ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಕೂರ್ಮಚಾರ್ಯರ ಚರಣಕಮಲಯುಗ್ಮ ಮಾನವ ಪ ಧರಣಿಯೊಳಗೆ ಸುಕ್ಷೇತ್ರಗಾಲವ ಪುರದಿ ಶ್ರಿ ನರಶಿಂಹಾ ಚಾರ್ಯರ ತರುಣಿಯಳ ಗರ್ಭಾಬ್ಧಿಯಲಿಹಿಮ ಕರನ ತೆರದಲಿ ಜನಿಸಿಮೆರೆದ ಅ.ಪ ವರಕೊಲ್ಹಾಪುರದಿ ಪೋಗಿರಲು ಸುಂದರವಾದ ಸಿರಿಯರೂಪವ ಕಾಣುತ್ತ ಅರಿತು ಪ್ರಾರ್ಥಿಸಲು ಶ್ರೀ ನರಶಿಂಹಾರ್ಯರಿಗೊಲಿದು ಕರುಣದಿಂದಲಿ ಕೊಟ್ಟಂಥ ಚರಣಕವಚ ಸ್ವರಣ ಸಂಪುಟದಲ್ಲಿ ನಿರುತ ಪೂಜೆಯ ಮಾಡುತ್ತ ಪ್ರವಚನಾಸಕ್ತ ಧರೆಯೊಳಗೆ ಬಹು ಶರಣು ಜನ ರಘ ತರಿದು ಸೌಖ್ಯವ ಗರಿವುದಕೆ ಸಂ ಚರಿಸುತಲಿ ಸಚ್ಛಾಸ್ತ್ರ ಮರ್ಮವ ನರುಹಿಜನರನುದ್ಧರಿಸಿದಂಥ 1 ಪೊಳೆವ ಫಾಲದಿ ಪುಂಡ್ರ ತಿಲಕ ಮುದ್ರಾಕ್ಷತಿ ವಿಲಸಿತ ಶುಭಗಾತ್ರದಿ ಅಲವ ಬೋಧರ ಮತದೊಳು ತತ್ವಬೋಧಕ ಸುಲಲಿತೋಪನ್ಯಾಸದಿ ಬಲು ವಿಧಾರ್ಥವ ಪೇಳಿಕುಳಿತಪಂಡಿತರನ್ನು ಒಲಿಸುತಿರೆ ಪೂರ್ವದಿ ಪಂಢರಪುರದಿ ಭವ ಮುದ್ಗಲಾಚಾರ್ಯರಿ ಗೊಲಿದು ಬಂದಿಹ ಚಲುವ ವಿಠ್ಠಲ ಮೂರುತಿಯ ಪದ ಜಲಜ ಮಧುಕರರೆನಿಸಿದಂಥ 2 ಜಡಜಾಪ್ತನುದಯದಿ ನಡೆದು ದ್ವಿಜಗೃಹದೇವ ರಡಿ ಗೊಂದನೆಯ ಮಾಡುತ್ತ ಎಡೆಬಿಡದಲೆ ತಮ್ಮ ಅಡಿಗೊಂದಿಸುವ ಭಕ್ತ ಗಡಣವ ಮನ್ನಿಸುತ ಬಿಡದೆ ಶತತ್ರಯ ಕೊಡ ಜಲದಲಿ ಸ್ನಾನ ದೃಢಮನದಲಿ ಮಾಡುತ್ತ ತಂತ್ರ ಸಾರೋಕ್ತ ಎಡಬಲದಿ ಶೇವೆಯನು ಮಾಡುವ ಪೊಡವಿಸುರಕೃತ ವೇದ ಘೋಷದಿ ಜಡಜನಾಭನ ಪೂಜಿಸುವ ಬಹು ಸಡಗರವ ನಾನೆಂತು ಬಣ್ಣಿಪೆ 3 ಭೂತಲದಲಿ ಶ್ರೇಷ್ಠವಾತ ಮಾತಾಂಬುಧಿ ಶೀತ ಕಿರಣನೆನಿಸಿ ಪ್ರಾತರಾರಭ್ಯ ಶ್ರೀನಾಥನೆ ಪರನೆಂಬೊ ಶಾಸ್ತ್ರದಿ ಮನವಿರಿಸಿ ಖ್ಯಾತ ಸತ್ಯಧ್ಯಾನ ತೀರ್ಥರೆಂಬುವ ಗುರು ಪ್ರೀತಿಯ ಸಂಪಾದಿಸಿ ಪುತ್ರರಿಗೆ ಬೋಧಿಸಿ ಪ್ರೀತಿಯಲಿ ಶಿಷ್ಯರಿಗೆ ಭಗವ ದ್ಗೀತೆಯನು ಪ್ರತಿದಿನದಿ ಪೇಳುತ ಪಾತಕವ ಪರಿಹರಿಸಿ ಪರಮ ಪು- ನೀತ ಗಾತ್ರರ ಮಾಡಿ ಸಲಹಿದ 4 ಧರೆಯೊಳಧಿಕಮಾದ ಗಿರಿ ವೇಂಕಟೇಶನ ದರುಶನವನೆ ಕೊಳ್ಳುತ ಗುರುವಾಜ್ಞೆಯಲಿ ಬಂದು ವರ ಸಭೆಯೊಳು ತಮ್ಮ ಪರಿವಾರದಿಂದಿರುತ ವರಷ ಶಾರ್ವರಿಯೊಳು ವರ ಮಾಘ ಪ್ರತಿಪದ ಬರಲು ಧ್ಯಾನವ ಮಾಡುವ ಹರಿಪದಾಸಕ್ತ ಪರಮ ಭಕುತಿಯಲಿಂದ ಶೇವಿಪ ಶರಣು ಜನ ಮಂದಾರ ನೆನಿಸುತ ಮೆರೆವ ಕಾರ್ಪರ ನಿಲಯ ಶಿರಿನರ ಹರಿಯ ಪುರವನು ತ್ವರದಿ ಶೇರಿದ 5
--------------
ಕಾರ್ಪರ ನರಹರಿದಾಸರು
ಮಾನವ ನೀನುವಾದಿರಾಜರ ಪೂಜಿಸೋ ಪ ಶಾರ್ವರಿ ವತ್ಸರದೀ | ಜನಿಸಿ ಗೌರಿಗರ್ಭ ಸುಧಾಂಬುಧಿಲೀ ||ಪುರಬಾಹ್ಯ ಪುಟ್ಟಿದ | ಕಾರಣದಿಂದಲಿವರಯತಿ ವಾಗೀಶ | ಕರಜನೆನಿಸಿ ಮೆರೆದ 1 ವಿನುತ ಸಿರಿ ಹರಿಯ ಪೂಜಿಸಿದ 2 ವಾಲಿ ಭಂಡಾರವನೂ | ಶೋಧಿಸೆ ಅಲ್ಲಿಶೀಲ ಇನಜಾರ್ಚಿಸಿದ ||ಲೀಲ ವಿಗ್ರಹ ರಾಮ | ವಿಠಲ ಮೂರ್ತಿಗಳನ್ನಕೋಲಾಹಲದಿ ತಂದು | ಭಾಳ ಪೂಜಿಸಿದ 3 ವ್ಯಾಸರಾಜಾರ್ಚಿತನಾ | ದೇವನವೇದವ್ಯಾಸರಿಂದಲಿ ಗಳಿಸಿದಾ |ವ್ಯಾಸಮುಷ್ಠಿಕೆಯ ವಿ | ಶ್ವಾಸದಿಂದಲಿ ಪೊಂದಿಶ್ರೀಶ ಉಡುಪಿನ ಕೃಷ್ಣ | ವಾಸ ಸ್ಥಾನಕೆ ಬಂದ 4 ಕವಿಕುಲ ಸಭೆಯೊಳಗೇ | ಪೂಣೆಯ ಪುರದಿನವರಸಲಂಕಾರದೀ ||ಕವನ ರಚಿಸಿ ರುಕ್ಮಿ | ಣೀಶ ವಿಜಯ ಗ್ರಂಥಕವಿ ಕುಲೋತ್ತಂಸ | ತಾನೆನಿಸುತ್ತ ಮೆರೆದಂಥ 5 ಪಂಢರಿ ಪುರ ಮಾರ್ಗವ | ಸವೆಸುತ ಬರೆಪುಂಡು ಸೈನಿಕರ್ ಬರಲೂ ||ಪುಂಡಲೀಕಗೆ ವರದ | ಪುಂಡರೀಕಾಕ್ಷನಹಿಂಡು ಶ್ವೇತಾಶ್ವಗಳಿಂದ ವಾರಿಸಿದಾ 6 ಹರಿವಾಣ ಪೂರಣವ ||ಹಯವದನನು ಬಂದು | ಜಯ ಘೋಷದಲಿ ಮೆದ್ದುದಯ ದೃಷ್ಟಿ ತೋರಿದ | ಭಾವಿ ಮಾರುತರ 7 ಪಾದ | ಬಿಸಜವ ಕಂಡರ 8 ಬೊಮ್ಮ ರಕ್ಕಸನಾಗೀ 9 ಸಕಲ ಶಿಷ್ಯರವೆರಸಿ | ರಾಜರು ಬರೆರಕ್ಕಸ ಕರೆದ ವಾದಕ್ಕೇ ||`ಆಕಾಮವೈ` ಕೋ ನಸ್ನಾತನೆಂದೆನೆ ಅವಕಾಕು ರಂಡೆಯ ಪುತ್ರ | ತೋಕ ನೀನೆಂದ 10 ಮೇನೆ ಪಾಲಕಿ ಹೊರುವ | ನರೆಯಣ ಭೂತಯಾನ ವಾಹಕನಾದನೂ ||ಆನೆಂತು ಬಣ್ಣಿಪೆ | ಮುನಿಕುಲ ದಿನಮಣಿವೇಣುಗಾನ ಪ್ರಿಯ | ಕೃಷ್ಣ ಸೇವಕರಾ 11 ಆ ಮಹ ನೇತ್ರಾವತಿ | ಸಂಗಮವೆನ್ನಕೌಮಾರ ನದಿ ಸನಿಯದಿ ||ಈ ಮಹಾ ಮಹಿಮರು | ಸಾಸಿರ ಲಿಂಗದನೇಮದ ಪೂಜೆಗೆ | ನಿರ್ಮಿಸಿದರು ತೀರ್ಥ 12 ಪಾದ್ಯ | ಸ್ವರ್ಣ ಗರ್ಭನ ಪಿತಪೂರ್ಣಗೆ ಸುಪ್ರೀಯ | ಗಸದಳವೇನಿದು13 ಗರಳ ಮಿಶ್ರಿತ ನೈವೇದ್ಯ | ಪಾಚಕತೆರೆಹರಿಗೆ ಸಮರ್ಪಿಸಿದಾ ||ಸಿರಿಪತಿ ಕಂಠದೋಳ್ | ಕರಿಯ ವರ್ಣವ ಕಂಡುಅರಿತು ಸೇವಿಸಿದನು | ಹರಿಯ ಪ್ರಸಾದವ 14 ಸಿರಿ ಕೃಷ್ಣ | ನಂಘ್ರಿಗರ್ಪಿಸಿದ 15 ಅರಿಯು ಮುತ್ತಲು ಪುರವ | ಸೋದಾಧಿಪಮೊರೆಯ ಹೊಕ್ಕನು ರಾಜರ ||ಭರದಿ ನಾರಾಯಣ | ವರ ಭೂತನನ ಕಳುಹಿಅರಿಭಯ ವಾರಿಸಿ | ಪೊರೆದ ನಾಯಕನಾ 16 ಸೋದೆಯಲ್ಲೋರ್ವ ಶೈವ | ಬಲುಗರ್ವದಿವಾದ ಮಾಡುತಲವನೂ ||ವೇದ ಮತವ ಬಲು | ವಿಧದಿ ದೂಷಿಸಿ ಕಡುಬಾಧೆ ಪಡಿಸುತಲಿದ್ದ | ಬುಧಜನ ವೃಂದವ 17 ಭೃತ್ಯ ಭಾವದಿ | ವಿಜಯ ಪತ್ರವನಿತ್ತುನಿಜ ಬಿರುದುಗಳವರ | ಪದಕೆ ಅರ್ಪಿಸಿದ 18 ತ್ರಿವಿಕ್ರಮಾಲಯ ಸ್ಥಾಪನೆ | ರಚಿಸಿ ಮೆರೆದ ದಿವ್ಯ ಶಾಲೀವಾಹನ್ನ ||ಸಾವಿರೈನೂರ್ನಾಲ್ಕು | ಚಿತ್ರ ಭಾನುವಿನಲ್ಲಿರವಿಯು ಮೇಷಾರ್ಧದಿ | ಚರಿಸುವ ದಿನದಿ 19 ರಥದಿಮೂರ್ತಿಯ ಸೇರಿಸಿ | ಬದರಿಯಿಂದಭೂತ ನರೆಯಣ ಬರುತಿರೆ ||ಪಥದಿ ರಕ್ಕಸ ಸೆಣೆಸೆ | ಪೃಥುಕು ಆಯುಧ ಬಿಟ್ಟುರಥದ ಗಾಲಿಯಲಿಂದ | ಹತಗೈದನವನ 20 ವೇದಾರ್ಥ ಬೃಂಹಿತದ | ಬಹು ಗ್ರಂಥಗಳ್‍ಪದ ಪದ್ಯ ಸೂಳ್ಹಾದಿಯ ||ಸೋದೆ ಮಠದಿ ನಿಂದು | ವಾದಿರಾಜರು ರಚಿಸಿಬುಧರಿಗಾನಂದವ | ಮುದದಿ ಪಾಲಿಸಿದ 21 ತ್ರಿವಿಕ್ರಮ ರಥೋತ್ಸವದಿ | ಕರೆಯಲು ಬಂದದಿವಿರಾಜ ಜನರು ಕಳುಹಿ ||ಭವ್ಯ ಸು ಪಂಚ ವೃಂದಾವನಗಳ ರಚಿಸಿದಿವಿರಾಜ ಗರುಹಿದರ್ ತಮ್ಮಯ ಬರವನು 22 ಶಾರ್ವರಿ ವತ್ಸರದೀ | ಫಾಲ್ಗುಣ ವದ್ಯಮೂರನೆ ದಿವಸದಲ್ಲೀ ||ವರ ವೃಂದಾವನ ಪೊಕ್ಕು | ಗುರು ಗೋವಿಂದ ವಿಠಲನನಿರುತ ಧ್ಯಾನದೊಳಲ್ಲಿ | ವರವ ಪಾಲಿಸುತಿಹರ 23
--------------
ಗುರುಗೋವಿಂದವಿಠಲರು
ಹೊರಿಯೊ ವಿಪಗಮನ ಮಂಗಳಶರಧಿಜಾರಮಣ ಪ.ಸುರಕಾರ್ಯಕೆ ಪಕ್ಷ ಶಾರ್ವರಿಚರವರ ಶಿಕ್ಷಧರಣಿಜ ಹರ ಸತ್ರಾಜಿತಜಾವರಶರಣಾಗತಭಟದುರಿತವಿದೂರ1ಪೌಂಡ್ರಕವೈರಿ ನಿಜ ಕೃಷ್ಣಪಾಂಡವರ ತಾರಿಶುಂಡಾಲಚಾಣೂರ ಸಂಹಾರಿಖಾಂಡವವನ ದಹಕಾರಿ 2ವಿದುರೋದ್ಧವ ಪೋಷಸುಖತೀರ್ಥಹೃದಮಾನಸ ಹಂಸಪದುಮನಾಭ ಪ್ರಸನ್ವೆಂಕಟೇಶಪಾಹಿಸದಮಲಸದನ ಕ್ಷೀರಾರ್ಣವಶಾಯಿ 3
--------------
ಪ್ರಸನ್ನವೆಂಕಟದಾಸರು