ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೋ ಶ್ರೀಹರಿ ಪ ಕೈ ಮುಗಿವೆ ಮುರಾರಿ ಕರುಣದಿ ಅ.ಪ. ನೊಂದೆನೋ ಈ ಭವ ಬಂಧನದೊಳಗೆ ಶಿಲುಕಿ ಮುಂದಿದಕೇನೋ ದಾರಿ 1 ತುಂಬಿದ ಭಕ್ತ ಕು- ಟುಂಬಿ ನಾಚಿಕೆಯ ಕೊಂಬುವದೇನಿದ ಕುಸುರೊ2 ಎಷ್ಟು ನಿನಗೆ ಮೊರೆ- ಯಿಟ್ಟರೂ ಶ್ರೀದ- ವಿಠ್ಠಲ ಮನಸಿಗೆ ತಾರಿ 3
--------------
ಶ್ರೀದವಿಠಲರು
ತಾರೆನ್ನ ಹುಂಡಿ ರಂಗ ತಾರೆನ್ನ ಹುಂಡಿ ಪ ಅತ್ತರೇನು ಕಂಗಳಿಂದ ಮುತ್ತುದುರುವುದಿಲ್ಲ ಮತ್ತೆ ನಮ್ಮ ಮೇಲೆ ಹುಂಡಿ ಹೊತ್ತರೆ ನೀ ಬಿಟ್ಟೆಯೇನೊ 1 ವಾರಿಜಾಕ್ಷ ನಿನ್ನ ಬಿಡು - ವರೆಯೇನೋ ಬೆನ್ನ ಮೇಲೆ ಹಾರಿ ಹೊತ್ತು ಕೊಂಡು ಭಾರ ಹೇರದೆ ನೀ ಬಿಟ್ಟೆಯೇನೊ 2 ತೊಟ್ಟಿಲ ಹೋಗೆಂದರೆ ಸಿಟ್ಟು ಮಾಡುವಿಯೋ ಶ್ರೀದ- ವಿಠಲನ್ನ ಕೂಡಾಡದೆ ನೀ ಬಿಟ್ಟರೆ ನಾವು ಬಿಡುವರಲ್ಲ 3
--------------
ಶ್ರೀದವಿಠಲರು