ಒಟ್ಟು 58 ಕಡೆಗಳಲ್ಲಿ , 19 ದಾಸರು , 53 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಿಲ ಹೃತ್ಕಮಲಸ್ಥ | ಮುನಿ ವೇದವ್ಯಾಸಎನಗಿನ್ನು ತವಧ್ಯಾನ | ಸುಖವೀಯೊ ಶ್ರೀಶಾ ಪ ಚಿದಚಿದ್ವ ಲಕ್ಷಣನೆ | ಚಿತ್ರ ಚಾರಿತ್ರನೇಚತುರಾಸ್ಯ ಪಿತ ನೀನು | ಸುರ ಚಕ್ರವರ್ತೀ |ಚತುರ ರೂಪವ ಧರಿಸಿ | ಚತುರ ವ್ಯೂಹವ ರಚಿಸಿಚತುರ ವಿಧ ಸೃಷ್ಟಿಯನು | ಚತುರ ವಿರಚಿಸಿದೇ1 ಮುನಿ ಪರಾಶರ ತನುಜ | ಶ್ರೀನಿಕೇತನ ಹರಿಯೆಎನಗರುಹು ವೇದಾರ್ಥ | ವೇದವೇದ್ಯಾ |ಘನ ಮಹಿಮ ಕೋಟಿ | ನಿಖಿಲಾಂಡ ನಾಯಕನೆಅನಘ ನೀ ಸಲಹಯ್ಯ | ಕಪಿಲ ರೂಪಾತ್ಮ 2 ಸಚ್ಛಾಸ್ತ್ರ ಕರ್ತೃ ಸತ್ | ಸೂತ್ರಗಳ ನಿರ್ಮಾತೃಸಚ್ಛಾಸ್ತ್ರ ಭಾವಗಳ | ಅರುಹೆ ವಿಬುಧರಿಗೇ |ಮತ್ಸ್ಯಾದಿ ರೂಪನಿ | ನ್ನಿಚ್ಛೆಯಿಂದಲಿ ಪೊಂದಿವತ್ಸರ್ಗೆ ಭೋದಿಸಿದೆ | ಸಚ್ಚಿದಾನಂದಾ 3 ಮೂಲ ಪ್ರಕೃತಿಯ ಮಾನಿ | ಮಹಾಲಕ್ಷ್ಮಿ ನಿನ್ನಯಶೀಲಗಳನನುಸರಿಸಿ | ಸೇವಿಸುವಳೂ |ಪ್ರಲಯ ಕಾಲದಿ ನಿನ್ನ | ಒಲುಮೆಗೋಸುಗ ವಟದಎಲೆಯ ರೂಪದಿ | ಮಲಗಲನು ವಾದಳಯ್ಯ 4 ಮೂರ್ತಿ | ಬದರಿ ಕ್ಷೇತ್ರದಿ ಪೂರ್ಣಭೋದರ ಸುಸೇವೆಯನೆ | ಸತತ ಕೊಳುತಾ |ಮೋದ ಗುಣ ಪೂರ್ಣ ಗುರು | ಗೋವಿಂದ ವಿಠ್ಠಲನೆಹೇ ದಯಾಂಬುಧೆ ನಿನ್ನ | ಪಾದಾಬ್ಜ ತೋರೋ 5
--------------
ಗುರುಗೋವಿಂದವಿಠಲರು
ಅನಿಲ ಹೃತ್ಕುಮುದೇಂದು | ವೇದ ವ್ಯಾಸಾಎನಗಿನ್ನು ತವ ಧ್ಯಾನ | ಸುಖವೀಯೊ ಶ್ರೀಶಾ ಪ ಚಿದ ಚಿದ್ವಿಲಕ್ಷಣನೆ | ಚಿತ್ರ ಚಾರಿತ್ರನೇಚತುರಾಸ್ಯ ಪಿತ ನೀನು | ಸುರ ಚಕ್ರವರ್ತೀ | ಚತುರ ರೂಪವ ಧರಿಸಿ | ಚತುರ ವ್ಯೂಹವ ರಚಿಸಿಚತುರ ವಿಧ ಸೃಷ್ಟಿಯನು | ಚತುರ ವಿರಚಿಸಿದೇ 1 ಮುನಿ ಪರಾಶರ ತನುಜ | ಶ್ರೀನಿಕೇತನ ಹರಿಯಎನಗರುಹು ವೇದಾರ್ಥ | ವೇದ ವೇದ್ಯಾ |ಘನ ಮಹಿಮಕೋಟಿ | ನಿಖಿಲಾಂಡ ನಾಯಕನೆಅನಘ ನೀ ಸಲಹಯ್ಯ | ಕಪಿಲ ರೂಪಾತ್ಮಾ 2 ಸಚ್ಛಾಸ್ತ್ರ ಕರ್ತೃಸತ್ | ಸೂತ್ರಗಳ ನಿರ್ಮಾತೃಸಚ್ಛಾಸ್ತ್ರ ಭಾವವರುಹೆ | ಬುಧ ಜನರಿಗೇ |ಮತ್ಸ್ಯಾದಿ ರೂಪ ನಿ | ನ್ನಿಚ್ಛೆಯಿಂದಲಿ ಪೊಂದಿವತ್ಸರ್ಗೆ ಬೋಧಿಸಿದೆ | ಸಚ್ಚಿದಾನಂದಾ 3 ಮೂಲ ಪ್ರಕೃತಿಯ ಮಾನಿ | ಮಹಲಕ್ಷ್ಮೀ ನಿನ್ನಯಶೀಲಗಳನನುಸರಿಸಿ | ಸೇವಿಸುವಳೂ |ಪ್ರಳಯ ಕಾಲದಿ ನಿನ್ನ | ಒಲುಮೆಗೋಸುಗ ವಟದಎಲೆಯ ರೂಪದಿ ಮಲ | ಗಲನುವಾದಳಯ್ಯ 4 ಮೂರ್ತಿ | ಬದರಿ ಕ್ಷೇತ್ರದಿ ಪೂರ್ಣಬೋಧರ ಸುಸೇವೆಯನು | ಸ್ವೀಕರಿಸುವೇ |ಮೋದಗುಣ ಪೂರ್ಣ ಗುರು | ಗೋವಿಂದ ವಿಠಲನೇಹೇ ದಯಾಂಬುಧೇ ನಿನ್ನ | ಪಾದಾಬ್ಜ ತೋರೋ 5
--------------
ಗುರುಗೋವಿಂದವಿಠಲರು
ಅನುದಿನ ವಿಷಯ ಸುಖವು ಎಂದು ಕನಸಿಲಾದರು ಸ್ಮರಿಸಲಾಗದು ಮನವೆ ಪ ಘನ ಸಂತೋಷವಿಲ್ಲವಿದು ನಿತ್ಯಾನಿತ್ಯ ಸುಖ ಬಯಸಿ ಮನದಲ್ಲಿ ನೀ ಸ್ಮರಿಸೆ ಹರಿಯೆ | ತೊರೆಯ ಅ.ಪ ಅಶನ ವಸನ ಪಶುವ್ರಾತ ವಶವಿರುವಾಭರಣ ಹಸನಾದ ರಥ ಪದಾತಿಗಳು ಸ್ವಸ್ವರೂಪವಲ್ಲ ಭಿನ್ನ ತಿಳಿಯೊ | ಮಮತೆ ಅಳಿಯೊ 1 ಬುದ್ಧಿ ವಿದ್ಯಾಕುಶಲ ಗತಿ ಅಧ್ವರ್ಯ ಪ್ರಭು ಮನ್ನಣೆ ಶುದ್ಧ ರೂಪ ಲಾವಣ್ಯ ಯೌವನ ಸಿರಿ ಶೌರ್ಯ ಪರಾಕ್ರಮ ವದ್ಯವಾಗಿ ಪೋಪುದು ಸ್ಥಿರವಲ್ಲ | ಸುಳ್ಳಲ್ಲ 2 ಇಚ್ಛೆಯಿಲ್ಲದೆ ನೀನು ಜನರ ಮೆಚ್ಚಿಗಾಗಿ ಮಾಡಿದ ದಾನ ವೆಚ್ಚವಾಗಿ ಪೋಪವೊ ಧನವಲ್ಲದೆ ನಿಚ್ಚಳ ಪುಣ್ಯಬಾರದು ಮನವೆ ಹೆಚ್ಚಿನ ಸ್ತೋತ್ರಕೆ ಮರುಳಾಗಿ ನೆಚ್ಚದಿರು ವಿಹಿತೋಕ್ತಿಯ | ಬಿಡದಿರು ಸನ್ಮತಿಯ 3 ಆರ್ತನಾಗದಲೆ ನೀನು ಕೀರ್ತಿಗೋಸುಗ ಕಥಾಶ್ರವಣ ಕರ್ತಭಾವದಿ ಸತತ ಮಾಡೆ ವರ್ತಿಸುವ ಪುಣ್ಯಪ್ರಾಪ್ತಿ ವೈಷಿಕ ಸುಖವಲ್ಲದೆ ಶಾಸ್ತ್ರಮರ್ಮ ತಿಳಿಯದೊ | ಅಹಂ ಮಮವಳಿಯದೊ 4 ಮಾನಿತನು ನಾನೆಂದು ನಾನಾ ಮತವಾಶ್ರಯಿಸಿ ಜ್ಞಾನಿಗಳಿಗೆ ಶಿರಬಾಗಲೊಲ್ಲಿ ಏನು ಇದರಿಂದೆಂಬ ತ್ರಿಕರಣ ಶುದ್ಧಿಕಾರಣ ದ್ಯುನದಿ ಸ್ನಾನವಾಹವಲ್ಲಾ | ಇದು ಬಿಡಸಲ್ಲಾ 5 ಕೈಗೊಳುವುದೇ ಮಾನ ಅನ್ಯಾಧೀನವೆನ್ನದೆಂಬುದೇ ಲಜ್ಜಾ ಅನುಭವ ಜ್ಞಾನಿಗಳ ಸಹವಾಸ ಸ್ನಾನ ಸಚ್ಛಾಸ್ತ್ರಾಲಾಪ ನಾನು ನನ್ನದು ಬಿಡುವುದೇ ತ್ಯಾಗ | ಇದೇ ಯೋಗ 6 ಕರಣ ವಿಷಯಗಳಲ್ಲಿ ಹರಿಯ ಚಿಂತಿಸುತ ನಿತ್ಯ ವರ ಯೋಗ ಭೋಗದಲ್ಲಿ ವರ ರಾಮಚಂದ್ರವಿಠಲರಾಯನು ನಿನ್ನ ದುರಿತ ಕಳೆದು ಪಾಲಿಸುವ7
--------------
ವಿಜಯ ರಾಮಚಂದ್ರವಿಠಲ
ಅವತಾರತ್ರಯ (1) ಕರುಣದೆನ್ನನು ಕಾಯಬೇಕಯ್ಯಾ ಕದರೂರ ರಾಯಕರುಣದೆನ್ನನು ಕಾಯಬೇಕ್ಕೆಹರಸುರಾದಿಗಳಿಂದ ವಂದ್ಯನೇದುರಿಥ ಪರಿಹರಿಸಿಹ ಪರಕೆ ನೀ-ನ್ಹರುಷದಲಿ ಸಾಧನ ಮಾಡಿ ಪ ಅಂಜನಿಯ ಗರ್ಭದಲ್ಲಿ ಜನಿಸಿದೆಯೊ ಶ್ರೀರಾಮನಂಘ್ರಿಕಂಜದಲ್ಲಿಹ ಭ್ರಮರನೆನಿಸಿಯಾಅಂಜದಂಬುಧಿಯ ದಾಟಿ ಸೀತೆಯ -ನಂಜಿಸುವ ರಾವಣನ ಬಲಗಳಭಂಜಿಸಿದಿ ಧರೆಯೊಳಗೆ ತೇಜಃಪುಂಜನಾಗಿಹ ಪ್ರಭುವೆ ಎನ್ನನು 1 ಅಖಿಳ ಕುರುಬಲಅಂತಕನಿಗೊಪ್ಪಿಸಿದಿ ಜಗದಾ -ದ್ಯಂತ ಸುಜನರಿಗಿತ್ತಿ ಸಂತಸಸಂತತೆನ್ನನು ಬಿಡದೆ ಪವನನೆ 2 ಮಧ್ಯಗೇಹನಲ್ಲಿ ಪುಟ್ಟಿದೆಯೊ ಸಚ್ಛಾಸ್ತ್ರ ಪಠಿಸಿ ಆ -ಪದ್ಧ ಮತದವರನ್ನು ಕುಟ್ಟಿದಿಯೊಉಧ್ವನುತ ರಮಾಪತಿ ವಿಠ್ಠಲನಸದ್ಯ ಮನದಲಿ ತೋರಿ ಕೊಟ್ಟೆ -ನ್ನುದ್ಧರಿಸಿ ಭವಕಡಲ ದಾಟಿಸೊಮಧ್ವಮುನಿ ಸಜ್ಜನತ್ಪ್ರಸಿದ್ಧನೆ 3
--------------
ರಮಾಪತಿವಿಠಲರು
ಗುರುಕೂರ್ಮಚಾರ್ಯರ ಚರಣಕಮಲಯುಗ್ಮ ಮಾನವ ಪ ಧರಣಿಯೊಳಗೆ ಸುಕ್ಷೇತ್ರಗಾಲವ ಪುರದಿ ಶ್ರಿ ನರಶಿಂಹಾ ಚಾರ್ಯರ ತರುಣಿಯಳ ಗರ್ಭಾಬ್ಧಿಯಲಿಹಿಮ ಕರನ ತೆರದಲಿ ಜನಿಸಿಮೆರೆದ ಅ.ಪ ವರಕೊಲ್ಹಾಪುರದಿ ಪೋಗಿರಲು ಸುಂದರವಾದ ಸಿರಿಯರೂಪವ ಕಾಣುತ್ತ ಅರಿತು ಪ್ರಾರ್ಥಿಸಲು ಶ್ರೀ ನರಶಿಂಹಾರ್ಯರಿಗೊಲಿದು ಕರುಣದಿಂದಲಿ ಕೊಟ್ಟಂಥ ಚರಣಕವಚ ಸ್ವರಣ ಸಂಪುಟದಲ್ಲಿ ನಿರುತ ಪೂಜೆಯ ಮಾಡುತ್ತ ಪ್ರವಚನಾಸಕ್ತ ಧರೆಯೊಳಗೆ ಬಹು ಶರಣು ಜನ ರಘ ತರಿದು ಸೌಖ್ಯವ ಗರಿವುದಕೆ ಸಂ ಚರಿಸುತಲಿ ಸಚ್ಛಾಸ್ತ್ರ ಮರ್ಮವ ನರುಹಿಜನರನುದ್ಧರಿಸಿದಂಥ 1 ಪೊಳೆವ ಫಾಲದಿ ಪುಂಡ್ರ ತಿಲಕ ಮುದ್ರಾಕ್ಷತಿ ವಿಲಸಿತ ಶುಭಗಾತ್ರದಿ ಅಲವ ಬೋಧರ ಮತದೊಳು ತತ್ವಬೋಧಕ ಸುಲಲಿತೋಪನ್ಯಾಸದಿ ಬಲು ವಿಧಾರ್ಥವ ಪೇಳಿಕುಳಿತಪಂಡಿತರನ್ನು ಒಲಿಸುತಿರೆ ಪೂರ್ವದಿ ಪಂಢರಪುರದಿ ಭವ ಮುದ್ಗಲಾಚಾರ್ಯರಿ ಗೊಲಿದು ಬಂದಿಹ ಚಲುವ ವಿಠ್ಠಲ ಮೂರುತಿಯ ಪದ ಜಲಜ ಮಧುಕರರೆನಿಸಿದಂಥ 2 ಜಡಜಾಪ್ತನುದಯದಿ ನಡೆದು ದ್ವಿಜಗೃಹದೇವ ರಡಿ ಗೊಂದನೆಯ ಮಾಡುತ್ತ ಎಡೆಬಿಡದಲೆ ತಮ್ಮ ಅಡಿಗೊಂದಿಸುವ ಭಕ್ತ ಗಡಣವ ಮನ್ನಿಸುತ ಬಿಡದೆ ಶತತ್ರಯ ಕೊಡ ಜಲದಲಿ ಸ್ನಾನ ದೃಢಮನದಲಿ ಮಾಡುತ್ತ ತಂತ್ರ ಸಾರೋಕ್ತ ಎಡಬಲದಿ ಶೇವೆಯನು ಮಾಡುವ ಪೊಡವಿಸುರಕೃತ ವೇದ ಘೋಷದಿ ಜಡಜನಾಭನ ಪೂಜಿಸುವ ಬಹು ಸಡಗರವ ನಾನೆಂತು ಬಣ್ಣಿಪೆ 3 ಭೂತಲದಲಿ ಶ್ರೇಷ್ಠವಾತ ಮಾತಾಂಬುಧಿ ಶೀತ ಕಿರಣನೆನಿಸಿ ಪ್ರಾತರಾರಭ್ಯ ಶ್ರೀನಾಥನೆ ಪರನೆಂಬೊ ಶಾಸ್ತ್ರದಿ ಮನವಿರಿಸಿ ಖ್ಯಾತ ಸತ್ಯಧ್ಯಾನ ತೀರ್ಥರೆಂಬುವ ಗುರು ಪ್ರೀತಿಯ ಸಂಪಾದಿಸಿ ಪುತ್ರರಿಗೆ ಬೋಧಿಸಿ ಪ್ರೀತಿಯಲಿ ಶಿಷ್ಯರಿಗೆ ಭಗವ ದ್ಗೀತೆಯನು ಪ್ರತಿದಿನದಿ ಪೇಳುತ ಪಾತಕವ ಪರಿಹರಿಸಿ ಪರಮ ಪು- ನೀತ ಗಾತ್ರರ ಮಾಡಿ ಸಲಹಿದ 4 ಧರೆಯೊಳಧಿಕಮಾದ ಗಿರಿ ವೇಂಕಟೇಶನ ದರುಶನವನೆ ಕೊಳ್ಳುತ ಗುರುವಾಜ್ಞೆಯಲಿ ಬಂದು ವರ ಸಭೆಯೊಳು ತಮ್ಮ ಪರಿವಾರದಿಂದಿರುತ ವರಷ ಶಾರ್ವರಿಯೊಳು ವರ ಮಾಘ ಪ್ರತಿಪದ ಬರಲು ಧ್ಯಾನವ ಮಾಡುವ ಹರಿಪದಾಸಕ್ತ ಪರಮ ಭಕುತಿಯಲಿಂದ ಶೇವಿಪ ಶರಣು ಜನ ಮಂದಾರ ನೆನಿಸುತ ಮೆರೆವ ಕಾರ್ಪರ ನಿಲಯ ಶಿರಿನರ ಹರಿಯ ಪುರವನು ತ್ವರದಿ ಶೇರಿದ 5
--------------
ಕಾರ್ಪರ ನರಹರಿದಾಸರು
ಚರ್ಯನಾಮುಗಿವೆನು ಕೈಯ್ಯಾ ಪ ಮಂತ್ರಸದನ ಪದ ಚಿಂತಕ ಶ್ರೀ ರಘು ಕಾಂತಕರಜ ರಘು ದಾಂತ ಯತೀಂದ್ರರ ಅ.ಪ ಅಂತರಂಗದಿ ಸಂತತ ಶ್ರೀಹರಿಯ ಚಿಂತಿಸುತಲಿ ಭೂಮಿಯ ಕಾಂತ ದಂಷ್ಟ್ರದಿ ಸಂಜನಿಸಿದ ನದಿಯ ಸಂಗಮ ಶುಭನಿಲಯ ವಿಶ್ರಾಂತ ಸುಮಹಿಮರ 1 ಪತಿ ಲಕ್ಷ್ಮಣರ ಪಾದಾಂಬುಜ ಮಧುಪರ ಮೋದಾಶ್ರು ಸುರಿಸುತ ಪೂಜಿಸಿದವರ ಪುಲಕೀತ ವಿಗ್ರಹರ ವಾದಿವಾರಣ ಮೃಗಾಧಿಪರೆನಿಸುತ ಮೋದತೀರ್ಥ ಸುಮ ತೋದಧಿ ಚಂದಿರ 2 ಇಳಿಯೊಳು ಚರಿಸುತ ಬುಧ ಜನರನ್ನು ಚಲಿಸುತ ಛಾತ್ರರನು ತಿಳಿಸೀ ಸಚ್ಛಾಸ್ತ್ರವ ಮರ್ಮಗಳನ್ನು ಉದ್ಧರಿಸ್ಯವರನ್ನು ಯಳಮೇಲಾರ್ಯರ ಒಲುಮೆ ಪಡೆದು ಭವ ಕಲುಷ ವಿದೂರರ 3 ದಾಸರ ಶುಭಚರಿಯ ಸ್ತುತಿಸಿ ಶೇವಿಸಿ ಪಡೆದರು ಗುರುಕೃಪೆಯ ನೋಳ್ಪರಿಗಾಶ್ಚರ್ಯ ನತ ಜನರಘ ಪರ್ವತ ಪವಿ ಸನ್ನಿಭ ಕ್ಷಿತಿ ಸುರತತಿ ಸೇವಿತ ಪದ ಪದ್ಮರ 4 ಜಾಣ ಮಾನವರನ ಸಾನುರಾಗದಿ ಧ್ಯಾನಿಸಲಿವರನ್ನ ಕಾಮಿತ ಗರಿವರನ ಶ್ರೀನಿಧಿ ಕಾರ್ಪರ ಸ್ಥಾನಗ ನರಪಂಚನನನೊಲಿಸಿದ ಮೌನಿವರೇಣ್ಯರ 5
--------------
ಕಾರ್ಪರ ನರಹರಿದಾಸರು
ಜಾಹ್ನವಿ ಜನಕ ಮೂಜಗತ್ಪತಿ ಸುರಕುಲ ಸನಕಾ ದೀಜನ ಮನೋಹರ ಮಾಣಿಕ್ಯ ಕನಕಾ ವೈಜಯಂತಿ ಹಾರ ಪಾವನ್ನ ಪದಕ ಪ ಕೇಶಿಭಂಜನ ವ್ಯೋಮಕೇಶ ವಂದಿತ ಪಾದ ಕ್ಲೇಶನಾಶನ ವಾತೇಶನ ಜನಕ ಕೇಶರಿರುಹ ಮುಂಜಿಕೇಶನೆ ಕುಂಕುಮ ಶೌರಿ 1 ವಾರುಣಿ ಪತಿನುತ ವಾರುಣನ ಭಯ ನಿ ವಾರಣಾ ವಾರಣಾಶಿ ಪುರದರಸೆ ವಾರಣ ನಗರಿಯ ವಾರನಹತಪಲ್ಲ ವಾರುಣಿ ಪಾಣಿಯೆ ನಾರಾಯಣನೆ ಜೋ ಜೋ 2 ಮಾದೇವಿ ರಮಣ ಭೂಮಿದೇವಿ ಉದ್ಧಾರ ಮಾಧುರ್ಯ ವಚನ ಉಮಾದೇವಿ ವಿನುತಾ ಮಾಧಾರ ಮಹಶೂರ ಮತ್ಕುಲನೆ ಪ್ರೇ ಮಾಧವ ರಾಯಾ 3 ಗೋವಳಿ ಪರಿಪಾಲ ಗೋವಳೇರಾ ಪ್ರಿಯಾ ಗೋವುಗಳ ಕಾಯಿದ ಗೋವಳರಾಯಾ ವಿಪ್ರ ಸಂರಕ್ಷ ಗೋವಿದಾಂಪತಿ ರಂಗ ಗೋವಿಂದ ನಂದ 4 ಮಧುಕೈಟಭಾಸುರ ಮದಗರ್ವ ಮರ್ದನ ನಿತ್ಯ ಮಧುರನ್ನ ಪಾನಾ ಮಧುರಾಪುರ ಪಾಲ ಮದಗಜ ಹರಣಾ ಶಾ ಮದವರ್ಣ ಶರೀರ ಮಧುಸೂದನನೆ 5 ಇಷ್ಟಭಕ್ತರ ಕುಲ ಇಷ್ಟದೈವವೆ ಸರ್ವ ಇಷ್ಟಾರ್ಥ ಕೊಡುವ ಬಲಿಷ್ಟನು ನಿನ್ನ ಇಷ್ಟ ಅಷ್ಟಯೆಂದು ತಿಳಿಯಲಿ ವಶವಲ್ಲ ವಿಷ್ಣು ಸರ್ವೋತ್ತಮ ವಿಶ್ವನಾಟಕನೆ6 ಅಕ್ರಮದಲಿ ಸ್ವರ್ಗ ಆಕ್ರಮಿಸಿ ಬಲಿ ವಿಕ್ರಮನಾಗಿ ಕಾಲಕ್ರಮಣಿ ಮಾಡೆ ಶಕ್ರಮರ್ಚಿಸೆ ಅನುಕ್ರಮನಾಗಿ ಪ ರಾಕ್ರಮದಲಿ ಬೆಳದೆ ತ್ರಿವಿಕ್ರಮನೆ 7 ವಾಮಲೋಚನೆಯರ ವಾಮನ ಕೆಡಿಸಿದೆ ವಾಮನವಾಶಿಷ್ಟವಾ ಮುನಿವಂದ್ಯ ವಾಮನದಲಿ ದಾನವಾಮನ್ಯಗಳರನ್ನು ಅ ವಮಾನ ಮಾಡಿದೆ ಸಿರಿವಾಮನನೆ 8 ಶ್ರೀಧರ ರಮಣನೆ ಶೃಂಗಾರ ವಾರಿಧಿ ಶ್ರೀಧನ ಸಂಪತ್ತಾಶ್ರಿತ ಜನರಿಗೆ ಶ್ರೀಧೇನು ನೀನಯ್ಯಾ ಶ್ರೀ ಕರುಣಾಕರ ಶ್ರೀದೇವಿ ಉರಭೂಷಾ ಶ್ರೀಧರನಂತಾ 9 ಋಷಿಕೇಶನ ತಾತ ಋಷಿಜನ ಸಂಪ್ರೀತ ಋಷಿಕುಲೋದ್ಭವ ಪುರುಷ ರಾಮ ಮಹಾ ಋಷಿನಾಮಧೇಯನೆ ಋಷಿಪತ್ನಿ ಪಾಲನೆ ಋಷಿಗಳ ಒಡೆಯನೆ ಹೃಷಿಕೇಶ ದೇವ 10 ಪದುಮಜಾಂಡದಲ್ಲಿ ಪದುಮೆ ಮಾತನು ಕೇಳಿ ಪದುಮನಾಭಿಯಲ್ಲಿ ಪದುಮಜನ ಪೆತ್ತ ಪದುಮಾಸ್ಯ ಪದುಮಾಕ್ಷ ಪದುಮಕರನೆ ಪಾದ ಪದುಮ ಮಿಗಲು ಕಾಂತಿ ಪದುಮನಾಭನೆ11 ಧಾಮನಿಧಿಕುಲನು ಧಾಮನೆ ನಿರುತ ತ್ರಿ ಧಾಮನಿವಾಸ ಸುಧಾಮನ ಮಿತ್ರ ಧಾಮ ಪುಣ್ಯಧಾಮ ಭಕ್ತ ಹೃದ್ವನಜ ಧಾಮ ಮಧುಕರನೆ ದಾಮೋದರ ಧರ್ಮಾ 12 ಶಂಖ ಸುರಾಹರಾ ನಿಃಶಂಕ ಚರಿತ ಶಂಖಪಾಣಿ ಶಶಾಂಕ ಸುವದನ ಸಂಖ್ಯೆಯಿಲ್ಲದೆ ತಾಯಿ ಸಂಕಲೆ ಹರಿಗಡಿದೆ ಸಂಕರುಷಣನುವುಜ ಸಂಕರುಷಣನೆ 13 ಪ್ರಧಾನ ಮೂರುತಿ ಪ್ರದ್ವೀಪ ವರ್ಣ ಸುಪ್ರದಾಯಕನೆ ಪ್ರದೇಶ ಪರಿಮಾಣ ವರಪ್ರದ ಸಿದ್ಧನೆ ಪ್ರದ್ಯುಕ್ತ ಅವ್ಯಕ್ತ ಪ್ರದ್ಯುಮ್ನ ವಿಶ್ವ14 ವಾಸುವಾನುಜ ಶ್ರೀನಿವಾಸ ಪುಂಡ್ರೀಕ ವಾಸುದೇವನ ಶಮನಪುರದಲ್ಲಿ ವಾಸಮಾಡಿಸಿದಯ್ಯಾ ವಾಸವಾರ್ಚಿತ ಶ್ರೀ ವಾಸುದೇವ 15 ಅನುಗಾಲವು ನಿನ್ನ ಅನುಸರಿಸಿದೆ ನಾನು ಅನುಕೂಲವಾಗಿ ಎನ್ನನು ಸಾಕುವುದು ಅನುಮಾನವ್ಯಾತಕೆ ಅನಿಮಿತ್ತ ಬಂಧು ಅನಿರುದ್ಧ ಶ್ರೀಶಾ 16 ಪುರುಷ ಪುರುಷ ಶ್ರೇಷ್ಠ ಪುರುಷಾರ್ಥ ಕಾರಣ ಪುರುಷೇಶ್ವರ ತತ್ಪುರುಷಾದಿ ಪುರುಷ ಪುರುಷ ಬೀಜ ವೇದ ಪುರುಷ ಪರಮ ಪುರುಷ ಪುರುಷರು ಮೋಹಿಸುವ ಪುರುಷೋತ್ತಮನೆ 17 ಅಕ್ಷಯ ಬಲ ಸಹಸ್ರಾಕ್ಷ ರಕ್ಷಕ ಅಕ್ಷರಪರ ಬ್ರಹ್ಮ ಗೀರ್ವಾಣಧ್ಯಕ್ಷ ಅಕ್ಷಯ ಪಾತ್ರಿಯ ಶಾಖಾದಳವನ್ನು ಅಕ್ಷಯ ಮಾಡಿದಧೋಕ್ಷಜ ಚಕ್ರಿ 18 ನರಸಖ ನರಹರಿ ನಾರಾಯಣ ವಾ ನರ ದಳನಾಯಕ ನಾರದ ವಿನುತ ನರಕ ಉದ್ಧಾರಕ ನರಕಾಂತಕ ಕಿ ನ್ನರ ಸುರನರೋರಗ ವೃಂದ ನರಸಿಂಹ 19 ಸಚ್ಚಿದಾನಂದಾತ್ಮ ಸಚಲ ವಿಗ್ರಹನೆ ಸಚ್ಚರಾಚರದೊಳೂ ಗುಣಪರಿಪೂರ್ಣ ಸಚ್ಛಾಸ್ತ್ರದಲಿ ನಿನ್ನ ಸಾಮರ್ಥಿ ಪರಿಪೂರ್ತಿ ಸಚ್ಚೂತ ಚುತಿ ದೂರ ಚಿನ್ಮಯ ರೂಪಾ 20 ಜನನ ಮರಣ ನಾಶ ಜನನಾದಿಕರ್ತಾಂ ಜನಸುತಗತಿ ಪ್ರೇಮಾಂಜನ ಗಿರಿಧಾಮ ಜನಕವರದ ಸಜ್ಜನರಘದಹನ ದು ರ್ಜನರ ಕುಲರಾತಿ ಜನಾರ್ದನನೆ 21 ವೀಂದ್ರವಾಹನ ಮಹೇಂದ್ರಧಾರನೆ ಗ ಜೇಂದ್ರನ್ನ ಬಿಡಿಸಿ ನಕ್ಷೇಂದ್ರನ ಸೀಳಿ ನಾ ಗೇಂದ್ರ ಶಯನ ಗುಣಸಾಂದ್ರ ಗೋಕುಲ ಚಂದ್ರ ಇಂದ್ರಮಣಿ ನಿಭ ರಾಮಚಂದ್ರ ಉಪೇಂದ್ರಾ 22 ಹರಿ ಎನುತಾ ಹರಿ ಹರಿದು ಓಡಿ ಬರೆ ಹರಿದು ಪೋಗಿ ಪರಿಹರಿಸಿದ ಖಳನ ಹರಿ ಹರಿಯು ನಲಿವನೆ ಹರಿರೂಪ ಪರಿ ಹರಿನಾಮವೆ ಗತಿ ಹರಿ ಸರ್ವೋತ್ತಮಾ23 ಕೃಷ್ಣದ್ವಯಪಾಯನ ಉತ್ಕøಷ್ಟ ಮುನೇಶ ಕೃಷ್ಟಿಗೆ ಬಂದ ಕಷ್ಟ ಓಡಿಸಿದೆ ಕೃಷ್ಣವತ್ರ್ಮನೆ ಸಂತುಷ್ಟೀಲಿ ಸುಖಬಡುವ ಕೃಷ್ಣಾವತಾರ ಕೃಷ್ಣ ಕಮಲೇಶ 24 ನಿನ್ನ ಮಹಿಮೆಯನ್ನು ಬಣ್ಣಿಸಲಳವಿಲ್ಲ ನಿನ್ನೊಳಗೆ ನೀನು ಬೀಯ ಬೀಜವನು ಎನ್ನ ಪಾಲಿಸುವುದು ವಿಜಯವಿಠ್ಠಲ ಪ್ರಸನ್ನ ಭಕ್ತರ ವರದ ಬಾಲ ಗೋಪಾಲ ಜೋ ಜೋ 25
--------------
ವಿಜಯದಾಸ
ತಾತ್ವಿಕವಿವೇಚನೆ ಏರಿಸಿ ಏರಿಸಿ ಮಾರುತ ಮ್ವತಧ್ವಜ ಸಾರ ಸುಖಂಗಳ ನಿತ್ಯದಲುಂಬುವ ಯೋಗ್ಯತೆ ಯುಳ್ಳವರೂ ಪ ಈರನ ಮತವೇ ಸಾರವು ಶ್ರುತಿಗಳ ಶೌರಿಯ ಮತವೇ ಈರನ ಮತ ಖರೆ ದೂಡಿರಿ ಸಂದೇಹ ಅ.ಪ ಇಲ್ಲವು ಜಗವಿದು ಭ್ರಾಂತಿಯ ಕಲ್ಪನೆ ಸುಳ್ಳೇ ಎಲ್ಲವು ಬ್ರಹ್ಮನ ಬಿಟ್ಟರೆ ಬ್ರಹ್ಮನೆ ಸತ್ಯವೆನೆ ಅಲ್ಲವು ನುಡಿಯಿದು ಬ್ರಹ್ಮನು ಕಾರಣ ಸುಳ್ಳಾಯಿತು ನುಡಿ ಅಲ್ಲವೆ ಯೋಚಿಸಿ ಕೊಡದು ಈ ಮನವು 1 ಉಂಬುದು ಉಡುವುದು ಕಾಂತೆಯ ಸಂಗವು ನಂಬಲು ಬೇಡಿರಿ ಸುಳ್ಳೇಯೆಂತೆಂನೆ ಸಾಕ್ಷಿಯು ಒಪ್ಪುವುದೇ ನಂಬಲನರ್ಹವೆ ಕಾರ್ಯಸುಕಾರಿಯ ಖರೆ 2 ಒಂದೇ ತೆರವಿಹ ವಸ್ತು ದ್ವಯವಿರೆ ಒಂದನು ಮತ್ತೊಂದೆಂಬುವ ಭ್ರಾಂತಿಯು ಕೊಡುವದೂ ಪೊಂದಿಹ ಹೇಗೆನೆ ಉತ್ತರ ಸಿಕ್ಕದು ಯೋಚಿಸಿ ಕೋವಿದರೆ 3 ಭ್ರಾಂತಿಯ ಪೆಣ್ಣನು ಕೊಡುತ ತಾಸ್ವಾ ತಂತ್ರ ವಿಹೀನನು ಆಗುತ ಮಿಡುಕುವ ದೇವನು ಎನಿಸುವನೆ ಮಂತ್ರಿಸೆ ಬ್ರಹ್ಮನ ನಾನಿಹೆ ನೆಂಬುದ ಭ್ರಾಂತಿಯ ತೊಲಗುತ ಬ್ರಹ್ಮನು ಆಹನೆ ಮನವ ವಿಚಾರಿಸಿರಿ4 ನಾನೇ ಬ್ರಹ್ಮನು ಎಂಬೀ ಜ್ಞಾನವು ತಾನೇ ಬಾರದು ಸಹಜ ವಿದಲವು ಅನುಭವ ವಿರುದ್ಧಾ ತಾನೇ ಬ್ರಹ್ಮನು ಆಗಿರೆ ಭವದೊಳು ನಾನಾ ದುಃಖವ ನುಣ್ಣಲು ಬಂದರೆ ಹುಚ್ಚನೆ ಅವಸರಿಯು5 ಬ್ರಹ್ಮ ದ್ವಯವಿದೆ ಸತ್ಯ ದ್ವಯವಿದೆ ಬ್ರಹ್ಮನು ಆಹುದು ಕೊನೆ ಮಾತೆಂದರೆ ಬ್ರಹ್ಮನು ಶೂನ್ಯನಿಹ ಬ್ರಹ್ಮನು ನಿರ್ಗುಣ ನಂದವಿಹೀನನು ಬ್ರಹ್ಮನ ಗತಿಯೆನೆ ಸರ್ವವಿನಾಶವೆ ಯಾರಿದ ಬಯಸುವರೂ6 ವ್ಯಕ್ತಿತ್ವವು ತಾನಾಶವು ಆಹುದೆ ಮುಕ್ತಿಯು ಯೆಂತೆನೆ ಸರ್ವವಿನಾಶಕೆ ಸಾಧನೆಯೇ ಬತವು ಮುಕ್ತಿಯು ದುಃಖವಿವರ್ಜಿತ ಬರಿಸುಖ ರಿಕ್ತವು ಬರಿಯೆನೆ ಭವವಿದು ವರವೈ ಬೇಡವು ಆ ಮುಕ್ತಿ7 ಸತ್ಯವ ನುಡಿವುದು ವೇದವು ಒಂದೆಡೆ ಮಿಥ್ಯವ ನುಡಿವುದು ಮತ್ತೊಂದೆಡೆಯೆನೆ ಯಾವುದು ಸಿದ್ಧಾಂತ ಮೊತ್ತವ ನೂಕುತ ಕಿಚ್ಚಡಿ ವೇದಕೆ ಮೊತ್ತವ ಕೊಳ್ಳುತ ಒಂದೇ ಅರ್ಥವ ಜೋಡಿಸಿ ಇದು ನೀತಿ8 ಬೌದ್ಧರು ಒಪ್ಪನು ಶ್ರುತಿಗಳ ದೇವನ ವೇದವ ಒಪ್ಪುವ ಮಾಯಾವಾದಿಯ ಬ್ರಹ್ಮನು ಸೊನ್ನೆಯಿಹ ವೈದಿಕ ವೇಷದ ಬೌದ್ಧನ ವಾದವೆ ಶೋಧಿಸಿ ನೋಡಲು ಮತ್ತೇನಿಲ್ಲವು ಚಿಂತಿಸೆ ಸರಿಯಿಷ್ಠೆ9 ತರತಮ ಬಹುವಿಧ ಭೋಗವ ಮುಕ್ತಿಲಿ ಇರುವುದು ಸಿದ್ಧವು ಶೃತಿಗಳ ನಂಬಲು ಜೀವರ ಭಿನ್ನತೆಯು ಸ್ಥಿರವೇ ಆಯಿತು ಇದರಿಂ ಮುಕ್ತಲಿ ಪರಿ ಬಗೆತಾ ವಿದಿತವೆ ಜಗದಲಿ ಭೇದವೆ ಸರ್ವತ್ರ10 ನಾಸ್ತಿಕ ವಾದವ ತಳ್ಳಿರಿ ಆಚೆಗೆ ನಾಸ್ತಿಕ ಬಂದನೆ ತಂದೆಯು ಇಲ್ಲದೆ ಕಾರ್ಯವು ಜಗವಿರಲು ಆತನು ನೊಡಿಹ ಜ್ಞಾನಿಗಳಿಲ್ಲವೆ ಪೊಗಳವೆ ಗೋತತಿಯು11 ಪ್ರಕೃತಿ ವಿಕಾರದ ಜಗವಿದು ವಿದಿತವೆ ವಿಕಲ ವಿಶೇಷದ ಜೀವನು ಹಾಗೆಯೆ ಉಭಯರ ಆಳುವನು ವಿಕಲ ವಿವರ್ಜಿತ ಸಕಲ ಗುಣಾರ್ಣವ ಸಕಲ ನಿಯಾಮಕ ಸರ್ವ ಸಮರ್ಥನು ಇರಲೇ ಬೇಕಷ್ಟೆ12 ನಿತ್ಯವು ಈತ್ರಯ ಸಿದ್ಧವು ಆದರೆ ನಿತ್ಯ ಪರಸ್ಪರ ಸಂಬಂಧ ತ್ರಯ ಜ್ಞಾನವೆ ಪುರುಷಾರ್ಥ ಉತ್ತಮ ನೊಬ್ಬನು ಅಧಮರು ಇಬ್ಬರು ಮತ್ತಿವರಲಿ ಹಾಗಧಮನು ಜೀವನು ಚೇತನ ಪ್ರಕೃತಿ ವರ13 ಸರ್ವ ಸ್ವತಂತನು ಒಬ್ಬನೆ ಇರದಿರೆ ಸರ್ವಾ ಭಾಸವೆ ಜಗವಿದು ಆಹುದು ಪ್ರಭು ದ್ವಯ ಕೂಡುವುದೆ ಸರ್ವಗ ಶಾಶ್ವತ ಪೂರ್ಣಾ ನಂದನು ಸರ್ವ ವಿಚಿತ್ರನು ಮುಕ್ತಿದನಿರದಿರೆ ಪ್ರಭು ಅವನೆಂತಾಹ14 ಶುರುಕೊನೆ ಮಧ್ಯವು ಇದ್ದ ದೇವಗೆ ಬರುವನೆ ಹೊಸ ಹೊಸ ದೇವನು ಪ್ರತಿಪ್ರತಿ ಕಲ್ಪದಿ ಯೋಚಿಸಿರಿ ಇರದಿರೆ ಸಕಲೈಶ್ವರ್ಯವು ಆತಗೆ ತರುವನು ನಂದದ ಸೃಷ್ಠಿಯ ಹೇಗವ ವರಸಮರಿಲ್ಲವಗೆ15 ಸುಳ್ಳಿರೆ ಜಗವಿದು ಪಾಲಿಪ ದೊರೆಯದ ಕಳ್ಳನೆ ಅಲ್ಲವೆ ಅಷ್ಠಕರ್ತುತ್ವವು ಕೂಡುವ ದ್ಹೇಗಿನ್ನು ಎಲ್ಲಾ ಜಗವಿದು ನಿತ್ಯಾ ನಿತ್ಯವು ಎಲ್ಲಾ ಸತ್ಯವೆ ಶ್ರುತಿಗಳ ನುಡಿಗಳು ಭೃತ್ಯರು ಜೀವಗಣ16 ನಿತ್ಯವು ಪ್ರಕೃತಿಯು ಜೀವರು ಈಶನು ಸತ್ಯವು ಇದುಯೆನೆ ಪಂಚಸುಭೇದವು ನಿತ್ಯವೆ ಎಲ್ಲೆಲ್ಲು ನಿತ್ಯ ಸುಖಂಗಳ ಬಯಸುವ ನಮಗವು ಹತ್ತವು ಕಾರಣ ಸರ್ವಸ್ವತಂತ್ರನು ದೇವನೆ ಸತ್ಯವಿದು17 ಚೇತನ ಪ್ರಕೃತಿಯೆ ಲಕ್ಷ್ಮಿಯು ತಿಳಿವುದು ಆತನ ರಾಣಿಯು ನಿತ್ಯಸುಮುಕ್ತಳು ನಿತ್ಯಾವಿಯೋಗಿನಿಯು ಚೇತನ ನಿಚಯದ ಚೇತನ ಹರಿ ಇಹ ಆತನೆ ದೊರೆ ಜಗ ಜಂಗಮ ಸ್ಥಾವರ ಸತ್ತಾದಾಯಕನು 18 ದೋಷ ವಿದೂರ ಅಶೇಷ ಗುಣಾರ್ಣವ ದಾಸ ಪೋಷನಿಜ ಮುಕ್ತಿದ ನಿರದಿರೆ ಭಜಿಸುವದೇಕವನ ಶ್ರೀಶನು ಬಿಡೆ ಜಡ ಚೇತನ ಚೇಷ್ಠೆಯು ನಿಹ ಉಲ್ಲಾಸದಿ ಭಜಿಸುವುದು 19 ಪರಿಮಿತ ಶಕ್ತನು ದೇವನು ಇದ್ದರೆ ಪರಿಮಿತ ಜೀವರ ತೆರವೇ ಆಹನು ಕಾರಣ ನಿಸ್ಸೀಮ ಹರಿಗುಣವಗಣಿತ ಸಿಗ ಸಾಕಲ್ಯದಿ ನಿರುಪಮ ಸುಖಜ್ಞಾನಾತ್ಮಕ ವಿಭುವರ ಅನಾದಿ ಸಿದ್ಧವಿದು 20 ಪ್ರಾಕೃತ ಗುಣಗಣ ವರ್ಜಿತ ದೇವನ ಜ್ಞಾನ ಸುದೃಷ್ಠಿಗೆ ಗೋಚರನು ಸ್ವೀಕೃತ ನಾದರೆ ಜೀವನು ಹರಿಯಿಂ ತಾಕಿಸಿ ದೃಷ್ಠಿಗೆ ತನ್ನನೆ ತೋರುವ ಭಕ್ತರ ಬಾಂಧವನು 21 ತರತಮ ಜ್ಞಾನದಿ ಗುಣ ಉತ್ಕರ್ಷವು ಬರುವುದು ಕಾರಣ ತಿಳಿಯುತ ಹರಿಪರ ಮೋಚ್ಛನು ಹೌದೆನ್ನಿ ಅರಿವುದು ಅತಿಪರಿ ಪಕ್ವದ ಭಕ್ತಿಯ ಮಾಧವ ಮೆಚ್ಚುವನು22 ವೇದಗಳಿಂದಲೆ ದೇವನು ವ್ಯಕ್ತನು ವೇದಗಳಿಂದಲೆ ಧರ್ಮಾಧರ್ಮವಿ ವೇಕವು ಸರಿಯಷÉ್ಠ ವೇದ ನಿಜಾರ್ಥವೆ ಸಚ್ಛಾಸ್ತ್ರಂಗಳು ಮೋದವೆ ದೊರಕದು ಬಿಟ್ಟರೆ ಇವುಗಳ ಸಾದರ ಭಜಿಸುವುದು23 ಬಿಂಬನು ಹರಿ ಪ್ರತಿ ಬಿಂಬನು ಜೀವನು ಬಿಂಬಾಧೀನವು ಪ್ರತಿ ಬಿಂಬನ ಚೇಷ್ಠೆಗಳೆಂತರಿತು ಉಂಬುತ ಮುದದಿಂ ಸುಖದುಃಖಂಗಳ ಬಿಂಬಕ್ರಿಯೆಯೆನುಸಂಧಾನವ ಗುರುವಿಂದರಿತು ಸಮರ್ಪಿಸಿ24 ಮೆಚ್ಚುಲು ಮಾಧವದಾವುದಸಾಧ್ಯವು ಅಚ್ಚುತನೊಲಿಮೆಗೆ ಹೆಚ್ಚಿದುದೇನಿದೆ ಕೊಚ್ಚುತಕಲಿ ಸೊಂಕು ತಚ್ಛಭಿಮಾನ ಫಲೇಚ್ಛೆಯ ತ್ಯಜಿಸುತ ಕಚ್ಛಪ ನೊಲಿಮೆಗೆ ವಿಧಿಯ ನಿಷೇಧವ ಮರೆಯದೆ ಗೈಯುತಲಿ25 ಪರ ಮೋಚ್ಚನು ವರಸಮರಿಲ್ಲವು ಸಿರಿ ವರ ವಿಧಿಪಿತ ಸೃಷ್ಠ್ಯಾದ್ಯಷ್ಠಸು ಕರ್ತನು ವಿಭುವೆಂದು ನಿರುಪಮ ನಿಖಿಳಾಗಮ ಪ್ರತಿ ಪಾದ್ಯನು ಸ್ವರತ ಸ್ವತಂತ್ರನು ಪೂರ್ಣಾನಂದನು ಎನ್ನುತ ಸಾರುತಲಿ26 ಸಾಮನು ಸರ್ವರ ಬಿಂಬನು ಸರ್ವಸು ನಾಮನು ಸರ್ವಾಧಾರನು ಜಡಜಂಗಮ ವಿಲಕ್ಷಣನು ಭೂಮನು ಭಕ್ತ ಪ್ರೇಮಿಯು ಸದ್ಗುಣ ಧಾಮನು ಪೂರ್ಣನು ನಿಜ ಸುಖ ಮುಕ್ತಿದನೆನ್ನುತ ಸಾರುತಲಿ27 ವಿಧಿ ಪರಿಸರ ವಿಪಶಿವ ಪ್ರಮುಖರು ಪರಿವಾರವು ನಿರವದ್ಯನು ಮುಕ್ತಾ ಮುಕ್ತರ ನಾಯಕನು ಉರುಗಾಯನ ಜಗದೊಳ ಹೊರವ್ಯಾಪ್ತನು ಪರಿಮರ ಸ್ವಗತ ಭೇದ ವಿವರ್ಜಿತನೆಂಬುದ ಸಾರುತಲಿ28 ತರತಮ ಪಂಚಸುಭೇದವು ನಿತ್ಯವು ನಿರುತದಲುಂಬುವ ಸಾರವೆ ದುಃಖ ನಿರ್ಲೇಪನು ಅದ್ಭುತನು ಅರಿಯರು ಯಾರೂ ಇವನೇ ವಲಿಯದೆ ಪುರುಷೋತ್ತುಮ ಸಾಕಲ್ಯದವಾಚ್ಯನು ಎಂದು ಡಂಗುರ ಹೊಡೆಯುತ 29 ಗುರುವಿನ ದ್ವಾರವೆ ಹರಿತಾ ವಲಿಯುವ ಗುರುವೆನೆ ಮುಖ್ಯದಿ ಮುಖ್ಯ ಪ್ರಾಣನೆ ಸರಿಸಿರಿ ಯೆಂತೆಂದು ಗುರುಗಳು ಹಿರಿಯರು ಎಲ್ಲಾ ಕ್ರಮದಲಿ ಮಧ್ವರಿಗೊಂದಿಸಿ ಮುದದಿ 30 ಅನುಭವವಿಲ್ಲದ ಜ್ಞಾನವು ವಣವಣ ಸಾಧನೆ ಇದು ಖರೆಯ ಚಿನುಮಯ ನೊಲಿಸಲ್ ಮನೆಧನ ಬೇಡವು ತನುಮನೆ ವಿಷಯಗಳಿಂದಲೆ ಪೂಜಿಪ ಕ್ರಮದಿಂಯಜಿಸುತ 31 ಕಲಿಯುಗವಿದು ವರ ಸುಲಭದಿ ಸಾಧನೆ ವಲಿಯುವ ಬೇಗನೆ ನಾಮ ಸ್ಮರಣೆಗೆ ಭಜಿಸಿರಿ ಹರಿನಾಮ ವಳದಾರಿಯು ಸರಿ ಕ್ರಮದಿಂ ಪಾಡಲು ಮುಳುಗುತ ಭಕ್ತಿಯ ಕಡಲೊಳ್ ನಿಜಹರಿ ದಾಸರು ದೀಕ್ಷೆಯಲಿ32 ಕವಿಗುರು ರಾಜರ ಚರಣದಿ ಬಾಗುತ ಪವನ ಮತಾಂಬುಧಿ ಸೋಮನು ಜಯಮುನಿ ಹೃದಯಗ ವಾಯುವಲಿ ಅವಿರತ ನಲಿಯುವ ಶ್ರೀ ಕೃಷ್ಣವಿಠಲನು ತವಕದಿ ವಲಿಯುವ ಗ್ರಹಿಸಲ್ ಈ ಪದ ಜಯ ಜಯವೆನ್ನುತ33
--------------
ಕೃಷ್ಣವಿಠಲದಾಸರು
ತಾರೆ ಆರುತಿ ಸಾರಸಾಂಬಕಿ ಭಾರತೀವರಗೆ ಬೆಳಗುವೆನು ಪ ನರಸಿಂಹಾರ್ಯ ಶೇವಿತಗೆ ಅ.ಪ ನೂರುಯೋಜನ ವಾರಿನಿಧಿಯನು ಹಾರಿ ಜಾನಕಿಗೆ ಚಾರು ಮುದ್ರಿಕೆಯನಿತ್ತು ಪುರದಿಭಯ ತೋರಿರಾಕ್ಷಸಗೆ ನಾರಿಮಣಿಯ ಶುಭವಾರುತಿಯ ರಘುವೀರಗರುಹಿದ ಮಾರುತಾತ್ಮಜಗೆ 1 ಇಂದು ಕುಲದಲಿ ಬಂದು ಕುಂತಿಯ ಕಂದನೆಂದೆನಿಸಿ ನಿಂದು ರಣದಿ ಖಳವೃಂದ ಸಹಿತ ಕುರುವೃಂದವನು ಮಥಿಸಿ ಛಂದದಲಿ ಪಡೆದಂಥ ಭೀಮಗೆ 2 ಭೂತಳದಿ ಸುಖತೀರ್ಥರೆನಿಸಿ ಸಚ್ಛಾಸ್ತ್ರವನು ರಚಿಸಿ ಭೀತಿ ಪುಟ್ಟಿಸುತ ಖ್ಯಾತಮಾಯ್ಗಳ ವ್ರಾತವನು ಜಯಿಸಿ ಪೂತ ಕಾರ್ಪರ ಕ್ಷೇತ್ರ ನರ ಮೃಗನಾಥನ ಪರಮಪ್ರೀತಿ ಪಾತ್ರನಿಗೆ 3
--------------
ಕಾರ್ಪರ ನರಹರಿದಾಸರು
ತೆರಳಿದರು ವಿಜಯರಾಯರು ವಿಜಯ ವಿಠಲನ ಪುರದೊಳಗೆ ಪರಮ ಭಕ್ತರ ಕಾಣಬೇಕೆನುತ ಪ ಯುವ ಸಂವತ್ಸರದ ಕಾರ್ತಿಕ ಶುದ್ಧ ದಶಮಿ ವಿಭಕ ರವು ಗುರುವಾರ ಪ್ರಥಮ ಯಾಮದೀ ಪವನಾಂತರಾತ್ಮಕ ಶ್ರೀ ಹರಿಯ ದರ್ಶನೋ ತ್ಸವ ಸಂಪಾದಿಸುವ ಬಹು ಲವಲವಿಕೆಯಿಂದ 1 ಧರಣಿಯೊಳು ಬಾಸ್ಕರ ಕ್ಷೇತ್ರವೆನಿಸುವ ಚಿಪ್ಪ ಗಿರಿಯೆಂಬ ಗ್ರಾಮದಿ ವಿಬುಧರ ಮುಖದಿ ಭಾಗವತ ಬ್ರಹ್ಮಸೂತ್ರ ಭಾರತ ಗೀತ ಮರುತ ಶಾಸ್ತ್ರಾರ್ಥ ಗ್ರಂಥಗಳನಾಲಿಸುತಲಿ 2 ಸುಖತೀರ್ಥ ಮುನಿಯ ಮನಕನುಕೂಲ ಸಚ್ಛಾಸ್ತ್ರ ನಿಕರಗಳ ಕವನ ರೂಪದಲ್ಲಿ ರಚಿಸಿ ಭಕತರಿಗೆ ಸನ್ಮಾರ್ಗ ತೋರಿ ಸಂತೋಷದಲಿ ವಿಖನಸಾರ್ಚಿತ ಜಗನ್ನಾಥ ವಿಠಲನ ಪದಕೆ 3
--------------
ಜಗನ್ನಾಥದಾಸರು
ತೊರವಿ ನರಸಿಂಹನ ಸ್ತೋತ್ರ ನರಹರೀ | ಪಾಲಿಸೊ ಎನ್ನ | ನರಹರೀ ಪ ನರಹರೀ | ನಮಿಸೂವೆ ನಿನ್ನ | ಚಾರುಚರಣ ಕಮಲಕ್ಕೆ ಮುನ್ನ | ಅಹತೊರವಿ ಕ್ಷೇತ್ರದಲ್ಲಿ | ಪರಿಪರಿ ಭಕುತರಮೊರೆಯ ಕೇಳ್ಕರುಣದಿ | ವರವ ನೀಡುತಲಿಹ ಅ.ಪ. ಪೂರ್ವ ಸಾಲಿಗ್ರಾಮ ರೂಪ | ದಲ್ಲಿದೂರ್ವಾಸ ಪೂಜಿತ | ರೂಪ | ಇದ್ದುಓರ್ವ ಭಕ್ತನಿಗೆ ಸಲ್ಲಾಪ | ತೇಜಗೈವದ ಕೇಳ್ವದು ಅಪರೂಪ | ಅಹಊರ್ವಿಯೊಳ್ ಚಿಮ್ಮಲಗಿ | ಸರ್ವಾಧಿಕವು ಕ್ಷೇತ್ರಇರ್ವೆ ನಾನಲ್ಲೀಗ | ತರ್ವೋದು ತೊರವೀಗೆ 1 ಸೊಲ್ಲ ಲಾಲಿಸಿ ಗಾಢ ಭಕ್ತ | ಎದ್ದುಚೆಲ್ಲೀದ ವಾರ್ತೆ ಸರ್ವತ್ರ | ಜನರಲ್ಲಸ ಗೊಳದೆ ಮುಂದತ್ತ | ಹಸಿಹುಲ್ಲನು ತೆಂಕದಿಶಿಯಿತ್ತ | ಅಹಚೆಲ್ಲುತ ಪೋಗುತಿರೆ | ಜ್ವಲೀಸಿತದುಚಿಮ್ಮಲ್ಲಿಗಿ ಊರ್ಬಳಿ | ಒಳ್ಳೆ ಕೃಷ್ಣಾತೀರ 2 ಸ್ವಪ್ನ ಸೂಚಿತ ತಾಣ ಬಗೆದು | ನೋಡೆಅಪ್ಪ ನೃಹರಿ ಕಂಡನಂದು | ಭಕ್ತರಪ್ಪಿ ಆನಂದಾಶ್ರು ಬಿಂಧು | ಕೈಚಪ್ಪಾಳೆ ಬಡಿದುಘೇಯೆಂದು | ಆಹಅಪ್ಪಾರ ಮಹಿಮನ | ಗೊಪ್ಪಾದ ಘನಮೂರ್ತಿಉಪ್ಪರಿ ತಂದಿಡುತ | ದರ್ಪದಿ ನಿಂತರು 3 ಶಿರಿ ಹಾಗೂ ಪ್ರಹ್ಲಾದರಾಯ | ಯುಕ್ತಹಿರಣ್ಯಕನ ತನ್ನ ತೊಡೆಯ | ಮೇಲೆಇರಿಸಿ ಉದರ ಸೀಳ್ದ ಬಗೆಯ | ಕೇಳಿಕರುಳನು ಮಾಲೆಯ ಪರಿಯ | ಆಹಧರಿಸುತ್ತ ತೋರ್ದನು | ಹಿರಣ್ಯಕಶಿಪೂಜತರಳ ಭಕ್ತನ ತೆರ | ತರಳನರಿದಿಷ್ಟೆಂದು 4 ಶಿಷ್ಟ ಮತ್ಸ್ಯಾವತಾರ | ಯುಕ್ತಶ್ರೇಷ್ಠ ಪ್ರಭಾವಳಿಹಾರ | ಸುವಿಶಿಷ್ಟದಿ ನರ ಮೃಗಾಕಾರ | ನಾಗಿಅಷ್ಟವು ಭುಜಯುಕ್ತಾಕಾರ | ಆಹಶಿಷ್ಟ ಭಕ್ತರಿಂದ ಕಷ್ಟವಿಲ್ಲದೆ ತೆರಳಿಶ್ರೇಷ್ಠ ತೊರವಿಯಲ್ಲಿ ಇಷ್ಟನಾಗಿ ನಿಂದ 5 ಮುನ್ನಿದ್ದ ನೃಹರಿಯ ಶಿಲೆಯ | ಕೊಂಡುಚೆನ್ನ ತೀರ್ಥದಿ ನರಹರಿಯ | ಇಡಲುಕೃಷ್ಣೆಗೆ ಪೋಗುವ ಪರಿಯ | ಪೇಳೆಘನ್ನ ಮೂರ್ತಿಯ ಒಯ್ದ ಬಗೆಯ | ಆಹ ಇನ್ನು ಮುನ್ನು ಪೇಳ್ವ | ನನ್ನೆಯ ಜನರಿಹರು ಮನ್ನಿಸುತೀವಾರ್ತೆ ಚಿನ್ಮಯನ ಕೊಂಡಾಡಿ 6 ಗುಪ್ತಾವು ಗಂಗಾ ಸನ್ನಿಹಿತ | ತೀರ್ಥಉತ್ತಮ ದಿಂದಭಿಷೇಚಿತ | ನಾಗಿನಿತ್ಯವು ಪವಮಾನ ಸೂಕ್ತ | ಪಂಚಯುಕ್ತವು ಪೂಜಾದಿ ಕೃತ | ಆಹಭಕ್ತಿ ಪೂರ್ವಕವಾದ | ಉತ್ತಮ ಸೇವೆಯನಿತ್ಯ ಕೈಗೊಳ್ಳುತ | ಭಕ್ತರಭೀಷ್ಟದ 7 ಮಾಸ | ಎರಡುಉತ್ಸವ ವೈಭವ ಘೋಷ | ಕೇಳಿ ಕುತ್ಸಿತ ಜನರೊಲ್ಲ ಈಶ | ಅಂತೆ ಸಚ್ಛಾಸ್ತ್ರ ಪ್ರವಚನ ಪೋಷ | ಆಹವತ್ಸಾರಿ ದುರುಳನ | ಕುತ್ಸಿತ ಉದರವವಿಸ್ತ್ರುತ ನಖದಿಂದ | ಕುತ್ತಿದ ಚಿಂತಿಸು 8 ನರಹರಿ ನಾಮಕ ಕವಿಯು | ಇಲ್ಲಿತೊರವಿಯ ನರಹರಿ ಸನಿಯ | ಚೆಲ್ವವರರಾಮ ಕಥೆಯನ್ನು ಬರೆಯು | ಅವ - ಕುವರ ವಾಲ್ಮೀಕಿಯೆ ಮೆರೆಯು | ಆಹತೊರವೆ ರಾಮಾಯಣ | ವಿರಚಿತ ವಾಯ್ತಿಲ್ಲಿಹರಿಯನುಗ್ರಹ ಜಾತ | ವರ ಕವಿತೆ ಉಲ್ಲಾಸ 9 ಹೃದಯ ಗುಹೆಯಲ್ಲಿ ವಾಸ | ಉಪನಿಷದು ಪೇಳ್ವದು ಅಂತೆಲೇಸ | ಬಲುಮುದದಿಂದ ಮಾಳ್ಪದ ವಾಸ | ಅಂಥಬುಧಜನಕಹುದು ಸಂತೋಷ | ಆಹವಿಧವು ಈ ಪರಿಯೆಂದು | ವಿಧಿಸಲು ಜಗತೀಗೆಹದುಳದಿ ತೊರವಿ ಸ | ನ್ನಿಧಿ ಗುಹೆಯೊಳುವಾಸ 10 ವಿಭವ | ದಿಂದಲೀವನು ಮುಕ್ತಿಯ ಸುಖವ | ಈತಕೈವಲ್ಯಾಕಧಿಪತಿ ಇರುವ | ಆಹತಾವಕನಾಗಿ ಗುರು | ಗೋವಿಂದ ವಿಠಲನಭಾವದಿ ನೆನೆವಂಗೆ | ತೀವರ ವರವೀವ11
--------------
ಗುರುಗೋವಿಂದವಿಠಲರು
ತ್ತಾತ್ವಿಕವಿವೇಚನೆ ಏಕ ಪಂಚಾಶದ್ವರ್ಣವಾಚ್ಯ ಶ್ರೀಕಳತÀ್ರನೆ ಸರ್ವಶಬ್ದಗೋಚರನಯ್ಯ ಪ ಕಾಯ ಕಾರ್ಯಕಾರಣವನನುಸರಿಸಿ ತ್ರಿಕರಣದೊಳಗಿದ್ದು ಕ್ರಿಯವ ನÀಡೆಸುವ ದೇವಅ.ಪ ಅಜಾನಂದೇಂದ್ರೇಶ ಶಿರ ಮುಖ ನೇತ್ರದೊಳು ನಿಜರೂಪ ಉಗ್ರ ಊರ್ಜ ಕರ್ಣದೊಳು ನಿಜ ಋತುಂಬರ ಋಘನಾಸದಲ್ಲಿ ಲೃಶಾ ಲೃಜ ವರ್ಣವಾಚ್ಯ ಗಂಡ ಸ್ಥಳದಲ್ಲಿಪ್ಪ 1 ಅನಂತಾರ್ಥಗರ್ಭನೆ ನೀ ವಾಚಿಯಲ್ಲಿ 2 ಕಪಿಲ ಖಪತಿ ಗರುಡ ಘರ್ಮ ದಕ್ಷಿಣಭುಜದೊಳ್ ಅಪರಿಚ್ಛಿನ್ನನೇ ನೀನು ಸಂಧಿಗಳಲಿ ಸುಫಲದಾತನೆ ಙಸಾರನಾಮದಲಿದ್ದು ಅಂಗುಲ್ಯಾಗ್ರದಲ್ಲಿ ನೀ ನಿರುತರಲಿ ನೆಲಸಿರ್ಪೆ 3 ಝೂಟಿತಾರ ವರ್ಣವಾಚ್ಯವ ಮಾಡಿ ನಿರುತದಲಿ ವಾಮಭುಜ ಸಂಧಿಗಳಲ್ಲಿರುವೆ ಬೆರಳ ಅಗ್ರದಿ ಞಮನಾಮದಲಿ ನೆಲೆಸಿರುವೆ 4 ಟಂಕ ಠಲಕ ಡರೌಕ ಢರಣಣಾಕ್ಮಕ ನೀ ನಾ ಟಂಕ ರಹಿತ ದಕ್ಷಿಣ ಪಾದದಲ್ಲಿ ಬಿಂಕವಿಲ್ಲದೆ ತಾರ ಥಪತಿ ದಂಡಿ ಧನ್ವೀ ನಮ್ಯನಾಮನೆ ವಾಮಪಾದ ಸಂಧಿಗಳಲ್ಲಿ 5 ಪರಫಲಿ ವರ್ಣವಾಚ್ಯ ದೇಹದಪಾಶ್ರ್ವ ಬಲಿ ಭಗನಾಮ ಪೃಷ್ಟ ಗುಹ್ಯದಲಿ ನಿರುತ ಮನ ವರ್ಣವಾಚ್ಯ ನೆನಿಸಿಹೆ ದೇವ ತುಂದಿ ಸ್ಥಾನದಲಿ ಎಂದೆಂದು ನಿಂದೆ6 ಯಜ್ಞ ಹೃದಯದಿ ರಾಮ ತ್ವಕ್‍ಲಕ್ಷ್ಮೀಪತಿ ರುಧಿರ ಶಾಂತಸಂವಿತ್ ಮಾಂಸದಲ್ಲಿ ಸುಜ್ಞ ಷಡ್ಗುಣ ಮಜ್ಜ ಸಾರತ್ಮ ಅಸ್ತಿಯು ಹಂಸ ಸ್ನಾಯುಳಾಳುಕ ನೀ ಪ್ರಾಣದಲ್ಲಿ 7 ಕ್ಷಕಾರವಾಚ್ಚ ಶ್ರೀ ಲಕ್ಷ್ಮೀ ನರಸಿಂಹ ಕ್ಷರ ಜೀವರಾ ದೇವ ಸರ್ವ ಸ್ಥಳದಲ್ಲಿಪ್ಪ ಶ್ರೀಕರಾರ್ಚಿತ ನಿನ್ನ ವಾಕ್ ಮನೋರೂಪಗಳು ಸಕಲ ಸಚ್ಛಾಸ್ತ್ರಾಗಮಗಳಾಗಿಹವೋ 8 ಸ್ವರವರ್ಣ ಸಂಯುಕ್ತ ಶಬ್ದವಾಕ್ಯದಿ ಸಕಲ ಪುರಾಣಾಗಮದಿ ಶಾಸ್ತ್ರ ಸರ್ವದಿ ನಿತ್ಯ ನಿರುತ ನಿನ್ನನುದಿನದಿ ಪೊಗಳುತಿಹವೋ 9 ಸ್ವಪ್ರಯೋಜನಕಾಗಿ ವರ್ಣ ಭೇದದಿ ವಾಕ್ಯ ಅಪ್ರಕೃತವಾಗೆಷ್ಟೋ ನಾನುಚ್ಚರಿಸಿದೆ ಸ್ವಪ್ರಯೋಜನ ರಹಿತ ಶ್ರೀವೇಂಕಟೇಶ ಶ್ರೀ ಉರಗಾದ್ರಿವಾಸ ವಿಠಲ ಜಗದೀಶ10
--------------
ಉರಗಾದ್ರಿವಾಸವಿಠಲದಾಸರು
ದಾಸರ ನೋಡಿರೈ ಮನದಭಿಲಾಷೆಯ ಬೇಡಿರೈ | ಭಾಸುರ ಕಾರ್ಪರಾಧೀಶನಾ ಸನ್ನಿಧಿ ವಾಸ ಕೃತನತ ಪೋಷಾ || ಹಿಂದೆ ಪ್ರಲ್ಹಾದನು ಮಾತೆಯ ಗರ್ಭದೊಳಿರಲು ಮುಂದೆ ಈತ ಹರಿಭಕ್ತಾಗ್ರೇಸರನೆಂದು ಮನಸ್ಸಿಗೆ ತಂದು | ಛಂದದಿ ಹರಿಪರನೆಂಬೊ ತತ್ವ ಬೋಧಿಸಿದ ಜ್ಞಾನವ ಗರೆದ || ವೃಂದಾರಕ ಮುನಿಯೆಂದಿವರನು ಭಾವಿಸುತ ಅಭಿವಂದಿಸುತ 1 ಬೋಧ ಸಚ್ಛಾಸ್ತ್ರ ಧರ್ಮವ ಮುದದಿ ತಿಳಿಗನ್ನಡದದಿ ಸತಿ ಸುಳಾದಿ ರೂಪದಿ ವಿರಚಿಸಿ ದಯದಿ ಸಾರುತ ಜಗದಿ | ಬಲುವಿಧ ಭವದೊಳು ಬಳಲುವ ಸಜ್ಚನ ಕೊಲಿದ ಕಲುಷವ ಕಳೆದ | ಇಳೆಯೊಳು ಇವರು ಪೇಳಿದ ವಚನವು ವೇದ ದೊಳಗಿನ ಸ್ವಾದ 2 ಈ ಮಹಾಕ್ಷೇತ್ರದ ಸ್ವಾಮಿ ನರಸಿಂಹ ಪಾದ ಅರ್ಚಕರಾದ | ಭೀಮಾರ್ಯರ ಸದ್ಭಕ್ತಿಗೆ ನೆಲಸಿಹರಿಲ್ಲಿ ಅನುದಿನದಲ್ಲಿ || ನೇಮದಿ ತನ್ನನು ಸೇವಿಪ ಭಕುತರ ಕರವ ಕರುಣದಿ ಪಿಡಿವ || ಜಗದೊಳು ಮೆರೆದ 3
--------------
ಶಾಮಸುಂದರ ವಿಠಲ
ಧೇನುಪಾಲ ದಾಸಾರ್ಯಾ | ನುತಿಸುವೆಮಾನವೀಶನ ಪೊರೆದಾರ್ಯಾ ಪ ಕಾಣೆ ನಿನಗೆ ಸಮ ಕರುಣಾಳುಗಳನುಶ್ರೀನಿವಾಸರ ಪೊರೆದಾರ್ಯಾ ಅ.ಪ. ಯತಿವರ ವರದೇಂದ್ರರ ವರಬೋಧ ಪಡೆದು ಸಚ್ಛಾಸ್ತ್ರಗತಿಯನೆ ತಾ ಗಳಿಸುತಹಂ ಮತಿ ವಿಶಿಷ್ಟ ತಚ್ಛಾತ್ರ |ಹಿತವ ನುಡಿಯೆ ವಿಜಯಾರ್ಯಾಗತ ತಿಳಿದು ಸುಪಾತ್ರಕೃತಕನಟಿಸಿ ತಾ ಕಳುಹಿದವರ ಉಪಚಾರದಿ ಮಾತ್ರ 1 ಉತ್ತಮ ನಿಂದೆಯ ಕೃತಿಗೆ ಪ್ರಾಪ್ತಿ ಇವಗೆ ಅತಿರೋಗಇತ್ತ ಮಾತೆಗರಿವಾಯ್ತು ಸುತನ ಕ್ಷೀಣಾರ್ಯುರ್ಯೋಗ |ಅತ್ತ ಅನಿಲಾಜ್ಞೆ ಪೊತ್ತು ವಿಜಯಾರ್ಯಪದ ಸುಯೋಗಪ್ರಾಪ್ತಿಗೈಸಿ ಕ್ಷಮೆಯಾಚಿಸಿ ಆಯ್ತಿವಗೆ ತವಪದ ಯೋಗ 2 ಪರಿ ಯೋಗದಿಂದ ಮೆರೆದೆ ಸುರ ಭೂಸುರ ವೃಂದವು ಪೊಗಳುತಿರಲು ಆಗ 3 ಮೂರ್ತಿ ಕಂಡದೇವ |ರಂಗನೊಲಿಮೆಯಿಂದಂಗ ಜನಸ್ತ್ರದ ಸಂಗರಹಿತ ಭೂದೇವಇಂಗಿತಜ್ಞ ಎನಗೀಯೊ ಗುರುವೆ ದ್ವಂದ್ವ ಸಮರ್ಪಣ ಭಾವ 4 ಹೊತ್ತಿಹೆ ಬಿರುದನು ಭಕ್ತಿರೂಪಿ ಎನೆ ಗುರು ಭಾಗಣ್ಣಹತ್ತು ಎಂಟು ಮತ್ತೊಂದು ಮೊಗದವನ ವಿಶ್ವಮೂರ್ತಿಯನ್ನ |ಪೊತ್ತು ನೀನು ಹೃತ್ಕಂಜದೊಳಗೆ ಬಹು ತುತ್ತಿಪೆಯೊ ಅವನಕೃತ್ತಿವಾಸ ಸಖ ಸರ್ವೋತ್ತಮನೆನುತೊತ್ತಿ ಪೇಳ್ದ ಅಣ್ಣ 5 ಪರಿ ಮೆರೆದೆ ನೀನು ಅಂದುಯೋಗ ಇದನ ಕಂಡಾಗ ಜನರು ಭಯ ಭ್ರಾಂತರಾದರಂದು6 ಮೂರ್ತಿ ಗುರು ಗೋವಿಂದ ವಿಠಲನ ಪಾದತೋರೊ ಭೂಪ 7
--------------
ಗುರುಗೋವಿಂದವಿಠಲರು
ನಾರಾಯಣನ ನೆನೆ ವರ್ಣಿಸು ಮನ್ನಿಸುಆರಾಧನೆಗಳ ಮಾಡುತ ಪಾಡುತನೀರಾಜನದಿಂದಲರ್ಚಿಸಿ ಮೆಚ್ಚಿಸಿ ವೇದಪಾರಾಯಣಪ್ರಿಯನÀ ಪ. ಅವನ ಶ್ರವಣ ಮನನ ನಿಧಿಧ್ಯಾಸನಶ್ರೀವಿಷ್ಣುವಿನ ಭಕ್ತಿಮಹಾಪ್ರಸಾದಂಗಳುಕೈವಲ್ಯ ಪದಕಿಕ್ಕಿದ ನಿಚ್ಚಣಿಕೆ ಎಂದು ಭಾವಜ್ಞರು ಪೇಳ್ವರೊಜೀವನ ಜವನಬಾಧೆಯ ತಪ್ಪಿಸಿಪಾವನ ವೈಕುಂಠಪುರದೊಳಗೆಂದೆಂದುಆವಾಸವನು ಮಾಡಿ ಸುಖಿಸಬೇಕಾದರೆ ಸೇವಿಸು ವೈಷ್ಣವರ 1 ಲೋಕದಿ ವರಂ ವರಯ ಭದ್ರಂತೆಋತೆ ಕೈವಲ್ಯಮಾತ್ಮನಃಏಕಮೇವೇಶ್ವÀರಸ್ತ ಸಾದ್ಭಗವಾನ್ ವಿಷ್ಣುರವ್ಯಯ ಎಂಬಾಈ ಕಲಿಯುಗದಲಿ ಬೇಕಾದ ಪುರಾಣಾದಿವಾಕುವಿವೇಕವ ಮನದಿ ವಿಚಾರಿಸಿಸ್ವೀಕರಿಸು ವೈಷ್ಣವ ಮತವ ಜೀವ ನಿರಾಕರಿಸನ್ಯಮತವ 2 ದ್ವಾರಾವತಿಯ ಗೋಪಿಚಂದನದಿಂದಶ್ರೀರÀಮಣನ ವರ ನಾಮವ ನೆನೆ-ದೆರಡಾರೂಧ್ರ್ವ ಪುಂಡ್ರಗಳ ಧರಿಸೆಂದೆಂದು ವೀರವೈಷ್ಣವಗುರುವಸೇರಿ ಸಂತಪ್ತ ಸುದರುಶನ ಶಂಖಧಾರಣವನು ಭುಜಯುಗದಲಿ ಮಾಡಿಮುರಾರಿಯ ಮಂತ್ರಗಳವರಿಂದ ಕೇಳುತ ಓರಂತೆ ಜಪಿಸುತ್ತಿರು 3 ಹರಿ ನಿರ್ಮಾಲ್ಯವ ಶಿರದಿ ಧರಿಸುತಿರುಹರಿ ನೈವೇದ್ಯವನೆ ಭುಂಜಿಸುತಿರುಇರುಳು ಹಗಲು ಹರಿಸ್ಮರಣೆಯ ಬಿಡದಿರು ದುರುಳರ ಕೂಡದಿರೊಹರಿಪದ ತೀರ್ಥದ ನೇಮವಬಿಡದಿರುಹರಿಪರದೇವತೆ ಎಂದರುಪುತಲಿರುಗುರುಮುಖದಿಂದ ಸಚ್ಛಾಸ್ತ್ರ ಪುರಾಣವ ನಿರುತದಿ ಕೇಳು 4 ತುಷ್ಟನಹನು ಎಳ್ಳಷ್ಟು ಮುಂದಿಟ್ಟರೆಅಷ್ಟಿಷ್ಟೆನ್ನದೆ ಸಕಲೇಷ್ಟಂಗಳಕೊಟ್ಟುಕಾಯ್ವನು ಶಕ್ರನಿಗೆ ತ್ರಿವಿಷ್ಟಪಪಟ್ಟವ ಕಟ್ಟಿದವದುಷ್ಟರನೊಲ್ಲ ವಿಶಿಷ್ಟರಿಗೊಲಿವ ಅ-ನಿಷ್ಟವ ತರಿದೊಟ್ಟುವ ಜಗಜಟ್ಟಿ ಅರಿಷ್ಟಮುಷ್ಟಿಕಾದ್ಯರÀ ಹುಡಿಗುಟ್ಟಿದ ವಿಠಲ ಬಹು ದಿಟ್ಟ 5 ಕಂದ ಬಾಯೆಂದರೆ ನಂದನಿಗೊಲಿದಿಹಕುಂದುಕೊರತೆ ಬಂದರೆ ನೊಂದುಕೊಳನುಇಂದಿರೆಯರಸ ಮುಕುಂದ ಮುಕುತಿಯ ನಂದನವನೀವ ದೇವಸಂದೇಹವಿಲ್ಲದೆ ಒಂದೆಮನದಿ ಸ-ನಂದನಾದಿಗಳು ಭಜಿಸಲು ಒಲಿವ ಉ-ಪೇಂದ್ರನ ಶುಭಗುಣಸಾಂದ್ರನ ಯದುಕುಲಚಂದ್ರನ ವಂದಿಸಿರೊ 6 ಓಡುವ ಅಡಗುವ ದೇವರೆ ಬಲ್ಲರುಬಾಡುವ ಬೇಡುವ ಮುನಿಗಳೆ ಬಲ್ಲರುನೋಡುವ ಕೂಡುವ ಮುಕುತರೆ ಬಲ್ಲರೊಡನಾಡುವ ರಮೆ ಬಲ್ಲಳುಊಡುವ ಪಾಡುವ ಯಶೋದೆ ಬಲ್ಲಳುಕಾಡುವ ಖಳರ ಮರ್ದಿಸಿ ಹುಡಿಗುಟ್ಟಿದನಾಡೊಳು ಕೇಡುಗಳೆವ [ಕೃಷ್ಣನಿಗೀಡೆಂದಾಡದಿರು] 7 ಆವನ ಪಕ್ಷವದಕೆದುರಿಲ್ಲಆವನ ಕುಕ್ಷಿಯೊಳಕ್ಕು ಜಗತ್ರಯಆವನು ಶಿಕ್ಷಿಪ ರಕ್ಷಿಪನು ಮತ್ತಾವನು ಪಾವನನುಆವನ ಶಿಕ್ಷೆಯ ಮಿಕ್ಕವರಿಲ್ಲ ಕೇ-ಳಾವನುಪೇಕ್ಷೆ ಕುಲಕ್ಷಯವೆನಿಪುದುಆವನುರುಕ್ರಮ ವಿಕ್ರಮನೆನಿಸಿದ ದೇವನಿಗಾವನೆಣೆ 8 ಪತಿ ಆವನ ಚರಣಸೇವಕನಾದಸುರರೊಳಗೀ ಹಯವದನಗಿನ್ನಾರನು ಸರಿಯೆಂದುಸುರುವೆನೊ 9
--------------
ವಾದಿರಾಜ