ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಷ್ಮೀದೇವಿ ಸ್ತೋತ್ರ ಎಂದು ಬರುವಳೋ ಗೋ-ವಿಂದನೊಲ್ಲಭೆ ಲಕ್ಷ್ಮೀ ರಂಗನ ಸನ್ನಿಧಿಗೆ ಪ ಮಂಗಳಾಂಗಿ ಸರ್ವಾಂಗ ಬಳಲಿ ಮುಖಕಂದಿ ಕಳೆಗುಂದಿದಂತೆ | ಬಲು ವ್ಯಥೆಯಂತೆ ಅ.ಪ ಶೇಷನ ಶಿಖಿ ಮ್ಯಾಲೆವಾಸುದೇವರು ಲಕ್ಷ್ಮೀ ಸಮೇತರಾಗಿರುತಿರಲುಆ ಸಮಯದಿ ಭೃಗುಮುನಿ ಬಂದು ಕೋ-ಪಿಸೆ ಸೋಕಿಸಿದನು ಪಾದವಾ | ವಕ್ಷ ಸ್ಥಳವಾ 1 ಥಟ್ಟನೆ ಇಳಿದಾಳುಸಿಟ್ಟಿನಿಂದಲಿ ಬಹು ಧಿಕ್ಕಾರ ಮಾಡಿದಳುಲಕ್ಷ್ಮೀರಮಣನೆಂಬೊ ಬಿರುದು ನಿಮಗೆ ಈಹೊತ್ತಿಗೆ ಅಲ್ಲೆಂದಾಳು | ತೆರಳಿದಳು 2 ನಿಲ್ಲದೆ ಪೊರಟಾಳುಫುಲ್ಲಾಕ್ಷಿ ಮನದೊಳು ತಲ್ಲಣಿಸುತಿರಲುವಲ್ಲಭನರಿಯದ ಸ್ಥಳವಿಲ್ಲದಿರೆ ತಾಯಿ ಕೊಲ್ಲಾಪುರಕೆ ಬಂದಾಳು | ನೆಲೆಗೊಂಡಾಳು 3 ಜಾತೆ ಬಾಮಾರನ ಮಾತೆ ಬಾ ವಾರಿಜದಳನೇತ್ರೆ ಬಾಮೂರ್ಲೋಕದೊಳಗೆ ನೀ ಪ್ರಖ್ಯಾತೆ ಬಾರೆಂದು ಶ್ರೀಮ-ನ್ನಾರಾಯಣನೆ ಕರೆಯಲು | ನಸುನಗೆಯೊಳು 4 ಜಯ ಲಕ್ಷ್ಮೀರಮಣಗೆಜಯ ಶ್ರೀನಿವಾಸಗೆ ಜಯ ಮೋಕ್ಷದಾಯಕಗೆಜಯತು ಕೊಲ್ಹಾಪುರದೊಳ್ ನೆಲಸಿದವಳಿಗೆಶ್ರೀದೇವಿಯಳಿಗೆ5 ವೆಂಕಟ ವಿಠಲವೈಕುಂಠಪತಿ ಲಕ್ಷ್ಮೀ ಶಾಂತ ಏಕಾಂತದೊಳುಶಂಖಚಕ್ರಧರ ಸರ್ವಮಂಗಳಕಾರಸಂಚಿತಾಗಮದೂರನು ಮಲಗಿರುವನು6
--------------
ವೆಂಕಟೇಶವಿಟ್ಠಲ
ಶ್ರೀರಮಾಧವಾಶ್ರೀತಜನಪಾಲಿತಮಾರಕೋಟಿರೂಪ ವಾರಿಧಿಶಯನಮುರಾರಿ ಕೇಶವ ಶ್ರೀಮ-ನ್ನಾರಾಯಣ ನೀರಜದಳಲೋಚನ ಪ.ಮಾನುಷತ್ವವಾಂತ ಸಮಯದಿಹೀನ ಭೋಗದ ಚಿಂತೆ ನಾನುನೀನೆಂಬಾಭಿಮಾನದಿ ಮನಸು ನಿ-ಧಾನವಿಲ್ಲದೆ ಅನುಮಾನದಿಂದಿಹುದೈಏನು ಕಾರಣ ಹೃದಯನಳಿದೊಳುನೀನೆ ನೆಲಸಿಕೊಂಡೀ ನರಯೋನಿಗೆನೀನೆ ಬರಿಸಿಯವಮಾನ ಬಡಿಸುವದುಊನವಲ್ಲವೆ ಪದದಾಣೆ ಸತ್ಯವಿದು 1ಬಾಲಕತನದೊಳಗೆ ಕಾವ್ಯದಶೀಲವಿತ್ತೆಯೆನಗೆ ಕೀಳುಮಾಡದೆ ಯೆನ್ನಬಾಲಭೂಷಿತಂಗಳ ಕೇಳೈಶ್ರೀಲಕ್ಷ್ಮೀಲೋಲ ವೆಂಕಟರಾಯಕಾಲಕಾಲಪ್ರಿಯ ಪಾಲಿಸೊಲಿದು ಕರು-ಣಾಲವಾಲ ನತಪಾಲಶೀಲ ಮುನಿಜಾಲವಂದ್ಯ ವನಮಾಲದಾರಿ ಜಗಮೂಲಸ್ವರೂಪ ವಿಶಾಲ ಗುಣಾರ್ಣವ 2ಹಿಂದಾದುದನರಿಯೆ ಇದರಿಂಮುಂದಾಗುವುದು ತಿಳಿಯೆ ಹಿಂದುಮುಂದಿಲ್ಲದೆ ಬಂಧನದೊಳು ಬಲುನೊಂದೆನೈ ನಿನಗಿದು ಚಂದವೆ ಶ್ರೀಹರಿತಂದೆ ತಾಯಿ ಬಂದು ಬಾಂಧವ ಬಳಗ ನೀನೆಂದು ನಿನ್ನಯ ಪದದ್ವಂದ್ವವ ಭಜಿಪಾನಂದಸುಜ್ಞಾನದಿಂದೆಂದಿಗೂ ಸುಖದಿಂದಿರುವಂದದಿ ತಂದೆ ನೀ ಪಾಲಿಸು 3ಧಾರಿಣಿಗಧಿಕವಾದ ಮೆರೆವ ಕುಮಾರಧಾರೆಯ ತಟದ ಚಾರುನೇತ್ರಾವತಿತೀರ ಪಶ್ಚಿಮ ಭಾಗ ಸಾರಿತೋರುವ ವಟಪುರದೊಳು ನೆಲಸಿಹವೀರ ವೆಂಕಟಪತಿವಾರಿಜನಾಭಖ-ರಾರಿ ತ್ರಿದಶಗಣವಾರವಂದ್ಯ ಭಾ-ಗೀರಥೀಪಿತ ದುರಿತಾರಿ ದೈತ್ಯಸಂ-ಹಾರಿ ಶ್ರೀಲಕ್ಷ್ಮೀನಾರಾಯಣಹರಿ4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ