ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅ. ಶ್ರೀಹರಿ ಲಕ್ಷ್ಮಿಯರು 46 ಪ್ರಣವರೂಪನ ಹೋಗಿ ನೋಡಿ ಬರುವುದಕೆ ಪ ಹೋಗುವಯೆಂದೆಂಬ ಮಾತು ನಿಶ್ಚಯವಾಗಿ ನಾಗಗಿರೀಶನ ಕಂಡು ಕಾಣಿಕೆಯಿತ್ತು ಸಾಗಿ ಬರುವ ಊರಿಗೆ ಇವರಿಗೆ 1 ಕೋನೇರಿನಾಸನ ನಾ ಹೋಗಿ ನೋಡಲು ಮಾನವ ಜನುಮದಲಿ ಹೀನ ವೃತ್ತಿಯ ಬಿಟ್ಟು ಜ್ಞಾನ ಬುತ್ತಿಯ ಕಟ್ಟಿ ಕಾಣಲು ಇಹಪರವಾತ ತಾನೆರೆವ 2 ರಾಮನ ಶಿಕ್ಷೆಯು ರಾಮನ ರಕ್ಷೆಯು ರಾಮ ಆಂಜನೆಯನ ಗಿರಿಯೊಳು ನಿಂತಿಪ್ಪ ವರಾಹ ತಿಮ್ಮಪ್ಪ 3
--------------
ವರಹತಿಮ್ಮಪ್ಪ
ಅಪರಾಧ ಕ್ಷಮಿಸಿ ನೀ ಕೃಪೆಯಿಂದ ಸಲಹಯ್ಯ ಗಾತ್ರ ಸಾರಸ ನೇತ್ರ ಪ ಉಪಕಾರವಾಯಿತು ನೀ ಗೈದ ಶಿಕ್ಷೆಯು ವಿಪರೀತ ಮತಿ ಭ್ರಾಂತಿ ಪರಿಹಾರವಾಯಿತು ಅ.ಪ. ಜಗವ ಸೃಷ್ಟಿಪೆ ನೀನು ಜಗದ ನಿಯಾಮಕ ಬಗೆಯಲು ಸೂತ್ರಧಾರಿಯು ನೀನೆ ತೊಗಲು ಬೊಂಬೆಗಳಂತೆ ನೀ ಕುಣಿಸುವೆ ಜಗವ ಬಗೆ ತಿಳಿಯದೆ ಜನರು ಬಯಲು ಭ್ರಾಂತಿಯಿಂದ ಮಿಗೆ ಕರ್ತೃತ್ವವ ತಮ್ಮಲಿ ತಿಳಿಯುತ ಹಗರಣ ಪೊಂದುವುದ ನೀಗಿಸುವುದು ಬಗೆಯೆ ನಿನ್ನ ಪರಮಾನುಗ್ರಹವು ಮುಗಿವೆ ಕರಗಳನು ಕರಿಗಿರಿನಿಲಯ 1
--------------
ವರಾವಾಣಿರಾಮರಾಯದಾಸರು
ಇದೇ ಇದೇ ಸದ್ವಸ್ತು ನಮ್ಮ ಇದೇ ಇದೇ ಧ್ರುವ ನಿಗಮ ತಂದುಳುಹಿದ ಸುಗಮ ಸುವಸ್ತು ಇದೆ ಜಗವು ಬೆನ್ನಿಲೆ ಪೊತ್ತು ನೆಗದದಿದೆ 1 ಧೀರತನವನುದೋರಿ ಧಾರುಣಿಗೆದ್ದದು ಇದೆ ನರಮೃಗನಾದ ನಿಜವಸ್ತುವಿದೆ 2 ಮೇದಿನಿ ಅಳೆದು ಮೂರುಪಾದವ ಬೇಡಿದದಿದೆ ಸಾಧಿಸಿ ಸಾಸಾರ್ಜುನನ ಮರ್ದಿಸಿದಿದೆ 3 ರಾಕ್ಷಸರನೆಲ್ಲ ಕೊಂದು ಶಿಕ್ಷೆಯುಗೈಸಿದಿದೆ ಪಕ್ಷಪಾಂಡವರಿಗ್ಯಾಗಿ ರಕ್ಷಿಸಿದಿದೆ4 ಬತ್ತಲೆ ಸುಳಿದು ಸತಿಯರ ವೃತವಳಿದುದಿದೆ ಉತ್ತಮ ತೇಜಿನೇರುವ ರಾವುತನಿದೆ 5 ಸಗುಣ ನಿರ್ಗುಣನಾದ ಜಗಜ್ಜೀವನವಿದೆ ಅಗಣಿತಗುಣಗಮ್ಯ ಗೋಚರಿವಿದೆ 6 ವಿಶ್ವತೋಮುಖನಾದ ವಿಶ್ವತೋಬಾಹುವಿದೆ ವಿಶ್ವತೋಚಕ್ಷು ವಿಶ್ವರೂಪವಿದೆ 7 ಮುನಿಗಳ ಪ್ರಿಯವಸ್ತು ಪರಾತ್ಪರವಿದೆ ವಾಸವಾಗಿ ವಿಶ್ವದೊಳು ಭಾಸುವದಿದೆ 8 ಭಾಸ್ಕರ ಕೋಟಿ ಪ್ರಕಾಶ ವಸ್ತುವಿದೆ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು