ಒಟ್ಟು 229 ಕಡೆಗಳಲ್ಲಿ , 48 ದಾಸರು , 197 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(5) ಶ್ರೀನಿವಾಸ ವಿಪ್ರವಂದಿತ ಪಾಪಕೋಟಿ ಕುಲನಾಶಾ ಶ್ರೀವೆಂಕಟೇಶಾ ಪ ನಿಜನುಡಿಯ ಭೃಗುನುಡಿಯೆ ಮುನಿಮಂಡಲಿಯ ನಡೆಯೆ ತ್ರಿಜಗಾಗ್ರಪೂಜಿತ ಪರಬ್ರಹ್ಮ ನೀನೇ 1 ಪಶುವತ್ಸಗೋಪಾಲ ಸರ್ವವೂ ನೀನಾಗೆ ಬಿಸಜಭವ ಬೆದರುತ್ತ ಪದಕೆರಗಿದ 2 ಮೋಹಿನಿಯವೇಶದಿಂ ರಕ್ಕಸನ ಭಸ್ಮಿಸಿ ಪಾಹಿಮೆನಲಾ ದಕ್ಷ ವೈರಿಯ ರಕ್ಷಿಸಿದೆ 3 ಗಿರಯನೇ ಕೊಡೆವಿಡಿದು ಗೋಕುಲವನೆ ಕಾಯ್ದೆ ಸುರರಾಜ ಗರಿಮುದುರಿ ಶರಣೆಂದು ಬಂದ 4 ವಿಧವರದಿ ಬೆರೆದ ಹಿರಣ್ಯಕಶಿಪುವ ಬಗೆದು ಸದೆದೆ ಶಿವಕಾವಲಿನ ಬಾಣನಂ ಬಿಡವೇ 5 ಸಾಸಿರಗಳರವತ್ತು ಸಗರಸುತರನು ಸುಟ್ಟು ಘಾಸಿಹರಿಸಿದೆ ಜಗದೆ ಜೀವ ಜಂತುಳಿಗೆ 6 ಪಾತಕಿಯ ರಾವಣನು ಕಾರವರ ಕೊಂದೇ 7 ಬಲಿದ ಶಾಪವ ಕಳೆದು ಕಾಯ್ವ ಬಂಧೂ 8 ಸಾವುಂಡ ಶಿಶುವನು ಗುರುವಿಗೆ ನೀ ತಂದಿತ್ತೆ ನೋವುಂಡ ಇಂದ್ರಂಗೆ ಲೋಕಗಳನಳೆದೆ 9 ಅಜಕಪಾಲವ ಬಿಡಿಸಿ ಮೃತ್ಯುಂಜಯನ ಹರಸಿ ಅಜಮಿಳನ ನೀ ಮುಕ್ತಿಸ್ಥಾನಕ್ಕೆ ತಂದೆ 10 ಸರ್ವಕಾಲಗಳಲ್ಲು ಅಪರಾಧಿ ನಾನಯ್ಯ ಗರ್ವಿಯೆನಿಸದೆ ತಪ್ಪು ಕ್ಷಮಿಸಯ್ಯ ತಂದೆ 11 ಆನೆ ಅಳುವುದು ಕೇಳಿ ಮೊಸಳೆಬಾಯನು ಸೀಳ್ದೆ ನೀನೆ ಆಪದ್ಭಂದು ಕಾರುಣ್ಯಸಿಂಧು12 ಅರಗಿನ ಮನೆಯಲ್ಲಿ ಭರದಿಂದ ಬಾಂಧವರಿಗೆ ಉರಿಭಯವ ತಪ್ಪಿಸಿ ಪೊರೆದ ಪ್ರಭುವೇ13 ದ್ರುಪದ ಪುತ್ರಿಗೆ ಮಾನ ಸಂರಕ್ಷಣೆಯನು ಮಾಡಿ ಕೃಪೆತೋರಿಪಾರ್ಥಂಗೆ ಸಾರಥಿಯು ಆದೆ 14 ಕಾಲ ವಾಲಿಪ್ರಾಣಕೆ ಶೂಲ ಲೀಲೆಯಿಂ ಭಕ್ತರಂ ಪಾಲಿಸುವೆ 15 ಪಾವನದ ಪಾದಗಳನಿಂತು ಮುಡಿಯಮೇಲೆ ಭಾವಿಸುವೆ ಭವಕಳೆಯೆ ನಾತಾಳೆ ನಾಳೆ 16 ತಾಪಗಳು ಮೂರನುಂ ಹರಿಪ ಸಂಕಟದೂರ ಕಾಪಾಡು ಶ್ರೀಹರಿ ಬಂಧುಬೇರಿಲ್ಲ ಭಕ್ತಸತ್ರಾ 17 ಶರಣಸಂರಕ್ಷಣ ಬಿರುದು ಧರಸಿಹೆ ನಿತ್ಯ ಭರದಿ ಶಾಂತಿನೀಡೋ ಚರಣಕ್ಕೆ ಶರಣು 18 ಕ್ಷಾಮಡಾಮರ ಕಳೆಯೆ ಸುವೃಷ್ಟಿಯ ಕರೆವೆ ಕಾಮಿತಾರ್ಥದ ಕಾಮಧೇನು ಸ್ವಾಮಿ ತಾಯಿತಂದೆ 19 ಚಕ್ರಧರ ಚಕ್ರಧರ ಭಜಿಪ ಭಕ್ತರ ಪಾಲ ನರಸಿಂಹ ನರಸಿಂಹ 20 ಕ್ಷೇಮಕರಗರುಡನೇ ಧ್ವಜನು ವಾಹನನು ಭೀಮ ಹನುಮ ಪ್ರೇಮ ಹೆಜ್ಜಾಜಿಶ್ಯಾಮ ಸ್ವಾಮಿ21
--------------
ಶಾಮಶರ್ಮರು
(ಕಟೀಲಿನ ದುರ್ಗೆಯನ್ನು ಕುರಿತು) ಕಟೀಲ್ ದೇವರ್ ಕಟೀಲ್ ದೇವರ್ ಕಟೀಲ್ ದೇವರ್ಯಾರು ಪ. ಸರ್ವಶಿಷ್ಟರಿಷ್ಟಕೊಟ್ಟು ಕಾವ ಬೆಟ್ಟದೊಡೆಯನ ಪಟ್ಟದರಸಿ ಅ.ಪ. ಸೃಷ್ಟಿಯೊಳುತ್ಕøಷ್ಟ ತೇಜಪಟು ಭಕ್ತಜನರ ಮನದ ಕಷ್ಟವ ಪರಿಹರಿಸಿ ಪೊರೆವ ಕೃಷ್ಣನ ಒಡಹುಟ್ಟಿದವಳು 1 ದುಷ್ಟ ಕಂಸನ ಶಿರವ ಮೆಟ್ಟಿ ಜಿಗಿದ ವಿವಿಧ ಲೋಕಾ- ರಿಷ್ಟ ಶಾಂತಿಪ್ರದಳು ಪರಮ ನಿಷ್ಠಳು ಬಲಿಷ್ಠಳಿವಳು 2 ಅಷ್ಟಸಿದ್ಧಿದೇ ಪ್ರಸಿದ್ಧೆ ಜಿಷ್ಣುವಿನುತೆ ಭೂತ ಹೃದಯಾ- ವಿಷ್ಟೆ ನವನಿಧಿಷ್ಟೆ ಪುಷ್ಟೆ ಶ್ರೇಷ್ಠೆ ಸುಗುಣವರಿಷ್ಠಳಿವಳು 3 ಮುಷ್ಟಿಕಾರಿಯ ಚರಣ ಬಿಟ್ಟವರ ಭವಪಾಶದಿಂ ವೃಷ್ಟಿ ಸುರಿವ 4 ದಿಟ್ಟ ಲಕ್ಷ್ಮೀನಾರಾಯಣನ ಮುಟ್ಟಿ ಭಜಿಸುವವರ ಕರುಣಾ- ದೃಷ್ಟಿಯಿಂದ ನೋಡಿ ಮನೋಭೀಷ್ಟವೀವ ಹೃಷ್ಟರೂಪೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
(ಕಟೀಲಿನ ದುರ್ಗೆಯನ್ನು ಕುರಿತು) ಕಟೀಲ್ ದೇವರ್ ಕಟೀಲ್ ದೇವರ್ ಕಟೀಲ್ ದೇವರ್ಯಾರುಪ. ಸರ್ವಶಿಷ್ಟರಿಷ್ಟಕೊಟ್ಟು ಕಾವ ಬೆಟ್ಟದೊಡೆಯನ ಪಟ್ಟದರಸಿಅ.ಪ. ಸೃಷ್ಟಿಯೊಳುತ್ಕøಷ್ಟ ತೇಜಪಟು ಭಕ್ತಜನರ ಮನದ ಕಷ್ಟವ ಪರಿಹರಿಸಿ ಪೊರೆವ ಕೃಷ್ಣನ ಒಡಹುಟ್ಟಿದವಳು 1 ದುಷ್ಟ ಕಂಸನ ಶಿರವ ಮೆಟ್ಟಿ ಜಿಗಿದ ವಿವಿಧ ಲೋಕಾ- ರಿಷ್ಟ ಶಾಂತಿಪ್ರದಳು ಪರಮ ನಿಷ್ಠಳು ಬಲಿಷ್ಠಳಿವಳು2 ಅಷ್ಟಸಿದ್ಧಿದೇ ಪ್ರಸಿದ್ಧೆ ಜಿಷ್ಣುವಿನುತೆ ಭೂತ ಹೃದಯಾ- ವಿಷ್ಟೆ ನವನಿಧಿಷ್ಟೆ ಪುಷ್ಟೆ ಶ್ರೇಷ್ಠೆ ಸುಗುಣವರಿಷ್ಠಳಿವಳು3 ಮುಷ್ಟಿಕಾರಿಯ ಚರಣ ಬಿಟ್ಟವರ ಭವಪಾಶದಿಂ ವೃಷ್ಟಿ ಸುರಿವ4 ದಿಟ್ಟ ಲಕ್ಷ್ಮೀನಾರಾಯಣನ ಮುಟ್ಟಿ ಭಜಿಸುವವರ ಕರುಣಾ- ದೃಷ್ಟಿಯಿಂದ ನೋಡಿ ಮನೋಭೀಷ್ಟವೀವ ಹೃಷ್ಟರೂಪೆ5
--------------
ತುಪಾಕಿ ವೆಂಕಟರಮಣಾಚಾರ್ಯ
(ಗ) ನದಿಸರೋವರಗಳು ನದನದಿಗಳನು ಸ್ಮರಿಸಿರೋ ನದನದಿಗಳನು ಸ್ಮರಿಸಿ ಹೃದಯ ನಿರ್ಮಳರಾಗಿ ಮುದದಿಂದ ನಿಮ್ಮ ಮನದಧಮತನ ಬಿಟ್ಟ ಸಂ ಪದವಿಗೆ ಸೋಪಾನದಂತಾಗುವದು ಶ್ರೀ ಪದುಮನಾಭನು ವೊಲಿವನು ಪ ಸಿಂಧು ಮರುಧೃತಿ ಹೇಮವತಿ ನೇಮಿ ನೇತ್ರವತಿ ತರಣಿಸುತೆ ನರ್ಮದಾ ಗಾಯತ್ರಿ ಗೋಮತಿ ಗರುಡ ಸಾಧರ್ಮಾ ಸರಸ್ವತಿ ಮಣಿಮುಕ್ತ ಮುಕ್ತನದಿಯು ಪ್ರಣತ ವರದಕಾಗಿಣಿ ಕೃಷ್ಣವೇಣಿ ವೇದವತಿ ಹರಿಧೃತಿ ಇಂದ್ರಾಣಿ ಪುನಃ ಪುನಃ ವಾಣಿವಂ ಜರಫಣಿ ಭೀಮರಥಿನೀ 1 ಧಾರಿ ತುಂಗಾ ಭದ್ರಿಗಣಪತಿ ಶತಭಾಗ ನಾರದಿ ಉಭಯಪಿನಾಕಿ ಚಿತ್ರವತೀ ಮೂರು ಲೋಕೋದ್ಭವ ಭವಾನೀ ಚಾರು ಗಂಡಿಕೆ ಸರಯು ಶ್ರೋಣಿ ಭದ್ರನೀಲ ಕ್ಷೀರನದಿ ಪಾಪಘ್ನ ಮಹಾನದಿ ಅಘನಾಶಿ ವಾರಿಜಾಪ್ತಾವತಿ ಸುರ್ವಣ ಮುಖರೀ ವಿಸ್ತಾರ ಹಾಟಕ ಅತ್ರಿಣೀ 2 ಸುಲಭ ಮಂದಾಕಿನಿ ಕೌಮೋದಕಿ ಶಾಂತಿ ಕಪಿಲ ಚಂದ್ರಭಾಗ ಅರುಣೀ ಪೊಳೆವ ಕಾಳಾವತಿ ತ್ರಿಪಥಿ ಗೌರಿ ಕುಂತಿ ಅಳಕನಂದನ ಅಮಲವತಿ ಭೀಮಸಂಭೆ ಸಿ ತಾಂಬ್ರ ಪರ್ಣಿಯು ಜಯ ಮಂ ಸತಿ ಸತ್ಯವತಿ ವೈಷ್ಣವೀ 3 ಕನಿಕ ಶುಕ್ಲಾವತೀ ಬಾಹುನದಿಗೋವಿಂದ ಮಿನಗುವ ಭೋಗವತಿ ಕಾಶ್ಯಪಿಂಕಾಳಿಂದಿ ಅನುಸಿಂಧು ಐರಾವತಿ ಋಣ ವಿಮೋಚನ ಮಯೂರ ಸಂಭವೆ ನಿತ್ಯ ಪುಷ್ಕರಣಿ ಪಯೋ ಶ್ವಿನಿ ಮಹಾಪಗ ಭದ್ರ ಭೈರವಿ ವಿಚಿತ್ರ ನದಿಗಳನು 4 ಅರುಣೋದಯಲೆದ್ದು ಧರೆಯೊಳುಗಳ್ಳ ಬಲು ಸರಿತಗಳ ನೆನೆದು ಪುಳಕೋತ್ಸವದಲಿ ಪರಮ ಧನ್ಯರಾಗಿ ಪಾಪಗಳ ಪೋಗಾಡಿ ನಿರುತ ಮಾರುತ ಮತದಲೀ ಚರಿಸಿ ನಿಜಭಕುತಿಯಲಿ ಹಗಲು ಇರಳು ಇನಿತು ಸಿರಿಯರಸ ವಿಜಯವಿಠ್ಠಲನ ಚರಣಾಂಬುಜವ ಸರಸದಿಂದಲಿ ಧ್ಯಾನಗೈದು ಈ ನದಿಗಳಲಿ ಕರಣದಲಿ ತಿಳಿದು ನಿತ್ಯಾ5
--------------
ವಿಜಯದಾಸ
*ಸುದಿನ ದುರ್ದಿನಮೆಂಬುದವರವರ ಸಂಪ್ರಾಪ್ತಿ ಸುದಿನಮದು ಜನಿಸಿದೊಡೆ ದುರ್ದಿನಮದಳಿಯಲ್ಕೆ ವಿಧಿಲೀಲೆ ಜನನಮರಣಂಗಳೈ ರಕ್ತಾಕ್ಷಿ ಮಧುಮಾಸ ಸಿತಪಕ್ಷದ ಸದಮಲಾನ್ವಿತಮಪ್ಪ ತಾರಗೆಪುನರ್ವಸೂ ವಿಧುವಾರ ಪೂರ್ವಾಹ್ನಮಾಸೂರಿ ನಾಮಮೆದಿ ಮಾಂಗಿರಿಯ ರಂಗಪದಮಂ 1 ಬಂಧುಜನÀಮಿತ್ರರ್ಗೆ ದುರ್ದಾಂತ ದುರ್ದಿನಂ ಸಂದಮಾಂಗಿರಿರಂಗಪದನಳಿನಮಂ ಸೇರ್ದ ಸಿಂಧುಪುತ್ರಂ ಬಳಗದಾಸೂರಿಯಾತ್ಮಮದು ಚಿರಶಾಂತಿಯಂಪಡೆಯಲೈ ಚೆಂದವಹ ಕಮಲಮದು ಕಮನೀಯ ಕಾಂತಿಯಿಂ ದಂದವಡೆದಿರ್ಪುದೇ ನಿಡುಗಾಲಮದು ಬಳಿಕ ಕುಂದದಿರದೇಂ ನಿಜದೆಯಾದರ್ಶಜೀವನಂ ಶ್ರೀರಕ್ಷೆಯಲ್ತೆ ನಮಗೆ 2 ವರಮಹಾಲೆಕ್ಕಿಗರ ಶಾಖೆಯೊಳ್ ಪರಿಣತಿಯ ಕರಣಿಕಂ ತಾನಾಗಿ ವಿಶ್ರಾಮ ಜೀವನದೆ ಸರಸಕಾವ್ಯಾದಿ ಪದರಚನೆಯಿಂ ಗಮಕಿಗಳ ತಣಿಸಿಯಾನಂದಮುಣಿಸಿ ಸಿರಿಲೋಲ ಸುವಿಲಾಸ ಗೋಕರ್ಣಮಹಿಮೆಯಂ ಭರತಮಾರುತಿಭಕ್ತಿಯಾಳ್ವಾರುವೈಭವಂ ಸರಿಸದಲಿ ಕಾವ್ಯಪಂಚಕ ರಚಿಸಿ ಪಂಚತ್ವವೈದಿದರ್ ಧನ್ಯರಲ್ತೆ 3 ಕಿವಿಚುರುಕು ನಿಡುಮೂಗು ದೃಷ್ಟಿಪಾಟವಹೊಳಪು ಸವಿನೆನಪಿನಂಗಳಂ ಬೇವುಬೆಲ್ಲದಪದರು ರವಿಯೆಡೆಗೆ ನಿಟ್ಟಯಿಸಿ ಧೀರ್ಘಾಯುವೆಂದೆನಿಸಿ, ಶರದಶಕಗಳ ಕಳೆದನು ಇವಗೆ ಮಣಿವುದೆ ಬೆಲ್ಲ ಹರಿಚಿಂತನೆಯಬಲ್ಲ ದಿವರಾತ್ರಿ ಸಂತೃಪ್ತಿ ಮಾಳ್ಪಕಾರ್ಯಂಗಳಲಿ ತವಕದಿಂ ಸುತ್ತುವರೆದಿರ್ಪರೈ ಹಿರಿತನದ ನಮ್ರತೆಗೆ ಬೆರಗಾಗುತ 4 ಸುತರತ್ನರೀರ್ವರಂ ಸುತೆಯರಂ ಸೊಸೆಯರಂ ಹಿತಮಪ್ಪಮೊಮ್ಮಂದಿರಂ ನೆಂಟರಿಷ್ಟರಂ ಮಿತವಚನದಿಂ ನಲಿಸಿ ಮನದಳಲಿಗೆಡೆಮಾಡಿ ವೈಕುಂಠಮಂ ಸೇರಿದೈ ಶತಪತ್ರಲೋಚನದ ಪರಿಚರ್ಯೆಯಂ ಗೈದು ಶತವರುಷಮಂ ತುಂಬುಜೀವನವ ತಾಳ್ದೆ ಸ ತ್ಪಥವಿಡಿದು ನಿನಗಾತ್ಮಶಾಂತಿಯುಂಟಾಗಲೈ ತವಕುಲಂ ವರ್ಧಿಸಿರಲೈ5
--------------
ಪರಿಶಿಷ್ಟಂ
ಅನಂತ ಯೋನಿಯೊಳಗೆ ಅನಂತ ಜನ್ಮತಿರುಗಿಅನಂತ ಯುಗಯುಗಂಗಳಲಿ ಸತ್ತು ಹುಟ್ಟೆಅನಂತನಾಟವೆಯೆಂದು ಅರಿವು ಇಲ್ಲದೆ ಹೋಗಿಅನಂತ ದುಃಖಸಾಗರದಿ ಹಿರಿದು ಬಳಲುವಿರಿ 1 ವಿಶ್ವತೈಜಸ ಪ್ರಾಜ್ಞ ಮೂವರೆಂದೆನಿಸಿವಿಶ್ವದೊಳು ನಾನಾ ರೂಪಗಳ ತಾಳಿವಿಶ್ವದೊಳ ಹೊರಗೆಲ್ಲ ಪೂರ್ಣ ತಾನೆಂದೆನಲುವಿಶ್ವಾತ್ಮಕನು ನೀವು ಮತ್ತಾರು ತಿಳಿಯಿರೋ 2 ಮೂರವಸ್ಥೆಗಳಲ್ಲಿ ಮೂರು ಮೂರ್ತಿಗಳಾಗಿತೋರುತಿಹ ನಾನಾ ಬಗೆ ಲೀಲೆಗಳನುಭೂರಿ ಸಂಸಾರಗಳ ದುಃಖ ಸುಖವೆಂದೆನಿಸಿತೋರಿ ನೋಡಿಪನವನು ಮತ್ತಾರು ತಿಳಿಯಿರೋ 3 ಸತಿ ಪುರುಷರಾಗಿಹನು ಸುತನು ತಾನಾಗಿಹನುಖತಿಯು ಶಾಂತಿಯು ಕಾಮವಾಗಿ ತಾನಿಹನುಅತಿ ಕುಲಗಳಾಗಿಹನು ಅತಿ ಜಂತುವಾಗಿಹನುಮಿತಿಯಿಲ್ಲದಾಗಿಹನು ನೀವಾರು ತಿಳಿಯಿರೋ 4 ಈ ವಾಕ್ಯಗಳನೇ ನೀವಾರಮುಂದುಸುರದಲೆಸಾವದಾನದಿ ತಿಳಿದು ನೋಡಿದೇವ ಚಿದಾನಂದ ಗುರು ತಾನೀಗ ನಿಜವೆಂದುಸಾವದಾನದಿ ಕಂಡು ಕಡೆಹಾಯಿರೋ 5
--------------
ಚಿದಾನಂದ ಅವಧೂತರು
ಅರುಣೋದಯಕೆ ಮುಂಚೆ ಬಲು ಕತ್ತಲಂತೆ ಪ ಸಿರಿ ಬರುವುದಕೆ ಮುಂಚೆ ಮುಖ ಸುತ್ತು ಜನಕೆ ಅ.ಪ ಹೊಟ್ಟಿ ಹಸಿದರೆ ಅನ್ನ ಬಹಳ ರುಚಿಯಂತೆ ಕೆಟ್ಟು ಬದುಕುವ ಮನುಜ ಬಲು ಘಟ್ಟಿಯಂತೆ ಸಿಟ್ಟು ಮಾಡುವ ಮನುಜ ಕೊನೆಗೆ ಕುರಿಯಂತೆ ಬಿಟ್ಟಿ ಬಯಸುವ ನರನು ಬಲು ಮೋಸವಂತೆ 1 ಸುಳ್ಳು ಹೇಳುವ ನರಗೆ ಪರದಾಟವಂತೆ ಜಳ್ಳುರಾಶಿಯ ನೋಡೆ ದೊಡ್ಡಗಿರಿಯಂತೆ ಕಳ್ಳ ಒಳಗಿರಲಲ್ಲಿ ಶಾಂತಿಯಿಲ್ಲಂತೆ ಕುಳ್ಳ ಹೋರಾಡಿದರೆ ಜಯವಿಲ್ಲವಂತೆ 2 ಭಾರಿ ಮಳೆ ಸುರಿಯಲಿರೆ ಬಹಳ ಬಿಸಿಲಂತೆ ಊರು ಸೇರುವ ಮುನ್ನ ಬಹಳ ದಣಿಯಂತೆ ಕೀರುತಿಯ ಪಡೆಯುವಗೆ ಬಹು ಶತ್ರುವಂತೆ ಮೂರು ಜ್ಞಾನಿಗಳಿರಲು ಭಾರಿ ಸಭೆಯಂತೆ 3 ಮುಳ್ಳಿರುವ ಗಿಡಗಳಲಿ ಬಹು ಪುಷ್ಪವಂತೆ ಹಳ್ಳದಲಿ ಸಿಗುವ ಜಲ ಬಹಳ ರುಚಿಯಂತೆ ಹಳ್ಳಿಗಾರನ ಸತ್ಯ ಬಹಳ ಒರಟಂತೆ ಎಳ್ಳು ಕಾಳುಗಳು ಶನಿಯ ಓಡಿಸುವುದಂತೆ 4 ಮುಟ್ಟಲಾಗದ ನಾಯಿ ದಾಸಾನುದಾಸ ಶ್ರೇಷ್ಠರೆಂದರಿತಿರುವರೆಲ್ಲ ಬಲು ಮೋಸ ಧಟ್ಟನೆ ಹೊಳೆಯುವಗೆ ಬಲು ಮನವಿಕಾಸ ಬಿಟ್ಟಿರುವ ಮನುಜನಿಗೆ ಜಗದಿ ಸುಖವಾಸ 5 ಮುದಿತನವು ಭೂಷಣವು ಸ್ಥಾನವಿರುವವರಿಗೆ ಕುದಿಯುವುದೆ ಭೂಷಣವು ಕ್ಷೀರಜಲದಲ್ಲಿ ಹೆದರುವುದೆ ಭೂಷಣವು ದುಷ್ಟಸಂಗದಲಿ ಗದಗದವೆ ಭೂಷಣವು ಭಕ್ತಿರಸದಲ್ಲಿ 6 ತನ್ನ ತಾ ಶೋಧಿಸಲು ಬಲು ದುಃಖವಂತೆ ಅನ್ಯರನು ಶೋಧಿಸಲು ಸಂತೋಷವಂತೆ ಕನ್ನಡಿಯ ನೋಡದಿರೆ ಬಲು ಚೆಲುವನಂತೆ ಕನ್ನಡಿಯ ನೋಡಿದರೆ ತಾನಳುವನಂತೆ 7 ನಗರ ಸುಂದರಲ್ಲಂತೆ ಬಚ್ಚಿಟ್ಟ ಧನವು ತಾ ಕದ್ದವನಿಗಂತೆ ಸ್ವಚ್ಛ ಬಡತನದವಗೆ ಬಲು ಭಕುತಿಯಂತೆ ಬಿಚ್ಚೊಲೆ ಗಿರಿಜೆಗತಿ ಪ್ರಿಯವಸ್ತುವಂತೆ 8 ಗುಂಡು ಬ್ರಾಹ್ಮಣ ಬರಲು ಅಪಶಕುನವಂತೆ ಹೆಂಡದಾ ಪೀಪಾಯಿ ಬಲು ಶಕುನವಂತೆ ಮಂಡೆ ಬೋಳಿರುವವಳು ಬರಬಾರದಂತೆ ತೊಂಡು ಸೂಳೆಯು ಬರಲು ಬಹಳ ಶಕುನವಂತೆ 9 ಖ್ಯಾತಿ ಬಾರದು ನರಗೆ ಬದುಕಿರುವ ತನಕ ಗೋತ ಹೊಡೆದವನು ಬಲು ಗುಣಶಾಲಿಯಂತೆ ನೀತಿ ಹೇಳುವ ಸ್ಥಳದಲೊಬ್ಬರಿಲ್ಲಂತೆ ಕೋತಿ ಕುಣಿಯುತಿರಲು ನೂರು ಜನರಂತೆ 10 ಬಹು ಧನಿಕ ಬಲು ಬಲಗೆ ಮಕ್ಕಳಿಲ್ಲಂತೆ ದಹಿಸುತಿಹ ದಾರಿದ್ರಗೆ ವರ್ಷಕೊಂದಂತೆ ಅಮೃತ ಸಮವಂತೆ ಸಿಹಿಯಾದ ಕ್ಷೀರ ಮಕ್ಕಳಿಗೆ ಬೇಡಂತೆ 11 ಸಾಲಿಗ್ರಾಮ ತೊಳೆಯಲತಿ ಬೇಸರಂತೆ ಸಾಲು ಎಮ್ಮೆಯ ತೊಳೆಯಲಿ ಉತ್ಸಾಹವಂತೆ ಶೀಲವಾಡುವ ನುಡಿಗೆ ಸಂದೇಹವಂತೆ ಗಾಳಿ ಸುದ್ದಿಗಳೆಲ್ಲ ಬಲು ಸತ್ಯವಂತೆ 12 ಒಳಿತವನು ಜಗದಲ್ಲಿ ತಲೆ ಎತ್ತನಂತೆ ಕಲಿಪುರುಷನಂಥವನು ಬಲು ಮೇಲೆಯಂತೆ ಹುಲಿ ಚಿರತೆ ಕರಡಿಗಳ ಬಲಿಯ ಕೊಡರಂತೆ ಗೆಳತಿ ಮಾರಿಗೆ ಕುರಿಯ ಬಲಿಯೆ ಬೇಕಂತೆ 13 ಅತಿ ಚೆಲುವೆ ಸತಿಯಲ್ಲಿ ಹಿತವಿಲ್ಲವಂತೆ ಗತಿಗೆಟ್ಟ ನಾರಿಯಲಿ ಅತಿ ಮೋಹವಂತೆ ಇತರ ಜನರೇಳಿಗೆಗೆ ಹೊಟ್ಟಿಯುರಿಯಂತೆ ಪ್ರತಿಕ್ಷಣವು ತನಗಾಗಿ ಹಂಬಲಕೆಯಂತೆ 14 ಭೂಮಿ ಎಲ್ಲವು ಇನ್ನು ಉಳುವಾತಗಂತೆ ಭೂಮಿಯೊಡೆಯಗೆ ದೊಡ್ಡನಾಮ ಬಿತ್ತಂತೆ ರಾಮರಾಜ್ಯದಿ ಕಾರು ಓಡಿಸುವವಗಂತೆ ಆ ಮದುವೆ ಕನ್ಯೆಯು ಪುರೋಹಿತಗಂತೆ 15 ಬಕಳಿಸುವ ನಾಯಕರೆ ಸರಕಾರವಂತೆ ಪ್ರಕೃತಿ ನಡೆನುಡಿ ನೀತಿಗೆ ಧಿಕ್ಕಾರವಂತೆ ಸುಖದ ಅನುಭವ ಜನಕೆ ಕುದುರೆ ಕೊಂಬಂತೆ ಮುಖವಿಲ್ಲ ಕಣ್ಣಿಲ್ಲ ಸುಖರಾಜ್ಯವಂತೆ 16 ಚಂದ್ರಲೋಕಕೆ ಪಯಣ ಕಾದಿರುವುದಂತೆ ಮುಂದಲ್ಲಿ ನೆಲಕೆ ಬಲು ಕಟ್ಟು ನಿಟ್ಟಂತೆ ಮುಂದರಿದ ಜನಕಲ್ಲಿ ಸ್ಥಾನವಿಹುದಂತೆ ಹಿಂದುಳಿದ ಗುಂಪಿಗವಕಾಶವಿಲ್ಲಂತೆ 17 ಪುಷ್ಪಾಕ್ಷತೆಯ ಪೂಜೆ ಗೋಮಾತೆಗಂತೆ ಶುಷ್ಕ ತೃಣವನಕೆಲ್ಲ ಮಳೆಗಳ ಕಂತೆ ನಿಷ್ಫಲದ ಗಿಡಬಳ್ಳಿ ತೋಟದಲ್ಲಂತೆ ಪುಷ್ಕಳದ ಫಲ ವೃಕ್ಷಗಳು ಸೌದೆಗಂತೆ 18 ಬರಿಯ ಪಾತ್ರೆಗಳಲಿ ಬಹಳ ಸದ್ದಂತೆ ಅರಿಯುವಜ್ಞಾನಿಗಳು ತಲೆಹರಟೆಯಂತೆ ಅರಿತವನು ನುರಿತನಾದರು ಬೇಡವಂತೆ ಬದಿಯ ಬಹು ದಡ್ಡನಿಗೆ ಮಾರ್ಯಾದೆಯಂತೆ19 ರೈಲು ಉರುಳಿಸೆ ರಾಜ್ಯಕಧಿಕಾರಿಯಂತೆ ಥೈಲಿಯಿದ್ದರೆ ಖೂನಿ ಮಾಡಬಹುದಂತೆ ಶೈಲವೇರುವ ನರನು ಮೇಧಾವಿಯಂತೆ 20 ನರಬಲಿಯ ಕೊಡುವವರು ಹಿರಿಯ ಜನರಂತೆ ಹಿರಿಯ ಮಾರ್ಗದ ಜನರು ಧರೆ ಭಾರವಂತೆ ಗುರುಗಳಿಗೆ ತಿರುಮಂತ್ರ ಹೇಳಬೇಕಂತೆ ಸುರಿಸುವರು ಧನಧಾನ್ಯ ಸುರಿಮಳೆಗಳಂತೆ21 ಮಂತ್ರವಾದಿಯು ನೋಡಿ ಗ್ರಹಭಯವಿದೆಂದ ಯಂತ್ರದಲಿ ನೋಡಿದವ ಹೃದಯರೋಗೆಂದ ಚಿಂತಿಸುತ ಪಂಡಿತನು ಮೋಹಿನಿಯಿದೆಂದ ಅಂತ್ಯದಲಿ ರೋಗಿ ತನಗೊಂದಿಲ್ಲವೆಂದ 22 ಶಿಂಗಪ್ಪ ಕದ್ದು ತಾ ಜೈಲು ಸೇರಿದನು ಕಾಂಗ್ರಪ್ಪ ಜೈಲಿನಿಂದ ಬಂದು ಕುಳತಿಹನು ಹೇಂಗ್ರಪ್ಪ ಬದುಕುವುದು ಎಂದು ಫಲವೇನು ನುಂಗ್ರಪ್ಪ ಸುಖ ದು:ಖಗಳನು ಸಹಿಸುತಲಿ 23 ವೇದಾಂತಿಯಾಗೆನಲು ಹೊಟ್ಟೆಗಿಲ್ಲಂತೆ ಕಾದಾಡಿ ಬದುಕಲನುಭವವಿಲ್ಲವಂತೆ ಓದು ಬದುಕೆಂದರವಕಾಶವಿಲ್ಲಂತೆ ಆದುದಾಯಿತು ಹರಿಗೆ ಶರಣು ಹೊಡಿ ತಮ್ಮ25 ಯಮನು ತಲ್ಲಣಿಸುವನು ಸ್ಥಳವಿಲ್ಲವಂತೆ ಸುಮನಸರು ಆಳುತಿಹರು ಜನವಿಲ್ಲವಂತೆ ಕಮಲೆರಮಣಗೆ ಬಂತು ಪೀಕ್ಲಾಟವಂತೆ ಎಮಗೆಂಥ ಕಷ್ಟವು ಪ್ರಸನ್ನ ಹರಿಯಿರಲು26
--------------
ವಿದ್ಯಾಪ್ರಸನ್ನತೀರ್ಥರು
ಅಳಿವ ಬಾಳ ನಂಬುತಲೀಗ ತಿಳಿ ತಿಳಿಯೊ ಧೀರನಾಗಿ ಪರಾಶಾಂತಿಯ ಬೇಗ ಪರಾಶಾಂತಿಯಬೇಗ ಪ ದೊರಕುವದೆ ಶಾಂತಿ ಜೀವನೆ ಹೊರಹೊರಗೆ ನೋಡಲು ಅರಿ ನಿನ್ನ ಹೃದಯದೋಳ್ ಸಲೆನಾಸಿಪುದು ತಿಳಿಯಲು ಮೂಲಸ್ವರೂಪ ನಿನ್ನ 1 ಈ ದೇಹ ನಾನು ಎಂಬ ಭ್ರಾಂತಿ ಬೇಗ ತ್ಯಜಿಸುತ ಬಾಧಿಸುತ ಬುದ್ಧಿಯನ್ನು ಬೇರೆಯಾಗಿ ತಿಳಿಯುತ ಬಾಧಾರಹಿತ ನಾ ವಾದ ಪದವೆ ನಾನಿಹೆನೆನುತ 2 ಈ ನಿರ್ವಿಕಲ್ಪವಾದ ಸ್ಥಿತಿಯೇ ತಾನಿಹೆನೆಂದು ಅನುಭವದಿ ತಿಳಿದುಕೊಳ್ಳು ಪರಾಶಾಂತಿಯದೆಂದು ನೀನೇ ಪ್ರಶಾಂತರೂಪನಿರಲು ಶೋಕಿಸಬೇಡ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಆ ನಮಿಪೆ ವಿಷ್ಣು ಶ್ರೀ ಬ್ರಹ್ಮ ವಾಯು ವಾಣಿ ಭಾರತಿ ಮುಖ್ಯರವತಾರ ಆವೇಶಕಾನಮಿಪೆ ಪ ಮತ್ಸ್ಯ ಕೂರ್ಮ ಭೂವರಹ ನರಸಿಂಹ ದಧಿ ವಾಮನ ತ್ರಿವಿಕ್ರಮ ಭೃಗುಕುಲೋದ್ಭವ ಬುದ್ಧ ಕಲ್ಕಿ ಹಯಾಸ್ಯ ನಾಮ ತಾಪಸ ಮನು ಉಪೇಂದ್ರ ಅಜಿತಾದಿಗಳಿಗಾ ನಮಿಪೆ 1 ದಾಸ ಧನ್ವಂತ್ರಿ ಹರಿ ಹಂಸ ದತ್ತಾ ವ್ಯಾಸ ಕಪಿಲಾತ್ಮಂತರಾತ್ಮ ಪರಮಾತ್ಮ ಯ ಜ್ಞೇಶ ವೈಕುಂಠ ನಾರಾಯಣಾಧ್ಯವತಾರಕಾನಮಿಪೆ 2 ನಾರಾಯಣೀ ಋಷಭ ಐತರೇಯ ಶಿಂಶು ಮಾರ ಯಜ್ಞ ಪ್ರಾಜ್ಞ ಸಂಕರುಷಣಾ ಕ್ಷಿರಾಬ್ದಿ ನಿಲಯ ಯಮನಂದನಾ ಕೃಷ್ಣ ಹರಿ ನಾರಾಯಣ ಧರ್ಮಸೇತು ರೂಪಾದಿಗಳಿಗಾನಮಿಪೆ 3 ಗುಣಗಳಭಿಮಾನಿ ಶ್ರೀ ಭೂ ದುರ್ಗ ದಕ್ಷಿಣಾಂ ಭೃಣಿ ಮಹಾಲಕ್ಷ್ಮೀ ಶ್ರೀ ವಿಷ್ಣುಪತ್ನೀ ಮಾಯಾ ಕೃತಿ ಶಾಂತಿ ಶುದ್ಧ ರು ಕ್ಮಿಣಿ ಸತ್ಯ ಸೀತಾದ್ಯಮಿತ ರೂಪಗಳಿಗಾನಮಿಪೆ 4 ಹೀನಳೆನಿಸುವಳನಂತಾಂಶದಲಿ ಸುಖ ಬಲ ಜ್ಞಾನಾದಿ ಗುಣದಿ ಮಹಾಲಕ್ಷ್ಮಿ ಹರಿಗೆ ಆನಂದ ವಿಜ್ಞಾನ ಮಯನ ವಕ್ಷಸ್ಥಳವೆ ಸ್ಥಾನವಾಗಿಹುದು ಇಂದಿರೆಗೆ ಆವಾಗ 5 ವಿಧಿ ವಿರಿಂಚಿ ಮಹನ್ ಬ್ರಹ್ಮ ಸೂತ್ರ ಗುರು ಮಹಾಪ್ರಭು ಋಜ ಸಮಾನ ವಿಜ್ಞ ಪ್ರಾಜ್ಞ ಹರಿಭಕ್ತಿ ಮೇಧಾವಿ ಮುಕ್ತಿ ಧೃತಿ ಅಮೃತನಿಗೆ 6 ಸ್ಥಿತಿ ಯೋಗ ವೈರಾಗ್ಯ ಚಿಂತ್ಯ ಬಲಸುಖ ಬುದ್ಧಿ ವಿತತಾದಿ ಗೋಪ ಹನುಮ ಭೀಮ ವೃಷಿವರಾನಂದ ಮುನಿ ಮೊದಲಾದ ರೂಪಶ್ರೀ ಪತಿಗಧಿಷ್ಟಾನ ಕೋಟಿಗುಣಾಧಮರು ರಮೆಗೆ ಆ ನಮಿಪ 7 ಸರಸ್ವತಿ ಗಾಯತ್ರಿ ಬುದ್ಧಿ ವಿದ್ಯಾ ಪ್ರೀತಿ ಗುರುಭಕ್ತಿ ಸರ್ವ ವೇದಾತ್ಮಿಕ ಭುಜಿ ಪರಮಾನು ಭೂತಿ ಸಾವಿತ್ರಿ ಸು ಸುಖಾತ್ಮಿಕಾ ಪತಿ ನಾಮಗಳಿವೆಂದರಿದು 8 ಶಿವಕನ್ಯ ಇಂದ್ರಸೇನಾ ಕಾಶಿಜಾ ಚಂದ್ರ ಯುವತಿ ದ್ರೌಪದಿಯು ಭಾರತಿ ರೂಪವು ಪವಮಾನ ಬ್ರಹ್ಮರಿಗೆ ಶತಗುಣಾಧಮ ಸದಾ ಶಿವನ ರೂಪಗಳ ಈ ಪರಿಯ ಚಿಂತಿಸುತ 9 ತತ್ಪುಮಾನ್ನೂಧ್ರ್ವಪಟ ದುರ್ವಾಸ ವ್ಯಾಧ ಅ ಶ್ವತ್ಥಾಮ ಜೈಗೀಷವ್ಯ ತಪ ಅಹಂಕ್ರತು ಶುಕ ವಾಮದೇವ ಗುರು ಮೃತ್ಯುಂಜಯೋರ್ವ ಸದ್ಯೋಜಾತ ತತ್ಪುರುಷಗಾನಮಿಪೆ 10 ನರ ವಯು ಶುಕಕೇಶವೇಶ ಬಲಗೆ ಸಂ ಕರುಷಗಾವೇಶ ಲಕ್ಷ್ಮಣದೇವಗೆ ಗರುಡ ಶೇಷಾಘೋರ ಸಮರು ಶತಗುಣದಿಂದ ಕೊರತೆಯೆನಿಸುವರು ಮೂವರು ವಾಣಿ ದೇವಿಗೆ 11 ಶೇಷಗೆ ಸಮಾನನೆನಿಪಳು ಜಾಂಬವತಿ ರಮಾ ವೇಶ ಕಾಲದಿ ಷಣ್ಮಹಿಷಿಯರ ಒಳಗೆ ಹ್ರಾಸಕಾಲದಿ ಸಮಳು ಐವರಿಗೆ ಜಾಂಬವತಿ ವೀಶಾದ್ಯರಿಗೆ ಹರಿ ಸ್ತ್ರೀಯರ ಸಮರೈದುಗುಣ12 ರೇವತಿ ಶ್ರೀಯುತ ಶ್ರೀ ಪೇಯ ರೂಪತ್ರ ಯಾವಕಾಲದಿ ವಾರುಣಿಗೆ ಪಾರ್ವತೀ ದೇವಿ ಸೌಪರಣಿಗೆ ಸಮ ಷಣ್ಮಹಿಷಿಯರಿಗೆರಡು ಮೂವರೀರೈದು ಗುಣ ಕಡಿಮೆ ಪತಿಗಳಿಗೆ 13 ಕುಶ ವಾಲಿ ಗಾಧಿ ಮಂದ್ರದ್ಯುಮ್ನನು ವಿಕುಕ್ಷಿ ಶ್ವಸನ ಹರಿ ಶೇಷ ಸಂಯುಕ್ತಾರ್ಜುನಾ ಅಶನೀಧರನ ಸುರೂಪಂಗಳಿವು ಮನ್ಮಥನ ನಿತ್ಯ 14 ಪ್ರದ್ಯುಮ್ನ ಸಂಯುಕ್ತ ರುಕ್ಮಿಣೀ ದೇವಿ ಸುತ ಪ್ರದ್ಯುಮ್ನ ಭರತನು ಸನತ್ಕು ಮಾರಾ ಸಾಂಬ ಸ್ಕಂಧ ಸುದರುಶನ ರುದ್ರ ನಾರ್ಧಾಂಗಿನಿಗೆ ದಶಗುಣಾಧಮರೆಂದು15 ಭವ ಪ್ರಾಣ ನಾಮರಗೆ ರೂಪ ಸರ್ಮೋತ್ತುಂಗನು ಕಾಮ ಪುತ್ರಾನಿರುದ್ದಾದಿಗಳು ದಶ ಹೀನ ಈ ಮಹಾತ್ಮರ ದಿವ್ಯ ಅವತಾರರೂಪಗಳಿಗಾನಮಿಪೆ 16 ಪ್ಲವಗ ಬ್ರಹ್ಮಾಂಶಯುಗ್ದೋಣ ಮಾರುತಾವೇಶ ಸಂಯುತ ವುದ್ಧವಾ ಮುರು ರೂಪವು ಬೃಹಸ್ಪತಿಗೆ ಪ್ರದ್ಯುಮ್ನನ ಕು ಮಾರಾನಿರುದ್ಧ ಶತೃಘ್ನ ಅನಿರುದ್ಧನಿಗೆ 17 ತಾರ ಚಿತ್ರಾಂಗದ ಶಚಿ ರೂಪ ಲಕ್ಷುಣ ಈ ರುಗ್ಮವತ್ರಿ ಎರಡು ರತಿರೂಪವು ಆರುಜನ ದಕ್ಷ ಸ್ವಯಂಭುವ ಮನು ಪ್ರಾಣ ಗಿರೈದು ಗುಣಗಳಿಂದಧಮರೆಂದರಿದು 18 ಭೂತಾಭಿಮಾನಿ ಪ್ರವಹ ಪಂಚಗುಣದಿ ಪುರು ಹೊತ ಪತ್ನ್ಯಾದಿಗಳಿಗಧಮನೆನಿಪ ಈತಗವತಾರವಿಲ್ಲವನಿಯೊಳು ಚಂದ್ರ ಪ್ರ ದ್ಯೋತನಾಂತಕ ಸ್ವಯಂಭುವ ಪತ್ನಿ ಶತರೂಪಿ 19 ಸತ್ಯಜಿತ ಜಾಂಬವಾನ್ ವಿದುರ ಗುರು ವಾಯು ಸಂ ಯುಕ್ತ ಧರ್ಮಜ ಯಮಗೆ ರೂಪ ನಾಲ್ಕು ರಾತ್ರಿ ಚರನವತಾರ ಯಿಂದ್ರ ಯುಕ್ತಾಂಗದಾ ದಿತ್ಯ ನವತಾರ ಬ್ರಹ್ಮ ವಿಷ್ಟ ಸುಗ್ರೀವ 20 ಹರಿಯುಕ್ತ ಕರ್ನ ಮನು ಪತ್ನಿ ಶತರೂಪ ನಾ ಲ್ವರು ಸಮರು ಪ್ರವಹಗಿಂದೆರಡು ಗುಣದೀ ಕೊರತಿ ಮಹ ಭಿಷಕು ಮಂಡೂಕ ಶಂತನು ಸುಶೇ ಪಾದ ಪಾದಾರ್ಧಿಕಾನಮಿಪೆ21 ನಾರದಾಧಮ ವರುಣಗಿಂತಗ್ನಿ ಅವ ತಾರ ದೃಷ್ಟದ್ಯುಮ್ನ ಲವ ನೀಲರೂ ಪಾದ ಗುಣದಾಧಮರು ಎಂದು22 ಅಂಗೀರ ಪುಲಸ್ತ್ಯಾತ್ರಿ ಪುಲಹನು ಮರೀಚಿ ಮುನಿ ಪುಂಗವ ದಶಿಷ್ಠ ಕೃತು ಬ್ರಹ್ಮ ಸುತರೂ ತುಂಗ ವಿಶ್ವಾಮಿತ್ರ ವೈವಸ್ವತರು ಸದಾ ಕೆಂಗದಿರಗಧಮರೊಂಭತ್ತು ಜನರೆಂದು 23 ಸಪ್ತ ಋಷಿಗಳಿಗೆ ಸಮನೆನಿಪ ವೈವಸ್ವತನು ಲುಪ್ತವಾಗಲು ಕಡಿಮೆಯೆನಿಪ ಪ್ರಾವಹ ತಾರ ಕ್ಲುಪ್ತ ಒಂದೇ ರೂಪ ಕೃಪೆಯೆಂದು ಕರೆಸುವಳಿಗಾನಮಿಪೆ24 ಹರನಾವೇಶಯುತ ಘಟೋತ್ಕಚ ದುರ್ಮಖನು ನಿಋಋತಿ ಕರೆಸುವನು ರಾಹು ಯುಗ್ಭೀಷ್ಟಕ ನೃಪಾ ನರೆ ಮಿತ್ರ ನಾಮಕನ ರೂಪ ನಾಲ್ವರು ಅಗ್ನಿ ಗೆರಡು ಗುಣದಿಂಧಮರೆನಿಪರೆಂದೆಂದು 25 ಮಾರಾರಿಯುಕ್ತ ಭಗದತ್ತ ತತ್ತನÀಯ ಕು ಬೇರಗೆರಡವತಾರ ವಿಘ್ನೇಶಗೆ ಚಾರುದೇಷ್ಣನು ಒಂದೆ ಇಂದ್ರನಾವೇಶಯುತ ಆರುರೂಪಗಳುಳ್ಳ ನಾಸತ್ಯ ದಸ್ರರಿಗೆ 26 ವಿವಿಧÀ ಮೈಂದ ತ್ರಿಸಿಖ ನಕುಲ ಸಹದೇವ ವಿಭು ಅವತಾರ ಅಶ್ವಿನೀ ದೇವತೆಗಳ ಲವಣಾದಿ ಷಡ್ರಸಗಳೊಳಗಿದ್ದು ಜೀವರಿಗೆ ವಿವಿಧ ಭೋಗಗಳಿತ್ತು ಸಂತೈಪರೆಂದೆಂದು 27 ದ್ರೋಣಾರ್ಕ ದೋಷಾಗ್ನಿ ಧ್ರುವ ವಿಭಾವಸು ವಸ್ತು ಪ್ರಾಣಾಷ್ಟ ವಸುಗಳೊಳಗೆ ದ್ಯುನಾಮಕ ವಾಣೀಶಯುಕ್ತ ಭೀಷ್ಮನು ನಂದಗೋಪಾಲ ದ್ರೋಣನಾಮಕ ಪ್ರಧಾನಾಗ್ನಿಗಿಂದಧಮರೆಂದಾ ನಮಿಪೆ 28 ಭೀಮರೈವತ ವೋಜಜ್ಯೆಕಪಾದ ಹಿರ್ಬದ್ನಿ ಭವ ವಾಮ ಬಹುರೂಪೋಗ್ರಜ ವೃಷಾಕಪಿ ಈ ಮಹನ್ನೆಂಬ ಹನ್ನೊಂದು ರುದ್ರರು ಭೂರಿ ನಾಮಕ ಜೈಕ ಪಾದಹಿರ್ಬದ್ನಿ ಭೂರಿಶ್ರವಗಾನಮಿಪೆ29 ತ್ರ್ಯಕ್ಷನುಳಿಧತ್ತು ರುದ್ರರು ಸಮರು ಶಲ್ಯ ವಿರು ಪಾಕ್ಷನವತಾರ ಕೃಪ ವಿಷ್ಕಂಭುನೂ ಅಕ್ಷೀಣಬಲ ಪತ್ರತಾಪಕ ಸಹದೇವ ರಕ್ಷಘ್ನ ಸೋಮದತ್ತನು ಎನಿಸುತಿಹಗೆ 30 ವಿರೂಪಾಕ್ಷ ವಿಷ್ಕಂಭ ಪತ್ರತಾಪಕ ಮೂರು ಹರನ ರೂಪಾಂತರಗಳಿವು ವಿವಸ್ವಾನ್ ಅರಿಯಮ ಪೂಷ ಭಗ ಸವಿತು ತೃಷ್ಟಾಧಾತ ವರುಣ ಶಕ್ರೋರುಕ್ರಮನು ಮಿತ್ರ ಪರ್ಜನ್ಯಗಾನಮಿಪೆ 31 ಶೌರಿನಂದನ ಭಾನು ಸವಿತ್ರ ನಾಮಕ ಸೂರ್ಯ ವೀರಸೇನನು ಯಮಾವಿಷ್ಟ ತ್ವಷ್ಟಾ ಆರುಜನ ರುಕ್ತರೆನಿಪರು ವುರುಕ್ರ್ರಮ ಶಕ್ರ ವಾರಿಧಿ ವಿವಸ್ವಾನ್ ಮಿತ್ರ ಪರ್ಜನ್ಯರಿಗೆ 32 ಪ್ರಾಣ ನಾಗ ಪಂಚಕ ಅಹಂಕಾರಿಕ ಪ್ರಾಣ ಪ್ರವಹ ನಿವಹ ಸಂವಹ ಸ್ವಹಾ ಕಾಲ ಶ್ವಾಸ ಏ ಕೋನ ಪಂಚಾಶನ್ ಮರುದ್ಗಣಸ್ಥರು ಎಂದು 33 ಶ್ವೇತ ಶಂ ಹನುಮ ಭೀಮ ಯತಿವುದಿತ ಕಾಮ ಜಡಪಿಂಗ ಕಂ ಪನ ವೃದ್ವಹ ಧನಂಜಯ ದೇವದತ್ತರಿಗೆ 34 ಶುಕ್ರ ಶಂಕು ಗುರು ಕಾಂತ ಪ್ರತಿಭ ಸಂವರ್ತಕನು ಪಿಕ ಕಪಿಗಳಿವರು ಮುರುತರು ಸಮೀರಾ ಯುಕುತ ಪಾಂಡು ವರಾಹನು ಎನಿಪ ಸಂಪಾತಿ ಕೇಸರಿ ಶ್ವೇತ ಮರುತನವತಾರ ವೆಂದಾನಮಿಪೆ35 ಪ್ರತಿಭವಂಶನು ಚೇಕಿತಾನೆಂದೆನಿಪ ವಿ ಪ್ರಥು ಸೌಮ್ಯ ಕುಂತೀಭೋಜನೆ ಕೂರ್ಮನು ಕ್ಷಿತಿ ಯೊಳಗೆ ಪ್ರಾಣಪಂಚಕರೊಳು ಪ್ರಾಣ ಗಜ ಅಥ ಗವಾಕ್ಷಾಪಾನ ವ್ಯಾನ ಗವಯನು ಎಂದು 36 ವೃಷನು ಸರ್ವತ್ರಾತನು ವುದಾನಗಂಧ ಮಾ ದ ಸಮಾನನರಿವರು ವಿತ್ತಪನ ಸುತರು ಶ್ವಸನಗಣದೊಳು ಕಿಂಚಿದುತ್ತ ಮರಹಂ ಪ್ರವಹ ಗಸಮರೆನಿಪರು ಪ್ರಾಣ ಪಂಚಕರು ಎಂದೂ 37 ಪ್ರತಿ ವಿಂಧ್ಯ ಧರ್ಮಜನ ಭೀಮಸೇನನ ಪುತ್ರ ಶೃತಸೋಮ ಅರ್ಜುನಜ ಶೃತಕೀರ್ತಿಸಾ ಶತಾನೀಕÀನ ಕುಲಜ ಸಹದೇವಾತ್ಮಜನು ಶೃತಕರ್ಮರಿವರು ದ್ರೌಪದಿ ದೇವಿಗಾತ್ಮಜರಿಗಾನಮಿಪೆ38 ಚಿತ್ರರಥ ಅಭಿಪೌಮ್ರಬಲ ಕಿಶೋರ ಗೋಪಾಲ ರುತ್ತಮರು ಗಂಧರ್ವರೈವರಿಂದ ಯುಕ್ತರಾಗಿಹರು ಕೈಕೇಯರೈವರು ಪಾಂಡು ಪುತ್ರಜರು ವಿಶ್ವದೇವತೆಗಳಿವರೆಂದು39 ಕಾಲ ಕಾಮಲೋಚನದಕ್ಷ ಕೃತು ಪುರೂ ರವ ಸತ್ಯ ವಸು ಧುರಿಗಳಿವರು ವಿಶ್ವೇ ಋಭು ಗುಣ ಪಿತೃತ್ರಯ ದ್ಯಾವ ಅವನಿಪರು ಗಣಪಾದ್ಯರಧಮ ಮಿತ್ರನಿಗೆಂದು 40 ವಸುಗಳೆಂಟಾದಿತ್ಯರೀರಾರು ಒಂದಧಿಕ ದಶರುದ್ರಗಣ ಪಿತೃತ್ರಯ ಬೃಹಸ್ಪತೀ ವಿಶ್ವ ದೇವ ಅಶ್ವಿನಿಗಳೆರಡೈವತ್ತು ಶ್ವಸನಗಣರು ಋಭುವೊಂದು ಎರಡು ದ್ಯಾವಾಪೃಥವಿ 41 ಒಂಭತ್ತು ಕೋಟಿ ದೇವತೆಗಳೊಳು ನೂರು ಜನ ಅಂಬುಜಾಪ್ತರ ಒಳಗುರುರುಕ್ರಮನುಳಿದು ಪದ್ಮ ಸಂಭವನ ಸಹರಾಗಿಹರು ಶತಸ್ಥರಿಗೆ 42 ಮರುತತ್ರಯರು ವನಿಯಮ ಸೋಮ ಶಿವದಿವಾ ಕರರಾರು ರುದ್ರ ಗುರು ಇವರುಕ್ತರೂ ಉರವರಿತ ಎಂಭತ್ತೈದು ಸಮರು ತಮ್ಮೊಳಗೆ ಸರಸಿಜೋದ್ಭವನ ಸುತರೆನಿಪ ಸನÀಕಾದಿಗಳಿಗಾನಮಿಪೆ43 ಸನಕಾದಿಗಳೊಳುತ್ತಮ ಸತತ್ಕುಮಾರ ಶಿಖಿ ತನುಜ ಪಾವಕನು ಪರ್ಜನ್ಯನು ಮೇಘಪ ಎನಿಸುವನು ಶರಭವೊಂದೇರೂಪ ಧರ್ಮರಾ ಜನ ಪತ್ನಿ ದೇವಕಿಯು ಶಾಮಲೆಯ ರೂಪವೆಂದಾ ನಮಿಪೆ44 ಯಮ ಭಾರ್ಯ ಶಾಮಲಾ ರೋಹಿಣಿದೇವಿ ಚಂ ದ್ರಮನ ಸ್ತ್ರೀ ಅನಿರುದ್ಧದೇಹಿ ಉಷಾ ದ್ಯುಮಣಿ ಭಾರ್ಯಾ ಸಂಜ್ಞ ಗಂಗಾ ವರುಣ ಭಾರ್ಯ ಸುಮರಾರು ಜನರು ಪಾವಕಗೆ ಕಿಂಚಿದಧಮರೆಂದಾ ನಮಿಪೆ45 ಪರ್ಜನ್ಯ ಈ ರೆರಡು ವನ್ಹಿಗೆ ಕಡಿಮೆ ಪಾದಮಾನೀ ಸುರಪನಂದನ ಜಯಂತನು ಪ್ರಹಲ್ಲಾದ ಈ ರ್ವರು ಮುಖ್ಯರಧಮ ಪರ್ಜನ್ಯಗೆಂದೆಂದು 46 ಎರಡು ಗುಣ ಪರ್ಜನ್ಯಗಿಂದಧಮಳು ಸ್ವಹಾ ರೆರಡಧಿಕ ಗುಣದಿ ಸ್ವಪತಿಗೆ ನೀಚಳೂ ಹರಿ ಶಕ್ರಸತಿ ಅಶ್ವಿ ಯುಕ್ತಾಭಿಮನ್ಯು ಚಂ ದಿರಜ ಬುಧನವತಾರ ಸ್ವಾಹಾ ದೇವಿಗಧಮಳೆಂದಾ ನಮಿಪೆ 47 ಎನಿಸುವಳು ಶಲ್ಯ ಜರಾಸಂಧನಾತ್ಮಜಾ ಶ್ವಿನಿ ಭಾರ್ಯಾನಾಮಾಭಿಮಾನಿ ಉಷಾ ಘನರಸಾಧಿಪ ಬುಧಗೆ ಕಿಂಚಿದ್ಗುಣ ಕಡಿಮೆ ಅವಳ ಪತ್ನಿಗೆ ದಶಗುಣಾಧಮಳುಯೆಂದು 48 ಧರಣಿಗಭಿಮಾನಿ ಎನಿಸುವ ಸೂರ್ಯಸುತ ಶನೇ ಶ್ವರ ಉಷಾದೇವಿಗೆರಡು ಗುಣಾಧಮ ತರಣಿ ನಂದನಗೆ ಸತ್ಕರ್ಮಾಭಿಮಾನಿ ಪು ಷ್ಕರ ಕಡಿಮೆ ಪಂಚಗುಣದಿಂದ ಎಂದೆಂದು 49 ನಾರದನ ಶಿಷ್ಯ ಪ್ರಹ್ಲಾದ ಬಾಲ್ಹೀಕ ಸ ಮೀರ ಸಂಯುಕ್ತ ಸಹ್ಲಾದ ಶಲ್ಯಾ ಮೂರನೆಯನುಹ್ಲಾದ ಸವಿತ್ರನಾವೇಶದಲಿ ತೋರಿದನು ದೃಷ್ಟಕೇತು ಎನಿಸಿ ಧರೆಯೊಳಗೆ 50 ತಾಮಾಂಶಯುಗ್ ಜಯಂತನು ಬಭ್ರುವಹ ವರು <ಈ
--------------
ಜಗನ್ನಾಥದಾಸರು
ಆಕಳ ಕಾಯುವ ಗೊಲ್ಲನ ಪರಿಯಲಿ ತಾ ಕೋಲನು ಪಿಡಿಯನು ಹರಿಯು ಪ ಸಾಕಲು ಬಯಸುವ ಜನರಿಗೆ ದೇವನು ತಾ ಕರುಣಿಸುವನು ಸನ್ಮತಿಯ ಅ.ಪ ಸಂಸಾರದ ಸಾಗರವನು ದಾಟಲು ಹಿಂಸೆಗಳೆಲ್ಲವ ಸಹಿಸುವರ ಸಂಶಯ ಭ್ರಾಂತಿಯ ತೊಲಗಿಸಿ ಪೊರೆಯಲು ಕಂಸಾರಿಯು ತಾ ಕೊಡುವ ವಿವೇಕವÀ 1 ನೀರಿನ ಮೇಲಿನ ಗುಳ್ಳೆಗಳಂದದಿ ಭವ ಭೋಗಗಳು ಯಾರಲಿ ಕರಣವ ತೋರ ಬಯಸುವನೊ ದೂರ ಮಾಡುವನು ಧನಕನಕಗಳ 2 ಶಾಂತಿಯೇ ಸೌಖ್ಯಕೆ ಕಾಣವೆಂಬುವ ಅಂತರಂಗವನು ಗಮನಿಸಿರಿ ಶಾಂತಿಗೆ ಸಾಧನ ಜ್ಞಾನವ ಪಡೆಯಲು ಸಂತತ ಸನ್ಮತಿ ಕೊಡಲಿ ಪ್ರಸನ್ನನು 3
--------------
ವಿದ್ಯಾಪ್ರಸನ್ನತೀರ್ಥರು
ಆತ್ಮನಿವೇದನೆ ಮನವೇ ನಿನ್ನಯ ನಿಜಮೂಲ ನೀನೋಡು ಸಮರಸವನೆಗೂಡು || ಚಾಲ || ವಿಷಯವಾಸನೆಗಳ ನಿಶಿದು ಹೋಗಲಿ ಕುಳ ಅಸಮ ಸಾಹಸಿಯಾಗಿ ನಿಜಸುಖದೊಳಗೆ ಪ ಹಿಂದೆ ಬಹು ಜನ್ಮದೊಳು ನೀ ತೊಳಲಿ ವಾಸನೆಯೊಳು ಬಳಲಿ ಇಂದೆ ನೀ ಬಂದೆ ನರಜನ್ಮದಲಿ ಎಚ್ಚರು ನಿನಗಿರಲಿ ಮುಂದೆ ಸಿಕ್ಕುವ ನಿಜವಿಲ್ಲದರಲ್ಲಿ ಆ ನಿಮಿತ್ಯದಲೀ ನಿಜದೊಳತಿ ಛಂದದಿ ನಿಲ್ಲೈ 1 ಗುರುಪಾದ ಕಮಲದ ಸೇವೆಯ ಮಾಡಿ ಇಷ್ಟಾರ್ಥವ ಬೇಡಿ ದೃಢದೀ ಅದರಲ್ಲಿ ನಲಿನಲಿಹಾಡಿ ಸತ್ ಶಬ್ದವ ಗೂಡಿ ಮೂಧ್ರ್ನಿಯಲಿ ಲೋಲ್ಯಾಡಿ ದೃಢತರವದಗಿ ನಿರಂತರ 2 ಭಕ್ತಿಭಾವವನೆ ದೃಢಮಾಡು ಸದ್ಧರ್ಮವಗೂಡು ಯುಕ್ತಿಯಿಂದಲೀ ಸಾಧನೆಮಾಡು ಗುರುಪದದೊಳಗಾಡು ವಿ ರಕ್ತಿ ನಿಜವಾಗಿ ಹುರಿಯನೆ ಮಾಡು ಸತ್ಸಂಗದೊಳಾಡು ಅನುರಕ್ತನಾಗಿ ನಿಜ 3 ಕಾಷ್ಠದೊಳಗಿಂದಾ ಅಗ್ನಿಯ ಪುಟ್ಟು ಕಾಷ್ಠವನೆ ಸುಟ್ಟು ಉತ್ಕøಷ್ಟ ಚಿತ್ತವನೆ ಪುಟವಿಟ್ಟು ಜಡಭಾವನೆ ಬಿಟ್ಟು ಥಟ್ಟನೇ ಜ್ಞಾನಾಗ್ನಿ ಪುಟವಿಟ್ಟು ಕ್ಷಡ್ರಿಪುಗಳ ಸುಟ್ಟು ಸದ್ಗುರುವಿನೊಳ್ ಇಟ್ಟ ಶಾಂತಿ ನಿಜ 4
--------------
ಶಾಂತಿಬಾಯಿ
ಆತ್ಮನಿವೇದನೆ ಯಾವಾಗಲೂ ನಿನ್ನ ಸೇವೆಯೊಳಿರುವಂತೆ ಕಾವುದೆನ್ನಯ ನಿಜದೀ ಕೃಪಾನಿಧೇ ಈ ಪರಿಯಿಂದನಾ ಭಾರಿ ಭವದಿ ನೊಂದೆ ತೋರೋ ನಿನ್ನಯ ಚರಣಾ ನಾರಾಯಣ ಪ ಆಶಾಪಾಶದಲಿ ನಾ ಘಾಸಿಯಾದೆನು ದೇವಾ ವಾಸನೆಯೊಳು ತೊಳಲಿ ಬಹು ಬಳಲಿ ವಾಸುದೇವನೆ ನಿನ್ನ ಪಾದದೊಳಗೆನ್ನಯ ಬೇಸರದಲೆ ರಕ್ಷಿಸೋ ನಿಜಪಾಲಿಸೋ 1 ನೀರಮೇಲಿನ ಗುಳ್ಳೆಯಂತೆ ತೋರುವ ಕಾಯ ಸೇರಿ ನಂಬಿದೆ ಭರದಿ ಬಹು ವಿಧದಿ ದೂರನಾದೆನು ನಿಜದರಿವುನಾನರಿಯದೇ ಸೇರಿಸೊ ನಿಜ ಸುಖದಿ ಪ್ರಬೋಧದಿ 2 ನಂಬಿದವರ ಕಾಯ್ವ ಸಂಭ್ರಮ ಪೊತ್ತವ ಶಂಭು ಶಂಕರ ಪ್ರಿಯನೇ ಸರ್ವೇಶನೇ ಇಂಬು ದೋರೆನ್ನಾ ಚಿದಂಬರ ನಿಜಪದ ನಂಬಿ ನಿಲ್ಲುವ ತೆರದಿ ಸದೃಢದೀ 3 ತತ್ವಮಸಿ ಮಹಾ ವಾಕ್ಯವ ಶೋಧಿಸಿ ನಿಸ್ತರಿಸುವ ಭವವಾ ಉಪಾಯವಾ ಚಿತ್ತಚೈತನ್ಯವಾಗಿ ನಿತ್ಯಶಾಂತಿಸ್ವಸುಖ ಸತ್ಯ ಸದ್ಗುರು ಸ್ವಾನಂದಾ ಸಹಜಾನಂದಾ4 ಕಡಹದಾ ಮರನೇರಿ ಮಡುವಾ ಧುಮ್ಮಿಕೃಇದ್ಯೋ ಪಿಡಿದು ಕಾಳಿಂಗನಾ ಹೆಡೆ ಕುಳಿದು ಕುಣಿದ್ಯೋ ಸಡಗರದಿಂದಲಿ ಮಾತೆಯ ತೊಡೆಯ ಮೇಲೆ ಬಂದು ಕುಳಿತೆ5 ದುರುಳ ದುಷ್ಟರ ಶಿರವ ಶರದಿಂದಾ ಕಡಿದೆಯೊ ಶರಣ ಬಂದ ದೀನರನು ಸಲಹಿದೆಯೊ ಪರಮ ಪುರುಷನೇ ನಿನ್ನ ಸ್ಮರಣೆಯೊಳಿರಿಸೆನ್ನಾ 6 ಅನ್ಯಾಯದಲಿ ಕುರುಪತಿಯ ಮಡುಹಿದೆಯೊ ಕರ್ಣನ ಕಂಠವ ಕತ್ತರಿಸಿದೆಯೊ ಧನ್ಯಧರ್ಮಾರ್ಜುನರ ಶಿರವಾ ಸನ್ಮತದಿಂದಲಿ ಕಾಯ್ದೆ 7 ಪುಂಡಲೀಕನ ಭಕ್ತಿಗೆ ಮೆಚ್ಚಿ ಪಂಡರಪುರದಲ್ಲಿ ನಿಂತೆನಿ ಹೆಚ್ಚಿ ತಂಡತಂಡದಲ್ಲಿ ಬರುವ ಹಿಂಡುಭಕ್ತರುಗಳ ಕೂಡುವ 8 ಕಂತು ನಾರಾಯಣ ಶಾಂತಿ ಪದದಲಿ ವಿಶ್ರಾಂತಿಯ ಕೊಟ್ಟಿನ್ನಾ ಭ್ರಾಂತಿಗಳನೆಲ್ಲ ತೋರಿಸಿ ಸಂತ ಸಂಗದೊಳಿರಿಸೆನ್ನಾ 9
--------------
ಶಾಂತಿಬಾಯಿ
ಆವದಿದು ಜ್ಞಾನ ಪ ಆವದಿದು ಜ್ಞಾನಾ ಬಲ್ಲವಿಕೆ ಜಾಣಾ | ಭಾವದುಗಮ ವರಿಯದೆವೆ ಜರಿದಿ ನಿಜ ಖೂನಾ 1 ಅರಹು ಆಗಲೆಂದು ಕುರುಹ ದೋರಿದೊಂದು | ಕುರುಹವಿಡದ ಕೊಡ ತಿರುಗಿ ಅರಹು ಮರದಿಂದ 2 ಕಲಿತು_ವಾಡುದು ಸೊಲ್ಲಾ ಗುಣಕ ಬಾಹುದಲ್ಲಾ | ಕಳೆದು ಅನುಮಾನ ಶಾಂತಿ ಸುಖವ ಪಡೆಯಲಿಲ್ಲಾ 3 ಅರಿಯದಿದ್ದರ ಕೀಲು ಸಾಧು ಸಂತರು ಕೇಳು | ಗರುವತನವ ನೀಗಿ ಯಲ್ಲರ ಕಿರಿಯನಾಗಿ ಬಾಳು 4 ಸಾರಥಿ | ಹೊಂದಿದವರ ನೋಡಿ ಕೊಡುವ ಮತಿ ಸ್ಫೂರ್ಥಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆಶೆಯ ಬಿಡಿಸಿದ್ಯೋ ಎನ್ನಾ ಮುಂದೆ ವಾಸವಾಗದಂತೆ ಕಾಯೋ ಮೋಹನ್ನಾ ವಾಸುದೇವನೆ ನಿನ್ನ ಸ್ಮರಣೆಯೊಳಗೆ ಮನ ಸೂಸದಂತೆ ಸ್ಥಿರ ನಿಜದಲ್ಲಿ ನಿಲಿಸಯ್ಯಾ ಪ ಬೆಂಬಿಡದೆಲೆ ನಿಜದರಿವನ್ನು ಕೊಡುವಾ ಕುಂಭಿಣಿಯೊಳಗೆಲ್ಲಾ ನೀನಲ್ಲದೆ ಎನ್ನಾ ನಂಬಿಗೆ ಕೊಡುವವರ್ಯಾರೋ ನಾರಾಯಣಾ 1 ಬೆಂದೆನು ನಾ ಭವದೊಳಗೆ ಎನ್ನಾ ತಂದೆ ನೀ ಕಾಯೋ ನಿಜಪದದೊಳಗೆ ಹಿಂದಿನ ಪ್ರಾರಬ್ಧ ಬವಣೆಯ ತೀರಿಸಿ ಮುಂದೆ ನೀ ಸಲಹೊ ಪರಮಪುರುಷನೆ ಹರಿ 2 ವಾಸನೆ ಬಂಧವೇ ಜೀವಾ ನಿ ರ್ವಾಸನೆಯನು ಕೊಟ್ಟು ಸಲಹೊ ಮಾಧವಾ ಶೇಷಶಯನನೆ ನಿಜ ಧ್ಯಾನದೊಳಿರಿಸೆನ್ನಾ ಆಶೆಯನು ಸಲಿಸಯ್ಯಾ ಮುರಾರಿ 3 ಅನಂತ ಮಹಿಮಾ ಮೇಘಶ್ಯಾಮಾ ನಿಶ್ಚಿಂತ ನಿಜ ಶಾಂತಿ ಸ್ವಸುಖವೀವಾ ನಂತಪರಾಧವ ಕ್ಷಮಿಸೆನ್ನಾ ಗುರುವೇ 4
--------------
ಶಾಂತಿಬಾಯಿ
ಇಂದಿರಾ ಪಾಲಿಸು ಎನ್ನ ಇಂದಿರಾ ಪ ಇಂದಿರಾ ದೇವಿಯೆ ನಿನ್ನ | ಪಾದಪೊಂದಿದೆ ಸಲಹಬೇಕೆನ್ನಾ | ಆಹಕಂದರ್ಪ ಇಂದ್ರ ಫಣೀಂದ್ರ ಗರುಡ ಕಂದುಕಂಧರ ಬ್ರಹ್ಮಾದಿ ವಂದ್ಯಳೆ ಪಾಲಿಸು ಅ.ಪ. ಕೃತಿ ಶಾಂತಿ | ದುರ್ಗೆಭೂಮಿ ಶ್ರೀದೇವಿ ಜಯಂತಿ | ಲಕ್ಷ್ಮೀರಮೆ ದಕ್ಷಿಣೆ ಗುಣವಂತಿ | ಸತ್ಯಭಾಮೆ ರುಕ್ಮಿಣಿ ಮಹಾಕಾಂತಿ | ಆಹಈ ಮಹಾನಂತ ರೂಪ ನಾಮಗಳುಳ್ಳಕೋಮಲ ಗಾತ್ರಿಯೆ ಕಾಮಜನನಿ ಕಾಯೆ 1 ಶ್ರೀಭಾಗ ಮಹಾ ಪ್ರಳಯದಲ್ಲಿ | ಪದ್ಮನಾಭಾಗೆ ಬಹು ಭಕ್ತಿಯಲ್ಲಿ | ದಿವ್ಯಆಭರಣಗಳಾಕಾರದಲ್ಲಿ | ಮಿಕ್ಕವೈಭವನೇಕ ರೂಪಾದಲ್ಲಿ | ಆಹಸ್ವಾಭಿಮಾನದಿ ಬಹು ಶೋಭನ ಪೂಜೆಯಲಾಭಗಳೈದಿದ ಶೋಭನವಂತಳೆ 2 ದೇಶಕಾಲಾದಿಗಳಲ್ಲಿ | ಜೀವರಾಶಿ ವೇದಾಕ್ಷರದಲ್ಲಿ | ಇದ್ದುವಾಸುದೇವನ ಬಳಿಯಲ್ಲಿ | ಸರಿಸೂಸಿ ವ್ಯಾಪ್ತಿ ಸಮದಲ್ಲಿ | ಆಹಲೇಸಾಗಿ ಒಪ್ಪುತ್ತ ಈಶ ಕೋಟಿಯೊಳುವಾಸಾಳೆ ಎನ್ನಭಿಲಾಷೆ ಸಲ್ಲಿಸಬೇಕು3 ಭವ ಬಂಧಾ | ಆಹನೀನೆ ಕಳೆದು ದಿವ್ಯ ಜ್ಞಾನ ಭಕುತಿಯಿತ್ತುಪ್ರಾಣಪತಿಯ ಪಾದವನ್ನು ತೋರಿಸಬೇಕು 4 ನಿತ್ಯ ಭಾಗ್ಯವು ನಿನಗೊಂದೆ | ಅಲ್ಲರತ್ನಾಕರನು ನಿನ ತಂದೆ | ತಾಯಿರತ್ನಗರ್ಭಳು ಕೇಳು ಮುಂದೆ | ಪತಿಗತ್ಯಂತ ಪ್ರಿಯಳಾದೆ ಅಂದೆ | ಆಹಸತ್ಯಬೋಧರು ಮಾಳ್ಪ ಅತ್ಯಂತ ಪೂಜೆಯಿಂಯುಕ್ತೆ ಶಿರಿಯೆ ನಿನಗೆತ್ತ ಕತ್ತಲು ಕಾಣೆ 5 ಲೋಕ ಜನನಿಯು ಎಂದು ನಿನ್ನಾ | ಕೀರ್ತಿಸಾಕಲ್ಯವಾಗಿದೆ ಘನ್ನಾ | ಎನ್ನಸಾಕಲಾರದೆ ಬಿಡಲಿನ್ನಾ | ಮುಂದೆಯಾಕೆ ಭಜಿಸುವುದು ನಿನ್ನಾ | ಆಹಸಾಕಾರವಾಗಿನ್ನು ಬೇಕಾದ ವರಗಳನೀ ಕರುಣಿಸಿ ಎನ್ನ ಜೋಕೆ ಮಾಡಲಿ ಬೇಕು 6 ಆವ ಜನ್ಮದ ಪುಣ್ಯಫಲದಿ | ನಿನ್ನಸೇವೆ ದೊರಕಿತೊ ಈ ಕ್ಷಣದಿ | ಎನಗೀವ ಭವ್ಯ ಕೇಳು ಮನದಿ | ಆಹಶ್ರೀ ವ್ಯಾಸ ವಿಠಲನ್ನ ಸೇವಿಪ ಯತಿಗಳ ಸಹವಾಸವನೆ ಇತ್ತು ಭಾವ ಶುದ್ಧನ ಮಾಡು 7
--------------
ವ್ಯಾಸವಿಠ್ಠಲರು