ಒಟ್ಟು 21 ಕಡೆಗಳಲ್ಲಿ , 13 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗಾಭೋಗ ಪರಶು ಮುಟ್ಟಲು ಲೋಹ ಸ್ವರ್ಣವಾಗುವ ಪರಿ ಸಿರಿ ಒಲಿಯೆ ದಾರಿದ್ರ್ಯ ಹತವಾಗಿ ಪೋಪಂತೆ ಅರಸು ಮುಟ್ಟಲು ದಾಸಿ ವರನಾರಿ ಅಪ್ಪಂತೆ ವಿರಜೆ ಮುಳುಗಲು ಜೀವ ವಿರಜನಾಗುವ ತೆರದಿ ವರ ಸುಧಾಪಾನದಿ ಜರೆ ಮರೆ ರೋಗಗಳು ಹರಿದ್ಹೋಗುವಂದದಿ ಹರುಷದಿ ನಮಗಿನ್ನು ಗುರುವರ ದೊರಕಲು ವರ ಪುಣ್ಯರಾಸಿಯಂತೆ ಪಾಪಿ ನಾನು ಹರಿಭಕ್ತನಾದೆ ಮುಂದೆ ಕರುಣಾರ್ಣವ ಸುರತ ಜಯೇಶವಿಠಲ ಸುರಿವ ಕರುಣ ನಿಶ್ಚಿಂತೆ
--------------
ಜಯೇಶವಿಠಲ
(Iೂ) ಕ್ಷೇತ್ರ ವರ್ಣನೆ (1) ಶ್ರೀರಂಗ, ತಿರುಪತಿ, ಕಂಚಿ,ಮೇಲುಕೋಟೆ, ಹೆಜ್ಜಾಜಿ ಮಂಗಳವು ಶ್ರೀರಂಗ ಅಂಗನೆ ಮಣಿದೇವಿಗೆ ಪ ಅಂಗಿಯಾದ ಆದಿಶೇಷ ಉ- ತ್ತುಂಗ ವರ ವಿಭೀಷಣನಿಗೆ ಅ.ಪ ಸಪ್ತಗಿರಿ ಶ್ರೀನಿವಾಸ ಅಪ್ಪೀರ ಅಲರ್‍ಮೇಲಮ್ಮಗೆ ಗುಪ್ತವಾಗಿ ಉಭಯ ರಕ್ಷ ಸುಪ್ತ ಗೋವಿಂದರಾಜಗೆ 1 ಕಂಚಿ ವರದರಾಜನಿಗೆ ಮಂಚದ ಪೆರುನ್ದೇವಿಗೇ ಹೊಂಚಿ ಬ್ರಹ್ಮಯಜ್ಞದಲ್ಲಿ ಮಿಂಚುವ ದೇವರಾಜಗೇ 2 ಯದುಶೈಲ ಚೆಲ್ವರಾಯ ಮುದದಿ ಯದುಗಿರಿಯಮ್ಮಗೆ ಪಾದ ಸಂಪತ್ತೆ ಅದುಭುತರು ಯತಿರಾಜಗೆ 3 ಹೆಜ್ಜಾಜಿ ಕೇಶವನ ಪೀಠ ಅಜ್ಜ ಶ್ಯಾಮನ ವಿರಜೆಯಲ್ಲಿ ಮಜ್ಜನಗೈಸಿ ಸೇವೆಗಾಗಿ ಸಜ್ಜುಗೈದ ವೈಕುಂಠಕೆ 4
--------------
ಶಾಮಶರ್ಮರು
ಏನೆಂಬೆನು ಪವಮಾನ ದೇವನಲಿ ಶ್ರೀನಿವಾಸ ಕರುಣಾ ತಾನಾಗೀತನಕಡೆಯಲಿ ಬಹ ಲಕ್ಷ್ಮೀಮಾನ, ದೀನ ಶರಣಾ ಪ. ದುರುಳ ದಶಾಸ್ಯನ ಸೆರೆಯೊಳಗಿಕ್ಕಿದ ಸುರವರನಣುಗನನೂ ನೆರೆಯದೆ ಮಾರುತಿ ಇರುವ ನಿಮಿತ್ತದಿ ಕರಿಸಿದ ರವಿಜನನು ತಿರುಗಿ ದ್ವಾಪರದಿ ಬರಲಾರ ರವಿಜನ ನರನಿಂದೊರಸಿದನು ಎರಡು ಯುಗದೊಳೀ ತೆರದಲಿ ಭಾರತಿ ವರನನು ಸೇರಿದನು 1 ಶ್ರೀಕರ ಜೀವರಿಗೇಕೀ ಭಾವವ ಪೋಕ ಮೃಗಗಳಂದೂ ಕಾಕರಟನದಂತೊರೆವದನರಿತು ದಿ- ವೌಕಸಗಣಬಂದು ಶ್ರೀಕಮಲಾಸನ ವಂದ್ಯನೆ ಸಲಹೆನೆ ಸಾಕುವ ತಾನೆಂದೂ ಈ ಕಲ್ಯಾಣ ಗುಣಾಢ್ಯನ ಭೂಮಿಗೆ ತಾ ಕಳುಹಿದನಂದು 2 ಅದರಿಂ ತರುವಾಯದಲಿ ಸುಖಾಂಭುದಿ ಒದಗಿದ ತ್ವರೆಯಿಂದ ಪದುಮನಾಭ ಮೂರುತಿಯ ಕೆಲದಿ ನಿಂ- ದದುಭುತ ಭರದಿಂದಾ ವಿಧಿಭವ ಲೋಕಾದ್ಯಧಿಕೃತ ಪುಣ್ಯಾ ಸ್ಪದ ತೋರುವೆನೆಂದಾ ವಿಧಿ ಪದ ಯೋಗ್ಯನ ಚದುರತನಕೆ ಮೆಚ್ಚಿ ಪೂರ್ಣಾನಂದ 3 ವರ ವೈಕುಂಠವ ರಜತ ಪೀಠ ಸ- ತ್ಪುರದೊಳಗಿರಿಸಿಹನು ವಿರಜೆಯ ಮುನಿಕಡತ ಸರಸಿಗೆ ಕರೆಸಿದ ಮುರದಾನವಹರನು ಚರಣಾಂಬುಜಕಿಂಕರವರ ಚಂದ್ರೇ- ಶ್ವರನಲಿ ಕರುಣವನು ಇರಿಸಿ ಭಜಿಪ ಸುರತರುವೆನಿಸಿದ ಶ್ರೀ- ವರನ ಮಹಾತ್ಮೆಯನು 4 ಜ್ಞಾನಾನಂದಾಂಬುಧಿ ಶೇಷಾದ್ರಿಯ ಶ್ರೀನಿವಾಸನಿವನು ತಾನಾಗಿಲ್ಲಿಗೆ ಬಂದಿಹ ಭಕ್ತಾ- ಧೀನ ದಯಾಕರನು ಮಾನಸಗತ ಮಾಲಿನ್ಯವ ಕಳೆದನು ಮಾನವ ಬಿಡಿಸುವನು ನಾನಾಭೀಷ್ಟವ ನಿರವಧಿ ಕೊಡುತಿಹ ಮೌನಿ ಜನಾರ್ಚಿತನು 5
--------------
ತುಪಾಕಿ ವೆಂಕಟರಮಣಾಚಾರ್ಯ
ಕಾವೇರಿ ಕಲುಪಾಪಹಾರಿ ಪಾವನ ಶರೀರೆ ಶುಭತೋಷಕಾರಿ ಪ ವಾಸುದೇವ ರಂಗೇಶನಾಲಯಕೆ ನೀ ನಾವರಣಳಾಗಿಪ್ಪೆ ವಿರಜೆಯಂತೇ ದೇವ ಋಷಿ ಗಂಧರ್ವ ಪಿತೃಪ ನರವರರಿಂದ ಸೇವನೀಯಳಾಗಿ ಸರ್ವಾರ್ಥ ಪೂರೈಪೆ 1 ಜಲಚರಾನ್ವೇಷಣ ಲುಬ್ಧ ಸಾಲಿಗ್ರಾಮ ತುಲಸಿ ವೃಕ್ಷವನೆ ಕೊಡಿಸಿದ ಮಾತ್ರದೀ ಕಲುಷರಾಶಿಗಳೆಲ್ಲ ಕಳೆದು ಮುಕ್ತಿಯನಿತ್ತೆ ಸಲಿಲಮಂದಿರೆ ನಿನ್ನ ಕರುಣಕೇನೆಂಬೆ 2 ರವಿ ತುಲಾರಾಶಿಗೈದಿದ ಸಮಯದೊಳಗೊಂದು ಮಜ್ಜನ ಗೈವ ಮಾನವರಿಗೆ ಪವನಾಂತರಾತ್ಮಕನ ಪಾದಕಮಲವ ತೋರಿ ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ 3 ಶ್ರೀ ಪವನ ಶಿವರಿಂದ ತಾ ಪೂಜೆಗೊಳುತ ಬಹು ಪರ ಮನು ವ್ಯಾಪಿಸಿಹ ನಿನ್ನೊಳದ್ಯಾಪಿ ಸ್ವರ್ಗಸ್ಥ ಜನ ರೀ ಪೊಡವಿಯೊಳು ತವ ಸಮೀಪದಲಿ ಜನಿಸುವರು 4 ಮೂಢಮತಿ ನಾನು ಕೊಂಡಾಡ ಬಲ್ಲೆನೆ ನಿನ್ನ ಬೇಡಿಕೊಂಡೆನು ಹೃದಯ ನೀಡದೊಳಗೇ ಗೂಡ ಪದ ಶಯನ ಜಗನ್ನಾಥ ವಿಠ್ಠಲನಂಘ್ರಿ ನೋಡುವ ಸೌಭಾಗ್ಯ ದಯ ಮಾಡು ಪ್ರತಿದಿನದಲ್ಲಿ ಬ 5
--------------
ಜಗನ್ನಾಥದಾಸರು
ಗೋವಿಂದ ನಿನ್ನಾನಂದದಲ್ಲಿಡೋ ಗೋವಿಂದ ಪ ಗೋವಿಂದ ಹೃದಯಾರವಿಂದದಲ್ಲಿ ಇಂದೂ ಮುಂದೂ ಚರಣಾರವಿಂದ ತೋರೊ ಅ.ಪ ಬೆಟ್ಟದ ದರುಶನ ಲಾಭವು ಕಷ್ಟ ಪಟ್ಟರು ದೊರೆಯಲಸಾಧ್ಯವು ನೋಡೆ ಸುಟ್ಟು ಹೋಗುವುದಘರಾಶಿಯು ಪಟ್ಟ ಶ್ರಮವು ಇಷ್ಟಾರ್ಥವು ದಿಟ್ಟ ಮನವ ಕೊಟ್ಟು ಅಟ್ಟುರಿಯ ಕಳೆದು ಮೆಟ್ಟು ಮೆಟ್ಟಲನೇರಿ ದಿಟ್ಟಿಪರೋ ನಿನ್ನ1 ಪದುಮಜಾಂಡ ಕೋಟಿ ನಾಯಕ ದೇವ ಶ್ರೀದ ಸೃಷ್ಟಾದ್ಯಷ್ಟ ಕರ್ತೃ ನೀನೆ ಆದ್ಯಂತ ಜಗದಾಧಾರಕ ಅಂತರಾತ್ಮಕ ವಿಶ್ವವ್ಯಾಪಕ ಆದಿಮೂಲ ಚತುಷ್ಪಾದ ಎಂದೆನಿಸಿ ತ್ರಿ- ಪಾದ ಇಳೆಯೊಳಿಟ್ಟೆ 2 ಸದಮಲಾತ್ಮಕನೇ ದೇವ ಸರ್ವದಾ ಎಲ್ಲಾ ಹದಿನಾಲ್ಕು ಲೋಕವ ಧರಿಸಿದೆ ದಿವ್ಯ ನೆಲೆಸಿದೆ ಸರ್ವರ ಹೃದಯದ ಪದುಮದಲಿ ಪೊಳೆದು ತ್ರಿಜಗವಂದಿತನಾಗಿ ಮೇದಿನಿಯೊಳು ಮೆರೆಯುತಿಹೆ 3 ಧ್ವಜವಜ್ರಾಂಕುಶಯುಕ್ತಲಾಂಛನ ದೆÉೀವ ಅಬ್ಜಭವಾರಾಧ್ಯ ಚರಣದಿವ್ಯ- ಅಬ್ಜಸಖಕೋಟಿಕಿರಣ ಪಾದಾಭರಣದಿಂದ ಕಿರಣಾ ತಾ ಝಗಝಗಿಸುತ್ತ ನೂಪುರ ಕಾಲಂದಿಗೆ ಗೆಜ್ಜೆ ಸಜ್ಜುಗೊಂಡಿಹ ಮೂರ್ಜಗದೊಡೆಯನೆ ಹರಿ 4 ತಟಿತಕೋಟಿನಿಭಸಮಕಾಯ ಕಟಿಯ ದಿವ್ಯರತ್ನಖಚಿತದಟ್ಟಿಯಾ ತೊಟ್ಟ ಪಟ್ಟೆಪೀತಾಂಬರ ಬಟ್ಟೆಯಾ ಸೊಂಟಪಟ್ಟಿಯ ಇಟ್ಟ ಪರಿಯಾ ಅಟ್ಟಹಾಸದಿ ನಿಂದ ಸೃಷ್ಟಿಗೊಡೆಯ ಮನೋ- ಭೀಷ್ಟದಾಯಕ ಬೆಟ್ಟದೊಡೆಯನೆ 5 ಕರಚತುಷ್ಟಯದಲ್ಲಿ ಮೆರಯುವಾ ಶ್ರೀ ಸು- ದರ್ಶನ ಶಂಖದಿಂದಿರುವಾ ದೀನ ಶರಣಜನರಿಗಭಯ ಹಸ್ತವಾ ಕರೆದು ನೀಡುವ ಕಾಮಿತಾರ್ಥವ ಪರಿಪರಿ ಭಾಪುರಿ ಭುಜಗಾಭರಣಾದಿಗಳ ಧರಿಸಿರುತ ಭಕ್ತಜನರಘ ಹರಿಸುವಾ6 ವಕ್ಷಸ್ಥಳದಲ್ಲಿ ಶ್ರೀವತ್ಸವೂ ಕಂಠ ದಕ್ಷಿಣದಲ್ಲಿ ತೋರ ನಕ್ಷತ್ರದಂತಿಹ ಹಾರವೂ ಕುಕ್ಷಿ ಅಂದವೂ ಮೋಕ್ಷದಾತೃವು ಅಕ್ಷರ ವಾಚ್ಯತ್ರ್ಯಕ್ಷಾದಿ ಸುರವಂದ್ಯ ಈ ಕ್ಷಿತಿಗಿಳಿದು ಪ್ರತ್ಯಕ್ಷನಾಗಿ ನಿಂದೆ 7 ಮಂದಹಾಸಮುಖ ಅರವಿಂದ ದಂತ ಚಂದಕರ್ಣಕುಂಡಲದಿಂದ ಕೆಂದುಟಿಯಿಂದ ಒಪ್ಪುವ ಚೆಂದ ಪೊಂದಿ ಮಕುಟ ಸರ್ವಾಲಂಕಾರ ಪರಿಪೂರ್u ಬಂಧ ಮೋಚನ ಹರಿ ಶ್ರೀ ವೇಂಕಟೇಶನೆ 8 ಪರಿಪರಿ ಮುಕ್ತಜೀವರುಗಳು ಇಲ್ಲಿ ಪರಿವಾರ ತರುಲತೆ ಶಿಲೆಗಳು ಇನ್ನು ವಿರಜೆ ಮೊದಲಾದ ಸರ್ವತೀರ್ಥವು ಸ್ವಾಮಿ ತೀರ್ಥವೂ ಮೋಕ್ಷದಾತೃವೂ ಭವ ಶಕ್ರಾದಿನುತಉರಗಾದ್ರಿವಾಸವಿಠಲ ಜಗದೀಶನೆ 9
--------------
ಉರಗಾದ್ರಿವಾಸವಿಠಲದಾಸರು
ನದಿಗಳ ಸ್ತೋತ್ರ ಕಾವೇರಿ ಕಲುಷ ಸಂಹರಳೆ ಕಾವೇರಿ ಪ ವಿಧಿ ಸುತೆ ನಮ್ಮ | ಕಾವುದು ಬಿಡದಲೆ ಅ.ಪ. ಅಮಿತಾಭ ಕವೇರ ನೃಪನು | ಪುಣ್ಯಶಮದಮದಿಂದಯುತನು | ಸಾರಿಹಿಮನಗ ತಪ್ಪಲುಗಳನು | ದಿವ್ಯಸಮಶತದಶ ವರ್ಷಗಳನು | ಆಹಸುಮನ ಸೋತ್ತಮನಾದ | ಬೊಮ್ಮನ ಧೇನಿಸಿಅಮಮಸುಘೋರವು | ವಿಮಲ ತಪವ ಗೈದ 1 ಬೊಮ್ಮ | ಅಚ್ಚ್ಯುತ ಮಾಯ ತನ್‍ಇಚ್ಛೆಯ ಸುತೆ ನಿನ | ಮೆಚ್ಚು ಪುತ್ರಿಯಹಳು 2 ಸ್ಮರಣೆ ಮಾತ್ರದಿ ವಿಷ್ಣುಮಾಯಾ | ದಿವ್ಯತರುಣಿ ರೂಪದಿ ಬ್ರಹ್ಮರಾಯ | ನೆದುರುಕರವ ಮುಗಿದು ಪೇಳು ಜೀಯಾ | ಎನೆಬರೆದನಾ5ದು ಕವೇರ್ಕನ್ಯಾ | ಆಹಸರಿತು ರೂಪದಿ ಮೋಕ್ಷ | ವg್ವ5ರ ವಹುದು ನೀಸರುವ ತೀರಥ ಮಯಿ | ಪರಿವುದು ಈ ಪರಿ 3 ಎರಡು ಅಂಶವು ನಿನಗಿಹುದೂ | ಒಂದುಸರಿತಾಗಿ ಪ್ರವಹಿಸುವೂದು | ಮತ್ತೆತರುಣಿ ರೂಪದಿ ಪತ್ನಿಯಹುದು | ಮುನಿವರ ಕುಂಭ ಸಂಭವಗಹುದು | ಆಹಕರೆಸಿ ಲೋಪಾಮುದ್ರೆ | ಮೆರೆವುದು | ಪತಿವ್ರತೆಶಿರೋಮಣಿ ಎನಿಸಿ ನೀ | ಮೆರೆವುದು ಭುವಿಯಲ್ಲಿ 4 ವರವಿತ್ತು ಮರೆಯಾಗೆ ಅಜನು | ನೃಪವರ ಸುತೆಯೊಡನೆ ಪೊರಟನು | ಕಾಲಕರ ಮರತನದಿ ಕಳೆದಾನು | ಮುಂದೆವ್ಯೆರಾಗ್ಯದಿಂ ಪೇಳಿದಾನು | ಆಹಪರಿಶುದ್ಧನಿಹೆ ನಿನ್ನ | ದರುಶನ ಮಾತ್ರದಿಪರಮ ನಿಷ್ಕಾಮದ | ಕರ್ಮವನೆಸಗುತ್ತ 5 ಹರಿಧ್ಯಾನದೊಳು ಬಲುರತ | ನಿರೆನರಪತಿ ಹರಿಲೋಕ ಗತ | ನಾಗೆತರುಣಿ ಕಾವೇರಿಯು ಸ್ಥಿತ | ಘೋರವರ ತಪವನ್ನು ಗೈಯ್ಯುತ್ತ | ಆಹಇg5ರಲೀ ಪರಿ ಪರಿ ಪರಿ ಬೇಡಿದಳ್ 6 ಸರಿದ್ರೂಪಳಾಗಿನ್ನು ಪರಿದೂ | ಹರಿಶರಣರ ಪಾಪವ ತರಿದೂ | ಮತ್ತೆಸರುವರ ತಾಪವ ಕಳೆದೂ | ಇನ್ನುಸರಿತು ಗಂಗಾದಿಗೆ ಹಿರಿದೂ | ಆಹವರ ಕೀರ್ತಿಯಿಂದಲಿ | ಮೆರೆಯುತ ಲೋಕೋಪಕರಳೆನಿಸಿ ಪ್ರವಹಿಸಿ | ಶರಧಿಯ ಸೇರ್ವಂಥ 7 ಸ್ಮರಣೆ ಮಾತ್ರದಿ ಪಾಪನಾಶಾ | ಮಾಳ್ಪಗಿರಿಯುಂಟು ಸಹ್ಯ ಆದ್ರೀಶ | ಅಲ್ಲಿತರು ರೂಪಮಲಕ ದೊಳ್ವಾಸಾ | ನಿನ್ನಚರಣ ಕಮಲವ ವಾಣೀಶಾ | ಆಹವಿರಜೆ ಪುಣ್ಯದ ಜಲ | ವರ ಕಂಬುವಿಲಿ ತುಂಬಿಎರದಭಿಷೇಚಿಸೆ | ಪರಿವುದದರ ಸಹ 8 ವರ ದತ್ತಾತ್ರೇಯ ನೆಂದೆನಿಸಿ | ತವಶಿರ ಸ್ಥಾನದಲ್ಲಿ ವಾಸೀಸಿ | ಎನ್ನಶರಣರ ಅಘಗಳ ಹರಿಸೀ | ನಿನ್ನವರ ದಕ್ಷಗಂಗೆಂದು ಕರೆಸೀ | ಆಹವರ ತವೋತ್ಸಂಗದಿ | ಶಿರವಿಟ್ಟು ಮಲಗುತ್ತಸರಿದ್ವರಳೆನಿಸುತ್ತ | ಮೆರೆಸುವೆ ನಿನ್ನನು 9 ಮಂಗಳ ಜಪತಪ ಸ್ನಾನ | ಮಿಕ್ಕಗಂಗಾದಿ ತೀರ್ಥಾನುಷ್ಠಾನ | ನಾಲ್ಕ್ಯುಗಂಗಳೊಳಗೆ ಮಾಳ್ಪ ನಾನಾ | ಕರ್‍ಮಂಗಳ್ತವೋತ್ಸುಂಗ ಶಿರಸ್ಥಾನ | ಆಹಮಂಗಳಾಮಲಕ ಜಲಂಗಳಿಗ ಸಮ ಕ-ಳೆಂಗಳ್ಷೋಡಶಕ್ಕೊಂದಂಗ ಸರಿ ಬರೆದು 10 ದಾತ | ತನ್ನಕಾಮಂಡುಲಿನೊಳ್ ನಿನ್ನ ಧೃತ | ಆಹನೇಮದಿಂದೊಂದಂಶ | ಲೋಪಾ ಮುದ್ರೆಯು ಆಗಿಆ ಮಹ ಮುನಿಯನ್ನ | ಪ್ರೇಮದಿ ವರಿಸುವೆ 11 ವರವಿತ್ತು ಮರೆಯಾಗೆ ಹರಿಯು | ಅತ್ತವರ ಮುನಿ ತಪಸಿನ ಧಗೆಯು | ಕಂಡುಸುರಜೇಷ್ಠ ಅವನೆದುರು ಹೊಳೆಯು | ಆಗಬರೆದನು ಜೀವನ ಧೊರೆಯು | ಆಹಹೊರಲಾರದವ ತಾನು | ವರ ಸನ್ಯಾಸದಿ ಮನವಿರಸಿರುವುದು ನಿರಾ | ಕರಿಸುತ್ತ ಪೇಳ್ದನು 12 ಚಕ್ರಧರ | ತುಂಬಿದ ಮನದಿಂದಹಂಬಲಿಸಿ ಕೈಗೊಂಡು | ಬೆಂಬಿಡದೆ ಸಲಹುವ 13 ಮುನಿವರಗಸ್ತ್ಯನು ಅಜನ | ಮಾತಮನವಿಟ್ಟು ಕೇಳುತ್ತ ವಚನ | ಪೇಳ್ದಅನುಕೂಲ ಭಾರ್ಯಳಾಳ್ವುದನ | ಯೋಗಅನುಕೂಲಿಸುವುದೆಂಬ ಹದನ | ಆಹವನಜ ಗರ್ಭನು ತನ್ನ | ತನುಜೆಯ ಸುಕನ್ಯಾಮಣಿಯ ಕಾವೇರಿಯ | ವಿನಯದಿ ವರಿಸೆಂದ 14 ನಗ ಶೃಂಗದಿರಿಸುತ್ತಮಿಗೆ ಚೆಲ್ವ ಸರಿತಾಗಿ | ಪೋಗಲನುಗ್ರಹಿಸು 15 ಮೋದ ತಾಳುತ್ತಸುಗುಣೆಯ ಬೆಸಸೀದ | ನಗು ಮುಖದಿಂದಲಿ 16 ಹೊರ ಮುಖಳಾದಳ್ ಕಾವೇರಿ | ಮುನಿವರನ ಸತ್ಕರಿಸಲು ನಾರಿ | ದ್ವಿಜವರ ಪೇಳೆ ಬ್ರಹ್ಮಗನುಸಾರಿ | ಆಕೆವರಗಳ ಬೇಡಲು ಭಾರಿ | ಆಹಸುರಜೇಷ್ಠ ನ್ವೊರೆದಂತೆ | ವರಗಳ ನೀಯಲುಸುರಕನ್ಯಾಮಣಿಯಾಗ | ವರಿಸಿದಳಾ ಮುನಿಯ 17 ವಾಹನ ಪತ್ನಿ ಸೇರಿ | ಶಿರಿಕಂಸಾರಿ ಗರುಡನ್ನ ಏರಿ | ಕ್ರತುಧ್ವಂಸಿ ಉಮಾ ನಂದಿ ಏರಿ | ಇಂದ್ರಶಂಸಿ ಸೈರಾವತನೇರಿ | ಆಹಸಾಂಶರು ಯೋಗ್ಯ ನಿರಂಶರು ಸೇರಿ ಪ್ರ-ಶಂಸನ ಗೈಯುತ್ತ ವೈವಾಹ ನಡೆಸಿದರ್ 18 ಮದುವೆ ವೈಭವ ಪೇಳಲಾರೆ | ಜಗದುದಯಾದಿ ನಡೆಪರಿಹಾರೆ | ಹರಿಮುದ ಪೊಂದಲಿನ್ನೆದುರ್ಯಾರೆ | ಎಲ್ಲರ್ವೊದಗಿ ಆಶೀರ್ವದಿಶ್ಯಾರೆ | ಆಹವಿಧ ವಿಧ ದುಡುಗೊರೆ | ಅದ ಪೇಳಲಳವಲ್ಲಅದುಭುತ ಜರುಗಿತು | ಉದ್ವಾಹ ಕಾರ್ಯವು 19 ಗಮನ | ಮತ್ತೆಕಾವೇರಿ ಸಹ ಮುನಿ ಹಿಮನ | ಕೇಳ್ಕೆಭಾವಿಸುತಲ್ಲೆ ಕೆಲದಿನ | ಆಹಆವಾಸಿಸಿರೆ ಋಷಿ | ಸಾರ್ವರ ಮನ ತಿಳಿದುಆಹ್ವಾನ ವಿತ್ತಳು | ಸಹ್ಯಾದ್ರಿ ಸನಿಯಕ್ಕೆ 20 ಗಮನ | ಆಹಇಂಬಿಟ್ಟನ್ನೊಂದಂಶ | ಲೋಪಾಮುದ್ರೆಯು ಕುಂಭಸಂಭವ ಸಹ ಸಹ್ಯ ಅದ್ರಿಗೆ ಗಮಿಸಿದಳ್ 21 ಉತ್ತರ ಹಿಮನಗ ಬಿಡುತ | ವನಸುತ್ತುತ ವಿಂಧ್ಯ ಮೀರುತ್ತ | ಹಾಂಗೆಉತ್ತಮ ಸಹ್ಯಾಚಲೇರುತ್ತ | ಅಲ್ಯುನ್ನತ್ತ ಬ್ರಹ್ಮಗಿರಿ ಸಾರುತ್ತ | ಆಹಉತ್ತಮ ಕ್ಷೇತ್ರದಿ ಜತ್ತಾಗಿ ಕಮಂಡಲಒತ್ತಟ್ಟಿಗಿರಿಸುತ್ತ ಪತ್ನಿಗೆ ಬೆಸಸಿದರ್ 22 ಕಾಲ ಮುದದಿ ಕರಕದಿಂದಅದುಭೂತವೆನೆ ಸರಿದ್ವರಳಾಗಿ ಪ್ರವಹಿಸು 23 ಪರಿ ಕಾಲ ಸಮೀಪವಾಗಲು ಸುರಪ 24 ಹರಿ ಮನೋಭಾವಾನು ಸಾರಿ | ಮಳೆಗರೆಯಲನ್ಯತರುವ ಸಾರಿ | ಶಿಷ್ಯರುಗಳಾಶ್ರಯಿಸಲು ಮೀರಿ | ಕುಂಡಸರುವೆ ತೀರಥಗಳು ಉಸುರಿ | ಆಹಪರ್ವ ಕಾಲವು ಇದು | ಪೊರಮಡು ಕಾವೇರಿಪರಿವೆವು ನಿನ ಪಿಂತೆ | ತೀರ್ಥಗಳಗ್ರಣಿಯೆ 25 ವಿಧಿ ಬಂದ ಹಂಸವನೇರಿ | ಆವಮುದದಿಂದ ವನಗಳ್ ಸಂಚಾರಿ | ಇನ್ನುಅದುಭೂತಾಮಿತ ತೀರ್ಥ ಗಿರಿ | ಕಂಡುಒದಗಿ ಕರಕದ ಜಲ ಭಾರಿ | ಆಹಮುದದಿ ಮೀಯುತ ಜಪ ಅದುಭೂತಾಷ್ಟಾಕ್ಷರಪದುಮ ಸಂಭವ ಹರಿಧ್ಯಾನದಿ ರತನಾದ 26 ಮಂದ ಮಾರುತ ಬೀಸೆ ವಿಮಲ | ಧಾತ್ರಿಗಂಧ ವೆಂದೆನುತಲಿ ಬಹಳ | ಮುದದಿಂದೆಚ್ಚರಗೊಂಡು ಕಂಗಳ | ಮುಂದೆಸುಂದರಾಮಲಕಾ ಕೃತಿಗಳ | ಆಹಎಂದು ಕಾಣದ ದೃಶ್ಯ | ವೆಂದೆನುತಲಿ ಮನದಿಂದ ಧೇನಿಸೆ ಅದು | ಛಂದದಿ ಮರೆಯಾಯ್ತು27 ಸಿರಿ ಹರಿಯು | ಸಿರಿವತ್ಸಾಂಕಿತನು ಬಾಹು ದ್ವಿದ್ವಯು | ಇಂದಮೆಚು5Àೂಪವ ತೋರೆ ವಿಧಿಯು | ಆಹ |ಸಚ್ಚರಿತೆಯ ಪಾಡೆ | ನಿಚ್ಚಳಾಮಲಕದಉಚ್ಚರೂಪವ ಕಂಡು | ಅರ್ಚಿಸಿದನು ಬಹಳ 28 ಗಾತ್ರ ಪಾದ | ಬಿಸಜಗಳ್ವಂದಿಸಿಬಿಸಜ ಸಂಭವ ಗೈದ | ಅಸಮ ಸಂಪೂಜೆಯ 29 ಧಾತಾ ಸ್ವ ಕುಂಡಿಕಾಸ್ಥಿತ | ವಿಮಲ ತೀರ್ಥವು ವಿರಜೆಯಿಂ ಹೃತ | ಶಂಖಪೂರ್ತಿಸಿ ಪೂಜಾ ಪದಾರ್ಥ | ಪ್ರೋಕ್ಷಿಸಿಪೂತಾತ್ಮಾಮಲಕದಿ ಸ್ಥಿv5 ಆಹಶ್ರೀ ತರುಣೀಶನ | ದತ್ತಾತ್ರೇಯನ ರೂಪಖ್ಯಾತ ಪೂಜಿಸುತಿರಲಶರೀರ ವಾಕ್ಕಾಯ್ತು 30 ಪರಿ ಗೈಯ್ಯುವ ಭಾಮಾ ಮಣಿಕುರಿತು ಪೇಳಿತು ವಾಣಿ ನೇಮ | ನೀನುಶರಧೀ ಸೇರುವ ಮನೋ ಕಾಮಾ | ಆಹಪರಿಪೂರ್ಣವಹುದೀಗ | ವರ ತುಲಾಪರ್ವದಿಶರತ್ಕಾಲ ಮುಕ್ತಿದ | ಪರಿವುದು ಕಾವೇರಿ31 ತತುಕ್ಷಣ ಮುನಿಯ ಕಮಂಡ್ಲು | ದೊಳುಸ್ಥಿತ ಸರ್ವ ತೀರ್ಥಮಾನಿಗಳೂ | ಪೇಳೆತುತುಕಾಲ ಕವೇರ ತನುಜಳೂ | ಶೀಘ್ರಉತು ಪತ್ತಿ ತಾಳಿ ಪರಿದಾಳೂ | ಆಹಇತರ ತೀರಥಗಳು | ಸರಿತು ರೂಪದಿ ಹಿಂದೆಅತಿ ತ್ವರೆಯಲಿ ಪ್ರವ | ಹಿತರಾಗಿ ಪೋದರು 32 ಋಷಿವರ್ಯ ಸ್ನಾನವ ಮಾಡಿ | ಪರಿಕ್ಷಿಸಲಾಗ ವಿಸ್ಮಯ ಕೂಡಿ | ಶಿಷ್ಯರಿಗುಸರಲಾಕ್ಷೇಪದ ನುಡಿ | ಅವರುಸಿರಿದರ್ ಮಳೆಯ ಗಡಿಬಿಡಿ | ಆಹರಸ ರೂಪದಲಿ ಪರಿವ | ಅಸಮ ಪತ್ನಿಯ ಕೂಗೆಋಷಿಗೆ ಶಾಂತಿಯ ಸೊಲ್ಲ | ಒಸೆದು ಪೇಳಿದಳವಳೂ 33 ಸುರವರ ಪೂಜ್ಯ ಧಾತ್ರಿಯು | ಇನ್ನುತರುವು ಆ ಮಲಕದ ಬಳಿಯು | ತೀರ್ಥವರ ಶಂಖ ಸಂಜ್ಞಿತ ತಿಳಿಯು | ಇಲ್ಲಿವಿರಜೆಯ ದೊಂದಿಹ ಕಳೆಯು | ಆಹವರ ನಭೊ ಗಂಗೆಯು | ಸರಿ ಸಹ್ಯಾಮಲಕವುವರಣಿಸಲಳವಲ್ಲ | ಸರಿದ್ವರ ಮಹಿಮೆಯ 34 ಕೈವಲ್ಯ | ದಾತನ ಒಲಿಮೆಯು 35 ಗಂಗಾನದೀಗಗಳು ತಮ್ಮ | ಪಾಪಹಿಂಗಿಸಲೋಸುಗವಮ್ಮ | ತುಲಾಮಂಗಳ ಮಾಸದಲಮ್ಮ | ಒಂದುತಿಂಗಳಿಹರಿಲ್ಲಿ ಸಂಭ್ರಮ್ಮಾ | ಆಹಗಂಗೆ ದಕ್ಷಿಣಾಖ್ಯೆ | ಮಂಗಳೆ ಜನಗಳಘಂಗಳ ಕಳೆಯುತ್ತ | ತುಂಗೋಪಕಾರಿಯೆ 36 ಕಾವೇರಿ ಪ್ರವಹಿಸಿ ಭರತ | ವರ್ಷಪಾವಿಸುತಿಹಳು ತಾ ನಿರುತ | ಬಂದುಸೇವಿಸೂವರ ಪಾಪ ತ್ವರಿತ | ದೂರಗೈವಳೆಂಬುವದೆ ನಿಶ್ಚಿತ | ಆಹಈ ವಿಧ ಮಹಿಮೆಯ ಓವಿ | ಪಾಲಿಸಿದನು |ಶ್ರೀವರ ಶ್ರೀ ಗುರು | ಗೋವಿಂದ ವಿಠಲಯ್ಯ 37
--------------
ಗುರುಗೋವಿಂದವಿಠಲರು
ನದೀದೇವತೆಗಳು ಕಂಗಳಿಂದಲಿ ನಿನ್ನ ಕಂಡೆ ನಾನೀಗ ಹಿಂಗಿತೇ ಎನ್ನ ಅಘದ್ಹಿಂಡು ಕಾವೇರಿ ಪ. ಮಂಗಳಾಂಗಿಯೆ ಶ್ರೀ ರಂಗನಾಥನ ಪದ ಭೃಂಗಳೆನಿಸಿ ಜನರ ಪಾವನಗೈವೆ ತುಂಗವಿಕ್ರಮ ಹರಿಗೆ ಮೂಲರೂಪಳಾಗಿ ಅಂಗ ಶುದ್ಧಿಯಗೈವೆ ಪಾಪಿಗಳ ಸತತ 1 ಎಲ್ಲೆಲ್ಲಿ ನೋಡೆ ಶ್ರೀರಂಗನ್ನ ಸೇವಿಸುವೆ ಪುಲ್ಲಲೋಚನೆ ನಿನ್ನ ಬಗೆಯರಿವೆನೆ ಬಲ್ಲ ಭಕ್ತರು ಬಂದು ನಿನ್ನಲ್ಲಿ ಸ್ನಾನವಗೈದು ಉಲ್ಲಾಸದಿಂದ ಆನಂದಪಡುತಿಹರೆ 2 ನೊರೆಸುಳಿಗಳಿಂದ ಭೋರ್ಗರೆಯುತ್ತ ಹರಿ ಇರುವ ಅರಮನೆಯೆ ವೈಕುಂಠವೆಂದು ಸೂಚಿಸುತ ಹರಿಸದನ ಸುತ್ತಿರುವೆ ವಿರಜೆ ನಾನೆಂದೆನುತ ಅರುಹುವಾ ತೆರದಿ ಬಹು ರಭಸದಿಂ ಪರಿವೆ 3 ನಿನ್ನ ಧ್ವನಿ ಇಂಪೆಂದು ಆನಂದದಿಂದಾಲಿಸುತ ಚನ್ನ ಶ್ರೀರಂಗ ತಾ ಪವಡಿಸಿಹನೆ ಘನ್ನ ಮಹಿಮಳೆ ಸಕಲ ಜೀವರಾಶಿಯ ಪೊರೆವೆ ಎನ್ನ ಮನ ಹರಿಪದದಿ ನಲಿವಂತೆ ಮಾಡೆ 4 ನಿನ್ನನೇ ವಿರಜೆ ಎಂತೆಂದು ಭಾವಿಸಿ ಈಗ ಎನ್ನ ಗುರುಗಳ ದಯದಿ ಸ್ನಾನಗೈದೆ ಇನ್ನು ಶ್ರೀ ವೈಕುಂಠದೊಡೆಯನಾ ತೋರಮ್ಮ ಘನ್ನ ಶ್ರೀ ಗೋಪಾಲವಿಠ್ಠಲನ 5
--------------
ಅಂಬಾಬಾಯಿ
ನಮೋ ನಮೋ ಶ್ರೀ ಮಧ್ವಾಚಾರ್ಯ ಆರ್ಯಾ ಪ ಭೃಗು ಕುಲೋತ್ತಮ ರಾಮ ಭೂಸುರರಿಗೆ ಸರ್ವ ಜಗವೆಲ್ಲ ಧಾರಿಯನು ಯೆರದು ಸಂಹ್ಯಾ ನಗದಲ್ಲಿ ನಿಂದು ಸಮುದ್ರನ್ನ ಹಿಂದಕ್ಕೆ ತೆಗಿಸಿ ಈ ಭೂಮಿಯನು ಸಾಧಿಸಿದನು1 ಮೂರ್ತಿ ಅಲ್ಲಿಗಲ್ಲಿಗೆ ಕ್ಷೇತ್ರ ಗತಿ ತಪ್ಪಿದಂತೆ ನಿರ್ಮಾಣ ಮಾಡಿ ಸತಿಪತಿಯ ಉದ್ಧರಿಸಿ ಬರುತ ಕಂಡನು ಉ ನ್ನತವಾದ ಪರ್ವತವು ಯೋಜನವಿರೆ 2 ಬೆರಗಾಗಿ ಪರಶುರಾಮನು ಬಂದು ಈ ಗಿರಿಯಲ್ಲಿ ನಿಂದು ಅಗ್ರಭಾಗವೈದೆ ತರಹರಿಸಲಾರದೇ ಭೂಮಿಗಿಳಿಯಿತು ಅದ್ರಿ ನಿರೀಕ್ಷಿಸಿ ಸುಜನರು ಇದ್ದನಿತು3 ಸಿರಿರೂಪ ದುರ್ಗಾನಾಮಕಳಾದ ದೇವಿಯನು ಕರದು ಈ ಸ್ಥಾನದಲಿ ಇರ ಹೇಳಿದಾ ಅರವು ಮಾಡದೆ ಮುಂದೆ ಕಲಿಯುಗದಲಿ ನೆರದು ದುರುಳರಾತಿಯರ ಸಂಹರಿಸುಯೆಂದು 4 ಅನಿತರೊಳಾಕಾಶದಲಿ ಜಯ ಜಯವೆಂದು ಅನಿಮಿಷರು ಕೊಂಡಾಡಿ ನಗುತ ದಿವ್ಯ ಮಣಿಮಯ ವಿಮಾನದಿಂದಾ ಗಿರಿಗೆ ವೇಗದಿ ಸು ಮ್ಮನರಾಗಿ ಬಂದು ತುತಿಸಿದರು ಹರಿಯಾ 5 ಅಂದಿನಾರಭ್ಯವಾಗಿ ಇದೇ ವಿಮಾನಗಿರಿ ಯೆಂದು ಕರೆಸಿತು ಶ್ರುತಿ ಯುಕ್ತಿಯಲ್ಲಿ ಎಂದೆಂದಿಗೆ ಇದನೆ ನೋಡಿದವರಿಗೆ ದೋಷ ಗಂಧವಾದರು ಇಲ್ಲಾ ಇಲ್ಲ ಇಲ್ಲಾ6 ಈ ಮಹಿಮೆಯನು ಕೇಳಿ ಧರ್ಮ ತಪವನು ಮಾಡಿ ಸೋಮಾರ್ಕ ಪ್ರಭಯಂತೆ ಕೀರ್ತಿಯನು ಪಸರಿಸಿ ಪಾಮರರ ಉದ್ಧರಿಸಬೇಕು ಯೆಂದು7 ಪರಿ ಶ್ರೀಹರಿಯ ಧ್ಯಾನವನು ಮಾಡಲು ಶ್ರೀಪತಿ ವರವಿತ್ತ ಮುಂದೆ ಮಹ ಪಾಪಿ ಪುಟ್ಟುವನು ಅವನಗೋಸುಗ ವಾಯು ತಾ ಪರಮ ಪ್ರೀತಿಯಲಿ ಜನಿಸುವನು 8 ಅಂದ ಮಾತಿಗೆ ಯಮನು ಬಹುಕಾಲದಲಿದ್ದ ಛಂದದಿಂದದಿ ಪೋದ ತನ್ನ ಪುರಕೆ ಇಂದಿರಾಪತಿ ನೇಮಿಸಿದ ಪರಿಯಂತೆ ಆ ನಂದತೀರ್ಥರಾಗಿ ಜನಿಸಿದರು 9 ಏನು ಪೇಳಲಿ ಪುಣ್ಯ ಚರಿತಯನು ಚನ್ನಾಗಿ ಜ್ಞಾನದಲಿ ಅಧಿಕಾರಾಗಿ ಇಷ್ಟಾನಿಷ್ಟ ಪುಣ್ಯ ಮಾನದಲಿ ಕೊಂಡಾಡಿ ಸುಖಿಪರಲ್ಲಿ10 ಹುರಳಿ ಗುಗ್ಗರಿ ಮೆದ್ದ ಅದ್ಧುತವ ಕೇಳಿದರೆ ಉರಳಿ ಹೋಗುವದು ಜನ್ಮಾಂತರದ ದುಷ್ಕರ್ಮ ಮರಳಿ ಬಲಿ ಬಾಲವನು ಪಿಡಿದದು ನೆನಸಿದರೆ ಸುರರು ಮುಕ್ತಿಯಿನಿತ್ತು 11 ಧರಣಿಧರದಿಂದ ಧುಮುಕಿದ ಪಾದಯುಗ ನೋಡೆ ಎರಡೊಂದು ಏಳು ಕುಲತೃಪ್ತರಹರೊ ಅರೆ ಮ್ಯಾಲೆ ಸಾಲವನು ತಿದ್ದಿದಾ ವಾರ್ತಿ ಕೇಳಿ ಎರಡೊಂದು ಋಣದಿಂದ ಕಡೆಗಾಗುವ 12 ತಲೆಕೆಳಕಾಗಿ ಬೆಳೆದಾ ವೃಕ್ಷವನು ನೋಡಿ ಬಲಿವನು ಸುರದ್ರುಮದಂತೆ ರಂಗ ಛಲದಿಂದ ಸರ್ಪನ ವರಸಿದ ಸ್ಥಳ ಕಾಣೆ ಬಲು ವಿಷಗಳು ಪೋಗಿ ನಿರ್ಮಲಹರೋ 13 ಧೂಳಿ ಅಕ್ಷರ ಬರೆದ ಪ್ರದೇಶ ನೋಡಲು ವಾಲಯಾ ಶುಭವಿದ್ಯ ಫಲಿಸುವದು ಲೀಲೆಯಿಂದ ಗ್ರಂಥ ಅಭ್ಯಾಸಕೆ ಪೋಗಿ ಬರುವ ಶೀಲತೆಯು ಕೇಳೆ ಮನೋ ವಾಯುವೇಗ 14 ಬುತ್ತಿಯ ಉಂಡ ಸ್ಥಳವನ್ನು ಕೊಂಡಾಡಲು ತೃಪ್ತನಾಗುವ ಮನುಜ ಮೃಷ್ಟಾನ್ನದಿ ನಿತ್ಯ ಬಾಲಕ್ರೀಡೆ ಆಡಿದ್ದು ಪಾಡಲು ಪುತ್ರೋತ್ಸವಗಳಿಂದ ಬಾಳುತಿಪ್ಪ15 ಚಾಪ ಗದ ಪದುಮ ಎರಡೊಂದು ತೀರ್ಥಗಳು ಇರುತಿಪ್ಪ ವಾಸುದೇವನೆಂಬೊ ನಾಮಾ ಸರೋವರದಲಿ ಮಿಂದು ಸ್ತೋತ್ರ ಮಾಡಿದ ನರಗೆ ವಿರಜೆಯಲಿ ಸ್ನಾನ ಸಂದೇಹವಿಲ್ಲ 16 ಜನಿಸಿ ಮೊದಲು ಮಹಾ ಬದರಿಗೆ ಪೋದಾರಭ್ಯ ಎಣಿಕೆ ಇಲ್ಲದೆ ಚರಿತೆ ಅನುದಿನದಲಿ ಗುಣಿಸಿ ಗುಣದಲಿ ತಿಳಿದು ಕೀರ್ತನೆಯನೆಸಗಿದಾ ಮನುಜರಿಗೆ ಸತ್ಕೀರ್ತಿ ಬರುವುದಯ್ಯಾ 17 ಮಧ್ವ ಮಧ್ವ ಎಂಬೋ ನಾಮವನು ನುಡಿದರೆ ಬದ್ಧವಾಗಿದ್ದ ಭವಾಬ್ಧಿಯಿಂದ ಎದ್ದು ಕಡಿಗೆ ಬಿದ್ದು ಸಂಚಿತಾಗಾಮಿಯಿಂದ ಗೆದ್ದು ಚರ್ಮ ದೇಹದಿಂದ ನಲಿವ 18 ಶ್ರೀ ಪೂರ್ಣಬೋಧ ಗುರುಶೇಖರ ಸುಗುಣಧಾಮ ಆಪನ್ನ ಪರಿಪಾಲ ಅಮೃತಫಲದ ವ್ಯಾಪುತ ನಾನಾ ಸ್ಥಾನ ಹನುಮ ಭೀಮ ಸರ್ವ ರೂಪಾತ್ಮಕ ಪ್ರಾಣ ಭಾರತೀಶ19 ಕೇಳಿ ಹರುಷಿತನಾಗಿ ಬಂದ ವೈಭವದಂತೆ ಕಾಲ ಹಿಂಗಳಿಯದೇ ನಿತ್ಯದಲ್ಲಿ ಲೀಲೆಯಲಿ ವಾಸವಾಗಿರಲೆಂದು ಅಂದು ಪೇಳಲಾ ಮೌಳಿಯನು ತೂಗಿ ಸರ್ವರು ನಿಂತರು20 ಪುಂಜಕಾಸ್ಥಳ ಬಂದು ತಪವು ಮಾಡಲು ಕ್ಷೇತ್ರ ರಂಜನವಾಯಿತು ಇದೇ ನಾಮದಲ್ಲಿ ಕುಂಜರ ವರದ ನಮ್ಮ ವಿಜಯವಿಠ್ಠಲನಂಘ್ರಿ ಕಂಜವನು ಭಜಿತ ಗುರುರಾಜ ಜಯತು 21
--------------
ವಿಜಯದಾಸ
ಪಾಹಿ ಪಾಹಿ ಮುಕುಂದ ಕೇಶವ ಪಾಹಿ ಮುರಹರ ಮಾಧವಾಪಾಹಿ ಗೋಕುಲವಾಸ ಪಾವನ ಪಾಹಿ ಕೃಷ್ಣ ಜನಾರ್ದನಾಪಾಹಿ ಭಕ್ತಮನೋಹರಾಕೃತೆ ಪಾಹಿ ಶ್ರೀಧರ ವಾಮನಾಪಾಹಿ ಪಂಕಜನೇತ್ರ ಜಯಜಯ ಪಾಹಿ ವೆಂಕಟನಾಯಕಾ1ಪಾರರಹಿತ ಭವಾಬ್ಭಿ ಮಧ್ಯ ವಿಹಾರವೇಷ ವಿನೋದಿನಂದಾರ ಪುತ್ರ ಧನಾಲಯಾದಿಷು ಸಾರಮತಿಮತಿದುಃಖಿನಂಕ್ರೂರ ಕ್ರೋಧಕಷಾಯ ಕಲುತ ಕರಣ ಮತ್ಯಭಿಮಾನಿನಂಶ್ರೀ ರಮಣ ವೈಕುಂಠವಲ್ಲಭ ಪಾಹಿ ವೆಂಕಟನಾಯಕಾ 2ರಕ್ಷ ರಕ್ಷ ಮಹೇಶ ಸುರಮುನಿಪಕ್ಷ ಮನ್ಮಥಶಿಕ್ಷಕಾರಕ್ಷ ರವಿಚಂದ್ರಾನಲಾಂಬಕ ರಕ್ಷ ರಜತಗಿರೀಶ್ವರಾರಕ್ಷ ರಾಕ್ಷಸಭಯನಿವಾರಕ ರಕ್ಷ ಕಾಮಿತದಾಯಕಾರಕ್ಷ ಗಜವ್ಯಾಘ್ರಾಜಿನಾಂಬರ ರಕ್ಷ ಶಿವ ಗಂಗಾಧರ 3ಕಾಮಕರಿಪದ ಮರ್ದಿತಂ ತನು ದಾಮ ಬಂಧನ ಪೀಡಿತಂತಾಮಸಂ ತ್ವತ್ಪಾದ ಸೇವಾ ನಾಮಮಾತ್ರ ವಿವರ್ಜಿತಂಭೀಮ ರವಿಜಭಯಾತುರಂ ಕುರು ಕಾಮಹರ ತವ ಸೇವಕಂವ್ಯೋಮಕೇಶ ವಿರಿಂಚಿ ವಿಬುಧಸ್ತೋಮ ಶಿವಗಂಗಾಧರ 4ವಾಸುದೇವ ವರೇಣ್ಯ ಪದ್ಮನಾಭ ಸುರೇಶ ಕ್ಲೇಶವಿಭಂಜನಭಾಸಮಾನ ಭವಾಬ್ಧಿತಾರಕ ದಾಸಪದ್ಮದಿವಾಕರದೇಶಕಾಲಾತೀತ ನಿರುಪಮ ಪಾಹಿ ವೆಂಕಟನಾಯಕಾ 5ಶರಣಜನ ಸುರಕುಜ ತವಾಮಲ ಚರಣಪಂಕಜ ಪಂಜರೇವಿರಜೆವಿಶತು ಮನಃಸ್ಥಿರಂ ಮಮ ಕುರು ತಥೈವ ಕೃಪಾಕರಪರಮಕಾರಣ ಪರತರಾತ್ಪರ ಪುರುಷ ಪ್ರಕೃತಿಪ್ರವರ್ತಕಾಸರಸಿಜೋದ್ಭವಸ್ತಂಭ ವ್ಯಾಪಕ ಪಾಹಿ ವೆಂಕಟನಾಯಕ 6ನೀಲಕಂಠ ನಿಧೀಶಮಿತ್ರ ಸುಶೀಲ ಸಾಂಬ ಮೃಗ ಫಣಿ ವರ ಕುಂಡಲಶೂಲಪಾಣಿ ಸುರಾದ್ರಿಚಾಪ ಜಟಾಲತಾಪರಿಶೋಭಿತಕೀಲಿತಾಮರವೈರಿಪುರ ನಿರ್ಮೂಲ ಶಿವಗಂಗಾಧರ 7ದೇಹಿ ದಾಸ್ಯಮನಾಮಯಂ ಹರ ದೇಹಿ ಸಾಧುಸಮಾಗಮಂದೇಹಿ ತವಚರಿತಾಮೃತಂ ಭವ ನಿತ್ಯ ನಿರೋಗತಾಂದೇಹಿ ಶಿವಗಂಗೇಶ ತಿರುಪತಿಧಾಮ ವೆಂಕಟನಾಯಕ 8ಓಂ ಯಮಳಾರ್ಜುನಭಂಜನಾಯ ನಮಃ
--------------
ತಿಮ್ಮಪ್ಪದಾಸರು
ಭಕ್ತವತ್ಸಲ ಭಾರಕರ್ತಾ | ಕರುಣವಂತ ನಿತ್ಯ ನಿರ್ಮಲ ಸರ್ವ ಶಕ್ತ | ಶಾಂತಾತ್ಮಕ ಪ. ಸುತ್ತ ವಿರಜೆ ಉನ್ಮತ್ತ ಮುಕ್ತರ ನೃತ್ಯ ಗೀತೆ ವೈಚಿತ್ರದೋಲಗವು ಇತ್ತಂಡದಿ ಮೈಹತ್ತಿ ಕುಳಿತ ಸತಿಯ ರೆತ್ತಲಿತ್ತ ಬಂದ ಚಿತ್ರ ಮಹಿಮ ಹೇ ಅ.ಪ. ವಿಹಂಗ ಗಮನ ತು- ರಂಗರೂಪನೆ ಅಂತರಂಗದಿ ನೆಲಸಿ ಸು- ಸಂಗದಿಂದಲಿ ಲಿಂಗ ಭಂಗಗೈಸುತ ಜ- ನ್ಮಂಗಳ ಕಡೆ ಮಾಡು ರಂಗ ಕರುಣಾಪಾಂಗ ಇಂಗಡಲಳಿಯನೆ ತುಂಗ ಮಹಿಮ ನರ- ಸಿಂಗ ನಿನ್ನಯ ಚರಣಂಗಳ ತೋರಿಸೋ ಭಂಗಪಡುವೆ ಭವಹಿಂಗಿಸಿ ಪೊರೆ ಕಾ- ಳಿಂಗ ಮಥನ ಯದುಪುಂಗವ ಕರುಣಿ 1 ಗತಿ ನೀನೆ ಎಂದು ಶ್ರೀಪತಿ ನಿನ್ನ ಮೊರೆಹೊಕ್ಕೆ ಹಿತದಿಂದ ಕಾಯೊ ದ್ರೌಪದಿಯ ಕಾಯ್ದಂಥ ದೈವ ಚ್ಯುತದೂರ ಮುಕ್ತರ ಸ್ತುತಿಪ್ರಿಯ ಶ್ರೀ ವಾಯು- ಪಾದ ಪ್ರತಿ ಕಾಣೆ ನಿನಗೆಣೆ ಕರ್ಮ ಸು- ಪಥ ಕಾಣೆನು ಗತಿಯಿಲ್ಲದೆ ಶ್ರೀ- ಪತಿ ಕೃಪೆ ಮಾಡುತ ತತುವ ಮಾನಿಗಳ ಕೃತಿ ತಿಳಿಸುತ ನಿನ ತುತಿಸುವ ಮತಿಕೊಡು 2 ಗೋಪಿಕಂದನೆ ಬಾಲರೂಪಧಾರಕ ಮಧ್ವ- ರಪಾರ ಸ್ತುತಿ ಕೇಳಿ ಗೋಪೀಚಂದನದಿ ಬಂದು ಪರಿ ನಿಂತ ದೇವಪತಿ ಜನಗಳ ಪೊರೆದು ಕಾಪಾಡುವ ಕರ್ತ ಗೋಪಾಲಕೃಷ್ಣವಿಠ್ಠಲ ಶ್ರೀಪದ್ಮಜಮುಖ ಸುರಾಪ ಧರೇಂದ್ರರು ತಾಪಸಿಗಳೂ ನಿನ್ನ ವ್ಯಾಪಾರ ತಿಳಿಯದೆ ಗೋಪ್ಯಾದಿ ನುತಿಸಿ ಸ್ವರೂಪ ಯೋಗ್ಯತೆಯಂತೆ ವ್ಯಾಪಕ ನಿನ್ನಯ ರೂಪವ ಕಾಂಬರು 3
--------------
ಅಂಬಾಬಾಯಿ
ಮನ್ನೀಸಯ್ಯಾ - ಮನಸಿಜನಯ್ಯಾ |ಮೌನಿಜನರ ಪ್ರಿಯ ಪಂಡರೀರಾಯಾ ಪ ಪರಿ | ಅನಘ ನೀ ಕರುಣಿಸಿ ಅ.ಪ. ಪರಿ ಏನಿದು ಹರಿಮೊರೆ ಕೇಳೆನನ್ನದು | ಪೊರೆವುದು ಜೀಯಾ 1 ಪರಿ ಗೋಪಿ ಜನರ ಪ್ರಿಯದ್ರೌಪತಿ ಗೋಪ್ತಾ | ಬಲು ಆಪ್ತಾ |ಕೈಪಿಡಿಯುವುದೀ | ಪಾಪಿಯಾದೆನ್ನನುಶ್ರೀಪತಿ ಶ್ರೀಹರೇ | ಮುರಾರೇ ||ಲೇಪಿಸು ಕೀರ್ತಿಕ | ಲಾಪಗಳ್ನಿನ್ನ ಸು-ರಾಪಗಪಿತ ಶ್ರೀ ಪಾವನ ಮೂರ್ತೇ 2 ಭವ ಶರ ನಿಧಿಯಲಿ | ಭವಣೆಯ ಪಡಲಾರೆಭವ ಜನಕನ ಪಿತಾ | ಹೇ ದಾತಾ |ಹವಣೆಯು ದಾವುದು | ಭವವನುತ್ತರಿಸಲುತವಪದ ಸ್ಮರಿಸುತಾ | ಸ್ಮರಿಸುತ್ತಾ ||ಸವನ ಮೂರರೊಳು | ಅವಶದಿ ಕೀರ್ತಿಸಿಬೆವರೆಂಬ ವಿರಜೆಯ | ಅವಗಾಹಿಸುವನುಭವವ ಕೊಡಿಸು ಹರಿ | ಅವನಿಜೆ ವಲ್ಲಭಪವನ ವಂದಿತ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಮಲ್ಲಮರ್ಧನ ರಾಣಿ - ಮಹ ಲಕ್ಷುಮೀ ಪ ಖುಲ್ಲ ಜನರೆದೆದಲ್ಲಣೆಯೆ | ಕೊಲ್ಲಾಪುರ ನಿಲಯೆ ಅ.ಪ. ಪ್ರಕೃತಿ ಚೇತಾತ್ಮೆ ಜಡ | ಪ್ರಕೃತಿ ದ್ರವ್ಯದ ಕಾರ್ಯವಿಕೃತಿ ಗೊಳಿಸುತ ಮೊದಲು | ವೈಕೃತವು ತದನಂತರಾ |ವ್ಯಕುತಿ ಗೈಯುತ ಲಿಂಗ | ಪ್ರಕೃತಿ ಕಾರ್ಯವ ಮಾಡಿಸುಕೃತ ತ್ರಿವಿಧರ ಸಹಜ | ಪ್ರಕೃತಿ ಶಬ್ದನಿಗೀವೇ 1 ಪರಿಭವ ಕಾರ್ಯನೀ ಮಾಳ್ಪೆ ಪ್ರಜ್ಞಾಂತ | ಪ್ರೇಮ ರೂಪದಲೀಈ ಮಹತ್ತುಪಕಾರ | ಸಾಮಸನ್ನುತ ಹರಿಯನೇಮದಿಂದಲಿ ಗೈವ | ಭಾಮೆಗಾ ನಮಿಪೇ 2 ಹರಿಕಾರ್ಯ ಸತ್ಸಾಧ್ಯೆ | ವಿರಜೆ ರೂಪದಿ ಹರಿಯೆ ||ವರ ಮಂದಿರಾವರಣ | ನೆರೆ ವಿರಚಿಸೀ |ಸರುವ ಸಜ್ಜೀವ ತವ | ಸರಿತದೋಲ್ ಅವಭೃತವವಿರಚಿಸಲು ಜಡ ಪ್ರಕೃತಿ | ಹರಿಸುವೆಯೆ ದಯದೀ 3 ಶ್ರೀ ಸಿತ ದ್ವೀಪಾದಿ | ಆ ಸುರೂಪವ ತಾಳಿವಾಸುದೇವನ ಸೇವೆ | ಆಶೆಯಲಿ ಗೈವೇ |ಈಸು ತವ ಮಹಿಮೆಯನು | ತೋಷದಲಿ ಸ್ತುತಿಪರಭಿಲಾಷೆ ಸಲಿಸುತ ತೋರ್ಪೆ | ವಾಸುದೇವನ ರೂಪ 4 ಸತಿ ಪತಿ ತೋರೇ 5
--------------
ಗುರುಗೋವಿಂದವಿಠಲರು
ರಜತಪೀಠವೆ ಭೂ ವೈಕುಂಠ ಇಲ್ಲಿ ಮಧ್ವ ಪುಷ್ಕರಿಣಿಯೆ ವಿರಜೆ ಅಲ್ಲಿ ರಾಜಿಪರಷ್ಟಮಹಿಷಿಯರು ಇಲ್ಲಿ ರಾಜಿಪರಷ್ಟಯತಿಗಳು ಪ ಅಲ್ಲಿ ಎಲ್ಲರೊಳಿರುವದು ಭಕ್ತಿ ಇಲ್ಲಿ ಎಲ್ಲಿ ನೋಡಲು ವಿರಕ್ತಿ ಅಲ್ಲಿಪ್ಪ ಜನರಿಗೆ ಮುಕ್ತಿ ಭುಕ್ತಿ 1 ಅಲ್ಲಿ ಮತ್ತಿಲ್ಲ ಜನರಿಗೆ ಪುಣ್ಯ ಇಲ್ಲಿ ಲಭಿಸುವುದೆಲ್ಲವೂ ಪುಣ್ಯ ಅಲ್ಲಿ ಹೋದವರಿಗಿಲ್ಲಾಗಮನವು ಇಲ್ಲಿ ಬಂದವರಿಗಿಲ್ಲ ಮರು ಜನನ 2 ಪೂಜೆಯ ವೈಕುಂಠದೊಳಗೆ ಸರ್ವಜನರು ಮಾಡಬೇಕೆಂದಿಹರು ರಾಜೇಶ ಹಯಮುಖಕೃಷ್ಣ ಮಧ್ವಾಚಾರ್ಯರೊಬ್ಬರ ಪೂಜೆಗೊಂಬ 3
--------------
ವಿಶ್ವೇಂದ್ರತೀರ್ಥ
ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ | ಶೋಭಾನವೆನ್ನಿ ಶುಭವೆನ್ನಿ ಪ ಹರಿಪಾದ ನಖದಿಂದ ಬ್ರಹ್ಮಾಂಡವ ಶೀಳಲು | ಭರದಿಂದ ಇಳಿದು ಸತ್ಯಲೋಕ || ಭರದಿಂದ ಇಳಿದು ಸತ್ಯಲೋಕಕೆ ಬಂದ | ವಿರಜೆಗಾರುತಿಯ ಬೆಳಗಿರೇ 1 ಸರಸಿಜಾಸನ ನಮ್ಮ ಹರಿಪಾದ ತೊಳಿಯಲು | ಸರಸ ಸದ್ಗುಣ ಸುರಲೋಕ | ಸರಸ ಸದ್ಗುಣದಿ ಸುರಲೋಕಕೈದಿದಾ | ಸ್ವರ್ಣೆಗಾರುತಿಯ ಬೆಳಗಿರೇ 2 ಇಂದ್ರಲೋಕವ ಸಾರಿ ಧ್ರುವನ ಮಂಡಲಕಿಳಿದು | ಚಂದದಿಂದಲಿ ಮೇರುಗಿರಿಗೆ | ಚಂದದಿಂದಲಿ ಮೇರುಗಿರಿಗೆ ಬಂದಾ | ಸಿಂಧುವಿಗಾರುತಿಯ ಬೆಳಗಿರೇ 3 ಶತಕೋಟಿ ಎಂತೆಂಬ ಅಜನ ಮಂದಿರ ಪೊಕ್ಕು | ಚತುರ್ಭಾಗವಾಗಿ ಕರೆಸಿದ | ಚತುರ್ಭಾಗವಾಗಿ ಕರೆಸಿದ ಶ್ರೀ ಭೋಗ | ವತಿಗಾರುತಿಯ ಬೆಳಗಿರೇ4 ಇಂದ್ರ ದಿಕ್ಕಿಗೆ ಸಿತಾ ಚಕ್ಷು ಪಶ್ಚಿಮ ದಿಕ್ಕು | ಚಂದ್ರ ಯಮ ದಿಕ್ಕಿಗೆ ಭದ್ರದೇವಿ | ಚಂದ್ರ ಯಮ ದಿಕ್ಕಿಗೆ ಭದ್ರದೇವಿ ಅಳಕ | ನಂದಿನಿಗಾರುತಿಯ ಬೆಳಗಿರೇ 5 ಕುಂದ ಮಂದರೆ ಇಳಿದು ಗಂಧ ಮಾದನಗಿರಿಗೆ | ಹಿಂಗದೆ ಪುಟಿದು ವಾರಿನಿಧಿಯ | ಹಿಂಗದೆ ಪುಟಿದು ವಾರಿನಿಧಿಯ ನೆರದ | ಗಂಗೆಗಾರುತಿಯ ಬೆಳಗಿರೇ 6 ಗಿರಿಜೆ ಸೂಪಾರಶ್ವಕೆ ಧುಮುಕಿ ಮಾಲ್ಯವಂತಕೆ ಜಿಗಿದು | ಪರಿದಂಬುಧಿಯ ಕೂಡಿ ಮೆರದು | ಪರಿದಂಬುಧಿಯ ಕೂಡಿ ಮೆರದಾ | ತ್ರಿದಶೇಶ್ವರಿಗಾರುತಿ ಬೆಳಗಿರೇ7 ಕುಮುದಾದ್ರಿಗೆ ಇಳಿದು ನಲಾ ಶತ ಶೃಂಗ | ವನಧಿ | ವನಧಿ ಕೂಡಿದಾ | ಸುಮತಿಗಾರುತಿಯ ಬೆಳಗಿರೇ 8 ಮೇರು ಮಂದರಕಿಳಿದು ನಿಷಿಧ ಕಾಂಚನ ಕೂಟ | ಮೀರಿ ಹಿಮಗಿರಿಗೆ ಹಾರಿ ಬದರಿಗೆ | ಮೀರಿ ಹಿಮಗಿರಿಗೆ ಹಾರಿ ಬದರಿಗೆ ಬಂದಾ | ನಾರಿಗಾರುತಿಯ ಬೆಳಗಿರೇ 9 ಕ್ಷಿತಿಪ ಭಗೀರಥನಂದು ತಪವ ಒಲಿದು| ಅತಿಶಯವಾಗಿ ಧರೆಗಿಳಿದು | ಅತಿಶಯವಾಗಿ ಧರೆಗಳಿದು ಬಂದಾ | ಭಾಗೀರಥಿಗಾರುತಿಯ ಬೆಳಗಿರೇ10 ಮುನಿ ಜನ್ಹು ಮುದದಿಂದ ಆಪೋಶನವ ಮಾಡೆ | ಜನನಿ ಜಾನ್ಹವಿ ಎನಿಸಿದಾ| ಜನನಿ ಜಾನ್ಹವಿ ಎನಿಸಿದಾ ಮೂಜಗದ | ಜನನಿಗಾರುತಿಯ ಬೆಳಗಿರೇ 11 ವಿಷ್ಣು ಪ್ರಜಾಪತಿ ಕ್ಲೇತ್ರದಲ್ಲಿ ನಿಂದು | ಇಷ್ಟಾರ್ಥ ನಮಗೆ ಕೊಡುವಳು ಸತತ | ಇಷ್ಟಾರ್ಥ ನಮಗೆ ಕೊಡುವಳು ಸತತ ಸಂ | ತುಷ್ಟಿಗಾರುತಿಯ ಬೆಳಗಿರೇ 12 ಕ್ರಮದಿಂದ ಬಂದು ನಲಿವುತ ಸರಸ್ವತಿ | ಯಮುನೇರ ನೆರೆದು ತ್ರಿವೇಣಿ | ಯಮುನೇರ ನೆರೆದು ತ್ರಿವೇಣಿ ಎನಿಸಿದಾ | ವಿಮಲೆಗಾರುತಿ ಬೆಳಗಿರೇ13 ತ್ರಿವಿಧ ಜೀವರು ಬರಲು | ಅತ್ಯಂತವಾಗಿ ಅವರವರ | ಅತ್ಯಂತವಾಗಿ ಅವರವರ ಗತಿ ಕೊಡುವ | ಮಿತ್ರೆಗಾರುತಿ ಬೆಳಗಿರೇ 14 ಪತಿಯ ಸಂಗತಿಯಿಂದ ನಡೆತಂದು ಭಕುತಿಲಿ | ಸತಿಯಲ್ಲಿ ವೇಣಿಕೊಡಲಾಗಿ | ಸತಿಯಲ್ಲಿ ವೇಣಿ ಕೊಡಲಾಗಿ ಕಾವ ಮಹಾ | ಪ್ರತಿಗಾರುತಿ ಬೆಳಗಿರೇ 15 ವೇಣಿಯ ಕೊಟ್ಟಂಥ ನಾರಿಯ ಭಾಗ್ಯವು | ಪಡಿಗಾಣೆ | ಪಡಿಗಾಣೆ ಸುಖವೀವ | ಕಲ್ಯಾಣಿಗಾರುತಿಯ ಬೆಳಗಿರೇ 16 ಒಂದು ಜನ್ಮದಲಿ ವೇಣಿಯಿತ್ತವಳಿಗೆ | ಎಂದೆಂದು ಬಿಡದೆ ಐದೆತನವ | ಎಂದೆಂದು ಬಿಡದೆ ಐದೆತನವೀವ ಸುಖ | ಸಾಂದ್ರೆಗಾರುತಿಯ ಬೆಳಗಿರೇ 17 ವಾಚಾಮಗೋಚರೆ ವರುಣನರ್ಧಾಂಗಿನಿ | ಪ್ರಾಚೀನ ಕರ್ಮಾವಳಿ ಹಾರಿ | ಮಕರ | ವಾಚಳಿಗಾರುತಿಯ ಬೆಳಗಿರೇ 18 ಅಂತರ ಬಾಹಿರ ಪಾಪ ಅನೇಕವಾಗಿರೆ | ಸಂತೋಷದಿಂದಲಿ ಭಜಿಸಲು | ಸಂತೋಷದಿಂದಲಿ ಭಜಿಸಲು ಪೊರೆವ ಮಹಾ | ಕಾಂತೆಗಾರುತಿಯ ಬೆಳಗಿರೇ 19 ಗುರುಭಕುತಿ ತಾರತಮ್ಯ ಇಹಪರದಲ್ಲಿ ತಿಳಿದು | ಹರಿ ಪರನೆಂದು ಪೊಗಳುವರ | ಹರಿ ಪರನೆಂದು ಪೊಗಳುವರ ಪೊರೆವ | ಕರುಣಿಗಾರುತಿಯ ಬೆಳಗಿರೇ20 ಜಗದೊಳು ಪ್ರಯಾಗ ಕ್ಷೇತ್ರದಲ್ಲಿ ನಿಂದು | ಬಗೆ ಬಗೆ ಶುಭವ ಕೊಡುವಳು | ಬಗೆ ಬಗೆಯ ಶುಭವ ಕೊಡುವ ವಿಜಯವಿಠ್ಠಲನ | ಮಗಳಿಗಾರುತಿಯ ಬೆಳಗಿರೇ ಶೋಭಾನೆ 21
--------------
ವಿಜಯದಾಸ
ಶ್ರೀ ತುಳಸಿ ಇಂದಿರೆ ವಂದೆ ಆನಂದೀ ತುಳಸೀದೇವಿ ನಂಬಿದೆ ಸುರಸುಂದರಿ ಪ ಎಂದೆಂದಿಗೂ ನಾ ನಿನ್ನಧೀನವೆ ಮಾತೆ ಸಿಂಧುಶಯನ ಪ್ರಿಯೆ ವರದೆ ಆನಂದದೆ ಅ.ಪ ಆದಿಕಾರಣ ವಿಷ್ಣು ಪ್ರಿಯಳೆ ಶ್ಯಾಮಲೆ ಕೋಮಲೆ ವಿಧಿಶರ್ವವಂದಿತೆ ವಿದ್ಯಾಧರಾದಿ ಅರ್ಚಿತೆ ಆದರದಲಿ ನಿನ್ನ ಪಾದಪಂಕಜಗಳ ಪ್ರತಿದಿನ ಸ್ಮರಿಪೆನೆ ವೃಂದಾವನಸ್ಥಿತೆ ತುಳಸಿ ಸುರೇಶ್ವರಿ1 ಈರಾರು ಅಕ್ಷರ ಮಂತ್ರ ಸುಪ್ರತಿಪಾದ್ಯೆ ನಾರದನುತೆ ನಾರಾಯಣ ಮನಃಪ್ರಿಯಳೆ ಪಾತಕ ಬಹು ಪಾಪಹಾರಿಣಿ ನಿನ್ನ ಎನ್ನ ವರದೆ ತುಳಸೀದೇವಿ 2 ನಿನ್ನ ಸ್ಮರಣೆ ಮಾಡೆ ಸರ್ವತ್ರ ವಿಜಯವಹುದೆ ನಿನ್ನ ಸಂದರ್ಶನದಿ ಸರ್ವಪಾಪವು ಪೋಪುವೆ ಪಾತಕ ತಾಪಾದಿ 1 ಗಳಳಿಯೆ ಘನ್ನ ಪ್ರಸನ್ನ ಶ್ರೀನಿವಾಸನ ನಿಜಸತಿ ವಿರಜೆ ತುಳಸೀಮಾತೆ 3
--------------
ಪ್ರಸನ್ನ ಶ್ರೀನಿವಾಸದಾಸರು