ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

*ಸುದಿನ ದುರ್ದಿನಮೆಂಬುದವರವರ ಸಂಪ್ರಾಪ್ತಿ ಸುದಿನಮದು ಜನಿಸಿದೊಡೆ ದುರ್ದಿನಮದಳಿಯಲ್ಕೆ ವಿಧಿಲೀಲೆ ಜನನಮರಣಂಗಳೈ ರಕ್ತಾಕ್ಷಿ ಮಧುಮಾಸ ಸಿತಪಕ್ಷದ ಸದಮಲಾನ್ವಿತಮಪ್ಪ ತಾರಗೆಪುನರ್ವಸೂ ವಿಧುವಾರ ಪೂರ್ವಾಹ್ನಮಾಸೂರಿ ನಾಮಮೆದಿ ಮಾಂಗಿರಿಯ ರಂಗಪದಮಂ 1 ಬಂಧುಜನÀಮಿತ್ರರ್ಗೆ ದುರ್ದಾಂತ ದುರ್ದಿನಂ ಸಂದಮಾಂಗಿರಿರಂಗಪದನಳಿನಮಂ ಸೇರ್ದ ಸಿಂಧುಪುತ್ರಂ ಬಳಗದಾಸೂರಿಯಾತ್ಮಮದು ಚಿರಶಾಂತಿಯಂಪಡೆಯಲೈ ಚೆಂದವಹ ಕಮಲಮದು ಕಮನೀಯ ಕಾಂತಿಯಿಂ ದಂದವಡೆದಿರ್ಪುದೇ ನಿಡುಗಾಲಮದು ಬಳಿಕ ಕುಂದದಿರದೇಂ ನಿಜದೆಯಾದರ್ಶಜೀವನಂ ಶ್ರೀರಕ್ಷೆಯಲ್ತೆ ನಮಗೆ 2 ವರಮಹಾಲೆಕ್ಕಿಗರ ಶಾಖೆಯೊಳ್ ಪರಿಣತಿಯ ಕರಣಿಕಂ ತಾನಾಗಿ ವಿಶ್ರಾಮ ಜೀವನದೆ ಸರಸಕಾವ್ಯಾದಿ ಪದರಚನೆಯಿಂ ಗಮಕಿಗಳ ತಣಿಸಿಯಾನಂದಮುಣಿಸಿ ಸಿರಿಲೋಲ ಸುವಿಲಾಸ ಗೋಕರ್ಣಮಹಿಮೆಯಂ ಭರತಮಾರುತಿಭಕ್ತಿಯಾಳ್ವಾರುವೈಭವಂ ಸರಿಸದಲಿ ಕಾವ್ಯಪಂಚಕ ರಚಿಸಿ ಪಂಚತ್ವವೈದಿದರ್ ಧನ್ಯರಲ್ತೆ 3 ಕಿವಿಚುರುಕು ನಿಡುಮೂಗು ದೃಷ್ಟಿಪಾಟವಹೊಳಪು ಸವಿನೆನಪಿನಂಗಳಂ ಬೇವುಬೆಲ್ಲದಪದರು ರವಿಯೆಡೆಗೆ ನಿಟ್ಟಯಿಸಿ ಧೀರ್ಘಾಯುವೆಂದೆನಿಸಿ, ಶರದಶಕಗಳ ಕಳೆದನು ಇವಗೆ ಮಣಿವುದೆ ಬೆಲ್ಲ ಹರಿಚಿಂತನೆಯಬಲ್ಲ ದಿವರಾತ್ರಿ ಸಂತೃಪ್ತಿ ಮಾಳ್ಪಕಾರ್ಯಂಗಳಲಿ ತವಕದಿಂ ಸುತ್ತುವರೆದಿರ್ಪರೈ ಹಿರಿತನದ ನಮ್ರತೆಗೆ ಬೆರಗಾಗುತ 4 ಸುತರತ್ನರೀರ್ವರಂ ಸುತೆಯರಂ ಸೊಸೆಯರಂ ಹಿತಮಪ್ಪಮೊಮ್ಮಂದಿರಂ ನೆಂಟರಿಷ್ಟರಂ ಮಿತವಚನದಿಂ ನಲಿಸಿ ಮನದಳಲಿಗೆಡೆಮಾಡಿ ವೈಕುಂಠಮಂ ಸೇರಿದೈ ಶತಪತ್ರಲೋಚನದ ಪರಿಚರ್ಯೆಯಂ ಗೈದು ಶತವರುಷಮಂ ತುಂಬುಜೀವನವ ತಾಳ್ದೆ ಸ ತ್ಪಥವಿಡಿದು ನಿನಗಾತ್ಮಶಾಂತಿಯುಂಟಾಗಲೈ ತವಕುಲಂ ವರ್ಧಿಸಿರಲೈ5
--------------
ಪರಿಶಿಷ್ಟಂ
ಅನಂತ ಯೋನಿಯೊಳಗೆ ಅನಂತ ಜನ್ಮತಿರುಗಿಅನಂತ ಯುಗಯುಗಂಗಳಲಿ ಸತ್ತು ಹುಟ್ಟೆಅನಂತನಾಟವೆಯೆಂದು ಅರಿವು ಇಲ್ಲದೆ ಹೋಗಿಅನಂತ ದುಃಖಸಾಗರದಿ ಹಿರಿದು ಬಳಲುವಿರಿ 1 ವಿಶ್ವತೈಜಸ ಪ್ರಾಜ್ಞ ಮೂವರೆಂದೆನಿಸಿವಿಶ್ವದೊಳು ನಾನಾ ರೂಪಗಳ ತಾಳಿವಿಶ್ವದೊಳ ಹೊರಗೆಲ್ಲ ಪೂರ್ಣ ತಾನೆಂದೆನಲುವಿಶ್ವಾತ್ಮಕನು ನೀವು ಮತ್ತಾರು ತಿಳಿಯಿರೋ 2 ಮೂರವಸ್ಥೆಗಳಲ್ಲಿ ಮೂರು ಮೂರ್ತಿಗಳಾಗಿತೋರುತಿಹ ನಾನಾ ಬಗೆ ಲೀಲೆಗಳನುಭೂರಿ ಸಂಸಾರಗಳ ದುಃಖ ಸುಖವೆಂದೆನಿಸಿತೋರಿ ನೋಡಿಪನವನು ಮತ್ತಾರು ತಿಳಿಯಿರೋ 3 ಸತಿ ಪುರುಷರಾಗಿಹನು ಸುತನು ತಾನಾಗಿಹನುಖತಿಯು ಶಾಂತಿಯು ಕಾಮವಾಗಿ ತಾನಿಹನುಅತಿ ಕುಲಗಳಾಗಿಹನು ಅತಿ ಜಂತುವಾಗಿಹನುಮಿತಿಯಿಲ್ಲದಾಗಿಹನು ನೀವಾರು ತಿಳಿಯಿರೋ 4 ಈ ವಾಕ್ಯಗಳನೇ ನೀವಾರಮುಂದುಸುರದಲೆಸಾವದಾನದಿ ತಿಳಿದು ನೋಡಿದೇವ ಚಿದಾನಂದ ಗುರು ತಾನೀಗ ನಿಜವೆಂದುಸಾವದಾನದಿ ಕಂಡು ಕಡೆಹಾಯಿರೋ 5
--------------
ಚಿದಾನಂದ ಅವಧೂತರು
ದಾಸನಾಗಬೇಕು ಮನದಲಿ ಆಸೆಯಿಂಗಬೇಕು ಪ ಮೋಸಮೆಂಬುದಂಕುರಿಸದ ಅದರ ವಾಸನೆಯಂಟದ ಮಾನಸದಲಿ ಹರಿಅ.ಪ ಅತಿಮಾತಾಡುವ ಸತಿಯಿರಬೇಕು ಖತಿಯಿಂತೆರಳುವ ನೆಂಟರು ಬೇಕು ಹಿತವನು ಬಯಸದ ಸುತರೂ ಬೇಕು ಸತತಮಿವೆಲ್ಲರ ಸಹಿಸಿ ಭಜನೆಗೈವ 1 ತಣಿವಿಲ್ಲದೆ ತಿಂಬ ಅಣುಗರು ಬೇಕು ಹಣವ ಕೊಡೆಂಬುವ ಅಳಿಯರು ಬೇಕು ಋಣಬಾಧೆಗಳೊಳು ಕೊರಗಲು ಬೇಕು [ಅಣು ಅಣು ಕಾಡುವ ಸಂಸಾರಕಂಟದೆ] 2 ಮಾನಸವ ಬಿಗಿಹಿಡಿದಿರಬೇಕು ಧ್ಯಾನದೊಳಾತ್ಮಶಾಂತಿಯು ಬರಬೇಕು ಶ್ರೀನಿವಾಸನೇ ಶರಣೆನಬೇಕು ಜ್ಞಾನದಿ ಮಾಂಗಿರಿರಂಗನ ಪಾದದ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಂಸಾರದೊಳ್ ಪ ನಾನುನನ್ನದೆಂದು ವೃಥಾ ನರಳಿಬಳಲುವೆ ಅ.ಪ ತಂದೆ ತಾಯಿಯು ಬಂಧು ಬಳಗವು ಸಂ ಬಂಧಿಗಳೆಲ್ಲರು ಸತಿಸುತರೂ ಎಂದಿಗು ರಕ್ಷಕರೆಂದು ನೀ ತಿಳಿದು ಮಂದಮತಿಯೆ ಮುಂದೇ ಕೆಡುವೆಯೊ 1 ದುರ್ವಿದಗ್ಧ ವಿಜ್ಞಾನನಾಗಿ ಗರ್ವಪಡಲೂ ಸುಪರ್ವರ್ ನಗರೇ 2 ಸತ್ಯವೆಂಬುವದು ಮಾತೃ ಪಿತನು ಸ- ರ್ವೋತ್ತಮ ಜ್ಞಾನವು ಭೂತದಯೆಯು ಸ- ನ್ಮಿತ್ರಧರ್ಮವು ಭ್ರಾತೃಗಳ್ ಶಾಂತಿಯು ಪತ್ನೀ ಕ್ಷಮೆಯೂ ಪುತ್ರರ್ ನಿತ್ಯರಿವರು 3 ನಡೆವುದು ಯಾತ್ರೆಯು ನುಡಿವುದು ಮಂತ್ರ ನಡೆಸುವನು ಎಂದು ಧೃಡವಾಗಿ ನಂಬದೆ4 ಧ್ಯಾನನದೀಯೊಳು ಸ್ನಾನಮಾಡಿಸು- ಶ್ರೀನಿವಾಸನ ಸೇವೆಯಿದೆನ್ನದೆ 5 ಮೂರು ವಿಧವಾದ ಜೀವ ಕೋಟಿಯೊ- ಳಾರು ನಾನೆಂದು ದೂರದೃಷ್ಟಿಯಿಂ ಧೀರ ನಾಗಿದರ ಪರವ ಗಾಣದೆ 6 ನೀಮನವಲಿದು ವ್ಯರ್ಥನಾದೆ ನಾಮಾ ಜಪಿಸೀ ಕಾಮಿತ ಪಡಿಯದೆ 7
--------------
ಗುರುರಾಮವಿಠಲ
ಲೇಸಿನಮಾರ್ಗಕೇಳಿರೋ ಜನರುಈಸು ಲಾಲಿಸಿದರೆ ಲೇಸುಪಹಂದಿನಾಯಿ ತೃಣಗಳಲಿರುವ ದೇವನಅರಿದರೆ ಅದು ಲೇಸುಹಿಂದಾಗಿಹುದನು ಮುಂದಾಗುವುದನುಚಿಂತಿಸಿದರೆ ಅದು ಲೇಸು1ಕ್ರೂರ ಮನುಜರೊಡಗೂಡದೆ ಮೌನದಿಬೇರೆಯಿಹುದು ಅದು ಲೇಸುಪ್ರಾರಬ್ಧದ ದಶೆಯಿಂದಲಿ ಬಂದುದಕಳೆದುಕೊಂಡರೆ ಅದು ಲೇಸು2ಘೋರವಾದ ತಾಪತ್ರಯಗಳುಮನೆಸೇರದಿದ್ದಡೆ ಅದು ಲೇಸುಸಾರವ ತಿಳಿದು ವ್ಯವಹಾರದೊಳಿದ್ದುಧೀರನಾಗಿಹುದದು ಲೇಸು3ಪಾಪಿಯ ಕೂಡದೆ ಸುಜನರ ಕೂಡುತದೇವನ ಕಾಂಬುದೆ ಲೇಸುಕೋಪವು ಎಂದಿಗು ಸುಳಿಯದೆ ಶಾಂತಿಯುವ್ಯಾಪಿಸಿ ತಾನಿಹುದದು ಲೇಸು4ಪಾಪ ಪುಣ್ಯಗಳ ಗುರುವಿಗೆ ಅರ್ಪಿಸಿಬಾಳುವೆ ನಡೆಸುವುದದು ಲೇಸುಈಪರಿ ನಡೆಯ ನಡೆದು ಚಿದಾನಂದಭೂಪನಾಗುವುದತಿ ಲೇಸು5
--------------
ಚಿದಾನಂದ ಅವಧೂತರು
ಶಿವನಾದ ಮೇಲೆ ಶಿವತಾನೆಂಬರಿವು ಇರಬೇಕುಪಕಂಗಳ ಮುಟ್ಟಿ ತೆರೆಯಲು ಬೇಕುಕಂಗಳೊಳು ಆನಂದವಿರಬೇಕುಸಂಗಹರನಾಗಿ ಇರಬೇಕು1ದೇಹವೆ ತೂಗುತಲಿರುತಿರಬೇಕುದೇಹವೇ ತಾನೆಂದರಿತಿರಬೇಕುದೇಹವ ಮರೆತಿರಬೇಕು2ಜಗವಿದು ಎನ್ನಲಿ ಜನನವೆನಬೇಕುಜಗವಿದು ಎನ್ನಲಿ ಲಯವೆನಬೇಕುಜಗಕೆ ತಾ ಸಾಕ್ಷಿಯಿರಬೇಕು3ನೀತಿಯ ಶಮೆದಮೆ ಶಾಂತಿಯು ಇರಬೇಕುಪಾತಕವೆಲ್ಲವ ಹರಿದಿರಬೇಕುಮಾತು ಮಾತಿಗೆ ಗುರುವೆನಬೇಕು4ಸುಧೆಶರದಿಯ ಸುಖ ತುಳುಕಲಿ ಬೇಕುವಿಧವಿಧ ಗುಣಗಳ ಬಿಟ್ಟಿರಬೇಕುಚಿದಾನಂದಗುರುತಾನೆನಬೇಕು5
--------------
ಚಿದಾನಂದ ಅವಧೂತರು