ತಿರುಮಣಿ ಧರಿಸಿದ ತೀರ್ಥರ ಕಂಡರೆ
ತಿರುವಡಿಗಳಿಗೇ ಮಣಿಯುವುದು ಪ
ಗುರುತರ ಶ್ರೀಪಾದತೀರ್ಥಸೇವನ
ದುರಿತ ಹರವು ತಾ ಪಾವನವು ಅ.ಪ
ದೇವರ ಕಡೆಯವರಿವರೆಂದೆನ್ನುತ
ಕಾವನ ಕತೆಗಳ ಕೇಳುವುದು
ಭಾವಿಸಿ ಭಾಗವತರ ಸಹವಾಸವು
ಶ್ರೀವರನೊಲಿಯುವ ಕಾರಣವು1
ಇವರ ದರ್ಶನವು ಪುಣ್ಯಪ್ರದವು
ಪವಿತ್ರರಿರುವೆಡೆ ವೈಕುಂಠ
ಭುವಿಸುರಪೂಜನ ಹರಿಗಾನಂದವು
ಸುವಿಮಲ ಚರಿತರು ಶುಭಕರರು 2
ಶಂಖ ಚಕ್ರಗಳ ಭುಜದಲಿ ಧರಿಸಿ
ಪಂಕಜ ತುಳಸೀಮಣಿ ಕೊರಳೊಳ್
ವೇಂಕಟ ಶ್ರೀರಂಗ ವರದ ನಾರಾಯಣ
ಕಿಂಕರರೈ ಜಾಜೀಶನಿಗೆ 3