ಒಟ್ಟು 10 ಕಡೆಗಳಲ್ಲಿ , 3 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ಕೊಡು ವರವಾ ಗುರು ಮಹಾದೇವ ಪ ನಿರುತ ಸ್ಮರಿಸುವ ಶರಣ ಸಂಜೀವಾ ಅನುದಿನ | ಹರಿಕುಮಾರನ ಗರ್ವವನದಾವಾನಲ ಮಹಾನುಭಾವ ಅ.ಪ ಸ್ಪಟಿಕ ಸನ್ನಿಭ ಧವಳ ಶುಭಗಾತ್ರ ಕಟಕ ವಂಚಕ ಯಕ್ಷಪತಿ ಮಿತ್ರ ನಿಗಮ ಹಯ ಧೂರ್ಜಟಿಯ ಸುಚರಿತ್ರ ಹೇ ನಿಟಲ ನೇತ್ರ 1 ಅದ್ರಿವೈರಿಯತನಯನೊಡನೆ ಯುದ್ಧಗೈದಾತ ಭದ್ರದಾಯಕ ರುದ್ರದೇವ ಪ್ರಸಿದ್ಧ ಮುನಿ ನಮಿತ ಶ್ರೋದ್ರು ನೀಧರ ದದ್ದಲಾಪುರ ಸದ್ಮಸುಖದಾತ ಹೇ ಸದ್ಯೋಜಾತ 2 ಶಾಮಸುಂದರ ಸ್ವಾಮಿ ಪ್ರಿಯ ಸಖ ಸೋಮಶೇಖರನೆ ಪ್ರೇಮದಿಂದಲಿ ರಕ್ಷಿಸೆನ್ನನು ಭೂಮಿಶ್ಯಂದನನೆ ಕಾಮಿತ ಪ್ರದ ವಾಮದೇವನೆ ಹೇಮಾತಿಧವನೆ ನಿಸ್ಸೀಮ ಮಹಿಮನೆ 3
--------------
ಶಾಮಸುಂದರ ವಿಠಲ
ದಶಾವತಾರಗಳು ಕರುಣದಿ ಪಾಲಿಸೆನ್ನ ಶ್ರೀ ಹಯ ವದನ ಪ ಕರುಣದಿ ಪಾಲಿಸೊ ಕರಿವರದನೆ ನಿನ್ನ ಚರಣ ಕಮಲಗಳಿಗೆರಗಿ ಬೇಡಿಕೊಂಬೆ ಅ.ಪ ಅಗಣಿತ ಮಹಿಮನೆ ನಗಪಾಣಿ ಶ್ರೀಶನೆ ವಾಹನ ನಿಗಮ ಗೋಚರನದ ಮೃಗರೂಪ ಮೂರ್ಜಗದೊಡೆಯನೆ ನಿನ್ನ ಮೀಗೆ ಹರುಷದಿಂದ ಪೊಗಳುವ ಸುಖವಿತ್ತು ಹಗಲಿರುಳೆನ್ನದೆ ಅಘು ಕಳೆದು ಕಾಯೊ ಗಗನಾಳಕ ವಂದಿತ ತ್ವರಿತದಿ ಕರ ಮುಗಿದು ಬೇಡುವೆ ಸಂತತ ಮರಿಯದೆಪೊರೆ ಪ ನ್ನಗ ಶಾಯಿ ಶ್ರೀ ಭೂನಾಥ ನಿನ್ನಯ ಪಾದ ಯುಗ ಸೇವೆ ನೀಡಯ್ಯ ನಗವೈರಿ ಮಗ ಸೂತ 1 ಕ್ಷಿತಿಜೆರಮಣ ದ್ರೌಪದಿ ರಕ್ಷಕನೆ ನಿನ್ನ ಸುರ ಸನ್ನುತ ಪತಿತೋದ್ಧಾರಕಮನ್ ಪತಿ ಪಾದ್ಯನೆ ಸಂ ಪಾದ ಶತಪತ್ರ ನಂಬಿದೆ ಹಿತದಿ ಎನ್ನಯ ದುರ್ಮತಿ ಕಳೆದು ಕಾಯೊ ಶತ ಮಖಾನುಜ ಗೋವಿಂದ ಬಾಗುವೆ ಶಿರ ದಿತಿಜಾರಿ ನಿತ್ಯಾನಂದ ಮಾತುಳ ವೈರಿ ವಿತತ ಮಹಿಮ ಮುಕುಂದ ನಿನ್ನನುದಿನ ಕೃತಿ ಪತಿ ಭರದಿಂದ 2 ಇಂದಿರಾಧವ ಶಾಮಸುಂದರ ವಿಠಲನೆ ಮಂದರ ಗಿರಿ ಪೊತ್ತು ಮಂದಜಾಸನಪಿತ ಮಾಧವ ಸುರ ವಿನುತ ದಯಾಸಿಂಧು ದಿನ ಬಂಧು ಪಾದ ಪೊಂದಿದೆ ಸಂತತ ಕಂದನೆಂದರಿದೆನ್ನ ಕುಂದು ಎಣಿಸದೆ ದಯ ದಿಂದ ಪಾಲಿಸು ಹೇದೇವ ನಂಬಿದೆ ದಶ ಕಂಧರಾಂತಕ ರಾಘವ ಬೇಡುವೆ ದಶ ಶ್ಯಂದನ ಸುತ ವರವ ಪಾಲಿಸಿ ಕಾಯೊ ಕಂದರ್ಪ ಪಿತ ಕುಂತಿನಂದನರ ಭಾವಾ 3
--------------
ಶಾಮಸುಂದರ ವಿಠಲ
ದೇವಾ ಬಾರಯ್ಯಾ ವೈಭವದಿ ರಥವನೇರಿ ಸೇವಿಸುವೆನು ಮಧ್ಭಾವದಿ ನೆಲಸೆಂದು ಪಾವನ ಮಣಿಪುರ ಠಾವಿನೊಳಿಹ ಭೂದೇವ ವರ್ಯ ಸಂಶೇವಿತ ಕೇಶವ ಪ ದೇವಗಂಗೆಯಪೆತ್ತ ಪಾವನಗಾತ್ರಧ್ರುವ ಭೂವರೋÀಪಾಸಿತನಾಗಿ ಈ ವಸುಧಿಗೆ ಬಂದು ಪಾವಮಾನ ಶಾಸ್ತ್ರದಿ ಕೋವಿದಯತಿ ವರ ಶ್ರೀ ವಿದ್ಯಾನಿಧಿ ತೀರ್ಥ ಸೇವಿತ ಸಂಸ್ಥಾಪಿತ ಸೇವಕ ಜನ ಸಂಭಾವಿತ ಕಾಮಿತ ವೀವ ಕಾವ ಸದಶಾವತಾರ ನಮೋ ಶ್ರಿವಿರಂಚಿಮುಖ ದೇವನ ಮಿತ ಕಂಚೀವರದನೆ ಪೊರೆ ಶ್ರೀ ವರಕೇಶವ 1 ಕಡು ಶೋಭಿಸುವ ಬಿಳಿಗೊಡೆ ಚಾಮರಾದಿಗಳ ಪಿಡಿದು ಶೇವಿಪ ಜನರೆಡಬಲದಿ ಬರೆ ಸುರರು ಪಂಥsÀವಿಡಿದು ವೇದಪಠಣ ಬಿಡದೆ ಮಾಡುತ ಬರೆ ನುಡಿವ ವಾದ್ಯಗಳಿಂದ ಸಡಗರದಲಿ ದ್ವಿಜಮಡದಿಯರಾರುತಿ ಪಿಡಿದು ಬೆಳಗುತಿರೆ ಕಡು ವೈಭವದಲಿ ಅಡಿಗೆರಗುವೆ ಪಾಲ್ಗಡಲ ಶಯನ ಮೂ- ರಡಿ ರೂಪನೆ ಜಗದೊಡೆಯ ಕೇಶವ 2 ನಂದ ತೀರ್ಥರ ಮತ ಸಿಂಧುವಿಗೆ ಪೂರ್ಣ ಚಂದ್ರರೆನಿಪಯತೀಂದ್ರ ಸತ್ಯ ಪ್ರಮೋದ ರಿಂದ ಪೂಜಿತ ಪದ ದ್ವಂದ್ವ ಮಧ್ಯದೊಳಿಹ ಮಂದಾಕಿನಿಗೆ ಪಿತನೆಂದು ತೋರಿಸಿದಂಥ ಇಂದಿರೆಯರಸನೆ ಮಂದರಧರ ಗೋ ವಿಂದ ಪಾಹಿ ಮುಕುಂದನೆ ಬಾಬಾ- ರೆಂದು ಕರೆವ ದ್ವಿಜ ವೃಂದಮಧ್ಯದಲಿ ಶ್ಯಂದನ ವೇರಿದ ಸುಂದರ ಕೇಶವ 3 ಅಂಬುಜನಾಭನೆ ನಿತಂಬದಿ ಪೊಳೆವ ಪೀ- ತಾಂಬರ ಧೃತ ಶಾತಕುಂಭ ಮಕುಟವದ- ನಾಂಬೋಜವನು ತೋರೋಕುಂಭೀನಸ ಪರಿಯಂಕ ಶಂಭ್ವಾದಿನಮಿತ ನೀಲಾಂಬುಧ ನಿಭಗಾತ್ರ ಕಂಬುಚಕ್ರಸುತ- ದಾಂಬುಜಧರ ಬಲು ಸಂಭ್ರಮದಲಿ ಮುನಿಕುಂಭಜ ಪೂಜಿತ ಕದಂಬ ದುರಿತ ಕಾದಂಬನಿ ಪವನ ಕೃ ಪಾಂಬುಧೆ ಕೇಶವ 4 ಗರುಡ ಮಾರುತರಿಂದ ಪರಶೇವಿತನೆ ಬಾರೊ ಶರಣು ಜನರ ಸುರತರುವೆ ಚನ್ನಕೇಶವ ಧರೆಯೊಳಧಿಕ ಮಣಿಪುರ ಪಂಡಿತಾಗ್ರಣಿ ಸನ್ನುತ ಸರಸಿಜಾಸನ ಪಿತ ಸಿರಿದೇವಿಯು ಈರೆರಡು ರೂಪದಲಿ ಕರದೊಳಗಾರುತಿ ವರಚಾಮರಗಳ ಧರಿಸಿ ಸಿರಿ ' ಕಾರ್ಪರ ನರಹರಿ ' ರೂಪನೆ ಮಾಂ ಪೊರೆವುದು ಕೇಶವ 5
--------------
ಕಾರ್ಪರ ನರಹರಿದಾಸರು
ಪಾಲಿಸೋ ಸದಾ ಪರಿಪಾಲಿಸೋ ಪಾಲಿಸೋ ಪಾರ್ವತಿ ರಮಣ | ತ್ರಿದ ನಾಲಿಗೆಯಿಂದಲಿ | ಶ್ರೀಲಕುಮೀಶನ ಕಾಲ ಕಾಲಕ್ಕೆ ಕೊಟ್ಟು ಅ.ಪ ಭೇಷಪಾವಕ ಪತಂಗ | ನಯನ ಭಾಸುರ ಸ್ಪಟಿಕ ನಿಭಾಂಗ | ಹರಿ ದಾಸ ಜನರ ಸುಸಂಗವಿತ್ತು ದೋಷ ಕಳೆಯೊ ರಾಮಲಿಂಗ ಆಹಾ 1 ಕೇರ ಕುಮಾರ ಕುಮಾರ | ಪಿತ ಕೀರನಾಮಕನವತಾರ |ಕೀರಾ ದೇವನ ಗರ್ವಪರಿಹಾರ | ತಾಟ ಕಾರಿನಾಮ ಸವಿಗಾರ | ಆಹಾ ಶರಧಿ ವೈಕಾರಿಕÀ | ತತ್ವಾಧಿ ಕಾರಿ ವಿಕಾರಿ ಷಕಾರ ಪದಾರ್ಚಕ 2 ನಂದಿವಾಹನ ನಾಗಶರನೆ | ನೀಲ ಸುರನದಿ ಧರನೆ | ಶಾಮ ಸುಂದರ ವಿಠಲನ ಸಖನೆ ಮಹಿ ಶ್ಯಂದನ ಶಿವಶಂಕರನೆ | ಆಹಾ ಒಂದೂರಾರ್ಯರ ಕರದಿಂದ ಪೂಜಿತನಾಗಿ ನಿಂದು ಭಜಿಪರಿಗಾನಂದವೀವ ದೇವ 3
--------------
ಶಾಮಸುಂದರ ವಿಠಲ
ಪಾಹಿ ವಿನತಾತ್ಮಜ ಪತಗಾಧಿರಾಜಾ ಪ ಪಡೆದ ಗರುಡನೆ ಅ.ಪ ಶ್ಯಂದನೋತ್ತಮನೆನಿಸಿ ಜಗದೊಳು ಸಿಂಧು ತಂದಿಟ್ಟ ಧೀರನೆ 1 ಬಂಧವ ಬಿಡಿಸಿದಂಥ ಕಾಲಿಗೆರಗುವೆ 2 ಜನರಘ ತರಿದಭೀಷ್ಟಿಯ ಸೌಪರ್ಣಿ ರಮಣನೆ 3
--------------
ಕಾರ್ಪರ ನರಹರಿದಾಸರು
ರಾಘವೇಂದ್ರರ ಸ್ತೋತ್ರ ಬಂದರಾ ರಾಘವೇಂದ್ರರಾಯರು ಮಂತ್ರ ಮಂದಿರ ವೆಂಬೀ ಸ್ಥಳಕೆ ವಿಭವದಿ ಪ ಇಂದು ಭಜಕ ದ್ವಿಜ ವೃಂದಕೆ ಪರಮಾ ನಂದ ಗರಿಯಲು ಶ್ಯಂದನವೇರಿ ಅ.ಪ ಶ್ಯಂದನವೇರಿ ಧಣಂ ಧಣ ವಾದ್ಯದಲಿ ಪೌರಜನ ಸಂದಣಿಸಿತು ಆನಂದದಿ ನೋಡುತಲಿ ಪ್ರಾರ್ಥಿಪರು ಮುಗಿಯುತಲಿಕೈಯಾ ಕವಿಗೇಯಾ ಶುಭಕಾಯಾ ಸುಧೀಂದ್ರರ ತನಯಾ ಗುರುವರಮಧ್ವ ಮು- ನೀಂದ್ರರಾ ಸುಮತಾಂಬುಧಿ ಚಂದಿರ ಅತಿ ಸುಂದರ ವೃಂದಾವನದಲಿ ನಿಂದಿಹರೆಂದರಿದೊಂದಿಪರಿಗೆ ಭವ ಬಂಧವ ಬಿಡಿಸಲು 1 ಸಡಗರದಲಿ ಬಿಳಿಗೊಡೆ ಚಾಮರ ವ್ಯಜನಾದಿಗಳನು ಪಿಡಿದು ಸೇವಿಸುವ ಎಡಬಲದಲಿ ಸುಜನಾ ಸಚ್ಛಾಸ್ತ್ರ ವೇದ ಪುರಾಣ ಪ್ರವಚನ ಪಾವನ್ನ ಗುರುಗಳ ಗುಣಸ್ತವನ ಮಾಡುವಾ ವರಗಳ ಬೇಡುವಾ ಕುಣಿಕುಣಿದಾಡುವಾ ಪಾಡುವಾ ಪೊಡವಿ ನಿರ್ಜರರ ಕಡು ವೈಭವದಲಿ 2 ಮಣಿ ಮುಕುಟ ದಿಂದ ದಿ- ಗ್ವಲಯ ಬೆಳಗುತಿಹ ಚಲುವ ಮುಖದ ಮಾಟಾ ಗಳದಲ್ಲಿ ಮೌಕ್ತಿಕದ ಹಾರ ಕೇಯೂರ ನೂಪರ ಸ- ಪೊಳೆಯುತ ಭಜಕರ ಕ- ಲುಷಾಭ್ರಕೆ ಮಾರುvರೆÀನಿಸುತ ಇಳೆಯೊಳು ಪಂಡಿತ ಯಳೆಮೇಲಾರ್ಯಗೊಲಿದು ಭಕುತ ವತ್ಸಲರೆಂದೆ ನಿಸುತ3 ಮಂಗಳ ತುಂಗ ತರಂಗಿಣಿ ತೀರದಲಿ ಭಕುತ ಜ- ನಂಗಳಿಗೆ ನಿಖಿಲಾರ್ಧಂಗಳ ಸಲಿಸುತಲೀ ಪಾಲಿಸುವ ದೇವ ಸ್ವಭಾವ ಶರಣ ಸಂಜೀವ ಕರದಲ್ಲಿಗೆ ಬರುವ ಎನ್ನುತ ತುತಿಪರು ದೃಗ್ಭಾಷ್ಪವ ಸುರಿಸುತ ಮೈಮರೆಯುತ ಬಲು ನಿರ್ಮಲ ಅಂತರಂಗದಿತವ ಪದಂಗಳ ಸ್ಮರಿಪರ ಸಂಘಕೆ ಸತತ ಸುಮಂಗಳವೀಯಲು 4 ಪುರದರಸನು ತನ್ನ ಸಿರಿಪರಿವಾರದಲಿ ಚರಿಸುತ ಬರುತ ಕಾಣುತಲೆ ಗುರುವರ ಚರಣದಲಿ ಕಾಣಕೆಯನ್ನಿತ್ತು ಶಿರಬಾಗಿ ಚನ್ನಾಗಿ ಆರುತಿಯ ಬೆಳಗಿ ಬರುತಿರೆ ರಥಸಾಗಿ ತೋರುವಾ ನೋಳ್ಪರ ನಯನಕ್ಕೆ ಪರಮೋತ್ಸವಾ ಶರಣರ ವಾಂಛಿüತಗಳ ಗರಿಯುವಾ ಪೊರೆಯುವ ಧರೆಯೊಳು ಮೆರೆಯುವ 'ಶಿರಿ ಕಾರ್ಪರ ನರಹರಿಯ' ನೊಲಿಸಿರುವ ಗುರು ಪ್ರಹ್ಲಾದರು 5
--------------
ಕಾರ್ಪರ ನರಹರಿದಾಸರು
ಶ್ರೀ ರುದ್ರ ದೇವರ ಸ್ತುತಿ ಪಾಲಿಸೆನ್ನ ಕಾಪಾಲಿಯೆ ನೀನು ಪ ವಾಲಗ ಕೊಟ್ಟು ಅ.ಪ ನೀ ಮಹದೌಷಧಿ ಕಾಮಾದಿಗಳೆಂಬಾಮಯ ಸ್ತೋಮಕೆ ಹೇ ಮಮಸ್ವಾಮಿ 1 ನೀ ಕಾಯದೆ ಬಿಡೆ ಕಾಯಜ ಭಯ ನೂಕೆಯನ್ನ ಕಡೆಗ್ಹಾಕುವರ್ಯಾರೈ 2 ತಿಂಗಳಚೂಡ ತ್ರಿಗಂಗಳ ಶೋಭಿತ ಅಂಗಜ ರಿಪು ಭಸಿತಾಂಗನೆ ಲಿಂಗಾ 3 ನಾಕರಮುಗಿಯುವೆನು ನಾಕಪನುತ ರ ತ್ನಾಕರ ಸುತೆವರನಾ ಕರತಾರೋ 4 ಕಂದನು ಇವನೆಂತೆಂದು ಎನ್ನ ನೀ ಮುಂದಕೆ ಕರೆಯೈ ನಂದಿಶ್ಯಂದನಾ 5 ಅರ್ಧಂಗನ ವಪುಸ್ವರ್ಧುನಿಧರಾ ಅಘ ಮರ್ದನ ಕಾಯೋ ಕಪರ್ದಿಯೆ ನಿರುತಾ 6 ಪತಿ ಮಹರುದ್ರನೆ ನಮಿಸುವೆ ಕ್ಷುದ್ರ ಮನಸಿನ ಉಪದ್ರವ ಬಿಡಿಸಿ 7 ದುರ್ಜನರರಿ ಖತಿವರ್ಜಿತ ಪಾಲಿಸೋ ನಿರ್ಜರನುತನ ಗುರು ಅರ್ಜುನ ವರದಾ 8 ನೀನೊಲಿಸಿದ ಸಿರಿಗೋವಿಂದವಿಠಲನ ಪಾವನ ಮೂರುತಿ ಕೋವಿದರೊಡೆಯ 9
--------------
ಅಸ್ಕಿಹಾಳ ಗೋವಿಂದ
ಶ್ರೀಗರುಡದೇವರು ರಕ್ಷಿಸೆನ್ನನು ಪಕ್ಷೀಂದ್ರನೆ ನೀನು ಪ ರಕ್ಷಿಸೆನ್ನನು | ಪಕ್ಷಿಪ ಕರುಣಿಕ ವಾಕ್ಷದಿಂದೀಕ್ಷಿಸು | ತೀಕ್ಷಣ ಬಿಡದೆ ಅ.ಪ ತಂದೆಯನುಜ್ಞದಿ | ಸಿಂಧೂರ ಕೂರ್ಮ ದ್ವಂದ್ವ ಪ್ರಾಣಿಗಳ | ತಿಂದ ಮಹಾತ್ಮ || ಅಂದು ಪೀಯೂಷವ | ತಂದು ಮಾತೆಯ ಬಂಧನ ಬಿಡಿಸಿದ ಬಂಧುರ ಮಹಿಮ ಗಮನ ಪನ್ನಪನೆ ಪ್ರಾರ್ಥಿಪೆ ಮಿಗೆ ಕರುಣದಿ ಯನ್ನಘು ದೂರೋಡಿಸಿ 1 ಧಾರಣಿಯೊಳವತಾರ ರಹಿತ ಶೃಂ ಗಾರವಾದ ಬಂಗಾರ ಶರೀರ 2 ವಿನುತ ನಂದನ ಶಾಮ ಸುಂದರವಿಠಲನ | ಶ್ಯಂದನ ಶೂರ 3
--------------
ಶಾಮಸುಂದರ ವಿಠಲ
ಹರುಷದಿ ತಾರೆ ಆರುತಿಪುರವೈರಿ ಗೌರೀಶಾ ಧವಳಾಂಗಗೆ ಪ ಅಶುಭನೇತ್ರ ಶಶಿಧರಗೆ | ವೃಷಭೇಂದ್ರ ಶ್ಯಂದನಗೆಕುಸುಮಬಾಣ ಮದಹರಗೆ ಬಿಸಜಾಕ್ಷಗೆ 1 ಭುಜಗಮಾಲಾ ಖಳಕಾಲಾ | ವಿಜಿತ ಗೋ ಶಂಕರಗೆರಜತ ಶೈಲ ಮಂದಿರಗೆ | ಕಮಲಾಂಬಿಕೆ 2 ಮಣಿ 3
--------------
ಶಾಮಸುಂದರ ವಿಠಲ