ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣಪತಿ ಪ್ರಾರ್ಥನೆ ಅಜ್ಞಾನ ಪರಿಹರಿಸು ಅಂಬರಾಧೀಶಸುಜ್ಞಾನ ಭಕ್ತಿ ಶ್ರೀ ಹರಿಯಲ್ಲಿ ನೀಡೋ ಪ ವಿಘ್ನರಾಜನೆ ನಿನ್ನ ನುತಿಸಿ ಬೇಡುವೆನಯ್ಯಭಗ್ನಗೈಸೆನ್ನ ಮನ ಸಂದೇಹವನ್ನೂ |ತಜ್ಞರೊಡನಾಡಲು ನಿರ್ವಿಘ್ನ ನೀಡಯ್ಯಾಲಗ್ನಗೈಸೆನ್ನ ಮನ ದೋಷಘ್ನನಲ್ಲೀ 1 ಜಲಧಿ ಮೀನನೆನಿಸಯ್ಯಾ 2 ಚಾರುದೇಷ್ಣನು ಎನಿಸಿ ದ್ವಾಪರದಲವತರಿಸಿಶೌರಿಯಾಜ್ಞದಿ ತರಿದೆ ಬಹು ರಕ್ಕಸರನೂ |ಸರ್ವೇಶ ಶ್ರೀ ಗುರು ಗೋವಿಂದ ವಿಠ್ಠಲನಚರಣ ಸರಸಿಜಕಾಂಬ ಮಾರ್ಗವನೆ ತೋರೋ 3
--------------
ಗುರುಗೋವಿಂದವಿಠಲರು
ನೆನಿ ಮನವೇ ನೀ ಮುಕುಂದನ ಪ ನೆನಿ ಮನವೇ ನೀ ಮುಕುಂದನಾ| ಅಜ ವಂದ್ಯನಾ 1 ಸಿರಿಲಕ್ಷುಮಿ ಮನೋಹರನಾ| ಸುರಾಧಾರನಾ ಯದುವೀರನಾ2 ದುರಿತ ನಿವಾರಿಯಾ| ವರ ಶೌರಿಯಾ ಮುರವೈರಿಯಾ 3 ಮನೋಹರ ಮೂರುತಿ ರಾಮನಾ| ಘನ ಶ್ಯಾಮನಾನಂತ ನಾಮನಾ 4 ಗುರು ಮಹಿಪತಿ ಸುತ ಪ್ರೀಯನಾ| ಸ್ಮರ ನೈಯನಾ ಕೃಷ್ಣರೇಯನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶೌರಿ ಪ ಬೃಂದಾರಕವರದಿಂದ ಶೌರಿಯಾನಂದವ ಸೇವಕ ಬೃಂದಕೆ ತೋರಿ ಅ.ಪ. ಕುಂದಮುಕುಳದಿಂದಾ ಕುಮುದಸು ಗಂಧಿಯಗಳಿನಿಂದಾ ರಚಿಸಿಸೊಗಸಿಂದಲಿ ಮೆರೆಯುವ 1 ಸುತ್ತಿರೆ ಹಸ್ತಿಗಳೂ-ಕೂರ್ಮನು ಪೊತ್ತಿರೆ ಮಧ್ಯದೊಳು ಮತ್ತೆಫಣೀಂದ್ರನ ಮಸ್ತಕದಲ್ಲಿರೆ ಸ್ವಸ್ತಿಕಾದಿಬಹು ಚಿತ್ರದಿ ಶೋಭಿಪ 2 ಪಂಕಜ ಚಿಹ್ನೆಗಳಾ-ಸೂರ್ಯಶ-ಶಾಂಕ ಸುರೇಖೆಗಳಾ ಬಹುಬಿಂಕದೊಳೆಸೆಯುವ3 ಕೋಟೆಯ ತೆನೆಗಳಲಿ ದಿವ್ಯವಧೂಟಿಯರೊಲವಿನಲಿ ಬಹುದೀಟಿಲಿ ತೋರುವ 4 ಶಾರದಾಭ್ರನೀಲ-ಶರೀರದಿ- ಹೈರಣ್ಮಯಚೇಲಾ ಜೀರಭೂಷಣೋದಾರ ವಿಹಾರ 5 ಮಂಗಳರವದೊಳಗೆ-ಶಂಖಮೃದಂಗ-ಧ್ವನಿಮೊಳಗೆ ನಾಟ್ಯಂಗಳರಚಿಸಲು6 ವರ ವಿಪ್ರರು ಪೊಗಳೆ-ಛತ್ರಚಾಮರಗಳ ನೆಳಲೊಳಗೆ ವರದವಿಠಲನು ವರಗಳ ಬೀರುತ 7
--------------
ಸರಗೂರು ವೆಂಕಟವರದಾರ್ಯರು