕುಶೀಲವರತಾತ ಸುಪ್ರೀತ2 ಸರಿಸಿಜೋದ್ಭವಾದ್ಯಮರನಾಯಕ ಸಾಧುರಕ್ಷಸ್ಸದ್ಧರ್ಮ ಪಾಲಕ ಮನುಜವೇಷ ದುರ್ಜನ ಕಾಲ ಶರಧಿ ಸೇತು ಬಂಧನ ಕಂಜೇಕ್ಷಣ ಮಾಂ ಪಾಹಿ ರಘುವೀರ 3
--------------
ಗುರುರಾಮವಿಠಲ
ಗಣಾಧೀಶ ಗೌರೀಶ್ ವಾಗೀಶ ಶ್ರೀಶಾನ'ುಸಿ ಬೇಡುವ ಪ್ರಸಾದವನು ಜಗದೀಶಾನೆಲಸಿ ಹೃದಯದಿ ಬಂದು ನುಡಿಸು ದಯದಿಂದಾನೀ ನುಡಿಸಿದಂತೆ ನುಡಿಯುವೆ ಸ್ಪೂರ್ತಿುಂದಾ 1ದೇಹ ದೇವಾಲಯವು ದೇವರೊಳಗಿಹನುಮನದ ಗರ್ಭಾಲಯದಿ ಮಲಗಿಕೊಂಡಿಹನುನಾಲಿಗೆಯ ನಾಮಗರ್ಜನೆಯ ಬಲದಿಂದಾಮನದ ಕದ ತೆಗೆಯೆ ಕಾಣುನನು ಗೋ'ಂದಾ 2ಮನವೆ ಕಾರಣವು ಬಂಧಮೋಕ್ಷಗಳಿಗೆಮನವೆ ಕಾರಣ'ಲ್ಲಿ ಸುಖದುಃಖಗಳಿಗೆಮನಸು ಬಿಗಿ'ಡಿದ್ಹಿಡಿದು 'ಷಯಗಳ ತ್ಯಜಿಸುಮನತು ನಾಮಸ್ಮರಣೆಯೊಳು ಸದಾ ಇರಿಸು 3ಯಾವಾಗಲೂ ರಾಮ ನಿನ್ನೊಳಗೆ ಇರುವಾಭಾವದಿಂದಲಿ ಕರೆಯೆ 'ಒ' ಎಂದು ಬರುವಾದೇವರನು ನಂಬಿದರೆ ಸರ್ವದಾ ಕಾವಾಯಾವ ಅಂಜಿಕೆಯು ನಿನಗಿಲ್ಲ ತಿಳಿ ಜೀವಾ 4ನಿನ್ನೊಳಗೆ ನೀ ನಿನ್ನ ರಾಮನನು ನೋಡುನಿನ್ನ ಬೇಡಿಕೆಗಳನು ರಾಮನಲಿ ಬೇಡುಅನ್ಯರನು ಅಲಕ್ಷಿಸದೆ ಭಜನೆಯನು ಮಾಡುಪುಣ್ಯವಂತರ ಸಂಗದೊಳು ಸದಾ ಕೂಡು 5ಶ್ರವಣ ಭಕ್ತಿಯು ಬೇಕು ಮೊದಲು ಚೆನ್ನಾಗಿಶ್ರವಣವಾಗುವವರೆಗೆ ನಾದತಾನಾಗಿಭವ ಸಮುದ್ರವನು ದಾಟುವಡೆ ಸುಖವಾಗಿಶ್ರವಣವೇ ಮುಖ್ಯ ಸಾಧನವು ನಿಜವಾಗಿ 6ನಾದ ಹುಟ್ಟಿದ ಮೇಲೆ ನಾಮ ಕೀರ್ತನವುನಾಮ ಕೀರ್ತನದಿ ಅಸ್ಪಷ್ಟ ದರುಶನವುನೇಮ ಹೆಚ್ಚಾದಂತೆ ಸ್ಮರಣೆ ಶಾಶ್ವತವುಸ್ಮರಣೆಯೊಳು ಸಂಪೂರ್ಣ ವಸ್ತುದರುಶನವು 7ಅನನ್ಯ ಭಕ್ತಿಯ ಬಲವ ಬಣ್ಣಿಸುವದೇನುಕಣ್ಮುಂದೆ ಸರ್ವದಾ ಹರಿಯು ಕುಣಿಯುವನುಕಣ್ಣು ಮುಚ್ಚಣಿಕೆಯಾಟವನು ಆಡುವನುಅಣುರೇಣು ಪರಿಪೂರ್ಣನಾಗಿ ತೋರುವನು 8ಕುಣಿಯುವನು ಕುಣಿಸುವನು ನಗುತ ನಲಿಸುವನುದಣಿಯುವನು ದಣಿಸುವನು ಉಣುತ ಉಣಿಸುವನುಜನರಿಗದ್ಭುತ ಚಮತ್ಕಾರ ತೋರುವನುಕ್ಷಣ ಬಿಡದೆ ಕೆಳಗಿಳಿಯದಂತೆ ಕಾಯುವನು 9ದೇವರನು ನಂಬಿ ಕೆಡಕಾದವರು ಇಲ್ಲಜದೇವರನು ಬಿಟ್ಟು ಸುಖಹೊಂದಿದವರಿಲ್ಲಾದೇವರನು ಒಲಿಸುವೆಡೆ ಭಾವ'ರಬೇಕುಭಾವ'ಲ್ಲದ ಢೋಂಗಿನರ್ಚನೆಯು ಸಾಕು 10ಚಿನ್ನ ಬೆಳ್ಳಿಗಳ ಮಂಚಪವು ಬೇಕಿಲ್ಲಾಸಣ್ಣಕ್ಕಿ ಅನ್ನ ಪಕ್ವಾನ್ನ ಬೇಕಿಲ್ಲಮಣ್ಣು ಕುಳ್ಳಿಯೊಳು ಒಣ ಅಂಬಲಿಯು ಸಾಕುಘನ್ನ ಮ'ಮನಿಗೆ ನಿರ್ಮಲ ಭಕುತಿ ಬೇಕು 11ಶ್ರವಣ ಭಕ್ತಿಯ ದಾಟದವನು 'ಸಾಧಕ' ನುಪಾದಸೇವನದಿಂದ 'ಸಾಧು' ಆಗುವನುದಾಸ್ಯ ಭಕ್ತಿಯ ಮುಂದೆ 'ಸಿದ್ಧ' ನಾಗುವನುಸಖ್ಯಭಕ್ತಿಯ ಮುಂದೆ 'ಗುರು'ವು ಆಗುವನು 12ಭಕ್ತಿ ಮಾರ್ಗವು ಬಹಳ ಸುಲಭ ಸಾಧನವುಭಕ್ತಿ ಸರ್ವರಿಗೆ 'ಷಯದೊಳು ಪರಿಚಿತವು'ಷಯದೊಳಗಿನ ಪ್ರೀತಿ ಎಳೆದೆಳೆದು ತೆಗೆದುಪರಮಾತ್ಮನೊಳು ಇಡಲು ಭಕ್ತಿಯಾಗುವದು 13ಉಂಡದ್ದು ಶ್ರೀ ಹರಿಗೆ ನೈವೇದ್ಯವೆನ್ನುಕಂಡದ್ದು ಶ್ರೀ ಹರಿಯ ಪ್ರತಿರೂಪವೆನ್ನುಮಲಗಿದ್ದು ಶ್ರೀ ಹರಿಗೆ ಸಾಷ್ಟಾಂಗವೆನ್ನುಸುಲಭ ಪೂಜೆಯ ಮರ್ಮವೆನು ತಿಳಿದು ನೀನು 14ಸಾಲವನು ಮಾಡಿ ಹೋಳಿಗೆ ಹೊಡಿಯಬೇಡಾಜೇಲಿಗಂಜುತ ದೇಶಕಾರ್ಯ ಬಿಡಬೇಡಾಆಲಸ್ಯದಲಿ ಕಾಲವನು ಕಳಿಯಬೇಡಾಕೆಲಸದಲಿ ಕೀಳು ಮೇಲೆಂದು ಅನಬೇಡಾ 15ಸ್ವಚ್ಛ'ರಬೇಕು ಮನಬುದ್ಧಿ ದೇಹದೊಳುಅಚ್ಚುಕಟ್ಟಿರಬೇಕು ಸರ್ವಕಾರ್ಯದೊಳುಎಚ್ಚರಿರಬೇಕು ಜನಪಾತ್ರೆ ರಾತ್ರಿಯೊಳುಬಿಚ್ಚು ಮನ'ರಬೇಕು ಸ್ವಜನ 'ುತ್ರರೊಳು 16ಬಡತನವು ಬಂದಾಗ ಧೈರ್ಯ ಬಿಡಬೇಡ'ಡಿದು ನೆಂಟರ ಮನೆಯ ನೀ ಕೂಡಬೇಡದುಡಿದು ತಿನ್ನಲು ಸ್ವಲ್ಪ ಸಹ ನಾಚಬೇಡಮಡದಿ ಹುಟ್ಟಿದ ಮನೆಯ ನೀ ಸೇರಬೇಡಾ 17ಗಾಜಕಾರಣದೊಳು ' ಮುಚ್ಚುಮನ' ಬೇಕುಧರ್ಮಕಾರಣದೊಳಗೆ 'ಸ್ವಚ್ಛಮನ' ಬೇಕುಅರ್ಥಕಾರಣದೊಳಗೆ ' ಮೆಚ್ಚುಮನ'' ಬೇಕುಕಚ್ಚೆಕೈಗಳು ಸದಾ ಸ್ವಚ್ಛ'ರಬೇಕು 18ಸಂಸಾರ ಮಾಡುವಡೆ ಧನವ ಸಂಗ್ರ'ಸುಸನ್ಯಾಸಿಯಾಗುವೆಡೆ ವೈರಾಗ್ಯ ಬೆಳೆಸುಸರ್ವಕರ್ಮಗಳಲ್ಲಿ ಶ್ರೀಹರಿಯ ಸ್ಮರಿಸುಸರ್ವದಾ ಸಂತ ಸಂಗದೊಳು ಸಂಚರಿಸು19ಸಂತ ಸಂಗದೊಳು ಸಂಚರಿಸುವುದು ಸ್ನಾನಾಸಂತ ವಚನಾಮ್ರತದ ಪಾನವೇ ಸ್ನಾನಾಸಂತರನು ಸಂತೋಷಪಡಿಸುವುದು ಸ್ನಾನಾಶಾಂತಮನದಿಂ ಹರಿಯ ಚಿಂತಿಪುದ ಸ್ನಾನಾ 20ಬಾಲ್ಯದಲಿ ಬ್ರಹ್ಮಚರ್ಯದಿ ಬಲವ ಬೆಳೆಸುತಾರುಣ್ಯದಲಿ ದುಡಿದು ಧನವ ನೀ ಗಳಿಸುವೃದ್ಧಾಪ್ಯದೊಳು ಸದಾ ಶ್ರೀಹರಿಯ ಸ್ಮರಿಸುಶ್ರೀಹರಿಯ ಸ್ಮರಣೆಯೊಳು ಆಯುಷ್ಯ ಸವೆಸು 21ಮೊದಲು ನಿನ್ನ ಪ್ರಯತ್ನ ತಪ್ಪದೆಲೆ ಮಾಡುಅದು ನೀಗದಿರೆ ಮುಂದೆ ದೈವವನು ನೋಡುಮದುವೆಯಾಗುವ ಮೊದಲು ತಿಳಿತಿಳಿದು ನೋಡುದುಡಿದು ಧನ ಗಳಿಸಿ ಸುಖದಿಂದ ಬಾಳುವೆ ಮಡು 22ಧನ'ಲ್ಲದವನ ಸಂಸಾರ ಸುಖವಲ್ಲಾಮನೆಯೊಳಗೆ ನಿತ್ಯ ಕಿರಿಕಿರಿಯು ತರವಲ್ಲಾದನದಂತೆ ಹೆಣ್ಣು ನುಡಿಯುವುದು ಸರಿಯಲ್ಲಾಎಣಿಕೆುಲ್ಲದೆ ಮಕ್ಕಳಾಗುವುದು ಸಲ್ಲಾ23ನೆಂಟರೊಳು ಬಹುದಿನ ಕೆಳಗಿರಬೇಡಾ'ಫ್ರಂಟಸೀಟಿ'ನ ಮೇಲೆ ನೀ ಕೂಡಬೇಡಾಒಂಟಿಯಲಿ ಹೆಂಡತಿಯ ಬಿಟ್ಟು ಇರಬೇಡಾಗಂಟು ಒಬ್ಬರ ಕೈಗೆ ಕೊಟ್ಟು ಆಳಬೇಡಾ 24ನಿನ್ನಂತೆ ತಿಳಿ ಪರರ ಸುಖ ದುಃಖಗಳನುಅನ್ಯಥಾ ನೋಡದಿರು ಅಣ್ಣ ತಮ್ಮರನುಸರ್ವಥಾ ಸ'ಸದಿರು ಅನ್ಯಾಯಗಳನುತಿಳಿಯದೇ ಹಳಿಯದಿರು ಭಿನ್ನ ಮತಗಳನು 25ಅತಿ ಮತುಗಳು ಬೇಡ ಅತಿ ಮೌನ ಬೇಡಾಅತಿ ತಿನಸು ಬೇಡ ಅತಿ ಉಪವಾಸ ಬೇಡಾಅತಿ 'ಹಾರವು ಬೇಡ ಅತಿ 'ನಯ ಬೇಡಾಅತಿ ಉದಾರತೆ ಬೇಡ ಜೀನತನ ಬೇಡಾ 26ಭೂ'ುಂಗೆ ಭಾರವಾಗುತ ತಿರುಗಬೇಡಾಕೂಳಿಂಗೆ ಕಾಳಾಗಿ ನೀ ಕೂಡಬೇಡಸಾಲ ಸಿಗುವಾಗ ಸಂತೋಷ ಪಡಬೇಡಾಸಾಲವೇ ಶೂಲವೆಂಬುದು ಮರೆಯಬೇಡಾ 27ಹನಿಗೆ ಹನಿ ಕೂಡಿದರೆ ಹಳ್ಳದಾಗುವುದುತೆನಿಗೆ ತೆನಿ ಕೂಡಿದರೆ ರಾಶಿಯಾಗುವುದುಕ್ಷಣಬಿಡದೆ ಕಂಡಲ್ಲಿ 'ದ್ಯೆಯನು ಗಳಿಸುಕಣಬಿಡದೆ ಧನ ಧಾನ್ಯಗಳನು ಸಂಗ್ರ'ಸು 28ಮಾತು ಕೃತಿಗಳಿಗೆ ಬಲು ಮೇಳ'ರಬೇಕುನೀತಿಯೊಳು ತನ್ನ ಮನಸಾಕ್ಷಿ ಇರಬೇಕುಮಾತು ಬಲು ಸ'ುದ್ದು ಸತ್ಯ'ರಬೇಕುಸತ್ಯ'ಲ್ಲದ ಸುಳ್ಳು ಸ' ಮಾತು ಸಾಕು 29ಐಕ್ಯ'ದ್ದರೆ ಸೌಖ್ಯ ಭೇದದೊಳು ಬೇದಾಐಕ್ಯ'ದ್ದರೆ ಬಲವು ಕ್ಷಯಬೇನೆ ಭೇದಾಐಕ್ಯ'ದ್ದರೆ 'ಗ್ಗು ಭೇದದೊಳು ಕುಗ್ಗುಐಕ್ಯದಿಂದ ಸ್ವಾತಂತ್ರ್ಯ ರಥವನ್ನು ಜಗ್ಗು 30ತನ್ನ ಅಭಿಮಾನ ತನ್ನವರ ಅಭಿಮಾನತನ್ನ ಕುಲಗೋತ್ರ ಜಾತಿಯ ಸ್ವಾಭಿಮಾನತನ್ನ ಭಾಷಾರಾಷ್ಟ್ರ ಧರ್ಮಾಭಿಮಾನಮಾನವನಿಗಿರಬೇಕು ಇಲ್ಲದವ 'ಶ್ವಾನಾ' 31ತನ್ನತನ ಬಿಡಬೇಕು ತನ್ನವರಿಗಾಗಿತನ್ನವರ ಕುಲಗೋತ್ರ ಜಾತಿಗಳಿಗಾಗಿ ಕುಲಗೋತ್ರ ಜಾತಿಗಳ ತಾಯ್ನಾಡಿಗಾಗಿತಾಯ್ನಾಡು ನುಡಿಧರ್ಮ ಪರಮಾತ್ಮಗಾಗಿ 32ತನ್ನ ಉದ್ಯೋಗ ಮನಮುಟ್ಟಿ ಮಾಡುವರುಉಣಲು ಅಧಿಕಾರ ಆಮೇಲೆ ದೊರಕುವದುಉಣುವಾಗ ಶ್ರೀಹರಿಯ ಸ್ಮರಣೆ ಮಾಡುವದುಮನೆಯೊಳಗೆ ಶಿಸ್ತು ಶಾಂತಿಗಳ ಕಾಯುವದು33ಹರಿಕಥಾ ಕೀರ್ತನ ಪುರಾಣ ಪಠಿಸುವದುಸರಸ ವಾಙ್ಮಯದ ಅಭ್ಯಾಸ ಮಡುವದುತರು ಬರುವ ತನ್ನ ವ್ಯವಹಾರ ನೋಡುವದುಪರ ಪರಿಸ್ಥಿತಿಗಳನು ತೂಗಿ ನೋಡುವದು 34'ಶ್ರಾಂತಿ ಅಭ್ಯಾಸಿ ಸರಸ ಸಲ್ಲಾಪನಿಶ್ಚಿಂತೆುಂದ ನಿದ್ರೆಯು ಸೌಖ್ಯರೂಪನಿತ್ಯ ಮಾನವನ ದಿನಚರಿಯ ಈ ರೂಫನಿಶ್ರೇಯಸಕೆ ಸುಲಭ ಸಾಧನವು ಭೂಪಾ 35ಸ್ವಚ್ಛ ಹವೆ ನೀರು ವ್ಯಾಯಾಮ 'ಶ್ರಾಂತಿಸಾತ್ವಿಕ ಸಸತ್ವಾನ್ನ ಪಾನಗಳ ಪ್ರೀತಿಉಚ್ಚತಮ ಧ್ಯೇಯ ಆಚರಣೆಗಳ ರೀತಿಮೋಕ್ಷಕ್ಕೆ ಸಾಧನವು ಇಹದಿ ಸಂತೃಪ್ತಿ 36ದೇಹ ಬಿದ್ದರೆ 'ಂದೆ ಕೀರ್ತಿುರಬೇಕುಕೀರ್ತಿ ಬರುವಂಥ ಕಾರ್ಯವ ಮಾಡಬೇಕುಕಾರ್ಯದೊಳು ಕುಶಲತನ ದಕ್ಷತೆಯು ಇರಬೇಕುಫಲವು ಪರಮಾತ್ಮನಾಧೀನವೆನಬೇಕು 37ಸರ್ವದಾ ಸುಖವೆ ಇದ್ದವರು ಯಾರುಂಟುಅವರವರ ಕರ್ಮ ಫಲವೇ ಅವರ ಗಂಟುಬೆಳತು ಕತ್ತಲೆಯಂತೆ ಚಕ್ರ ಆರುಗುವದುಸುಖ ದುಃಖ ಬರುವಾಗ ಬಂದು ಹೋಗುವುದು 38ಅನುಭವದಿ ಹೆಚ್ಚು ಸಾಧನ ಬೆಳೆಯಬೇಕುಅನುಭವದ ಮಾತುಗಳು ಬಚ್ಚಿಡಲು ಬೇಕುಅನುಭವವು ಬಂತೆಂದು ಗರ್ವ ಪಡಬೇಡಾಗರ್ವದಿಂದಲಿ ಮತ್ತೆ ಕೆಳಗಿಳಿಯ ಬೇಡಾ 39ಅಡಗಿ ಅಂಬಲಿ ಅರ' ಅಂಚಡಿಯ ಕಡೆಗೆಹುಡುಗರ ಬಲಾರೋಗ್ಯ ನಡೆನುಡಿಯ ಕಡೆಗೆಕಡು ಚಾಣ್ಮೆುಂದ ನೋಡುವದು ಸತಿ ಪತಿ ಕೆಲಸಾ 40ಪತಿುಂದಲೇ ಸತಿಯು ಸತಿುಂದ ಪತಿಯುಸತಿಪತಿಯ ಪ್ರೇಮದಿಂದಾತ್ಮದುನ್ನತಿಯುಪತಿಯ ಕೋಪದಿ ಕಲ್ಲು ಆಗುವಳು ಸತಿಯುಸತಿಯ ಶಾಪದಿ ಕತ್ತೆಯಾಗುವನು ಪತಿಯು 41ಸಾ'ಗಂಜಲು ಬೇಡ ಸಾ'ಗಳಬೇಡಾಸಾವು ಅಂದರೆ ಭಯಂಕರ ತಿಳಿಯಬೇಡಾದೇಹಕ್ಕೆ ಬಾಲ್ಯ ಯೌವನ ಮುಪ್ಪಿನಂತೆದೇಹಾಂತರ ಪ್ರಾಪ್ತಿಯೇ ಮರಣಗೀತೆ 42'ದ್ಯಾರ್ಥಿ ಬಡವನಿದ್ದರೆ ಭಿಕ್ಷೆನೀಡುಅಶನಾರ್ಥಿ ಟೊಣಪನಿದ್ದರೆ ದೂರ ಮಾಡುಹಸಿವೆ ಚೆನ್ನಾಗಿ ಇದ್ದರೆ ಊಟ ಮಾಡುಹಸಿಯು ಸಾಕಷ್ಟು ಇದ್ದರೆ ಬಿತ್ತಿನೋಡು43ಶುದ್ಧ ಆಚರೆಣೆುದ್ದರೆ ಮಾತನಾಡುಬುದ್ಧಿ ಬಲು ಚುರುಕು ಇದ್ದರೆ ವಾದ ಮಡುದುಡ್ಡು ರಗಡಿದ್ದರೆ ಘಡಾಮೋಡ ಮಾಡುಜಡ್ಡು ಇದ್ದರೆ ಪಥ್ಯದುಪವಾಸ ಮಾಡು 44ಹಾಳುಹರಟೆಯ ಬಿಟ್ಟು ಶ್ರೀ ಹರಿಯ ಸ್ಮರಿಸುಕಾಲುವನು ನೋಡಿ ಸತ್ಕರ್ಮ ಆಚರಿಸುನಾಳೆ ಮಾಡುವೆನೆಂಬ ಮಾತು ದೂರಿರಿಸುನಾಳೆ ಮಾಡುವ ಧರ್ಮ ಇಂದು ನೀ ಮುಗಿಸು 45ಮನ ಮುಟ್ಟಿ ಸ್ಮರಣೆ ಸಂತತ ಮಾಡಬೇಕುಮನಸು ಓಡಲು ಮತ್ತೆ ಜಗ್ಗಿ ತರಬೇಕುಅನುಭವವು ಬಂದಂತೆ ಮನಸು ಕರಗುವದುಮನಸು ಕರಗಿದರೆ ವಾಸನೆಯು ಅಳಿಯುವದು 46ಎಲ್ಲ ಕಡೆಯಲಿ ಇರುವನೊಬ್ಬನೇ ದೇವಎಲ್ಲ ನಾಮಗಳಿಂದಲೂ ಕರೆಸಿಕೊಳುವಾಯಾವ ಬೇಕಾದ ಹೆಸರಿನ ದೇವರನ್ನುಭಕ್ತಿುಂ ಭಜಿಸಿದರೆ ಬಂದು ಪೊರೆಯುವನು47ಧನಕನಕದಾಶೆಯನು ತೊರೆದವನು ಸಂತವನಿತೆಯರ ಬಲೆಯೊಳಗೆ ಸಿಗದವನು ಸಂತಮನದಿ ಮಹಾದೇವನನು ಕಂಡವನು ಸಂತಜನರೊಳು ಜನಾರ್ಧನನ ನೋಡುವನು ಸಂತ 48ಘೋರ ಯುದ್ಧದಿ ನರನ ರಥವ ನಡೆಸಿಹನುಸೀರೆಯಾಗುತ ಸತಿಯ ಮಾನ ಉಳಿಸಿದನುನೀರಿನವನಾಗಿ ಎಂಜಲವ ಬಳಿದಿಹನುಪರಮ ಪುರುಷನ ಕರುಣೆಗೆಣಿಯು ಉಂಟೇನು 49ಹೃದಯ ದೊಳಗಿದ್ದ ಶ್ರೀಹರಿಯ ಮರೇತುಕಡುದ್ಯೆನ್ಯ ಬಿಡಬೇಡ 'ಷಯದೊಳು ಬೆರೆತುಕಾಮಧೇನು'ನ ಕೆಚ್ಚಲೊಳಿದ್ದ ನೀನುಅಮೃತವನು ಬಿಟ್ಟು ರತ್ನವನು ಕುಡಿವೆಯೇನು 50ಸರ್ವ ದುಃಖಗಳು ನಿರ್ಮೂಲವಾಗುವದುಸಂಸಾರ ಪರಮಾರ್ಥ ಕೂಡಿ ನಡೆಯುವವುಪ್ರಭು ರಾಮಚಂದ್ರನ ಪ್ರಸಾದ ಮ'ಮೆಯನುಪಠಿಸಿ ಆಚರಿಸಿದರೆ ಸುಖದಿ ಬಾಳುವನು 51ಜಯಜಯತು ಆರ್ಯ ಭೂಮತೆ 'ಖ್ಯಾತೆಜಯತು ಭಾರತಮಾತೆ ಸರ್ವಜನ ತ್ರಾತೆಜಯಜಯತು ಜಯ'ಂದ ಜನನಿ ಕಡು ಕರುಣಿಜಯ ಜಯತು ಸರ್ವ ಸಂಸ್ಕøತಿಯ ಮುಕುಟಮಣಿ 52ಅತಿಥಿ ಬಂದರೆ ಮನ ದೊಡ್ಡದಿರಲಿಒಣಹೆಮ್ಮೆ ಬೇಡ ಆದರದ ಮಾತಿರಲಿಮಾತು ಕೃತಿ ನಿಜ ಪ್ರೇಮ ತುಂಬಿರಲಿಊಟ ಉಪಚಾರದಿಂದ ಸಂತೋಷಗೊಳಲಿ 53ಗುಡಿಯೇಕೆ ಬೇಕು ಮನದೊಳಗೆ ಹರಿಯುಂಟುಅದರ ಕದ ತೆಗೆಯ ಪ್ರತಿಬಂಧವೇನುಂಟುಗುಡಿಯೊಳಗೆ ಹೊಗಿಸಬೇಕೆಂಬುವುದು ಛಲವುಛಲ 'ದ್ದರೇನದಕೆ ಆಧ್ಯಾತ್ಮ ಬೆಲೆಯು54ಮನ ಪ'ತ್ರ'ದ್ದರೆ ದೇವ ಒಲಿವಾಮನಸು ಅಪ'ತ್ರ'ದ್ದರೆ ದೇವ ಕುದಿವಾಮನ ಸುಪ್ರಸನ್ನ'ದ್ದರೆ ದೇವ ಒಲಿವಾಮನಸು ಧುಸುಮುಸು ಇದ್ದರೆ ದೇವ ಕುದಿವಾ 55ಮನಸು ನಿರ್ಭಯ'ದ್ದರಾ ದೇವ ಒಲಿವಾಮನಸು ನಿರ್ಮಲ'ದ್ದರಾ ದೇವ ಒಲಿವಾಮನಸು ನಿರಹಂಕಾರವಾದಾಗ ಬರುವಾಮನಸು ನಿಷ್ಕಪಟವಾದರೆ ಬಂದು ಪೊರೆವಾ 56ಅನ್ಯರಿಗೆ ನಿನ್ನ ಭಾರವ ಹಾಕಬೇಢನಿನ್ನ ಯೋಗ್ಯತೆ'ುೀರಿ ಭಾರ ಹೊರಬೇಡನಿನ್ನ ಮನೆತನದ ಜಗಳ ಬೈಲಿಗಿಡಬೇಡಹೆಣ್ಣು ಮಕ್ಕಳ ಮೇಲೆ ಕ್ಕೆ-ಎತ್ತಬೇಡ 57ನಿನ್ನ 'ರಿಮೆಯನು ನೀ ಹೇಳಬೇಡಅನ್ಯರನು ಕೀಳೆಣಿಸಿ ಮಾತಾಡಬೇಡಕಣ್ಮುಚ್ಚಿ ಇನ್ನೊಬ್ಬರನುಕರಣೆ ಬೇಡನಿನ್ನ ಸಂಸ್ಕøತಿಯ ವೈಶಿಷ್ಟ್ಯ ಬಿಡಬೇಡ 58ಸು'ಚಾರದಿಂದ ಧ್ಯೇಯವ ಗೊತ್ತುಪಡಿಸುಗೊತ್ತುಪಡಿಸಿದ ಧ್ಯೇಯವನ್ನು ನಿತ್ಯಸ್ಮರಿಸುಮುಟ್ಟಲಾ ಧ್ಯೇಯವನು ಶಕ್ತಿ ಸಂಗ್ರ'ಸುಶಕ್ತಿಯನು ಚಾತುರ್ಯದಿಂದ ನೀ ಬಳಿಸು 59ಸಮಯ ಪ್ರತಿಕೂಲ'ರೆ ವೈರಿಗಳ ನ'ುಸುನ'ುಸಿ ಒಳಹೊಕ್ಕವರ ಬಲವ ಹದಗೆಡಿಸುಶ್ರಮಪಟ್ಟು ಅ'ುತಬಲ ಗುಪಿತದಿಂ ಬೆಳಿಸುಸಮಯ ಸಾಧಿಸಿ ದುಷ್ಟಜನರನು ಸಂಹರಿಸು60ದೇಹದೊಳು ನೀನುಂಟು ದೇಹ ನೀನಲ್ಲನಾ ಎಂಬ ಜ್ಞಾನ ನಿನಗುಂಟು ಆದಕಿಲ್ಲನೀನು ಈ ದೇಹದಿಂದ ಹೊರಬೀಳಲಾಗಹೆಣವೆಂದು ಕರೆಯುವರು ದೇಹವನು ಬೇಗ 61ಹುಟ್ಟುವವ ನೀನಲ್ಲ ಹುಟ್ಟುವದು ದೇಹಬೆಳೆಯುವವ ನೀನಲ್ಲ ಬೆಳೆಯುವದು ದೇಹಸಾಯುವವ ನೀನಲ್ಲ ಸಾಯುವದು ದೇಹರೂಢಿಯೊಳು ನಿನಗಿದನು ಹಚ್ಚುವದು ಮೋಹ62ಖೋಡಿ ಮನವನು 'ಡಿದು ಸಾಧು ಮಡುವದುಸಾಧು ಮಾಡುತ ನಾಮ - ಘೋಷ ಹಚ್ಚುವದುಓಡಿ ಹೋಗಲು ಮತ್ತೆ ಎಳೆದೆಳೆದು ತಂದುಬೋಧಿಸುತ ನಾಮ ಜಪದೊಳು ಸೇರಿಸೆಂದು 63ಒಮ್ಮೆ ಹರಿನಾಮದೊಳು ಮನಸು ಸೇರಿದರೆಅದಕೆ ಆಗುವ ಸುಖವು ಆ ರುಚಿಯು ಬೇರೆಆ ರುಚಿಯ ಆ ಸುಖವು ಹತ್ತಿದರೆ ಮನಕೆತಿರುಗಿ ಎಂದಿಗೂ ಅದು ಹೋಗದದು 'ಷಯಸುಖಕೆ64ಚಿತ್ತ ಸ್ಥಿರ'ಲ್ಲದಿರೆ ಬುದ್ಧಿ ಸ್ಥಿರ'ಲ್ಲಬುದ್ಧಿ ಸ್ಥಿರ'ಲ್ಲದಿರೆ ಭಾವನೆಯು ಇಲ್ಲಭಾವನೆಯು ಇಲ್ಲದಿದ್ದರೆ ಶಾಂತಿುಲ್ಲ ಶಾಂತಿಯೇ ಇಲ್ಲದವ ಸುಖವೇನು ಬಲ್ಲ 65ಅನುಕೂಲ ಮತ ಮಾತ್ರ ನೀ ಎಣಿಸಬೇಡಪ್ರತಿಕೂಲ ಮತ ಉಪೇಕ್ಷೆಯ ಮಾಡಬೇಡಅನುಕೂಲ ಪ್ರತಿಕೂಲಗಳನು ತಿಳಿ ತಿಳಿದುಏನಾದರೊಂದು ಸಾಹಸ ಕಾರ್ಯ ಮಾಡು 66ಉದ್ಯೋಗದೊಳು ಸದಾ ಆನಂದ ಉಂಟುಉದ್ಯೋಗದೊಳಗೆ ಲಕ್ಷ್ಮಿಯ ವಾಸವುಂಟುಉದ್ಯೋಗವನು ಮಾಡಿ ದೇವರನು ಬೇಡುಉದ್ಯೋಗ ಬಿಟ್ಟು ಕುಳಿತರೆ ನಿನಗೆ ಕೇಡು 67ದೀರ್ಘ ಯೋಚನೆಯ ಮಾಡುತ ನೀ ಕೂಡಬೇಡಯೋಗ್ಯ ಮುಂಬೆಳಕು ಇಲ್ಲದೆ ಧುಮುಕಬೇಡ'ಗ್ಗಿ ಮೈಮರೆಯದಿರು ದೈವ ತೆರೆದಾಗಕುಗ್ಗಿ ಎದೆ ಒಡೆಯದಿರು 'ಧಿ ಕಾಡುವಾಗ 68ದೈವವನಕೂಲ'ದ್ದಾಗ ಎಚ್ಚರಿಕೆಗರ್ವ ಸೇರುವದು ತಿಳಿಯದಲೆ ಎಚ್ಚರಿಕೆಗರ್ವದಿ ಸ್ಮøತಿಗೆ ಸಮ್ಮೋಹವೆಚ್ಚರಿಕೆಸಮ್ಮೋಹದಿಂದ ಸರ್ವನಾಶ ಎಚ್ಚರಿಕೆ 69ದೈವ ಯತ್ನಗಳ ಗತಿ ಗಹನವಾಗಿಹುದುಒಬ್ಬೊಬ್ಬರನುಭವವು ಒಂದೊಂದು ಇಹುದುವಾದದಿಂ ಬಗೆಹರಿಯದಂಥ 'ಷಯ'ದುಇದರ ಹದ ತಿಳಿದು ಯತ್ನವಂ ಮಾಡುವದು 70ಜೋಲು ಮೋರೆಯ ಹಾಕಿ ನೀ ಕೂಡಬೇಡಕಾಲು ಅಪ್ಪಳಿಸಿ ಕೆಲಸಕೆ ಹತ್ತಬೇಡಸ್ಟೈಲು ಉಡುಗೆಯ ಉಟ್ಟುಕೊಂಡೋಡಬೇಡಮೈಲಿಗೆಯ ಮನದಿಂದ ಜಪ-ಮಾಡಬೇಡ 71ಕಾರ್ಯ ಮಾಡುವ ಜನಕೆ ಮರ್ಯಾದೆ ಮಡುಬಾಯಬಡುಕ ಜನರ ಕೃತಿಯನು ತಿಳಿದು ನೋಡುಧೈರ್ಯದಿಂ ದುರ್ಜನರ ಕೂಡ ಹೋರಾಡುಆರ್ಯ ಸಂಸ್ಕøತಿಯ ಸಂರಕ್ಷಣೆಯ ಮಾತು 72ಗುಣ ಕರ್ಮಗಳ ನೋಡಿ ಮಾನವನು ಮಾಡುಒಣ ಜನ್ಮ ಜಾತಿ ತುಸು ದುರ್ಲಕ್ಷ ಮಾಡುಗುಣ ಕರ್ಮದಿಂದ ಅತಿ ನೀಚನಾದವನುಜನುಮ ಮಾತ್ರದಿ ಹೇಗೆ ಶ್ರೇಷ್ಠನಾಗುವನು73ತಪ್ಪು ಇಲ್ಲದೆ ಕ್ಷಮೆಯ ಬೇಡುವವ ಮೂರ್ಖತಪ್ಪಿದರು ಒಪ್ಪಿದವನು ಕಡುಮೂರ್ಖತಪ್ಪು ಆಗುವದು ಮಾನವನ ಸಹಜಗುಣತಪ್ಪು ಒಪ್ಪುತ ತಿದ್ದಿಕೊಳ್ಳುವದು ಸುಗುಣ 74ನಿನ್ನ ಬಂಧುಗಳೆ ನಿನಗಾಗುವರು ಕೊನರೆಗೆಅನ್ಯರಿಗೆ ಆ ಕರುಳು ಬರುವದು ಹೇಗೆನಿನ್ನ ಬಂಧುಗಳೆಲ್ಲ ಮೂರ್ಖರೆನಬೇಡಅನ್ಯರಿಂದ ನೀ ಮೂರ್ಖನೆನಿಸಿಕೊಳಬೇಡ 75ಜನರ ಮನೆಗಳು ಬಹಳ ದಿವಸ ಇರಬೇಡಇರುವದೇ ಆದರವರಿಗೆ ಭಾರ ಬೇಡಅರಿತವರ ಕೆಲಸಗಳ ಮನೆಯಂತೆಮಡುಗೃಹದ ರೀತಿರಿವಾಜು ಕೆಡದಂತೆ ನೋಡು 76ದುಡ್ಡು ಇದ್ದಾಗ ಎಲ್ಲರ ಪ್ರೀತಿಯುಂಟುದುಡ್ಡು ಕಳಕೊಂಡು ಹೋದರೆ ಮೋರೆಗಂಟುದುಡ್ಡಿನಿಂದಲೆ ಜನರ ಬೆಲೆ ಕಟ್ಟಬೇಡದೊಡ್ಡ ಗುಣಗಳನರಿತು ನ'ುಸದಿರಬೇಡ 77ಧನದ 'ಷಯದಿ ಖಂಡ ತುಂಡ ಇರಬೇಕುಮನಬಿಚ್ಚಿ ಮೊದಲಿಗೆ ಮಾತಾಡಬೇಕುಒಣ ಮಬ್ಬುತನ ಮನದಮಂಡಿಗೆಯು ಬೇಡಕೊನೆಗೆ ಗುಣಗುಟ್ಟುತಲಿ ಹಳಹಳಿಸಬೇಡ 78ಯಂತ್ರಮಯ ಜೀವನದ ಯುಗವು ನಡೆದಿಹುದುಸ್ವಾತಂತ್ರ್ಯವೆಲ್ಲಿ ಬಡವರಿಗೆ ಉಳಿದಿಹುದುದ್ರವ್ಯಮಯವಾದ ವ್ಯವಹರ ಸಾಗಿಹುದುದೇವ ಧರ್ಮಕೆ ಅರ್ಧಚಂದ್ರ ಬಂದಿಹುದು 79ತಾಯ್ತನದ ಸುಖಕೆ ಸರಿಯಾದ ಸುಖ'ಲ್ಲತಾಯ್ತನದ ಕರುಳಿಂಗೆ ಬೆಲೆಯಂಬುದಿಲ್ಲತಾುಗಿಂದಧಿಕ ದೈವತವು ಬೇರಿಲ್ಲತಾಯ್ - ಸೇವೆಗಿಂದಧಿಕ ಪುಣ್ಯಾವೆ ಇಲ್ಲ 80ಚನ್ನಾಗಿ ಸಂಸಾರ ಮಾಡಬಲ್ಲವನುಸುಲಭದಿಂ ಪರಮಾರ್ಥವನು ಸಾಧಿಸುವನುಸಂಸಾರದೊಳಗಿದ್ದು ಸನ್ಯಾಸಿಯೆನಿಸುಸನ್ಯಾಸಿಯಾಗಿ ಸಂಸಾರದೊಳು ಈಸು81ಮನೆಯಲ್ಲಿಯೇ ಸ್ವರ್ಗ ಮನೆಯಲ್ಲಿಯೇ ನರಕಜಾಣರಿಗೆ ತಿಳಿಯುವದು ನೋಡಿದರೆ ಗಮಕಜಾಣ ಪ್ರೇಮಳ ಪತಿಯಮನೆ ಸತಿಗೆ ಸ್ವರ್ಗಕೋಣ ಕರ್ದಮ ಕಟುಕ ಪತಿುರಲು ನರಕ 82ಪತಿಯ ಮನ ಒಲಿಸಿ ಕೋತಿಯ ತೆರದಿ ಕುಣಿಸಿಅತ್ತೆ ಮಾವರು ಬಂಧುಬಳಗವನು ಹೊರನುಗಿಸಿಸ್ವೇಚ್ಛೆುಂ ಎದೆಮೆಟ್ಟಿ ಬೇರಿರುವ ಸೊಸೆಸೊಸೆಯಲ್ಲ ರಕ್ಕಸಿಯು ಕಿ'ಹೊಕ್ಕ ತೊಣಸಿ83ಸರ್ವದಾ ಸತ್ವಗುಣಿ ಶಾಂತ ನಿರುತಿಹನುರಾಜಸನ ಶಾಂತಿುಂ ಧಡಪಡಿಸುತಿಹನುಕಿರಿಕಿರಿಯು ತಾಮಸಿಗೆ ಬಿಟ್ಟುರುವದಿಲ್ಲಾತ್ರಿಗುಣಗಳ ದಾಟದಿದ್ದರೆ ಮೋಕ್ಷ'ಲ್ಲಾ 84ಅನ್ನದೊಳು ಮುಖ್ಯ ಸಾತ್ವಿಕ ಗುಣವು ಬೇಕುಸಂಪಾದನೆಯ ಮಾರ್ಗ ಸರಳ'ರಬೇಕುಸಂಸರ್ಗ ಸಂಸ್ಕಾರ ಸುಷ್ಟ'ರಬೇಕುಸಾತ್ವಿಕಾನಂದ ಮನದಿಂದ ಉಣಬೇಕು 85ಮೂಲ ಮನ'ಹುದು ಮೂರರೊಳೊಂದು ಪಾಲುಸನ್ನಿವೇಶಗಳಿಂದ ಮತ್ತೊಂದು ಪಾಲುತಿನ್ನುವಾ ಅನ್ನದಿಂದ ಉಳಿದೊಂದು ಪಾಲುಮೂರು ಕೂಡಿದ ಮನವೆ ನಿನಗೆ ಹರಿಗೋಲು86ಪ್ರಾರಬ್ಧವನುಭ'ಸಿ ತೀರಿಸಲು ಬೇಕುಅಪರೋಕ್ಷದಿಂದ ಸಂಚಿತ ಕಳಿಯಬೇಕುಸರ್ವದಾ ನಿರಪೇಕ್ಷ ಸತ್ಕರ್ಮ ಬೇಕುನಿರಭಿಮಾನದಿ ಕರ್ಮದ ಬೀಜ ಸುಡಬೇಕು87ದಯೆಯು ಧರ್ಮದಮೂಲ ದಯವಂತನಾಗುಭಯವು ದುಃಖದಮೂಲ ನಿರ್ಭಯನು ಆಗುಲೋಭ ಪಾಪದ ಮೂಲ ನಿರ್ಲೋಭಿಯಾಗುತ್ಯಾಗ ಪುಣ್ಯದ ಮೂಲ ತ್ಯಾಗಿ ನೀನಾಗು 88ನಿನ್ನ ಉದ್ಧಾರವನು ನೀ ಮೊದಲ ಮಾಡುಮನೆತನದ ಉನ್ನತಿಯಕಡೆಗೆ ನೀ ನೋಡುನಿನ್ನ ನೆರೆಹೊರೆ ಜನರ ಕಲ್ಯಾಣಮಾಡುಆಮೇಲೆ 'ಶ್ವದದ್ಧಾರ ಮಾತಾಡು 89ಹಳೆಯದಿದ್ದರೆ ಎಲ್ಲ ಒಳಿತು ಎನಬೇಡಹೊಸದೆಂಬ ಮಾತ್ರದಿಂದಲೆ ಹಳಿಯಬೇಡಒಳಿತು ಕೆಡಕುಗಳು ಎಲ್ಲದರಲ್ಲಿ ಇಹವುತಿಳಿದು ಉಪಯೋಗಿಸಿದರದು ಜಾಣತನವು 90ಕಾಲಮ'ಮೆಯ ಕಷ್ಟ ಬಂದಿತೆನಬೇಡಕಾಲಕ್ಕೆ ಹೆಚ್ಚಿನ ಮಹತ್ವ ಕೊಡಬೇಡಕಾಲ ನಿರ್ಮಾಣ 'ರಿಯರ ಕೈಯ್ಯೊಳಿಹುದುಎಂಥ 'ರಿಯರು ಅಂಥ ಕಾಲ ಬರುತಿಹುದು 91'ರಿಯರಾಚರಣಿಯಂ ಮನೆತನದ ಬೆಳಕು'ರಿಯರಾಚರಣೆುಂ ಮನೆತನಕೆ ಹುಳುಕು'ರಿಯರೇ ಕಾರಣರು ಮನೆಯ ಸುಸ್ಥಿತಿಗೆ'ರಿಯರೇ ಕಾರಣರು ಮನೆಯ ದುಸ್ಥಿತಿಗೆ 92ದೇಹವೇ ರಥವು ಸಾರಥಿಯು ಪರಮಾತ್ಮಜೀವ ಅರ್ಜುನ ಧರ್ಮ ಸಮ್ಮೂಡ ಆತ್ಮಸರ್ವ ಭಾವದಿ ಶರಣುಹೊಗು ಸಾರಥಿಗೆಸಾರಧಿಯು ಮುಟ್ಟಿಸುವ ನಿನ್ನ ಸದ್ಗತಿಗೆ 93ಜ್ಞಾನಪೂರ್ವಕ ''ತ ಕರ್ಮಗಳ ಮಾಡುಚಿತ್ತಶುದ್ಧಿಗೆ ಕರ್ಮಸಾಧನವು ನೋಡುಉದ್ದೇಶ ಪರಿಣಾಮಗಳ ತೂಕ ಮಾಡುಮೂಢತನ ರೂಢಿಗಳನರಿತು ಬಿಟ್ಟುಬಿಡು 94ಬಾಲಭಾವದಿ ದೇವರೊಳು ಹಟವಮಾಡುಬಾಲಭಾವದಿ ದೇವರೊಳು ಮಮತೆಮಾಡುಬಾಲಭಾವದಿ ದೇವರಿಗೆ ಬೇಡಿಕಾಡುಬಾಲಭಾವದಿ ನಿನ್ನ ಸರ್ವಸ್ವ ನೀಡು 95ಮಾತೃಭಾವದಿ ಅವನ ತೊಡೆಯ ಮೇಲಾಡುಮಾತೃಭಾವದಿ ನೀನು ವಾತ್ಸಲ್ಯ ಮಾಡುಮತೃಭಾವದಿ ತೂಗಿ ತೊಟ್ಟಿ ಮುದ್ದಾಡುಮಾತೃಭಾವದಿ ಬಿದ್ದು ಕಿರಿಕಿರಿಯಮಾಡು 96ಸಖ್ಯಭಾವದಿ ಹಾಲು ಮೊಸರೆರೆಯ ಬೇಕುಸಖ್ಯಭಾವದಿ ಬೆಣ್ಣೆ ಬಾಯ್ತುಂಬ ಬೇಕುಸಖ್ಯಭಾವದಿ ಕೊಳಲಿನೊಳು ಕುಣಿಯಬೇಕುಸಖನೆಂದು ಗೋಪಿಯಂದದಿ ಕುಣಿಸಬೇಕು 97ನಿನ್ನೊಳಗೆ ಆತನನು ನೀ ನೋಡಬೇಕುಅವನೊಳಗೆ ಸರ್ವವನು ನೀ ಕಾಣಬೇಕುತನ್ನತನ ಮರೆತು ಅವನೊಳು ಬೆರೆಯಬೇಕುಅವನ ಸೂತ್ರದ ಬೊಂಬೆ ನೀನಾಗಬೇಕು 98'ುೀನನಾದರೆ ಅವನ ಕಣ್ಣು ನೀನಾಗು ಕೂರ್ಮನಾದಾಗವನ ಬೆನ್ನು ನೀನಾಗುವರಾಹರೂಪದ ಹರಿಯ ಕೋರೆ ನೀನಾಗುನರಹರಿಗೆ ನೀ ಹದನವಾದ ನಖವಾಗು 100ವಟುವಾಮನಗೆ ಪಾದರಕ್ಷೆ ನೀನಾಗುದುಷ್ಟ ಸಂಹಾರಕನ ಪರಶು ನೀನಾಗುಅಟ'ವಾಸಗೆ ಬಿಲ್ಲುಬಾಣ ನೀನಾಗುದಿಟ್ಟ ಗೊಲ್ಲನ ಕರೆದ ಕೊಳಲು ನೀ ನಾಗು 101ಬುದ್ಧನಾದರೆ ಬುದ್ಧಿವಂತ ನೀನಾಗುಕಲ್ಕಿಯಾದರೆ ಚಲುವ ಕುದುರೆ ನೀನಾಗುಎಲ್ಲಿದ್ದರೂ ಅವನ ನೆರಳು ನೀನಾಗುಪ್ರಹ್ಲಾದ ದ್ರುವ ಅಂಬರೀಷ ನೀನಾಗು 102ಧನದೊಳಗೆ ಧನ ತವೋಧನನು ನೀನಾಗುಭಾಗ್ಯದೊಳು ವೈರಾಗ್ಯ ಭಾಗ್ಯವಂತನಾಗುಇಂದ್ರಿಯಂಗಳ ಜಯದಿ ನೀ ಶೂರನಾಗುಪಂಡಿತನು ತತ್ವದಾಚರಣೆಯೊಳು ಆಗು103ಸ್ವಾತಂತ್ರವೇ ಸ್ವರ್ಗ ಪರತಂತ್ರ ನರಕಮಾತೃಭೂ'ುಯ ಸೇವೆ ಮಡದವ ಶುನಕಪತಿತರುದ್ಧಾರ ಮಾಡುವದು ಸದ್ಧರ್ಮಪತಿತರನು ತುಳಿಯುವದು ಸೈತಾನಕರ್ಮ 104ಸಂಸಾರ ಸಾಗರವ ದಾಟಿಸಲು
--------------
ಭೂಪತಿ ವಿಠಲರು
ಗುರು ಹಿರಿಯರ ಸೇವಿಸಿಹರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿಕೊಳ್ಳಿರೊ ಪ ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದೆರಕ್ಕಸಾರಿಯ ಭಕ್ತರೊಳು ಸೇರಿ ನೀವು ಸೆರೆಯಿಕ್ಕದಂಥವನ ಮೊರೆ ಹೋಗಿರೊ 1 ಕಂಬಳಿಯ ಬುತ್ತಿಯಂತೀ ದೇಹದೊಳಗೆಲ್ಲತುಂಬಿರುವ ಸುಖವೆಲ್ಲ ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವನುಂಬ ಭ್ರಮರಕೆ ಸರಿಗಾಣೆನೊ 2 ಮಕ್ಕಳುಗಳಳುವಾಗ ಮಡದಿಯರು ಜರಿವಾಗಬಿಕ್ಕುಗಳು ಬಂದು ಬೈವಾಗಇಕ್ಕಿ ಪೊರೆವುದಕೆ ಗತಿಯಿಲ್ಲದಾ ದರಿದ್ರರಿಗೆಸೌಖ್ಯವೆತ್ತಣದೊ ಮನುಜರಿಗೆ 3 ತಾಯ ಮಾರಿ ತೊತ್ತನು ಕೊಂಬ ಪಾಮರರಂತೆಹೇಯ ಕುಜನರಾ ಚರಣಕೆರಗಿಮಾಯಾಪತಿಯಂಘ್ರಿಗಳ ನೆನೆಯಲೊಲ್ಲದ ನರನಆಯುಷ್ಯ ಬರಿದೆ ಹೋಯಿತಲ್ಲ 4 ಅಯಿವರಿತ್ತೊಡವೆಯ ಅವರವರೊಯ್ಯುವರು ಮ-ತ್ತಯಿವರೆಂಬುವರು ತೊಲಗುವರುಮೈಯ ನೆತ್ತರು ಕೂಡ ಹರಿದು ಹೋಹುದು ನಿಮ್ಮಕೈಯ ಪಿಡಿದೆತ್ತುವರ ನಾನು ಕಾಣೆ 5 ಬಲಗುಂದಿ ನೆಲ ಹಿಡಿಯೆ ರೋಗರುಜಿನಗಳೆಂಬಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖ ಗಂಟಲೊಳಗಣನಾಲಗೆಯ ನಾದ ಎಲ್ಲಿಹುದೊ 6 ಆಗಲೇ ಹರಿನಾಮ ನಾದದಿಂದೆಚ್ಚತ್ತುನಾಗಶಯನನ ಪುರದ ಪಥವಆಗಮಜ್ಞರ ಕೇಳಿ ತಿಳಿದುಕೊಳ್ಳಿರೊ ನಿಮಗೆಈ ಗಾಳಿ ದೀಪ ಸ್ಥಿರವಲ್ಲ 7 ಜರೆಯೆಂದು ಕಡೆಯಲ್ಲಿ ಗೊರಗೊರನೆ ಉಸಿರಾಡೆಶರೀರದ ಸಂಬಂಧಗಳಕಟಾತರುಣಿಯರ ಮ್ಯಾಲಾಸೆ ತಮ್ಮ ಹಿತವನರಿಯದೆಬರಿದೆ ಭವದಲ್ಲಿ ಬಳಲುವಿರಿ 8 ಸರಕು ಇಲ್ಲಮಾಧವನ ಪೂಜೆ ಒಮ್ಮೆಯೂ ಮಾಡಿಲ್ಲ ಹರಿಪಾದ ತೀರ್ಥದಾ ವ್ರತಗಳಿಲ್ಲ 9 ಊಧ್ರ್ವಪುಂಡ್ರಗಳಿಲ್ಲ ಹರಿಯ ಲಾಂಛನವಿಲ್ಲಪದ್ಮ ತುಳಸಿಯಾ ಸರಗಳಿಲ್ಲಸದ್ಧರ್ಮ ಪಥವೆತ್ತ ವಿಷಯಾಂಧ ಕೂಪದೊಳುಬಿದ್ದು ಪೊರಳುವ ಮರುಳಿದೆತ್ತ 10 ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕ ವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ11 ಸಕ್ತಿಯಿಂ ಹರಿಯ ಪೊಗಳಿ ಅಡಿಯಲುರುಳಿ ಶುಷ್ಕಭುಕ್ತಿಗಳ ಮೇಲುಗುಳಿ ದೂರ ನಿಲ್ಲಿಭಕ್ತಿ ಜ್ಞಾನಗಳಿರಲಿ ಮತ್ರ್ಯ ಪಥದಿಂ ಮರಳಿಮುಕ್ತಿ ಮಾರ್ಗದಲಿನ್ನು ತೆರಳಿ 12 ಕೊಳ್ಳೆನಾಯಕ ಬಂದು ಕೋಟೆ ಕೆಡಹುವ ಮುನ್ನಕಳ್ಳರೈವರ ಕಾರಣದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭನ ಅಡಿಗೆ ಮೊರೆ ಹೋಗಿರೊ13 ಪಾದ ಸೇರಿರೋ 14 ಒಂಬತ್ತು ರಂಧ್ರಗಳ ತನುವೆಂಬ ಮನೆಯಲ್ಲಿತುಂಬಿರುವ ವಾಯು ಸ್ಥಿರವಲ್ಲನಂಬಿದರ ಪೊರೆವ ನೆಲೆಯಾದಿಕೇಶವನ ಪಾದಾಂಬುಜವನು ಸೇರಿ ಬದುಕಿರೊ 15
--------------
ಕನಕದಾಸ
ಗುರುಹಿರಿಯರನುಸರಿಸಿ ಹÀರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿರೊ ಪ. ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದಿರಿರಕ್ಕಸಾರಿಯ ಭಕ್ತರೊಳು ಸೇರಿ ಮುಂದೆ ಸೆರೆ-ಯಿಕ್ಕದಂತವನ ಮರೆಹೋಗಿರೊ 1 ಕಂಬಳಿಯ ಬುತ್ತಿಯಂತೀ ದೇಹದೊಳಗೆ ಸುಖವೆಂಬುದಿಲ್ಲವು ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವ-ನುಂಬ ಸಂಭ್ರಮಕೆ ಸರಿಗಾಣೆನು 2 ಮಕ್ಕಳುಗಳಳುವಾಗ ಮಡದಿಯರು ಜರಿವಾಗಭಿಕ್ಷುಕರು ಬಂದು ಬೈದ್ಹೋಗುವಾಗಇಕ್ಕಿ ಪೊರೆವುದಕೆ ಬಗೆಯಿಲ್ಲದ ದರಿದ್ರಂಗೆಸೌಖ್ಯವೆತ್ತಣದು ಮನುಜರಿಗೆ 3 ತಾಯ ಮಾರಿ ತೊತ್ತಕೊಂಬ ಪಾಮರನಂತೆಹೇಯಕುಜನರ ಚರಣಕೆರಗಿಶ್ರೀಯರಸನಂಘ್ರಿಗಳ ನೆನೆಯಲೊಲ್ಲದ ಮನುಜರಿಗೆಆಯುಷ್ಯ ಬರಿದೆ ಹೋಯಿತಲ್ಲ 4 ಐವರಿತ್ತೊಡವೆಯನು ಅವರವರು ಒಯ್ವರು ಮ-ತ್ತೈವರೆಂಬುವರು ತೊಲಗುವರುಮೈಯ ಹತ್ತರಕೂಟ ಹರಿದು ಹೋಗುವ ಮುನ್ನಕೈಯ ಪಿಡಿದೆತ್ತುವರ ಕಾಣೆ 5 ಕಾಲು ಜವಗುಂದಿದವು ರೋಗರುಜಿನಗಳಿಂದಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖಘಂಟೆಯೊಳಗಿನನಾಲಿಗೆಗೆ ನಾದವೆಲ್ಲಿಹುದೊ 6 ಈಗಲೆ ಹರಿನಾಮನಾದದಿಂದೆಚ್ಚೆತ್ತುನಾಗಶಯನನ ಪುರದ ಪಥವಆಗಮಜ್ಞರ ಕೈಯ ಕೇಳಿಕೊಳ್ಳಿರೊ ನೀವುಈ ಗಾಳಿದೀಪ ಸ್ಥಿರವಲ್ಲ7 ಜರೆ ಬಂದು ಕಡೆಯಲ್ಲಿ ಗುರುಗುರುಟ್ಟುವಾಗಶರೀರಸಂಬಂಧಿಗಳ ಕಾಟತರುಣಿಯರ ಮೇಲಾಸೆ ತಮ್ಮ ಹಿತವರಿಯದೆಬರಿದೆ ಭವದೊಳಗೆ ಬಳಲದಿರಿ 8 ವೇದಶಾಸ್ತ್ರವನೋದಲಿಲ್ಲ ಜಪತಪಸಾಧು ಸತ್ಕರ್ಮಗಳ ಸರಕಿಲ್ಲಮಾಧವನ ಪೂಜೆಯನು ಮಾಡಿದವನಲ್ಲ ಹರಿಪಾದತೀರ್ಥ ವ್ರತಗಳಿಲ್ಲ 9 ಊಧ್ರ್ವಪುಂಢ್ರsÀಗಳೆಲ್ಲಿ ಹರಿಯ ಲಾಂಛನವೆಲ್ಲಿಪದ್ಮಾಕ್ಷಿ ಶ್ರೀತುಲಸಿ ಸರಗಳೆಲ್ಲಿಸದ್ಧರ್ಮಪಥವೆಲ್ಲಿ ವಿಷಯಾಂಧಕೂಪದೊಳುಬಿದ್ದು ಹೋರಳುವ ಮನುಜರೆಲ್ಲಿ 10 ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ 11 ಉಕ್ಕಿ ಹರಿಯನೆ ಪೊಗಳಿ ಅವನಂಗಣದಿ ಹೊರಳಿಶುಷ್ಕ ತರ್ಕಗಳ ಮೇಲೆ ಉಗುಳಿಭಕ್ತಿಜ್ಞಾನಗಳಿರಲಿ ಮಿಕ್ಕ ಪಥದಿಂ ಮರಳಿಮುಕ್ತಿಮಾರ್ಗದಲಿನ್ನು ತೆರಳಿ 12 ಕೊಳ್ಳೆನಾಯಕ ಬಂದು ಕೋಟೆಗಡರದ ಮುನ್ನಕಳ್ಳರೈವರ ಕಾಟದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭದಲಿ ಬಚ್ಚಿಡಿರೊ 13 ಮಲಮೂತ್ರರಕ್ತಮಾಂಸದ ರಾಸಿಗಳು ಕೂಡಿಎಲುವಿನ ಬಿಲದಲ್ಲಿ ಗೂಡಮಾಡಿಬೆಳೆಸಿದೀ ತನುವೆಂಬ ನರಕದಾಸೆಯ ಬಿಟ್ಟುಜಲಜನಾಭನ ಸೇರಿಕೊಳ್ಳಿರೊ14 ಒಂಬತ್ತು ಛಿದ್ರವುಳ್ಳ ದೇಹವೆಂಬ ಮಡಕೆಯಲ್ಲಿತುಂಬಿದ ವಾಯು ಸ್ಥಿರವೆಂದುನಂಬಿಕೊಂಡಿರಬೇಡಿ ಹಯವದನ ಹರಿಯ ಪಾ-ದಾಂಬುಜವ ಸೇರಿ ಬದುಕಿರೊ 15
--------------
ವಾದಿರಾಜ
ಜಯಕೃಷ್ಣವೇಣಿ | ಜಗಪಾವನೀ | ಜಯಕರುಣಿ ಭಯಹರಿಣಿ ಭವತಾರಿಣಿ ಪ ಮಾಬಳೇಶ್ವರನ ಸುಜಟಾ ಭಾಗದಲಿ ಪದ್ಮ | ನಾಭನಂಶದಿ ಬಂದು ಶೋಭಿಸುತಲಿ | ಈ ಭುವನಜನರ ಮನದಾಭೀಷ್ಟಮಂ ಕೊಡಲು | ತಾ ಭರದಿ ನದಿರೂಪನಾಗಿ ಪ್ರವಹಿಸಿದೆ 1 ನಿನ್ನೆಡೆಗೆ ನಡೆತಂದು ನಿನ್ನ ಜಲ ವೀಕ್ಷಿಸುತ | ನಿನ್ನ ಘೋಷವ ಕೇಳಿ ತನ್ನ ಕರದಿ | ನಿನ್ನ ಸ್ಪರ್ಶನ ಅಚಮನ ಮಾರ್ಜನದಿಂದ | ತನುಮನೇಂದ್ರಿಯಗಳು ಪಾವನವಾದವು 2 ಪೊಡವಿಯೊಳಧಿಕ ತೀರ್ಥ ತಡಿಯಗ್ರಾಮವೇ ಕ್ಷೇತ್ರ | ಸುರರು | ಒಡಲೊಳಿಹ ಜಲಚರಗಳೊಡನೆ ಗತಿಸಾಧಕರು | ನುಡಿವ ಪಕ್ಷಿಗಳು ಸಲೆ ಗಿಡಮರಗಳು 3 ಸಾಗಿಸುವ ಕರ್ಮೇದ್ರಿ ತ್ಯಾಸದ್ಧರ್ಮದಿಂ | ಯೋಗ ಅಷ್ಟಾಂಗದಿಂ ಯಾಗದಿಂದ | ಭೋಗಿಸುವ ಪುಣ್ಯವನು ರಾಗದಿಂ ತೀರದಿಹ | ಯೋಗಿಜನಕೀವೆ ತಾನೀಗ ದಯದಿ 4 ಬಿಂದುಮಾತ್ರವೇ ಬೀಳಲೊಂದು ಕಾಯದಿ ಅಘದ | ವೃಂದ ನಾಶನವಹುದು ಮಿಂದಡವನ | ಛಂದಮಂ ಬಣ್ಣಿಸುವದಿಂದು ತಿಳಿಯದು ಎನುತ | ತಂದೆ ಮಹೀಪತಿ ಜ ಕರದ್ವಂದ್ವ ಮುಗಿಯೇ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಾತಿಭ್ರಷ್ಟ ಹೊಲೆಮಾದಿಗರಿವರಲ್ಲವೇನೋ ನೀತಿಬಾಹಿರರಾಗಿ ಆಚರಿಸುವವರು ಪ ಪನ್ನಂಗಶಯನ ಉನ್ನತ ಕತೆ ಕೀರ್ತ ನ್ಯನ್ನು ಕೇಳೆನೆ ಮುಖವನ್ನು ಹಿಂತಿರುವಿ ಭಿನ್ನ ಬೇಸರಿಲ್ಲದೆ ಅನ್ಯಜನ ಸುದ್ದಿಯೊಳು ಕುನ್ನಿಯಂದದಿ ದಿನಗಳನ್ನು ಕಳೆವವರು 1 ಆಲಯದ ಸತಿಯಳ ತಾಳದೆ ತುಸುತಪ್ಪು ತಾಳಿಯನ್ಹರಕೊಂಡು ದಾಳೀಯ ಹೊಡೆದು ಮೇಲುಜಾತಿಲಿ ಹುಟ್ಟಿ ಕೀಳು ಸೂಳೇರಿಗೊಲಿದು ಹೇಳಿದತೆರ ಕುಣಿದು ಬೀಳುಗಳೆವವರು 2 ಸದ್ಧರ್ಮಕಾರ್ಯಕ್ಕೆ ಇದ್ದುದ ಸಲ್ಲಿಸೆನಲು ಕದ್ದು ತಂದುಕೊಡುವೆವೆಂದಬದ್ಧ ನುಡಿಯುವವರು ಬದ್ಧ್ದ........ಬಂದು ಒದ್ದು ಕೂಡ್ರಿಸಲಾಗ ಸದ್ದಿಲ್ಲದೆ ತಂದು ಬೇಡಿದ್ದು ಕೊಡುವವರು 3 ಜ್ಞಾನಿಗಳು ಬಂದರೆ ಗೋಣೆತ್ತಿನೋಡದೆ ಹೀನಜನರಿಗೆ ಬಹುಮಾನ ಕೊಡುವವರು ಧ್ಯಾನ ದಾಸರ ತರದಿ ಜ್ಞಾನದ ಮಾತ್ಹೇಳಿ ಗೇಣ್ಹೊಟ್ಟಿಗೆ ಪರರ ಗೋಣು ಮುರಿವವರು 4 ತಾಸಿನ ಮೋಜೆಂಬ ನಾಶನ ಜಗಮಾಯ ಮೋಸನರಿಯದೆ ಯಮಪಾಶದೊಳು ಬಿದ್ದು ದಾಸಜನಪ್ರಿಯ ಜಗದೀಶ ಶ್ರೀರಾಮನ ಧ್ಯಾಸಮುರಿದು ದು:ಸ್ಸಹವಾಸದಿರುವವರು 5
--------------
ರಾಮದಾಸರು
ತೀರ್ಥವು ಬೇಡಾ ಕ್ಷೇತ್ರವು ಬೇಡಾ ಜಪ ತಪ ಯೋಗವು ಬೇಡಾ ಪ ಪರ ಉಪಕಾರ ಶಾಸ್ತ್ರ ಪುರಾಣಗಳು ಬೇಡಾ | ಸ್ವಾಮಿ ಸದ್ಗುರು ಭವತಾರಕನ ಭಜಕರ ಪಾದವ ನೀ ಬಿಡಬೇಡಾ 1 ಸತ್ಯವು ಸಂಸಾರವು ಜಗವಿದು ಮಾಡೆಂಬರು ನೋಡೀಜನರು | ಮಿಥ್ಯವು ಸರ್ವವು ಜಗದೀಶನನು ತಿಳಿಯೆಂಬುವರಾ ಸಜ್ಜನರು || ಜಾಗ್ರದಿ ಸ್ವಪ್ನದಿ ಬಳಲುತ ನಲಿವುತ ಚರಿಸುವರಾ ಕಾರ್ಮಿಕರು | ತುರ್ಯಾವಸ್ಥೆಯೋಳ್ ಮರೆದು ತಮ್ಮನು ಇರುತಿಹರಾ ಸಾಧುವರು2 ಸಾರ ನಿವೃತ್ತಿಯ ಅರಿವುದೆ ಜೀವನ್ಮುಕ್ತಿ || ಇದರ ಹಂಚಿಕೆ ಮಾಡುತ್ತಿಹುದೇ ಅದುವೆ ಶಾಸ್ತ್ರದ ಯುಕುತೀ | ಸದಮಲ ಬೋಧಾನಂದವೆ ಬಲಿದರೆ ನಿಜವೇ ತಾ ಅವ್ಯಕ್ತಿ 3 ಅನುದಿನ ಮೂರ್ತಿ ಭವತಾರಕ ಭಜಕರ ಕೇಳೋ ನಿನ್ನ ಖೂನಾ 4 ಸಂಸಾರವ ಸದ್ಧರ್ಮದಲಿ ಸಾಧು ಸಂತರಂತೆ ನೀ ಮಾಡೊ | ಸಂಶಯವಳಿದು ಸರ್ವವು ಶಿವನೆಂದರಿದು ಅವರೊಳು ಕೂಡೊ | ಸತ್ತು ಹುಟ್ಟುವ ಕಟ್ಟಳೆಗಳನು ಕಿತ್ತಿ ಈಡ್ಯಾಡೊ | ನಿತ್ಯದಿ ಭವತಾರಕನ ಭಜಕರ ಸಂಗದಲಿ ಲೋಲ್ಯಾಡೊ 5 ಗುರು ವರನಲಿ ಸತ್ಪುರುಷರ ಬಳಿಯಲಿ ಅರಸಬಾರದು ಇಷ್ಟಾ | ಕುಲ ವಯ ಕ್ರಿಯಾ ಕರ್ಮವ ತಾಪತ್ರಯಗಳನೆಣಿಸುವ ಭ್ರಷ್ಟಾ | ಅನುಭವ ಜ್ಞಾನದಿ ಬೋಧದಿ ಲಕ್ಷ್ಯವೀಕ್ಷಿಸುವವನೆ ಶ್ರೇಷ್ಠಾ | ಇನಿತನು ಬಿಟ್ಟು ನಿಂದಿಸುವವನೆ ಭವದಲಿ ಬಡುವನು ಕಷ್ಟಾ 6 ಮೂರ್ತಿ ಭವತಾರಕ ಭಜಕರ ಸೂರ್ಯನ ಬಲ್ಲದೆ ಗೂಗಿ 7 ಭವ ದೋಷವು ಅಳಿವಹುದೇ? | ಗುರು ಭವತಾರಕ ಭಜಕರ ಬೋಧವು ಧರೆಯೊಳು ನರರಿಗೆ ಇಹುದೇ ? 8 ಮಾತು ಸತ್ಯವಾದರೆ ಆತಗೆ ಶಿವನೆನು- ತಿಹರೀ ಜಗ ಜನರೂ | ಭೂತಭವಿಷ್ಯತ್ ಹೇಳಲು ಭಕ್ತಿಯೊಳಾತಗೆ ನಡಕೊಂಬುವರೂ | ಭೂತಳದೊಳು ಭವತಾರಕ ಭಕ್ತರ ನೀತಿ ಮರೆತ ಪಾಮರರೂ | ನೂತನ ಖ್ಯಾತಿಯ ಕೊಂಡಾಡುತ ಬಹು ಪಾತಕಕೆಳಿ ಎಂಬುವರೂ 9 ಕರ ಭವ ಮೂರ್ತಿ ಭವತಾರಕ ಭಜಕರು ಇದ್ದ ಸ್ಥಿತಿಯನರಿಯರು 10 ಆಡುವರಾಟವ ಬಾಲರ ಮನೆಯಲಿ ಮಾಡುತ ಬ್ರಹ್ಮಾಂಡವನೂ |ನೋಡರು ಹಿರಿಯರು ಸಟೆಯೆಂದೇ ದಿಟ ಮಾಡುವರಿಹದಾಟವನೂ | ಪಾಡಲ್ಲೆನುತಲಿ ತಿಳಿದವರೊಳು ಬೇಡುವರಾ ನಾಕವನೂ | ರೂಢಿಯೊಳಗೆ ಭವತಾರಕ ಭಜಕರು ನೋಡರು ಪುಸಿಯೆಂದದನೂ 11 ನಿತ್ಯ ಪೂರ್ಣ ಭವತಾರಕನಂಘ್ರಿಯ ಹೊಂದದೆ ತಿಳಿಯದು ಗುಟ್ಟೂ 12 ಸಂಚಿತ ಪ್ರಾರಬ್ಧ ಕ್ರಿಯಮಾಣಾ ಜನರಿಗೆ ಬರೆದನು ಬ್ರಹ್ಮಾ | ಮುಂಚೆ ಶಿರವನು ನೀಗಿದಾ ಬರದವರಾರೊ ಆತಗೆ ತಮ್ಮಾ | ಮಿಂಚಿನಂತೆ ಜೀವನಕೆ ತಗಲುವಾ ಮಾಡುವ ಕರ್ಮಾ ಧರ್ಮಾ | ಹಂಚಿಕೆ ತಿಳಿಯದೆ ನುಡಿವರು ಮರುಳರು ವಂಚನೆ ಬಿಡು ಇದು ವರ್ಮಾ 13 ದೇವ ನೈವೇದ್ಯವು ಖೊಬ್ಬರಿ ಸಕ್ಕರಿ ಪನಿವಾರವು ನೋಡಿ | ಆವ ಕುಲದವನಾದರೂ ಏನು | ಇಲ್ಲದ ಹಂಚಿಕೆ ಮಾಡೀ ಭಾವಿಸಿ ಮೃಷ್ಟಾನ್ನವನಿಟ್ಟರೂ ಕುಲಧರ್ಮದಲ್ಲಿ ನೋಡೀ | ಕೇವಲ ಭವತಾರಕನ ಭಜಕರ ಮುಂದೆ ರಹಸ್ಯವ ಮಾಡೀ 14
--------------
ಭಾವತರಕರು
ದುರಿತ ತಿಮಿರಕೆ ಸೂರ್ಯ ಶರಣ ಜನ ಭಾಗ್ಯೋದಯ ಪ ನರಹರಿಯ ದಾಸಾರ್ಯ ಮರುತಮತ ಪರಿಚರ್ಯ ಶಿರಬಾಗಿ ಮುಗಿವೆ ಕೈಯ್ಯ ಅ.ಪ. ಘೋರತರ ಸಂಸಾರ ಸಾರತರವೆಂದರಿದು ಪಾರಮಾರ್ಥಿಕವ ತೊರೆದು ಭೂರಿ ನರಕದಿ ಬೆಂದು ಗಾರಾಗಿ ಪೋಪರಂದು ನಾರದರೆ ನೀವ್ ಬಂದು ನಾರಾಯಣಾ ಎಂದು ಚೀರಿದಾ ಧ್ವನಿಗೆ ಅಂದು ಘೋರ ಪಾತಕವೆಲ್ಲ ದೂರಾಗಿ ಸ್ವರ್ಗವನು ಸೇರಿ ಸುಖಿಸಿದರು ಎಂದು 1 ಸರಸಿಜಾಕ್ಷನ ಸ್ತುತಿಸಿ ವರ ಪಡೆದು ಧರಣಿಯೊಳು ಮೆರೆವ ಕನ್ನಡ ದೇಶದಿ ಸಿರಿಯಿಂದಲೊಪ್ಪುತಿಹ ಪುರಂದರಗಡದೊಳಗೆ ಇರುವ ಭೂಸುರ ವಂಶದಿ ವರಗರ್ಭದಲಿ ಜನಿಸಿದಿ ನರರಂತೆ ಚರಿಸುತ್ತ ಲೌಕಿಕೆ ಮರುಳಾಗಿ ಸರ್ವಭಾಗ್ಯವ ಗಳಿಸಿದಿ 2 ಚಿನಿವಾರ ವ್ಯಾಪಾರದನುವರಿತು ನವಕೋಟಿ ಧನಕಧಿಪನೆಂದೆನಿಸುತ ಧನಕನಕ ವಸ್ತು ವಾಹನನಿಚಯ ಸಂಗ್ರಹದಿ ತನುಮನಂಗಳ ಶ್ರಮಿಸುತ ಕನಸಿಲಾದರು ದಾನಧರ್ಮಗಳ ನೆನೆಯದೆಲೆ ದಿನಮಾನಗಳ ಕಳೆಯುತ ಇನಿತು ಮಾಯೆಗೆ ಸಿಲುಕಿ ತನ್ನ ಮರೆದಿರಲಾಗ ಘನ ಮಹಿಮ ಬಂದ ನಗುತ 3 ಅಂದು ತಾನೊಲಿದಿತ್ತ ಚೆಂದದಾ ವರಗಳನು ಇಂದು ಸಲಿಸುವೆನು ಎಂದು ಬಂದು ಬ್ರಾಹ್ಮಣ ರೂಪದಿಂದ ನಿಮ್ಮನು ಹರಿಸಿ ಕಂದನಿಗೆ ಮುಂಜಿಯೆಂದು ಮಂದ ಭಾಗ್ಯನ ತೆರದಿ ಪೊಂದಿ ಯಾಚಿಸಲು ನಿಂದು ಒಂದು ದುಡ್ಡನ್ನು ಲೋಭದಿಂ ದೆಸೆಯಲದನುಳಿದು ಸಿಂಧು 4 ಅತ್ತಣಿಂ ಶ್ರೀನಿಧಿಯು ಮತ್ತೆ ಮನೆಯೊಳು ನಿಮ್ಮ ಪತ್ನಿಯನು ಯಾಚಿಸಿದನು ಉತ್ತಮ ಪತಿವ್ರತೆಯೆ ಪುತ್ರನುಪನಯವೆಂದು ಇತ್ತ ಬಂದಿಹೆನೆಂದನು ಚಿತ್ತದೊಲ್ಲಭನ ಸಮ್ಮತಿಯಿಲ್ಲದೆಲೆ ನಾ ನಿತ್ತು ಕಳುಹೆನು ಏನನೂ ಅತ್ತ ಗಮಿಸಿರಿ ಎನಲು ಹೆತ್ತತಾಯ್ ನಿನಗಿತ್ತ ನತ್ತನ್ನು ಕೊಡು ಎಂದನು 5 ನಾಗಾರಿವಾಹನನ ನುಡಿಯು ಮನಸಿಗೆ ಹಿಡಿಯೆ ಮೂಗುತಿಯ ತೆಗೆದಿತ್ತಳು ಭಾಗ್ಯವಂತಳೆ ನಿನಗೆ ಲೇಸಾಗಲೆಂದ್ಹರಿಸಿ ಸಾಗಿ ಬಂದನು ಇತ್ತಲು ಹೋಗು ಹೋಗೆಲೊ ಮತ್ತೆ ನೀನೇಕೆ ಬಂದೆನಲು ಮೂಗುತಿಯ ಕ್ರಯಕೆ ಕೊಡಲು ಈಗ ಬಂದಿಹೆನೆಂದು ನಿಮಗದನು ತೋರಲು ಹೇಗೆ ಬಂದಿತು ಎನ್ನಲು 6 ಮನಕೆ ಸಂಶಯ ಮೂಡಿ ಚಿಂತಿಸುತಿರೆ ನೋಡಿ ವನಜನಾಭನು ಪೇಳ್ದನು ನನಗೀಗ ಧನಬೇಡ ನಿನ್ನಲ್ಲಿಯೇ ಇರಲಿ ಅನುವರಿತು ಬಹೆನೆಂದನು ಸಂತೈಸಿ ಪೊರಮಡಿಸಿ ನಿನಗೆ ನಾಮವನಿಡುವೆನು ಎನುತ ಹರುಷದಿ ನಗುತ ಮನೆಗೆ ಬರುತಲೆ ಕಂಡೆ ವನಿತೆಯಾ ಬರಿ ಮೂಗನು 7 ಮುತ್ತಿನಾ ಮೂಗುತಿಯು ಎತ್ತ ಹೋಯಿತು ಎನಲು ಮುತ್ತೈದೆ ಮನದಿ ನೊಂದು ಮತ್ತೆ ಮುರಿಯಿತು ಎಂದು ತತ್ತರಿಸುತಿರೆ ಕಂಡು ಇತ್ತ ತಾರೆನಲು ನಿಂದು ವಿಪ್ರ ಮತ್ತೇನು ಮಾಡುವರೊ ಕತ್ತಲೆಯು ಮುತ್ತಿ ತಿಂದು ಭಕ್ತವತ್ಸಲ ನಿಂಗೆ ತೆತ್ತರೀತನುವನ್ನು ಕುತ್ತು ಪಾರಾಹುದೆಂದು 8 ತರುವೆನೀಗಲೆ ಎಂದು ತೆರಳಿ ವಿಷವನೆ ಅರೆದು ಕರದಿ ಬಟ್ಟಲನು ಹಿಡಿದು ಹರಣದಾಸೆಯ ತೊರೆದು ಸಿರಿವರನ ಪದನೆನೆದು ಕುಡಿಯುವನಿತರೊಳು ತಿಳಿದು ಕರುಣದಿಂ ಮೂಗುತಿಯ ಗರಳದಲು ಕೆಡಹಲಾ ಮಣಿ ಹರುಷದಳೆದು ಪರಮ ಸಂಭ್ರಮದಿಂದ ಕೊಡಲದನು ನೀವ್ ಕೊಂಡು ಭರದಿ ಅಂಗಡಿಗೆ ಬಂದು 9 ಬೀಗ ಮುದ್ರೆಯ ತೆಗೆದು ನೋಡೆ ಭೂಸುರನಿತ್ತ ಮೂಗುತಿಯು ಕಾಣದಿರಲು ಹೇಗೆ ಹೋಯಿತು ಎಂದು ಮನದೊಳಚ್ಚರಿಗೊಂಡು ಬೇಗನೆ ಮನೆಗೆ ಬರಲು ಹೇಗೆಂದು ತಿಳಿಸದಿರಲು ನೀಗುವೆನು ತನುವನೆಂದು ಬೆದರಿಸಲು ಸಾಧ್ವಿಯಾ ಬಾಗಿ ವಂದಿಸಿ ನುಡಿದಳು 10 ವೃದ್ಧ ಬ್ರಾಹ್ಮಣನಾಗಿ ಹೆದ್ದೈವನೇ ಬಂದು ಪೊದ್ದಿಯಾಚಿಸಲು ಜರಿದೆ ಲುಬ್ಧನಾಗತಿಶಯದಿ ಬದ್ಧನಾದೆನು ದ್ರವ್ಯ ವೃದ್ಧಿಗೋಸುಗವೆ ಬರಿದೆ ಇದ್ದುದಕೆ ಫಲವೇನು ಸದ್ಧರ್ಮದಲಿ ಕೊಡದೆ ಉದ್ಧಾರವಿಲ್ಲೆಂದು ತಿಳಿದೆ ಶುದ್ಧ ಭಾವದಿ ಹರಿಯ ಪದ್ಮಪಾದವ ನೆನೆದು ಹೆದ್ದಾರಿ ಹಿಡಿದು ನಡೆದೆ 11 ಶಿಷ್ಟ ಬ್ರಾಹ್ಮಣರು ನೆಂಟರಿಷ್ಟ ಮಿತ್ರರಿಗೆ ವಿ- ಶಿಷ್ಟವನು ದಾನಗೈದು ನಿಷ್ಠೆಯಿಂ ಮಡದಿ ಮಕ್ಕಳನ್ನೊಡಗೊಂಡು ವಿಠ್ಠಲನ ಪುರಕೆ ನಡೆದು ಕಷ್ಟ ನಿಷ್ಠುರ ಸಹಿಸಿ ಕೃಷ್ಣನಂಘ್ರಿಯ ಭಜಿಸಿ ಇಷ್ಟಾರ್ಥ ಸಿದ್ಧಿಗೈದು ನೆಟ್ಟನೇ ಹಂಪೆ ಪಟ್ಟಣದಿ ವ್ಯಾಸಮುನಿ ಶ್ರೇಷ್ಠರಿಂದುಪದೇಶ ಪಡೆದು 12 ಮಧ್ವಮತ ಸಿದ್ಧಾಂತ ಪದ್ಧತಿಯನುದ್ಧರಿಸಿ ಗದ್ಯಪದ್ಯಗಳಿಂದಲಿ ಮಧ್ವಪತಿ ಪದಪದ್ಮ ಹೃದ್ಯದೊಳು ನೆನೆನೆನೆದು ಮುದ್ದಾಗಿ ವರ್ಣಿಸುತಲಿ ಮದ್ದಳೆಯ ತಾಳ ವೀಣೆಗಳ ಗತಿಹಿಡಿದು ಶುದ್ಧರಾಗಗಳಿಂದಲಿ ಉದ್ಧವನ ಸಖನೊಲಿದು ತದ್ಧಿಮಿತ ಧಿಮಿಕೆಂದು ಪೊದ್ದಿ ಕುಣಿಯುವ ತೆರದಲಿ 13 ಈರೆರೆಡು ಲಕ್ಷಗಳ ಮೇಲೆ ಎಪ್ಪತ್ತೈದು ಸಾ- ವಿರ ಗ್ರಂಥ ರಚಿಸಿ ಈರೆರೆಡು ದಿಕ್ಕಿನಲಿ ಚರಿಸಿ ತೀರ್ಥಕ್ಷೇತ್ರ ಸಾರ ಮಹಿಮೆಗಳ ತುತಿಸಿ ಶೌರಿದಿನದಲಿ ಮಾಳ್ಪ ವ್ರತನೇಮ ಉಪವಾಸ ಪಾರಣೆಯ ವಿಧಿಯ ತಿಳಿಸಿ ತಾರತಮ್ಯವು ಪಂಚ ಭೇದಗಳು ಸ್ಥಿರವೆಂದು ಸಾರಿ ಡಂಗುರವ ಹೊಯಿಸಿ 14 ತರುಣಿ ಮಕ್ಕಳು ಶಿಷ್ಯ ಪರಿವಾರಗಳ ಸಹಿತ ಧರೆಯನೆಲ್ಲವ ತಿರುಗುತ ಕರದಿ ಕಿನ್ನರಿ ಧರಿಸಿ ಸ್ವರವೆತ್ತಿ ಪಾಡುತಿರೆ ಕೊರಳುಬ್ಬಿ ಶಿರ ಬಿಗಿಯುತ ಎರಡು ಕಂಗಳು ಧಾರೆ ಸುರಿಯೆ ಬಾಷ್ಪೋದಕವ ಹರಿ ಮಹಿಮೆ ಕೊಂಡಾಡುತ ತಿರಿ ತಂದ ಧನದಿಂದ ವಿಪ್ರರಿಗೆ ಮೃಷ್ಟಾನ್ನ ಹರುಷದಿಂದಲಿ ಉಣಿಸುತ 15 ಗುಪ್ತವಾಗಿರೆ ಕಂಡು ವ್ಯಕ್ತ ಮಾಡುವೆನೆಂದು ಶಕ್ತನಹ ದೇವ ಬಂದ ಓಗರ ಉಂಡ ಸುತನಾಗಿ ನೀರ ತಂದ ಯತಿಯ ಪಂಕ್ತಿಗೆ ಭಾಗಿರಥಿಯನ್ನು ತರಿಸಿದ ಕ್ಷಿತಿಪತಿಗೆ ದೃಢ ತೋರಿದ ಸತಿಯೆಂದ ಮಾತಿಗೆ ಅತುಳ ಭಾಗ್ಯವನಿತ್ತು ಪಥದಲ್ಲಿ ತಲೆಗಾಯಿದ 16
--------------
ಲಕ್ಷ್ಮೀನಾರಯಣರಾಯರು
ದೈಶಿಕನಾಥ | ಶ್ರೀ ಸುಶೀಲೇಂದ್ರ ಗುರು ಪ ಮಾರ್ಗಣ | ಮತ್ತಗಜಾಂಕುಶ ರಿತ್ತ ಸನ್ಮಂದಿರ ಭೋ 1 ಸದ್ಧರ್ಮಶೀಲ | ಶುದ್ಧಸ್ವಭಾವ ಮಧ್ವಮತಾಬ್ಧಿ ವಿಭೋ 2 ಶ್ರೀಮನೋವಲ್ಲಭ | ಶಾಮಸುಂದರ ಸು ಪ್ರೇಮ ಸತ್ವಾತ್ರ ಪ್ರಭೋ3
--------------
ಶಾಮಸುಂದರ ವಿಠಲ
ನಗಬಹುದು ನೀ ಮುಗುಳು ನಗೆಯಾ ಗುರುರಾಯಮಿಗೆ ಕಂಡು ದೇಹಾಭಿಮಾನಿಗಳ ಬಗೆಯಾ ಪತನ್ನ ತಾನರಿಯಲೀಸದ ಮಾಯೆಗೊಳಗಾಗಿಅನ್ಯರೇತೋಜಾತಮಾದ ದೇಹವ ನೋಡಿತನ್ನಿಂದ ತಾ ಕಾಣಪಡುತಿಹುದಿದಲ್ಲವೆಂದೆನ್ನಲಾರದೆ ದೋಷದಿಂದಾಉನ್ನತದ ಮಾಂಸ ರಕ್ತಾಸ್ತಿಮಲ ಮೂತ್ರಂಗಳಿನ್ನೆನೆದುನಾರುವ ನವದ್ವಾರ ಮಾರ್ಗದಿಂತನ್ನ ಮರಸುವದೇಹವೆತನ್ನದೆಂದು ಮರೆದುಣ್ಣುರಿವಾತಗಳ ಕಂಡೂ ಮಾಯೆ ಭಾಪೆನ್ನುತ್ತ ಬೆರಳೊಲದು ಕೊಂಡು ಬಗೆಗಂಡೂ 1ಬಿಟ್ಟ ಮನೆ ಜನ ಧನಂಗಳಲಿ ಮತ್ತೂ ಮನವನಿಟ್ಟು ವಾಂತ್ಯಾಶನವನುಂಬ ನಾಯಂದದಲಿಪಟ್ಟಣಂಗಳಲಿ ತಿರುಗುತ ಪರರ ಬಾಧಿಸುತಕೆಟ್ಟ ಬುದ್ಧಿುಂದ ಧೃತಿಗುಂದಿಕೊಟ್ಟಪುದು ಕರ್ಮವೆಂಬುದ ಮರೆತು ಗೇಣುದ್ದಹೊಟ್ಟೆ ಬಟ್ಟೆಗೆ ದೈನ್ಯ ಬಟ್ಟು ಮೂಢತೆುಂದಕೆಟ್ಟೆನಿನ್ನಾರು ರಕ್ಷಿಪರೆಂದು ಚಿಂತಿಸುವಹೊಟ್ಟೆಹೊರಕರನು ನೋಡುತ್ತಾ ಕಟಕಟಾಕೆಟ್ಟರಿವರೆಂದು ಹಾಸ್ಯವನು ಮಾಡುತ್ತಾ 2ತಾನಾತ್ಮನೆಂಬುದನು ಕೇಳಿದ್ದುದೃಷ್ಟಾನುಮಾನಂಗಳಿಂ ನಂಬಿಗೆಯೆುಲ್ಲದದರಲ್ಲಿಮಾನಾವಮಾನಂಗಳಿಂ ಹರುಷ ಶೋಕಾದಿಹೀನಬುದ್ಧಿಗಳ ಮಾಡುತ್ತಾಜ್ಞಾನಮಾರ್ಗದಲಿ ವಿಶ್ವಾಸವಿಲ್ಲದೆ ತನ್ನ ಕಾಣಲಾರದೆ ಭೇದ ಬುದ್ಧಿುಂ ವ್ರತತೀರ್ಥಸ್ನಾನಾದಿುಂದ ಮುಕುತಿಯ ಪಡೆಯಬೇಕೆಂಬಮಾನವರ ಭ್ರಾಂತಿಯನು ತಿಳಿದೂ ಇವರ್ಗಳಿಗೆಸ್ವಾನುಭವವಿಲ್ಲೆಂದು ಸಮತೆಯಲಿ ನಿಂದೂ 3ರಾಗವನು ಬಿಡಲಾರದಾಶಾಪಿಶಾಚಕೊಳಗಾಗಿ ಸತ್ಸಂಗ ಸತ್ಕಥೆಯ ಕೇಳಿಕೆಗಳನುನೀಗಿ ಧನಿಕರೊಳಿಚ್ಚಿತವನಾಡಿ ಸದ್ಧರ್ಮತ್ಯಾಗಿಯಾಗ್ಯನೃತಕ್ಕೆ ಪೊಕ್ಕೂಹೀಗೆ ತಿರುಗುತ ಪರಾನ್ನಾದಿ ಭೋಗಕ್ಕಾಗಿಕಾಗೆಯಂದದಲಲ್ಲಿಗಲ್ಲಿಗೆ ಸದ್ಗತಿುೀವಯೋಗ ಮಾರ್ಗವ ಬಿಟ್ಟುಭ್ರಾಂತರಾದಿರಿ ಮಹದ್ರೋಗಿಗಳ ಕಂಡು ಬೆಸಗೊಂಡು ಇವರ್ಗೆ ಭವರೋಗ ಬಿಡದೆಂದು ನಿಜಪದದಲ್ಲಿ ನಿಂದೂ 4ಇಂತರಿವ ಜನರಲ್ಲಿ ನಿಂತು ಸನ್ಮತಿುತ್ತುಚಿಂತೆಗಳ ಬಿಡಿಸುತ್ತಲಂತರಾತ್ಮಕನಾಗಿಸಂತಗೋಪಾಲಾರ್ಯ ಗುರುವರ್ಯನಾಗಿ ವೇದಾಂತದರ್ಥವನು ಬೋಧಿಸುತಾಅಂತವಿಲ್ಲದ ನಿಜವ ತೋರಿ ಪಾಲಿಸಿ ಮುದವಂತಾಳ್ದು ಸಕಲ ಸಂಶಯಗಳನು ಪರಿಹರಿಸಿಶಾಂತರಾದಿರಿ ಮೋಹಹೋುತ್ತು ನಿತ್ಯ ಸ್ವಾತಂತ್ರ್ಯವಾುತು ಗೆದ್ದಿರೆನುತಾಸಂತತಾನಂದಕನುಗೈದು ಕೈ ಹೊುದೂ 5
--------------
ಗೋಪಾಲಾರ್ಯರು
ನಮೋ ನಮೋ ಸುಶೀಲೇಂದ್ರ | ಗುರುವರಿಯ ವೈಷ್ಣವ ಸುಮತವಾರಿಧಿ ಚಂದ್ರ | ಸಕುವಿ ಸಂಸ್ತುತ | ಅಮಿತ ಸದ್ಗುಣ ಸಾಂದ್ರ || ಸುಮತಾಹಿವೀಂದ್ರ ಪ ನಮಿಪ ಜನರಿಗೆ ಅಮರ ಭೂರುಹ ಸಮಸುಖಪ್ರದ ವಿಮಲ ಚರಿತನೆ ಯಮಿವರ್ಯ ಸುವೃತೀಂದ್ರ ಮಾನಸ ಕಮಲರವಿ ಮಹಿ ಸುಮನಸಾಗ್ರಣಿ ಅ.ಪ ಅಸಮ ಮಹಿಮೋದರ | ತವಸುಪ್ರಭಾವವ ಸುಜನ ವಂದಿತ ಸ್ವಶನ ಸುಮತೋದ್ಧಾರ || ದಯ ಪಾರವಾರ || ವಸುಧೆಯೊಳು ಮೊರೆಹೊಕ್ಕ ಜನರಿಗೆ ಕುಶಲಪ್ರದ ನೀನೆಂದು ಬುಧ ಜನ ಉಸುರುವದು ನಾ ಕೇಳಿ ನಿನ್ನ ಪದ ಬಿಸಜ ನಂಬಿದೆ ಪೋಷಿಸನುದಿನ 1 ದೀನಜನ ಸುಖದಾತ | ಸುಕೃತೀಂದ್ರ ಕೋಮಲ ಬಾಣಲೋಕ ವಿಖ್ಯಾತÀ || ದ್ವಿಜಕುಲಕೆ ನಾಥ || ಕ್ಷೋಣಿಯೊಳು ನೀ ಒಲಿದ ಮಾತ್ರದಿ ಮೌನಿವರ್ಯ ಶ್ರೀ ರಾಘವೇಂದ್ರರು ಸಾನುರಾಗದಿ ಸಲಹುವರು ಪವ ಮಾನ ಶಾಸ್ತ್ರ ಪ್ರವೀಣ ಜಾಣ 2 ಪಿಂಗಲೇಂದ್ರ ಪ್ರಕಾಶ | ಸುಪವಿತ್ರ ವರದತ ರಂಗಿಣಿ ತಟವಾಸ | ಸದ್ಧರ್ಮ ಸ್ಥಾಪಕ ಮಂಗಳಾಂಗ ಯತೀಶ | ಪಾಪೌಘನಾಶ || ತುಂಗವಿಕ್ರಮ ಶಾಮಸುಂದರನಂಘ್ರಿ ಕಮಲಕೆ ಭೃಂಗ ಭವಗಜಸಿಂಗ ಕರುಣಾ ಪಾಂಗದೀಕ್ಷಿಸೆ ಇಂಗಿತಜ್ಞರ ಸಂಗಪಾಲಿಸು 3
--------------
ಶಾಮಸುಂದರ ವಿಠಲ