ಒಟ್ಟು 22 ಕಡೆಗಳಲ್ಲಿ , 13 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆ | ಕರುಣ ವಾರಿಧಿಯೆ | ಧೊರೆಯೇ |ವರ ಚರಣ ಸೇವೆಯನು ಕೊಡು ಹರಿಯೇ ಪ ಗಾಂಗೇಯ | ಶರದಿ ಸೆಣೆಸಲು ಅಂದುಸರಸದಲಿ ನೀ ಅವನ | ಪೊರೆಯಲಿಲ್ಲವೆ ಎಂದು 1 ದುರುಳ ದುಶ್ಯಾಸನ | ಸೀರೆ ಸಭೆಯಲಿ ಸೆಳೆಯೇತರಳೆ ಪಾಂಚಾಲೆ | ಓಲೆ ಕಳುಹಿದಳೆ ಹರಿಯೆತರುಳೆ ಕೈಗಾಯ ಬೇಕೆಂದು | ನಿನ್ನ ಧೊರೆಯೇಎರಳಾಕ್ಷಿಗಕ್ಷಯ್ಯ | ವಸನಿತ್ತೆ ಹರಿಯೇ 2 ಅಂದು ಬಲತಾಯಿ ಬಾಲಕನ | ತೊಡೆಯಿಂದ ನೂಕೇ |ಬಂದು ಕಾನನಕೆ ತಪಗೈದ | ತರಳನನು ಕಾಯ್ದೇ |ಇಂದು ನಾ ಮಾಡಿದಪರಾಧ | ವೇನಯ್ಯ ಹರಿಯೇ |ಕಂದನಪರಾಧ ಎಣಿಸುವಳೆ | ತಾಯಿ ಧೊರೆಯೇ3 ಗೌತಮರ ಮಡದಿಯನು | ಕಾಯಲಿಲ್ಲವೆ ಹರಿಯೆಔತಣವ ಕೊಟ್ಟು ಬರ | ಹೇಳಿದಳೆ ಧೊರೆಯೇ ||ವೀತಶೋಕನೆ ಎನ್ನ | ಮೊರೆ ಕೇಳಿಸದೆ ಹರಿಯೇಔತಪ್ರೋತ ನೀನೆಲ್ಲವನು | ತಿಳಿದಿರುವೆ ಧೊರೆಯೇ 4 ಬಲಿಯ ಯಾಚಿಸುತ | ನೀ ಅವನ ವಂಚಿಸಿದಿ ಹರಿಯೆತಲೆ ಬಾಗಲಲಿ ನಿಂದು | ನೀ ಅವನ ಪೊರೆದೆ ಧೊರೆಯೆಸಲೆ ಬೀದಿ ಬೀದಿಯಲಿ | ನಾ ಕೀರ್ತಿಸುವೆ ಹರಿಯೇಬಲು ದಯಾಪರ ಗುರು | ಗೋವಿಂದ ವಿಠಲೆಂದು ಧೊರೆಯೆ 5
--------------
ಗುರುಗೋವಿಂದವಿಠಲರು
[ನಿನ್ನ ಭಕ್ತರಿಗೆ ಭವದ ದೋಷವಿಲ್ಲ ಸರ್ವ ಕರ್ತೃ ಸ್ವತಂತ್ರ ಹರಿಯೇ, ನೀನೆ ಪ್ರೇರಿಸಿ ಭಕ್ತರಿಂದ ಅಪರಾಧ ಮಾಡಿಸಿ ಹೊಣೆಗಾರರನ್ನು ಮಾಡಿ ದಣಿಸದಲೆ ಕ್ಷಮಿಸಿ ಚಿತ್ತದಲಿ ಪೊಳೆ ಎಂದು ಪ್ರಾರ್ಥನಾ.] ಧ್ರುವತಾಳ ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲವಿಪರೀತವೇನಯ್ಯ ಎನ್ನಂದಿಲಿಅಪರಿಮಿತ ಸ್ವಾತಂತ್ರವುಳ್ಳ ಕರ್ತುತ್ವದಿಂದಕೃಪಣರ ಬಾಧೆಗೆ ಯತನವೇನೋವಿಪುಳ ಐಶ್ವರ್ಯದಿಂದ ಸ್ವಾಮಿ ನೀನಾದರೂಸುಪಥ ನಡಿಯದಿಪ್ಪ ಕುಜನರನ್ನತಪುತ ದುಃಖದಲ್ಲಿ ನಿಯಾಮಿಸುವಿಯೆಂದುಅಪೌರುಷೇಯವಾದ ಶ್ರುತಿಯು ಪೇಳೆಖಪತಿ1ಯು ಬಾಧಿಪದಕೆ ಕಾರಣವೇನುಂಟುಉಪಗೂಢ2 ಕರುಣಿಯೇ ತಿಳುಹಬೇಕುಕ್ಲಿಪುತ ರಹಿತವಾದ ವಪುಗಳು ಬರಲೇಕೆಶಪಥ ಉಂಟು ನಿನ್ನ ಬಿಡೆನೆಂದೂಉಪರಿಯಿನ್ನು ಉಂಟು ಅಪರಾಧವೇನು ತಿಳಿಯೆನೃಪತಿ ಹೀನವಾದ ಸತಿಯನೊಲಸೆಉಪಮ ರಹಿತವಾದ ಸಥೆ ಮಾಳ್ಪ ತೆರದಂತೆಚಪಲನಾದರು ಇದನು ಪೋಗದೆಂದು ರಿಪು ಕುಲ ದಲ್ಲಣನಾದ ಪಿತನ ಭಯಕೃಪೆಗೆ ವಿಷಯನಾದ ಸುತರಿಗೆ ನೀನುಅಪಾರ ಗುಣನಿಧೆ ಇನಿತು ಮಾತೆ ಹೊರತುಕುಪಿತನಾಗುವದಕ್ಕೆ ಕೃತ್ಯವಿಲ್ಲಶಪಥ ರೂಪನೆ ನಿನ್ನ ಆಜ್ಞ ಪಾಲನೆ ಮುಖ್ಯಸಫಲವಲ್ಲದೆ ಮತ್ತೊಂದಧಿಕವಿಲ್ಲ ಅ-ನುಪಮ ಸಾಧನ ಇದೆ ಇದೆ ಸಿದ್ಧವೆಂದುವಿಪ ಅಹಿಪಾದ್ಯರು ಮಾಳ್ಪುದಾಗಿ ಸುಪವಿತ್ರವೆನಿಪ ಸತ್ವಬೋಧಿತನಾಗಿ ಹರಿಕ್ಷಿಪಣರ1 ವ್ಯಾಪಾರನಿಂದಾದಕ್ಕೆಸ್ವ ಪಕ್ಷದವರನ್ನು ವೊಹಿಸದಲೆ ಕಡಿಗೆ ಪ-ರ ಪಕ್ಷದವರೆಲ್ಲ ನುಡಿದ ನುಡಿಗೆ ಅಪಹಾಸ ಮಾಡಿದಿ ಅಭಿಮಾನವಿಲ್ಲದಲೆಆಪ್ತನೆಂಬೊ ಮಾತು ಉಳಿಸದಲೆತಪನವಾದ ಭವದಿ ತಂದು ಕ್ಲೇಶವ ಬಡಿಸಿಅಪಹೃತವಾದ ಜ್ಞಾನ ಮಾಡಿದೆನಗೆಉಪಕಾರವೇನು ನಿನ್ನ ಮಾತು ಕೇಳಿದದಕೆಈ ಪರಿ ಮಾಡದಿರು ನಂಬಿದವರತಪುತ ಸುವರ್ಣ ವರ್ಣ ಗುರು ವಿಜಯ ವಿಠ್ಠಲರೇಯಯಃ ಪ್ರಾಣದಾತಿ ಮದ್ಭಕ್ತನೆಂಬೋದು2 ಸತ್ಯ ಮಾಡು 1 ಮಟ್ಟ ತಾಳ ಪ್ರೌಢ ಕರ್ಮದಿ ನಿನ್ನ ಪ್ರೀತಿಯ ಎನಸಲ್ಲಕೀಡ ಕರ್ಮ3 ನರಕವೆಂದೆಂಬೋಸು ಅಲ್ಲಮಾಡು ಎಂದವರನ್ನು ಬಿಡುವರೆ ಮಹಾಪಾಪಬೇಡ ಎಂದದರನ್ನ ಮಾಡುವದೆ ದೋಷಈಡಿಲ್ಲವೋ ನಿನ್ನ ಮಹಿಮೆಗೆ ಏನೆಂಬೆ ರೂಢಿಗಾಗಿದೆ ನೋಡು ದ್ರೋಣನ ವಧೆಗಾಗಿ ನೀ-ನಾಡಿದ ಉಕುತಿಯನು ಗ್ರಹಿಸದ ಕಾರಣದಿ ನೋಡಿಸಿದಿ ನರಕ ದುಃಖವ ಧರ್ಮಜಗೆಗೂಢ ಬಲ್ಲವರಾರು ನಿನ್ನ ಪ್ರೀತಿಯು ಧರ್ಮಗಾಢ ಭಕುತರೆಲ್ಲ ಇದೆ ಮಾಡುವರಾಗಿಕ್ರೋಧ ಮೂರುತಿ ಗುರು ವಿಜಯ ವಿಠ್ಠಲರೇಯಆಡಿದ ವಚನಗಳು ಸಕಲ ಸಾಧನವೆನಗೆ 2 ತ್ರಿವಿಡಿತಾಳ ಅರಸು ತನ್ನ ನಿಜ ಪರಿಚಾರ ಜನರಿಗೆಸರಿ ಬಂದ ಕಾರ್ಯದಲಿ ನಿಲ್ಲಿಸಲುನರರಿಗುಂಟೇನಯ್ಯ ವಿಹಿತಾವಿಹಿತದ ಭಯಧರಣಿಪತಿಯ ಪ್ರೀತಿ ಒಂದೇ ಹೊರ್ತುಸರಸಿಜ ಹರಿಭವ ಸುರಪಾದಿ ನಿರ್ಜರರುಹರಿಯೆ ನಿನ್ನಾಜ್ಞವ ಪಾಲಿಪರೋಸರಸಿಜಾಂಡವನ್ನು ನಿಯಾಮಿಸಿ ಒಂದೊಂದುಪರಿಯ ವ್ಯಾಪಾರದಲ್ಲಿ ನಿಲ್ಲಿಸಲೂಪರಮಾಣುಗಳ ಸ್ಥೂಲ ಸೃಷ್ಟಿ ಸ್ಥಿತಿಯ ಮಾಡಿತರುವಾಯ ಲಯದಲ್ಲಿ ಅಭಿಮುಖರುಪರಮ ಭಯಂಕರವಾದ ಕಾರ್ಯಗಳಿಂದಕರುಣವಿಲ್ಲದಲೆ ಖಂಡ್ರಿಪರು ಈತೆರದಿ ಮಾಡುವರಿಗೆ ಪಾಪ ಪುಣ್ಯವೇನುಧೊರಿಯೆ ನಿನ್ನಯ ಪ್ರೀತಿ ಒಂದಲ್ಲದೆಮರಳೆ ಸಂದೇಹವಿಲ್ಲ ``ಭೀಷಾಸ್ಮಾದ್ವಾತಃ ಪವತಿ’’ವರಲುತಿವೆ ವೇದ ಅಂತವಿಲ್ಲಸುರಲೋಲ ಮಹಧೃತಿ ಗುರು ವಿಜಯ ವಿಠ್ಠಲರೇಯಾಶರಣರ್ಗೆ ಕರ್ಮಗಳ ಲೇಪ ಉಂಟೆ 3 ಅಟ್ಟತಾಳ ಸತಿ ಕರ್ಮ ಕೊರತೆ ಮಾಡೆಪಾತಿವ್ರತಕೆ ದೋಷಕೆ ಎಂದಿಗಾದರೂ ನೋಡಾಸ್ತೋತ್ರ ಮಾಡುವಾಗ ಶಬ್ದ ಡೊಂಕಾಗಲು ಪಾ-ರತ್ರಿಕವಾಗುವ ಪುಣ್ಯಕ್ಕೆ ದೋಷವೆಸೂತ್ರನಾಮಕ ನಿನ್ನ ಆಜ್ಞವ ನಡಿಸುವಭಕ್ತರಿಗೆ ಉಂಟೇನೊ ಭವದೋಷವನ್ನುಕ್ಷೇತ್ರ ಮೂರುತಿ ಗುರು ವಿಜಯ ವಿಠ್ಠಲರೇಯಾ ಧಾ-ರಿತ್ರಿಯೊಳಗೆ ನಿನ್ನವಗೆ ದೋಷವೇನೊ 4 ಆದಿತಾಳ ಒಂದಪರಾಧ ಉಂಟು ವಂದಿಪೆ ತಲೆಬಾಗಿಇಂದಿರೆ ಮೊದಲಾಗಿ ಶ್ವಾಸ ಬಿಡಿಸೊ ಶಕ್ತಿಎಂದಿಗೆ ಬಾರದು ನಿನ್ನ ಹೊರತಾಗಿ ಸಿಂಧುಜ1 ಮೊದಲಾದ ಸುರರಲ್ಲಿ ನೀನಿಂದುಚಂದ ಚಂದದ ಕಾರ್ಯ ಮಾಡಿಸಿ ಭಕ್ತರ್ಗೆಪೊಂದಿದ ಘನತೆಯು ನಿನ್ನದಲ್ಲದೆ ಅನ್ಯ-ರಿಂದಲಿ ಮಾಳ್ಪ ಕೃತ್ಯ ಎಳ್ಳಿನಿತಿಲ್ಲವೆಂದುಮಂದಮತಿಗನಾಗಿ ತಿಳಿಯದೆ ಅಹಂಕಾರಬಂದೊದಗಲು ಅದರನ್ನೆ ಅತ್ಯಭಿವೃದ್ಧಿ ಮಾಡಿತಂದು ಈ ಲೋಕದಿ ಬಂಧನ ಮಾಡಿಸಿದಿತಂದೆ ನಿನಗೆ ಇದು ಪರಮ ಸಮ್ಮತವಾಗೆ ಎ-ನ್ನಿಂದಾಗುವದೆ ಮೋಚನ ಮಾರ್ಗವಒಂದು ತೀರಿಸ ಬಂದು ಹನ್ನೊಂದು ಗಳಿಸಿಕೊಟ್ಟಿಬಂಧು ಅನಿಮಿತ್ಯನಾದದ್ದು ನಿಜವಿತ್ತೆಕುಂದುಗಳೆಣಿಸದೆ ಪಾಲಿಪದೆನ್ನನುಮಂದರಧರ ಗುರು ವಿಜಯ ವಿಠ್ಠಲರೇಯಾಇಂದು ಎಂದೆಂದಿಗೆ ನೀನೆವೆ ಗತಿಯೊ 5 ಜತೆ ಭಕತರ ಅಪರಾಧವೆಣಿಸದಲೆ ತ್ವರಿತದಿ ಚಿತ್ತಮುಕುರದಲಿ ಪೊಳೆಯೊ ಗುರು ವಿಜಯ ವಿಠ್ಠಲರೇಯಾ || [ವಿಷನಾಮ ಸಂ|| ಮಾರ್ಗಶೀರ್ಷ ಶುದ್ದ 8]
--------------
ಗುರುವಿಜಯವಿಠ್ಠಲರು
ಆತ್ಮನಿವೇದನೆ ಆವಗತಿ ಎನಗೆ ವೈಕುಂಠಪತಿಯೆ | ಕಾವ ಕರುಣಿಯೆ ಸರ್ವದೇವರ ದೇವ ಪ ಉದಯದಲಿ ಎದ್ದು ನಿನ್ನ ನಾಮವೆನ್ನದೆ | ಉದರಕಿನ್ನೇನು ಮಾಡಲಿ ಎನ್ನುತಾ | ಕÀದಗಳಾ ಸರಸುತ್ತ ಕಂಡಲ್ಲಿ ತಿರುಗಿದೆ | ಮದ ಗರ್ವದಲಿ ಬಾಳ್ವ ಮನುಜ ಶಿರೋಮಣಿಗೆ 1 ಧನವ ಘಳಿಸವ ವಾತ್ಸಲ್ಯವಲ್ಲದೆ ಸಾ | ಧನಕೆ ಒಮ್ಮೆ ಮನಸ್ಸು ಎರಗಲಿಲ್ಲಾ | ಮನುಜರೊಳಗೆ ಖ್ಯಾತಿಯಾಗುವೆನೆಂಬೊ | ವೇ | ದನೆ ಮಿಗಿಲಲ್ಲದೆ ಭಕುತಿ ಮತ್ತಿಲ್ಲ 2 ಒಬ್ಬರಕಿಂತಲಧಿಕನಾಗುವೆನೆಂದು | ಉಬ್ಬಿ ಪರರಾ ಸೇವೆಯನು ಮಾಡುವೆ | ಹಬ್ಬಿದ ಪಾಪದ ಸರವಿಗೆ ಉರುಲು ಬಿದ್ದು | ಸುಬ್ಬ್ಬಿದ ಸುಕೃತವ ಕಳಕೊಂಡೆನಯ್ಯಾ 3 ಪೂರ್ವದಲಿ ಉಂಡ ದು:ಖಗಳೆಲ್ಲ ಮರೆದು | ಸರ್ವದಾ ಗರ್ವದಲಿ ಸಜ್ಜನರ ಕೆಡನುಡಿದು | ಉರ್ವಿಯೊಳು ಬಲು ಬಲವಂತನೆನಸೀ | ಸರ್ವದಾ ಸರ್ವ ನರಕಂಗಳಲಿ ಬಿದ್ದು ಹೊರಳಿದೆನು4 ಇನ್ನಾದರೂ ದುರ್ಬುದ್ಧಿಯನ್ನು ಬಿಡಿಸಿ | ಕರವ ಬಿಡದೆ | ಪತಿ ವಿಜಯವಿಠ್ಠಲರೇಯಾ | ಎನ್ನ ಭಾವವು ನಿನ್ನದಲ್ಲವೇನಯ್ಯಾ5
--------------
ವಿಜಯದಾಸ
ಎನ್ನಳವೇನಯ್ಯ ಬಣ್ಣಿಸಲು ನಿನ್ನ ಉನ್ನತ ಮಹಿಮ ಶ್ರೀ ಪನ್ನಂಗಶಯನ ಪ ಗುಪಿತ ನೀ ವೇದಾಗಮಾತೀತ ಆದಿಮಧ್ಯಂತಿಲ್ಲದಾ ನಾದಿ ವಸ್ತುವೆ ಸ್ವಾಮಿ 1 ಗಣನೆಯಿಲ್ಲದ ಕಾಲು ಎಣಿಕೆಯಿಲ್ಲದ ಹಸ್ತ ಗುಣಿತಕ್ಕೆ ಮೀರಿದ ಅ ಗಣಿತಮುಖಬ್ರಹ್ಮ 2 ಶಿಷ್ಟ ಶ್ರೀರಾಮ ಭಕ್ತ ರಿಷ್ಟದಾಯಕನೆಂದು ನಿಷ್ಠೆಯಿಂ ಪಾಡ್ವೆ 3
--------------
ರಾಮದಾಸರು
ಛಲ ಮಾಡುವ ಲೀಲೆಗಳರಿನ್ನಾರನು ಕಾಣಿನೊ | ತ್ಸಲನೆಂಬೊ ನಾಮವನು ಧ್ವಜವೆತ್ತಿ ಮೆರವುವದೊ ಪ ಅತಿಶ್ರೇಷ್ಠನಾಗಿ ಕೀರ್ತಿ ಪಡೆÀದು ಪಸರಿಸಿ | ಪ್ರತಿಯಿಲ್ಲ ಎನಿಸಿಕೊಂಬೆ ನಾ | ಸತತವನು ಪರರಾಶೆ ಮಾಡದಲೆ | ಚತುರತನ ಚತುರೋಪಾಯದಿ ಬಾಳುವೆ | ಕ್ಷಿತಿಯೊಳಗೆ ಅಭಿಮಾನ ಕ್ಷಿತಿಯಾಗದಂತೆ ಸು | ಮತಿಗಳಿಂದಲಿ ಬದುಕುವೆ | ಸುತ ಸಹೋದರ ನಡುವೆ | ಅತುಳ ಬಲವಂತನೆನೆಸುವೆನೆಂದು ಇದ್ದೆನಲ್ಲನೆ 1 ಜಡದೇಹವನು ಮೆಚ್ಚಿ ಮುಪ್ಪು ದೂರೆಂತೆಂದು | ಕಡು ಸಾಹಸವ ತಾಳಿದೇ ಒಡಿಯರಾರೆನಗಿಲ್ಲ ಒಬ್ಬರಿಗೆ | ಒಡಿಯನೆಂದು ಎಡೆಎಡೆಗೆ ಪೇಳಿಕೊಂಬೆ | ಮಡಗಿ ಧನವನು ಧರ್ಮ ಕೊಡದತೀ ಕೃಪಣನಾಗಿ | ಪಡವೆ ಸಂಸಾರವೆಂಬೊ ಅಹಂಕಾರವನು ತಾಳಿ | ಎಡಹಿ ಮುಂಗಾಣದ ಅಧಮನಂತೆ ಇದ್ದೆನಲ್ಲದೆ 2 ಪುರುಷ ಪಟಾಂತ್ರದವನಾಗಿ ಎಲ್ಲ | ಧಿಕ್ಕರಿಸಿ ನಿರಾಕರಿಸುವೆ | ಜರೆದು ನಿಷ್ಕರುಣದಲಿ | ವರ ಅಭ್ಯಾಗತಿಗಳನು | ಹುರುಳಗೆಡಿಸಿ ನೋಡುವೆ | ಗುರು ಹಿರಿಯರನು ಮರುಗುವಂತೆ ಕೇಡು ನುಡಿದು ಉ | ತ್ತರ ಅನುತ್ತರನಾಡುವೆ | ಪರಿಪರಿಯ ಮಾಯದ ಶರಧಿಯೊಳು ಬಿದ್ದು ಲಜ್ಜಿ ಉರಿಯೊಳಗೆ ಪೊಕ್ಕಂತೆ ಮರುಗುತ್ತಿದ್ದನಲ್ಲವೆ 3 ಅಪರಾಧವೇನಯ್ಯಾ ವಿಪರೀತ ತೋರದೆ | ಅ | ಪರಿಮಿತ ಪರಮಹಿಮನೆ | ಉಪಕಾರಕ್ಕಪಕಾರವೊ | ನಿಪುಣತನವಿರಲಿಲ್ಲವೊ | ಸಪುತೆರಡು ಲೋಕದೊಳಗಾನೆಂದು ಇದ್ದೆನಿಲ್ಲವೊ | ವಿಪುಳ ವೈಕುಂಠ ತೊಲಗಿಸದೆ ಸುಮ್ಮನಿರಬಲ್ಲನೆ4 ಪರದೈವ ನಾನೆಂದು ಪೇಳುವರ ಗಂಡನೆ | ಸರಿಗಾಣೆ ಈ ಮಹಿಯೊಳು | ಪತಿ | ಕರಿಸಿ ನಿಜಕರವ ಪಿಡಿಯಾಡದೆ | ಪರಮೇಷ್ಠಿ ಹರಿದು ತಲ್ಲಣಿಸಿ ನೆರದು ಭೀಕರಗೊಂಬರು | ಪರಮಾಣು ರೂಪ ಭಕ್ತರ ಪರುಶ | ಸಿರಿ ವಿಜಯವಿಠ್ಠಲ ವರ ವೆಂಕಟನೆ | ಶರಣಜನ ಪರಿವಾರ5
--------------
ವಿಜಯದಾಸ
ತಪ್ಪು ನೋಡುವರೇನೋ ಕೃಪಾಸಿಂಧು ಶ್ರೀಗುರು ಒಪ್ಪಿಸಿಕೊಂಡರೆ ತಪ್ಪಾರಿಸುವರೆ ಧ್ರುವ ಒಡಲಹೊಕ್ಕವರವಗುಣವ ನೋಡುವರೇನೊ ಒಡಿಯನೆಂದವರ ತಾ ಕೈಯ್ಯ ಬಿಡುವರೆ ಮಡದಿ ಮಕ್ಕಳೆನಿಸಿ ಕಡೆಗಣ್ಣ ನೋಡುವರೆ ಒಡುಹುಟ್ಟಿದವರಿಗೆರಡ ಬಗೆವರೇನಯ್ಯ 1 ಬಡವರ ಮಕ್ಕಳ ಮಡುವಿನೊಳು ಧುಮುಕಿಸಿ ಕುಡಗೋಲ ಕುಂಬಳ ಕೊಟ್ಟವರ ಕೈಯ್ಯ ಒಡನೆ ಹೋಳುವದುಚಿತವೇನಯ್ಯ 2 ಬಡವನಾಧಾರಿ ಎಂದು ನಾ ನಿಮ್ಮ ಪೊಡವಿಯೊಳು ಶ್ರೀಪಾದ ದೃಢದಲಿ ನೋಡು ಕರುಣಾಲೆನ್ನ ನೀಡಿ ಅಭಯ ಹಸ್ತದಿ ಮೂಢ ಮಹಿಪತಿಗೆ ಕಡೆಗಾಣಿಸುವುದೈಯ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಟ್ಟ ಮುತ್ತಿನ ಸರವ ಕೊರಳೊಳಿಟ್ಟು ನೋಡುತಪುಟ್ಟ ಪುಟ್ಟ ಪಾದದಿಂದ ದಟ್ಟಡಿಯನಿಕ್ಕುತಅಟ್ಟಟ್ಟು ಕರೆದರೆ ಬಾರದೆ ಅಂಬೆಗಾಲನಿಕ್ಕಿ ಕೊಡವುತತಿಗೂಳುಗುಳೆಂದು ಮುಟ್ಟಿ ನಲಿದಾಡುತ ತಟ್ಟೆಗೆ ಮುಚ್ಚಿಗೆಯೆಂದುತಟ್ಟನೆ ಕೈಯನಿಡುತ ಪುಟ್ಟಮಕ್ಕಳೊಡನೆ ಚಂಡಾಡಿನಲಿದಾಡುವ ದಿಟ್ಟರಂಗಯ್ಯ 1 ರನ್ನ ದುಂಗುರ ಪದಕ ತಾಳಿಯನ್ನು ಹಾಕುವೆಸಣ್ಣ ಮಕ್ಕಳ ಕೂಡೆಲ್ಲಾ ಚಿನ್ನಿಕೋಲನಾಡುತಕನ್ನೆವೆಣ್ಣುಗಳ ಕಂಡು ಕಣ್ಣ ಸನ್ನೆ ಮಾಡುತಕಣ್ಣಮುಚ್ಚಾಲೆ ಆಟವ ಆಡಿ ನಲಿದಾಡುತ ತಾಹೊನ್ನ ಹಿಡಿ ಹೊನ್ನಾಟವನಾಡುತ ಶ್ರೀರಂಗಧಾಮ ಪನ್ನಗಶಯನ 2 ಕಾಲಿನಂದುಗೆ ಘಲಿರೆನೆ ನಳಿತೋಳನಾಡುತಬಾಲೆಯರ ಕೂಡೆ ಬಹು ಲೀಲೆಯ ಮಾತಾಡುತಶಾಲೆಗಳ ಸೆಳದು ಮರದ ಮೇಲೆ ಕುಳಿತು ನೋಡುತಹಾಲು ಬೆಣ್ಣೆ ಕಳ್ಳನೆಂಬ ದೂರುಗಳ ಕೇಳುತಲೋಲಾಕ್ಷಿಯರೊಳನಿಂಥಾ ಜಾಲಿಗಳ ಮಾಡುವ ಬಾಲಗೋಪಾಲ3 ಕಂಡು ನಿನ್ನನು ಪ್ರೇಮದೊಳಪ್ಪಿಕೊಂಡು ನೋಡುವೆಹಿಂಡು ಬೊಗರಿಲಿತ್ತಲಿಗ್ಗೆ ಚಂಡ ಕೊಡುವೆ ಬಾರಯ್ಯಭಂಡಿಯನೊದದ ಪಾದಪದುಮವನ್ನೇ ತಾರಯ್ಯಗುಂಡುವಾನಿಟ್ಟ ನಳಿ ತೋಳನೊಮ್ಮೆ ತೋರಯ್ಯಪುಂಡಲೀಕಾಕ್ಷಿಯರು ನಿನ್ನ ಕಂಡರೆ ಸೇರರೂ ಕೃಷ್ಣ4 ಕರದ ಕಂಕಣ ಝಣರೆನಲು ಮುಂಗುರಳ ತಿದ್ದುತಕರದ ಕಂಬಾಲಿನೆಲ್ಲವ ಸುರಿದು ಸೂರೆ ಮಾಡುತತರುಣಿಯರು ನೋಡಲವರ ಪುರುಷರಂತೆ ತೋರುತಸರಸವಾಕಿನಿಂದಲವರ ಮರುಳು ಮಾಡಿ ಕರವುತಸರಿಯ ಮಕ್ಕಳೊಡನೆ ಜೊಲ್ಲು ಸುರಿಸುತ ಮಾತಾಡುವಂಥಾ ಸರಸಗೋಪಾಲ 5 ಮರುಗ ಮಲ್ಲಿಗೆ ಸಂಪಗೆಯ ಪೂಸರವ ಮುಡಿಸುವೆಕೊರಳ ಮುತ್ತಿನ ಸರವ ನಿನಗೆ ಕರದು ಕೊಡುವೆಬಾರಯ್ಯ ಅರಳೆಲೆ ಮಾಗಾಯನಿಟ್ಟ ಸಿರಿಮುಖವತೋರಯ್ಯ ಪರನಾರಿಯರೊಡನಿಂಪಾಸರ ಛಂದವೇನಯ್ಯಪುರದ ನಾರಿಯರ ಕೂಡೆ ಸರಸವನಾಡು ಉಡುಪಿಪುರದ ಶ್ರೀಕೃಷ್ಣ 6 ಅಂದುಗೆ
--------------
ಕೆಳದಿ ವೆಂಕಣ್ಣ ಕವಿ
ಬಾರಯ್ಯ ಸ್ವಾಮಿ ಬಾರಯ್ಯ ಪ ಬಾರಯ್ಯ ಮುಖವನ್ನು ತೋರಯ್ಯ ತವಪಾದ ವಾರಿಜನಂಬಿದೆ ಮಾರಜನಕ ಬೇಗ ಅ.ಪ ಎಷ್ಟಂತ ಬಳಲಲಿ ನಾನು ಸಂಸಾರ ಕಷ್ಟದ ಕಾಡಿನೊಳಿನ್ನು ಧ್ವಂಸಾಗಿ ಭ್ರಷ್ಟತನದಿ ಬಾಳುವೆನು ಕಂಸಾರಿ ಇಷ್ಟುದಯವು ಬರದೇನು ಆಹ ಶಿಷ್ಟಜನುಮವೆಂದು ಅಟ್ಟಿ ಎನ್ನನು ಇಂಥ ಕೆಟ್ಟ ಬವಣೆಗೆ ಬಲಿಗೊಟ್ಟು ಬಿಡುವರೆ ಈಶ 1 ಜನನಿಜಠರದಲಿ ಎನ್ನ ಏನೆಂ ದೆನುತ ನೂಕಿದಿ ಪೇಳು ಮುನ್ನ ಸಾನಂದನುಪಮನು ತವಚರಣ ಆನಂದನುಕೂಲವಾದಂದಿಲ್ಲೇನ ಆಹ ಅನುಚಿತ್ತವೇನಯ್ಯ ದಿನವು ಪೋಯಿತು ಅರ್ಧ ಮನಕೆತರದಲಿಹಿ ಜನಕನೆ ಕರುಣದಿ 2 ಭಕ್ತವತ್ಸಲನೆಂಬ ಬಿರುದು ಮಾಜ ದ್ಹೊತ್ತು ನಿಖಿಲ ನೀನೆ ಬೆರೆದು ತ್ರಿಜ ಗೆತ್ತಿ ಆಳುವಿ ಮನವರಿದು ನೈಜ ದಿತ್ತು ಪೊರೆವಿ ಭಯತರಿದು ಆಹ ಕರ್ತನೆ ತವಪಾದ ಮರ್ತಿರಲಾರಿನ್ನು ತುರ್ತು ದಯವಾಗೆನ್ನೊಳರ್ತಿಯಿಂ ಶ್ರೀರಾಮ 3
--------------
ರಾಮದಾಸರು
ಬೀದಿಯೊಳು ಯಾತರಾ ನಂಟು ಬೇಡ ದಮ್ಮಯ್ಯ ಪ ಭೇದಿಸಿ ನೋಡುವರುಂಟು ಬೆಂಬತ್ತಿ ಬಾರದಿರಯ್ಯ ಅ ಕಂಡ ಕಂಡ ಠಾವಿನಲಿ ಕಣ್ಣೆತ್ತಿ ನೋಡದಿರಯ್ಯಕಂಡಿಯೊಳು ಕೈಸನ್ನೆ ಮಾಡದಿರಯ್ಯಗಂಡನುಳ್ಳವಳ ಜೊತೆ ಭಂಡಾಟವ್ಯಾಕಯ್ಯಕೊಂಡೆಗಾತಿಯರುಂಟು ದುಡುಕದಿರಯ್ಯ 1 ಬೇಳುವೆಯ ಮಾತಾಡಿ ಗಾಳ ಹಾಕದಿರಯ್ಯಬಾಳೆ ಹಣ್ಣಿಗೆ ಕೊಡಲಿ ಬೇಕೆ ದಮ್ಮಯ್ಯಆಳುವ ಅರಸಾಗಿ ನಿನಗಾವ ಬರವಯ್ಯಮೇಳದವರ ಬಿಟ್ಟು ಮೇರೆದಪ್ಪುವರೇನಯ್ಯ 2 ನೋಡುವರು ಜನರೆಲ್ಲ ನಾಚಿಕೆ ಇಲ್ಲವೇನಯ್ಯಜೋಡು ಕಳಸವ ಹಿಡಿಯದಿರು ಜೋಕೆ ದಮ್ಮಯ್ಯಮಾಡುವ ದೈನ್ಯ ಬಲ್ಲೆ ಮದ್ದೂರು ನರಸಿಂಹಯ್ಯಕೂಡಿದ ಕನಕನಾದಿಕೇಶವ ನೀನಹುದಯ್ಯ 3
--------------
ಕನಕದಾಸ
ಭಕ್ತವತ್ಸಲನೆಂಬ ಬಿರುದು ನಿನಗಿರಲು ಭಕ್ತಜನಾಪತ್ತಿಗ್ಯಾಕೆ ನೀ ಬರದಿರುವಿ ಪ ಮುಕ್ತಿದಾಯಕನೆಂಬ ಯುಕ್ತ ಬಿರದ್ಹೊತ್ತಿರುವಿ ಚಿತ್ತಜಪಿತ ಭಕ್ತರ್ಹೊತ್ತಿಗ್ಯಾಕಿಲ್ಲೋ ನಿತ್ಯ ಬಿಡದ್ಹೊಗಳುವ ಸತ್ಯ ವೇದೋಕ್ತಿಗಳು ವ್ಯರ್ಥವೇನಯ್ಯಾ 1 ದೋಷನಾಶನೆ ನಿನ್ನ ಸಾಸಿರನಾಮಗಳಿಂ ಘೋಷಿಪರು ಮನುಮುನಿ ಬೇಸರಿಲ್ಲದಲೆ ದಾಸಜನರಾಶಕ್ಕೆ ಬೇಸತ್ತ ಬಳಿಕ ನಿನ ಗೀಸು ಬಿರುದುಗಳಿರ್ದು ಲೇಶವೇನಯ್ಯಾ 2 ಪರಮ ಕರುಣಾಕರ ಶರಣಜನಮಂದಾರ ಚರಣಸ್ಮರಿಪರ ಘೋರದುರಿತಪರಿಹಾರ ಖರೆಯಿರ್ದರಿಗೆನ್ನ ದುರಿತಮಂ ಪರಿಹರಿಸಿ ಕರುಣದಿಂ ರಕ್ಷಿಸೈ ಧರೆಗಧಿಕ ಶ್ರೀರಾಮ 3
--------------
ರಾಮದಾಸರು
ಮದಕರಿಯ ಕವಳವಾದೆನೆಲೆ ದೇವ ಮದನಪಿತನುಳುಹದಿರೆ ಗತಿ ಯಾರು ಎನಗೆ ಪ ಪೃಥ್ವಿಯೊಳು ನೀ ಸಲಹಿದವರನನವರತ ಮತ್ತೆ ನಾನಿಂದು ಗಜದೊಡನೆ ಕಂಗೆಡುತಿರೆ ವಿ ಪತ್ತಕಡೆಗಾಣಿಸಲಶಕ್ಯವೇನಯ್ಯಾ 1 ದುರುಳಖಳ ಪ್ರಹ್ಲಾದನನಲೆಬಡಿಸುತಿರಲದನು ಪರಿಹರಿಸಲೆಲ್ಲಿಂದ ಬಂದೊದಗಿದೆ ಮೊರೆ ಇಡಲು ಕರಿಯ ಧ್ವನಿ ನಿನಗೆಂತು ಕೇಳಿತು ಶರಣಜನಬಂಧುವೇ ಬಂಧನವ ಪರಿಹರಿಸೋ 2 ಆದೊಡೇನಾಯ್ತು ನಿನ್ನಂಘ್ರಿನಂಬಿರಲು ನೀದಯದಿ ನಿನ್ನೊಳಿಂಬಿಡುವ ನೆವದೀ ಮಾಧವನೆ ಗಜವಾಗಿ ಬಂದೊದಗಿದೆಯೋ ನಾಧನ್ಯ ವೈಕುಂಠಪತಿ ಚೆನ್ನರಾಯ 3
--------------
ಬೇಲೂರು ವೈಕುಂಠದಾಸರು
ಮಾರುತಿ ನಿನ್ನಾ ನಿರುತದಿ ಭಜಿಪೆ ತ್ವರಿತದಿ ಹÀರಿ ಸರ್ವೋತ್ತಮನೆಂಬುವ ಸರಸ ವಿಜ್ಞಾನವ ಸರಿ ಇಲ್ಲದೆ ಇತ್ತು ಪರಿಪಾಲಿಸು ಎಂದು ಶಿರಸದಿ ನಮಿಪೆ ಆರಿಸಿ ನೋಡಲು ಆರಾರು ಇಲ್ಲವೊ ಕಾರುಣ್ಯಸಾಗರ ಕರುಣಿಸೆ ನೀ ಎನ್ನಾ ಹರಿ ತಾ ಕರುಣಿಪನೆಂದು ಅರಿತು ನಿನ್ನಯ ದಿವ್ಯ ಚರಣ ಸೇರಿದೆನಯ್ಯಾ ಸರಿಬಂದದ್ದು ಮಾಡೋ ಹರಿ ಕುಲಾವರಿಯಾನೆ ಪರಿಪರಿ ಜನರನ್ನು ಪಾಲಿಸಿ ಎನ್ನನು ದೂರದಿ ಇಟ್ಟರೆ ದೊರೆತನವೇನಯ್ಯಾ ಸಾರುವೆ ಸಾರುವೆ ಸರಸಿಜನಾಭನ ಸುತನೆ ಆರುಮೂರೆರಡೊಂದು ಸಾವಿರಾ ಮೂರೆರಡು ಶತಶ್ವಾಸ ಜಪಗಳನು ಮೂರುಜೀವರಲ್ಲಿ ನೀರಜಜಾಕಲ್ಪ ಪರಿಯಂತರ ಮಾಡಿ ಅವರವರ ಗತಿಯಾ ಮರಿಯದೆ ನೀಡುವಿ ಗಿರಿಶಾನುತಪಾದ ಗುರುಜಗನ್ನಾಥ ವಿಠಲನ್ನ ಅರಿವಂತೆ ಮಾಡೋ ಧೀರಾ ಕರುಣಿಯೇ
--------------
ಗುರುಜಗನ್ನಾಥದಾಸರು
ಯಾಕೆ ನಿರ್ದಯ ಮಾಡಿದೆ ರಂಗಯ್ಯ ನೀನ್ಯಾಕೆ ನಿರ್ದಯ ಮಾಡಿದೆ ಪ ವ್ಯಾಕುಲ ಪಡಲಾರೆ ನಿಮ್ಮ ಲೋಕವ ಸೇರಿಸು ಅ.ಪ ದುಷ್ಟರ ಮಧ್ಯದಲ್ಲಿ ನಾನಿರಲಾರೆ ಸೃಷ್ಟಿಗೀಶ್ವರನೆ ಕೇಳು ಮುಟ್ಟಿ ಭಜಸಿ ನಿಮ್ಮ ಪಾದಪದ್ಮದ ಭಕ್ತಿಯಿಟ್ಟೇನೆಂದರೆ ದುಷ್ಟ ಇಂದ್ರಿಯ ಬಿಡದೆನ್ನ 1 ಪಂಚೇಂದ್ರಿಯಗಳೆನ್ನ ಬಹುಬೇಗ ವಂಚನೆ ಮಾಡುತಿದೆ ಪಂಚಬಾಣನ ಪಿತ ಪರಮಪುರುಷ ರಂಗ ಅ ಕಿಂಚನಾದೆ ನಿನ್ನಂಘ್ರಿಯ ಸೇರಿಸು 2 ಸಂಸಾರವೆಂಬ ಸರ್ಪ ಕಚ್ಚಿ ವಿಷ ಕ್ಷಣದಲ್ಲಿ ತಲೆಗೇರಿತು ಪರಮ ಹಂಸರ ಸಂಗದೊಳಗೆಯಿರಿಸಿ ಎನಗೆ ಭರದಿಂದೇರಿದ ವಿಷ ತಿರುಗೆಸೋ ಶ್ರೀಹರಿ 3 ಸರ್ಪ ತುಂಬಿದ ಕೂಪದಿ ಬಿದ್ದಿಹೆನು ಎನ್ನಪ್ಪ ರಕ್ಷಿಸೊ ಬೇಗದಿ ಸರ್ಪಶಯನ ಶ್ರೀಅಪ್ರಮೇಯ ರಂಗ ಇನ್ನು ಕ್ಷಿಪ್ರದಿಂ ಮುಕ್ತಿಯ ಒಲಿದು ಪಾಲಿಸು ರಂಗ 4 ಅಮ್ಬುಜನಾಭನೆ ನಿಮ್ಮ ಪಾದದಧ್ಯಾನ ಒಂದು ನಿಮಿಷವಾದರು ಮಾಡಲೀಸದು 5 ಹಿಂದಿನ ಕರ್ಮಂಗಳು ಇಂದಿರೇಶ ನಿಂದಕರ ವಶವಾಯಿತು ಇಂದು ಧರ್ಮದಲಿರ್ದೆ ಬಂಧುಗಳ ವಶವಾಯ್ತು ಇನ್ನು ಬಂಧನವೇನಯ್ಯ ಮುಕ್ತ್ಯಾನಂದ ತೋರುವುದಕ್ಕೆ 6 ಎಂದಿಗಾದರೂ ಮುಕ್ತಿಯ ಕೊಡುವೆಯೆಂದಾನಂದ ಇಂದು ಈ ಸಂಸಾರ ಬಂಧನದೊಳಗೆ ನಾ ಒಂದು ನಿಮಿಷ ಜೀವಿಸಲಾರೆನು ರಂಗ 7 ಅಂದು ದ್ರೌಪದಿ ಧ್ರುವÀ ಗಜೇಂದ್ರನ ರಕ್ಷಿಸಲಿಲ್ಲವೆ ಬಂದು ಅಂಬರೀಷ ಅಜಾಮಿಳರ ಪ್ರಹ್ಲಾದನ ಕಂಬದಿಂದಲೆ ಬಂದು ಕಾಯ್ದ ಗೋವಿಂದ 8 ಭಕ್ತವತ್ಸಲನೆಂತೆಂಬೊ ಬಿರುದು ಈಗ ವ್ಯರ್ಥವಾಯಿತೆ ಶ್ರೀರಂಗ ಉತ್ತಮ ಗುರುಗಳು ಶ್ರೇಯೋನಿಧಿಗಳ ವಾಕ್ಯ ಸತ್ಯವ ಮಾಡಿ ಮುಕ್ತ್ಯಾನಂದ ಪಾಲಿಸು 9 ರಂಗನಾಥ ನೀ ಕೈ ಬಿಟ್ಟರೆ ಎನ್ನ ಲೋಕಮಾತೆ ಬಿಡುವಳೆ ಬೇಗ ಮುಕ್ತಿಪಥವ ಪಾಲಿಸುವಳು 10 ಮಾಡಬಾರದ ಮಾಡಿದೆ ಈ ಸಂಸಾರದೆ ನೋಡಬಾರದ ನೋಡಿದೆ ಆಡಬಾರದ ವಾರ್ತೆಗಳನಾಡಿದೆ ಇನ್ನು ಗಾಡನೆ ಮುಕ್ತಿಯ ನೀಡೊ ವೆಂಕಟರಮಣ 11
--------------
ಯದುಗಿರಿಯಮ್ಮ
ವರದ ನಿನ್ನ ರೂಪ ಶ್ರೀ ನಿರುತ ನೋಡುವರೆ ಶ್ರೀ ಸರಸಿಜಭವ ಸಕಲ ಪ ಸುರರು ಮನುಗಳು ಮುನೀಶ್ವರರು ಶ್ರುತಿತತಿ ಯರು ದಿಗ್ವರರು ತಾಕ್ಷ್ರ್ಯಕನ ಮತ[ದವರು] ಅ.ಪ ಪರಭಕ್ತರಿಗೆ ದುಸ್ತರವಾದೊಡೆಯು ಕಾಡುವರಿಷಡ್ವರ್ಗವನೂ ತೊರೆದು ಹೃದಯದಿ ತೀರ್ಥ ಚರಣಾರವಿಂದಗಳಿಂ ನಿರಿಸಿ ಪೂಜಾತಪವನುರೆ ಚರಿಸಿ ವ್ರತಗಳಿಂ1 ಧರೆಯನಳೆದಂಗವೇನಯ್ಯ ಅಂದು ನರನಿಂಗೆ ತೋರಿದುದೆ ಜೀಯಾ ಶರಣರುಗಳೊದೆಯುವ ಕಾಯಾ ನಿನ್ನ ನಿರುಗೆಯನು ತೋರಿಸಲು ಒಡೆಯ ಕಾಣ 2 ಅರಿಯಬರುವುದಿಲ್ಲೀ ಚಿತ್ರಮಯ ಅಲ್ಪ ನರನರಿತರಿಯದವನು ನೆಲೆಯಾ ನೋಡ ಮಾಯಾ ವೇಲಾ ಪುರಿವಾಸ ವೈಕುಂಠ ಚೆನ್ನಕೇಶವರಾಯಾ 3
--------------
ಬೇಲೂರು ವೈಕುಂಠದಾಸರು
ವೇದವ್ಯಾಸ ದೇವರ ಸ್ತೋತ್ರ ಏನೋ ಈ ವೇಷ ವೇದವ್ಯಾಸ ಏನೋ ಈ ವೇಷ ಪ ಭಾನುಕೋಟಿ ಪ್ರಕಾಶ ಬದರೀ ನಿವಾಸ ಅ.ಪ. ದ್ರೌಪದಿ ಕರೆಯಲಪಾರ ವಸ್ತ್ರವನಿತ್ತೆಕೌಪೀನ ಧರಿಸಿದ ಕೌತುಕವೇನಯ್ಯ 1 ಮುತ್ತು ಮಾಣಿಕ್ಯ ನವರತ್ನ ಮಕುಟವಿರೆನೆತ್ತಿಲಿ ಕೆಂಜೆಡೆ ಪೊತ್ತುಕೊಂಡಿಪ್ಪುದು 2 ವರ ವೈಕುಂಠವ ಬಿಟ್ಟು ಮೋಹನ ವಿಠ್ಠಲಧರೆಯಾಳು ಬೋರೆಯ ಮರದಡಿಯಲಿರುವುದು 3
--------------
ಮೋಹನದಾಸರು