ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರ್ಚಿಸೊ - ಮನುಜ - ನೀನರ್ಚಿಸೊ ಪ ನಿಚ್ಚಟ ಮರೆಯದೆ ಅ.ಪ. ವಾರಿಧಿ ಮಧ್ಯದಿ ಅಂದೂ | ಮಹಾಗರಳ ಉದ್ಭವಿಸಿತು ಮುಂದೂ | ನೋಡುಸುರಾಸುರರೆಲ್ಲರು ಬಂದೂ | ಭಾಳಮೊರೆಯ ನಿಟ್ಟರು ಕೇಳೊ ಅಂದೂ | ಆಹಭರದಿಂದ ಬರುತಲೆ | ಗುರು ಪವನನ ಪಾದಸ್ಮರಿಸದೆ ಗರಳವ | ಭುಜಿಸಲು ಬಂದನ 1 ಉದುಭೂತ ವಿಷದ ಪಾತ್ರೆಯನೂ | ಹರಮುದದಿ ಹಸ್ತದಿ ಕೊಂಡು ಅವನು | ನೋಡಿಅದುಭೂತ ವಿಷದ ಜ್ವಾಲೆಯನು | ತಾನುಬೆದರಿ ಯೋಚಿಸಿದನು ಶಿವನು | ಆಹಅದನರಿತು ಶಿರಿಯರಸ ಪದುಮಾಕ್ಷ ಕೃಷ್ಣನುಮುದದಿ ಅಭಯವಿತ್ತು | ಸದಯವ ತೋರಿದ 2 ಸೇವ್ಯ | ಕೇಳೊಮಂತ್ರೋದ್ಧಾರಗೆ ಪೇಳ್ದತ್ವರ್ಯ | ಆಹಮಂತ್ರಿ ಹನೂಮಂತ | ಮರ್ಧಿಸಿ ಇತ್ತಂಥಸ್ವಂತ ವಿಷವನುಂಡು | ಪಂಥವಗೆಲಿದನ 3 ಕಂಟಕ ಕಳೆದನು ಶಿವನು | ವಿಷಕಂಠನೆನೀಸಿದನವನು | ದಶಕಂಠ ಹರನ ನಾಮವನ್ನು | ಅವಕುಂಠಿತನಾಗದೆ ಇನ್ನು | ಆಹಕುಂಟಿಸಿ ಈಂಟಿಸಿ | ಧಿಮಿಧಿಮಿಕೆನ್ನುತಸೊಂಟದಿ ಕೈಯಿಟ್ಟು | ನಾಟ್ಯವನಾಡ್ವನಾ 4 ಪರಿ ಸ್ಮರಿಸೆ5
--------------
ಗುರುಗೋವಿಂದವಿಠಲರು
ಈ ವೇಳೆಯಲಿ ಸಲಹದಿರುವರೆಯನ್ನ ಶ್ರಿ ವತ್ಸಲಾಂಛನ ಶ್ರಿತಕಲ್ಪತರು ಹರಿ ಪ ರತಿ ರಮಣಜನಕ ಭಾರತೀರಮಣ ಸನ್ನುತನೆ ದಿತಿ ತನಯ ಸಂಹಾರಾಚ್ಯುತ ಮುಕುಂದ ಪತಿತಪಾವನ ಭವದುರಿತ ಪಾಶ ಪರಿಹರಿಸೆ- ನ್ನುತ ನಿನ್ನ ಸ್ತುತಿಸೆ ಸದ್ಗತಿ ತೋರಿ ಗೋವಿಂದ 1 ಅಕಲಂಕ ಚರಿತ ತಾರಕರೂಪ ಸರ್ವೇಶ ಸಕಲಲೋಕ ಶರಣ್ಯ ಪ್ರಕಟ ಮಹಿಮಾ ವಿಕಸಿತಾಂಬುಜ ನೇತ್ರ ಪ್ರಕಟದಾನವ ಜೈತ್ರ2 ಮೊರೆ ಹೊಕ್ಕವರನು ಕಾಯ್ವ ಬಿರುದು ನಿನ್ನದು ಕೃಪಾ ಕರ ಗರಡಗಮನ ಕರಿವರದ ಶೌರಿ ಧರಣಿಧರ `ವರಹೆನ್ನೆ ಪುರನಿಲಯ’ ಶ್ರೀಮ ನೃಹರಿ ಪರಮ ಪುರುಷ ಶಿರಿಯರಸ ಹರುಷದಲಿ 3
--------------
ಹೆನ್ನೆರಂಗದಾಸರು
ಕರುಣದಿ ಕಾಯೋ-ಕರುಣಾಲ ವಾಲ ಪ ಶಿರಿಯರಸನೆ ನಿನ್ನ ಚರಣವ ನಂಬಿದೆ ಸುರಗಣ ಸೇವಿತ ಸುರರಾಜ ಪಾಲ ಅ.ಪ. ಸತಿ ಶಾಪದಿಂದರೆಯಾಗಿರಲಂದು ನೀದಯದಿ ಇಂದಿರೇಶನೆ ನೀ ||ಕರು|| 1 ಮಾರೆಹೊಕ್ಕರೆ ನುತಿಸಿ ಚಕ್ರದಿ ಮಕರಿಯನಿಕ್ಕಿ ಗಜೇಂದ್ರನರಕ್ಷಿಸಿದಾಪರಿಯಕ್ಕರೆ ತೋರಿಸಿ2 ಶಿರಸರಿಸಕ್ಕೆಗುರಿಯಿಡಲು ಚರಣದುಂಗುಟದಿಂದ ಧರಣಿಯನೂರಿ ನರನ- ಶಿರವುಳುಹಿದ ಶಿರಿ ವರದವಿಠಲ ಹರಿ3
--------------
ಸರಗೂರು ವೆಂಕಟವರದಾರ್ಯರು
ತೆರಳಿದರೋ ತಂದೆ ಮುದ್ದು ಮೋಹನರೂಮರಳಿ ಬಾರವ ಪುರಿ ನರಹರಿ ಪೂರಕೇ ಪ ತರಳತನಾರಭ್ಯ ದ್ವಾದಶ ವತ್ಸರಪರಿಸರಾಗಮ ಪಠಿಸಿ ನಿಪುಣನೆನಿಸೀ |ಇರಲು ಬಂದರು ಮುದ್ದು ಮೋಹನ್ನದಾಸರುಕರಿಗಿರಿ ನರಹರಿ ರಥವ ಉತ್ಸವಕೇ 1 ಕರಿಗಿರಿ ಸನಿಯದ ನರಸಿಪುರದೊಳಿದ್ದವರಸುಬ್ಬರಾಯಾಖ್ಯ ಭರದಿಂದ ಬರುತಾ |ಗುರು ಮುದ್ದು ಮೋಹನರ ಪದಪಾಂಸು ಶಿರದಲ್ಲಿಧರಿಸಿ ಬಿನ್ನವಿಸಿದರುಪದೇಶ ಕೊಂಡಿರೆಂದೂ 2 ಪರಿಕಿಸಲೋಸುಗ ಅರುಣ ಉದಯ ಮುನ್ನಕರಿಗಿರಿ ಪುರಬಿಟ್ಟು ತೆರಳಲು ಅವರೂ |ಭರದಿ ಅಡ್ಡೈಸುತ ಗುರುಪಾದದಲಿ ಬಿದ್ದುವರ ಉಪದೇಶವ ಕೈಗೊಂಡ ಧೀರಾ 3 ಶುಭ ಅಂಕಿತವಾ |ತಂದೆ ಮುದ್ದು ಮೋಹನ್ನ ವಿಠ್ಠಲನೆಂದುಛಂದೋಗಮ್ಯನೆ ದಿವ್ಯ ನಾಮವನಿತ್ತರು 4 ದಾಸ ದೀಕ್ಷೆಯ ಪೊತ್ತು ದಾಸ ಕೂಟವ ನೆರಸಿಶೇಷಗಿರೀಶನೆ ಸರ್ವೇಶನೆನುತಾಎಸೆವ ಅಂಕಿತ ಮಂತ್ರ ಉಪದೇಶಗೈಯ್ಯುತ್ತದಾಸರ ಕ್ಲೇಶವ ಹರಿಸೀದ ಗುರುವೇ 5 ವರಚೈತ್ರ ಪಂಚಮಿ ವರುಷವು ವಿಕ್ರಮಶರಣರ ಪೊರೆಯಲು ಕರಿಗಿರಿಯಲ್ಲೀ |ಗುರು ಮುಖ್ಯ ಪ್ರಾಣ ಪ್ರತೀಕವ ನಿಲಿಸುತಆರು ಮೂರನೆ ದಿನ ಹರಿಯ ಸೇರುವೆ ನೆನುತಾ 6 ನರಲೀಲೆ ಕೊನೆಗೈದು ಪರಮ ಪುರುಷಹರಿಶಿರಿಯರಸಗೆ ಪ್ರೀತೆ ಪಾತ್ರನೆನಿಪಾನೂ |ವರ ಗುರು ಗೋವಿಂದ ವಿಠಲನ ಚರಣವಸ್ಮರಿಸಿ ಹಿಗ್ಗುತ ಪೊರಟ ನೀರಿಕ್ಷಿಸುತಾ7
--------------
ಗುರುಗೋವಿಂದವಿಠಲರು
ಸುಧೆಯನು ಸುರಿಸುವ ಸಮಯವಿದುಸದಯಾಕರ ಶ್ರೀಯಾದವ ಕುಲಪತಿ ಪ. ಇಂದಿರೆ ರಮಣನೇ 1 ಬಾಲೆರ ಮಧ್ಯದಿ ಕೋಲನೆ ಹಾಕುತಲೀಲೆಯ ತೋರಿದ ಬಾಲಗೋಪಾಲನೆ2 ಶಿರಿಯರಸ ತಂದೆವರದವಿಠಲನೆಚರಣಕಮಲ ತೋರೋ ಹೃದಯ ಮಂದಿರದಲಿ 3
--------------
ಸಿರಿಗುರುತಂದೆವರದವಿಠಲರು