ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಠಲಯ್ಯ - ವಿಠಲಯ್ಯ ಪ ಧಿಟನಿಹೆ ನೀ | ಷ್ಕುಟಲ ಗುರು ಗೋವಿಂದಅ.ಪ. ನಗ ಮಂದರ ನೆಗಹುತವಿಗಡಾಸುರ ಹಯಮೊಗನನ ಕಡಿದೆ 1 ನರಮೃಗ | ವಟು ವೇಷದಿ ನಿನ್‍ಎಟಪದದಂಗುಟ ಸುರ | ತಟನಿಗೆ ಕಾರಣ 2 ನೃಪಕುಲ ಛೇದನ | ವಿಪಿನದಿ ಶಬರಿಯಸುಫಲವ ಮೆ | ದ್ದ ಪವರ್ಗಗಿತ್ತೆ 3 ಕ್ರೂರರ ತರಿದು | ವರ ಸತಿಯರ ವ್ರತನೆರೆ ಅಳಿಸುತ ತಾ | ತುರಗವನೇರ್ದಾ 4 ಭಾವದಿ ಮೈಮರೆ | ದಾವನು ತವಪದಸೇವಿಸೆ ಸಲಹುವಿ | ಗುರು ಗೋವಿಂದ 5
--------------
ಗುರುಗೋವಿಂದವಿಠಲರು
ಶರಣು ಭಾಸ್ಕರಕುಲಶರಧಿ ಪೂರ್ಣಸೋಮಕರುಣಾಮೃತ ಪೂರ್ಣರಾಮ ಪ.ನೃಪದಶರಥನ ತ್ಯಜಿಸಿ ಸೌಮಿತ್ರನ ಕೂಡಿವಿಪಿನದಿ ಸೀತೆ ಕಾಣದೆ ನೀಕಪಿಗಳ ನೆರಹಿ ಅಂಬುಧಿಗೆ ದಾರಿಯ ಬಲಿದೆಕಪಟಿ ರಾವಣನ ಸವರಿದೆ 1ನಿಜರಾಣಿಯ ಯಜಿÕಯ ಮುಖದಲಿ ಕೈಕೊಂಡುಸುಜನವಿಭೀಷಣನ ಹೊರೆದೆತ್ರಿಜಗವಂದಿತ ಪುಷ್ಪಕವನೇರಿ ಬಂದು ಅನುಜ ಭರತನ ಕಾಯ್ದೆ ಅಂದು 2ಹಲವು ಸಾಸಿರ ಅಬ್ದ ಅಯೋಧ್ಯೆಯನಾಳ್ದೆ ಅನಿಲತನಯನ ಸೇವೆಗೊಲಿದೆಸುಲಭದಿ ಮುಕ್ತಿ ತೋರಿದೆ ಪ್ರಸನ್ವೆಂಕಟನಿಲಯಭಕ್ತರಿಗೆ ಇತ್ತೆತುಷ್ಟಿ3
--------------
ಪ್ರಸನ್ನವೆಂಕಟದಾಸರು