ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಲೋಕನೀತಿ ಇಲ್ಲಿಗೇತಕೆ ಬಂದೆಯೋ ಮಾನವ ಇಲ್ಲಿರಲು ಶಾಶ್ವತ ಸಾಧ್ಯವೇ ಹೇಳೋ ಪ ಬರಲಿಲ್ಲ ಕೇಳಿ ನೀನು ಹೇಳಿ ಹೋಗುವನಲ್ಲ ಇರಲು ಇಲ್ಲಿ ನಿನಗೇಕೆ ಚಿಂತೆ ಕಾಡುತಿಹುದಯ್ಯ ಅ.ಪ ಜವನು ನಿನ್ನ ಬೇಡವೆಂದರೂ ಒಯ್ಯುವನಯ್ಯ ಅವನ ಪಾಲಿಗೆ ನೀನು ಅನ್ನವಾಗಿ ನಿಂತಿರುವೆ ದೈವ ಕಮಲಾಕ್ಷನಿಗೆ ಅವನು ಉಪ್ಪಿನಕಾಯಿ ಅವನ ಚರಣ ಪಿಡಿದು ಬರುವುದೇನಿದೆ ನೋಡೋ 1 ನಂಬು ರಾಮನ ಮಾತನು ಕೃಷ್ಣ ಹಾಡಿದ ಹಾಡನು ನಂಬಿ ಬಾಳಯ್ಯ ನೀನು ಪದುಮನಾಭನ ಚರಣ ತಂಬಿ ಕೇಳೋ ಧರಣಿನಾಥನೆ ಕರುಣೆ ಸಾಗರನಯ್ಯ ನಂಬು ಶೆಲ್ವರಾಯನೆ ದೇವ ಮುಕುತಿದಾತನು ಅವನೆ 2
--------------
ಸಂಪತ್ತಯ್ಯಂಗಾರ್
ಬೇಡಿಕೊಂಬೆನು ನಿನ್ನ ಮನಬಿಚ್ಚಿ ತೋರಿಸುವೆ ಪ ಪಶುವಾದ ಎನ್ನ ಮನಸು ಪಿಸುಮಾತು ಹೇಳುತಿಹುದು ತುಸುಗುಣವಿಲ್ಲ ನಿನಗಂತೆ ಬಕುತಿಯೇಕಯ್ಯ ನಿನಗೆ ಅ.ಪ ಬದುಕು ತಪ್ಪಿಸಿ ನಿಲ್ಲು ನೀನಾಗಿ ಎನ್ನುತಿದೆ ಕದಿಮೋಸ ಮನವನು ನಂಬಿ ಬಾಳುವೆನೆಂತು ಬುದ್ಧಿ ಕಲಿಸಯ್ಯ ಮನಕೆ ಬೆಳಕು ತೋರಿಸು ನಿನ್ನ ಬದ್ಧಗೆಳೆಯನಾಗಿಸು ಅದನು ಬದುಕಿ ಬಾಳುವೆನಯ್ಯ 1 ಹಿಡಿಯಾಸೆ ಎನಗುಂಟು ಗಂಟುಕಟ್ಟಿ ನಿನ್ನೊಡನೆ ನಡೆವೆ ದಿಟ್ಟತನದಲಿ ಕಮಲಾಕ್ಷ ಲಾಲಿಸಯ್ಯ ಬಿಡಲಾರೆ ನಿನ್ನನೀಗ ಬೆಳಕು ಕಂಡಿತು ಎನಗೆ ಒಡೆಯ ಶೆಲ್ವರಾಯ ನನಸು ಕನಸಾಗಿ ಮಾಡದಿರು 2
--------------
ಸಂಪತ್ತಯ್ಯಂಗಾರ್
ಮೋಸ ಹೋದೆನಯ್ಯ ಕೃಷ್ಣ ಮೋಸ ಹೋದೆನಯ್ಯಾ ಪ ಈಸು ಸುಲಭನೆಂದು ಪೇಳಿ ದೂರ ಸರಿವೆಯೇಕಯ್ಯ ಇಷ್ಟವಿಲ್ಲವೇ ನಾನು ನಿನಗೆ ಬೇಡವಾದೆನೇ ಅ.ಪ ಉಡಲು ನಿನ್ನವೆಲ್ಲಾವೆಂದು ಸುಳ್ಳು ಹೇಳಿತೇ ವೇದ ಕಡಲು ದಾಟಲು ಬೇರೆ ದಾರಿಯಿಲ್ಲವಯ್ಯ ಒಡಲು ನನ್ನದಾಗಿ ನೊಂದ ನನ್ನ ಕೂಡಯ್ಯ ಒಡೆಯಶೆಲ್ವರಾಯ ಕೂಡಿಕೊಳ್ಳೊ ಅಯ್ಯ1
--------------
ಸಂಪತ್ತಯ್ಯಂಗಾರ್