ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಬಪ್ಪನಾಡಿನ ಪಂಚದುರ್ಗೆ) ಮಂಗಲಂ ಶ್ರೀಪಂಚದುರ್ಗೆಗೆ ಜಯ ಮಂಗಲಾರತಿಯೆತ್ತಿ ಶ್ರೀಮಹೇಶ್ವರಿಗೆಪ. ಶಂಕರನಂಕಾಲಂಕಾರಿಗೆ ಕುಂಕುಮಬೊಟ್ಟಕಸ್ತೂರಿ ಲಲಾಟೆಗೆ ಪಂಕಜಗಂಧಿ ಶ್ರೀಪಾರ್ವತಿಗೆ1 ಕೋಕಿಲಗಾನೆಗೆ ಕೋಕಪಯೋಜೆಗೆ ಶ್ರೀಕಂಠನರ್ಧಾಂಗಿ ಶ್ರೀಗೌರಿಗೆ ಏಕದಂತನ ಜನನಿಗೆ ಜಗದಂಬೆಗೆ ಲೋಕನಾಯಕಿ ಶ್ರೀಮಹಾಕಾಳಿಗೆ2 ಕಂಜದಳಾಕ್ಷಿಗೆ ಕಲಧೌತಗಾತ್ರೆಗೆ ಕುಂಜರಗಮನೆ ಕಂಧರಜಾತೆಗೆ ಮಂಜೀರನೂಪುರರಣಿತಪದಾಬ್ಜೆಗೆ ನಂಜುಂಡನ ಮನಮಂಜುಳೆಗೆ3 ಅಂಗಜರೂಪೆಗೆ ಮಂಗಲದಾತೆಗೆ ಭೃಂಗಕುಂತಳೆ ಸರ್ವಮಂಗಲೆಗೆ ಬಂಗಾರಮಕುಟೋತ್ತಮಾಂಗದಿ ಧರಿಸಿದ ಸಂಗೀತಲೋಲೆಗೆ ಶರ್ವಾಣಿಗೆ4 ರೂಢಿಗಧಿಕ ಬಪ್ಪನಾಡಿಗೊಡತಿಯಾಗಿ ಮೂಡಿತೋರಿದ ಶ್ರೀಮುಕಾಂಬಿಕೆಗೆ ಕ್ರೋಡಾವತಾರ ಲಕ್ಷ್ಮೀನಾರಾಯಣ ಸೊಸೆ ಬೇಡಿದಿಷ್ಟವನೀವ ಸರ್ವೇಶೆಗೆ5
--------------
ತುಪಾಕಿ ವೆಂಕಟರಮಣಾಚಾರ್ಯ
ಚಂದ್ರಹಾಸನ ಕಥೆ ಸುಜನ ತ್ರೈಭುವನೋದ್ಧಾರ ಕಾರುಣ್ಯನಿಧಿ ಹೆಳವನಕಟ್ಟೆರಂಗಯ್ಯ ನಾರಾಯಣ ಶರಣೆಂಬೆ 1 ಭಕ್ತರ ಭಾಗ್ಯನಿಧಿಯೆ ನುಡಿಸಯ್ಯ ಎನ್ನ ಜಿಹ್ವೆಯಲಿ 2 ಅಜಹರಿಸುರ ವಂದಿತನೆ ನಿಜವಾಗೊ ಮತಿಗೆ ಮಂಗಳವ 3 ಸಂಗೀತಲೋಲೆ ಸುಶೀಲೆ ಹಿಂಗದೆ ನೆಲಸೆನ್ನ ತಾಯೆ 4 ನಿತ್ಯಾನಂದ ರಜತಾಚಲವಾಸನೆ ಭಕ್ತವತ್ಸಲ ಭಾಳನೇತ್ರ ಮುಗಿದು ವಂದಿಸುವೆ 5 ಸೂರ್ಯ ಪತಿಯ ಚರಣವನ್ನು ನೆನೆವೆ ಮಂಗಳವಾಗಲೆಂದು 6 ಒರೆದಂಥ ಜೈಮಿನಿಯೊಳಗೆ ಮಾಡಿ ವರ್ಣಿಸುವೆ 7 ಸಂದೇಹ ಮಾಡುತ್ತಿರಲು ಪೇಳಿದ ಫಲುಗುಣಗೆ 8 ಮುಂದೊತ್ತಿ ರಥವ ಬೆಂಬತ್ತಿ ನಿಂದಿರಿಸಿದ ಚಂದ್ರಹಾಸ 9 ವೈಷ್ಣವಕುಲ ಶಿರೋರನ್ನ ಪರಾಕ್ರಮ ದಿಟ್ಟರಿಗಿದು ನೀತವೆಂದು 10 ನ್ನೊಡೆಯಗೆ ಪೇಳಿದರಾಗ ಕಡುಚಿಂತೆಯಲಿ ಪಾರ್ಥನಿದ್ದ 11 ದಿನಕರ ಪ್ರತಿಬಿಂಬದಂತೆ ವನಜನಾಭ ಕೃಷ್ಣ ಶರಣೆನ್ನುತ ಸುರಮುನಿ ಇಳಿದಂಬರದಿಂದ12 ಉಟ್ಟಿಹ ಕರದಿ ವೇಣುವನು ಶ್ರೇಷ್ಠÀ ಬಂದನು ಇವರೆಡೆಗೆ 13 ಆನಂದದಿಂದ ಕೇಳಿದರು 14 ಎಲ್ಲ ವೃತ್ತಾಂತವನರುಹಿ ಬಲ್ಲಿದ ತುರಗವ ಕಟ್ಟಿದ ಧೀರ ಅಲ್ಲಾರು ಎನುತ ಕೇಳಿದರು15 ಪ್ರಮುಖರಿಲ್ಲ್ಯಾರು ಪೇಳೆನುಲು ಸಮಯವಲ್ಲವು ಪೇಳೆನಲು 16 ವ್ಯಾಸಾಂಬರೀಷ ವಿಭೀಷಣಕ್ರೂರ ಪರಾಶರ ಧ್ರುವ ಪ್ರಹಲ್ಲಾದ ಈಸುಮಂದಿ ಭಕ್ತರಿಗಧಿಕನು ಚಂದ್ರಹಾಸನೆಂಬಾ ಹರಿಭಕ್ತ17 ಹೇಳಬೇಕೆನುತ ಮುನೀಶನೆಂದೆಂಬ ಕೇರಾಳದೇಶದ ರಾಜ್ಯವನು ಪ್ರಧಾನಿಯನು 18 ಭೂತಮೂಲದಲಿ ಪುಟ್ಟಿದನು ತಾತ ಕಾಲವಾಗಿ ಪೋದ 19 ಸಾಯಲಾದಳು ರಾಜಪತ್ನಿ ಸಿರಿ ಪರರಾಯರು ಬಂದು ಕಟ್ಟಿದರು20 ಬಾಲನಿರಲು ಆ ಶಿಶುವೆತ್ತಿ ನಡೆದಳು 21 ಕುಂತಳಪುರಕಾಗಿ ಬಂದು ಆ ಗ್ರಾಮದಲ್ಲಿ 22 ಎರೆದು ಪೋಷಣೆಯ ಮಾಡುವಳು ಮರುಗುತಿರ್ದಳು ಮನದೊಳಗೆ 23 ಹಾಸುವ ವಸ್ತ್ರಗಳಿಲ್ಲ ಬೇಸತ್ತು ಅಳಲುವಳೊಮ್ಮೆ 24 ನೋಡಿ ಹಿಗ್ಗುವಳು ಆಲಂಬದಲ್ಲಿರುತಿಹಳು 25 ಕಂಗಳ ಕುಡಿನೋಟವೆಸೆಯೆ ಮಂಗಳಗಾತ್ರದ ಮುದ್ದುಬಾಲಕನೆಲ್ಲರಂಗಳ- ದೊಳಗಾಡುತಿಹನು 26 ಪರಪುಟ್ಟನಾದುದ ಕಂಡು ಮಡಿಯ ಪೊದಿಸುವರು 27 ಮಾಗಾಯಿ ಮುರವಿಟ್ಟು ಮನ್ನಿಸಿ ಕೆನೆಮೊಸ- ರೋಗರವನ್ನು ಉಣಿಸುವರು ರಾಗಗಾನದಲಿ ಪಾಡುವರು 28 ಎಣ್ಣೂರಿಗೆಯನು ಕೊಡಿಸುವರು ಕೇರಿ ಕೇರಿಗಳೊಳು ಕೊಡುವರೆಲ್ಲರ ಕಾರುಣ್ಯದ ಕಂದನಾಗಿ29 ತಮ್ಮಾಲಯದೊಳು ಕರೆದೊಯ್ದು ಮಾಲೆಯನವಗೆ ಹಾಕುವರು 30 ಮಾವಿನ ಫಲಗಳನು ಮದನನಯ್ಯನ ಕಿಂಕರಗೆ 31 ಸಾಲಿಗ್ರಾಮ ಶಿಲೆಯ ಅಷ್ಟು ಜನರಿಗೆ ತೋರಿಸಿದ 32 ಪುಣ್ಯೋದಯದಿ ಸಾಲಿಗ್ರಾಮ ಶಿಲೆಯು ಲಕ್ಷ್ಮಿನಾರಾಯಣ ಮೂರುತಿಯ 33 ಕೂಡಿದ ಗೆಳೆಯರ ಕೂಡೆ ದೌಡೆಯೊಳಿಟ್ಟು ಕೊಂಡಿಹನು 34 ಮಂಡೆಗಳನು ತಗ್ಗಿಸುವನು 35 ಬೆಚ್ಚುವನಪಹರಿಸುವರೆನುತ ಬಹು ಎಚ್ಚೆತ್ತು ಪಿಡಿದಾಡುವನು ಬಾಯೊಳಗಿಡುವ 36 ಮಂದಿರದಲಿ ವಿಪ್ರರಿಗೆ ಆ- ಬಂದರು ಬುಧಜನರೆಲ್ಲ 37 ಶ್ರೇಷ್ಠರೆಲ್ಲರ ಕುಳ್ಳಿರಿಸಿ 38 ಮಂತ್ರಾಕ್ಷತೆಯನು ಮಂತ್ರಿಗಿತ್ತು ಲಕ್ಷಣವನ್ನೆ ನೋಡಿದರು 39
--------------
ಹೆಳವನಕಟ್ಟೆ ಗಿರಿಯಮ್ಮ
ದುರಿತ ಉಪಶಮನೆ | ಅಮಮ ಮಂದಗಮನೆ || ಅಗಣಿತ ಸುಮನೆ ಪ ಆ ಮಹಾ ಮಾರ್ತಾಂಡ ಪುತ್ರೆ ಮಂಗಳಗಾತ್ರೆ | ಕಾಮಿತ ಸುಫಲದಾಯೆ ಕಾಲನಿಭ ಕಾಯೆ | ಆ ಮಂಜುಗಿರಿ ಬಳಿಯ ಅಲ್ಲಿ ಪುಟ್ಟಿದ ಸಿರಿಯೆ | ಸೋಮಕುಲಪಾವನೇ ಶರಣ ಸಂಜೀವನೆ 1 ಗಂಗಾ ಸಂಗಮ ಘನತರಂಗಿಣೀ ಮಹಾಮಹಿಮೆ | ಅಂಗವಟೆ ಅತಿ ಚಲುವೆ ನಲಿದಾಡಿ ನಲಿವೆ | ಮುಂಗುರಳು ಸುಮಲತೆ ಮೂಲೋಕ ವಿಖ್ಯಾತೆ | ಕಂಗಳಲಿ ನೋಳ್ಪಂಗೆ ಹೃತ್ಕಮಲ ಭೃಂಗೆ 2 ವಾರಿನಿಧಿ ಪ್ರಥುಕುಗಾಮಿನಿ | ಹಾರ ಮುಖೆ ಸುಪ್ರಮುಖೆ | ವೀರಶಕ್ತಿ ವಿಜಯವಿಠ್ಠಲನ |ಕಾರುಣ್ಯಪಾತ್ರೆ ಸಂಗೀತಲೋಲೆ 3
--------------
ವಿಜಯದಾಸ
(ಬಪ್ಪನಾಡಿನ ಪಂಚದುರ್ಗೆ)ಮಂಗಲಂ ಶ್ರೀಪಂಚದುರ್ಗೆಗೆ ಜಯಮಂಗಲಾರತಿಯೆತ್ತಿ ಶ್ರೀಮಹೇಶ್ವರಿಗೆ ಪ.ಶಂಖಚಕ್ರಶೂಲಾಂಕುಶಪಾಣಿಗೆಶಂಕರನಂಕಾಲಂಕಾರಿಗೆಕುಂಕುಮಬೊಟ್ಟಕಸ್ತೂರಿ ಲಲಾಟೆಗೆಪಂಕಜಗಂಧಿ ಶ್ರೀಪಾರ್ವತಿಗೆ 1ಕೋಕಿಲಗಾನೆಗೆ ಕೋಕಪಯೋಜೆಗೆಶ್ರೀಕಂಠನರ್ಧಾಂಗಿ ಶ್ರೀಗೌರಿಗೆಏಕದಂತನ ಜನನಿಗೆ ಜಗದಂಬೆಗೆಲೋಕನಾಯಕಿ ಶ್ರೀಮಹಾಕಾಳಿಗೆ 2ಕಂಜದಳಾಕ್ಷಿಗೆ ಕಲಧೌತಗಾತ್ರೆಗೆಕುಂಜರಗಮನೆಕಂಧರಜಾತೆಗೆಮಂಜೀರನೂಪುರರಣಿತಪದಾಬ್ಜೆಗೆನಂಜುಂಡನ ಮನಮಂಜುಳೆಗೆ 3ಅಂಗಜರೂಪೆಗೆ ಮಂಗಲದಾತೆಗೆಭೃಂಗಕುಂತಳೆ ಸರ್ವಮಂಗಲೆಗೆಬಂಗಾರಮಕುಟೋತ್ತಮಾಂಗದಿ ಧರಿಸಿದಸಂಗೀತಲೋಲೆಗೆ ಶರ್ವಾಣಿಗೆ 4ರೂಢಿಗಧಿಕ ಬಪ್ಪನಾಡಿಗೊಡತಿಯಾಗಿಮೂಡಿತೋರಿದ ಶ್ರೀಮುಕಾಂಬಿಕೆಗೆಕ್ರೋಡಾವತಾರ ಲಕ್ಷ್ಮೀನಾರಾಯಣ ಸೊಸೆಬೇಡಿದಿಷ್ಟವನೀವ ಸರ್ವೇಶೆಗೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ