ಒಟ್ಟು 7 ಕಡೆಗಳಲ್ಲಿ , 3 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಪರಮಾನಂದ|ನಮಗ ಮುಕುಂದನ ಕೃಪೆಯಿಂದಾ| ಕಮಲ ಮಕ| ಭ್ರಮರ ಸಂಗ ಛಂದದಲಾಯಿತು 1 ವೇಗದಿಂದಲಿ ನೋಡೀ|ಸಕಲರು|ಭಾಗವತರು ಕೂಡಿ| ಭಾಗಿರಥೀ ಪಡೆದ ನಾಗಶಾಯಿಯ| ನಿಗ ಮಾಗ ಮಯುಕ್ತದಿ|ಈಗ ಪಾಡಿದೆವೆಂದು 2 ಸಂದಿದ ದೋಷಾದಿಗಳು ಚೂಕಿ| ಕುಂದಿ ತೊಲಗಿದವು ತಂದೆ ಮಹಿಪತಿ| ನಂದನ ಪ್ರಿಯನಾನಂದ ಕರುಣದೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಊಟವನು ಮಾಡು ಬಾ ಉದಧಿಶಯನಾ | ಆಟವನು ಸಾಕುಮಾಡಿ ಅತಿ ವೇಗದಿಂದಲಿ ಪ ಪರಿ | ತೋಯ ಸಂಡಿಗೆ ಪಳದೆ ಹುಳಿ ಸಾರು || ಪಾಯಸ ನೊರೆಹಾಲು ಸಕ್ಕರೆಗೂಡಿಸಿ | ತಾಯಿ ದೇವಕಿಯು ಎಡೆಯ ಮಾಡಿದಳು ತಂದು 1 ಯಾಲಕ್ಕಿ ಹಾಕಿದ ಹೋಳಿಗೆಯು ಪರಿಮಳ | ಸಲೆ ಶಾಲ್ಯೋದನ ಕರಿದ ಭಕ್ಷ್ಯಾ || ಮೇಲಾದ ಇಂಗು ಜೀರಿಗೆ ಮೆಣಸಿನ ಹುಗ್ಗಿ | ಶ್ರೀ ಲಕುಮಿದೇವಿ ಎಡೆ ಮಾಡಿದಳು ತಂದು 2 ಕಸಕಸಿ ಎಳ್ಳು ಲಡ್ಡಿಗೆಯು ಅಪ್ಪಾಲು ಅರೆ-| ರಸ ದೋಸೆ ಬೆಣ್ಣೆ ಸೂಸಲುಕಡಬು || ಹಸನಾಗಿ ಕರಿದ ಹಪ್ಪಳ ಸಂಡಿಗೆ ನಿನ್ನ ಸೊಸೆ ಸರಸ್ವತಿ ಎಡೆ ಮಾಡಿದಳು ತಂದು 3 ಕಾದಾಕಳ ತುಪ್ಪ ಅಳಗಳಗ ತಿಳಿತುಪ್ಪ | ಮಾಧುರ್ಯವಾಗಿದ್ದ ಜೇನು ಘೃತವು || ಕಾದಾರಿದ ಪಾಲು ಕಟ್ಟುಸುರು ಕೆನೆಮೊಸರು | ಭೂದೇವಿ ನಲಿನಲಿದು ಎಡೆ ಮಾಡಿದಳೊ ತಂದು4 ಸರಳಿಗೆ ಗೌಲಿ ಬಟಿವೆ ಪರಡಿ ಸಜ್ಜಿಗೆ | ಸರಸವಾಗಿದ್ದ ಚಿತ್ರಾನ್ನಂಗಳು || ಪರಿ ಫಲ ಪಕ್ವಾನ್ನ ಸೋಪಚಾರದಿ | ಗಿರಿಜಾದಿಗಳು ತಾವು ಎಡೆ ಮಾಡಿದರೊ ತಂದು5 ಖಾರುಳ್ಳ ಪಚ್ಚಡಿ ಹಚ್ಚಗೆ ಹಸಿರು ವರ್ಣದ | ವಾರುಣದಿ ಉಪ್ಪಿನಕಾಯಿ ಕೂಟಾ || ನೀರು ಮಜ್ಜಿಗೆ ನಿಂಬೆÀಹಣ್ಣನೆ ಹಿಂಡಿ | ಭಾರತೀದೇವಿ ಎಡೆಮಾಡಿದಳೊ ತಂದು 6 ಉಂಡ ತರುವಾಯದಲಿ ಹರಿಯೇ ಪೀಠದಿ ಕುಳಿತು | ಕೊಂಡು ಬಂದ ಗಂಧ ತಾಂಬೂಲವ || ಸಿರಿ ವಿಜಯವಿಠ್ಠಲ | ಕೊಂಡನಾದ ಪುರಂದರಗೆ ಒಲಿದು ಒಲಿದು 7
--------------
ವಿಜಯದಾಸ
ಧ್ಯಾನವನು ಮಾಡು ಬಿಂಬ ಮೂರುತಿಯಪ ಆನಂದದಲಿ ಕುಳಿತು ಅಂತರಂಗದಲಿ ಅ.ಪ ಸದಾಚಾರನಾಗಿ ದ್ವಾದಶಗುರುಗಳಿಗೆರಗಿ ಮುದದಿಂದ ಮೂಲಮಂತ್ರವನು ಜಪಿಸಿ ಸದಮಲ ಭಕುತಿಯಲಿ ದೇಹಸ್ಥಿತಿಯನೆ ತಿಳಿದು ಪದಮಾಸನವ ಹಾಕಿ ಪರಮ ವಿಶ್ವಾಸದಲಿ1 ಅಂಗವನು ಚಲಿಸದೆ ಚೆನ್ನಾಗಿ ದೃಢವಾಗಿ ಕಂಗಳನೆ ಮುಚ್ಚಿ ಇಂದ್ರಿಯಗಳನೆ ತೆರೆದು ಮಂಗಳ ಶೋಭಿತ ಅಖಂಡ ಧ್ಯಾನದಂತ ರಂಗದೊಳಗೆ ನಿಲಿಸಿ ಎಲ್ಲವನು ಕಾಣೊ 2 ಭಗವದ್ರೂಪಗಳೆಲ್ಲ ಒಂದು ಬಾರಿ ಸ್ಮರಿಸಿ ಮಗುಳೆ ಪರಮ ಗುರುವಿನ ಮೂರ್ತಿಗೆ ತೆಗೆದು ಆಹ್ವಾನಮಾಡಿ ಅಲ್ಲಿಂದ ಹರುಷದಿ ಸ್ವಗುರು ಬಿಂಬಮೂರ್ತಿಯಲಿ ಐಕ್ಯವನೆ ಮಾಡು3 ತಿರುಗಿ ಮೆಟ್ಟಿಕೆ ಮೂರು ವೇಗದಿಂದಲಿ ನಿನ್ನ ಲ್ಲಿರುವ ಮೂರ್ತಿಯಲ್ಲಿ ಚಿಂತನೆಯ ಮಾಡೊ ಭರದಿಂದ ಎಲ್ಲವನು ತಂದು ಹೃದಯದಲ್ಲಿ ಸ್ಥಿರವಾಗಿ ಇಪ್ಪ ಮೂರುತಿಯೊಡನೆ ಕಲೆಸು 4 ಆತನೆ ಬಿಂಬ ಮೂರುತಿಯೆಂದು ತಿಳಿದುಕೊ ಆ ತರುವಾಯ ನಾಡಿಗಳ ಗ್ರಹಿಸಿ ಆ ತೈಜಸನ ತಂದು ವಿಶ್ವಮೂರ್ತಿಯಲ್ಲಿ ಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ 5 ಜ್ಞಾನ ಪ್ರಕಾಶದಲಿ ಇದ್ದು ನಿನ್ನ ಹೃದಯ ಕಮಲ ಮಧ್ಯ ಮೂರ್ತಿ ನಿಲ್ಲಿಸಿ ಬಾಹ್ಯದಲಿ ಏನೇನು ಪೂಜೆಯನು ಉಳ್ಳದನು ಮಾಡೊ6 ಗುಣ ನಾಲ್ಕರಿಂದಲಿ ಉಪಾಸನವನೆ ಮಾಡು ಕ್ಷಣ ಕ್ಷಣಕೆ ಹರಿಪಾದವನು ನೋಡುತ ಅಣುರೇಣು ಚೇತನಾಚೇತನಕೆ ನೇಮಕ ಫಣಿಶಯನನಲ್ಲದೆ ಮತ್ತೊಬ್ಬರಿಲ್ಲವೆಂದು 7 ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ ಸಮ ವಿಷಮ ತಿಳಿದೊಂದೆ ಭಕುತಿಯಲ್ಲಿ ಸ-ಮಾಧಿಗೊಳಗಾಗಿ ದಿವ್ಯ ದೃಷ್ಟಿಲಿ ಸರ್ವ ಕ್ರಮ ಅನುಕ್ರಮದಿಂದ ಭರಿತಭಾವುಕನಾಗೊ 8 ಪರಿ ಧೇನಿಸಲು ದೇವ ಕರುಣನ ಮಾಡೆ ಪಾಪ ಸಂಚಿತವು ಪ್ರಾರಬ್ಧ ನಾಶ ಅಪರೋಕ್ಷಿತನಾಗಿ ತನ್ನ ಯೋಗ್ಯತದಷ್ಟು ಗೋಪಾಲ ವಿಜಯವಿಠ್ಠಲನೊಲಿವನಾಗ9
--------------
ವಿಜಯದಾಸ
ನೋಡಿ ನಾ ಧನ್ಯನಾದೆನೊ ತೋತಾದ್ರೀಶನ ನೋಡಿ ಧನ್ಯನಾದೆ ನಾಡೊಳು ತನಗೆಲ್ಲಿ ಈಡಿಲ್ಲೆನಿಸುವನ ನೋಡಿ ಧನ್ಯನಾದೆನೊ ಪ ಆರೊ ಮಹಾರೂಪ ಬಂದು ಏಕಾಂತದಲ್ಲಿ ಆರಾಧಿಸಿದಾತನಂದು ಭಕುತಿ ಬಿಡದೆ ವಾರವಾರಕ್ಕೆ ಗತಿಯೆಂದು ಈ ರೀತಿಯಲ್ಲಿ ಇರೆ ತೋರಿದ ಕರುಣ ನಿನ್ನಾ 1 ಭಕುತನ್ನ ತಪಸಿಗೊಲಿದು ವೇಗದಿಂದಲಿ ಲಕುಮಿ ರಮಣ ಸುಳಿದು ಬೇಡಿದಂಥಾ ಧಿಕವಿತ್ತು ರೋಷವಳಿದು ಸುಖದ ಭಾರತ ಪೇಳೊ ದಕ್ಕೆ ಮುನಿ ಮಾಡಿದ ದಾನಾ 2 ಧರಿಗೆ ದಕ್ಷಿಣ ದಿಕ್ಕಿಲಿ ಮಾಹೇಂದ್ರಿ ಮಹಿ ಧರನ ಸಮೀಪದಲ್ಲಿ ಪ್ರತಿದಿನ ಮೆರೆವ ವೈಭೋಗದಿಂದಲಿ ಕರುಣಿ ವಿಜಯವಿಠ್ಠಲ ವರಧೇನು ಎನಿಸುವನಾ3
--------------
ವಿಜಯದಾಸ
ಪಾದ - ಮೋದದಿ ಭಜಿಸಿದ ಮನುಜನೆ ಬಲು ಧನ್ಯನೋ ಪ ಬೋಧ ಪಾದ ಸೇವಕರಾದ ಮಹಸುಸ್ವಾದಿ ಪುರದೊಳು | ವೇದ ವಿನುತನ ಸ್ತುತಿಸಿ ಮೋದಿಪ ಅ.ಪ. ವಾಗೀಶ ಮುನಿಪ ಸದಾಗಮಜ್ಞನ ವರ | ವೇಗದಿಂದಲಿ ಫಲಿಸಲುಜಾಗು ಮಾಡದೆ ಗೌರಿ ತತ್ಪತಿ | ರಾಗ ರಹಿತರು ನಿನ್ನನೊಪ್ಪಿಸೆ |ರೋಗಹರ ಹಯವದನ ಪದವನು | ರಾಗದಿಂದಲಿ ಭಜಿಪ ಯತಿ 1 ತಿಮಿರ ತಾಮರಸ ಬೋಧ ಶಾಸ್ತ್ರವ | ಪ್ರೇಮದಿಂದಲಿ ಪೇಳ್ದಯತಿವರ 2 ಮೂರ್ತಿ ಪ | ರಾಕ್ರಮನಿಂ ತರಿಸೀಚಕ್ರಿಯನೆ ನಿಲಿಸ್ಯುತ್ಸವದಿ ಸುರಪನ | ವಿಕ್ರಮದ ಆಳ್ಬಂದು ಕರೆಯಲು |ಉತ್ಕ್ರಮಣ ತೊರೆದವರ ಕಳುಹುತ | ವಿಕ್ರಮನ ಪದಕೆರಗಿನಿಂದ3 ನಿಗಮವೇದ್ಯನ ಬಗೆಬಗೆಯಲಿ ಸಂಸ್ಕøತ | ಮಿಗಿಲು ಪ್ರಾಕೃತ ಪದ್ಯದೀಸುಗುಣಮಣಿಮಯ ಮಾಲೆಗಳ ಪ | ನ್ನಗನಗೇಶನ ಕೊರಳೂಳರ್ಪಿಸಿ |ಚಿಗಿ ಚಿಗಿದು ಆನಂದದಿಂದಲಿ | ದೃಗು ಜಲದಿ ಹರಿಪದವ ತೊಳೆದ 4 ಸುರನದಿ ನದಿಧರರಾದಿ ಸ್ಥಾಪಿಸುತಲ್ಲಿ | ಎರಡೆರಡೊಂದು ವೃಂದಾವನವಾ | ಸ್ಥಿರಪಡಿಸಿ ಶ್ರೀವ್ಯಾಸ ಸಮ್ಮುಖ | ವರ ನರೇಯಣ ಭೂತಬಲದಲಿಇರಿಸಿ ಗುರು ಗೋವಿಂದ ವಿಠಲನ | ನಿರುತ ಧ್ಯಾನಾನಂದಮಗ್ನ5
--------------
ಗುರುಗೋವಿಂದವಿಠಲರು
ವರ್ಣಿಸಲರಿಯೆ ನಿನ್ನ | ವರ್ಣಿಸಲರಿಯೆ ಗು | ಣಾರ್ಣವ ಹರಿಯೆ ಸೂ | ವರ್ಣ ಗಿರೀಶ ಸು | ಗಮನ ರಂಗಾ ಪ ಕುಂಡಲ ಮಿನುಗುವ ಹಸ್ತ ಕಂಕಣ ಬೆರಳುಂಗರ | ಕೌಸ್ತುಭ ಕಂಬು ಸೂದರು | ಶನ ಭುಜಕೀರ್ತಿ ಭೂ | ಷಣವಾದ ಶಿರ ಉರುವ ಒಪ್ಪಲು ಕಿಂ | ಕಿಣಿ ಕನಕಾಂಬರವ ಪೂಸಿದ ಗಂಧ | ಪುನುಗು ಜವ್ವಾದಿಯಿಂದೆಸೆವ ಸುರತರುವೆ 1 ಕಾಂಚಿದಾಮ ಥಳಿ | ಥಳಿಸುವ ಪದಕ ನ್ಯಾ | ತುಂಬಲು ಸೂಸುತಿರೆ ದಂತಾ | ಮಾತಾರಗಿಳಿಯಂತೆ ಶೋಭಿಸಿ | ಕಪೋಲ ಸುತ್ತಲು ಬೆಳಗುವ ಕಂಗಳ ನಾಸಕಾಂತಿ | ಸಿರಿ ತಿರುವೆಂಗಳಾ2 ಕಟಿ ಕರ ಎರಡೇಳು ಲೋಕ ಜಠರದೊಳಡಗಿರೆ | ಕರಿ ಪಲ್ಲಿನಂತೆ ಸುಂದರ ಜಂಘೆ ಗುಲ್ಫ ವಿ | ಪಾದ ನಖ ಪರಿ ಪರಿ ರೇಖೆಗಳ ಕಾಲಿಂದಿಗೆ | ನಿತ್ಯ ಮಂಗಳಾ 3 ನಿರಯ ತ್ತಮ ಜನ ಮನೋರಥ | ಗಮ ಸಿದ್ಧಾಂತನೆ ವಿ | ಕ್ರಮದಾನವ ಹರ | ಕೋಟಿ ಪ್ರಕಾಶಾ | ವೆಂಕಟೇಶಾ | ಅಪ್ರಾಕೃತ | ಪ್ರಮೆಯಭರಿತನಾದ | ಕುರುವಂಶ ವಿನಾಶಾ 4 ಭೂಗೋಳದೊಳಗಿದರಾಗಮ ತಿಳಿ | ದುರಗ ಗಿರಿ ಯಾತ್ರಿಗೆ | ಭೋಗದಾಶೆಯ ಬಿಟ್ಟು | ವೇಗದಿಂದಲಿ ನಿಜ | ಭವ ಸಾಗಿ ಬರಲು ಚನ್ನಾಗಿ ಜ್ಞಾನವ ನೀವುತ್ತ ಸಾಕುವಂಥ | ಶ್ರೀ ಗುರು ವಿಜಯವಿಠ್ಠಲ ಭಕ್ತರ ದಾತಾ5
--------------
ವಿಜಯದಾಸ
ಸಂತರನ ಸ್ಮರಿಸಿ ಜನರು ಸಂತರನ ಸ್ಮರಿಸಿ ಜನ ನಿಂತಲ್ಲಿ ಕುಳಿತಲ್ಲಿ ಇಂತೆಂತು ಸದ್ಧರ್ಮ ಚರಿಸುವ ಕಾಲಕ್ಕೆ ಅಂತರಂಗದಲಿದ್ದು ಚಿಂತೆಯನು ಬಿಟ್ಟು ಸಿರಿ ಕುಂತುಪಿತನೊಲಿಮೆಯಿಂದ ಪ ವ್ಯಾಸ ಶಿಷ್ಯರಾದ ಗುರುಮಧ್ವ ಮುನಿರಾಯ ಮಾಧವ ಮು ನೇಶ ಅಕ್ಷೋಭ್ಯ ಜಯರಾಯ ವಿದ್ಯಾಧಿರಾಜ ಪೋಷಿತ ಕವೇಂದ್ರತೀರ್ಥರಾ ನ್ಯಾಶಿ ವಾಗೀಶ ಯತಿ ರಾಮಚಂದ್ರ ನಂದ ವ್ಯಾಸ ವಿದ್ಯಾಧೀಶರೂ 1 ವೇದಮುನಿ ಸತ್ಯವ್ರತ ಸತ್ಯನಿಧಿ ರಾಯ ಬೋಧ ಮೂರುತಿ ಸತ್ಯನಾಥ ಸತ್ಯಾಭಿನವ ಕ್ರೋಧ ಜಯ ಸತ್ಯಪೂರ್ಣ ಸತ್ಯ ವಿಜಯ ವಿ ನೋದ ಸತ್ಯಪ್ರಿಯರೂ ಭೇದಾರ್ಥ ಬಲ್ಲ ವಿಭುಧೇಂದ್ರ ರಘುತನಯ ಸ ಮ್ಮೋದ ಜಿತಾಮಿತ್ರ ತೀರ್ಥ ಮುನಿಪ ಸುರೇಂದ್ರ ವಾದಿ ಎದೆ ಶೂಲ ವಿಜಯೀಂದ್ರ ಸುಧಿಯೀಂದ್ರ ಹ ಲ್ಲಾದ ರಾಘವೇಂದ್ರರು 2 ಯೋಗೆಂದ್ರ ಭೂಸುರೇಂದ್ರ ಸುಮತೀಂದ್ರ ಉಪೇಂದ್ರ ಯೋಗಿ ಶ್ರೀಪಾದರಾಯರ ಪೀ ಳಿಗೆಯ ಅತಿ ಸಾಧನವು ವ್ಯಾಸರಾಯರ ಪಾರಂಪರಿಯವ ಲೇ ಸಾಗಿ ಎಣಿಸಿ ಕೊಂಡಾಡಿ ಆಗಮನುಕೂಲ ಮಧ್ವ ಶಾಸ್ತ್ರವನುಸರಿಸಿ ವೇಗದಿಂದಲಿ ಮಹಸಂತರಿಗೆ ಶಿರ ನಿತ್ಯ 3 ಕ್ಷೇತ್ರ ಸರೋವರ ನದಿ ಮಿಗಿಲಾದ ದೇಶದಲಿ ಗಾತ್ರ್ರದಂಡಿಸಿ ಮಾಡಿ ಹರಿಯ ಮೆಚ್ಚಿಸುವ ಪಾ ರತ್ರಯವನೇ ಬಯಸುವ ಪುತ್ರ ಪೌತ್ರರ ಕೂಡಿ ಜ್ಞಾನದಲಿ ಇಪ್ಪ ಚ ರಿತ್ರಾರಾ ಮಹಿಮೆ ಕೊಂಡಾಡಿದವರ ವಿ ಚಿತ್ರವನು ಪೊಗಳುವ ದಾಸದಾಸಿಯರ ಪದ ಸ್ತೋತ್ರ ಮಾಡಿರೋ ಆವಾಗ 4 ಉದಯಕಾಲದಲೆದ್ದು ಸಂತನ ಮಾಲಿಕೆಯನ್ನು ಮೃದು ಪಂಚರತ್ನದಲಿ ನಿರ್ಮಿತವಾಗಿದೆ ಸದಮಲರು ಪೇಳಿ ಸಂತೋಷದಲಿ ಕೇಳಿ ಕೊರಲೊಳಗೆ ಪದರೂಪದಲ್ಲಿ ಧರಿಸಿ ಮದ ಮತ್ಸರವು ಪೋಗಿ ವೈರಾಗ್ಯದಲಿ ಸಾರ ಹೃದಯರ ಬಳಿ ಸೇರಿ ಜ್ಞಾನ ಸಂಪಾದಿಸಿ ಪದೋಪದಿಗೆ ವಿಜಯವಿಠ್ಠಲನ ನಾಮಾಮೃತವ ವದನದಿಂದಲಿ ಸವಿದುಂಬ 5
--------------
ವಿಜಯದಾಸ