ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ :ನಾಲ್ಕು ಪದ್ಯ ಮುಂದೆ ತ್ರೇತಾಯುಗವು ಬಂದಂಥ ಕಾಲದಲಿ ಇಂದಿರೇಶನು ರಾಮಯೆಂದು ದಶರಥನಲ್ಲಿ ಕಂದನಾಗ್ಯವತರಿಸಿ ತಂದೆ ಆಜ್ಞದಿ ಸೀತೆಯಿಂದ ಲಕ್ಷ್ಮಣನಿಂದ ಚಂದಾಗಿ ಬಡಗೂಡಿ ವನ ಚರಿಸಿ ಬಂದ ಯಮುನಾದ್ರಿಯಲಿ ನೊಂದು ನೀರಡಿಸಿ ತನ್ನ ಬಾಣದಿಂದ ಭೇದಿಸಿದಾ|| 1 ತಡವು ಇಲ್ಲದೆ ಭೂಮಿ ಒಡೆದು ಬಂದಿತು ಆಗ ಕಡು ಭೋಗವತಿ ನಾರಿಯು ಗುಡದಂಥ ಸವಿನೀರು ಕುಡಿದು ನರನಂತೆ ದೃಢನಿದ್ರೆಗೊಂಡ ಜಗದೊಡೆಯ ರಾಘವನು|| ದೃಢವಾಗಿ ಬಹುಕಾಲ ಬಿಡದೆ ಅಲ್ಲಿರುವ ಆ ಮೃಡನ ರಾಣಿಯು ತಾನು ನಡೆದು ಬಂದಳು ಅಲ್ಲೇ ಶರಗರಾದಿ ಕೈಯಲ್ಲಿ ಹಿಡಿದು, ಆರತಿಯನ್ನು ದೃಢಭಕುತ ಲಕ್ಷಣನು ದೃಢ ನಿದ್ರಿಗೊಂಡಂಥ ಒಡಿಯಗೆಚ್ಚರ ಮಾಡಗೊಡದೆ ಆಕೆಯ ಕಂಡು ನುಡಿದನೀಪರಿಯ|| ಪದ ರಾಗ:ಭೈರವಿ ಅಟತಾಳ ಸ್ವರ ಋಷಭ ದಾವಾಕಿ ಪೇಳಮ್ಮಾ|| ಬಂದವಳು ನೀ ದಾವಾಕಿ|| ದಾವಾಕಿ ಪೇಳಮ್ಮಾ ದಾವ ರಾಜನ ಸತಿ ದಾವ ಕಾರಣದಿಂದ ಧಾವಿಸಿಲ್ಲಿಗೆ ಬಂದೆ|| ಪ ಸುಂದರಿ ವಾಣಿಯೋ|| ಅಥವಾ ಮುಶುಂದನ ರಾಣಿಯೋ|| ಇಂದ್ರನ ರಾಣಿಯೋ|| ಚಂದ್ರನ ರಾಣಿಯೋ|| ಚಂದ್ರಮುಖಿಯೇ ನೀನು ಚಂದಾಗಿ ಪೇಳಮ್ಮಾ|| 1 ಭಾತೃರಾದವರು ನಾವು|| ಪರಸ್ಪರ ಪ್ರೀತಿಯಿಂದಿರುವೆವು|| ಸೀತಾವಿರಹದಿಂದ ಸೋತುಬಂದೆವು ಇಲ್ಲೆ ಮಾತೇ ಮೌನವು ಬಿಟ್ಟು ಮಾತಾಡು ಬ್ಯಾಗನೇ|| 2 ಬ್ರಹ್ಮಚರ್ಯವೆಂಬುದು|| ಈ ಕಾಲಕ್ಕೆ ನಮ್ಮಲ್ಲಿ ಇರುವುದು|| ತಮ್ಮ ಲಕ್ಷ್ಮಣ ನಾನು ನಿರ್ಮಲ ಗುಣರಾಮ ನಮ್ಮಣ್ಣನಿವ ಪರಬ್ರಹ್ಮಾನಂತಾಧ್ರೀಶಾ|| 3 ಆರ್ಯಾ ಲಕ್ಷ್ಮಣ ನಾಡಿದ ಮಾತೂ|| ಲಕ್ಷಿಗೆ ತರಲಿಲ್ಲ ದೇವಿ ಮಾತಾಡಿದನೂ ಹೀಗೆಂದೂ|| ಪದ ರಾಗ:ಧನ್ಯಾಸಿ ಆದಿತಾಳ ನಡಿ ನಡಿ £ಡಿ ನೀನು || ನುಡಿಯದ ಭಾಗಿಯೇನು|| ನ || ನಡಿ ನಡಿ ಹಿಂದಕು ಬಡಿವಾರೇನಿದು ಬಿಡು ಬ್ಯಾಗನೆ ನಿನ್ನ ಎನಗೆ ಬಿಡದೆ ಬಾಣದಿಂದೊಡೆವೆನು ನಾನು| ಪ ಎಕಾಂತ ಸ್ಥಳಕೆ ಕಾಲಕೆ ಒಬ್ಬಾಕೆ ಬರುವದಿದು ದಿಂದ ನೀ ಬೇಕಾದಲ್ಲೆ|| 1 ವನವನ ಚರಿಸುಲವ ವನವಾಸಿಗಳಿಗೆ ವನುತಿಯ ಸಂದರ್ಶನ ನಮಗ್ಯಾಕಿದು ಗುಣವಂತಿಯೆ ಅರಕ್ಷಣ ನಿಲ್ಲದಲೆ 2 ಕಾಲದಲಿ ಗದ್ದಲ ಮಾಡದೆ ಬುದ್ಧಿವಂತೆಯೆ|| 3 ಅನುಜನ ಈಪರಿ ಸಿಟ್ಟು || ಅನುಸರಿಸುತಾ ಎದ್ದ ನಿದ್ರೆಯನು ಬಿಟ್ಟು || ವನುತಿಯ ನೋಡಿದ ರಾಮ|| ವಿನಯದಿ ಮಾತಾಡಿವನು ಗುಣಧಾಮ || 1 ಪದ ರಾಗ:ದೇಶಿ ಅಟತಾಳ ಸ್ವರ :ಷಡ್ಜ ದಾರ್ಹೇಳಮ್ಮಯಾ ಉದಾರ್ಹಳಗಿರುವೆ ನೀ || ದಾರ್ಹೇಳಮ್ಮಯ|| ದಾರಿಲ್ಲಿ ಸ್ಥಳದಲ್ಲಿ ದಾರನ್ಹುಡುಕುವಿ ನಿ|| ದಾ|| ಪ ವನದಲ್ಲೆ ಇರುವಂಥ ವನದೇವತೆಯೇ ನೀ|| ದಾ|| ಮನಿಯಲ್ಲೇ ಇರುವಂಥ ಮನಿದೇವತೆಯೋ ನೀ || ದಾ|| 1 ಪ್ರಾಯಶ ಶ್ರೀಹರಿ ಮಾಯಾರೂಪಿಯೋ ನೀನು || ದಾ|| ಆಯಾದ ವಿಲ್ಲದೆ ಬಾಯಿಲೆ ಬಿಚ್ಚಾಡು || ದಾ||2 ಕ್ಲೇಶ ವೋಡಿಸುವಂಥ ಈಶನ ರಾಣಿಯೋ || ದಾ|| ದೋಷರಹಿ ತಾನಂತಾಧ್ರೀಶನ ರಾಣಿಯೋ|| 3 ಆರ್ಯಾ ಕೋಮಲತರ ವಚನಗಳೂ || ರಾಮನ ಬಾಯಿಂದ ಮಾತಾಡಿದಳು ಹೀಗೆಂದೂ|| 1 ಪದ ರಾಗ:ದೇಶೀ ಆಟತಾಳ ಸ್ವರ :ಷಡ್ಜÀ ಕೇಳೋ ರಾಮನೆ ನಿನಗ್ಹೇಳುವೆ ಗುರುತವ || ಕೇಳೋ ರಾಮ|| ಕೇಳುತ ನಿನ್ನ ಮಾತು ಬಾಳ್ಹಾನಂದಾಯಿತು || ಕೇಳೋ|| ಪ ವನದೇವತೆ ಅಲ್ಲ ಮನಿಯ ದೇವತೆ ಅಲ್ಲ || ಕೇ|| ವನಜಾಕ್ಷ ತುಳಜಾಯಂದ್ಯನಿ ಕೊಂಬುವೆ ನಾನೂ || ಕೇ|| 1 ಮಾಯಾರೂಪಿಯು ಅಲ್ಲ ಆಯಾಸಯನಗಿಲ್ಲ ||ಕೇ|| ಮಾಯಾರಮಣ ನಿನ್ನ ತಾಯಿ ಯಂದ್ಯನಿಸುವೆ || ಕೇ|| 2 ಶುದ್ಧ ಚಿನ್ಮಯ ಅನಂತಾದ್ರಿರಮಣ ನೀನು || ಕೇ|| ಸಿದ್ಧಾಗಿ ನಾ ಯಮುನಾದ್ರಿಯಲ್ಲಿರುವೆನು||3 ಆರ್ಯಾ ಕಾಯಜ ಪಿತ ಕೇಳಿದನೂ|| ಹಾಯಿದು ಏನೆಂದೂ|| ಮಾತನಾಡಿದನೂ || ಆಯತಾಕ್ಷಿ ಆದವಳೂ || ತಾಯಿಯು ಎನಗ್ನಾಂಗಾದಿ ನೀ ಪೇಳೆ|| 1 ರಾಮನ ಮಾತಿಗೆ ತುಳಜಾ || ಪ್ರೇಮದಿ ಮಾತಾಡಿದಳು ತಾವಿರಜಾ || ರಾಮಗ ಕಥಿ ಆದಂತಾ|| ನೇಮಿಸಿ ಹೇಳಿದಳು ಪೂರ್ವ ವೃತ್ತಾಂತಾ|| 2 ಪದ್ಯ ರಾಮಕೇಳು ಪೂರ್ವದಲ್ಲಿ ಜಮದಾಗ್ನಿಯು ಪರಶುರಾಮನಾಗಿರುವಿ ನೀನಾ ಮಹಾಮುನಿ ಪತ್ನಿ ನಾಮದಲೆ ರೇಣುಕಿಯು ನೀ ಮಗನು ಎನಗಾದಿ ಭೂಮಿಯಲಿ ಪ್ರಾಖ್ಯಾತ ನಾಮತಿ ಕೃತವೀರ್ಯಜನು ಕಾಮಧೇನುವು ಬಯಸಿ ಆ ಮುನಿಯ ಕೊಂದಿರಲು ಆಮ್ಯಾಲ ಪತಿಯಿಂದ ನೇಮದಲಿ ಸಹಗಮನ ನಾ ಮಾಡಿದೆನು|| 1 ಪತಿಯ ಪ್ರೇಮದಲಿ ಸ್ಮರಿಸಿ ಪರಶುರಾಮನು ಎನ್ನಸ್ಮರಿಸಿ ಕೈಮುಗಿದು ಈ ಪರಿಯು ಮಾತಾಡಿದನು ವರ ಮಾತೆಯನು ಕೂಡಿ ಇರದೆ ನೀ ಹೋದಿ ಸಂದರ್ಶನವು ಎಂದಿನ್ನ ತ್ವರದಿ ನೀ ಹೇಳೆನಗೆ ಕೇಳುತಲೆ ತ್ವರದಿಂದ ನಾನು ಸುಂದರ ರೂಪವ ತೋರಿ ಈ ಪರಿಯು ಮಾತಾಡಿದೆನು ವರಪುತ್ರ ಕೇಳು ಮುಂದಿರುವ ತ್ರೇತಾಯುಗವು ಬರುತಿರಲು ಆಗ ಸಂದರ್ಶನವ ಕೊಡವೆ|| 2 ಹೀಗೆಂದು ಹೇಳಿದ್ಯಾಗ ಆತಗ ನಾನು ಈಗ ಆತನೇ ನೀನು ರಾಘವನು ಆಗಿರುವಿ || ಹಿಂಗೆನಲು ಮುಂದೆ ಆ ರಾಘವನು ಕೊಟ್ಟಳಾಗ ತುಳಜಾದೇವಿ ಬ್ಯಾಗ ನಿನ್ನ ಕಾರ್ಯ ಚನ್ನಾಗಿ ಆಗುವುದೆಂದು || ನಾಗವೇಣಿಯು ತಾನು ಹೋಗಿಬರುವೆನೆಂದು ಆಗ ಅಲ್ಲೇವೇ ಗುಪ್ತಾಗಿ ಇರುವುವಳು|| 3 ಪದ ರಾಗ:ಶಂಕರಾಭರಣ ಆದಿತಾಳ ಸ್ವರ :ಮಧ್ಯಮಾ ತಂದನು ಕೇವಳ್ಹಾಗ್ನಿಯ ಸಾಕ್ಷಿಯಿಂದೆ|| 1 ಆದರೂ ಇಷ್ಟಾರ್ಥಗಳು ಕೊಡುವೋದು|| 2 ವರದ ಶ್ರೀರಾಮ ವರವು ಕೊಟ್ಟಿರುವಂಥಾ ತುಳಜಾ ದೇವಿಯ ದಿವ್ಯ ಮಹಿಮೆ || ಹರುಷದಿ ಕೇಳಿದರೆ ಹರುಷವ ಕೊಡುವುದು ಪರಿಹರಿಸೋದು ಕಷ್ಟವೆಲ್ಲಾ 3 ಪುತ್ರರು ಆಗುವರು ಪೌತ್ರರು ಆಗುವರು ಸತ್ಯಮಾತಿದು ಭಾವವ ಬಿಟ್ಟು|| 4 ಗ್ರಂಥವೆಂಬುವದಿಂದು || ಎಂಥಾದಾದರೂ ಎನೂ ಸಂತೋಷ ನಮ್ಮ ಗುರುಗಳಿಗೆ|| ಸಂತರೆಂಬುವರಿಗೆ ಸಂತೋಷಾಗಲಿ ನಮ್ಮಾನಂತಾದ್ರೀಶನೆ ನುಡಿಸಿದಾ|| 5 ಆರ್ಯಾ ವರ ಕವಿತಾ ರZನಕ್ಕೆ|| ತುಳಜಾದೇವಿಯ ದಿವ್ಯ ಚರಿತಕ್ಕೆ || ಚರಿಸದೆನ್ನ ಉಪಾಯಾ || ಗುರುಕೃಪೆಯಿಂದಾಯಿತು ನಾಲ್ಕು ಅಧ್ಯಾಯಾ|| 1 ಪದ ರಾಗ:ಪೂರ್ವಿ ಅಟತಾಳ ಸ್ವರ:ಮಧ್ಯಮಾ ನಿತ್ಯ ಮಂಗಳವನು ಕೊಟ್ಟು ಸಲಹುವ ತಾಯಿಗೆ|| ಪ ಘನತರ ಕೈಲಾಸ ಮನಿಯು ಮಾಡಿದವಳಿಗೆ|| ಅನುದಿನ ಅಲ್ಲಿರುವಂಥಾಕಿಗೆ | ಅನುಭೂತಿ ತಪಸಿಗೆ ಅನುಕೂಲಾಗುವೆನೆಂದು ಅನುಮಾನಿಲ್ಲದೆ ಬಂದಿರುವಾಕಿಗೆ|| 1 ಅಷ್ಟಭುಜಗಳುಳ್ಳಂಥಾಕಿಗೆ || ಅಷ್ಟೆಶ್ಚರ್ಯದಿಂದಿರುವಾಕಿಗೆ|| ದುಷ್ಟದೈತ್ಯನ ಕೊಂದಂಥಾಕೆಗೆ|| 2 ಅಮಿತ ಮಹಿಮೆ ಉಳ್ಳಂಥಾಕೆಗೆ|| ಯಮುನಾದ್ರಿಯಲಿ ಬಂದಿರುವಾಕೆಗೆ|| ಗಮನದಿಂದಲಿ ರಾಮ ಶ್ರಮಬಟ್ಟು ಅಲ್ಲೇ ವಿಶ್ರಾಮಿಸಲು ದರ್ಶನ ಕೆÀೂಟ್ಟಾಕೆಗೆ|| 3 ಕಾಮಿತ ಫಲವನು ಕೊಡುವಾಕೆಗೆ|| ರಾಮನು ಸಾವಿರ ನಾಮದಿ ಸ್ತುತಿಸಲು|| ಪ್ರೇಮದಿವರವು ಕೊಟ್ಟಂಥಾಕಿಗೆ|| 4 ಚಿಂತಿಸುವರ ಮುಂದ ನಿಂತಾಕೆಗೆ|| ಸಂತೋಷವನು ಕೊಡುವಂಥಾಕಿಗೆ|| ಅಂತರಂಗದಲ್ಲಿಹ ಚಿಂತೆಯ ಬಿಡಿಸಿ|| ಅನಂತಾದ್ರೀಶನ ತೋರುವಂಥಾಕೆಗೆ|| 5
--------------
ಅನಂತಾದ್ರೀಶ - ಕಥನಕಾವ್ಯಗಳು
ಓದುವುದು ವೇದ ಹಾಕುವುದು ಗಾಳ ಪ. ಮಾಧವನು ತಾನೆ ಗಡ ಮನುಜರನುಸರಣೆ ಗಡವ್ಯಾಧಿಗಳು ಬಿಡವು ಗಡ ಸುರನದಿಯಯಾತ್ರೆ ಗಡ 1 ಆ ದೇವನೆ ತಮ್ಮ ಮನೆಮನೆಗೆ ದೈವ ಗಡಪೋದ ನಿಗಮವ ತಂದ ಹಯವದನನೇ ಜಗವ(?) 2 ಕಾದಿಗೆಲಿದನು ಗಡ ಎಡರುಗಳು ಬಿಡವು ಗಡಕ್ರೋಧದಿ ದೋಷವಲ್ಲದವಸ್ತು ತಾನೆ ಗಡ 3 ಶಿವನಲ್ಲ ಹರಿಯಲ್ಲ ವಿಪ್ರರುಗಳಲ್ಲಅವರ ನೋಡಲಿ ಬೇಡ ಅವರಿಗೀಯಲಿ ಬೇಡ 4 ಇಂತೆಂಬ ನುಡಿಯೊಳು ದ್ವೇಷ ಕಾಣಿಸಲುಸಂತರೆಲ್ಲರು ನೋಡಿ ಹಯವದನನಿದ ಮೆಚ್ಚ 5
--------------
ವಾದಿರಾಜ
ಗುರುವಶಕೆ ನಮೋ ಎಂಬೆ ನಮ್ಮ ಶ್ರೀ ಮದಾನಂದತೀರ್ಥ ಪದ್ಮನಾಭರಿಗೆ | ರಾಮದೇವರ ಕಂದ ನರಹರಿಗೆ || ಕಾಮಿತ ಫಲವೀವ ಮಾಧವಕ್ಷೋಭ್ಯರಿಗೆ | ಆ ಮಹಾಮಹಿಮ ಜಯತೀರ್ಥ ರಾಯರಿಗೆ 1 ವಿದ್ಯಾಧಿರಾಜರಿಗೆ ವಿಜಯ ಕವೀಂದ್ರ ಸು | ಸದ್ಗುಣ ವಾಗೀಶ ರಾಮಚಂದ್ರರಿಗೆ || ವಿದ್ಯಾನಿಧಿ ರಘುನಾಥ ರಘುವರ್ಯತೀರ್ಥರಿಗೆ | ಅದ್ವೈತಮತ ಖಂಡ ರಘೋತ್ತರಾಯರಿಗೆ 2 ವೇದವ್ಯಾಸ ವಿದ್ಯಾಧೀಶ ವೇದನಿಧಿ ಮುನಿಗೆ | ನಿತ್ಯ ವತ್ರರಿಗೆ || ಮೇದಿನಿಯಲಿ ಮೆರೆದ ಸತ್ಯನಿಧಿತೀರ್ಥರಿಗೆ | ವಾದಿಗಜಕೆ ಸಿಂಹ ಸತ್ಯನಾಥರಿಗೆ 3 ಯತಿಶ್ರೇಷ್ಠ ಸತ್ಯಾಭಿನವತೀರ್ಥರಿಗೆ | ಸತತ ಸಜ್ಜನಪಾಲ ಸತ್ಯಪೂರ್ಣರಿಗೆ || ಅತಿಶಯವಾನಂದ ಸತ್ಯ ವಿಜರಿಗೆ | ಮತ ಉದ್ಧಾರಕ ಶ್ರೀ ಸತ್ಯಪ್ರಿಯರಿಗೆ4 ಇಂತು ಗುರುಗಳ ಸಂತರೆ ಕೊಂಡಾಡಿ ಇಂತು ಸುತಾಪವನುರುಹಿ ಬಿಟ್ಟು || ಸಂತೋಷಿ ನಾನಾದೆ ವಿಜಯವಿಠ್ಠಲನ್ನ ಚಿಂತಿಯ ಮಾಡುವೆ ದಾಸರ ದಯದಿಂದ 5
--------------
ವಿಜಯದಾಸ
ಸಂತರೆನ ಬಹುದೈಯ್ಯಾ ಇಂಥವರಿಗೇ | ಅಂತರಂಗದ ಹರಿ ಏಕಾಂತ ಭಕುತರೀಗೇ ಪ ಸುಖಕ ಮೈಯ್ಯವ ಮರಿಯಾ | ದುಃಖಗಳಿದಿಂದೇ ನೋಯ | ಚಕಿತನಾಗನು ಕುಮತಿ ವಿಕಳ ನುಡಿಗೆ | ಪ್ರಕಟ ಸೌಖ್ಯಕ ಹಿಗ್ಗ | ಸಕಲರೊಳು ಹರಿಯೇ ವ್ಯಾಪಕ ವರಿದು ನಿರ | ಹಂಕೃತಿಯನುಳ್ಳರಿಗೇ 1 ಪರಮ ಭಾಗವತೆನಿಸಿ | ಪರರ ಮನಿಗಳಿಗ್ಹೋಗಿ | ಪಿರಿದು ವಿದ್ಯವ ತೋರಿ ಪೊರೆಯ ನೋಡಲಾ | ಪರಧನಕ ಕರವಿಕಲ | ಪರಸತಿಯರಿಗೆ ಕುರುಡ | ಪರರ ನಿಂದೆಗೆ ಮೂಕ ಪರವಶ್ಯಾದರಿಗೆ 2 ವೇಷಡಂಭಕವಿಲ್ಲಾ | ಕ್ಲೇಶ ಕರ್ಮಗಳಿಲ್ಲಾ | ಈ ಸಿರಿಯ ಸುಖದ ಮನದಾಶೆಯಿಲ್ಲಾ | ವಾಸುದೇವನ ಪದ | ಧ್ಯಾಸದನುಭವದಿ ನಟ | ಪರಿ ಸಂಸಾರ ಲೇಶ ದೋರ್ವರಿಗೆ 3 ಹರಿಯ ನಾಮವ ನೆನೆದು | ಹರಿಯ ಕೀರ್ತನೆಯಲ್ಲಿ | ಹರುಷಗುಡಿಗಟ್ಟಿ ತನು ಮರದು ನಿಂದು | ಬರುವ ಪ್ರೇಮಾಂಜಲಿಯ | ಭರಿತಲೋಚನನಾಗಿ | ತರಿಸಿ ತಾರಿಸುವ ಘನಕರುಣವಂತರಿಗೆ 4 ಇಂತು ದುರ್ಗಮವಿರಲು | ಸಂತರಾವು ನೀವೆಂದು | ಸಿಂತರವ ಹೋಗಿ ಜನ ಸಿಂತರಿಸುವಾ | ಭ್ರಾಂತ ಮೆಚ್ಚುವನಲ್ಲಾ | ಶಾತಗುರು ಮಹಿಪತಿ ಸ್ವಂತನುಜಗೆಂದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂತರೆನಬಹುದು ಸಜ್ಜನರಿವರನಾ ಪ ಇಂಥ ಗುಣಗಳಿಂದ ಯುಕ್ತರಾಗಿಪ್ಪರ ಅ.ಪ. ಸ್ವಾಂತಸ್ಥಾ ನುತ ಸರ್ವಾಂತರಾತ್ಮಕನೆಂದು ಚಿಂತಿಸುತ ಮನದೊಳು ನಿರಂತರದಲಿ ನಿಂತಲ್ಲಿ ನಿಲ್ಲದೆ ದುರಂತ ಮಹಿಮನ ಗುಣವ ಸಂಸ್ತುತಿಸುತನವರತ ಶಾಂತರಾಗಿಹರಾ 1 ಲೇಸು ಹೊಲ್ಲೆಗಳು ಪ್ರದ್ವೇಷ ಗೇಹಗಳು ಸಂ ತೋಷ ಕ್ಲೇಶಗಳಿಗವಕಾಶ ಕೊಡದೆ ದೋಷ ವರ್ಜಿತ ಹೃಷಿಕೇಶ ಮಾಡುವನೆಂದು ಭೇಶನಂದದಲಿ ಪ್ರಕಾಶಿಸುತಲಿಹರಾ 2 ಮೇದಿನಿ ದಿವಿಜರೊಳು ಸಾಧು ಜನರೊಳು ಧರ್ಮಕರ್ಮಗಳೊಳು ಶ್ರೀದನೊಳು ಗೋವುಗಳೊಳಗೆ ದ್ವೇಷಿಪರಿಗೆ ಅ ನ್ನೋದಕಗಳೀಯದೆ ನಿಷೇಧಗಯ್ಯುತಲಿಹರಾ 3 ಎನ್ನ ಪೋಲುವ ಪತಿತರಜ್ಞಾನಿಗಳು ಜಗದೊ ಳಿನ್ನಿಲ್ಲ ಪತಿತ ಪಾವನನೆನಿಸುವ ಜಾಹ್ನವೀ ಜನಕಗಿಂದಧಿಕರ್ಯಾರಿಲ್ಲೆಂದು ಉನ್ನತೋತ್ಯಂಶದಿಂದ ಸನ್ನುತಿಸುತಿಪ್ಪವರ 4 ಸತ್ಯ ಸಂಕಲ್ಪ ಏನಿತ್ತಿದ್ದೆ ಪರಮ ಸಂ ಪತ್ತು ಎನಗೆನುತ ಸದ್ಭಕ್ತಿಯಿಂದಾ ನಿತ್ಯದಲಿ ಕೀರ್ತಿಸುತ ಪುತ್ರಿಮಿತ್ರಾದಿಗಳು ಭೃತ್ಯಾನುಭೃತ್ಯರೆಂದರ್ತಿಯಲಿ ಸ್ಮರಿಸುವರಾ 5 ಜನುಮ ಜನುಮಗಳಲ್ಲಿ ಎನಗೆ ಜನನೀ ಜನಕ ಅನುಜ ತನುಜಾಪ್ತ ಪೋದನ ಭೂಷಣಾ ಅನಿಮಿತ್ತ ಬಂಧು ಒಬ್ಬನೇ ಎನಿಸುತಿಪ್ಪ ಸ ಪರ ಸೌಖ್ಯ ರೂಪನೆಂಬುವರಾ 6 ನಾಗೇಂದ್ರಶಯನ ಭವರೋಗಾಪಹರ್ತ ಪಾ ವಜ್ರ ಅಮೋಘ ಶೌರ್ಯ ತ್ರೈಗುಣ್ಯ ವರ್ಜಿತ ಜಗನ್ನಾಥ ವಿಠಲಗೆ ಕೂಗಿ ಕೈಮುಗಿದು ತಲೆಬಾಗಿ ನಮಿಸುವರಾ 7
--------------
ಜಗನ್ನಾಥದಾಸರು
ಸಂತರೆನಬಹುದುದಯ್ಯ ಇಂತಿವರಿಗೆ ಅಂತರಂಗಲಿ ಹರಿಯ ಏಕಾಂತ ಭಕ್ತರಿಗೆ ಧ್ರುವ ಸುಖಕ ಮೈಯವ ಮರಿಯಾ ದು:ಖಗಳಿದಿರಿಡೆ ನೋಯಾ ಚಕಿತನಾಗನು ಕುಮತಿ ವಿಕಳ ನುಡಿಗೆ ಪ್ರಕಟಸ್ತೋತ್ರಕ ಹಿಗ್ಗ ನಿರಹಂಕೃತಿಯನ್ನುಳ್ಳರಿಗೆ 1 ಕ್ಲೇಶ ಕರ್ಮಗಳಿರಲು ಈ ಶಿರಿಯ ಸುಖದ ಮನದಾಶೆವಿರಲು ವಾಸುದೇವನ ಪದ ಧ್ಯಾಸದನುಭವ ದಿಟ ವೇಶ ಹರಿ ಸಂಸಾರ ಲೇಶದೋರ್ವರಿಗೆ 2 ಪರಮ ಭಾಗವತೆನಿಸಿ ಪರರ ಮನಗಳಿಗ್ಹೋಗಿ ಕರ ವಿಕರ ಪರಸತಿಯರಿಗೆ ಕೂರವು ಪರನಿಂದೆಗೆ ಮೂಕ ಪರವಶಾದರಿಗೆ 3 ಹರಿಯ ನಾಮವ ನೆನಿದು ಹರಿದು ಕೀರ್ತನೆಯಲ್ಲಿ ಹರುಷಗುಡಿಗಟ್ಟಿ ತನುಮರದು ನಿಂದು ಬರುದೆ ಪ್ರೇಮಾಂಜಲಿಗೆ ಭರಿತ ಲೋಚನನಾಗಿ ತರಿಸಿ ತಾರಿಸುವಂದ್ಯನ ಕರುಣವಂತರಿಗೆ 4 ಇಂತು ದುರ್ಗಮವಿರಲು ಸಂತರಾವು ನೀವೆಂದು ಸಿರಿತರವ ಹೋಗಿ ಜನ ಸಿಂತರಿಸುವಾ ಭ್ರಾಂತವೇಷಕ್ಕೆ ಸಿರಿಕಾಂತ ಮೆಚ್ಚನಲ್ಲಾ ಶಾಂತಗುಣ ಮಹಿಪತಿ ಸ್ವಂತಗೆಂದಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂತರೆ ಭವದೂರರು ಹಿತಕಾರ್ಯರು ಪ.ಸಂತರ ಸೇವೆ ಶ್ರೀಹರಿ ಸೇವೆಸಂತರ ಮತವೆ ಹರಿಸಮ್ಮತವುಸಂತರ ಮತಿಯೆ ಮುಕುತಿಯ ಗತಿಯುಸಂತರಪಾದಚಿಂತನೆಗಾಹ್ಲಾದ1ಸಂತರಗಾತ್ರಭುವನಪವಿತ್ರಸಂತರ ನೋಟ ಪಾಪಗಳೋಟಸಂತರ ವಚನ ಧರ್ಮವಿರಚನಸಂತರ ಸಂಗ ತೋಷತರಂಗ 2ಸಂತರಿಂದೈಹಿಕಾಮುಷ್ಮಿಕ ಸೌಖ್ಯಸಂತರ ಅಭಯವಿರಲಾವಭವಸಂತರ ಕಂಡವ ನಿಜ ಸುಖ ಕಂಡಸಂತ ವಿಯೋಗ ತಮಸಿನಭೋಗ3ಸಂತರಖೇದವಂಶ ವಿಚ್ಛೇದಸಂತರ ಪ್ರೀತಿ ಶುಭಪದಪ್ರಾಪ್ತಿಸಂತರ ವಾರ್ತಾಖಿಳ ಪುರುಷಾರ್ಥಸಂತರ ಮಹಿಮಿ ಹೊಗಳ್ವಾತ ಪ್ರೇಮಿ 4ಸಂತರ ಊರೆ ಎನ್ನ ತವರೂರುಸಂತರ ಗತಿಗೋತ್ರರು ಎನಗಾಗಿಸಂತರ ಪದವನಪ್ಪಿದರೊಲಿವಸಂತರಿಗರಸ ಪ್ರಸನ್ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು