ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣೇಶನೆನ್ನೊಳಗೆ ಕೇಣವಾಂತಿಹನೇಕೆ ಗೋಣಬಿಗಿವಂತಾಗೆ ನಾಣದೇಕೆ ಇಲ್ಲದುದನಿವನೊಳಾಂ ಸೊಲ್ಲಿಸಿದೆನೇನಮ್ಮ ಕಲ್ಲೆದೆಯಿದೇವೆಳ್ವೆ ನಲ್ಲನಿವಗೆ ಕಂಡಸುದ್ದಿಯ ಪೇಳೆ ಕೆಂಡದಂತಾಗುವರೆ ಕಂಡುದಿಲ್ಲಕ್ಕಟೀ ಭಂಡತನವ ನ್ಯಾಯವನು ಸೂಚಿಸಲು ನೋಯುವಂತಾಡುವರೆ ಜಾಯೆಯೊಳಗೀತೆರದನ್ಯಾಯಮರರೆ ಕಪಟನಾಟಕ ಸೂತ್ರಧಾರನಿವನೆ ಸುಪವಿತ್ರ ಕೇಳೆನ್ನ ಪ್ರಾಣಸಖನೆ ತಪನವಂಶಾಬ್ಧಿ ರಾಕೇಂದುವಿವನೆ ವಿಪುಲ ಶೇಷಾದ್ರೀಶನೆನಿಪ ವರನೆ
--------------
ನಂಜನಗೂಡು ತಿರುಮಲಾಂಬಾ
ಭಕ್ತಿ ಗೀತಾವಳಿ ಸರಸ್ವತಿ ಸ್ತುತಿಗಳು 1 ಜಯ ಜಯ ಜನನಿ ಜಗದುಜ್ಜೀವಿನಿ ಪ ಜಯ ಬ್ರಹ್ಮಾಣಿ ಅ.ಪ ಆವಳ ಕೃಪೆಯಿಂ ಜೀವಿಪೆಮೋ ಮ ತ್ತಾವಳ ವ್ಯಾಪನೆಯಿಂ ದೈವಿಕ ಗುಣಸಂಭಾವಿತರಪ್ಪೆವೋ ಭಾವಿಪೆವಾದೇವಿಯ ನಾವ್ 1 ಉಡುವುದು ತೊಡುವುದು ಕೊಡುವುದು ಹಿಡಿವುದದಾರಿಂದಂ ನುಡಿವೆಣ್ಣೆನಿಸಿದವಳಾವಳೋ ನಾವವ ಳೆಡಬಿಡದೆರೆವೋಂ 2 ತಾಯೆಮಗರಿವಂ ಕಾಯಕೆಬಲಮಂ ಮಾಯೆಯೆ ಬಿಡಿಸಿನ್ನು ಕಾಯಜಪಿತ ಶೇಷಾದ್ರೀಶನೆ ನೆನೆವಾಸನ್ಮತಿಯೆಂದೆಂದುಂ 3
--------------
ನಂಜನಗೂಡು ತಿರುಮಲಾಂಬಾ
ಸರೋಜಲೋಚನಸುರಾರಿ ಮಥನ ಮುರಾರಿ ಮಾರಮಣ ಪುರಾರಿಮಿತ್ರಾ ನಿರೀಕ್ಷಿಸೆನ್ನ ನಿರಾಕರಿಸದಿರಿನ್ನು ಪ. ಬಲೀಂದ್ರಗೊಲಿದೆ ಬಾಗಿಲೋಳ್ನಿಂದೆ ಗೊಲ್ಲನು ನೀನಾದೆ ಬಲೀಂದ್ರ ಪೂಜಾಬಲದಿ ಜಗಮಂ ಕಳೆಯೇರಿಸಿ ಮೆರೆದೆ 1 ತಳಿರ್ದೋರಣಂಗಳ್ ಎಲೆಬಾಳೆಲೆಗಳ್ ನಳನಳಿಸುವ ಬಗೆಯೊಳ್ ಬೆಳಗುವ ದೀಪಾವಳಿಯಿಂ ಜಗಮಂ ತೊಳಗುವದೆಲ್ಲೆಡೆಯೊಳ್ 2 ಚಿತ್ತಜಪಿತ ಬಾ ಉತ್ಸವಪ್ರಿಯ ಬಾ ಸತ್ಯವಿಕ್ರಮ ನೀ ಬಾ ಬಾ ನಿತ್ಯ ತೃಪ್ತನೆ ಬಾರೈ 3 ಮದಮತ್ಸರಗಳ ಸದೆವಡೆದೇಗಳು ಸದಯನೆ ನೀ ಎಮ್ಮೊಳು ಸದನವ ಮಾಡೈ ಹೃದಯ ಪೀಠದ ಅಧಿಪತಿ ನೀನಹುದೈ 4 ಮಾಯಾಪಾಶದಿ ಗಾಯಗೊಂಡೆವು ಜೀಯ ಪಾಲಿಪುದೈ ಧೈೀಯಮಾರ್ಗದೆ ನಡೆಯಿಸು ನೀ ನಿರಪಾಯದೆ ಸತತಂ5 ಕೈಪಿಡಿದೆಮ್ಮಂ ಕಾಪಿಡು ನಲವಿಂ ತಾಪತ್ರಯ ಹರ ನೀಂ ಭೂಪಶೇಷಾದ್ರೀಶನೆ ನೋಡೈ ಶ್ರೀಪಾದದಾಸರನು 6
--------------
ನಂಜನಗೂಡು ತಿರುಮಲಾಂಬಾ