ಒಟ್ಟು 41 ಕಡೆಗಳಲ್ಲಿ , 15 ದಾಸರು , 38 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಥನಾತ್ಮಕ ಅರಸಿಕೊಂಬೆ ಮನಸ್ಸಿಗೆ ಬಂದವಳ ಪ ಶ್ರೀ ರುಕ್ಮಿಣಿ ಸಂಗಡ ಕೇಳಿಯಲಿ ಶ್ರೀ ರಮಣ ಇರಲು | ಕೊಂಡು ಮಾತಾಡಿ ಬೇಡಿದ 1 ನಾರಿಯರು ನಿನಗೆ ಉಂಟಾಗ ಈರೈದು ಸಾವಿರ ಪರಾಕು 2 ಕೇಳೈ ಮಹ ತಪಸಿಯನ್ನೀಗ ವೇಳ್ಯ ಮೀರಗೊಡದೆ | ಸತಿ ವೇಗ ಪೋಗು ನೀ ಸಾಗು 3 ನಿಂದಿರದೆ ನಾರದಾ ಗೋಪಿಯವರ ಮಂದಿರವ ಸುತ್ತಿದಾ | ಒಂದೊಂದು ಮನೆಯಲಿ ಸೋಜಿಗ ಅತಿಶಯ | ಅಂದು ನಾರದಗೆ ತಾ ತೋರಿದ ಬಿರುದಾ 4 ಒಂದೆ ಮನೆಲಚ್ಯುತಾ ಅನಂತ ಒಂದು ಕಡೆ ಗೋವಿಂದ | ಪರಿಯಂತ ಏಕಾಂತ 5 ಚದುರಂಗ ನಗೆಕೂಟ ಒಂದು ಮನೆ | ಮಗುವು ಮುದ್ದಾಡಿ ಮಂಚದ ಮೇಲೆ ಮಡದಿಯಾ | ಬಿಗಿದಪ್ಪಿ ಸವಿನಾಡುವ ನೋಡಾ6 ಹೋಯಿದಾಟ ಒಂದು ಮನೆ | ಮನ್ಯರಾದ ಶುದ್ಧಿ ಮಕ್ಕಳ ಶೋಭನಾ | ಪಯಣಗತಿಯಲಿದ್ದ ವಾರ್ತಿ ಒಂದರ್ಥಿ7 ಕರುಗಳು ಒಂದು ಕಡೆ ಬಿಡುತ ತುರುಗಳ ಒಂದು ಮನೆ | ಕರಕೊಂಡು ಕುಡಿಯುತಾ | ಕುಸುಮವ ಮುಡಿಸುತ ನುಡಿಸುತಾ8 ಸ್ನಾನವು ಒಂದು ಕಡೆ ಸಂಧ್ಯಾನ ಮೌನವು ಒಂದು ಕಡೆ | ಧ್ಯಾನ ಜಪ ತಪ ವ್ಯಾಖ್ಯಾನ ಪುರಾಣ | ದಾನ ಧರ್ಮಗಳ ಕೊಡುವನು ನಡೆವನು 9 ಮಿಂದುಂಡು ಒಂದು ಮನೆ | ಅನಂತ ಇದ್ದಾ ಅನಿರುದ್ಧಾ10 ಬಂದು ಹರಿಯ | ಚರಣಕ್ಕೆ ಬಿದ್ದು | ಪರಬ್ರಹ್ಮ ನೀನಲ್ಲದಿಲ್ಲಾ ಇನ್ನಿಲ್ಲಾ 11
--------------
ವಿಜಯದಾಸ
ಉತ್ತರಾದಿಯ ಮಠದ ಪೀಠವಾಸಾ ಪ ಸತ್ಯಧರ್ಮಾಖ್ಯ ಯತಿ ಭಕ್ತ ಜನ ಪೋಷಾ ಅ.ಪ. ಪಂಚಮುಖ ಪ್ರಾಣನೂಪಾಸಕನೆ ಎನ್ನವಂಚಿಸದೆ ಭವದೊಳಗೆ ಕಾಯೊ ಬೇಗಾ |ಸಂಚಿತವ ಪರಿಹರಿಸೊ ವಾಂಛಿತಾರ್ಥದ ಹರಿಯಮಂಚ ಪದ ಯೋಗ್ಯಾಂಶ ಸಂಭೂತ ಯತಿಯೇ 1 ಭದ್ರೆ ತೀರದಿ ವಾಸ ಭವದುಪದ್ರವ ಕಳೆಯೊಕಾದ್ರ ವೇಯನ ಪದವು ಭದ್ರ ನಿನಗೇ |ಮಾದ್ರ ವೇಯಾಗ್ರಜಗೆ ವಲಿದಿತ್ತೆ ಅಸ್ತ್ರವನುರೌದ್ರ ಮೂರುತಿ ಕಾಯೋ ಗುರು ವರೇಣ್ಯಾ 2 ಭಾಗವತ ವ್ಯಾಖ್ಯಾ |ಸಜ್ಜನೋದ್ಧಾರಿಯನ್ನ ಜ್ಞಾನ ಪರಿಹರಿಸಿವಿಜ್ಞಾನಮಯ ಹರಿಯ ತೋರೈಯ್ಯ ಜೀಯಾ 3 ಸತ್ಯವರ ಕರಜಾತ ಶ್ರೀ ಸತ್ಯ ಧರ್ಮಾಖ್ಯನಿತ್ಯ ತವ ಸಚ್ಚರಣ ಸ್ತುತಿಪ ಜನರಾ |ಅತ್ಯಧಿಕ ಪ್ರೀತಿಯಲಿ ಹತ್ತಿರಕೆ ಕರೆಯುತ್ತಸತ್ಯ ಮೂರುತಿ ಪುರಕೆ ಎತ್ತೊಯಿವ ಗುರುವೇ4 ವತ್ಸರ ಸುವಿಕೃತವು ಅಸಿತ ಶ್ರಾವಣದಲ್ಲಿಮತ್ಸ್ಯಾದಿ ದಶ ಮತ್ತೆ ಮೂರನೆಯ ದಿನದೀ |ವತ್ಸಾರಿ ಶ್ರೀ ಗುರು ಗೋವಿಂದ ವಿಠ್ಠಲನಹೃತ್ಸರೋಜದಿ ಭಜಿಸಿ ತನುವ ತ್ಯಜಿಸಿದನೇ 5
--------------
ಗುರುಗೋವಿಂದವಿಠಲರು
ಒಂದು ಪ್ರಕಾರವೆ ಸ್ವಾಮಿ ಮಂದಿಯ ರಕ್ಷಿಸುವುದು ನಿಂದವರ ದೇಹದಲ್ಲಿ ಹಿಂದೆಮುಂದಭಯವನಿತ್ತು ಪ. ಅಪಾರ ಮಹಿಮ ನೀನು ಒಪ್ಪುವ ಹಯಾಸ್ಯನಾಗಿ ಎಪ್ಪತ್ತೆರಡು ಸಾವಿರ ಇಪ್ಪ ನಾಡಿಗಳೊಳಿದ್ದು 1 ಮುಖ ನಾಸ ನೇತ್ರ ಶ್ರೋತ್ರ ತ್ವಕ್ ನಖೇಂದ್ರಿಯ ತದ್ಗೋಳಕ ಸಕಲರೂಪಗಳಲ್ಲಿ ನೀನೆ ಆಧಾರವಾಗಿದ್ದು 2 ಶ್ವಾಸೋಚ್ಛ್ವಾಸ ಚೇಷ್ಟವಿಚÀಕ್ಷಣ ಹಾಸವಿಲಾಸ ಭೂಷಣ ಗ್ರಾಸಾವಾಸಂಗಳಿಗೆ ನಿವಾಸವಾಗಿ ಪ್ರೇರಿಸುವೆ 3 ಅನಂತ ರೂಪಗಳಲ್ಲಿ ನೀನೆ ಆಧಾರವಾಗಿದ್ದು 4 ಪ್ರಾಣೋಪಾನ ರೂಪಿನಿಂದ ವ್ಯಾನೋದಾನರೂಪನಾಗಿ ವ್ಯಾನೋದಾನ ರೂಪಿನಿಂದ ಉದಾನ ಸಮಾನನಾಗಿದ್ದು 5 ಪೂಜಾ ವ್ಯಾಖ್ಯಾನ ಕೀರ್ತನ ಭೋಜನ ಮಜ್ಜನಸುಖ ಭಾಜನೆಗಳಲ್ಲಿದ್ದು ಪೂಜ್ಯನಾಗಿ ಪ್ರೇರಿಸುವ 6 ವಿಶ್ವ ತೇಜಸ್ಸು ಪ್ರಾಜ್ಞಾ ತುರ್ಯಾ ಅವಸ್ಥಾತ್ರಯಂಗಳೆಲ್ಲ ಕೊಡುವೆ ಜಾಗ್ರತ್ಸ್ವಪ್ನ ಸುಷುಪ್ತಿಯಲ್ಲಿ ವಿಶ್ವಪ್ರೇರಕನಾಗಿದ್ದು 7 ಆತ್ಮರೂಪ ಆದ್ಯ ಅನಂತ ಅಂತರಾತ್ಮ ರೂಪನಾಗಿ ಜ್ಞಾ- ನಾತ್ಮ ರೂಪಿನಿಂದ ಪರಮಾತ್ಮರೂಪನಾಗಿ 8 ಅನಿರುದ್ಧ ಸಂಕರ್ಷಣ ಪ್ರದ್ಯುಮ್ನ ಘನ ವಾಸುದೇವ ನೆನೆವರ ಪಾಪ ಪರಿಹರಿಸುವ ನರಹರಿ 9 ನೀನು ನಿನ್ನ ದಾಸರಿಗಾಗಿ ಮನುಷ್ಯಮುಖದಿಂದ ತತ್ವ ತನುಗಳಿಂದ ಕುಡುವ ಅವರವರ ದೇಹ್ಯದೊಳಿದ್ದು 10 ಸರ್ವರೊಳಗೆ ನೀನಿದ್ದು ಅವರವರ ವಿಭಾಗದ ಕರ್ಮ ಪರೀಕ್ಷಿಸಿ ಪ್ರೇರಿಸುವ ವರ ಶ್ರೀಹಯವದನ 11
--------------
ವಾದಿರಾಜ
ಕಾಯ ಪಾದ ಪದುಮ ದಾಸ್ಯವನಿತ್ತು ಪ ಕಂಸಾರಿ ತವ ಪಾದಪಾಲಿಸುವನೆ ಶಿರದೊಳಗಸಂಶಯದಿ ಧರಿಸೀ |ವಿಂಶತಿಯ ಮತ್ತೊಂದು ಭಾಷ್ಯ ದೂಷಕ ಮರು-ತ್ತಂಶ ಸಂಭೂತ ಶ್ರೀ ಮಧ್ವ ಮತದವನಾ 1 ಆವ ಭವರೋಗ ಹ | ಭಾವ ಕ್ರಿಯ ದ್ರವ್ಯಾಖ್ಯಅದ್ವೈತ ತ್ರಯಗಳನು ಸಂಧಾನವಿತ್ತೂ |ದೇವ ದತ್ತದಿ ತೃಪ್ತಿ ಭಾವವನೆ ನೀನಿತ್ತುಭಾವದಲಿ ತವರೂಪ ಓವಿ ತೋರುವುದೂ 2 ಆಗಮಸುವೇದ್ಯ ಭವರೋಗ ವೈದ್ಯನೆ ದೇವನಾಗಾರಿ ವಾಹನನೆ | ಯೋಗಿಧ್ಯೇಯಾಆಗು ಹೋಗುಗಳೆರಡು | ನೀನಿತ್ತುದೆಂಬಂಥಜಾಗ್ರತೆಯ ನೀನಿತ್ತು ಕಾಪಾಡು ಹರಿಯೇ 3 ಕುಡುತೆ ಪಾಲನು ಭಕ್ತ ಕೊಡಲದನು ಕುಡಿಯುತ್ತಕಡಲಂತೆ ಹಾಯಿಸಿದೆ ಬಡವರಾಧಾರೀ |ಧೃಡಭಕ್ತಿ ಸುಜ್ಞಾನ ವೈರಾಗ್ಯ ಭಾಗ್ಯಗಳಕಡು ಕರಣಿ ನೀನಿತ್ತು ಕಡೆಹಾಯ್ಸು ಭವವಾ 4 ಸರ್ವಜ್ಞ ಸರ್ವೇಶ ಸರ್ವಾಂತರಾತ್ಮಕನೆದರ್ವಿಜೀವನ ಕಾಯೊ ದುರ್ವಿಭಾವ್ಯಾ |ಗುರ್ವಂತರಾತ್ಮ ಮತ್ಪ್ರಾರ್ಥನೆಯ ಸಲಿಸಯ್ಯಶರ್ವವಂದ್ಯನೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗುರುರಾಜ ನಿನ್ನ ಹೊರತು ಪೊರೆವ ಧೊರೆಗಳ ಕಾಣೆ | ಶರಣಜನರಿಷ್ಟವನೆ ಸುರತರುವಿನಂತೀವೆ ಪ ತರಳಪ್ರಹ್ಲಾದನಾಗಿರಲು ವರಭಕುತಿಯಿಂ | ನರಹರಿಯ ಮೆಚ್ಚಿಸಿದೆ ಪರಮಕರುಣಾಸಿಂಧೊ 1 ವ್ಯಾಸಮುನಿಯು ನೀನೆ ವಾಸುದೇವನ ಭಜಿಸಿ | ಲೇಸಾದ ಚಂದ್ರಿಕೆಯ ಭೂಸುರರಿಗರುಹಿದೆ 2 ಶ್ರೀರಾಮಚಂದ್ರಪದಸರಸೀರುಹಾಭೃಂಗ | ಶ್ರೀ ರಾಘವೇಂದ್ರಯತಿ ಸುರುಚಿರಕೃಪಾಪಾಂಗ 3 ನರಹರಿ ಸಿರಿರಾಮ ಮುರವೈರಿ ಮುನಿವ್ಯಾಸ | ಇರುತಿಹರು ನಿನ್ನೊಳು ಧರೆಯ ಪಾಲಿಸೆ ಮುದದಿ 4 ಕರೆದಲ್ಲಿ ಬರುವೆನೆಂದೊರೆದ ವಚನವ ಸಲಿಸೆ | ಭರದಿ ನಾರಾಯಣಪುರಕೈದಿದಿಯೊ ಮುದದಿ 5 ಭೀಮಸೇತ್ವ್ಯಾಖ್ಯ ಮಠ ಸೋಮರಘುತಿಲಕರಿಂ | ದೇ ಮಹಾಸೇವೆಯ ಕೈಗೊಂಡೆಯೋ ಮುದದಿ 6 ದೋಷದೂರನೆ ಪ್ರಭುವೆ ಆಶೆಯಿಂ ಸೇವಿಪರ | ಕ್ಲೇಶವೆಲ್ಲವನಳಿದು ಶ್ರೀಶಕೇಶವನೊಲಿಸೊ 7
--------------
ಶ್ರೀಶ ಕೇಶವದಾಸರು
ಜಯ ಜಯ ಜಯ ಮುನಿವರ್ಯ ಜಯ ಮಧ್ವಶಾಸ್ತ್ರ ವ್ಯಾಖ್ಯಾನಾತಿಗೇಯ ಪ ಮಂಗಲವೇಡೆಯೊಳುದುಭವಿಸುತ ಜಗ- ನ್ಮಂಗಲಕರವಾದ ಟೀಕೆಯ ರಚಿಸಿ ಮಂಗಲಮೂರುತಿ ರಾಮನ ಭಜಿಸುತಾ- ನಂಗನ ಜಯಿಸಿದ ಮುನಿಕುಲ ತಿಲಕ 1 ವಿದ್ಯಾರಣ್ಯನೆಂಬ ಖಾಂಡವ ವನವನೆ ಯಾದವೇಶನ ಸಖನಂತೆ ನೀ ದಹಿಸಿ ಮಧ್ವಶಾಸ್ತ್ರವೆಂಬ ರತ್ನವ ಜನರಿಗೆ ಸುಧೆಯಂತೆ ಕುಡಿಸಿದ ಯತಿವಂಶ ರತ್ನ 2 ಮಾಧ್ವಗ್ರಂಥವ ನೀನು ಬಂಧುವೆಂದೆಣಿಸುತ ರಾಜೇಶ ಹಯಮುಖ ಶ್ರೀರಾಮಚಂದ್ರ ಪಾಂದಾಂಬರುಹವನ್ನೆ ಬಿಡದೆ ಸೇವಿಸುತಲಿ ವಾದೀಭಗಳಿಗೆ ಮೃಗೇಂದ್ರನಾಗಿರುವಿ 3
--------------
ವಿಶ್ವೇಂದ್ರತೀರ್ಥ
ದಯದಿ ಎಮ್ಮನು ಸಲಹ ಬೇಕಯ್ಯ | ಮಳಖೇಡ ನಿಲಯ ದಯದಿ ಎಮ್ಮನು ಸಲಹ ಬೇಕಯ್ಯ ಪ ದಯದಿ ಎಮ್ಮನು ಸಲಹ ಬೇಕೈ | ವಿಯದಧಿಪ ಸದ್ದಂಶ ಸಂಭವ ಭಯ ವಿದೂರನ ತೋರು ಎನುತಲಿ | ಜಯ ಮುನೀಂದ್ರನೆ ಬೇಡ್ವೆ ನಿನ್ನನು ಅ.ಪ. `ಇಂದ್ರಸ್ಯನು ವೀರ್ಯಾಣ’ ಎಂದೆನುತ | ಇತ್ಯಾದಿಋಕ್ಕುಗಳಿಂದ ಬಹುತೆರೆ ನೀನು ಪ್ರತಿಪಾದ್ಯ ||ಅಂದು ಮೇಘದ ಜಲವು ಬೀಳದೆ | ಬಂಧಗೈದಹಿನಾಮ ದೈತ್ಯನಕೊಂದು ಉದ್ಧರಿಸಿರುವ ಪರಿಯಲಿ | ಮುಂದೆ ದುರ್ವಾದಿಗಳ ಖಂಡಿಪೆ 1 ವಾಲಿಯಂದದಿ ದೃಷ್ಟಿಮಾತ್ರದಲಿ | ಶತೃಗತಬಲಲೀಲೆಯಿಂದಪಹರಿಪೆ ನಿಮಿಷದಲಿ ||ಕಾಲ ತ್ರೇತೆಯಲಂದು ದುಷ್ಟರ | ವಾಲಿರೂಪದಿ ವಾರಿಸಿದ ಪರಿಕಾಲ ದ್ವಾಪರದಲ್ಲಿ ಪ್ರಾರ್ಥನೆ | ಲೀಲೆ ರೂಪಿಯು ಕೃಷ್ಣಸೇವಕ 2 ದೃಷ್ಟಿ ಮಾತ್ರದಿ ಕರ್ಣಗತ ಬಲವ | ಅಪಹರಿಸಿ ನೀನುಕ್ಲಿಷ್ಟ ಯುದ್ಧದಿ ಗಳಿಸಿ ನೀ ಜಯವ ||ಶ್ರೇಷ್ಠ ಕರ್ಣನ ಅಸುವ ಕೊಳ್ಳುತ | ಸುಷ್ಠು ಅರಿಬಲ ನಾಶಮಾಡುತಭ್ರಷ್ಟ ಕೌರವನೀಗೆ ದುಃಖದ | ಕೃಷ್ಣಗರ್ಪಿಸಿ ಕೈಯ್ಯ ಮುಗಿದೆಯೊ 3 ಕಾಲ ಕಲಿಯುಗದಲ್ಲಿ ಬಲ ಭೀಮ | ಮಧ್ವಾಭಿಧಾನದಿಮೂಲ ಮೂವತ್ತೇಳು ಸೂನಾಮ ||ಭಾಳ ಗ್ರಂಥಗಳನ್ನೆರಚಿಸೀ | ಕಾಲಟಿಜಕೃತಮಾಯಿ ಮತವನುಲೀಲೆಯಿಂದಲಿ ಖಂಡಿಸುತ್ತ | ಪಾಲಿಸುತ್ತಿರೆ ಸುಜನರನ್ನು 4 `ವೃಷಾಯ ಮಾಣೆಂಬ` ಋಕ್ಕಿನಲಿ ದೇವ ಇಂದ್ರಗೆವೃಷಭದಾಕೃತಿ ಪೇಳಿಹುದು ಅಲ್ಲಿ ||ವೃಷಭ ನೀನಾಗಂತೆ ಕಲಿಯಲಿ | ಎಸೆವ ಶ್ರೀ ಮನ್ಮಧ್ವ ಗ್ರಂಥದಹಸಿಬೆ ಚೀಲವ ಹೊತ್ತು ತಿರುಗುತ | ಅಸುಪತಿಯ ಸೇವಿಸಿದ ಮಹಿಮ5 ಅಗಸ್ತ್ಯ ಮುನಿ ಸಕಲ ತೀರ್ಥಗಳ | ಸಂಗ್ರಹಿಸಿ ಕರದಿಸಾಗಿ ಗಿರ್ಯಾನಂತ ಕಮಂಡೂಲ ||ವೇಗ ಕೆಳಗಿಟ್ಟಾಚಮನ ಅಲ್ಪ | ಕಾಗಿ ಸ್ವಲ್ಪವುದೂರ ಪೋಗಲುಕಾಗೆ ರೂಪದಿ ಬಂದು ಇಂದ್ರನು | ವೇಗ ಉರುಳಿಸೆ ಜಲವು ಹರಿಯಿತು 6 ದೆವರಾಜನು ಕಾಣಿಸಿ ಕೊಳಲು | ಮುನಿಯು ಆಕ್ಷಣದೇವ ಕಾರ್ಯದ ಭಾವ ತಿಳಿಯಲು ||ಓವಿ ತತ್ಕಾಗಿಣಿಯ ನಾಮದಿ | ಭೂವಲಯದೊಳ್ಬಾತಿಸಲಿ ಎನೆತೀವರಾಶೀರ್ವಾದ ದಿಂದಲಿ | ಪಾವನವು ತತ್ ಕ್ಷೇತ್ರ ವಾಯಿತು 7 ಪಾಂಡು ಮಧ್ಯಮನಾದ ಅರ್ಜುನನು | ಇಲ್ಯುದಿಸಿ ಪೊತ್ತಧೋಂಡು ರಘುನಾಥ ಪೆಸರನ್ನು || ಗೊಂಡು ನಾಯಕ ತನವ ಅಶ್ವಕೆ | ಅಂಡಲೆದು ಬರುತಿಲ್ಲಿ ಬಿಸಿಲಲಿ ಉಂಡು ಉಂಬುದ ಜಲವ ಪಶುಪರಿ | ಕಂಡು ಮುನಿ ಅಕ್ಷೋಭ್ಯ ಬೆಸಸಿದ 8 ಸ್ವಪ್ನ ಸೂಚಿಸಿದಂತೆ ಮುನಿಶ್ರೇಷ್ಠ | ನೀರ್ಗುಡಿದವ ನರೆ ಬಪ್ಪುವನು ತಮ ಪೀಠಕೆನ್ನುತ್ತ || ಸ್ವಲ್ಪ ಹಾಸ್ಯದಿ ಪಶುವು ಪೂರ್ವದಿ | ಒಪ್ಪುವೆಯಾ ನೀನೆನ್ನ ಸಾದಿಗೆ ನೆಪ್ಪು ಬಂದುದು ವೃಷಭ ಜನ್ಮದಿ | ಕೃಪ್ಪೆಗೈದಿಹ ಮಧ್ವರನುಗ್ರಹ 9 ಸಾದಿ ಭೂಪನು ಕಳುಹಿ ತನ್ನ ಸೈನ್ಯ | ಅಕ್ಷೋಭ್ಯ ಮುನಿಪರ ಪಾದಕೆರಗುತ ಆಶ್ರಮವು ತುರ್ಯ ||ಮೋದದಿಂದ್ಯಾಚಿಸಲು ಮುನಿವರ | ಆದಿಯಿಂದಲಿ ಬಂದ ಪೀಠಕೆಸಾದರದಿ ಪಟ್ಟಾಭಿಷಕ್ತನ ಗೈದು ಆಶೀರ್ವಾದ ಮಾಡಿದ 10 ಸುತನು ತುರ್ಯಾಶ್ರಮವ ಪೊತ್ತುದನ | ಕೇಳುತ್ತ ತಂದೆಅತುಳ ಕೋಪದಿ ನಿಂದಿಸಿದ ಮುನಿವರನ |ಸುತನ ಗೃಹ ಕೆಳತಂದು ಪತ್ನಿಯ | ಜೊತೆಯಲಿಡೆ ಏಕಾಂತ ಗೃಹದಲಿಅತುಳ ಸರ್ಪಾ ಕೃತಿಯ ಕಾಣುತ | ಭೀತಿಯಲಿ ಚೀರಿದಳು ಕನ್ಯೆಯು11 ಸೋಜಿಗದ ತನಯನ್ನ ಕೊಳ್ಳುತ್ತ | ಮುನಿವರರ ಬಳಿಗೆ ಯೋಜಿಸೀದನು ಕ್ಷಮೆಯ ಬೇಡುತ್ತ ||ಆರ್ಜವದ ಮುನಿ ಕ್ಷಮಿಸಿ ತಂದೆಯ | ಮಾಜದಲೆ ತಮ್ಮ ಶಿಷ್ಯಭೂಪಗೆಯೋಜಿಸಿದರನ್ವರ್ಥನಾಮವ | ಶ್ರೀ ಜಯಾಭಿಧ ತೀರ್ಥರೆನ್ನುತ 12 ಪರ ಕರಿ ಹರ್ಯಕ್ಷರಾದಿರಿ 13 ಮಧ್ವಭಾಷ್ಯಕೆ ಟೀಕೆ ರಚಿಸುತ್ತ | ಯರಗೋಳ ಗುಹೆಯಲಿಶುದ್ಧ ಭಾವದಿ ಇರಲು ಮದಮತ್ತ ||ವಿದ್ಯ ಅರಣ್ಯಭಿಧ ನೋಡೀ | ಮಧ್ವಕೃತ ಸನ್ಮಾನ ಲಕ್ಷಣಬುದ್ಧಿಗೇ ನಿಲುಕದಲೆ ಟೀಕೆಯ | ಪದ್ಧತಿಯ ಕಂಢರ್ಷಪಟ್ಟನು 14 ಮಾಧ್ವಭಾಷ್ಯವ ನೇರಿಸಿ ಗಜವ | ತಟ್ಟೀಕೆ ಅಂತೆಯೆಅದ್ಧುರೀಯಲಿ ಗೈದು ಉತ್ಸವವ ||ವಿದ್ಯವನ ಮುನಿಪೋತ್ತುಮನು ಬಹು | ಶುದ್ಧಭಾವದಿ ಗೈದು ಸಂತಸಬುದ್ಧಿಯಲಿ ಪರಿವಾರ ಸಹಿತದಿ | ಸದ್ದುಯಿಲ್ಲದೆ ಪೋದನಂದಿನ 15 ಹತ್ತೆರಡು ಮತ್ತೊಂದು ಕುಭಾಷ್ಯ | ವಿಸ್ತರದಿ ಖಂಡಿಸೆಕೃತ್ಯವೂ ಮಧ್ವಕೃತವನುವ್ಯಾಖ್ಯಾ ||ಮತ್ತಿದಕೆ ಸೂಧಾಖ್ಯ ಟೀಕವ | ವಿಸ್ತøತವು ನಿಮ್ಮಿಂದ ಜಯಮುನಿಮೊತ್ತದಿಂಧ್ಹತ್ತೆಂಟು ಗ್ರಂಥಕೆ | ಕೃತ್ಯವಾಯಿತು ನಿಮ್ಮ ಟೀಕೆಯು16 ಪಾದ ಪಾದ ತೋರ್ವುದು ||
--------------
ಗುರುಗೋವಿಂದವಿಠಲರು
ನೋಡಿ ನೋಡಿನೊ ರಂಗಾ ನಿನ್ನ ನೋಡಿನೊ ಆಡಲೇನಯ್ಯಾ ಪರಸತಿಯರ ಮೋಹಕ್ಕೆ ಸಿಲುಕಿ ಪ ಹೆಣ್ಣ ನಾ ಕಾಣುತ ಮನಸು ದ್ರವಿಸುವದು ದೃಢವಾಗಿ ಮುನ್ನೆ ದಾರಿದ್ರತನ ಯೆಣಿಸಿಕೊಳದೆ ಕಣ್ಣು ಹೋಗುವ ಸುದ್ದಿ ತಿಳಿಯದಲೆ ನೀಕ್ಷಿಸಿ ನಿತ್ಯ 1 ಜಲ್ಪಸಿಲ್ಪಿಗಳಿಂದ ಮಂತ್ರ ಮಾಡುವೆ ಅವಳಾ ಬಲ್ಪು ವಯ್ಯಾರ ಗುಣಗುಣಿಸಿಕೊಳುತಾ ತಲ್ಪಮಿಕ್ಕಾದ ಭೋಗದ್ರವ್ಯ ಬಯಸಿ ವಿ ಕಲ್ಪ ಸಂಕಲ್ಪದಲ್ಲಿ ಬಳುಲುವೆನುಬ್ಬಸವಳಿದು 2 ವ್ಯಾಖ್ಯಾತ ಪಂಡಿತದ್ವ್ಯಾಪಕ ಪಾಠಕ ಮಹಾ ಪ್ರಖ್ಯಾತ ವೇದವೇದಾಂತ ಪ್ರೌಢ ಸೌಖ್ಯ ಪುಸ್ತಕ ಪಾಣಿ ಜ್ಞಾನಿ ಎನಿಸಲು ಅವಳ ಆಖ್ಯಾನ ಕೇಳುತಲೆ ಕಿವಿಗೊಟ್ಟು ಲಾಲಿಸುವೆ 3 ಬೀದಿಯೊಳು ಪೋಗುವವಾಳೊಂದು ಪ್ರಯೋಜನಕೆ ಹಾದಿಯನು ಹಿಡಿದು ಸಮೀಪ ಬರಲು ಪಾದಕಾದರು ಬಿದ್ದು ಮಾತಾಡುವೆನೆಂಬೊ ಮೋದವನು ತಾಳಿ ಏಕಾಂತ ಹುಡುಕುವೆ 4 ಅಂಧಕ ಮೂಕಿ ಬಧಿರೆ ಹೀನಾಂಗ ಅವರೋತ್ತಮ ಜಾತಿ ವಿಧಿ ನಿಷೇಧವನು ಚಿಂತಿಸದೆ ತೀವರದಿಂದ ಅಧೋಗತಿಗೆ ಇಳುವೆನು ಸತ್ಕರ್ಮವನು ತೊರೆದು 5 ನೀರು ಸೀರೆವೊಗಿವಾಗ ಮೈ ತೊಳೆದು ಉಡುವಾಗ ಉರು ಕುಚ ಕಚ ನೋಳ್ಪ ಆಶೆಯಲ್ಲಿ ಮೂರು ಹತ್ತನೆ ತತ್ವ ನೆನೆನೆನೆದು ಯೋಚಿಸಿ ವಾರಿತಿಯ ಕೇಳಿ ತಲೆದೂಗುವೆನೊ ಲೇಸಾಗಿ 6 ಕಣ್ಣುಯಿದ್ದದಕೆ ಸಾರ್ಥಕವಾಗಲಿಲ್ಲ ಪ್ರ ಸನ್ನ ಮೂರುತಿ ಯೆನ್ನ ಸಾಧನವೇನೊ ಘನ್ನ ಏಲ್ಲೆಲ್ಲಿ ನಾ ನೋಡಿದರೆ ಅಲ್ಲಲ್ಲಿ ನಿನ್ನ ರೂಪವ ತೋರೊ ವಿಜಯವಿಠ್ಠಲ ಒಲಿದು 7
--------------
ವಿಜಯದಾಸ
ಪಂಚ ವೃಂದಾವನದಿ ಮೆರೆಯುತಿರುವಾ ||ಪಂಚಾಸ್ಯ ಸಂದಿಷ್ಟ ವೈಭವವ ಕೇಳಿ ಪ ವಿಪುಲ ಮತಿ ಪದಕರ್ಹ ಕಪಿಪ ರಾಮನ ಭಂಟಸ್ವಪನದಾಖ್ಯಾನವನೆ ಶಪಥ ಪೂರ್ವಕದೀ |ವಿಪ್ರಗೋಸುಗವಾಗಿ ಸುಪ್ರಕಟ ಗೈದಿಹರು ಅಪ್ರತಿಮ ಹಯಮೊಗನ ಸುಪ್ರೇಮ ಪಿಡಿದೂ 1 ಆಖ್ಯಾನ ಪೆಟ್ಟಿಗೆಯು ಅಂಧಕಾರದಲಿದ್ದುವ್ಯಾಖ್ಯಾತೃ ವೇದನಿಧಿ ಜನ್ಮತಾಳುತಲೀ |ವ್ಯಾಖ್ಯಾನ ಗೈದಾಗ್ಯು ಭಾವ ತಿಳಿಯದಲೇವೆಪ್ರಖ್ಯಾತಿ ಪಡೆಯದಲೆ ಬೀಗ ಮುದ್ರಿತದೀ 2 ಅಂಧ ಭಾವದೊಲೊಬ್ಬ ಪಂಗು ಭಾವದಲೊಬ್ಬ ಇಂದಿರೇಶನ ಮಹಿಮೆ ಪ್ರಕಟ ಗೈಯ್ಯುವಲೀ|ಅಂಧ ಪಂಗುನ್ಯಾಯ ಆಶ್ರಯಿಸಿ ಪ್ರಕಟಿಸುವಮಂದ ಜನರುದ್ಧಾರ ಕಾರ್ಯ ಗೈಸುತಲೀ 3 ಅನುಮಾನ ತೀರಥರ ಶಾಸ್ತ್ರವನೆ ಮಥಿಸುತ್ತತನುಮನ ಧನಧಾನ್ಯ ತೃಣವೆಂಬ ಕೀಲಿಯಲೀ |ಜ್ಞಾನ ಪೆಟ್ಟಿಗೆ ಬೀಗ ಮುದ್ರೆಯನೆ ತೆರೆಯುತ್ತ ಮನದ ಪಾತ್ರಿಯಲುಣ್ಣಿ ಆಖ್ಯಾನದನ್ನಾ 4 ಸಂತ ಸಂಗದಲಿಂದ ಮಂಥಿಸಲು ತತ್ವಗಳಅಂತ ರಂಗದ ಕದವು ತೆರೆದಂತರಾತ್ಮನನುಕಂತು ಪಿತನಾದ ಗುರು ಗೋವಿಂದ ವಿಠಲನ್ನಅಂತರಂಗದಿ ಕಾಂಬ ಪಂಥವಿತ್ತವರಾ 5
--------------
ಗುರುಗೋವಿಂದವಿಠಲರು
ಪದ್ಮನಾಭರ ಭಜಿಸೋ ಹೇ ಮನುಜಾನೀ ಪ ಮಧ್ವರಾಯರ ಕರಪದ್ಮ ಸಂಭವರಾದ ಅ.ಪ ಮತ್ತ ಮಾಯಿಗಳೆಂಬೊ ಹಸ್ತಿಗಣಕೆ ಪಂಚ ವಕ್ತ್ರರೆಂದೆನಿಸಿದ ಪೃಥ್ವೀಸುರಸೇವಿತ 1 ಪ್ರೀತಿಯಿಂದಲಿ ಗೋಪಿನಾಥನರ್ಚಿಸಿ ಸುಖ ತೀರ್ಥ ಗ್ರಂಥಕೆ ಸವ್ಯಾಖ್ಯಾತ್ರರೆಂದೆನಿಸಿದ 2 ಧರೆಯೊಳು ಶರಣರ ಪೊರಿವ ಕಾರ್ಪರನರ ಹರಿಯನೊಲಿಸಿದಂಥ ಪರಮ ಮಹಿಮರಾದ3
--------------
ಕಾರ್ಪರ ನರಹರಿದಾಸರು
ಭಜಿಸುವರ ಭಾಗ್ಯವೆ ಭಾಗ್ಯ ಭುವನದಲಿತ್ರಿಜಗದೊಡೆಯನು ರಾಮಕೃಷ್ಣ ರೂಪಿನಲಿರಲು ಪಶ್ರುತಿ 'ಧಿತ ನಿಯಮಗಳ ಮಾಡಿ ತದನಂತರದಿಶತಸಹಸ್ರರಿಗೊರೆದು ಕಾವ್ಯ ಪಾಠವನುಶ್ರುತಿಗಗೋಚರ ಕೃಷ್ಣ ಪಾದಪೂಜೆಯ ನಿತ್ಯಜಿತಮನಸ್ಕದಿ ರಚಿಸಿ ನಲಿವ ಮೂರ್ತಿಯನು 1ವೇದಾಂತ ಶಾಸ್ತ್ರವನು ವೇದ'ತ್ತುಗಳಿಂಗೆವಾದಗುಟ್ಟದ ತೆರದಲುಪದೇಶಗೈದುವೇದಶಾಸ್ತ್ರಾರ್ಥವನು ಸಾದರದಿ ಸಕಲರಿಗೆಬೋಧಿಸುವ ಸಂಸಾರಸಾಗರೋತ್ತಾರರನು2ರಾಮಾವತಾರದಲಿ ರಾಮನೆಂದೇ ನಾಮವಾಮೇಲೆ ದ್ವಾಪರದಿ ರಾಮ ಕೃಷ್ಣರೆಂದುನಾಮವೆರಡವರಿಂಗೆ ತನುವೆರಡು ಬಳಿಕೀಗರಾಮಕೃಷ್ಣನಾಮದಲಿ ಕಲಿಯುÀಗದಿ ಜನಿಸಿರಲು 3ಅವತಾರವೆಂಬುದುಪಚಾರವಲ್ಲಿದು ಕೇಳಿಭವನ ಪ್ರತಿಬಿಂಬ ಶ್ರೀ ಶಂಕರಾಚಾರ್ಯಭವದೂರ ಗುರುಮೂರ್ತಿ ಕೃತ ಗ್ರಂಥ ವ್ಯಾಖ್ಯಾನಕಿವರೆಂದು ಆನಂದ ಘನ ಸ್ವಪ್ನವಾಗಿರಲು 4ಅಜನ ಭಜನೆಯಲಜನು ತ್ರಿಜಗರಕ್ಷಾರ್ಥದಲಿಅಜನ ಪೌತ್ರತ್ವದಲಿ ನಿಜಸತಿಯ ನೆವದಿತ್ರಿಜಗ ಕಂಟಕ ರಾವಣನ ಮುರಿದು ಭಜಕರಿಗೆಅಜ ಪದ' ಮೊದಲಾಗಿ ಕೊಟ್ಟ ರಾಮನನು 5ಭೂ'ು ಭಾರವನಿಳುಹಲೆಂದು ನೇಮವ ಧರಿಸಿರಾಮನನುಜನು ತಾನು ಕೃಷ್ಣನೆಂದೆನಿಸಿಭೀಮ ಘಲುಗುಣ ಧರ್ಮ ಮುಖದಿ ಕೌರವ ಪಡೆಯಭೂ'ುಯಲಿ ನೆಲೆಗೊಳಿಸಿದಮಲ ಮೂರ್ತಿಯನು 6ಧರೆಗಧಿಕವೆಂದೆಂಬ ದೃಷದಪುರದಲಿ ನಿಂದುಶರಣಾಗತರ ಸಲ' ಮ'ಮೆಗಳ ಮೆರೆದುತಿರುಪತಿಯ ವೆಂಕಟನ ಪ್ರತಿಬಿಂಬ ಗುರುವರ್ಯಪರವಾಸುದೇವ ಶ್ರೀ ರಾಮಕೃಷ್ಣಾರ್ಯರನು 7ಓಂ ಪುಣ್ಯಾಯ ನಮಃ
--------------
ತಿಮ್ಮಪ್ಪದಾಸರು
ಯಾಕೆ ಸುಮ್ಮನೆ ಹೊತ್ತ ಕಳೆವಿರಿ ಲೋಕವಾರ್ತೆಯಲಿ ಶ್ರೀಕರನ ಸರ್ವತ್ರ ಸ್ಮರಿಸುತ ನಾಕ ಭೂಗತ ಸೌಖ್ಯ ಬಯಸದೆ ಏಕಚಿತ್ತದಿ ನಂಬಲನುದಿನ ಸಾಕುವನು ಸಕಲೇಷ್ಟದಾಯಕ ಪ. ಸ್ನಾನ ಜಪ ದೇವಾರ್ಚನ ವ್ಯಾಖ್ಯಾನ ಕರ್ಮಗಳು ದಾನ ಧರ್ಮ ಪರೋಪಕಾರ ನಿಜಾನುಪಾಲನವು ಏನು ಮಾಡುವುದೆಲ್ಲ ಲಕ್ಷ್ಮೀಪ್ರಾಣನಾಯಕ ಮಾಳ್ಪನೆಂದರಿ- ದಾನು ನನ್ನದು ಎಂಬ ಕೀಳಭಿಮಾನ ತಾಳದೆ ಧ್ಯಾನ ಮಾಡಿರಿ 1 ಪೊಟ್ಟಿಯೊಳಗಿಂಬಿಟ್ಟು ಚೀಲದಿ ಕಟ್ಟಿ ಬಿಗಿದಿರುವ ಕಾಲದಿ ಕೊಟ್ಟು ಬುತ್ತಿಯನಿಟ್ಟು ಬಾಯೊಳು ಧಿಟ್ಟ ತಾ ಪೊರೆವ ವಿಠಳ ಕರುಣಾಳು ಕಾಯನೆ ಥಟ್ಟನೊದಗುವ ತನ್ನ ದಾಸರ ಮಾಡುವ ರಾಜನಿರುತಿರೆ 2 ಪಾಪವೆಂಬುದೆ ಪಂಕಜಾಕ್ಷ ರಮಾಪತಿಯ ಮರವು ಪುಣ್ಯ ಕಲಾಪವೆಂಬುದೆ ಪೂರ್ವ ಗಿರಿವರ ಭೂಪತಿಯ ನೆನಪು ಈ ಪರಿಯ ಶ್ರುತ್ಯರ್ಥಸಾರ ಪದೇ ಪದೇ ಮನದಲ್ಲಿ ಗ್ರಹಿಸುತ ತಾಪ ಹೊಂದದೆ ಭೂಪರಂತಿರಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ರಾಘವೇಂದ್ರ ಗುಣಸಾಗರ ನೋಡೆನ್ನಹರಿಯ ತೋರಿನ್ನ ಪ ಮಂತ್ರಾಲಯದೊಳು ಮಂದಿರ ಮಾಡಿರುವಿ ಮನೆಮನೆಯಲ್ಲಿರುವಿಸಂತತಿ ಸಂಪತ್ತುಗಳನು ನೀ ಕೊಡುವಿಸಂತರ ರಕ್ಷಿಸುವಿತಂತ್ರ ದೀಪಿಕೆಯೆಂಬೊ ಗ್ರಂಥವರಚಿಸಿರುವಿ ಸೂತ್ರಾರ್ಥಗಳರುಹಿ 1 ಎಷ್ಟೋ ಗ್ರಂಥಗಳ ವ್ಯಾಖ್ಯಾನವ ಮಾಡಿದೇವಾರ್ಥವ ನೋಡಿಕೆಟ್ಟವಾದಿಗಳ ವಾದದಿ ಜಯಮಾಡಿಸೂರಿಗಳನು ಕೂಡಿಕುಷ್ಠಮದಾದಿ ರೋಗಗಳನು ಹರಿ ಬೇಡಿಕಳೆಯುವ ಗುರುಮೇಧಿ 2 ಒಂದು ಚರಿತೆಯ ಪೇಳಲು ನಾನರಿಯೆಇರುವೆನು ಈ ಪರಿಯೆನಂದಬಾಲನ ಪ್ರಿಯ ನೀ ಎನಗೊಲಿಯೆದುರಿತಾಬ್ಧಿಗೆ ಸರಿಯೇಇಂದಿರೇಶನ ಪದ ಸಂದರುಶನ ದೊರೆಯೆನಿನ್ನಯ ನಾ ಮರೆಯೆ 3
--------------
ಇಂದಿರೇಶರು
ವಂದಿಸು ಗುರು ಸತ್ಯಸಂಧ ಮುನಿಯಾ ವೃಂದಾವನಕೆ ಹರುಷದಿಂದ ಎಂದೆಂದು ಪ ಗಂಗಾ ಪ್ರಯಾಗ ಗಯಾ ಶ್ರೀಶೈಲಹೋಬಲ ಭು ಜಂಗಾದ್ರಿ ಮೊದಲಾದ ಕ್ಷೇತ್ರಗಳನು ಇಂಗಿತಜ್ಞರ ಸಹಿತ ಸಂಬಂಧ ಗೈಸಿ ವರಮಹಿಷ ತುಂಗಾತಟದಿ ವಾಸವಾಗಿಪ್ಪ ಯತಿವರಗೆ 1 ಭೂದೇವನುತ ಸತ್ಯಬೋಧ ಮುನಿವರ ಕರ ವೇದಿಕದೊಳುದ್ಭವಿಸಿದ ಕಲ್ಪವೃಕ್ಷ ಸಾಧುಜನರಿಗೆ ಬೇಡಿದಿಷ್ಟಾರ್ಥಗಳ ಮೋದದಿ ಕೊಡುವ ಮಹಿಮರ ಕಂಡು 2 ಶ್ರೀ ಮನೋರಮನ ಅತಿವಿಮಲತರ ಶಾಸ್ತ್ರ ನಾಮಾವಳಿಗೆ ಸುವ್ಯಾಖ್ಯಾನ ರಚಿಸಿ ಧೀಮಂತ ಜನರಿಗುಪದೇಶಿಸಿ ನಿರಂತರ ಧಾಮ ಜಗನ್ನಾಥ ವಿಠಲನ ಒಲುಮೆ ಪಡೆದವರಿಗೆ 3
--------------
ಜಗನ್ನಾಥದಾಸರು
ವ್ಯಾಸ ತತ್ವಜ್ಞರ ಚರಿಯಾ ಮನಕಾಶ್ಚರಿಯಾ ಪರಮಹಂಸ ಕುಲಜ ಭುವನೇಂಧ್ರರ ತನಯಾ ಪ ಶೇಷಗಿರೀಶ್ವರ ಕೃಪಯಾ ಐಜಿ ವ್ಯಾಸವೆಂಕಟ ನರ- ಸಿಂಹಾಭಿಧೇಯ ಭೂಸುರೋತ್ತಮರಿಗೆ ತನಯಾ ನೆನಿಸಿ ಭಾಸುರ ಕೀರ್ತಿಯ ಪಡೆದ ರಾಮಾರ್ಯ 1 ವೇಣಿ ಸೋಮಪುರ ನಿಲಯ ಪಾಹಿ ಆನತ ಜನಸುರಧೇನೋ ಮಾಂಕೃಪಯಾ ವೇಣು ಗೋಪಾಲನ ಪ್ರೀಯ ಎಂದು ಸೂರ್ಯ 2 ಕೇಳಿವರ ಮಹಿಮೆ ಅಪಾರ ಗದ್ ವಾಲ ಭೂಪಗೆ ಬಂದ ಭಯ ಪರಿಹಾರ ಪೇಳಲು ಶ್ಲೋಕಾರ್ಥಸಾರ ಕೃಷ್ಣಾ ಮೇಲೆ ಪ್ರವಹಿಸಲು ಓಡಿತು ಶತೃನಿಕರ 3 ಭೃಂಗ ತನ್ನ ನೇಮದಿಂದಲಿ ಶೇವಿಪರ ಭವಭಂಗ ಪರ ಬ್ರಹ್ಮ ನಾನೆಂಬೊ ದುರ್ಮತ ಗಜಸಿಂಗ4 ನಂದ ನಂದನ ಗುಣಸ್ತವನ ಮಾಳ್ಪ ನಂದ ತೀರ್ಥರ ಮತಾಂಬುದಿ ಶೀತ ಕಿರಣ ಒಂದಾರು ಜನರೊಳು ಕರುಣ ಕೃತ ಮಂದ ನಂದಿನಿ ವ್ಯಜನಾದಿ ವ್ಯಾಖ್ಯಾನ 5 ಘನ್ನ ಮಹಿಮ ಜಿತಕಾಮಾ ಅ- ರಣ್ಯ ಕಾಚಾರ್ಯ ಸೇವಿತ ಪದ ಪದುಮ ಶುಭ ಗುಣಸ್ತೋಮ ಮನವೇ ಬಣ್ಣಿಸಲೊಶವೆ ಪಂಚಾಮೃತ ಮಹಿಮಾ 6 ವಾಸುದೇವನ ಗುಣತತಿಯ ಪೇಳಿ ದಾಸ ಜನರಿಗೆ ಪಾಲಿಸಿದಿ ಸನ್ಮತಿಯಾ ಭಾಸುರ ಕುಸುಮೂರ್ತಿರಾಯ ನೆನಿಸಿ'ಶ್ರೀಶಕಾರ್ಪರ ನರಹರಿ’ ಗತಿ ಪ್ರೀಯ 7
--------------
ಕಾರ್ಪರ ನರಹರಿದಾಸರು